ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು.
Round The Clock Stories
Monday, March 30, 2026
ಅಕ್ಷಯ ತೃತೀಯಾ ಗಂಧ ಲೇಪನ
ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು.
Wednesday, March 25, 2026
ಅನಘ ನಿನ್ನ ನೋಡಿ ಮೋಹಿಸಿ
ಪತಿ-ಸುತರುಗಳ ಕೃಷ್ಣ ಬಂಧು-ಬಳಗವ ಅತಿ ಅಲಕ್ಷಿಸಿ ಓಡಿ ಬಂದೆವೋಗತಿಯು ಯಾರೆಲೋ ಕೊಳಲಮೋಹದಿ ರಾತ್ರಿವೇಳೆಲಿ ಬಂದು ನಿಂತೆವೋ
ಅಲ್ಲಿನದೆಲ್ಲ ಹಿಂದೆ ಬಿಟ್ಟು ಬಂದಿದ್ದಾಯಿತು. ಇಲ್ಲಿ ಇವನು ಹೊರಳಿ ಕಲಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಅವರು ಶ್ರೀಕೃಷ್ಣನಿಗೆ ಹೇಳಿದ ಮಾತುಗಳನ್ನು ಶ್ರೀ ವಿಜಯದಾಸರು ತಮ್ಮ "ನಿನ್ನನಗಲಿ ಪೊಗಲಾರೆವೋ, ನೀರಜಾಕ್ಷ, ನಿನ್ನ ಸೇರಿ ಸುಖಿಸಬಂದೆವೋ" ಎನ್ನುವ ಹಾಡಿನಲ್ಲಿ ಹೇಳಿದ್ದಾರೆ. ಶ್ರೀ ವಿದ್ಯಾಭೂಷಣರು ಹಾಡಿರುವ ಯೂಟ್ಯೂಬ್ ಲಿಂಕ್ ಕೆಳಗೆ ಕೊಟ್ಟಿದೆ. ಈ ಸಂಚಿಕೆಯನ್ನು ಓದಿದನಂತರ ಅದನ್ನು ಕೇಳಬಹುದು.
*****
"ಭಿನ್ನ ನುಡಿಗಳು" ಅಂದರೇನು? ಕಾಣಲು ಬಂದವರ ಅಭಿಪ್ರಾಯದ ವಿರುದ್ಧವಾದ ಮಾತುಗಳು. ಕೊಳಲ ಮೋಡಿ ಕರೆದದ್ದು ಜೊತೆ ಸೇರಲು. ಮಗುವಿಗೆ ಹಣ್ಣು ತೋರಿಸಿ, ಆಸೆ ಬರಿಸಿ ಕರೆದಂತೆ. ಕೊಟ್ಟದ್ದು ಏನು? ಹಣ್ಣಲ್ಲ. ವಿಷ. ಎಂತಹ ವಿಷ? ಅಂತಿಂಥ ವಿಷ ಅಲ್ಲ. ಕಾಲಕೂಟ ವಿಷ. ಅದನ್ನು ಸೇವಿಸುವ ಅವಶ್ಯಕತೆಯೇ ಇಲ್ಲ. ಅದರ ಗಾಳಿ ಕುಡಿದರೆ ಸಾಕು. ಪ್ರಾಣ ಹೋಗುವುದು. ಶ್ರೀಕೃಷ್ಣನು ಹೇಳುತ್ತಿರುವುದೂ ಅದೇ ರೀತಿ. ಅವನನ್ನು ಬಿಟ್ಟು ಹೋಗುವುದು ಅತ್ತ ಇರಲಿ. ಹಾಗೆ ಹೋಗಬೇಕೆನ್ನುವ ಮಾತೇ ಪ್ರಾಣ ಹರಣ ಆಗುವಂತಹದು. ಇದನ್ನೇ ಅನುಪಲ್ಲವಿಯಲ್ಲಿ ಹೇಳಿದ್ದಾರೆ.
ಕನ್ನಡ ಆಡುಭಾಷೆಯಲ್ಲಿ "ಐದುವುದು" ಅನ್ನುವ ಪದವನ್ನು ತನಿಯಾಗಿ ಬಳಸುವ ಸಂದರ್ಭಗಳಿಲ್ಲ. ಐದುವುದು ಅಂದರೆ ಯಾವುದೋ ಬಲು ಕಠಿಣವಾದುದ್ದನ್ನು ಬಹಳ ಪರಿಶ್ರಮದಿಂದ ಸಂಪಾದಿಸಿದ್ದು. ಇಂಗ್ಲಿಷಿನಲ್ಲಿ "attain" ಅಥವಾ "ಸಾಧಿಸುವುದು" ಅನ್ನಬಹುದು. ಪರಂಧಾಮವನ್ನೈದಿದರು ಎನ್ನುವ ಪದ ಆಗಾಗ ಕೇಳಿಬರುತ್ತದೆ. ಪರಮಾತ್ಮನು ಸುಲಭವಾಗಿ ಸಿಗುವುದಿಲ್ಲ. ಅದಕ್ಕೇ ಅವನು "ಐದುವುದಕೆ ಶಕ್ಯವಲ್ಲದವನು". ಈಗ ಹೇಗೋ ಕೈಗೆ ಸಿಕ್ಕಿದ್ದಾನೆ. ಅವನನ್ನು ಬಿಟ್ಟು ಹೋಗುವುದು ಹೇಗೆ?
ಹಿಂದೆ ಇವರು ಅವನಿಗೆ "ಪರರು" ಆಗಿರಬಹುದು. ಆದರೆ ಈಗ ಅವನ ಶರಣು ಬಂದಿದ್ದಾರೆ. ಅಲ್ಲಿಗೆ ಇಬ್ಬರಲ್ಲಿದ್ದ ದೂರ ಹೊರಟು ಹೋಯಿತು. ಆದ್ದರಿಂದ ಜೀವಾತ್ಮ-ಪರಮಾತ್ಮ ಅಭೇದದ ಅದ್ವೈತವಾದರೂ, ಜೀವಾತ್ಮ-ಪರಮಾತ್ಮ ಭೇದದ ದ್ವೈತವಾದರೂ, ಬೇರೆ ಹೋಗುವಂತಿಲ್ಲ. ಒಂದರಲ್ಲಿ ಸೇರಿಹೋಗಿ ಒಂದಾಗಬೇಕು. ಇನ್ನೊಂದರಲ್ಲಿ ಮುಕ್ತರಾಗಿ ಎಂದಿಗೂ ಜೊತೆಯಲ್ಲಿಯೇ ಇರಬೇಕು. (ಹೊಟ್ಟೆಯಲ್ಲಿ ಸೇರಿಹೋಗಬೇಕು. ಇಲ್ಲವೇ, ಪಕ್ಕದಲ್ಲಿ ಕುಳಿತಿರಬೇಕು!) ದೂರ ಹೋಗುವ ಮಾತೇ ಇಲ್ಲವಲ್ಲ! ದೂರ ಹೋದರೆ ಮತ್ತೆ ಜೀವನ-ಮರಣದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವುದು. ಅದು ಬೇಡವಾದದ್ದು.
"ಬಂಧುವರ್ಗವನ್ನು ಬಿಡುವುದು" ಸ್ತ್ರೀಯರಿಗೆ ಏಕೆ ನಿಂದ್ಯ? ಇದರಲ್ಲಿ ಏನು ವಿಶೇಷ? ಸಮಾಜದಲ್ಲಿ ಕುಟುಂಬಗಳನ್ನು ಮತ್ತು ಸಮೂಹಗಳನ್ನು ಒಟ್ಟಿಗೆ ಹಿಡಿದಿಡುವುದರಲ್ಲಿ ಸ್ತ್ರೀಯರ ವಿಶೇಷ ಪರಿಶ್ರಮವಿದೆ. ಬಂಧು-ಭಾಂದವರು ಬೆಲ್ಲಕ್ಕೆ ಇರುವೆಗಳು ಸುತ್ತಿಕೊಳ್ಳುವಂತೆ ಎಲ್ಲರನ್ನೂ ಒಟ್ಟುಗೂಡಿಸುವ ಕಲೆ ಸ್ತ್ರೀಯರಿಗೆ ಉಂಟು. ಇದರಲ್ಲಿ ಇನ್ನೊಂದು ಗುಹ್ಯಾರ್ಥವಿದೆ. ಪರಮಾತ್ಮನೊಬ್ಬನೇ ಪುರುಷ; ಬೇರೆಯವರೆಲ್ಲ ಸ್ತ್ರೀರೂಪ ಅನ್ನುವುದು ಒಂದು ಪ್ರಮೇಯ.
ಗಂಡ-ಮಕ್ಕಳು-ನೆಂಟರುಗಳನ್ನು ಬಿಡಬಾರದು. ನಿಜ. ಆದರೆ ಅವರೆಲ್ಲಾ ಈ ಜನ್ಮದ ಗಂಟುಗಳು. ಈ ಜನ್ಮ ಮುಗಿದ ನಂತರ ಅವರ್ಯಾರೋ, ಅವರಿಗೆ ನಾವ್ಯಾರೋ. ಆದರೆ ಪರಮಪುರುಷನು ನಮಗೆ ಅನಾದಿ ಕಾಲದಿಂದ ಅನಂತ ಕಾಲದವರೆಗೆ ನೆಂಟನು. ಶಾಶ್ವತ ನೆಂಟನ ಹಿಡಿಯಲು ತಾತ್ಕಾಲಿಕ ನೆಂಟರನ್ನು ಬಿಡುವುದು ತಪ್ಪಲ್ಲ ಎಂದು ಗೋಪಿಯರ ವಾದ. ಅದರ ಜೊತೆಗೆ ಗಂಡ-ಮಕ್ಕಳು-ನೆಂಟರು ಎಷ್ಟೇ ಸುಖ ಕೊಟ್ಟರೂ ಅದು ಮಿತವಾದದ್ದೇ. ಅದಕ್ಕೆ ಕೊನೆಯುಂಟು. ಆದರೆ ಪರಮಾತ್ಮನ ಜೊತೆಯ ಸುಖ ಕೊನೆಯಿಲ್ಲದ್ದು. ಅದು ಮಿತವಲ್ಲ. ಅಮಿತ.
Sunday, March 22, 2026
Those Saturday Mornings
When we open our own life's book, which is all the more frequent in old age, the early chapters are always more enchanting than the others. Or, one thinks so. The mind was not so much cluttered with all and sundry issues then. Life was simple. The funny part is, irrespective of one's age, and times in which the childhood was spent, this appears to be a universal feeling. We have heard the same sentiments expressed by members of different generations! Starting from our own grandfathers and grandmothers, to our grandchildren. The spell of childhood is such.
The 1950s and early 1960s were years in which most households had many children. "Family planning" and "Mitasantana" were not heard of. Children were considered to be the gift of God. The more the merrier. All planning was left in the hands of the celestial forces. There was no need to book a seat in the neighbourhood's finest school, start saving for paying donations and fee, and then plan for children. "Moola Shikshana" or "Basic education" had made a start after attaining independence. 5 years and 10 months was the prescribed age for starting schooling.
There were no KG or Montessori schools. Learning started from Standard One. Nearest government school was always there like a "Pushpaka Vimana" and there was no restriction on intake of students. In fact, there was no issue of "seats" as there were no chairs or benches for students in schools; the kids squatted on the mother earth so that they are close to nature. When the number of students was low, they had personal space in the classroom. Otherwise, their friendship would get even closer as they sat almost on each other. Most teachers had stools to sit on and the lucky ones had broken chairs. The situation was even grimmer in villages. The teachers were more concerned about their "Betta" (sticks used to discipline the students) than chairs.
*****
Five day week and discussion about number of school hours or work hours had not yet made its debut since NRN was himself at school. The classes ran from 10 AM to 5 PM with the usual lunch break, though most children did not know what "lunch" was. But they indeed liked the lunch hour since it was playtime. There was one exception, though. On Saturdays, schools worked from 8 AM to 11 AM. Sundays were holidays. Students looked forward to Saturdays eagerly, though they didn't like the idea of getting up early.
The schools were always situate on the outskirts of the villages or towns as they were constructed on government lands or forest lands. The location was also chosen considering the villages nearby, so that many villages could be serviced by the one available school. There were one or two bus service for a cluster of villages and hence the concept of school bus had not evolved. The walk to the school and back was also an enjoyable part of a child's daily routine. It would be anywhere between half an hour to two hours, depending on the location of their houses or huts.
Wall clocks and Radio sets were a symbol of relative affluency. There would be a radio set in probably one out of ten houses, in small towns. Corner and circle restaurants had radio sets in them and worked non-stop. One had to concentrate quite hard to understand the words due to enormous disturbances in broadcasting and receiving. Those of us who were interested in current affairs (when moved to middle and high schools) or cricket commentary crowded around them. All India Radio had a very popular program titled "Geetaaradhana" (worship through songs?) every morning. True to the secular character of the country, the songs of different faiths were broadcast by rotation.
*****
The timing of Geetaaradhana broadcast on Saturdays coincided with our walk to the morning classes. In order to ensure that no God is displeased, the devout have distributed the seven days of the week among them, in the best possible way. One of the most popular among them, though he displays his "Naama" more than the face, Sri Venkatesha or Sri Srinivasa has got hold of Saturdays. So, naturally "Sri Venkateswara Suprabhata" was broadcast on Saturday mornings.
The version of Suprabhata sung by the legendary singer Smt. M S Subbalakshmi is indeed the most popular version. Our morning walks to the schools on Saturdays was an opportunity to listen to this version. As we moved along the streets, radio sets in different houses ensured to give us a relay type hearing of the stotra. All households were generous in stepping up the volume at that time so that even those having hearing difficulty could enjoy the stotra.
All students knew this one stotra by heart, learnt effortlessly, though most of them could not recite the songs given in their text books.
Please click here to read a blog post written some 14 years ago, on the Suprabhata, in a friendly Bangalore park, though it was late in the evening!
*****
As it happens with most Stotras in a language not known to us, "Sri Venkateswara Suprabhata" also thrills us even though we do not understand its full import. The pleasure of singing or listening to it gets enhanced many times, if we understand what we are actually singing or listening to. We all know the Stotra, but who is its author? Most of us do not know its author.
Prof K S Ramamurthy of Bangalore has spent considerable time and efforts in devoting to bridge this gap. Hailing from Kolar, Prof Ramamurthy studied the vast Kannada and Sanskrit literature in Mysore University. He taught Kannada literature in colleges for over three decades. He is a writer, translator, researcher, and resource person for DSERT (Department of State Educational Research and Training). He contributes research articles to many magazines and journals. His services are recognised by many institutions, who have honourd him with awards.
Prof Ramamurthy has sort of made spreading the finer points of the Suprabhata as well as details of the various activities that take place in the temple, his life's mission. A photo of the book authored by him is given above.
The book covers various details, such as:
- References to Tirumala hills in Puranas and History.
- Details about the temple and various rituals.
- A chronological list of the daily and periodical sevas.
- Author of Sri Venkateswara Suprabhata.
- An analysis of the work and its finer points.
- History of Suprabhata singing by Smt. Subbalakshmi and its influence on her.
- Long years of relationship between Karnataka and Tirumala.
- Sri Venkatesha Stotra, Prapatti, and Mangalashasanam, with meaning.
- Other allied and useful information.
Saturday, March 14, 2026
ಒಂದು ನಾಟಕದ ಯಶಸ್ಸಿನ ರಹಸ್ಯಗಳು
ಶ್ರೀಹರ್ಷೋ ನಿಪುಣಃ ಕವಿ: ಪರಿಷದಪ್ಯೇಷಾ ಗುಣಗ್ರಾಹಿಣೀಲೋಕೇಹಾರಿಚ ಬೋಧಿಸತ್ವಚರಿತಂ ನಾಟ್ಯೇಚ ದಕ್ಷಾ ವಯಂವಸ್ತ್ವೇಕೈಕಮಪೀಹ ವಾಂಛಿತಫಲಪ್ರಾಪ್ತೇ: ಪದಂ ಕಿಂ ಪುನರ್ಮದ್ಭಾಗ್ಯೋಪಚಯಾದಯಂ ಸಮುದಿತಃ ಸರ್ವೇ ಗುಣಾನಾo ಗಣಃ
"ಶ್ರೀಹರ್ಷ ಕವಿ ನಾಟಕ ರಚಿಸುವುದರಲ್ಲಿ ನಿಪುಣನು. ನಾಟಕ ನೋಡಲು ಬಂದಿರುವ ಸಜ್ಜನರಾದರೋ ಗುಣಗ್ರಾಹಿಗಳು. ಕಥಾವಸ್ತುವು ಎಲ್ಲರ ಮನಸ್ಸು ಗೆಲ್ಲುವ ಬೋಧಿಸತ್ವನ ಕಥೆಯು. ನಮ್ಮ ತಂಡವು ನಾಟಕ ಪ್ರದರ್ಶನ ಕಲೆಯಲ್ಲಿ ಎತ್ತಿದಕೈ. ಇವು ನಾಲ್ಕರಲ್ಲಿ ಒಂದಿದ್ದರೂ ನಾಟಕ ಗೆದ್ದುಬಿಡುವುದು. ನನ್ನ ಪುಣ್ಯ ನೋಡಿ! ಇಂದು ಈ ನಾಲ್ಕೂ ಒಟ್ಟಿಗೆ ಬಂದು ಸೇರಿವೆ! ಇದಕ್ಕಿಂತ ಹೆಚ್ಚಿನ ಸಂಯೋಗ ಬೇರೆ ಇನ್ನೆಲ್ಲುಂಟು?"
ಇದೇ ಕಡೆಯ ಮಾತು ಎಂದೇನಿಲ್ಲ. ಆದರೆ ಬಹಳ ಹಿಂದಿನಿಂದಲೂ ಈ ನಾಲ್ಕು ಅಂಶಗಳಿಗೆ ವಿಶೇಷ ಸ್ಥಾನ ಉಂಟು ಎನ್ನುವುದು ಇದರಿಂದ ತಿಳಿಯಬಹುದು.
*****
ಈ ಹಿನ್ನೆಲಿಯಲ್ಲಿ ನಿನ್ನೆ ನಾವು ನೋಡಿದ "ಮುಖ್ಯಮಂತ್ರಿ" ನಾಟಕದ ಅಪೂರ್ವ ಯಶಸ್ಸಿನ ಕಾರಣಗಳು ಏನೆಂದು ನೋಡಬಹುದು.
1976ರ ಶ್ರೀ ಚಾಣಕ್ಯ ಸೆನ್ ಅವರ ಕಾದಂಬರಿ ಆಧರಿಸಿ ಶ್ರೀ ರಣಜಿತ್ ಕಪೂರ್ ಅವರು ಹಿಂದಿ ನಾಟಕವಾಗಿ ರೂಪಾಂತರಗೊಳಿಸಿದರು. ಶ್ರೀ ಟಿ. ಎಸ್. ಲೋಹಿತಾಶ್ವ ಅದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಾಷಾಂತರ ಸಮಯದಲ್ಲಿ ಕೌಶಲ್, ದುಬೆ, ತ್ರಿಪಾಠಿ, ದೇಸಾಯಿ ಮೊದಲಾದ ಹೆಸರುಗಳನ್ನೇ ಉಳಿಸಿಕೊಂಡಿದ್ದಾರೆ. ಇದರಿಂದ ಕನ್ನಡನಾಡಿನ ಪ್ರೇಕ್ಷಕರು ಈ ಪಾತ್ರಗಳಲ್ಲಿ ಸಮಾನಾಂತರವಾದ ನಮ್ಮ ನಾಡಿನ ರಾಜಕೀಯ ವ್ಯಕ್ತಿಗಳನ್ನು ಸುಲಭವಾಗಿ ಕಂಡರೂ, ಯಾವುದೇ ನಿರ್ದಿಷ್ಟ ರಾಜಕಾರಣಿಯನ್ನು ಗುರಿ ಮಾಡಿದಂತೆ ಇಲ್ಲ. 1980ರಿಂದ ಈವರೆಗೆ ನಲವತ್ತೈದು ವರುಷಗಳು ಕಳೆದಿದ್ದರೂ, ಪ್ರತಿ ಪ್ರದರ್ಶನದಲ್ಲೂ ಕಥಾವಸ್ತು ನಿತ್ಯನೂತನ. ಹೀಗಾಗಿ ಕಥಾವಸ್ತುವಿನ ಅಂಶದಲ್ಲಿ ನಾಟಕ ಗಟ್ಟಿಯಾಗಿ ಉಳಿದಿದೆ.
ಕಥಾವಸ್ತುವಿನ ರೂಪಾಂತರ ಮತ್ತ್ತು ಭಾಷಾಂತರದಲ್ಲಿ ಇರುವ ಬಿಗಿ, ಹಾಸ್ಯಮಿಶ್ರಿತ ಸಂಭಾಷಣೆಗಳು, ಸಮಕಾಲೀನ ಸೊಗಡು, ಇವುಗಳಿಂದ ಕೃತಿ ರಚನಕಾರರ ಚತುರತೆ (ಮೂಲ ಕೃತಿಕಾರರು, ಹಿಂದಿ ರೂಪಾಂತರಕಾರರು, ಮತ್ತು ಕನ್ನಡದ ಭಾಷಾಂತರಕಾರರು) ಎದ್ದು ಕಾಣುತ್ತದೆ. ರಂಗದ ಮೇಲೆ ಬಂದಾಗ ನುರಿತ ನಟರು ಮತ್ತು ನಿರ್ದೇಶಕರ ರಸ ಪೋಷಣೆಯಿಂದ ಈ ಅಂಶವು ಇನ್ನಷ್ಟು ಸ್ಫುಟವಾಗಿ ತೋರುತ್ತದೆ. ಹೀಗೆ ಈ ಅಂಶದಲ್ಲಿಯೂ ನಾಟಕ ಸುಲಭವಾಗಿ ಗೆಲ್ಲುತ್ತದೆ.
"ಕಲಾಗಂಗೋತ್ರಿ" ತಂಡವು ಸುವರ್ಣ ಮಹೋತ್ಸವ ಆಚರಿಸಿ ಮುನ್ನಡೆಯುತ್ತಿರುವ ಕಲಾತಂಡ. ಈ ನಾಟಕದ ಪ್ರದರ್ಶನದಲ್ಲಿ ಅಭಿನಯಿಸುವ ನಟ-ನಟಿಯರು ಎರಡು ರೀತಿಯವರು. ಮೊದಲಿನಿಂದಲೂ ಭಾಗವಹಿಸುತ್ತಿರುವ ಹಿರಿಯ ಕಲಾವಿದರು ಮತ್ತು ಈಗ ಚಿಗುರುತ್ತಿರುವ ಪ್ರತಿಭೆಗಳು, ಎರಡು ರೀತಿಯೂ ಸೇರಿ "ಹೊಸ ಚಿಗುರು - ಹಳೆ ಬೇರು" ಎನ್ನುವಂತೆ ಸೊಗಸಾದ ಅನುಭವವನ್ನು ಕೊಡುತ್ತದೆ. ಡಾ. ಬಿ.ವಿ. ರಾಜಾರಾಂ ಅವರ ನಿರ್ದೇಶನದಲ್ಲಿ ಪ್ರತಿ ಪ್ರದರ್ಶನವೂ "ರಂಗಮಂದಿರ ತುಂಬಿದೆ" ಎಂದು ನಡೆಯುತ್ತಿದೆ.
ನಾಟಕ ನೋಡಲು ಬಂದಿದ್ದ ಪ್ರೇಕ್ಷಕರ ಬಗ್ಗೆ ಒಂದು ಮಾತು. ಅನೇಕ ನಾಟಕ ಪ್ರದರ್ಶನಗಳಲ್ಲಿ ಒಂದು ವರ್ಗದ ಅಥವಾ ಒಂದು ವಯೋಮಾನದ ಜನರನ್ನು ಕಾಣಬಹುದು. ಆದರೆ ನಿನ್ನಿನ ಪ್ರದರ್ಶನದಲ್ಲಿ ಕಂಡಂತೆ ಎಲ್ಲ ವಯಸ್ಸಿನ, ಎಲ್ಲ ಹಿನ್ನೆಲೆಯ ಪ್ರೇಕ್ಷಕರೂ ತುಂಬಿದ್ದರು. ಹಿತೈಷಿಗಳೊಬ್ಬರು ಮೊದಲೇ ಎಚ್ಚರಿಸಿದ್ದರಿಂದ ಮುಂಗಡ ಬುಕಿಂಗ್ ಮಾಡಿದ್ದುದು ಒಳಿತಾಯಿತು. ಇಲ್ಲದಿದ್ದಲ್ಲಿ ನಿರಾಶರಾಗಿ ಹೊರಬರಬೇಕಿತ್ತು.
"ಮುಖ್ಯಮಂತ್ರಿ ಚಂದ್ರು" ಮುಖ್ಯಮಂತ್ರಿ ಕೆ. ಡಿ. ಕೌಶಲ್ (ಕೇಡಿ ಕೌಶಲ್?) ಪಾತ್ರದಲ್ಲಿ ಎಂದಿನಿಂದಲೋ ಮನೆಮಾತಾಗಿದ್ದಾರೆ. ನಾಟಕ ಮುಗಿದನಂತರ ಅವರೊಡನೆ ಫೋಟೋ ತೆಗೆಸಿಕೊಳ್ಳಲು ಒಂದು ಸರತಿಯ ಸಾಲೇ ಇರುತ್ತದೆ. (ಹೀಗೆ ಅವರೊಡನೆ ನಾವು ತೆಗೆಸಿಕೊಂಡ ಫೋಟೋವನ್ನು ಮೇಲೆ ನೋಡಬಹುದು). ರಾತ್ರಿ ಕಾಲ, ಸಮಯ ಮೀರಿದ್ದರೂ ತಮ್ಮನ್ನು ಮಾತನಾಡಿಸಲು ಬಂದ ಪ್ರತಿಯೊಬ್ಬರೊಡನೆ ಅವರು ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದ ರೀತಿ ಇತರರಿಗೆ ಒಂದು ಮಾದರಿ.
ಹೀಗೆ ನೋಡಿದಾಗ ನಾಗಾನಂದ ನಾಟಕದ ಸೂತ್ರಧಾರನು ಹೇಳುವ ನಾಲ್ಕು ಅಂಶಗಳಲ್ಲೂ "ಮುಖ್ಯಮಂತ್ರಿ" ನಾಟಕ ಗೆಲ್ಲುವುದೇ ಅದರ ಯಶಸ್ಸಿನ ರಹಸ್ಯ.
*****
ಕಲಾಗಂಗೋತ್ರಿ ತಂಡವು ತನ್ನ ಸುವರ್ಣ ಮಹೋತ್ಸವ ಕಾಲದಲ್ಲಿ ಡಾ. ಕೆ. ವೈ. ನಾರಾಯಣಸ್ವಾಮಿ ಅವರಿಂದ "ಮತ್ತೆ ಮುಖ್ಯಮಂತ್ರಿ" ಎಂದು ಮತ್ತೊಂದು ನಾಟಕವನ್ನು ಬರೆಸಿದೆ. ಈ ನಾಟಕವೂ ಕಳೆದ ಎರಡು-ಮೂರು ವರುಷಗಳಲ್ಲಿ ಕೆಲವು ಪ್ರದರ್ಶನಗಳನ್ನು ಕಂಡಿದೆ. ಅಧಿಕಾರ ಉಳಿಸಿಕೊಳ್ಳಲು ಏನೇನೋ ಕಸರತ್ತು ಮಾಡುವ ಮುಖ್ಯಮಂತ್ರಿಯ ಬದಲಾಗಿ ಇಲ್ಲಿ ಆದರ್ಶ, ಸಿದ್ಧಾಂತಗಳಿಗಾಗಿ ತನ್ನ ಅಧಿಕಾರವನ್ನು, ಮತ್ತು ಕಡೆಗೆ ಪ್ರಾಣವನ್ನೂ ಬಲಿಕೊಡುವ "ಮುಖ್ಯಮಂತ್ರಿ ಶೀಲವಂತ" ಎನ್ನುವ ವ್ಯಕ್ತಿಯ ಚಿತ್ರಣ ಇಲ್ಲುಂಟು. ಈ ನಾಟಕ ನೋಡುವ ಸುಯೋಗ ಇನ್ನೂ ನಮಗೆ ಸಿಕ್ಕಿಲ್ಲ.
"ಮುಖ್ಯಮಂತ್ರಿ" ನಾಟಕ ಇನ್ನು ಕೆಲವೇ ದಿನಗಳಲ್ಲಿ ತನ್ನ 900 ಪ್ರದರ್ಶನಗಳನ್ನು ದಾಟಲಿದೆ. ಅದರ "ಸಹಸ್ರ ಪ್ರದರ್ಶನ" ನಡೆವ ದಿನವೂ ಹತ್ತಿರದಲ್ಲಿಯೇ ಇದೆ.
Monday, February 9, 2026
ಅವರೇ ಆಗಬೇಕೆಂದಿಲ್ಲ!
ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:ತದ್ದರ್ಶನಮ್ ದುರಿತಕಾನನ ದಾವಭೂತಮ್
ಏನಿದರ ವಿಶೇಷ?
ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು), ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ.
ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.
*****
ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು.
ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ.
*****
ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ.
ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ.
ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!
Monday, February 2, 2026
ದೇಶದ್ರೋಹಿ
ನವಂ ಶರಾವಂ ಸಲಿಲೈ: ಸುಪೂರ್ಣ೦ ಸುಸಂಸ್ಕೃತಂ ದರ್ಭಕೃತೋತ್ತರೀಯಮ್ತತ್ತಸ್ಯ ಮಾಭೂನ್ನರಕಂ ಸ ಗಚ್ಚೇತ್ ಯೋ ಭರ್ತೃಪಿಂಡಸ್ಯ ಕೃತೇ ನ ಯುಧ್ಯೇತ್
"ಯಾವನು ತನ್ನ ಯಜಮಾನನ ಅಥವಾ ದೇಶದ ಪರವಾಗಿ ಹೋರಾಡುವುದಿಲ್ಲವೋ ಅಂತಹ ಮನುಷ್ಯನಿಗೆ ಕ್ರಮವಾಗಿ ಉತ್ತರಕ್ರಿಯಾದಿಗಳನ್ನು ಮಾಡಿ ನೀಡುವ ವಸ್ತುಗಳು (ತರ್ಪಣದ ನೀರು, ಅನ್ನ-ಪಾನಾದಿಗಳು) ಸಿಗದಿರಲಿ. ಅಂತಹವನು ಉತ್ತಮ ಗತಿಗೆ ಯೋಗ್ಯನಲ್ಲ. ಅವನು ನರಕದಲ್ಲಿ ಬಿದ್ದು ಕೊಳೆಯಲಿ!"
ಪ್ರತಿಯೊಬ್ಬ ಮನುಷ್ಯನಿಗೂ ಅವನು ಹುಟ್ಟಿ-ಬೆಳೆದ ಅಥವಾ ಅವನು ಸ್ವೀಕರಿಸಿದ ಪದ್ಧತಿಯ ಪ್ರಕಾರ ಅಂತಿಮ ಗೌರವಗಳು ಸಿಗುತ್ತವೆ. ಕೆಲವರಿಗೆ ಅದು ತರ್ಪಣ, ಪಿಂಡಪ್ರದಾನ ಇತ್ಯಾದಿ ರೀತಿಯಲ್ಲಿ ಇರಬಹುದು. ಮತ್ತೆ ಕೆಲವರಿಗೆ ಹಾಲು-ತುಪ್ಪ ಇರಬಹುದು. ಮತ್ತೆ ಕೆಲವರಿಗೆ "ಮೆಮೋರಿಯಲ್ ಸರ್ವಿಸ್" ಇರಬಹುದು. ಅದು ಯಾವುದು ಎನ್ನುವುದು ಮುಖ್ಯವಲ್ಲ. ಅದು ಒಂದು ಅತ್ಯಂತ ಗೌರವಯುತವಾದ ಸಂಸ್ಕಾರ ಆಗಿರಬೇಕು. ಅಷ್ಟೇ. ಯೌಗಂಧರಾಯಣನ ಸಮಯದ ವಿವರಣೆ ಇಲ್ಲುಂಟು. ಕಾಲಕಾಲಕ್ಕೆ ಅದು ಬದಲಾಗಬಹುದು. ಗೌರವದ ರೀತಿ ಹೇಗೆ ಎನ್ನುವುದರ ವಿವರ ಬೇರೆ ಆಗಬಹುದು. ಆದರೆ ತೋರಿಸುವ ಗೌರವ-ಆದರಗಳು ಎಂದಿಗೂ ಒಂದೇ.
ದೇಶದ್ರೋಹಿಯು ಸಾಯುವನೆಲ್ಲಿ?ಸತ್ತರೆ ಅವನಿಗೆ ಸುಡುಗಾಡೆಲ್ಲಿ?ಸೂಡು ಮಾಡಲು ಕಟ್ಟಿಗೆಯಿಲ್ಲಬೆಂಕಿ ಹೆಣವನು ಮುಟ್ಟುವುದಿಲ್ಲನಾಯಿ ನರಿಯೂ ತಿನ್ನುವುದಿಲ್ಲತಬ್ಬಲಿಗೇನಿಲ್ಲ!
ತಿಳಿಗನ್ನಡದ ಈ ಕವಿತೆಯ ಸಾಲುಗಳಿಗೆ ಯಾವ ವಿವರಣೆಯೂ ಬೇಕಿಲ್ಲ. ದೇಶದ್ರೋಹಿಯು ಸತ್ತು ಬೀಳುವ ಕಡೆ ಇರುವ ನೆಲ "ಇಲ್ಲಿ ಬೀಳಬೇಡ!" ಅನ್ನುತ್ತದಂತೆ. ಸ್ಮಶಾನ "ಇಲ್ಲಿ ಬರಬೇಡ!" ಎಂದು ಕಿರಿಚುತ್ತದಂತೆ. ಚಿತೆ ಒಟ್ಟುಗೂಡಿಸಲು ತರುವ ಸೌದೆತುಂಡುಗಳು ದೂರ ಓಡಿಹೋಗುತ್ತವಂತೆ. ಬೆಂಕಿ ಅವನ ದೇಹವನ್ನು ಸುಡಲು ಒಲ್ಲದಂತೆ. "ಹಸಿವಿನಿಂದ ಸತ್ತರೂ ಪರವಾಗಿಲ್ಲ. ನಮಗೆ ಇವನ ದೇಹ ತಿನ್ನುವ ದೌರ್ಭಾಗ್ಯ ಬೇಡ!" ಎಂದು ನಾಯಿ-ನರಿಗಳು ದೂರ ಓಡುತ್ತವಂತೆ. ಅವನು ಈಗ ನಿಜವಾಗಿಯೂ ತಬ್ಬಲಿ. ಹೇಳುವವರು, ಕೇಳುವವರು, ಅವನಿಗಾಗಿ ದುಃಖಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನೂ ಕಳೆದುಕೊಂಡ ಪಾತಕಿ.
*****
ನಮ್ಮ ಬಾಲ್ಯದಲ್ಲಿ ಏನಾದರೂ ಪ್ರಮಾದ ಮಾಡಿದ ಸಮಾಜಘಾತುಕರನ್ನು ನಿರ್ದೇಶಿಸಿ "ಅವನನ್ನು ನೀರು-ನೆರಳು ಇಲ್ಲದ ಕಡೆ ಕಡಿಯಬೇಕು" ಅನ್ನುತ್ತಿದ್ದರು. ಈಗ ಅಂತಹ ಹೇಳಿಕೆ ಅಷ್ಟಾಗಿ ಕೇಳಿಬರುವುದಿಲ್ಲ. ಕಡಿದ ಮೇಲೆ ಮನುಷ್ಯನೇ ಹೋಗುವಾಗ ಅಲ್ಲಿ "ನೀರು-ನೆರಳು" ಏನು ಮಾಡುತ್ತವೆ? ಎಂದು ನಾವು ಹುಡುಗರು ಯೋಚಿಸುತ್ತಿದ್ದೆವು. ಅದರ ಅರ್ಥ ಅದಲ್ಲ. ಒಬ್ಬ ಮನುಷ್ಯನಿಗೆ ಸಿಗಬೇಕಾದ ಕನಿಷ್ಠ ಪದಾರ್ಥಗಳೂ ಸಿಗಬಾರದು. ಅವನು ಅದಕ್ಕೆ ಯೋಗ್ಯನಲ್ಲ ಎಂದು ಹೇಳುವುದು ಅದರ ಉದ್ದೇಶ್ಯ.
ದೇಶದ್ರೋಹಿಗೆ ಕಾನೂನಿನಲ್ಲಿ ಅನೇಕ ರೀತಿಯ ಶಿಕ್ಷೆಗಳಿವೆ. ಕೆಲವು ದೇಶದ್ರೋಹಿಗಳಿಗೆ ಈ ರೀತಿಯ ಶಿಕ್ಷೆ ಆಗಬಹುದು. ಕೆಲವರು ಕಾರಣಾಂತರಗಳಿಂದ ಶಿಕ್ಷೆ ತಪ್ಪಿಸಿಕೊಳ್ಳಲೂಬಹುದು. ಆದರೆ ದೇಶವಾಸಿಗಳಿಂದ ಸಿಗುವ ಗೌರವ ದೇಶಭಕ್ತನಿಗೆ ಕಿರೀಟ. ಅದೇ ದೇಶವಾಸಿಗಳಿಂದ ಸಿಗುವ ತಿರಸ್ಕಾರವೇ ದೇಶದ್ರೋಹಿಗೆ ಅತಿ ದೊಡ್ಡ ಶಿಕ್ಷೆ.
Wednesday, January 21, 2026
ತಾಯಿಯ ತೊಳಲಾಟ
ಅದತ್ತೇತಿ ಆಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃಧರ್ಮಸ್ನೇಹಾಂತರೇ ನ್ಯಸ್ತಾ ದುಃಖಿತಾಃ ಖಲು ಮಾತರಃ
(ವಿವಾಹಯೋಗ್ಯ ವಯಸ್ಸು ತಲುಪಿದ ತನ್ನ ಒಬ್ಬ ಮಗಳು ಮನೆಯಲ್ಲಿದ್ದಾಗ) ಮೊದಲು ಮದುವೆ ಮಾಡಿಕೊಡಲಿಲ್ಲವಲ್ಲಾ ಎಂದು ನಾಚಿಕೆಯಿಂದ ಕೊರಗು. ವಿವಾಹದ ನಂತರ ಮಗಳು ಮನೆ ಬಿಟ್ಟು ಹೋಗುವಳಲ್ಲಾ ಎಂದು ಕೊರಗು. ಹೀಗೆ, ತಾಯಿಯರು ಅತ್ತ ಕಡೆ ತಾಯಿಯಾಗಿ ಮಾಡಬೇಕಾದ ಕರ್ತವ್ಯ ಮತ್ತು ಇತ್ತ ಕಡೆ ಮಗಳ ಮೇಲಿನ ಅತಿಶಯವಾದ ಪ್ರೀತಿ, ಇವೆರಡರ ನಡುವೆ ತೊಳಲಿ ಬಳಲುವರು.
ಎರಡು ಸಾವಿರ ವರುಷ ಹಿಂದೆ ವಾಸವದತ್ತೆಯ ಕಾಲದಲ್ಲಿದ್ದಂತೆ, ಕೆಲವು ದಶಕಗಳ ಹಿಂದೆಯೂ ಇತ್ತು. ಈಗ ಅದರ ತೀವ್ರತೆ ಇಳಿದಿದ್ದರೂ ಅದರ ಒಟ್ಟಾರೆ ಪರಿಣಾಮ ತಾಯಿಯರ ಮೇಲೆ ಅದೇ ರೀತಿ ಇರುವುದು. ಇದು ಮಾತೆಯರಿಗೆ ಚೆನ್ನಾಗಿ ಗೊತ್ತು. ಇತರರಿಗೆ ಅಷ್ಟು ವಿಶದವಾಗಿ ಗೊತ್ತಾಗದಿರಬಹುದು.
*****
ಮನುಷ್ಯನ ಜೀವನದಲ್ಲಿ ಅನೇಕ ಮುಖ್ಯ ಘಟ್ಟಗಳಿರುತ್ತವೆ. ಆಯುಪ್ರಮಾಣದ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿ ಐದು ಪ್ರಮುಖ ಘಟ್ಟಗಳನ್ನು ಗುರುತಿಸಿದ್ದಾರೆ. ಹುಟ್ಟಿನಿಂದ ಅರವತ್ತು ವರುಷಗಳ ಉಗ್ರರಥ ಶಾಂತಿ, ಎಪ್ಪತ್ತು ವರುಷಗಳ ಭೀಮರಥ ಶಾಂತಿ, ಸಹಸ್ರ (ಒಂದು ಸಾವಿರ) ಪೂರ್ಣ ಚಂದ್ರ (ಹುಣ್ಣಿಮೆ ಚಂದ್ರ) ದರ್ಶನ ಶಾಂತಿ, ಪ್ರಪೌತ್ರ ದರ್ಶನ ಶಾಂತಿ (ಮೊಮ್ಮಗನ ಮಗನ ಜನನ), ಮತ್ತು ಶತಮಾನ (ಒಂದು ನೂರು ವರುಷಗಳ ಜೀವನ) ಶಾಂತಿ. ಇವುಗಳ ಬಗ್ಗೆ ಈ ಹಿಂದೆ (2012 ಫೆಬ್ರವರಿಯಲ್ಲಿ) ಈ ಬ್ಲಾಗಿನಲ್ಲಿ ನೋಡಿದ್ದೇವೆ. ಸಹಸ್ರ ಪೂರ್ಣಚಂದ್ರ ದರ್ಶನ ಶಾಂತಿಯ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸುಮಾರು 81 ವರ್ಷ 2 ತಿಂಗಳುಗಳಿಗೆ ಈ ಘಟ್ಟ ಬರುತ್ತದೆ.
ಎಂಭತ್ತು ವರುಷಗಳ ಹುಟ್ಟು ಹಬ್ಬ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂದಾಜುಗಳ ಪ್ರಕಾರ ನೂರಕ್ಕೆ ಐದಾರು ಮಂದಿ ಮಾತ್ರ ಈ ಘಟ್ಟ ತಲಪುತ್ತಾರೆ. ಎಂಭತ್ತರ ಹುಟ್ಟು ಹಬ್ಬ ಈ ಕಾರಣದಿಂದ ಒಂದು ವಿಶೇಷವೇ. ಇದೇ ರೀತಿ ಒಂದು ಪುಸ್ತಕವನ್ನು ಬರೆಯಲು ಪ್ರಾರಂಭಿಸಿ, ಮುಗಿಸಿ, ಮುದ್ರಿಸಿ, ಪ್ರಕಟಿಸುವ ಯಶಸ್ಸು ನೂರಕ್ಕೆ ಒಬ್ಬರಿಗಿಂತಲೂ (ಶೇಕಡಾ ೦.4 ಎಂದು ಒಂದು ಅಂದಾಜು) ಕಡಿಮೆ ಜನರಿಗೆ ಸಿಕ್ಕುವುದು. ಪುಸ್ತಕ ಬಿಡುಗಡೆ ಒಂದು ಸಾಧನೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ಮನುಷ್ಯನೂ ಒಬ್ಬ ಕವಿಯೇ. ಹೆಚ್ಚಿನವರಿಗೆ ಅದು ಒಂದು ಮಿಂಚಿನಂತೆ ಬಂದು ಮಾಯವಾಗುವುದು. ಅದು ಬೌದ್ಧಿಕವಿರಬಹುದು ಅಥವಾ ಭಾವನಾತ್ಮಕ ಇರಬಹುದು. ಬುದ್ಧಿಯಲ್ಲಿ ಅಥವಾ ಮನಸ್ಸಿನಲ್ಲಿ ಬಂದ ಹೊಳಹುಗಳನ್ನು ಕಾಗದದ ಮೇಲೆ ಇಳಿಸುವುದು ಅಪರೂಪ. ಅವೆಲ್ಲವನ್ನೂ ಒಂದೆಡೆ ಸೇರಿಸಿ, ಪರಿಷ್ಕರಿಸಿ, ಪ್ರಕಟಿಸುವುದು ಅನೇಕರಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಮತ್ತೆ ಕೆಲವರ ಒತ್ತಾಸೆಯೂ ಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಭಾಗ್ಯ.
ಈ ಎರಡೂ ರೀತಿಯ ಭಾಗ್ಯಗಳು ಒಟ್ಟಾಗಿ ಸಿಗುವುದು ಎಷ್ಟು ಅಪರೂಪ ಎಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಕಳೆದ ಭಾನುವಾರ (18 ಜನವರಿ 2026) ಇಂತಹ ಸುಂದರ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. "ಸಮನ್ವಯ" ಅನ್ನುವ ಕವನ ಸಂಕಲನ ಬಿಡುಗಡೆ ಆಯಿತು.
ಶೈಲಾ ಬಿ. ಅಗಡಿ ಅವರು ಕನ್ನಡ ಮತ್ತು ಹಿಂದಿಯಲ್ಲಿ ಆಗಾಗ ಬರೆದು ಜೋಪಾನವಾಗಿಟ್ಟಿದ್ದ ಕವನಗಳನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿಸಿ, ಮುದ್ರಿಸಿ ಅಂದು ಬಿಡುಗಡೆ ಮಾಡಿದರು. ಪುಸ್ತಕದ ಚಿತ್ರವನ್ನು ಮೇಲುಗಡೆ ನೋಡಬಹುದು.
*****
ತುತ್ತು ಉಣುವ ಪುಟ್ಟ ಹಕ್ಕಿಗೆಹೊಂಬಣ್ಣದ ರೆಕ್ಕೆ ಮೂಡಿರಲುಹೆತ್ತೊಡಲು ಬರಿದು ಮಾಡುವಸಂಚು ಹೂಡಿರಲು, ಪಣ ತೊಟ್ಟಿರಲುಕಂದಾ, ನೀ ಮಡಿಲ ತೊರೆದು ಪೊದೆಯಾ?
ಮರಳಿ ಪಡೆಯುವ ಅತಿಯಾಸೆ ಬೇಡ ನಿನಗೆಕುಸುಮಕೆ ಪ್ರೀತಿಯ ಧಾರೆಯೆರೆಯನೆರೆವವರುಮತ್ತೂ ಇಹರೆಂಬುದ ನೀ ಮರೆಯದಿರು
ನೀ ನಡೆದು ಬಂದ ಪಥವ ಮರೆತೆಯಾ?


