Saturday, April 18, 2026

ಪವಮಾನ ಮತ್ತು ಪೂಯಮಾನ ಹೋಮಗಳು

 

ಯಾವುದೇ ವ್ಯಕ್ತಿ ತಾನು ಕೊಳಕಾಗಿರಬೇಕೆಂದು ಬಯಸುವುದಿಲ್ಲ. ತನ್ನನ್ನು ನೋಡಿದವರು ಅಸಹ್ಯ ಪಡದೆ ಮತ್ತೊಮ್ಮೆ ನೋಡಬೇಕೆಂದು ಇಚ್ಚಿಸುವುದು ಸ್ವಾಭಾವಿಕ. ಚೆನ್ನಾಗಿ ಕಾಣಿಸಬೇಕೆಂದು ಅನೇಕ ರೀತಿಯಲ್ಲಿ ಅಲಂಕರಿಸಿಕೊಳ್ಳುವುದು ಮತ್ತು ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಆಕರ್ಷಕವಾಗಿ ಕಾಣಲು ಒಳ್ಳೆಯ ವಸ್ತ್ರಗಳು ಮತ್ತು ಇತರ ಪರಿಕರಗಳನ್ನೂ ಬಳಸುವುದು ಬಹಳ ಹಿಂದಿನಿಂದ ಬಂದಿದೆ. ನಾಗರೀಕತೆ ಬೆಳೆದಂತೆ ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುತ್ತಿರುವುದು ದಿನನಿತ್ಯ ಕಾಣುವ ದೃಶ್ಯ. ಸೌಂದರ್ಯ ವರ್ಧಕಗಳ ಸಂಬಂಧದ ಉದ್ಯಮವು ಹಿಂದೆಂದಿಗಿಂತ ಅಧಿಕ ವೇಗದಲ್ಲಿ ಬೆಳೆದು ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. 

ಏನೋ ಕಾರಣಕ್ಕೆ ಮನೆಯ ಹೊರಗಡೆ ಹೋಗಿ ಬಂದಾಯಿತು. ಹೊರ ಪ್ರಪಂಚದ ಧೂಳು, ಹೊಗೆ, ಅಂಟು ಪದಾರ್ಥಗಳು, ಮಳೆ-ಗಾಳಿ, ನಮ್ಮ ದೇಹದಲ್ಲೇ ತಯಾರಾದ ಬೆವರು ಮುಂತಾದುವುಗಳಿಂದ ದೇಹ ಮಲಿನವಾಯಿತು. ಇದು ದಿನ ಆಗುವುದೇ. ಏನು ಮಾಡುವುದು? ಆದ್ದರಿಂದ ಹಾಗೇ ಇದ್ದುಗೊಳ್ಳಲಿ. ಹೀಗೆಂದು ನಾವು ಬಿಡುವುದಿಲ್ಲ. ಮನೆಗೆ ಬಂದ ತಕ್ಷಣ ಕೈ-ಕಾಲು, ಮುಖ ತೊಳೆದುಕೊಳ್ಳುತ್ತೇವೆ. ಹೆಚ್ಚಿನ ಪ್ರಮಾಣದ ಕೊಳೆ ಆಗಿದ್ದರೆ ಸ್ನಾನವೂ ಮಾಡುತ್ತೇವೆ. ಮೊದಲು ಧರಿಸಿದ್ದ ಬಟ್ಟೆ-ಬರೆಗಳನ್ನು ಬದಲಿಸಿ ಶುಭ್ರವಾದ ಅರಿವೆ ಧರಿಸುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ಮಾಡಿಕೊಂಡಾಗ "ಸದ್ಯ, ಈಗ ಆರಾಮ ಎನಿಸಿತು" ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಹತ್ತಿರವಿದ್ದವರಿಗೆ ಹಾಗೆ ಹೇಳುವುದೂ ಉಂಟು. 

ಈ ರೀತಿ ಶುಭ್ರವಾಗುವುದಕ್ಕೇ ಚಟುವಟಿಕೆ ನಿಲ್ಲುವುದಿಲ್ಲ. ಮಾರನೆಯ ದಿನ ಹೊರಗಡೆ ಹೋಗುವಾಗ ಹೆಚ್ಚಿನ ಕೊಳೆ-ಗಲೀಜು ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ. ಅದಕ್ಕೆ ಬೇಕಾದ ಪರಿಕರಗಳನ್ನೂ ಹೊಂದಿಸಿಕೊಳ್ಳುತ್ತೇವೆ. ಧೂಳಿನ ವಾತಾವರಣ ಅಥವಾ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ತಂಪು ಕನ್ನಡಕ ಇರಬಹುದು. ಮಳೆ ಬರುವ ವಾತಾವರಣ ಇದ್ದರೆ ಒಂದು ಛತ್ರಿ, ಅದಕ್ಕೆ ಸರಿಯಾದ ಪಾದರಕ್ಷೆ ಇರಬಹುದು. ವಾಹನ ಬದಲಿಸಬಹುದು. ಸ್ಕೂಟರಿನಲ್ಲಿ ಹೋಗುವ ಬದಲು ಕಾರಿನಲ್ಲಿ ಹೋಗಬಹುದು. ಈ ರೀತಿ ಮುಂದೆ ಆಗುವ ಕೊಳೆ  ತಪ್ಪಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ. 

*****

ಒಂದಲ್ಲ ಒಂದು ಕಾರಣಕ್ಕೆ ನಾವು ಆಗಾಗ ಔಷಧಿಗಳನ್ನು ಸೇವಿಸುತ್ತಿರುತ್ತೇವೆ. ದೇಹಕ್ಕೆ ರೋಗ-ರುಜಿನಗಳು ಬರುವುದು ಸ್ವಾಭಾವಿಕ. ಹೀಗೆ ಕಾಯಿಲೆ-ಕಸಾಲೆಗಳು ಬಂದಾಗ ಅವುಗಳ ಪೀಡೆಯಿಂದ ಹೊರಬಂದು ಮತ್ತೆ ಪೂರ್ಣ ಅರೋಗ್ಯ ಪಡೆಯಲು ಸೇವಿಸುವ ಔಷಧಿಗಳಿಗೆ "ರೋಗ ನಿವಾರಕ" ಔಷಧಿಗಳು ಅನ್ನುತ್ತೇವೆ. ಅಂತೆಯೇ ನಮಗೆ ರೋಗ ಬರದಿರಲು ಕೆಲವು ಔಷಧಗಳನ್ನು, ಟಾನಿಕ್ಕು ಮೊದಲಾದುವುಗಳನ್ನೂ ಸೇವಿಸುತ್ತೇವೆ. ಉದಾಹರಣೆಗೆ ವ್ಯಾಕ್ಸಿನೇಷನ್, ಬೂಸ್ಟರ್ ಮುಂತಾದುವು. ಇವುಗಳಿಗೆ "ರೋಗ ನಿರೋಧಕ" ಅನ್ನುತ್ತೇವೆ. ಆಗಲೇ ಬಂದು ವಕ್ಕರಿಸಿರುವ ರೋಗದಿಂದ ಹೊರಬರಲು ರೋಗ ನಿವಾರಕಗಳು. ರೋಗವೇ ಬಾರದಿರಲು ರೋಗ ನಿರೋಧಕಗಳು!

ಕಾನೂನಿನ ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಾನೂನಿನ ಪುಸ್ತಕಗಳನ್ನು ಎರಡು ರೀತಿಯಾಗಿ ವಿಭಾಗಿಸುತ್ತಾರೆ. ಒಂದು "ನಿರ್ಣಾಯಕ ಕಾನೂನು" (Substantive law) ಎಂದು. ನಿರ್ಣಾಯಕ ಕಾನೂನು "ಹಕ್ಕು ಮತ್ತು ಜವಾಬ್ದಾರಿ" ಮತ್ತು "ಅಪರಾಧಗಳು" ಇವುಗಳ ಮಹತ್ವವನ್ನು ವಿವರಿಸುತ್ತವೆ. ಇನ್ನೊಂದು "ಕಾರ್ಯ ವಿಧಾನ ಕಾನೂನು" (Procedural law) ಎಂದು. ಇವು ನ್ಯಾಯ ನಿರ್ಣಯ ಮಾಡುವ ಕ್ರಮವನ್ನು ವಿವರಿಸುತ್ತವೆ. ಕೆಲವು ಕಾನೂನುಗಳು ಇವೆರಡರನ್ನೂ ಒಳಗೊಂಡು ಎರಡು ಭಾಗಗಳಿಗೂ ಸೇರುತ್ತವೆ. 

***** 

ಯಾವುದೋ ಒಂದು ವಿಷಯ ಪೂರ್ತಿಯಾಗಿ ತೀರ್ಮಾನ ಆಗಿರುವುದಿಲ್ಲ. ಇಂತಹ ಹಂತದಲ್ಲಿ ಅವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುತ್ತದೆ. ಆಗ ಅದು ಒಂದು ಗೊಂದಲದ ಸ್ಥಿತಿ. ಪೂರ್ತಿ ಚರ್ಚೆ ನಡೆದು, ಸಾಧಕ-ಬಾಧಕಗಳ ಪರಿಶೀಲನೆ ನಡೆದು, ಕೊನೆಯ ತೀರ್ಮಾನ ಹೊರಬರುತ್ತದೆ. ಈಗ ಗೊಂದಲ ನಿವಾರಣೆ ಆಯಿತು. ಸರ್ಕಾರದ ವಿಷಯಗಳಲ್ಲಿ "ಸರ್ಕಾರೀ ಆದೇಶ" (Goverement Order) ಆಯಿತು ಅನ್ನುತ್ತೇವೆ. ಹೀಗೆ ಸರ್ಕಾರಿ ಆದೇಶ ಹೊರಬಿದ್ದಮೇಲೆ ಮತ್ತೆ ಚರ್ಚೆಗೆ ಅವಕಾಶ ಇಲ್ಲ. 

ವೇದಗಳನ್ನು ನಂಬುವವರು ಅವುಗಳಲ್ಲಿ ಹೇಳಿರುವುದನ್ನು ಈ ರೀತಿಯ ಸರ್ಕಾರಿ ಆದೇಶದಂತೆ ಪರಿಗಣಿಸುತ್ತಾರೆ. "ಹೀಗಿರಬೇಕು" ಅಂದರೆ ಹೀಗೆಯೇ ಇರಬೇಕು. ಹಾಗಿರುವಂತಿಲ್ಲ. "ಹೀಗೆ ಮಾಡಬೇಕು" ಅಂದರೆ ಹೀಗೆಯೇ ಮಾಡಬೇಕು. ಹಾಗೆ ಮಾಡುವಂತಿಲ್ಲ. ಏಕೆ ಎಂದು ಕೇಳುವಂತಿಲ್ಲ. ಯಾಕಂದರೆ ಚರ್ಚೆಯ ಕಾಲ ದಾಟಿ ಸರ್ಕಾರಿ ಆದೇಶ ಹೊರಬಂದಿದೆ. ಈಗ ಆದೇಶವನ್ನು ಪ್ರಶ್ನಿಸುವಂತಿಲ್ಲ. ಇಂತಹ ಆದೇಶಗಳ ಪಾಲನೆಯಲ್ಲಿ ದಯೆ-ದಾಕ್ಷಿಣ್ಯ, ಅಂತಃಕರಣ, ಸ್ವಲ್ಪ ಅಡ್ಜಸ್ಟ್ ಮಾಡು, ಇಂತಹವುಗಳಿಗೆ ಅವಕಾಶವಿಲ್ಲ. 
*****

ಮೇಲಿನ ಎಲ್ಲ ಅಂಶಗಳು ಲೌಕಿಕ ವಿಚಾರಗಳಿಗೆ ಅನ್ವಯವಾಗುತ್ತವೆ. ಹಾಗಿದ್ದರೆ, ತಾತ್ವಿಕ ವಿಚಾರಗಳಲ್ಲಿ ಇವುಗಳ ಅನ್ವಯ ಹೇಗೆ? ದೇಹ ಮತ್ತು ಆತ್ಮ ಬೇರೆ ಬೇರೆ. ದೇಹವನ್ನು ಇಲ್ಲಿ ಬಿಡುತ್ತೇವೆ. ಮುಂದಿನ ಲೋಕಕ್ಕೆ ಆತ್ಮ ಪ್ರಯಾಣ ಬೆಳೆಸುತ್ತದೆ. ಇಹಲೋಕ-ಪರಲೋಕ ಎಂಬುವುವು ಉಂಟು. ಪಾಪ-ಪುಣ್ಯ ಎಂದುಂಟು. ಹೀಗೆ ನಂಬಿದಾಗ ಅವುಗಳ ಸಮಾಚಾರ ಏನು? ಈ ಪ್ರಶ್ನೆಗಳಿಗೆ ಉತ್ತರ ಹೇಗೆ? ಇವು ಯೋಚಿಸಬೇಕಾದ ವಿಷಯಗಳೇ. 

ಋಗ್ವೇದದ ಒಂಭತ್ತನೆಯ ಮಂಡಲದ ಕಡೆಯ ಭಾಗದಲ್ಲಿನ ಕೆಲವು ಮಂತ್ರಗಳನ್ನು "ಕರ್ಣ ಮಂತ್ರಗಳು" ಎಂದು ನಿರ್ದೇಶಿಸುತ್ತಾರೆ. ಜೀವಿತದ ಕಡೆಯ ಭಾಗ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಚೆನ್ನಾಗಿರುವಾಗಲೇ ಅಂತ್ಯ ಕಾಲ ಬರಬಹುದು. ಮತ್ತೆ ಕೆಲವರಿಗೆ ಹಾಸಿಗೆ ಹಿಡಿದು ಕಾಲ ಕಳೆಯುವ ಸಂದರ್ಭ ಒದಗಿಬರಬಹುದು. ಹೀಗೆ ಹಾಸಿಗೆ ಹಿಡಿದು ಮಲಗಿದ ಹಿರಿಯರಿಗೆ ಅಂತ್ಯ ಕಾಲದಲ್ಲಿ ಅವರ ಮಕ್ಕಳೋ, ಬಂಧುಗಳೋ ಅವರ ಮುಂದಿನ ಪ್ರಯಾಣದ ಕಾಲದಲ್ಲಿ ಅನುಕೂಲವಾಗಲೆಂದು ಕೆಲವು ವಿಶೇಷವಾದ ಮಂತ್ರಗಳನ್ನು ಅವರ ಕಿವಿಯಲ್ಲಿ ಹೇಳುವ ಪರಿಪಾಠವಿದೆ. ಇವೇ ಕರ್ಣ ಮಂತ್ರಗಳು. 

ವೇದಗಳಲ್ಲಿರುವ ಎಲ್ಲ ಮಂತ್ರಗಳೂ ಪವಿತ್ರವಾದುವೇ. ಅದಕ್ಕೇ ಅವುಗಳಿಗೆ ಅಲ್ಲಿ ಸ್ಥಾನ ಸಿಕ್ಕಿರುವುದು. ಆದರೂ ಎಲ್ಲದರಲ್ಲಿಯೂ "ಯಾವುದು ಮುಖ್ಯ?" ಎಂದು ಹುಡುಕುವುದು ಮಾನವ ಸಹಜ ಅಭ್ಯಾಸ. ಹೀಗೆ ನೋಡಿದಾಗ ಒಂಭತ್ತನೆಯ ಮಂಡಲದ ಭಾಗಗಳನ್ನು "ಪವಿತ್ರನಾಮ್ ಚ ಪವಿತ್ರಂ" ಎಂದು ತಿಳಿದವರು ಹೇಳುತ್ತಾರೆ. ಹೀಗೆ ಹೇಳುವ ಒಟ್ಟು ಸೂಕ್ತಗಳು 114 ಎನ್ನುತ್ತಾರೆ. ಅವುಗಲ್ಲಿ 1,108 ಋಕ್ಕುಗಳಿವೆ. 

ಇವುಗನ್ನು ಅನುಕೂಲಕ್ಕಾಗಿ ಎರಡು ಭಾಗ ಮಾಡಿದ್ದಾರೆ. ಮೊದಲ ಭಾಗ (ಪೂರ್ವ ಭಾಗ) 67 ಸೂಕ್ತಗಳ 610 ಋಕ್ಕುಗಳು. ಎರಡನೆಯ ಭಾಗ (ಉತ್ತರ ಭಾಗ) 47 ಸೂಕ್ತಗಳ 498 ಋಕ್ಕುಗಳು. ಪೂರ್ವ ಭಾಗವನ್ನು "ಪವಮಾನ ಸೂಕ್ತ" ಎಂದೂ, ಉತ್ತರ ಭಾಗವನ್ನು "ಪೂಯಮಾನ ಸೂಕ್ತ" ಎಂದೂ ನಿರ್ದೇಶಿಸುತ್ತಾರೆ. ಇವುಗಳ ಪ್ರಧಾನ ದೇವತೆ "ಪವಮಾನ ಸಂಜ್ಞಕ ಸೋಮ". ಸೋಮ ಅನ್ನುವ ಪದಕ್ಕೆ ವಿಶಾಲಾರ್ಥಗಳಿವೆ. ಸಾಮಾನ್ಯವಾಗಿ ಸೋಮ ಅಂದರೆ ಚಂದ್ರ. ಸ-ಉಮಾ (ಅಂದರೆ ಉಮೆಯ ಜೊತೆಯಲ್ಲಿ ಇರುವವನು) ಎಂದು ಅರ್ಥ ಮಾಡಿದ್ದಾಗ ಶಿವನೂ ಸೋಮ ಆಗುತ್ತಾನೆ. ಮಹಾವಿಷ್ಣುವಿಗೂ ಸೋಮ ಶಬ್ದ ಅನ್ವಯವಾಗುತ್ತದೆ ಅನ್ನುತ್ತಾರೆ. 

*****

ಸೋಮ ಎಂಬ ಹೆಸರಿನ ಒಂದು ಬಳ್ಳಿ. ಅದೊಂದು ಬಲು ವಿಶೇಷಕರ ಬಳ್ಳಿ. ಎಲ್ಲ ಬಳ್ಳಿ ರೀತಿಯ ಸಸ್ಯ. ಹಿಮಾಲಯದ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ ಅನ್ನುತ್ತಾರೆ. ಬಳ್ಳಿಯಂತೆ ಹಬ್ಬಿಕೊಂಡು ಬೆಳೆಯುವ ಸಸ್ಯಕ್ಕೆ ಸಂಸ್ಕೃತದಲ್ಲಿ "ಲತೆ" ಎಂದು ಹೆಸರು. ಆದ್ದರಿಂದ ಅದು "ಸೋಮ ಲತೆ". ಅದರ ರಸವು ಬಹಳ ಅಮೂಲ್ಯ. ಆದ್ದರಿಂದ ಅದರ ರಸವನ್ನು ಹೋಮ-ಹವನಗಳಲ್ಲಿ ಹವಿಸ್ಸಾಗಿ ಬಳಸುತ್ತಾರೆ. ಮೇಲೆ ಹೇಳಿದ ಸೂಕ್ತಗಳಲ್ಲಿ ಈ ಸೋಮಲತೆಯ ಮರ್ದನ (ಜಜ್ಜಿ ರಸ ತೆಗೆಯುವುದು), ರಸ ಶೋಧನ (ರಸವನ್ನು ಶೋಧಿಸಿ ಶೇಖರಿಸುವುದು), ಸಂಸ್ಕರಣ (ಹೀಗೆ ಶೇಖರಿಸಿದ ರಸಕ್ಕೆ ಬೇರೆ ಪದಾರ್ಥಗಳನ್ನು ಸೇರಿಸಿ ಇನ್ನೂ ಉತ್ತಮ ಮಾಡುವುದು), ನಂತರ ಅಗ್ನಿಯಲ್ಲಿ ಹೋಮ ಮಾಡುವ ಮೂಲಕ ದೇವತೆಗಳಿಗೆ ಅರ್ಪಿಸುವುದು, ಮುಂತಾದುವು ಈ ಸೂಕ್ತಗಳಲ್ಲಿ ಕಂಡುಬರುತ್ತವೆ. 

ಹೀಗೆ ಹೋಮ ಮಾಡುವಾಗ ದೇವತೆಗಳನ್ನು ನಮಗೆ ಬೇಕಾದ ವರಗಳನ್ನು ಬೇಡುವುದು, ಬೇಕಿದ್ದನ್ನು ಕೊಡಿ ಎಂದು ಪ್ರಾರ್ಥಿಸುವುದು. ಸ್ತುತಿಸುವುದು ಮತ್ತು ಸ್ತುತಿಸುವಾಗ ಬೇಡಿಕೆಗಳನ್ನು ಮುಂದಿಡುವುದು. ಈ ಸೋಮರಸದ ಬಣ್ಣ ಹಳದಿಮಿಶ್ರಿತ ಕೆಂಪು. ಇದು ಮುಖ್ಯ ಹೋಮದ್ರವ್ಯ. ಹೀಗೆ ದೇವತೆಗಳಿಗೆ ಅರ್ಪಿಸಿದ ನಂತರ ಮಿಕ್ಕ 'ಸೋಮರಸ" ಪ್ರಸಾದ ರೂಪದಲ್ಲಿ ಸೇವಿಸುವುದು. ಇದೇ "ಸೋಮಪಾನ". ಈಗ ಸೋಮಲತೆ ಸಿಗದಿರುವುದರಿಂದ ಒಳ್ಳೆಯ ತುಪ್ಪವನ್ನು ಹೋಮದ್ರವ್ಯವಾಗಿ ಬಳಸುತ್ತಾರೆ.

ಪವಮಾನ ಸೂಕ್ತದ ಭಾಗ ಐಹಿಕ ಫಲಗಳನ್ನು ಕೊಡುವುದಂತೆ. ಇದು ರೋಗನಿವಾರಕದಂತೆ ಪಾಪನಿವಾರಕ. ದೇಹಕ್ಕೆ ರೋಗಗಳು. ಆತ್ಮಕ್ಕೆ ಪಾಪಗಳು. ರೋಗಗಳಿಗೆ ರೋಗನಿವಾರಕ ಔಷಧಗಳು. ತಿಳಿಯದೆ ಮತ್ತು ತಿಳಿದೂ ಮಾಡಿ ಶೇಖರಿಸಿರಿವ ಪಾಪಗಳಿಂದ ಬಿಡುಗಡೆಗಾಗಿ "ಪವಮಾನ ಹೋಮ". ಮೊದಲು ಶುಚಿ ಆಗುವುದು. ನಂತರ ಮತ್ತೊಮ್ಮೆ ಕೊಳೆ ಆಗದಂತೆ ಪ್ರಯತ್ನ ಮಾಡಲು ಅವಕಾಶ.

ಪೂಯಮಾನ ಸೂಕ್ತದ ಭಾಗ ದೇಹಾವಸಾನದ ನಂತರ ಮತ್ತೆ ಪುನರ್ಜನ್ಮ ಇಲ್ಲದಂತೆ ಮಾಡುವುದಂತೆ. ಜನನ-ಮರಣ ಚಕ್ರದಿಂದ ಹೊರಗಡೆ ತಂದು ಶಂಖ-ಚಕ್ರ-ಗದಾಧಾರಿಯಾದ ಶ್ರೀ ಮಹಾವಿಷ್ಣುವಿನ ಸಾನ್ನಿಧ್ಯ ಮತ್ತು ಮುಕ್ತಿ ಕೊಡುವಂತೆ ಇದರಲ್ಲಿ ಪ್ರಾರ್ಥನೆ. ಈ ಕಾರಣ ಇದು ರೋಗನಿರೋಧಕ ಚುಚ್ಚುಮದ್ದಿನಂತೆ. ಈ ವ್ಯಾಕ್ಸಿನೇಷನ್ ತೆಗೆದುಕೊಂಡರೆ ಮತ್ತೆ ಹುಟ್ಟುವ ರೋಗ ನಿವಾರಣೆ. ಇದು "ಪೂಯಮಾನ ಹೋಮ" ಮಾಡುವ ವಿಶೇಷತೆ.  

ಈ ಎರಡೂ ಸೂಕ್ತಗಳಲ್ಲಿ "ನಿರ್ಣಾಯಕ ಕಾನೂನು" ಮತ್ತು "ಕಾರ್ಯವಿಧಾನ ಕಾನೂನು" ಇರುವಂತೆ ಹೋಮ ದ್ರವ್ಯಗಳನ್ನು ತಯಾರಿಸುವುದು, ಹೋಮ ಮಾಡುವುದು ಮತ್ತು ಅವುಗಳ ಮಹತ್ವ ಮುಂತಾದ ಎಲ್ಲ ವಿಷಯಗಳೂ ಇವೆ. 

ಪ್ರತಿ ಜೀವಿಯೂ ತನ್ನ ಭಾರ ತಾನೇ ಹೊರಬೇಕು. ತನ್ನ ಮುಕ್ತಿಗೆ ತಾನೇ ಶ್ರಮಿಸಬೇಕು. ಅದು ಇನ್ನೊಬ್ಬರು ಕೊಡುವುದಲ್ಲ. "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಾಶು:" ಎಂದು ಮಾತುಂಟು. (ಮಕ್ಕಳು ಮಾಡುವ ಪಿಂಡಪ್ರದಾನ ಇತ್ಯಾದಿಗಳು ಮಾತ್ರವೇ ಮುಕ್ತಿದಾಯಕವಲ್ಲ ಎಂದು ಭಾವ). ಬೇರೆಯವರು ನಮಗೆ ಮಾಡುವ ನೆರವು ಸಾಕಾಗುವುದಿಲ್ಲ. ಅವುಗಳು ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದು. ಅಷ್ಟೇ. ನಮ್ಮ ಸಾಧನೆಯೇ ಮುಖ್ಯ. ಅದಕ್ಕೇ ಪೂಯಮಾನ ಹೋಮ ಮಾಡಿ ಕೋರಿಕೊಳ್ಳುವುದು. 

*****

ಈ ಹೋಮಗಳು ಕೇವಲ ವೈದಿಕ ಕ್ರಿಯೆಗಳು ಎಂದು ತಿಳಿಯಬಾರದು. ಇವುಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವಗಳೂ ಇವೆ. ಇಂತಹ ಮುಖ್ಯ ಹೋಮಗಳನ್ನು ಯಾರೂ ತಮ್ಮ ಪಾಡಿಗೆ ತಾವು ಮನೆಯ ಮಟ್ಟಿಗೆ ಸೀಮಿತವಾಗಿ ಮಾಡಿಕೊಳ್ಳುವುದಿಲ್ಲ. ಬಂಧು-ಬಾಂಧವರು, ಮಿತ್ರರು-ಹಿತೈಷಿಗಳನ್ನು ಆಮಂತ್ರಿಸುತ್ತಾರೆ. ಇಂತಹ ಕೆಲಸಗಳನ್ನು ಸರಿಯಾಗಿ ಮಾಡಲು ಜನಸಹಾಯ ಬಹಳ ಮುಖ್ಯ. ಬಂದವರು ಎರಡು-ಮೂರು ದಿನ ಒಟ್ಟಿಗೆ ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಊಟ-ಉಪಚಾರಗಳು ಇರುತ್ತವೆ. ಹಾಡು-ಹಸೆ, ಕಥೆ-ಪ್ರವಚನ ನಡೆಯುತ್ತವೆ. ಆದ ಕಾರಣ ಇವು ಒಂದು ರೀತಿಯ ವೈದಿಕ-ಸಾಮಾಜಿಕ-ಸಾಂಸ್ಕೃತಿಕ ಹಬ್ಬ. 

ಪವಮಾನ ಹೋಮದ ಆಚರಣೆ ಸಾಕಷ್ಟು ವ್ಯಾಪಕವಾಗಿ ಉಂಟು. ಅಲ್ಲಲ್ಲಿ ಈ ಹೋಮ ನಡೆಯುವುದು ಕೇಳಿ ಬರುತ್ತದೆ. ಆದರೆ "ಪೂಯಮಾನ ಹೋಮ" ಆಚರಣೆ ಅಷ್ಟು ವ್ಯಾಪಕವಾಗಿಲ್ಲ. ಕೆಲವು ಪಂಗಡಗಳಲ್ಲಿ, ವಿಶೇಷವಾಗಿ ಅದ್ವೈತಿಗಳಲ್ಲಿ, ಇದು ಮೂರು ದಿನದ ಕಾರ್ಯಕ್ರಮ. ಏಕಾದಶಿಯ ದಿನ ಪವಮಾನ ಹೋಮ. ದ್ವಾದಶಿಯ ದಿನ ಪೂಯಮಾನ ಹೋಮ. ಹೀಗೆ ದ್ವಂದ್ವವಾಗಿ ಮಾಡುವ ಪದ್ಧತಿ ಇದೆ. ದ್ವೈತಿಗಳಲ್ಲಿ ಏಕಾದಶಿಯ ದಿನ ಹೋಮ ಮಾಡುವುದಿಲ್ಲ. 

*****

ಈಗಿನ ನಗರಗಳ ಮನೆಗಳಲ್ಲಿ ಹೋಮ-ಹವನದಂತಹ ಕಾರ್ಯಕ್ರಮ ಮಾಡುವುದು ಅಸಾಧ್ಯವೇ. ಯಾವುದಾದರೂ ಪಾರ್ಟಿ ಹಾಲ್ ಅಥವಾ ಛತ್ರಗಳಲ್ಲಿ ನಡೆಸಬಹುದು. ಆದರೆ ಒಬ್ಬ ಮಿತ್ರ ದಂಪತಿಗಳು ಕಳೆದ ವಾರ ಇಂತಹ ಕಾರ್ಯಕ್ರಮವೊಂದನ್ನು ಅಧ್ಭುತವಾಗಿ, ಅಚ್ಚುಕಟ್ಟಾಗಿ ತಮ್ಮ ಮನೆಯಲ್ಲಿಯೇ ನಡೆಸಿದರು. ಆ ಕಾರಣ ನಮಗೂ ಅದರಲ್ಲಿ ಭಾಗವಹಿಸುವ ಆಪೂರ್ವ ಅವಕಾಶ ಸಿಕ್ಕಿತು. ಅವರಿಗೆ ಅನೇಕ ವಂದನೆಗಳು. 

ಇದೊಂದು ಅಪರೂಪದ ಕಾರ್ಯಕ್ರಮ ಆದುದರಿಂದ  ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಅನೇಕ ಅನುಮಾನಗಳೂ, ಪ್ರಶ್ನೆಗಳೂ ಹುಟ್ಟಿ ನಿಂತವು. ಇಂತಹ ಸಂದರ್ಭದಲ್ಲಿ ನೆನಪಾದ ಹೆಸರು ವೇದಬ್ರಹ್ಮಶ್ರೀ ಡಾ. ಎಸ್. ಆರ್. ನರಸಿಂಹ ಮೂರ್ತಿ ಅವರದು. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಪ್ರಕಟಿಸಿರುವ ಗ್ರಂಥಗಳು, ತಯಾರು ಮಾಡಿರುವ ಶಿಷ್ಯವೃಂದ, ಇವೆಲ್ಲವೂ ಒಂದು ವಿಸ್ಮಯವೇ ಸರಿ. ಅವರೊಡನೆ ಮಾತನಾಡಿದಾಗ ಹಳೆಯ ಪರಿಚಯವೇ ಇಲ್ಲದಿದ್ದರೂ ಅತ್ಯಂತ ಸೌಜನ್ಯದಿಂದ ವಿಷಯಗಳನ್ನು ತಿಳಿಸಿಕೊಟ್ಟರು. ಅವರಿಗೆ ಸಾದರ ಪ್ರಣಾಮಗಳು. 
*****

ಇಂತಹ ಕಾರ್ಯಕ್ರಮ ನಡೆಯುವುದು ತಿಳಿದರೆ ತಪ್ಪಿಸಿಕೊಳ್ಳಬಾರದು. "ಸತ್ಯನಾರಾಯ ಪೂಜೆ" ನಡೆದರೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಅನ್ನುತ್ತಾರೆ. ಅದಕ್ಕೆ "ಪೂಯಮಾನ ಹೋಮ" ಕಾರ್ಯಕ್ರಮವನ್ನೂ ಸೇರಿಸಿಕೊಳ್ಳಬಹುದು!

Tuesday, April 7, 2026

The Morning Mail


The only mail we knew as school-going children were the trains that had a special deep red colour coach. Those were the days of trains with all red colour bogies, but these were painted with an extra red coat of paint. The letters carried by postmen were referred as "Post". "Mail trains" usually ran in the nights, with exception of some trains that ran for longer than overnight mail trains. Some of them, like Madras-Howrah Mail and Howrah-Kalka Mail ran for two nights and two days. Express and Mail trains charged higher fares for passengers traveling in them. 

While passing through Madras Central station (now called Chennai Central) on the way to Delhi and Calcutta as there were no direct trains from Bangalore, we had the privilege of reading a newspaper known as "The Mail". Other newspapers were published in the morning, but this newspaper appeared on the stands in the evening. 

"Post" carried by postmen usually came twice a day in big cities, once in towns and once in two or three days in villages. Most of the villagers did not know reading and writing letters and took the help of school children like us to read their letters and sometimes write letters for them. A schoolboy who could do this was considered very useful to the neighbourhood. Those with good handwriting were much sought after.

*****

The advent of e-mail has changed everything. Someone who does not know how to send, receive or use e-mail is now considered as illiterate. There is no specified time to send and receive e-mails. It can be done at every tick of the clock. It can arrive at all times of day and night. The world has moved a lot ahead than e-mail. Telegram has gone, but Instagram is here. Then there are many more.......

Today's world is the world of "Publicity". Some people prepare their lunch (which itself is praiseworthy since it was not ordered to be delivered), serve it on the plate, take a picture of it, upload on Instagram, and then start eating it. The days of "Naivedyam" are long gone. It is now Naivedyam to the whole world, before we consume it. Vasudhaiva Kutumbakam. Truly.

The word "Status" has earned an altogether different meaning. It meant a person's status in society long long ago. Now it is what the person has uploaded on social media "at the moment". It is truly a case of "living in the moment". Because this status is going to change "any moment". It is also very comforting to know that the world at large knows more about us than ourselves. 

Earlier generation believed that the "Lord" is always watching everything. It was a belief. Now we know "Uncle Google" is watching everything. It is not a belief. It is the real and real-time truth. Mahatma Gandhi said that his life was an "Open Book". He should have seen now, how open a person's life can be! His life's book could be shut at will and opened again. Now our lives are open 24x365x100 and beyond. 
******

One such e-mail arrived on the devices of some 10,000 plus persons at exactly 6 AM EST on 31st March, 2026. It could have been ignored had it arrived 24 hours later as a joke. Not so. 
  • The mail was probably prepared by an AI tool. There were no feelings in it. Strictly business. 
  • Delivered on the dot around sunrise time. It is the dawn of a new day for others, but end of a phase in life for the recipient of the mail. 
  • Delivered on the devices before the recipient had even got up from the bed. Before they had a morning cup of coffee or whatever. 
  • It was indeed a "Terminator". "Your role is eliminated", it said. "Today is your last working day". You won't work for us from today. Of course, you are free to live. 
  • "You will lose your access to the "Company's sources", before the end of the day.
  • "You can access the form to submit your personal e-mail (you are fortunate it cannot be taken back by us) to remain in touch". One small door is open a bit. Not to get in or get out. Just to peep in to see something you want to dearly. 
  • Access "DocuSign" before it is too late. Time is the key. 
  • To know the "Severance Package" severe the "Umbilical  Cord" first.
  • An assurance that this cut is "not based on your performance". Very comforting. "I was indeed very efficient. this happened despite that", one can feel and relax.
  • RHS and SVOS were gutted. Our generation does not know what these mean. So no worries.
  • Act quickly. For understanding the details of "Severance Package", exit first. Understanding can come thereafter. You will have all the time in the world to understand it since you will have no work, but all free time.
Read the remaining parts of the mail if you really want. Anyway, it doesn't matter whether you read it or not. You already know the vital and operating part.

*****

Now that the persons really matter have been informed, it is over to the analysts. They enlighten all concerned that this is not really a surprise. 
  • Company had hinted at layoffs weeks in advance.
  • Q3 earnings filing on March 10th had already given indication three weeks ago.
  • There were concerns about loss of jobs when computers arrived. But the world reached a new equilibrium. In fact, more and more enriched jobs were created. Don't despair. Take comfort from this.
  • AI is next phase of computerisation. The world will be a better place to live in!
  • "The warning was hiding in plain sight". You didn't see. What we can do?
  • Q3 filing already referred to "work place restructuring". It was mentioned as a risk factor. You risked ignoring it and not understanding it. 
  • It is a normal process in present times. It is "AI and Technology Evolution".
  • First 9 months spending on "Restructuring" was 5 times more than last year. What other warning you expect?
  • It is not a job cut, but an inevitability driven by AI. Nobody wants to do it, but it happens on its own and very naturally.
  • AI mode for generating computer codes have become super-efficient. 
  • Therefore teams are restructured into smaller and more agile groups. 
  • This is the era of "Building more software, in less time, with fewer people". 
  • You may not be there, but feel happy that much more agile groups are handling the operations you once did!
Enjoy the components of the brilliant analysis. You are looking at a new world that is fast growing. Why do you worry you are not a part of it?

*****

We have seen how things changed in our times. Look back and see how we have progressed:
  • Organisations had a staff member looking into staff aspects in it.
  • Then came "Staff Sections".
  • Then they became "Personnel Departments".
  • The fancy name "Human Resource Department" followed.
  • Companies even valued Human Resources and showed them in their Balance Sheets as "Intangible Assets", but more valuable than any tangible assets. Intangible assets are now becoming "Invisible assets". What's wrong with it?
  • There were only "Recruitment interviews". "Exit interviews" followed. (Of course, now exit interviews have themselves exited).
  • Today"s exits have "No prior conversation". No "loop-ins". "System access on the way out" does everything in one stroke. What a "Masterstroke"!
  • Billions spent in the immediate past in "Severance Package" is itself a sever warning.
Growth means change. Growth means evolution. Growth means making space for others and leaving. One should not be selfish, but learn to live for others. Leave and let others live!

*****

Remember that AI manages itself. Is it not great that lesser number of managers will manage things henceforth? Literally half of white collar jobs are going. Remaining also will go eventually. 

Money saved with these exits caused by AI will be gainfully used for further enhancing AI to cut even the remaining jobs. 

No one is alone in this great development saga. All giants are racing each other in this game. Take the thrill by watching the race. 

There will be an important meeting of the "remaining staff". Efficiency will be "ramped up". Remaining staff will "absorb the workload". By developing such resultant efficiency, the remaining staff  will open the gates for further exits. 

*****

Want a solution for this "Catch-22" situation? Two great thoughts:
  • Always be interviewing.
  • Leave before they push you.
Very simple. Like a married person always looking for a new partner. Because Divorce can happen any time!

Friday, April 3, 2026

ಬಹಳ ದಿನ ಆಯಿತಲ್ಲೋ, ಉದ್ಧವಾ!


ಹಿಂದಿನ ಒಂದು ಸಂಚಿಕೆಯಲ್ಲಿ, "ಅನಘ ನಿನ್ನ ನೋಡಿ ಮೋಹಿಸಿ" ಎನ್ನುವ ಶೀರ್ಷಿಕೆಯಡಿ ಶ್ರೀ ವಿಜಯದಾಸರ "ನಿನ್ನನಗಲಿ ಪೊಗಲಾರೆವೋ, ನೀರಜಾಕ್ಷ" ಎನ್ನುವ ಪದದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು ಮತ್ತು ಶ್ರೀ ವಿದ್ಯಾಭೂಷಣರು ಹಾಡಿರುವ ಈ ಪದವನ್ನು ಕೇಳಬಹುದು. ಇದೇ ಹಿನ್ನೆಲೆಯ ಶ್ರೀ ಪು. ತಿ. ನ. ಅವರ "ಕೃಷ್ಣನ ಕೊಳಲಿನಾ ಕರೆ" ಗೀತೆಯನ್ನೂ ಕೇಳಬಹುದು. 

ಶ್ರೀ ವಿಜಯದಾಸರ ನೇರ ಶಿಷ್ಯರು ಶ್ರೀ ಗೋಪಾಲದಾಸರು. ಅವರ "ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳದಿನ ಆಯಿತಲ್ಲೋ, ಉದ್ಧವಾ" ಅನ್ನುವ ಹಾಡು ಇದರ ಮುಂದಿನ ಭಾಗ ಅನ್ನುವಂತೆ ಇದೆ. ಅದರ ಬಗ್ಗೆ ಈಗ ಸ್ವಲ್ಪ ವಿಚಾರ ಮಾಡೋಣ. 

*****

ಮೊದಲಿಗೆ ಈ ಉದ್ಧವ ಯಾರು? ಅವನು ಈ ಗೋಪಿಯರನ್ನು ಕಂಡದ್ದು ಏಕೆ ಮತ್ತು ಎಲ್ಲಿ? ಇದರ ಹಿನ್ನೆಲೆ ತಿಳಿಯುವುದು ಬಹಳ ಅವಶ್ಯಕ. ಮಹಾಭಾರತ ಮತ್ತು ಶ್ರೀಮದ್ಭಾಗವತ ಮುಂತಾದ ಗ್ರಂಥಗಳಲ್ಲಿ ಬರುವ ಅನೇಕ ಶ್ರೀಕೃಷ್ಣ ಭಕ್ತರಲ್ಲಿ ಉದ್ಧವನೂ ಒಬ್ಬ. ಶ್ರೀಕೃಷ್ಣನ ಭಕ್ತರು ಅನೇಕ ಹಿನ್ನೆಲೆಯವರು. ಒಂದೆಡೆ ಭೀಷ್ಮ, ದ್ರೋಣ ಮುಂತಾದ ಹಿರಿಯರು ಉಂಟು. ಮತ್ತೊಂದೆಡೆ ವಿದುರ, ಅಕ್ರೂರ ಮೊದಲಾದವರೂ ಉಂಟು. ಸೋದರತ್ತೆಯ ಮಕ್ಕಳಾದ ಪಾಂಡವರು ಸೇರಿದ್ದಾರೆ. ಉದ್ಧವ, ಸಾತ್ಯಕಿ ಮುಂತಾದ ಯಾದವರೂ ಉಂಟು. ಸುದಾಮನಂತಹ ಸಹಪಾಠಿಯೂ ಉಂಟು. ಕುಬ್ಜೆಯಂತಹ ಕಂಸನ ದಾಸಿಯೂ ಹೌದು. ಬೃಂದಾವನದ ವಾಸಿಗಳಾದ ಗೋಪಿಕೆಯರ ಭಕ್ತಿಯಂತೂ ಜನಜನಿತ. ಹೀಗೆ ಶ್ರೀಕೃಷ್ಣನ ಭಕ್ತರ ಬಳಗ ಬಹಳ ದೊಡ್ಡದು. 

ಅರ್ಜುನಂತೆ ಉದ್ಧವನೂ ಶ್ರೀಕೃಷ್ಣನಿಗೆ ಹತ್ತಿರದ ನೆಂಟ. ಅವನು ಶ್ರೀಕೃಷ್ಣನಿಗೆ ಎರಡೂ ಕಡೆಯ ಬಂಧು. ಒಂದು ಕಡೆ ಶ್ರೀಕೃಷ್ಣನ ಚಿಕ್ಕಪ್ಪನ ಮಗ. ಇನ್ನೊಂದು ಕಡೆ ದೊಡ್ಡಮ್ಮನ ಮಗ. ಉದ್ಧವನ ಅಪ್ಪ ಕೃಷ್ಣನ ತಂದೆ ವಸುದೇವನ ತಮ್ಮನಾದ ದೇವಭಾಗ. ಉದ್ಧವನ ತಾಯಿ ದೇವಕಿಯಂತೆ ಕೃಷ್ಣನ ಸೋದರಮಾವ ಕಂಸನ ತಂಗಿ ಕಂಸೆ. (ದೇವಕಿಯು ಕಂಸನ ಚಿಕ್ಕಪ್ಪನಾದ ದೇವಕನ ಮಗಳು. ಹೀಗಾಗಿ ತಂಗಿ. ಕ೦ಸೆ ನೇರವಾಗಿ ತಂಗಿ). ಈ ಕಾರಣಗಳಿಂದ ಉದ್ಧವನಿಗೂ ಶ್ರೀಕೃಷ್ಣನಿಗೂ ನೋಡಲು ಬಹಳ ಹೋಲಿಕೆ ಇತ್ತಂತೆ. ಅವನು ಶ್ರೀಕೃಷ್ಣನಿಗಿಂತ ಒಂದೋ ಎರಡೋ ವರುಷ ದೊಡ್ಡವನಂತೆ. ವಯಸ್ಸಿನಲ್ಲೂ ಹೆಚ್ಚು ವ್ಯತ್ಯಾಸವಿಲ್ಲ. ಶ್ರೀಕೃಷ್ಣನ ರೀತಿಯಲ್ಲಿಯೇ ವೇಷ-ಭೂಷಣ ತೊಡುತ್ತಿದ್ದನಂತೆ. (ಮೇಲಿನ ಚಿತ್ರ ಈ ರೀತಿಯ ಹೋಲಿಕೆಯ ಮೇಲೆಯೇ ಚಿತ್ರಿಸಿದ್ದಾರೆ). 

ಉದ್ಧವ ಐದು ವರುಷದ ಚಿಕ್ಕ ಮಗುವಾಗಿದ್ದಾಗ ಅವನ ತಾಯಿ ಊಟದ ಸಮಯದಲ್ಲಿ ಭೋಜನಕ್ಕೆ ಕರೆದರೆ, "ಅಮ್ಮಾ, ಕೃಷ್ಣನ ಪೂಜೆ ಇನ್ನೂ ಮುಗಿದಿಲ್ಲ. ನನಗೆ ಹಸಿವಿಲ್ಲಾ ಅಮ್ಮ" ಅನ್ನುತ್ತಿದ್ದನಂತೆ. ಐದು ವರುಷದ ಉದ್ಧವನಿಗೆ ಮೂರು-ನಾಲ್ಕು ವರುಷದ ಕೃಷ್ಣನ ಪೂಜೆ ಹೇಗೆ? ಅದೂ ಕೃಷ್ಣ ಇದ್ದದ್ದು ಗೋಕುಲದಲ್ಲಿ. ಉದ್ಧವ ಇದ್ದದ್ದು ಮಧುರೆಯಲ್ಲಿ. ಹೀಗೆಂದು ಅನೇಕ ಪ್ರಶ್ನೆಗಳನ್ನು ಮಾಡಬಹುದು. ಲೌಕಿಕ ದೃಷ್ಟಿಯಿಂದ ಈ ಪ್ರಶ್ನೆಗಳು ಸಮಂಜಸವೇ. ಕೌರವ-ಪಾಂಡವರಿಗೆ ಅಜ್ಜನಾದ ಭೀಷ್ಮರಿಗೆ ಅವರ ಮೊಮ್ಮಕ್ಕಳ ಜೊತೆಯ ಕೃಷ್ಣನಲ್ಲಿ ಹೇಗೆ ಭಕ್ತಿ? ತಂದೆಯ ವಯಸ್ಸಿನವನಾದ ವಿದುರನಿಗೆ ಹೇಗೆ? ಭಕ್ತಿಯ ಸೆಲೆ ಮತ್ತು ಸೆಳೆತ, ಇವೆರಡೂ ಯಾವುದೇ ತರ್ಕಕ್ಕೆ ನಿಲುಕುವುದಿಲ್ಲ ಅನ್ನುವುದು ಅವರವರ ಅನುಭವದಿಂದ ತಿಳಿದುಕೊಳ್ಳಬೇಕಾದ ವಿಷಯ. 

*****

ಶ್ರೀಕೃಷ್ಣನಿಗೆ ಉದ್ಧವ ತನ್ನಲ್ಲಿಟ್ಟಿರುವ ಭಕ್ತಿಯ ಆಳ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ತಾನು ದೇಹತ್ಯಾಗ ಮಾಡುವ ಬಹಳ ಮೊದಲೇ ಉದ್ಧವನು ತನ್ನ ವಿರಹ ಸಹಿಸಲಾರನು ಎಂದು ತಿಳಿದು ಅವನನ್ನು ಹರಿದ್ವಾರಕ್ಕೆ ಕಳಿಸಿದ್ದನು ಎಂದು ಭಾಗವತ ಹೇಳುತ್ತದೆ. ಮಹಾಭಾರತದಲ್ಲಿ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ, ಎರಡು ಸೈನ್ಯಗಳ ನಡುವೆ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ "ಭಗವದ್ಗೀತೆ" ಲೋಕ ಪ್ರಸಿದ್ಧ. ಹೀಗೆಯೇ ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ ಶ್ರೀಕೃಷ್ಣನು ಉದ್ಧವನಿಗೆ ಉಪದೇಶಿದ ಭಾಗವು "ಉದ್ಧವ ಗೀತೆ" ಎಂದು ಹೆಸರಾಗಿದೆ. ಗಾತ್ರದಲ್ಲಿ ಇದು ಭಗವದ್ಗೀತೆಯ ಸುಮಾರು ಎರಡರಷ್ಟಿದೆ. ಸುಮಾರು ಸಾವಿರದ ಎರಡುನೂರು ಶ್ಲೋಕಗಳು. ಇದು ಶ್ರೀಕೃಷ್ಣನು ದೇಹತ್ಯಾಗ ಮಾಡುವ ಮೊದಲು ಜಗತ್ತಿಗೆ ನೀಡಿದ ಕೊನೆಯ ಸಂದೇಶ ಎನ್ನಬಹುದು.  

ಶ್ರೀಕೃಷ್ಣನು ತನ್ನ ಬಗ್ಗೆ ಗೋಕುಲದ ಗೋಪಿಯರ ಉತ್ಕಟ ಪ್ರೀತಿಯನ್ನು ಉದ್ಧವನಿಗೆ ಪರಿಚಯ ಮಾಡಿಸುವ ಸಲುವಾಗಿ ಅವನ ಮೂಲಕ ಗೋಪಿಯರಿಗೆ ಸಂದೇಶವೊಂದನ್ನು ಕಳಿಸಿಕೊಡುತ್ತಾನೆ. ಸಂದೇಶ ಕೊಂಡೊಯ್ದ ಉದ್ಧವನಿಗೆ ಗೋಕುಲದ ಪರಿಸರ, ಗೋಪಿಕೆಯರು ಶ್ರೀಕೃಷ್ಣನನ್ನು ಕಳೆದುಕೊಂಡು ಪರಿತಪಿಸುತ್ತಿರುವುದು, ಅವರ ಎಣೆಯಿಲ್ಲದ ಕೃಷ್ಣ ಭಕ್ತಿ, ಮುಂತಾದುವು ದಿವ್ಯವಾದ ಅನುಭವವನ್ನು ಕೊಡುತ್ತವೆ. ಅಕ್ರೂರ "ಬಿಲ್ಲು ಹಬ್ಬ" ನಿಮಿತ್ತ ಶ್ರೀಕೃಷ್ಣನನ್ನು ಕಂಸನ ಆದೇಶದ ಪ್ರಕಾರ ಕರೆತರಲು ಹೋದಾಗ ಗೋಕುಲದ ಹತ್ತಿರ ಹತ್ತಿರ ಬರುತ್ತಿದ್ದಂತೆ ಎಲ್ಲೆಲ್ಲೂ ಶ್ರೀಕೃಷ್ಣನ ಹೆಜ್ಜೆ ಗುರುತುಗಳನ್ನು ಕಂಡನಂತೆ. ಅವನ ಹೆಜ್ಜೆ ಮೇಲೆ ತಾನು ಹೆಜ್ಜೆಯಿಟ್ಟು ನಡೆಯುವುದು ಹೇಗೆ? ಅದು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿಂದ ಮುಂದೆ ಮೊಣಕಾಲ ಮೇಲೆ ತೆವಳುತ್ತಾ ಹೋದನಂತೆ! ಉದ್ಧವನಿಗೂ ಅದೇ ಅನುಭವ ಆಯಿತು. 

ಶ್ರೀಕೃಷ್ಣ ಗೋಪಿಯರಿಗೆ "ಚಿಂತೆ ಮಾಡಬೇಡಿ. ಬಿಲ್ಲು ಹಬ್ಬಕ್ಕೆ ಹೋಗುತ್ತಿದ್ದೇನೆ. ಒಂದೇ ದಿನ. ನಾಳೆ ಬಂದುಬಿಡುತ್ತೇನೆ" ಎಂದು ಹೇಳಿ ಹೋದವನು. ಅವನು ಮತ್ತೆ ಗೋಕುಲಕ್ಕೆ ಬರಲೇ ಇಲ್ಲ. ಕಂಸನ ವಧೆಯ ನಂತರ ಮಥುರೆ ನಗರದಲ್ಲಿಯೇ ಉಳಿದನು. ನಂತರ ಜರಾಸಂಧನ ಕಾಟದ ಕಾರಣ ಸಮುದ್ರ ಮಧ್ಯದ ದ್ವಾರಕಾ ನಗರ ನಿರ್ಮಿಸಿ ಯಾದವರ ಸಹಿತ ಅಲ್ಲಿಗೆ ಹೊರಟು ಹೋದನು. ಸಂದೇಶ ತಂದ ಉದ್ಧವನನ್ನು ಕಂಡು ಗೋಪಿಯರಿಗೆ ಒಂದು ರೀತಿ ಶ್ರೀಕೃಷ್ಣನನ್ನು ಕಂಡಂತೆಯೇ ಆಯಿತು. ಕ್ಷಣ ಕಾಲ ಇಬ್ಬರಲ್ಲಿದ್ದ ಸಾಮ್ಯ ಕೆಲಸ ಮಾಡಿತು. ತಕ್ಷಣವೇ ವ್ಯತ್ಯಾಸ ಮುಂದೆ ಕಂಡಿತು. ಅವನಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅದನ್ನೇ ಶ್ರೀ ಗೋಪಾಲದಾಸರು "ನಾಳೆ ಬರುತೇನೆಂದು" ಕೃತಿಯಲ್ಲಿ ವಿವರಿಸಿದ್ದಾರೆ. 

ಉದ್ಧವನಿಗೆ ಗೋಪಿಯರು ಶ್ರೀಕೃಷ್ಣನಲ್ಲಿ ಇರಿಸಿದ್ದ ಅಪಾರ ಭಕ್ತಿ-ಪ್ರೇಮಗಳನ್ನು ಕಂಡು ಆಶ್ಚರ್ಯವೂ, ಹೀಗೂ ಇರಬಹುದೇ ಎನ್ನುವ ದಿಗ್ಭ್ರಮೆಯೂ ಆಯಿತಂತೆ. "ನನಗೆ ಇನ್ನೊಂದು ಜನ್ಮದಲ್ಲಿ ಗೋಕುಲದಲ್ಲಿ ಒಂದು ಮರವಾಗಿ, ಗಿಡವಾಗಿ ಅಥವಾ ಈ ಗೋಪಿಯರು ನಡೆದಾಡುವ ನೆಲದಲ್ಲಿ ಅವರ ಕಾಲ ಕೆಳಗೆ ಸಿಗುವ ಹುಲ್ಲಾಗಿ ಹುಟ್ಟಿಸು, ಕೃಷ್ಣಾ" ಅಂದನಂತೆ. ಗೋಪಿಯರ ಅಲೌಕಿಕ ಭಕ್ತಿ-ಪ್ರೇಮಗಳ ಪರಾಕಾಷ್ಠತೆ ಅಂತಹುದು. ಕೃಷ್ಣ-ಗೋಪಿಕೆಯರದು ಒಂದು ರೀತಿಯ ಚೆಲ್ಲಾಟ ಅನ್ನುವವರಿಗೆ ಅದು ಅರ್ಥವಾಗುವುದಿಲ್ಲ.  

*****

"ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳ ದಿನ ಆಯಿತಲ್ಲೋ, ಉದ್ಧವಾ" ಅನ್ನುವ ಕೃತಿ ಐದು ನುಡಿಗಳದ್ದು. ದುಃಖಿತ ಮನಸ್ಸುಗಳ ಓಟ ಯಾವುದೇ ತರ್ಕಬದ್ಧ ವ್ಯವಹಾರಕ್ಕೆ ಒಗ್ಗುವುದಿಲ್ಲ. ಅಂತಹ ವ್ಯಕ್ತಿಯ ಚಿಂತನೆ ಹೀಗೊಮ್ಮೆ-ಹಾಗೊಮ್ಮೆ ಲೋಲಕದಂತೆ ತೂಗಾಡುತ್ತದೆ. ಒಮ್ಮೆ ವಾಸ್ತವ ವಿಷಯಗಳ ನೆಲೆಗಟ್ಟಲ್ಲಿ ನಿಂತಿರುತ್ತದೆ. ಮರು ಕ್ಷಣ ಕಲ್ಪನೆಯಲ್ಲಿ ಓಡುತ್ತದೆ. ಮತ್ತೊಂದು ಕ್ಷಣ ಜ್ಞಾನಿಯಂತೆ ಚಿಂತಿಸುತ್ತದೆ. ತಕ್ಷಣವೇ ಹುಚ್ಚನಂತೆ ಅಲೆದಾಡುತ್ತದೆ. ಗೋಪಿಯರ ಉದ್ಧವನ ಬಳಿ ಗೋಳಾಟ ಇದೆಲ್ಲವನ್ನೂ ಪ್ರತಿನಿಧಿಸುತ್ತದೆ. 

ಹಾಡನ್ನು ಕೇಳುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:
  • "ನಾವು ಹಳ್ಳಿಯ ಹೆಣ್ಣುಮಕ್ಕಳು. ದನ ಕಾಯುವವರು. ಚೆನ್ನಾಗಿ ಅಲಂಕರಿಸಿಕೊಳ್ಳಲು ತಿಳಿಯೆವು. ಅವನೋ ಮಥುರಾ ಪಟ್ಟಣಕ್ಕೆ ಹೋದ. ನಗರದ ಸ್ತ್ರೀಯರ ಥಳಕು-ಬಳುಕಿನ ಮುಂದೆ ನಾವೆಲ್ಲಿ? ಅವರ ಮಧ್ಯದಲ್ಲಿ ಸೇರಿ ಅವನು ಅವನು ಮರೆತನು" ಅನ್ನುವರು. ಹೀಗೆ ಹೇಳಿದರೂ ಮರು ಕ್ಷಣವೇ "ಅವನ ಮಹಿಮೆ ತಿಳಿಯಲಿಲ್ಲ" ಎಂದು ಹಲಬುವರು. 
  • ಅವನು ಪರಮಾತ್ಮನು ಎಂಬ ಅರಿವು ತಕ್ಷಣವೇ ಮೂಡುತ್ತದೆ. "ಅವನು ನಮ್ಮ ಒನಪು-ವಯ್ಯಾರಗಳಿಗೆ ಸಿಗುವವನಲ್ಲ. ಅವನು ನಿತ್ಯ ತೃಪನಾದ ಆನಂದರೂಪ. ಅಂತಹವನು ನಮ್ಮ ಬೆಣ್ಣೆ ಕದ್ದ ಕಳ್ಳ ಎಂದು ಆರೋಪಿಸಿ ತಪ್ಪು ಮಾಡಿದೆವಲ್ಲಾ" ಎಂದು ಕೊರಗುತ್ತಾರೆ. 
  • "ಅನಾದಿ ಮೂರ್ತಿಯನ್ನು ನಮ್ಮ ಜೊತೆಯವನು ಎಂದುಕೊಂಡೆವು. ನಾವು ದರಿದ್ರರು. ಅವನೋ ಲಕ್ಷ್ಮೀರಮಣ. ಚತುರ್ಮುಖ ಬ್ರಹ್ಮನ ತಂದೆ. ನಮಗೆ ಹೇಗೆ ಕೈವಶನಾದಾನು?". ಹೀಗೆನ್ನುವಾಗ ಅವರ ಜ್ಞಾನದ ಮಜಲು ತಿಳಿಯುತ್ತದೆ. ಅದು ಒಂದು ಕ್ಷಣ ಕಾಲ ಜ್ಞಾನ. ಮತ್ತೆ ಅಜ್ಞಾನ ಆವರಿಸುತ್ತದೆ. 
  • ರಾಸಕ್ರೀಡೆ, ಜಲಕ್ರೀಡೆಯ ಕಡೆ ಮನಸ್ಸು ಕೊಟ್ಟು ನಮ್ಮ ಹತ್ತಿರದಲ್ಲೇ ಇದ್ದ ಪರಮಾತ್ಮನನ್ನು ನಾವು ತಿಳಿಯಲಿಲ್ಲ. ನಮ್ಮನು ಬಿಟ್ಟು ಇವನೆಲ್ಲಿ ಹೋದಾನು? ಹೀಗೆ ಯೋಚಿಸಿ ಅಹಂಕಾರದಿಂದ ವ್ಯವಹರಿಸಿದೆವು. ಕಾಲ ವ್ಯರ್ಥ ಆಯಿತು. ಮೋಸ ಹೋದೆವು" ಎಂದು ಮರುಗುತ್ತಾರೆ. 
  • "ಎಲ್ಲ ಗೋಪಿಯರು ಸೇರಿ ಅವನ ರಥದ ಸುತ್ತ ಮಲಗಿ ರಥ ನಿಲ್ಲಿಸಿ, ಅವನನ್ನು ಕಳಿಸಬಾರದಿತ್ತು. ಹಾಗೆ ಮಾಡಲಿಲ್ಲ" ಎಂದು ದುಃಖಿಸುತ್ತಾರೆ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಗೊತ್ತು. ಆದರೆ ದುಃಖ ಹಾಗೆ ಹೇಳಿಸುತ್ತದೆ. ಉದ್ಧವನನ್ನೇ ಮುಂದಿನ ದಾರಿ ತೋರಿಸಲು ಕೇಳುತ್ತಾರೆ.
ಕೃಷ್ಣ ಹೋದಂದಿನಿಂದ ಗೋಪಿಯರಿಗೆ ಜೀವನದಲ್ಲಿ ಉತ್ಸಾಹವೇ ಹೋಯಿತು. ಆಮೇಲೆ ಹೇಗೆ ಬದುಕಿದರೋ ಅವರಿಗೇ ಗೊತ್ತಿಲ್ಲ. ಇದು ಅವರ ಪರಿಸ್ಥಿತಿ. (ಮೇಲಿನ ಚಿತ್ರದಲ್ಲಿ ಉದ್ಧವನು ಅವರನ್ನು ನೋಡಿದಾಗ ಅವರು ಇದ್ದ ರೀತಿಯನ್ನು ಚಿತ್ರಿಸಿದ್ದಾರೆ). ಇದು ಉದ್ಧವನು ಗೋಕುಲದಲ್ಲಿ ಕಂಡ ನೋಟ.

*****

ಎಂತಹ ತಪಸ್ವಿಗಳಿಗೂ, ಸಾಧಕರಿಗೂ ಪರಮಾತ್ಮನ ನೋಟ, ಸಾನ್ನಿಧ್ಯ ಸದಾಕಾಲವೂ ಇರುವುದಿಲ್ಲ ಎನ್ನುವುದು ಒಂದು ಪ್ರಮೇಯ. ಅವರವರ ಸಾಧನೆಗೆ ತಕ್ಕಂತೆ ಅದು ಸಿಗುತ್ತದಂತೆ. ಬಹುತೇಕ ಅದು ಮಿಂಚಿನಂತೆ ಒಂದು ಕ್ಷಣ ಕಂಡು ಮಾಯಾವಾಗುತ್ತದೆ ಅನ್ನುತ್ತಾರೆ, ತಿಳಿದವರು. ಗೋಪಿಕೆಯರಿಗೆ ಅಷ್ಟು ಕಾಲ ಶ್ರೀಕೃಷ್ಣನು ಸಿಕ್ಕಿದ್ದೇ ಹೆಚ್ಚು. ಆದ್ದರಿಂದ ಅವರು ಧನ್ಯರು!

ಶ್ರೀ ಅನಂತ ಕುಲಕರ್ಣಿ ಅವರು ಹಾಡಿರುವ ಈ ಗೀತೆಯನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು: