Saturday, October 14, 2023

ಕಾರಿ ಹೆಗ್ಗಡೆಯ ಮಗಳು


ಕಾವ್ಯ ಮೀಮಾಂಸೆಯ ವಿಷಯ ಚರ್ಚಿಸುವಾಗ ವಿದ್ವಾಂಸರು ಆಚಾರ್ಯ ಆನಂದವರ್ಧನ (820-890 AD) ಮತ್ತು ಆಚಾರ್ಯ ಅಭಿನವ ಗುಪ್ತರನ್ನು  (950-1016 AD) ಬಹಳ ಕೃತಜ್ಞತೆಯಿಂದ ನೆನೆಯುತ್ತಾರೆ. ಆಚಾರ್ಯ ಅಭಿನವ ಗುಪ್ತರ ಸಹಸ್ರಮಾನೋತ್ಸವ ಆರೇಳು ವರ್ಷಗಳ ಹಿಂದೆ ಆಚರಿಸಲಾಯಿತು. ಕಾಶ್ಮೀರದವರಾದ ಈ ಇಬ್ಬರು ವಿದ್ವನ್ಮಣಿಗಳು ನಮ್ಮ ಪರಂಪರೆಗೆ ಬಹು ದೊಡ್ಡ ಕಾಣಿಕೆಗಳನ್ನು ಕೊಟ್ಟ ದಿವ್ಯ ಪುರುಷರು. ಇಂದಿನ ವಿಜ್ಞಾನ ಪ್ರಪಂಚದ ಸಾಧನ ಸಲಕರಣೆಗಳು ಇಲ್ಲದ ಕಾಲದಲ್ಲಿ ಈ ಪುಣ್ಯಾತ್ಮರು ಮಾಡಿರುವ ಜ್ಞಾನ ಪ್ರಸಾರ ಕಾರ್ಯ ಒಂದು ವಿಸ್ಮಯವೇ ಸರಿ. ಒಬ್ಬ ವ್ಯಕ್ತಿಯು ಒಂದು ಜೀವಮಾನ ಕಾಲದಲ್ಲಿ ಇಷ್ಟು ಸತ್ವ ಮತ್ತು ಗಾತ್ರದ ಕೃತಿಗಳನ್ನು ಹೇಗೆ ರಚಿಸಿದರು ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಂದು ಸಾವಿರ ವರ್ಷಗಳಿಗೂ  ಹಿಂದೆಯೇ ಅದ್ಭುತವಾದ ಸಾಧನೆಗಳನ್ನು ಮಾಡಿದ ಇವರಿಗೆ ಸಾದರ ನಮನಗಳನ್ನು ಸಲ್ಲಿಸಿ ಮುಂದೆ ಸಾಗೋಣ. 

"ಧ್ವನಿ" ಸಿದ್ಧಾಂತ:

ಆನಂದವರ್ಧನನ "ಧ್ವನ್ಯಾಲೋಕ" ಒಂದು ಮೇರು ಕೃತಿ. ಅಭಿನವ ಗುಪ್ತನು ಈ ಕೃತಿಗೆ "ಧ್ವನ್ಯಾಲೋಕಲೋಚನ" ಎಂಬ ವಿವರವಾದ ವ್ಯಾಖ್ಯಾನವನ್ನು ರಚಿಸಿದ್ದಾನೆ. ಆನಂದವರ್ಧನ ಸೂಚಿಸುವಂತೆ ಕವಿಯೊಬ್ಬ ತನ್ನ ರಚನೆಯಿಂದ ಭಾವತರಂಗಗಳನ್ನು ಹೊರಸೂಸುತ್ತಾನೆ. ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ಕೇಳುವಾಗ ನಮ್ಮ ಸಾಧನವನ್ನು (ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಸೆಟ್) ಆ ಕೇಂದ್ರದಿಂದ ಬರುವ ತರಂಗಗಳಿಗೆ ಸರಿಯಾಗಿ ಹೊಂದಿಸಬೇಕು. ಇಲ್ಲದಿದ್ದರೆ ಸರಿಯಾದ ಪ್ರಸಾರ ಸಿಗುವುದಿಲ್ಲ. ಅಂತೆಯೇ ಯಾವುದೇ ಕೃತಿಯ ಓದುಗ ಅಥವಾ ಕೇಳುಗ (ಕೃತಿಯನ್ನು ಓದುವ ಅಥವಾ ಅದರ ವಾಚನ/ಗಾಯನ ಕೇಳುವ ವ್ಯಕ್ತಿ) ಆ ತರಂಗಗಳನ್ನು ಮುಟ್ಟದಿದ್ದರೆ ಅವನಿಗೆ ಅದರ ಪೂರ್ಣ ರಸಾನುಭವ  ಆಗುವುದಿಲ್ಲ. ಇದು ನಮ್ಮೆಲ್ಲರಿಗೂ ಅನುಭವದಿಂದ ತಿಳಿದ ಸತ್ಯ. 

ದೇಶ-ಕಾಲಗಳ ಪರಿಜ್ಞಾನ:

ಕವಿಯು ಸೃಷ್ಟಿಸಿದ ಭಾವ ತರಂಗಗಳಿಗೆ ತನ್ನನ್ನು ಹೊಂದಿಸಿಕೊಳ್ಳುವುದರ ಜೊತೆಗೆ ಓದುಗ/ಕೇಳುಗ ಆ ಕೃತಿ ರಚನೆಯ ದೇಶ ಮತ್ತು ಕಾಲಗಳ ವಿಷಯವನ್ನೂ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ಈ ಹಿನ್ನೆಲೆ ತಿಳಿಯದಿದ್ದಾಗ ಅಲ್ಪ ರಸಾನುಭವ ಆದರೂ ಪೂರ್ಣವಾದ ರಸಾಸ್ವಾದನೆ ಸಾಧ್ಯವಾಗದು. ನಮ್ಮದಲ್ಲದ ಭಾಷೆಯ (Foreign Language) ರಚನೆಗಳನ್ನು ಅವಲೋಕಿಸುವಾಗಲಂತೂ ಈ ದೇಶ ಮತ್ತು ಕಾಲಗಳ ಪ್ರಜ್ಞೆ ಇರಬೇಕಾದದ್ದು ಅತ್ಯಂತ ಅವಶ್ಯಕ. 

ದೇಶದ (ಭೌಗೋಲಿಕ) ಪರಿಜ್ಞಾನದ ಉದಾಹರಣೆಗೆ, ತಂದೆ ತಾಯಿಗಳನ್ನು ಕಾವಡಿಯಲ್ಲಿ ಕುಳ್ಳಿರಿಸಿ ಹೆಗಲ ಮೇಲೆ ಹೊತ್ತು ತೀರ್ಥ ಯಾತ್ರೆ ಮಾಡಿಸುವ  ಶ್ರವಣ ಕುಮಾರನ ಪರಂಪರೆ ನಮ್ಮದು. "ಉಬಾಸೂಟೇ" ಎನ್ನುವ ಒಂದು ಪದ್ದತಿ ಜಪಾನ್ ದೇಶದಲ್ಲಿ ಕೇಳಿ ಬರುತ್ತದೆ. ಇದರಲ್ಲಿ ವಯಸ್ಸಾದ ತಂದೆ-ತಾಯಿಯರನ್ನೋ ಅಥವಾ ಬಂಧುವನ್ನೋ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟದ ಅಥವಾ ಕಾಡಿನ ದುರ್ಗಮ ಪ್ರದೇಶದಲ್ಲಿ ಬಿಟ್ಟು ಬರುವ ಉಲ್ಲೇಖವಿದೆ. ಆ ಪರಿಸರದಲ್ಲಿ ಹಿರಿಯ ಜೀವಗಳ ನಿರ್ಯಾಣ ಆಗಲಿ ಎಂದು. ಮುಂದಿನ ತಲೆಮಾರಿನ ಯುವಕರು ಹೀಗೆ ಮಾಡಿದರೆ ಆ ಹಿರಿಯರು ಸಂತೋಷ ಪಡುತ್ತಿದ್ದರು ಎಂದೂ ಹೇಳುತ್ತಾರೆ. ತಾಯಿಯೊಬ್ಬಳು ತನ್ನನ್ನು ಹೀಗೆ ಹೊತ್ತುಕೊಂಡು ಹೋಗುವ ಮಗನಿಗೆ ಹಿಂತಿರುಗಿ ಹೋಗಲು ದಾರಿ ಗೊತ್ತಾಗಲಿ ಎಂದು ಎರಡೂ ಕೈಗಳಿಂದ ಗಿಡಗಳ ಕೊಂಬೆಗಳನ್ನು ಕಿತ್ತು ಹಾಕುತ್ತಾಳೆ. ಈ ರೀತಿಯ ಕವಿತೆ ಓದುವಾಗ ಉಬಾಸೂಟೇ ವಿಷಯ ಗೊತ್ತಿಲ್ಲದಿದ್ದರೆ ಹೇಗಾಗಬೇಡ? ಈ ರೀತಿ ಸಂಪ್ರದಾಯ ನಿಜವಾಗಿ ಇತ್ತೋ ಅಥವಾ ಇಲ್ಲವೋ, ಅದು ಸಾಧುವೋ ಅಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಎಂಥ ವಿಷಮ ಪರಿಸ್ಥಿತಿಯಲ್ಲೂ ಮಾತೃ ಹೃದಯ ಹೇಗೆ ಯೋಚಿಸಿತು ಎನ್ನುವುದು ಇಲ್ಲಿಯ ರಸ. ಆ ಪರಿಸರದ ಆಚಾರ-ವಿಚಾರಗಳ ತಿಳುವಳಿಕೆ ಇರಬೇಕು ಎನ್ನುವುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಉದಾಹರಣೆ. 

ಕಾಲದ ವಿಷಯದಲ್ಲೂ ಇದೆ ರೀತಿಯ ತಿಳುವಳಿಕೆ ಬೇಕಾಗುತ್ತದೆ. ಸತಿ ಸಾವಿತ್ರಿಯಂತೆ  ಯಮನ ಹಿಂದೆ ಹೋಗಿಯೂ ಗಂಡನನ್ನು ಉಳಿಸಿಕೊಳ್ಳುವ ಸಮಯ ಒಂದು ಇತ್ತು. ಸೀತೆಗಾಗಿ ಶ್ರೀರಾಮ ಪಟ್ಟ ಪಾಡಿನ ಕಥೆಯೂ ಗೊತ್ತು. ಆ ಕಾಲದ ಮಾನದಂಡವನ್ನು ವಿವಾಹದ ಸಮಯದಲ್ಲೇ ವಿಚ್ಛೇದನಕ್ಕೆ ದಿನ ನಿಗದಿಪಡಿಸುವ ಕಾಲಕ್ಕೆ ಉಪಯೋಗಿಸಲು ಬರುವುದಿಲ್ಲ. ರಸ ಆಸ್ವಾದನೆಯಲ್ಲಿ ದೇಶ-ಕಾಲಗಳ ಪರಿಜ್ಞಾನದ ಮಹತ್ವವನ್ನು ಸೂಚಿಸಲು ಮಾತ್ರ ಈ ಉದಾಹರಣೆ ಎಂದು ಮತ್ತೊಮ್ಮೆ ಹೇಳಬೇಕು. ಇಲ್ಲದಿದ್ದರೆ  ವಿಷಯಾಂತರವಾಗುವ ಪ್ರಬಲವಾದ ಸಾಧ್ಯತೆ ಉಂಟು! 

ಭಾಷಾಂತರವೋ, ಭಾವಾಂತರವೊ?

ಪರಭಾಷೆಗಳ ಕಾವ್ಯದ ವಿಷಯದಲ್ಲಿ ಯೋಚಿಸುವಾಗ ಆ ಭಾಷೆಗಳ ಪರಿಚಯವಿಲ್ಲದಿದ್ದರೆ ಭಾಷಾಂತರ ಕೃತಿಗಳನ್ನೇ ಆಸರೆಯಾಗಿ ಪಡೆಯಬೇಕಾಗುತ್ತದೆ. ಈ ಪ್ರಸಂಗಗಳಲ್ಲಿ ಭಾಷೆಯ ಜೊತೆಗೆ ಭಾಷಾಂತರದ ತೊಡಕೂ ಸೇರಿಕೊಳ್ಳುತ್ತದೆ. ಭಾಷಾಂತರಕಾರನಿಗೆ ಮೂಲ ಕೃತಿಯ ಭಾಷೆಯ ನೇರ ಪರಿಚಯವಿದ್ದಲ್ಲಿ ಸ್ವಲ್ಪ ವಾಸಿ. ಇಲ್ಲದಿದ್ದಲ್ಲಿ ಮೂಲದ ಭಾಷೆಗೂ ಮತ್ತು ನಾವು ಓದುವ ಭಾಷೆಗೂ ಮಧ್ಯ ಬೇರೊಂದು ಭಾಷೆ ಸೇರಿ ಪರಿಸ್ಥಿತಿ ಇನ್ನಷ್ಟು ಗೋಜಲಾಗುತ್ತದೆ. ಮೂಲ ಭಾಷೆಯ ಸೊಗಡಿನ  ಬದಲು ಮಧ್ಯದ ಭಾಷೆಯ ವಾಸನೆ ದೊಡ್ಡದಾಗುವ ಭೀತಿಯೂ ಉಂಟು. ನೇರವಾದ ಭಾಷಾಂತರವಾದರೂ ಭಾಷಾಂತರಕಾರನಿಗೆ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಇಲ್ಲದಿದ್ದರೆ ಮುಖ್ಯ ರಸಘಟ್ಟಗಳು ಸೋರಿಹೋಗಿ ಬರೀ ಸಿಪ್ಪೆ-ತೊಂಡುಗಳ ಪಾಕ ಸಿಗುವ ಸಾಧ್ಯತೆಯೂ ಇಲ್ಲದಿಲ್ಲ. ಎರಡೂ ಭಾಷೆಗಳ ಚೆನ್ನಾದ ಪರಿಚಯ ಇರುವ, ಸ್ವತಃ ಕವಿಯೂ ಆದ ಭಾಷಾಂತರಕಾರನು ಸಿಕ್ಕರೆ ಅದು ಓದುಗ/ಕೇಳುಗನ ಭಾಗ್ಯವೆಂದೇ ಹೇಳಬೇಕು. 

ಥಾಮಸ್ ಕ್ಯಾಂಬೆಲ್ ನ "ಲಾರ್ಡ್ ಅಲ್ಲಿನ್ಸ್  ಡಾಟರ್" ಕವನ: 

ಥಾಮಸ್ ಕ್ಯಾಂಬೆಲ್ಲ್  (Thomas Campbell) (1777-1844) ಒಬ್ಬ ಬಹು ಪ್ರತಿಭಾನ್ವಿತ ಸ್ಕಾಟ್ಲೆಂಡ್ ದೇಶದ ಕವಿ. ಈತನು ವಿಲಿಯಂ ವರ್ಡ್ಸವರ್ತ್ (William Wordsworth) ಮತ್ತು ಸ್ಯಾಮ್ಯುಯೆಲ್ ಟೇಲರ್ ಕೊಲೆರಿಜ್ (Samuel Taylor Coleridge) ಮಹಾಕವಿಗಳ ಸಮಕಾಲೀನ. ಸ್ಕಾಟ್ಲೆಂಡ್ ನ  (Scottish Lowlands) ಗ್ಲಾಸ್ಗೋ (Glasgow) ನಗರದಲ್ಲಿ ಹುಟ್ಟಿ ಬೆಳೆದವನು. ಈತನ ಅನೇಕ ಕೃತಿಗಲ್ಲಿ "The Ballad of Lord Ullin's Daughter" ಒಂದು ಪ್ರಸಿದ್ಧವಾದ ನೀಳ್ಗವನ. ಗ್ಲಾಸ್ಗೋ ನಗರದ ವಾಯುವ್ಯದಲ್ಲಿ (northwest) ಸುಮಾರು ೧೦೦ ಮೈಲುಗಳ ದೂರದಲ್ಲಿರುವ Isle of Mull ಪ್ರದೇಶಕ್ಕೆ ಭೇಟಿ ನೀಡಿದಾಗ ಪ್ರೇರಿತನಾಗಿ ಈ ಕೃತಿ ರಚಿಸಿದ್ದಾನೆ ಎಂದು ಹೇಳಲಾಗುತ್ತದೆ.

ಈ ಭೂಭಾಗದಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದ ಹಿನ್ನೀರು ಚಾಚಿಕೊಂಡು ಭೂಪ್ರದೇಶದಿಂದ ಸುತ್ತುವರಿದು ಅನೇಕ ಸರೋವರಗಳು ನಿರ್ಮಾಣವಾಗಿವೆ. Loch Gyle ಅಥವಾ Loch na Keal ಅಂತಹ ಒಂದು ಸರೋವರ. ಉಲ್ವ (Ulva) ಎನ್ನುವ ಭೂಭಾಗವನ್ನು ಉತ್ತರದ ಮುಲ್ ನಿಂದ (Gribun on Mull)  ಈ ಸರೋವರ ಬೇರ್ಪಡಿಸುತ್ತದೆ. ಈ ಕವನದಲ್ಲಿ ಬಣ್ಣಿಸಿರುವುದು ಇದೇ  ಪ್ರದೇಶವನ್ನು, 

ಕನ್ನಡದ ಕಣ್ವ ಎಂದು ಖ್ಯಾತರಾದ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಈ ಇಂಗ್ಲಿಷ್ ಕವನವನ್ನು "ಕಾರಿ ಹೆಗ್ಗಡೆಯ ಮಗಳು" ಎಂಬ ಹೆಸರಿಟ್ಟು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. 

 ಕೃತಿಯ ಹಿನ್ನೆಲೆ:

ಉಲ್ವ ಪ್ರದೇಶದ ಅಧಿಪತಿ ಅಥವಾ ಪಾಳೇಗಾರನ (Lord Ullin) ಚಲುವೆ ಮಗಳು ಸರೋವರದ ಉತ್ತರ ಭಾಗದ ದ್ವೀಪವೊಂದರ ಪಾಳೇಗಾರನ ತರುಣ ಮಗನನ್ನು ಪ್ರೇಮಿಸಿ ಮದುವೆಯಾಗಲು ಇಷ್ಟ ಪಡುತ್ತಾಳೆ. ಈ ಸಂಭಂಧ  ಹುಡುಗಿಯ ತಂದೆಗೆ ಇಷ್ಟವಾಗುವುದಿಲ್ಲ. ಪ್ರಿಯಕರನನ್ನು ಬಿಡಲಾಗದ ಯುವತಿ ಅವನ ಜೊತೆಯಲ್ಲಿ ಪಲಾಯನ ಮಾಡುತ್ತಾಳೆ. ಇದರಿಂದ ಕುಪಿತನಾದ ತಂದೆ ತನ್ನ ನೆಚ್ಚಿನ ರಾವುತರನ್ನು (ಕುದುರೆಯ ಮೇಲೆ ಕುಳಿತು ಯುದ್ಧ ಮಾಡುವ ಸೈನಿಕರು) ಅವರ ಹಿಂದೆ ಛೂ ಬಿಡುತ್ತಾನೆ. ಮಗಳ ಪ್ರಿಯಕರನನ್ನು ಕೊಂದು ಮಗಳನ್ನು ಹಿಂದೆ ಕರೆದುಕೊಂಡು ಬರುವಂತೆ ಆಜ್ಞಾಪಿಸುತ್ತಾನೆ. ಅವರ ಹಿಂದೆ ತಾನೂ ಹೊರಡುತ್ತಾನೆ ಕೂಡ. 

ಭೀತಿಯಿಂದ ಯುವ ಜೋಡಿ ಪಲಾಯನ ಮಾಡುತ್ತದೆ. ಕಣಿವೆಗಲ್ಲಿ ಕಣ್ಣಾಮುಚ್ಚಾಲೆಯಂತೆ ಮೂರು ದಿನ ಪಯಣಿಸಿದ ನಂತರ ಸರೋವರದ ದಡಕ್ಕೆ ಬರುತ್ತಾರೆ. ಚಂಡಮಾರುತದ ವಾತಾವರಣ. ಸರೋವರ ದಾಟಿ ಆ ದಡ ತಲುಪಿಬಿಟ್ಟರೆ ಯುವಕನ ಕಡೆಯ ಜನರಿಂದ ರಕ್ಷಣೆ ಸಿಗುತ್ತದೆ. ದಾಟದಿದ್ದರೆ ರಾವುತರ ಕೈಲಿ ಯುವಕನ ಸಾವು ಖಂಡಿತ. ಚಂಡಮಾರುತದ ಸಮಯದಲ್ಲಿ ಯಾರೂ ದೋಣಿ ಹಾಯಿಸಲು ತಯಾರಿಲ್ಲ. ಅಲ್ಲಿ ಇದ್ದ ಒಬ್ಬನೇ ಅಂಬಿಗನನ್ನು ಯುವಕ ಆ ದಡಕ್ಕೆ ಕರೆದೊಯ್ಯುವುದಕ್ಕೆ ಕೇಳುವುದರಿಂದ ಕವನ ಪ್ರಾರಂಭ ವಾಗುತ್ತದೆ. 

ತಂದೆ-ಮಗಳ ಸಂಭಂಧ, ವಿಷಮ ವಿವಾಹ, ಮನಸ್ಸುಗಳು ಕೊಡದಿದ್ದಾಗ ಕುಟುಂಬಗಳ ನಡುವೆ ಬರುವ ಗುದ್ದಾಟಗಳು, ಈ ಎಲ್ಲ ಗೋಜಲಿನ ನಡುವೆ ಆಗುವ ದುರಂತ - ಇದು ಈ ಕವನದ ವಸ್ತು. ಮಗಳ ಮೇಲಿನ ಅತಿಯಾದ ಪ್ರೀತಿಯೇ ಹೇಗೆ ಕೋಪಕ್ಕೆ ಕಾರಣವಾಗಿ ಕಡೆಗೆ ಆ ಪ್ರೀತಿಯ ಮಗಳ ಪ್ರಾಣಕ್ಕೇ  ಸಂಚಕಾರ ತಂದದ್ದು ವರ್ಣಿತವಾಗಿದೆ. ಕಡೆಯ ಹಂತದಲ್ಲಿ ಮಗಳ ಕಷ್ಟ ಕಂಡ ತಂದೆಯ ಕೋಪ ಕರುಣೆಯಾಗಿ ಪರಿವರ್ತಿತವಾಗುತ್ತದೆ. ಆದರೆ ಸಮಯ ಮಿಂಚಿ ದುರಂತದಲ್ಲಿ ಪರ್ಯವಸಾನ ಆಗುತ್ತದೆ. 

ತಂದೆ-ತಾಯಿಯರ ಇಷ್ಟಕ್ಕೆ ವಿರುದ್ಧವಾಗಿ ಮಕ್ಕಳು ವಿವಾಹ ಮಾಡಿಕೊಂಡಾಗ ಉಂಟಾಗುವ ಪರಿಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಯಾರು ಸರಿ, ಯಾರು ತಪ್ಪು ಅನ್ನುವ ಪ್ರಶ್ನೆಗಿಂತ ಸಮನ್ವಯವಿಲ್ಲದೆ ವಿರಸ ಮೂಡಿ ದುರಂತ ಎದುರಾಗುತ್ತದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದವರೇ ಅದನ್ನು ತಿಳಿಯಬಲ್ಲರು. 

ಕಾರಿ ಹೆಗ್ಗಡೆಯ ಮಗಳು:

ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿ ಎರಡೂ ಭಾಷೆಗಳನ್ನು ಶಿಷ್ಯರಿಗೆ ಪಾಠ ಹೇಳಿದ್ದಲ್ಲದೇ ಅನೇಕ ಘಟಾನುಘಟಿ ಸಾಹಿತಿಗಳನ್ನು ತಯಾರು ಮಾಡಿ ಕೊಟ್ಟ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಅನೇಕ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ಅವರ ಸಾಹಿತ್ಯ ಕೃಷಿ ಅಗಾಧವಾದದ್ದು. ಹಳಗನ್ನಡ ಕೃತಿಗಳನ್ನು ನಾಟಕಗಳಾಗಿ ರೂಪಾಂತರ ಮಾಡಿ ಎಲ್ಲರೂ ಅವುಗಳ ಸೊಗಸನ್ನು ಅರಿಯುವ ಅನುಕೂಲ ಮಾಡಿಕೊಟ್ಟವರು. ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಸಾಹಿತ್ಯ ರಚನೆಯ ಸಮಯವನ್ನು ಕನ್ನಡದ ಬೆಳವಣಿಗೆಗೆ ವಿನಿಯೋಗಿಸಿ ಅನೇಕ ಕವಿಗಳನ್ನೂ, ಲೇಖಕರನ್ನೂ ಗುರುತಿಸಿ ಕನ್ನಡಕ್ಕೆ ಕೊಟ್ಟವರು. 

"ಕಾರಿ ಹೆಗ್ಗಡೆಯ ಮಗಳು" ಕವನವನ್ನು ನೋಡಿದಾಗ ಇದು ಒಂದು ಇಂಗ್ಲಿಷ್ ಕವನದ ಭಾಷಾಂತರ ಎಂದು ಅನಿಸದು. ಮೂಲ ಕೃತಿಯನ್ನು ಪೂರ್ತಿ ಅರಗಿಸಿಕೊಂಡು ಹೊಸ ಕನ್ನಡ ಕವನಕ್ಕೆ ಜನ್ಮ ಕೊಟ್ಟಿದ್ದಾರೆ ಶ್ರೀಕಂಠಯ್ಯನವರು. 

ಶ್ರೀಯವರ ಕೈಯ್ಯಲ್ಲಿ ಲಾರ್ಡ್ ಅಲ್ಲಿನ್ ಕಾರಿ ಹೆಗ್ಗಡೆಯಾಗುತ್ತಾನೆ. ಸ್ಕಾಟ್ಲೆಂಡಿನ ಸಮುದ್ರ ಭಾಗ  ನಮ್ಮ ಕಾರವಾರದ  ಬಳಿಯ ಕಡಲಾಗುತ್ತದೆ. ಸ್ಕಾಟಿಷ್ ಹೈಲ್ಯಾಂಡ್ ಪಡುವದಿಬ್ಬ ಆಗುತ್ತದೆ. ಸಿಲ್ವರ್ ಪೌಂಡ್ ಕೇಳಿದ ಹೊನ್ನು ಆಗುತ್ತದೆ!

ಇಂಗ್ಲಿಷ್ ಕವನ ಮತ್ತು ಅದರ ಕನ್ನಡ ಭಾಷಾಂತರವನ್ನು ಒಟ್ಟಿಗೆ ನೋಡಲು ಅನುಕೂಲವಾಗುವಂತೆ ಎರಡರ ಲಿಂಕ್ ಕೆಳಗೆ ಕೊಟ್ಟಿದೆ. ಅದರ ಪ್ರಯೋಜನ ಪಡೆಯಬಹುದು. 

*****

ಈಗ ಕವಿತೆಗೆ ಬರೋಣ. 

ತರುಣಿಯೊಡನೆ ಓಡಿ  ಬಂದ ತರುಣ ಅಂಬಿಗನಿಗೆ ಹೇಳುವ ಸಾಲುಗಳನ್ನು  ನಮ್ಮ ಭಾಷೆಯ ಕನ್ನಡಿಯಲ್ಲಿ ನೋಡಬಹುದು:

ಓಡಿ ಬಂದೆವು ಮೂರು ದಿವಸ 
ಜಾಡ ಹಿಡಿದು ಹಿಂದೆ ಬಂದರು 
ನಮ್ಮನೀ  ಕಣಿವೆಯಲ್ಲಿ ಕಂಡರೆ 
ಚಿಮ್ಮಿ ಹರಿವುದು ನೆತ್ತರು 

ಎಲ್ಲ ಪದಗಳೂ ಪೂರ್ಣವಾಗಿ ನಮ್ಮ ಪರಿಸರದವೇ. ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳ ಬಳಿಕ ಕನ್ನಡ ನವೋದಯದ ಹರಿಕಾರರಲ್ಲಿ ಒಬ್ಬರಾದ ಶ್ರೀಯವರ ಪದ ಲಾಲಿತ್ಯವನ್ನು ಕಾಣಬಹುದು. 

ಕೇವಲ ನಾಲ್ಕೇ ಸಾಲುಗಲ್ಲಿ ಆ ಅಂಬಿಗನ ಪಾತ್ರವನ್ನು ಕವಿಗಳಿಬ್ಬರೂ ಚಿತ್ರಿಸಿದ್ದಾರೆ:

ಆಗ ಅಂಜದೆ ತೊರೆಯನೆಂದನು 
ಬೇಗ ಜೀಯಾ ಒಡ ತರುವೆನು 
ಸುಡಲಿ ಹೊನ್ನು ಬೆಡಗಿ ನಿನ್ನೀ 
ಮಡದಿಗೋಸುಗ ಬರುವೆನು 

ಒಂದು ಬೆಳ್ಳಿಯ ನಾಣ್ಯಕ್ಕೋ ಅಥವಾ ದೊಡ್ಡ ಮೊತ್ತದ ಹಣಕ್ಕೋ ಯಾರೂ ತಮ್ಮ ಜೀವವನ್ನೇ ಪಣಕ್ಕಿಡುವುದಿಲ್ಲ. ಈ ಚಂಡಮಾರುತದ ಸಮಯದಲ್ಲಿ ದೋಣಿ ನಡೆಸುವುದೆಂದರೆ ಸಾವನ್ನು ಆಹ್ವಾನಿಸಿದಂತೆಯೇ. ದೋಣಿ ನಡೆಸದಿದ್ದರೆ ತರುಣನ ಜೀವ ಹೋಗುತ್ತದೆ. ದೋಣಿ ನಡೆಸಿದರೆ ಮೂವರ ಜೀವವೂ ಹೋಗಬಹುದು. ತರುಣ ಸತ್ತರೆ ಯುವತಿ ಬದುಕಿಯೂ ಸತ್ತಂತೆ. ಆದ ಕಾರಣ ಇಬ್ಬರನ್ನೂ ಉಳಿಸುವ ಸಲುವಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದೋಣಿ ತರುತ್ತೇನೆ ಎನ್ನುತ್ತಾನೆ. ದುಡ್ಡು ಮುಖ್ಯವಲ್ಲ. ಬಾಳಿಬದುಕಬೇಕಾದ ಈ ಹುಡುಗಿಯ ಬದುಕು ಮುಖ್ಯ ಎನ್ನುವ ಧ್ವನಿ ಚೆನ್ನಾಗಿ ಸೂಚಿತವಾಗಿದೆ. 

ತೂರು ಗಾಳಿಗೆ ಕಡಲು ಕುದಿಯಿತು 
ನೀರ ದೆವ್ವಗಳರಚಿಕೊಂಡವು 
ಹೆಪ್ಪುಮೋಡದ ಹುಬ್ಬುಗಂಟಿಗೆ 
ಕಪ್ಪಗಾದವು ಮುಖಗಳು 

ನೀರು ಕುದಿಯಲು ಬೆಂಕಿ ಬೇಕು. ಆದರಿಲ್ಲಿ ಬಿರುಗಾಳಿಗೆ ಇಡೀ ಕಡಲಿನ ನೀರು ಕುದಿಯಿತು. (ಈಗ ವಿಡಿಯೋ, ಟೆಲಿವಿಷನ್ ಸಹಾಯದಿಂದ ಚಂಡಮಾರುತದ ಪ್ರಭಾವ ನಾವು ನೋಡಿ ಬಲ್ಲವು). ಮೇಲೆ ಕರಿ ಮೋಡ ತುಂಬಿದ ಮುಗಿಲು. ಮತ್ತೆ ಅದರ ಜೊತೆ ಹಿಂದಿರುವ ವಿಪತ್ತಿನ ದಿಗಿಲು. ಮುಖಗಳು ಕಪ್ಪಾಗುವುದರಲ್ಲಿ ಏನು ವಿಶೇಷ?

ಮೋಡದ ಕಗ್ಗತ್ತಲ ಜೊತೆ ಸೂರ್ಯಾಸ್ತದ ಸಂಜೆಯ ಕತ್ತಲೂ ಸೇರಿತು. ರಾವುತರು ಹತ್ತಿರ ಬರುವ ಸದ್ದೂ ಸನಿಹ ಬಂದಿತು. ಈಗ ತರುಣಿ ಹೇಳುತ್ತಾಳೆ:

ಏಳು, ಬೇಗೇಳಣ್ಣ ಎಂದಳು 
ಹೂಳಿಕೊಳಲಿ ನನ್ನ ಕಡಲು 
ಮುಳಿದ ಮುಗಿಲ ತಡೆಯಬಲ್ಲೆ
ಮುಳಿದ ತಂದೆಯ ತಡೆಯೆನು 

ಮನುಷ್ಯಮಾತ್ರದವರಿಗೆ ಚಂಡಮಾರುತದ ಮೋಡಗಳನ್ನು ತಡೆಯುವುದು ಸಾಧ್ಯವೇ ಇಲ್ಲ. ಆದರೆ ಈಗ ನಾನು ಅದರ ಪ್ರಯತ್ನವಾದರೂ ಮಾಡುವೆ. ಆದರೆ ಅತ್ಯಂತ ಕುಪಿತನಾಗಿರುವ ನನ್ನ ತಂದೆಯನ್ನು ಎದುರಿಸುವುದು ಅದಕ್ಕಿಂತಲೂ ಕಷ್ಟ. ಅದಕ್ಕಿಂತಲೂ ಸಮುದ್ರದ ಸಾವೇ ವಾಸಿ ಎನ್ನುವ ಧ್ವನಿ ಇಲ್ಲಿದೆ. ಇದನ್ನೇ ಮುಂದೆ "ಆಳ ಕೈಯಲಿ ತಾಳಬಹುದೇ ಏಳು ಬೀಳಿನ ಕಡಲದು" ಎಂದು ಸೂಚಿಸುತ್ತಾರೆ. 

ಮುಳುಗುತ್ತಿರುವ ದೋಣಿಯಲ್ಲಿರುವ ಮಗಳನ್ನು ಈಗ ತಂದೆ ನೋಡುತ್ತಾನೆ. ರುದ್ರ ಭೀಕರ ವಾತಾವರಣದಲ್ಲಿ ಕೋಪ ಮಾಯವಾಗಿ ಅಳುತ್ತಾನೆ:

ಅಲೆಗಳಬ್ಬರದಲಿ ಮೀಟಿ 
ಮುಳುಗುತಿಹರು ಏಳುತಿಹರು 
ಕರೆಗೆ ಬಂದ  ಕಾರಿಹೆಗ್ಗಡೆ 
ಕರಗಿ ಮುಳಿಸು ಅತ್ತನು. 

ಸರೋವರದ ತೀರಕ್ಕೆ ಕರೆ ಎನ್ನುವ ಪದವನ್ನು ಉಪಯೋಗಿಸಿದ್ದಾರೆ. ("ದೋಣಿಯೊಳಗೆ ನೀನು, ಕರೆಯಮೇಲೆ ನಾನು" ಎನ್ನುವ ಉಯ್ಯಾಲೆ ಚಲನ ಚಿತ್ರದ ಹಾಡು ನೆನೆಯಬಹುದು.) ಅವನ ಮುಳಿಸು (ಕೋಪ) ಕರಗಿತು. ದುಃಖದಿಂದ ಅತ್ತ. ಹಳೆಯ ಮನಸ್ತಾಪ ಎಷ್ಟು ಇದ್ದರೇನು? ಎದುರಿನ ದೃಶ್ಯ ಅವನ ತಂದೆಯತನವನ್ನು ಬಡಿದೆಬ್ಬಿಸಿತು:

ತೊಂಡು  ತೆರೆಗಳ ಮುಸುಕಿನಲ್ಲಿ 
ಕಂಡು ಮಗಳ ಕರಗಿ ಹೋದ 
ಒಂದು ಕೈ ನೀಡಿದಳು ನೆರವಿಗೆ 
ಒಂದು ತಬ್ಬಿತು ನಲ್ಲನ 

ಯಾರ ಯಾವ ಯತ್ನವೂ ಇಲ್ಲದೆ ಅವನು ಮಗಳ ಕಂಡ ದೃಶ್ಯ ಕ್ಷಣಾರ್ಧದಲ್ಲಿ ಅವನನ್ನು ಕರಗಿಸಿತು. ಅವಳಾದರೂ ಆಧಾರಕ್ಕೆ ಒಂದು ಕೈಯ್ಯಲ್ಲಿ ಪ್ರಿಯಕರನನ್ನು ಹಿಡಿದಳು. ಇನ್ನೊಂದನ್ನು ಸಹಾಯಹಸ್ತಕ್ಕಾಗಿ  ಚಾಚಿದಳು. ಆದರೆ ಆ ಕೈ ಹಿಡಿಯಬೇಕಾದ ಅಪ್ಪ ದಡದಾಚೆ ಕತ್ತಿ ಹಿಡಿದು ನಿಂತಿದ್ದಾನೆ. 

ಆದರೆ ಅವನು ಈಗ ಕೂಗುತ್ತಾನೆ:

ಮರಳು ಮಗಳೇ, ಮರಳು ಎಂದನು 
ಮೊರೆಯುವ ಕಾಯಲ ಗಂಟಲಿಂದ 
ಮರೆತೆ, ಒಪ್ಪಿದೆ ನಿನ್ನ ನಲ್ಲನ 
ಮರಳು ಕಂದಾ, ಎಂದನು 

"ಆದದ್ದಾಯಿತು, ಹಿಂದೆ ಬಾ. ನಿನ್ನ ಪ್ರಿಯಕರನನ್ನೂ  ಕರೆ ತಾ. ನಾನು ಒಪ್ಪಿದ್ದೇನೆ" ಎಂದು ಕೂಗಿದ. ಅವನು ಕೂಗಿದ್ದು ಇವಳಿಗೆ ಕೇಳಿಸುವಹಾಗಿಲ್ಲ. ಕೇಳಿಸಿದರೂ ಅವಳು ಬರುವಹಾಗಿಲ್ಲ. ಕ್ಷಣದ ಕೋಪ ಜೀವನಪೂರ್ತಿ ತಾಪ. ಅವಳಿಗೆ ಸಾವು. ಇವನಿಗೆ  ಮರೆಯಲಾಗದ ನೋವು. ಅವಳು ಅಳಿದಳು. ಇವನು ಉಳಿದೂ ಆಳಿದನು.

ಮರಳಬಹುದೇ? ಹೋಗಬಹುದೇ?
ಕರೆಯ ತೆರೆಯಪ್ಪಳಿಸಿ ಹೊಯ್ದು 
ಹೊರಳಿ ಹೋದವು ಮಗಳ ಮೇಲೆ
ಕೊರಗಿನಲಿ  ಅವನುಳಿದನು 

ಮನುಷ್ಯರಲ್ಲಿ ಅನೇಕ ವಿಧಗಳು ಉಂಟು. ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆಯಾಗಿ ವಿಭಾಗಿಸಬಹುದು. ಆದರೆ ಸಾಹಿತ್ಯ ರಸಾಸ್ವಾದನೆಯ ಸಂದರ್ಭದಲ್ಲಿ ಕೇವಲ ಎರಡು ವಿಧಗಳು; ಬುದ್ಧಿಜೀವಿಗಳು ಮತ್ತು ಭಾವಜೀವಿಗಳು. ಬುದ್ಧಿಜೇವಿಗಳಿಗೆ ಈ ಕವಿತೆಯ ವಿಶ್ಲೇಷಣೆ ಯಾವ ಪ್ರಭಾವನ್ನೂ ಬೀರದು. ಆದರೆ ಭಾವಜೀವಿಗಳ ಮೇಲೆ ಈ ಜೀವನಾನುಭವದ ಪ್ರಭಾವ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ.

*****

ಚಾರ್ಲಿ ಚಾಪ್ಲಿನ್ ಬಗ್ಗೆ ಒಂದು ಕಥೆ ಹೇಳುತ್ತಾರೆ. ಒಂದು ಕಡೆ ಚಾರ್ಲಿ ಚಾಪ್ಲಿನ್ ಅನುಕರಣೆಯ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದರಂತೆ. ಅನೇಕರು ಸ್ಪರ್ಧಿಸಿದ್ದರು. ನೋಡುವ ಕುತೂಹಲದಿಂದ ಸ್ವತಃ ಚಾರ್ಲಿ ಚಾಪ್ಲಿನ್ ಸಹ ಹೋದ. ಯಾರಿಗೂ ಗೊತ್ತಾಗದಂತೆ ಅವನೂ ಸ್ಪರ್ಧಿಗಳ ಗುಂಪಿನಲ್ಲಿ ಸೇರಿ ಭಾಗವಹಿಸಿದ. 

ಸ್ಪರ್ಧೆ ಮುಗಿದ ನಂತರ ತೀರ್ಪು ಬಂತು. ಚಾರ್ಲಿ ಚಾಪ್ಲಿನ್ ಗೆ ಎರಡನೆಯ ಬಹುಮಾನ ಬಂದಿತ್ತು!

ಶ್ರೀಯವರಿಗೆ ಮೊದಲ ಬಹುಮಾನ ಬಂದು ಕ್ಯಾಂಬೆಲ್ಲ್ ನಿಗೆ ಎರಡನೇ ಬಹುಮಾನ ಸಿಕ್ಕರೆ ನಾವು ಆಶ್ಚರ್ಯ ಪಡಬೇಕಾಗಿಲ್ಲ. 
*****

Click on the links below for the full text of the poems in Kannada and English:


Friday, October 6, 2023

ಶ್ರೀ ಸುಧಾಮನ ಹಾಡು - ಹರಪನಹಳ್ಳಿ ಭೀಮವ್ವ

ವಿಶಾಲವಾದ ಸಾಹಿತ್ಯದಲ್ಲಿ ಭಕ್ತಿ ಸಾಹಿತ್ಯಕ್ಕೆ ಒಂದು ವಿಶೇಷ ಸ್ಥಾನವಿದೆ. ಇದು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ನೋಡಬಹುದಾದ ವಿಷಯ. ಭಕ್ತಿ ಸಾಹಿತ್ಯಕ್ಕೆ ಭಾಷೆಯ ಹಂಗಿಲ್ಲ. ಭಾಷೆ ಉಪಯೋಗಿಸುವ ಜನರ ಭಾವನೆಗಳಂತೆ ತಕ್ಕಂತೆ ಈ ಸಾಹಿತ್ಯ ಹರಡಿಕೊಂಡಿದೆ. ದೈವದ ರೂಪ, ಆಕಾರ, ನಂಬಿಕೆ ಬೇರೆ ಬೇರೆ ಇರಬಹುದು. ಆದರೆ ಈ ಸಾಹಿತ್ಯದ ಮೂಲ ಸ್ರೋತ ಭಕ್ತಿಯೇ. "ಅವರವರ ಭಾವಕ್ಕೆ ಅವರವರ ಭಕುತಿಗೆ" ಎನ್ನುವಂತೆ ಆಯಾ ದೇಶ ಮತ್ತು ಭಾಷೆಗಳಿಗೆ ತಕ್ಕಂತೆ, ಸಾಹಿತ್ಯದ ಜೊತೆಯಾಗಿ ಸಂಗೀತವೂ ಸೇರಿ ಈ ಸಾಹಿತ್ಯ ಪ್ರಕಾರ ರೂಪುಗೊಂಡಿದೆ. 

ನಮ್ಮ ಭಾರತ ದೇಶದಲ್ಲಂತೂ ಭಕ್ತಿ ಸಾಹಿತ್ಯ ವಿಪುಲವಾಗಿ ಬೆಳೆದಿದೆ ಎಂದು ಧಾರಾಳವಾಗಿ ಹೇಳಬಹುದು. ದೇಶ ಸಂಚಾರ ಮಾಡಿ, ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಧನ್ಯತೆ ಹೊಂದುವ ಜನರಾಶಿ ನಿಸ್ಸಂಕೋಚವಾಗಿ ಆಯಾ ಸ್ಥಳಗಳ ಸಂಕೀರ್ತನೆಗಳಲ್ಲಿ ಭಾಗಿಯಾಗುವುದು ಸರ್ವೇಸಾಮಾನ್ಯ. ಸಂಗೀತಕ್ಕೆ ಭಾಷೆಯಿಲ್ಲ. ಭಕ್ತಿಗಂತೂ ದೇಶ, ಕಾಲ, ಭಾಷೆ, ಸಂಗೀತಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಉಂಟು. ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ , ಅದರಲ್ಲೂ ಧಾರ್ಮಿಕ ಹಿನ್ನೆಲೆ ಇರುವ ಕೂಡುಹಗಳಲ್ಲಿ, ಭಕ್ತಿಗೀತೆಗಳು ವಿಜೃಂಭಿಸುತ್ತವೆ. ದೇಶದ ಹೆಸರಾಂತ ವಿದ್ವಾಂಸರು ಅನೇಕ ಭಾಷೆಗಳ ಗೀತೆಗಳನ್ನು, ಕೀರ್ತನೆಗಳನ್ನು, ಅಭಂಗಗಳನ್ನು ಒಂದೇ ಕಾರ್ಯಕ್ರಮದಲ್ಲಿ ರಸಿಕರಿಗೆ ಉಣಬಡಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಭಕ್ತಿ ಸಾಹಿತ್ಯದಲ್ಲಿ ಭಕ್ತರ ಕಥೆಗಳನ್ನು ತಿಳಿಸುವ ದೀರ್ಘ ಕವನಗಳಿಗೆ ಒಂದು ವಿಶಿಷ್ಟ ಸ್ಥಾನ ಉಂಟು. ವಿಶೇಷವಾಗಿ ಇವುಗಳಲ್ಲಿರುವ ಗೇಯ (ಹಾಡಬಹುದಾದ) ಗುಣಗಳಿಂದ, ಕೆಲವು ವರ್ಷಗಳ ಹಿಂದಿನವರೆಗೂ ಹೆಣ್ಣು ಮಕ್ಕಳು ತಮ್ಮ ಬೆಳಗಿನ ನಿತ್ಯ ಕರ್ಮಗಳ ಸಮಯದಲ್ಲಿ ಹಾಡುತ್ತಾ ಕೆಲಸ ಮಾಡುವ ಪದ್ಧತಿ ಇತ್ತು. ಈಚೆಗಿನ ಜೀವನ ಕ್ರಮದ ಬದಲಾವಣೆಯಿಂದ ಈ ಅಭ್ಯಾಸ ತಪ್ಪಿ ಹೋಗಿದೆ. ಧ್ರುವ ಚರಿತ್ರೆ, ಪ್ರಹ್ಲಾದ ಚರಿತ್ರೆ, ಗಜೇಂದ್ರ ಮೋಕ್ಷ, ದ್ರೌಪದಿ ಮಾನಸಂರಕ್ಷಣೆ ಮುಂತಾದವು ಇಂತಹ "ಖಂಡ ಕಾವ್ಯ"ಗಳಲ್ಲಿ ಪ್ರಮುಖವಾದವು. ಸುಧಾಮ ಚರಿತ್ರೆಯೂ ಈ ಪಟ್ಟಿಯಲ್ಲಿ ಸೇರಿದ ಒಂದು ದೀರ್ಘ ಕವನ. 

ಕನ್ನಡ ಸಾಹಿತ್ಯದಲ್ಲಿ ಈ ಸುಧಾಮ ಚರಿತ್ರೆಯ ಹಲವು ರೂಪಗಳು ಪ್ರಚಲಿತವಿವೆ. ಇವುಗಳಲ್ಲಿ ಅತಿ ಮುಖ್ಯವಾದವು ಶ್ರೀ ಪುರಂದರ ದಾಸರ ಮತ್ತು ಹರಪನಹಳ್ಳಿ ಭೀಮವ್ವನ ರಚನೆಗಳು. ಪುರಂದರದಾಸರ ಕೃತಿ ಸುಮಾರು ಹತ್ತು ನಿಮಿಷಗಳ ಕಾಲದಲ್ಲಿ ಹಾಡಬಹುದಾದ ರಚನೆ. ಹರಪನಹಳ್ಳಿ ಭೀಮವ್ವನ ಕೃತಿ ಸ್ವಲ್ಪ ದೊಡ್ಡದು. ಇದನ್ನು ಹಾಡಲು ಸುಮಾರು ಮೂವತ್ತು ನಿಮಿಷಗಳ ಸಮಯ ಬೇಕು. ಭೀಮವ್ವನ ಕೃತಿ ಹೆಚ್ಚೂ ಕಡಿಮೆ ಪುರಂದರದಾಸರ ಕೃತಿಯ ನೆರಳಿನಲ್ಲೇ ಸಾಗುತ್ತದೆ. ಆದರೆ ಭೀಮವ್ವನ ಕೃತಿಯಲ್ಲಿ ಅನೇಕ ವಿಶೇಷ ಅಂಶಗಳನ್ನು ಕಾಣಬಹುದು. ಅವುಗಳ ಮೇಲೆ ಸ್ವಲ್ಪ ಗಮನ ಹರಿಸುವ ವಿಚಾರವನ್ನು ಇಲ್ಲಿ ಮಾಡಲಾಗಿದೆ. 

ಹರಪನಹಳ್ಳಿ ಭೀಮವ್ವನ ಜೀವನ 

ಮೈಸೂರು ವಿಶ್ವವಿದ್ಯಾನಿಲಯವು ೧೯೮೪ರಲ್ಲಿ ಡಾ. ಟಿ ಏನ್ ನಾಗರತ್ನ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಪುಸ್ತಕದಿಂದ ಭೀಮವ್ವನ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಭೀಮವ್ವ (೧೮೨೩-೧೯೦೨) ತುಂಗಭದ್ರಾ ನದಿಯ ಸುತ್ತಮುತ್ತ ಜೀವಿಸಿದ್ದಳು. ಹೊಸಪೇಟೆಯ ಪರಿಸರದಲ್ಲಿ ಜೀವಿಸಿದ್ದರ ಪರಿಣಾಮ ಅಲ್ಲಿನ ಭಕ್ತಿ ಸಾಹಿತ್ಯದ ಪ್ರಭಾವವನ್ನು ಆಕೆಯ ಕೃತಿಗಳ ಮೇಲೆ ಕಾಣಬಹುದು. ಆಕೆಗೆ ಮದುವೆಯಾದಾಗ ಕೇವಲ ೧೧ ವರ್ಷ ವಯಸ್ಸು. ೪೫ ವಯಸ್ಸಿನ ಮೂರು ಬಾರಿ ವಿಧುರನಾದ ವ್ಯಕ್ತಿಯ ನಾಲ್ಕನೇ ಹೆಂಡತಿಯಾಗಿ, ಎರಡು ಮಕ್ಕಳ ತಾಯಿ ಆದಳು. ೩೬ನೆಯ ವಯಸ್ಸಿನಲ್ಲಿ ವಿಧವೆಯಾಗಿ ಆಗಿನ ಸಮಾಜದ ಪದ್ಧತಿಯಂತೆ ತಲೆ ಬೋಳಿಸಿ ಮಡಿ  ಹೆಂಗಸು ಮಾಡಿದರು. ಮುಂದಿನ ೪೩ ವರ್ಷಗಳು ತಣ್ಣೀರು  ಸ್ನಾನ, ಒಂದು ಹೊತ್ತಿನ ಊಟ, ಪರರ ಸೇವೆಯಲ್ಲಿ ಜೀವನ ಸವೆಸಿದಳು. ತನ್ನ ವೈಯ್ಯುಕ್ತಿಕ ಬದುಕು ಹೀಗೆ ನಡೆದರೂ ೧೪೫ ಕೃತಿಗಳು ರಚನೆ ಮಾಡಿದಳು. ಭೀಮವ್ವನ ರಚನೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಬಹುದಾದರೂ ಲಬ್ಧವಿಲ್ಲ. ಎರಡೇ ಸಾಲುಗಳ  ಕೃತಿಯಿಂದ ೧೯೩ ಪದ್ಯಗಳ ಸುಧಾಮನ ಹಾಡಿನವರೆಗೆ ರಚನೆ ಮಾಡಿದ್ದಾಳೆ. 

'ಭೀಮೇಶ ಕೃಷ್ಣ" ಎನ್ನುವ ಅಂಕಿತದಿಂದ ಅವಳ ಕೃತಿಗಳು ಗುರುತಿಸಲ್ಪಡುತ್ತವೆ. ವಿದ್ಯಾಭ್ಯಾಸದ ಅವಕಾಶವಿಲ್ಲದ, ಬದುಕಿನಲ್ಲಿ ಬರಿ ಕಷ್ಟಗಳನ್ನೇ ಕಂಡ ಜೀವನ ಆದರೂ ತುಂಬು ಉತ್ಸಾಹದ ಕಾರಂಜಿಗಳನ್ನು ಅವಳ ಕೃತಿಗಲ್ಲಿ ಕಾಣಬಹುದು. ಸುಧಾಮನ ಹಾಡು ಅವಳ ದೊಡ್ಡ ಕೃತಿ. ಅದರಲ್ಲಿರುವ ಕಾವ್ಯ ಗುಣಗಳನ್ನು ನೋಡಿದರೆ ಸರಿಯಾದ ಪರಿಸರ ಸಿಕ್ಕಿದ್ದರೆ ಅವಳು ಎಂತಹ  ಕವಯಿತ್ರಿ ಆಗಬಹುದಿತ್ತು ಎಂದು ಸುಳಿವು ಸಿಗುತ್ತದೆ; ವಿಷಾದವೂ ಆಗುತ್ತದೆ. 

ಸುಧಾಮನ ಹಾಡಿನ ವಿಶೇಷಗಳು 

ಈ ಹಾಡಿನ ಉದ್ದಕ್ಕೂ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ಸೊಗಸಾದ ಸರಮಾಲೆ ಕಾಣಸಿಗುತ್ತದೆ. ವ್ಯಂಜನಾರ್ಥಗಳು ಈ ಪುಟ್ಟ ಕೃತಿಯಲ್ಲೂ ಎದ್ದು ಕಾಣುತ್ತವೆ. (ಈಗಿನ ಕನ್ನಡ ಪ್ರಯೋಗದಲ್ಲಿ ವ್ಯಂಗ್ಯ ಅನ್ನುವ ಪದಕ್ಕೆ ಒಂದು ರೀತಿಯ ಸೊಟ್ಟ ಮಾತು ಅಥವಾ ಹೀಯಾಳಿಸುವ ಭಾಷೆ ಅನ್ನುವ ಅರ್ಥ ಇದೆ. ಆದರೆ ವಾಸ್ತವವಾಗಿ ವ್ಯಂಗ್ಯಾರ್ಥ ಅಂದರೆ ವಿಶೇಷವಾದ ಅರ್ಥ ಎಂದು ತಿಳಿಯಬೇಕು. ಕೇವಲ ಪದಗಳು ಹೇಳುವುದಕ್ಕಿಂತ ಹೆಚ್ಚಿನ ಅರ್ಥ ವ್ಯಂಗ್ಯಾರ್ಥ ಸೂಚಕ). ಇದಕ್ಕೆ ಸುಧಾಮನ ಹಾಡಿನ ಒಂದು ಉದಾಹರಣೆ ನೋಡಬಹುದು:

"ಲಕ್ಕುಮೇಷನ ದರ್ಶನಕ್ಕೆ ಹೋಗಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತ೦ದು ಕೊಟ್ಟಳು 

ಅದನ್ನು ಗ೦ಟು ಕಟ್ಟಿಕೊ೦ಡು ಬಗಲೊಳಗಿಟ್ಟುಕೊ೦ಡು ನಗರಧರನ ನಗರಕ್ಕಾಗಿ ಬರುತಲಿದ್ದನು" 


ಕೃಷ್ಣನನ್ನು ನೋಡಹೊರಡುವಾಗ, ದೊಡ್ಡವರನ್ನು ನೋಡಲು ಹೋಗುವಾಗ ಬರಿಗೈಲಿ ಹೋಗಬಾರದು ಅನ್ನುವುದು ಪದ್ದತಿ, ಅದಕ್ಕೆ ಏನಾದರೂ ನಜರು ಕೊಡು ಎಂದು ಹೆಂಡತಿಯನ್ನು ಕೇಳುತ್ತಾನೆ ಸುದಾಮ. (ನಜರು ಉರ್ದು ಭಾಷೆಯ ಪದ. ಆದರೆ ಉತ್ತರ ಕರ್ನಾಟಕದಲ್ಲಿ ಇಂತಹ ಅನೇಕ ಪದಗಳು ಕನ್ನಡದಲ್ಲಿ ಸೇರಿಹೋಗಿವೆ) ಮನೆಯಲ್ಲಿ ಏನೂ ಇಲ್ಲ. ಅವಳು ಯಾರಲ್ಲೋ ಬೇಡಿ ಮೂರು ಹಿಡಿ ಅವಲಕ್ಕಿ ತಂದು ಕೊಡುತ್ತಾಳೆ.  ಅದನ್ನೇ ಗಂಟು ಕಟ್ಟಿ ಹೆಗಲ ಮೇಲೆ ಹೊತ್ತು ಹೊರಡುತ್ತಾನೆ. ನೋಡಹೋಗುವುದು ಯಾರನ್ನು? ಭೀಮವ್ವ ಉಪಯೋಗಿಸಿದ ಪದ "ನಗಧರ" ಎಂದು. ಕೃಷ್ಣನ ಅನೇಕ ಹೆಸರುಗಳಲ್ಲಿ ಯಾವುದಾದರೂ ಬಳಸಬಹುದಿತ್ತು. ನಗ ಅಂದರೆ ಬೆಟ್ಟ ಅಥವಾ ಪರ್ವತ. ಕೃಷ್ಣ ಗೋವರ್ಧನ ಗಿರಿ ಹೊತ್ತವನು. ಜೊತೆಗೆ ಲಕ್ಕುಮೇಷ. ಸಕಲ ಐಶ್ವರ್ಯ ಕೊಡುವ ಲಕ್ಷ್ಮೀದೇವಿಯ ಗಂಡ. ತಿರಿದು ತಂದ, ಕಡಲೆ, ಒಗ್ಗರಣೆ ಇತ್ಯಾದಿ ಏನೂ ಇಲ್ಲದ ಒಣ ಅವಲಕ್ಕಿ. ಅದೂ ಕೇವಲ ಮೂರು ಹಿಡಿ. ಹೆಗಲ ಮೇಲೆ ಇಂತಹ ಅವಲಕ್ಕಿ. ಅವನಾದರೋ ಪರ್ವತವನ್ನೇ ಹೊತ್ತ ಲಕ್ಷ್ಮೀಪತಿ. ಈ ವ್ಯಂಜಕಾರ್ಥವನ್ನು ಸೊಗಸಾಗಿ ಮೇಲಿನ ಎರಡು ಸಾಲುಗಲ್ಲಿ ಕೊಡುತ್ತಾಳೆ ಭೀಮವ್ವ. 


ಮೊದಲಿಗೆ ಗಣೇಶ ಮತ್ತು ಸರಸ್ವತಿಯನ್ನು ನೆನೆಯುತ್ತಾಳೆ. "ಸರ್ಪಭೂಷಣ ಸುತ" ಮತ್ತು "ಅಜನ ಸತಿ". ಸುದಾಮ ನಾನು ಬಡವ, ನನಗಾರೂ ನೆಂಟರಿಷ್ಟರು ಇಲ್ಲ ಅನ್ನುತ್ತಾನೆ. ಆದರೆ "ಮಾ-ಧವ" ಇದ್ದಾನೆ. ಮಾ ಅಂದರೆ ಲಕ್ಷ್ಮೀದೇವಿ. ನಾನು ಬಡವನಾದರೂ ನನ್ನೊಡನೆ ಸಕಲ ಸಂಪತ್ತು ಕೊಡುವ ಲಕ್ಷ್ಮೀಪತಿ ಇದ್ದಾನೆ! 


ಭೀಮವ್ವನ ಈ ಹಾಡಿನ ಮುಖ್ಯ ರಸ "ಕರುಣ ರಸ". ಅದೇ ಭಕ್ತಿರಸವಾಗಿ ಹರಿದು ಬಂದಿದೆ. ಆದರೆ ಇದರ ಜೊತೆಯಾಗಿ ಉದ್ದಕ್ಕೂ ಶೃಂಗಾರ ಮತ್ತು ಹಾಸ್ಯ ರಸಗಳನ್ನು ಉಣಬಡಿಸುತ್ತಾಳೆ. ಕೃಷ್ಣನ ಅಷ್ಟ ಮಹಿಷಿಯರ ಜೊತೆಯಾ ದಾಂಪತ್ಯದ ಸುಳಿವು ಕೊಡುವಾಗ ಹೇರಳವಾಗಿ ಶೃಂಗಾರ ರಸವನ್ನು ಕಾಣಬಹುದು. ರುಕ್ಮಿಣಿ, ಸತ್ಯಭಾಮೆಯರ ಜೊತೆಯ ಸಲ್ಲಾಪ, ದ್ವಾರಕೆಯಲ್ಲಿನ ವಾತಾವರಣ ಶೃಂಗಾರ ರಸಕ್ಕೆ ಪೂರಕ:


ಮೂರನೆ ಮುಕ್ಕಿಗೆ ನಾರಿ ರುಕ್ಮಿಣಿ ಬ೦ದು ಕೃಷ್ಣ ಏನು ವಿಪ್ರಗೆ ಕೊಡುವೆ ಎನುತ ಕರವ ಪಿಡಿದಳು |

ಭಾವನೋರು ತ೦ದ ಬಹುದೂರದ ಪದಾರ್ಥವು ತಾವು ಸವಿನೋಡುವದಾವ ನೀತಿಯು |

ಅಕ್ಕ ಕಳುಹಿಸಿದ ಅವಲಕ್ಕಿ ನಮಗಿಲ್ಲದಾ೦ಗ ಮುಕ್ಕಿಬಿಡುವಿರಿ ಎನುತ ನಕ್ಕಳಾಗಲೆ |

ಇಷ್ಟು ಮ೦ದಿಯೊಳಗ ನೀ ಮುಷ್ಠಿ ಹಿಡಿದ ಕಾರಣ ದಿಟ್ಟತನವ ಎಲ್ಲಿ ಕಲಿತೆ ಹೇಳು ಎ೦ದನು |

ಸರ್ವರೊಳಗೆ ಅಧಿಕವಾದ ಗರ್ವಿನಾ ರುಕ್ಮಿಣಿಗೆ ಕರೆದು ಬುಧ್ಧಿ ಹೇಳಬಾರೆ ಸತ್ಯಭಾಮೆಗೆ೦ದನು |

ರ೦ಗ ನಿನ್ನ ಪಟ್ಟದರ್ಧಾ೦ಗಿನಿಯಾದ ರುಕ್ಮಿಣಿಗೆ ಮು೦ಗೈ ಹಿಡಿಯಲಿಕ್ಕೆ ಯಾರ ಭಯವು ಯಾತಕೆ೦ದಳು |

ವನಧಿಪಾಲ ಭೀಷ್ಮಕಾನ ಮಗಳು ಮುದ್ದು ರುಕ್ಮಿಣೀಗೆ ಪಶುವ ಕಾಯ್ವ ಗೊಲ್ಲರ೦ಜಿಕೆ ಯಾತಕೆ೦ದಳು |

ಹಾಲಶರಧಿ ಲಕ್ಷ್ಮೀ ಹುಟ್ಟಿದಾಲಯವನೆ ಸೇರಿದ ಗೋಪಾಲಕರ ಭಯವು ನಮಗೆ ಯಾತಕೆ೦ದಳು |

ವ೦ಕಿ ತೋಳ ಪಿಡಿದ ವಯ್ಯಾರಿ ಸತ್ಯಭಾಮನ ಅ೦ಕದಲ್ಲಿ ಕುಳ್ಳಿರಿಸಿಕೊ೦ಡನಾಗ ಮೋಹದಿ |

ಎನ್ನ ಭಕ್ತರಲ್ಲಿ ಪ್ರೇಮ ನಿನಗ ಉ೦ಟಾದರ ಇನ್ನೊ೦ದು ಮುಕ್ಕು ಕೊಡುವೆ ಬಾರೆ ಎ೦ದನು |

ಬಾರೆ ಬಾ ರುಕ್ಮಿಣಿ ಭಾಮೆ ಎರಗಳಿದ್ದ ಮೇಲೆ ನೀಡ ನಿನ್ನ ಕರಗಳೊಡ್ಡಿ ನೀಡುವೆ ಎ೦ದನು |



ಭೀಮವ್ವನ ಊಟ-ತಿಂಡಿಗಳ ವರ್ಣನೆಯೇ ಒಂದು ಸೊಗಸು. ಕುಡಿಯ ಬಾಳೆಲೆಯ ಹಾಕಿ ಅನ್ನುತ್ತಾಳೆ. ಬಡಿಸಿದ ಪದಾರ್ಥಗಳ ಜೊತೆಯಲ್ಲಿ ಬಡಿಸಿದ ಕೃಷ್ಣನ ಸತಿಯರ ವಿವರವೂ ಉಂಟು. ಸುದಾಮನಿಗೆ ಬಡಿಸಲಿಕ್ಕೆ ಯಾರೋ ಕೆಲಸದವರೂ ಅಡಿಗೆಯವರೂ ಬಂದದ್ದಲ್ಲ. ಎಂಟು ಮಂದಿ ಪಟ್ಟದ ಸತಿಯರ ಸಾಲು ಒಬ್ಬನಿಗೆ ಬಡಿಸಲು ನಿಲ್ಲುತ್ತಾರೆ:


ಕುಡಿಯ ಬಾಳೆ ಎಲೆಯ ಹಾಕಿ ನಡುವೆ ಜ್ಯೋತಿ ತ೦ದಿರಿಸಿ ಕಡಲಿ, ಕೋಸ೦ಬ್ರಿ ಉಪ್ಪಿನಕಾಯಿ ರಸಗಳು ,

ಉಪ್ಪು ಉಪ್ಪಿನಕಾಯಿ ಹಪ್ಪಳ ಸ೦ಡಿಗೆ ಮಿತ್ರ ಜಾ೦ಬವತೆಯರು ಬಡಿಸುತ್ತಿದ್ದರು |

ರುಬ್ಬಿದಾಆಂಬೊಡೆಯು, ಉಬ್ಬಿದ  ಗುಳ್ಳೂರಿಗೆ, ಭದ್ರೆ ಜಾ0ಬವ0ತೆಯರು ಬಡಿಸುತ್ತಿದ್ದರು |

ಹಾಲು ತುಪ್ಪ ಮ೦ಡಿಗೆ ಮ್ಯಾಲೆ ಬೆಳ್ಳ ಸಕ್ಕರೆ ಭಾಮೆ ರುಕ್ಮಿಣಿಯರು ತ೦ದು ಬಡಿಸುತ್ತಿದ್ದರು |

ದು೦ಡು ಚಕ್ಕುಲಿ, ಫೇಣಿ, ಉ0ಡಿ, ಖರ್ಚಿಕಾಯಿಗಳು , ಉ೦ಡು ಕೆನೆ ಮೊಸರು ಕೈ ತೊಳೆದು ಬ೦ದರು |


ಈಗಿನ ತಲೆಮಾರಿಗೆ ಮೇಲೆ ಹೇಳಿದ ಅನೇಕ ತಿನಿಸುಗಳ ಪರಿಚಯವೇ ಇರಲಾರದು!


ಭೀಮವ್ವನ ಆಭರಣ-ಅಲಂಕಾರಗಳ ಚಿತ್ರಣವೇ ಒಂದು ವಿಶೇಷ:


ಮಿ೦ದು ಪೀತಾ೦ಬರವನುಟ್ಟು ಮೇಲೆ ಜರಿಯಾ ರವಿಕೆ ತೊಟ್ಟು ಕು೦ದಣಾದ ಡಾಬು ತ೦ದು ನಡುವಿಗಿಟ್ಟಳು|

ಎಳೆಯ ಕಾಳಿ೦ಗಪೊಲ್ವ ಹೆರಳಿಗೊಬ್ಬಹೂವ ಸುತ್ತಿ ಚೌರಿ ರಾಗುಟೆಯ ಚ೦ದ್ರದ ಗೊ೦ಡೆ ಹೊಳೆಯುತ್ತಾ

ತೂಕವಾದ ಸರಿಗೆ ಗೆಜ್ಜೆ ಟೀಕ್ಕಿ ನತ್ತು ವಡ್ಡಿಕಿ ಏಕವಾಳಿ ಸರವ ಪದಕ ಹಾಕುತ್ತಿದ್ದರು |

ವಜ್ರದ್ವಾಲೆ ಬುಗುಡಿ ಚ೦ದ್ರ ಚೆಲ್ವೆ ಬಾಳ ಗಲ್ಲಕ ಹೊ೦ದಿದ ಮುಕುರಿ ಬಳಿಕ ದ್ರಾಕ್ಷಿ ಗೊ೦ಚಲು |

ಸಕಲ ಆಭರಣದೊಳಗೆ ಶಿಖರವಾದ ಶ್ರೇಷ್ಠವೋ ಮುಕುರ ಮೂಗಿನಲ್ಲಿಟ್ಟು ಮುದ್ದು ಸೂಸುತಾ |

ಪಿಲ್ಲೆ ಕಾಲು೦ಗುರವನಿಟ್ಟು ಘಿಲ್ಲು ರುಳಿ ಪೈಜಣಾಕಿ ಘಲ್ಲು ಘಲ್ಲೆನುತ ಹೆಜ್ಜೆ ನದೆದು ಬ೦ದಳು |


ಭಕ್ತಿ,, ಶೃಂಗಾರ ರಸಗಳಿಗೆ ಪೂರಕವಾಗಿ ಹಾಸ್ಯ ರಸವನ್ನೂ ಕಾಣಬಹುದು. ದೂತರು ಕೊಡುವ ಸುಧಾಮನ ವರ್ಣನೆ, ಸುದಾಮನೇ ಹೇಳುವ ಕೃಷ್ಣ ಮಡದಿಯರನ್ನು ಅವನು ನೋಡಿದ ರೀತಿ, ಗೋಪಾಲಕರು ಸುದಾಮನನ್ನು ಹಾಸ್ಯ ಮಾಡುವ ಪ್ರಸಂಗ ಎಲ್ಲ ಸೊಗಸಾಗಿವೆ. ಇದನ್ನು ನೋಡಿ:


ಹುಟ್ಟು ಮೊದಲು ಅನ್ನವಿಲ್ಲ, ಹೊಟ್ಟೆಗು೦ಡ ಮನುಜನಲ್ಲ, ಗಟ್ಟಿ ಗಾಳಿ ಬರಲು ಹಾರುವ೦ತೆ ತೋರ್ಪನು |

ಅಸ್ತಿ ಚರ್ಮ ಆತನ ಹತ್ತಿಕೊ೦ಡ ಹೊಟ್ಟೆ ಬೆನ್ನು ಮತ್ತು ನುಡಿಯ ಮಾತನಾಡಲಾರನು |

ಛಿದ್ರ ಬಟ್ಟೆಯನ್ನೆ ಉಟ್ಟು ಚಿಗುರ ತುಳಸಿ ಕಿವಿಯಲಿಟ್ಟು ಪದ್ಮನಾಭ ಪಾಲಿಸೆ೦ದು ಕೂಗುತಿದ್ದನು |

ಮರದ ಗು೦ಡು ಸರಗಳನ್ನೆ ಕೊರಳೊಳಗೆ ಹಾಕಿಕೊ೦ಡು ಇರಳಿ ಚರ್ಮ ಸುತ್ತಿಕೊ೦ಡು ಎಡಬಗಲಲ್ಲಿಟ್ಟನು |


ಕೃಷ್ಣನ ಉದಾರತೆಯನ್ನು ಭೀಮವ್ವ ಚೆನ್ನಾಗಿ ವಿವರಿಸುತ್ತಾಳೆ. ವಿಶ್ವಕರ್ಮನಿಗೆ ಕೃಷ್ಣ ಹೇಳಿದ್ದೇನು? ಸುಧಾಮನಿಗೆ ನೀನು ಕಟ್ಟಿಕೊಡುವ ಸ್ಥಳ ದ್ವಾರಕೆಯನ್ನೂ ಮೀರಿಸಬೇಕು!


ಭೀಮವ್ವ ಸುದಾಮ ಮಾಡುವ ನಿಂದಾಸ್ತುತಿಯಲ್ಲೂ ಹಾಸ್ಯದ ಹೊನಲು ಹರಿಸುತ್ತಾಳೆ. ನಿನ್ನ ಮಗಳನ್ನು (ಗಂಗೆ) ಸಮುದ್ರರಾಜನಿಗೆ ಕೊಟ್ಟು ಅವನ ಮಗಳಾದ ಲಕ್ಷ್ಮಿಯನ್ನು ಪಡೆದುಕೊಂಡೆ. ಈಗ ಯಾರು ಮಾವ? ಯಾರು ಅಳಿಯ? ಎನ್ನುವ ಧ್ವನಿ ಇಲ್ಲಿದೆ:


ಈಶನಾದ ನಿನಗೆ ಈ ಸಮುದ್ರ ವಾಸ ತಪ್ಪದೋ ದಾಸನಾಗಿ ನಾ ಭವ ಸಮುದ್ರ ದಾಟಿ ನಿ೦ತೆನೋ  |

ಶ್ರೇಷ್ಟ ಮಗಳ ನೀನು ಉ೦ಗುಷ್ಠದಿ೦ದ ಪಡಿದಿಯೋ | ಕೊಟ್ಟು  ಶರಧಿಗವನ  ಮಗಳ ಪಡೆದೆಯೋ  |

ಬಸುರಿ ಬಾಣ೦ತಿ ಖರ್ಚಿಗಿಲ್ಲದಾ೦ಗ ನಾಭಿಯಿ೦ದ ನಾಲ್ಕು ಮುಖದ ಶಿಶುವಿನ ಪಡೆದಿಯೋ |

ನಾಲ್ಕು ಮುಖದ ಬ್ರಹ್ಮನೆ೦ಬೋ ಏಕಪುತ್ರನ ಪಡೆದಿಯೋ | ೧೪ ಲೋಕ ಸೃಷ್ಟಿ ಮಾಡ೦ತಾಗ ಹೇಳಿದಿ |


ಕೃಷ್ಣ ತಿಂದು ಉಳಿದ ಒಂದೇ ಮುಷ್ಠಿ ಅವಲಕ್ಕಿ ಇಡೀ ದ್ವಾರಾವತಿಯ ಜನಗಳಿಗೆ ಹಂಚುವಷ್ಟು ಆದದ್ದು, ಸುದಾಮ ಬಂಡ ಭಾಗ್ಯವನ್ನು ವಿತರಣೆ ಮಾಡಿದ ಪರಿ, ಪಟ್ಟಣಗಳ ವಿವರಣೆ ಇತ್ಯಾದಿ ಎಲ್ಲ ಘಟ್ಟಗಲ್ಲಿಯೂ ಭೀಮವ್ವನ ಭಾಷೆಯ ಮೇಲಿನ ಹಿಡಿತವನ್ನು ಕಾಣಬಹುದು. 


ವಿಶ್ಲೇಷಣೆ ಬಹಳ ದೀರ್ಘವಾಗುವ ಮುನ್ನ ವಿರಮಿಸೋಣ. 


"ಇಂದಿನ ದಿನಗಳಲ್ಲಿ ೧೯೩ ಪದ್ಯ ಯಾರು ಓದುತ್ತಾರೆ?" ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ. ಚಿಂತೆಯಿಲ್ಲ. ಮೂವತ್ತು ನಿಮಿಶಗಲ್ಲಿ ಸೊಗಸಾಗಿ ಹಾಡಿರುವ ಮುದ್ರಿಕೆ ಯೂಟ್ಯೂಬಿನಲ್ಲಿ  ಸಿಗುತ್ತದೆ. ಅದರ ಕೊಂಡಿ \(Link) ಇಲ್ಲಿದೆ:


https://www.youtube.com/watch?v=JDyrfdbFAl8


ಫೇಸ್ಬುಕ್ ಮತ್ತು ವಾಟ್ಸಪ್ಪ್ ನಲ್ಲಿ ಬರುವ ವಿಡಿಯೋಗಳನ್ನು ಘಂಟೆಗಟ್ಟಲೆ ನೋಡುವ ನಾವು ಕೇವಲ ಮೂವತ್ತು ನಿಮಿಷ ಈ ವಿಡಿಯೋ ಕೇಳಿದರೆ ಭೀಮವ್ವನ ಕೃತಿಯ ಪರಿಚಯದ ಜೊತೆಗೆ ಸಾಹಿತ್ಯ-ಸಂಗೀತಗಳ ಆನಂದವನ್ನೂ ಪಡೆಯಬಹುದು. 


ಹಾಗೆ ಮಾಡುತ್ತೀರಾ???? 

Wednesday, October 4, 2023

Ajamila's Cheque


Ajamila Rao went to the bank in the morning just when the branch was opening for the day. He deposited an amount of Rupees 10,000/- (Rupees Ten Thousand only) in his account and went away. 

A cheque of Rupees 1,000,000,000/- (Rupees One Hundred Crore only) was presented for payment in the account, in another branch of the bank and was waiting for its fate.

The cheque was duly honoured and paid by the bank.

"What is the fate of that big cheque of Rupees One Hundred Crore presented just now?", Branch Manager asked the Assistant Manager referring to the alert he got on the computer on his table..

"Ajamila Rao was just here a moment ago. He deposited Rs. Ten Thousand in his account. The cheque was paid, Sir", answered the Assistant Manager loudly. Another person who was within earshot heard this exchange of words.

He came out of the manager's cabin. There were many persons in the banking hall when this exchange of words took place between the two bank officials in the Manager's cabin. This man told  his friend about the exchange of words which another two present there heard. Soon word spread around that the bank honours cheque of Rs. One Hundred Crore if a customer deposits Rs. Ten Thousand in his account in the bank.

People started issuing cheques for very large amounts and deposited small amounts in their accounts with the confidence that the cheques would be honoured. 
*****

Lord Shiva was taking an evening walk with Parvati Devi. As they were strolling in the sky, Parvati fell a step behind. Shiva turned back at her. She was looking down on the earth below. A young man was driving along the winding hilly road enjoying the scenic beauty. At the next bend he stopped the car and got out to watch the sunset from the vantage point. 

Parvati told Shiva that the young man was in danger as the big boulder on the hill behind him was about to fall and crush him to death. Shiva smiled, nodded and waited for her to resume the walk. "We should save him", she said. "Do you really want to interfere with the proceedings?", Shiva asked. "What to do? My motherly instinct wants to save him", she said. Shiva agreed. "If that is your desire, so be it. When he realises that the boulder is about to hit him, he will shout. If he shouts any word connected to the mother like say Amma, you save him. If he shouts any word connected to the Father like Appa, I will save him", he said. Parvati agreed.

The boulder got detached from its base and rolled down towards the spot where the young man was standing. He realised that he was in line with the movement of the boulder. "Oh, my car!", he shouted as the boulder hit him with full force.

Shiva and Parvati resumed their walk.
*****

Rafael Nadal was playing Novak Djokovic in the 2020 finals of the French Open Tennis Championship at Roland Garros in Paris, France. It was indeed a tense match all the way. A long tug-of-war in which neither party was prepared to let go. Everyone was on the edge of the seats as Championship Point came up. Nadal was to serve with an anxious Djokovic waiting across the net. Nadal threw the ball up after going through all his mannerisms. As the ball came down he moved his racket in an arc, from the left hand which also moved from a body in an arc in the air. The ball flashed across the net in the extreme corner and much beyond the possible retrieving area of Djokovic. The crowd erupted as one man. It was an Ace! Game, set, match and championship went to Nadal. 

Did Nadal win the championship just because of that ace? No. Not at all. He had to go through the rigours of winning six earlier matches, from Round 1 to Semi-finals against tough opponents. Even in the final match, he had won the first set at an astounding 6-0. He had also won the second set at a fighting score at 6-2. Before the final ace, he had won 6 games and leading at 6-5 and also three points in the final game at 40-0. It was then that the ace came up to clinch the championship.

When we watch a match like this, we sit before the television set a few minutes before the match commences. We get up and move to our other activities as soon as the cups are given away. For us the final match was only for four or five hours. The players have to warm up for nearly two hours before the match. There are a number of exercises that they have to go through under the watchful eyes of their coaches. They can't even relax after the victory or defeat and get the cup or plate.. Another hour and half of cooling exercises await them! That ace came up because he was practicing it for years. On each and every day, even when it was off-season. It simply did not come just like that.
*****

Ajamila's story comes up in the 6th Canto of Bhagavata Mahapurana. It is frequently quoted as an example of attainment of salvation to escape the birth and death cycle by chanting the name of the Lord at the time of last breath.

Ajamila was born in Kanyakubja (present Kannauj) and lived a great life in the early years. He was a highly learned man and followed all the requirements for a good life. On one of his visits to the forest for collecting essentials for his rituals, he saw a man and a young woman having a good time physically. His mind became weak at that point and he decided to let go of his strict life to pursue the physical enjoyment. He gave up his parents and deserted a very good wife as well. He persuaded the young woman to live with him. As per her desire, he gave up his earlier life style and started to live as per her dictates. He became a drunkard, thief and everything else to provide for the new life style. He even became a social evil.  

He got ten sons through his second wife. The youngest of them was named as Narayana. Being the youngest son he was the father's pet. In his 88th year he was about to die. Yamadootas appeared before him and their very appearance scared him. In the middle of that fear he shouted and called his son Narayana. The moment he called Narayana, Vishnudootas arrived, told the yamadootas to go away and took him to the abode of the Lord. However much sins a man commits, if one remembers the Lord in the last breath he will get salvation from the birth and death cycle.

This is the story often told. 
*****

Unfortunately many do not read the full story. Those quoting the story also either have not read or read fully. The focus for them is on telling story and making it attractive rather than on its true impact. The story as is being told and circulated does more damage than solve the real issues.

Ajamila lived a pious and great life before being born as Ajamila in his final birth. He lived a life of service to others and accumulated a lot of punya by his righteous deeds. He was born as Ajamila now and even in this birth lived a life useful to the society in the very early part of his life. He strayed from the right path for a brief period in the present life, brief in the context of his overall lifetime in various incarnations. 

Bhagavata says that he got a dream or illusion of his death and calling his son. Yamadootas appeared before him and he saw Vishnudootas also in the same dream or illusion. Bhagavata says this episode brought back his memories of earlier life, and to live a righteous life again. Bhagavata says he realised his mistake, went to Gangadwara (May be Haridwar or Gangotri), atoned for his sins in the remaining part of his life and finally found salvation. The salvation did not come just because he called his son Narayana.

*****

Nadal did not win the French Open just by that one ace. There was years of hard work and repeated efforts to reach perfection in his play. He faced difficulty in the last set. But he quickly realised his position due to his vast experience of being in similar situations. He retrieved his position with firm play in the last two games and that one ace as the crowning glory. 

Banks do not pay cheques unless sufficient funds are provided. When the cheque of Rs. 1,000,000,000/- was presented, the account had a balance of Rs. 999,990,000. Branch Manager did not want the cheque dishonoured for a shortage of only Rs. 10,000/-. A call by him made Ajamila Rao to run to the bank and deposit that small amount. Cheque was passed. The dream situation Ajamila faced was a warning he received from the Lord, very similar to the call from the Branch Manager. 

Remembering the Lord's name at the last breath does not come easy. Like the young man who was so much attached to his car even when he was aware that he would be crushed by the boulder. Shiva and Parvati were waiting, but he remembered his car, what he was interested in. Unless one practices remembering the Lord often, like Nadal getting that ace when required, last memory will be of all those other things that are considered dear all along the life.

One does not know what would be the situation when the last breath goes out. Many are not even conscious at that time. Those conscious may not be able to speak. The last breath may be too sudden and may go out even before one realises. But efforts are to be made to practice and hope that the ace comes when most required.

*****

There may be many who have a genuine question. Who knows all this is real? Why not enjoy life as long as it lasts? Right. Go ahead. Ajamila's story, the real one or fake one doing rounds, will not harm you!