Showing posts with label Kanakadasa. Show all posts
Showing posts with label Kanakadasa. Show all posts

Wednesday, July 31, 2024

ರಾಮಧಾನ್ಯ ಚರಿತ್ರೆ



ಇಂದ್ರಪ್ರಸ್ಥ ನಗರವನ್ನು ರಾಜಧಾನಿಯಾಗಿ ಮಾಡಿಕೊಂಡು ತನಗೆ ಭಾಗವಾಗಿ ಬಂದ ರಾಜ್ಯವನ್ನು ಪ್ರಜಾನುರಾಗಿಯಾಗಿ ಆಳಿ ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ವಿಶೇಷವಾದ ಕೀರ್ತಿ ಸಂಪಾದಿಸಿದನು. ಶ್ರೀಕೃಷ್ಣನ ಒತ್ತಾಸೆಯಿಂದ ಅಖಂಡವಾದ ರಾಜಸೂಯ ಯಾಗ ಮಾಡಿ ಎಲ್ಲ ಕಾಲದ ಶ್ರೇಷ್ಠ ಚಕ್ರವರ್ತಿಗಳ ಸಾಲಿಗೆ ಸೇರಿದನು. ನಂತರ ದುರ್ಯೋಧನನ ಮತ್ಸರದ ಪರಿಣಾಮವಾಗಿ ಶಕುನಿಯ ಕಪಟ ಜೂಜಿನ ಕುತಂತ್ರದಿಂದ ಎಲ್ಲವನ್ನೂ ಕಳೆದುಕೊಂಡು ದ್ರೌಪದಿ ಮತ್ತು ತಮ್ಮಂದಿರ ಜೊತೆಯಲ್ಲಿ ವನವಾಸಿಯಾದನು. ಕಾಮ್ಯಕ ವನದಲ್ಲಿ ವಾಸವಾಗಿರುವ ಸಮಯದಲ್ಲಿ ಅಲ್ಲಿಗೆ ಮುನಿಶ್ರೇಷ್ಠರಾದ ಶಾಂಡಿಲ್ಯ ಋಷಿಗಳು ಆಗಮಿಸಿದರು.  

ಸ್ವಾಗತ, ಕುಶಲ ಪ್ರಶ್ನೆಗಳು ಆದ ನಂತರ ಧರ್ಮಜನ ಕಳೆಗುಂದಿದ ಮುಖವನ್ನು ನೋಡಿ ಶಾಂಡಿಲ್ಯ ಋಷಿಗಳು ಅವನನ್ನು ಸಮಾಧಾನಿಸುವ ಸಲುವಾಗಿ "ಯುಧಿಷ್ಠಿರ, ಸುಖ ದುಃಖಗಳು ಜೀವನದಲ್ಲಿ ಸಾಮಾನ್ಯ. ನೀನು ಚಕ್ರವರ್ತಿಯಾಗಿ ಬಹಳ ಕೀರ್ತಿ ಸಂಪಾದನೆ ಮಾಡಿದೆ. ಭೂಮಿಯನ್ನು ಆಳಿದ ಶ್ರೇಷ್ಠ ಚಕ್ರವರ್ತಿಗಳ ಹೆಸರು ಹೇಳಿ ಎಂದು ಯಾರನ್ನಾದರೂ ಕೇಳಿದರೆ ನಾಲ್ವರ ಹೆಸರು ಹೇಳುತ್ತಾರೆ" ಅನ್ನುತ್ತಾರೆ:

ಧರಣಿಯೊಳು ಅರಸುಗಳು ನಾಲ್ವರು 
ಭೂರಿ ಸತ್ಯವ್ರತರು ನಳನೃಪ 
ಧೀರ ರಾಮ ಯುಧಿಷ್ಠರ ಹರಿಶ್ಚನ್ದ್ರರಿವರೆಂದು

ಸಾರುತಿದೆ ಜಗವೆಲ್ಲ ನಿಮ್ಮನು
ದಾರನಿದರೊಳು  ರಘುಪತಿಯ ಗುಣ 
ಹಾರ ಧರ್ಮವ ಪಾಲಿಸಿದ ನರೆದಲೆಗೆ ವ್ರಿಹಿಯರಿಗೆ 

ಈ ಮಾತು ಕೇಳಿದ ಧರ್ಮರಾಯನು "ಶ್ರೀರಾಮಚಂದ್ರನು ನರೆದಲೆಗ ಮತ್ತು ವ್ರಿಹೀಯರಿಗೆ ನ್ಯಾಯ ಕೊಟ್ಟ ಕಥೆಯನ್ನು ದಯವಿಟ್ಟು ಹೇಳಿ" ಎಂದು ಕೇಳಿಕೊಂಡನು. (ನರೆದಲಗ ಅಂದರೆ ರಾಗಿ. ವ್ರಿಹೀಗ ಅಂದರೆ ಅಕ್ಕಿ. ಇವೆರಡು ಆ ಧಾನ್ಯಗಳ ಮೊದಲಿನ ಹೆಸರು.) ಆಗ ಶಾಂಡಿಲ್ಯ ಮಹರ್ಷಿಗಳು ಅಕ್ಕಿ ಮತ್ತು ರಾಗಿಗಳಿಗೆ ತಮ್ಮಲ್ಲಿ ಯಾರು ಶ್ರೇಷ್ಠ ಎಂದು ಜಗಳ ಬಂದ ಸಂದರ್ಭ ಮತ್ತು ಶ್ರೀರಾಮನು ಅದನ್ನು ಪರಿಹರಿಸಿ ನ್ಯಾಯವನ್ನು ಕೊಟ್ಟ ರೀತಿಯನ್ನೂ ವಿವರಿಸುತ್ತಾರೆ.  

*****

ನಂತರದ ಇಪ್ಪತ್ತು ಪದ್ಯಗಳಲ್ಲಿ ಶಾಂಡಿಲ್ಯ ಮಹರ್ಷಿಗಳು ಧರ್ಮರಾಯನಿಗೆ ಶ್ರೀರಾಮನ ಜನನದಿಂದ ರಾವಣ ವಧೆಯವರೆಗಿನ ಕಥೆಯನ್ನು ಸಂಗ್ರಹವಾಗಿ ಹೇಳುತ್ತಾರೆ. ಯುದ್ಧ ಮುಗಿದ ಮೇಲೆ ಶ್ರೀರಾಮನು ಸೀತಾದೇವಿ ಮತ್ತಿತರರ ಸಮೇತ ಅಯೋಧ್ಯೆಗೆ ಹಿಂದಿರುಗುವ ವಿವರವನ್ನು ಕೊಡುತ್ತಾರೆ. ಹೀಗೆ ಹಿಂದಿರುಗಿ ಬರುವಾಗ ಅನೇಕ ಋಷಿಪುಂಗವರು ಶ್ರೀರಾಮನನ್ನು ಎದುರುಗೊಂಡು, ಸ್ವಾಗತಿಸಿ ಅವನಿಗೆ ಸೊಗಸಾದ ಔತಣಕೂಟ ಏರ್ಪಡಿಸುತ್ತಾರೆ. ಅನೇಕ ಋಷಿಗಳ ಬಹಳ ಶಿಷ್ಯರು ನಾನಾವಿಧ ಭಕ್ಷ್ಯ ಭೋಜ್ಯಗಳನ್ನು ಹೆಡಿಗೆಗಳಲ್ಲಿ ತಂದು ಪೇರಿಸಿ ಶ್ರೀರಾಮ ಮತ್ತು ಅವನ ಜೊತೆ ಬಂದವರೆಲ್ಲರಿಗೆ ಬಡಿಸುತ್ತಾರೆ. ಆಗ ಔತಣಕ್ಕೆ ಉಪಯೋಗಿಸಿದ ಧಾನ್ಯಗಳ ವಿವರ ಹೀಗಿದೆ:

ನರೆದೆಲಗನಿದು ನೆಲ್ಲು ಹಾರಕ 
ಬರಗು ಜೋಳವು ಕಂಬು ಸಾಮೆಯು 
ಉರುತರದ ನವಣೆಯಿದು ನವಧಾನ್ಯವೆಂದೆನಲು 
ಮೆರೆವ ರಾಶಿಯ ಕಂಡು ಇದರೊಳು 
ಪರಮಸಾರದ ಹೃದಯನಾರೆಂ 
ದರಸ ಕೇಳಿದನಲ್ಲಿಹ  ಮಹಾಮುನೀಶ್ವರರ 

ಆಗ ಉಪಯೋಗಿಸಿದ ನವಧಾನ್ಯಗಳು: ನರೆದೆಲಗ (ರಾಗಿ), ನೆಲ್ಲು (ಭತ್ತ ಅಥವಾ ಅಕ್ಕಿ), ಹಾರಕ, ಬರಗು, ಜೋಳ, ಕಂಬು, ಸಾಮೆ, ನವಣೆ ಮತ್ತು ಗೋಧಿ. ಆ ನವಧಾನ್ಯಗಳ ಪರಿಪರಿಯ ತಿಂಡಿ-ತಿನಿಸು ನೋಡಿ ಶ್ರೀರಾಮನು "ಇವುಗಳಲ್ಲಿ ಶ್ರೇಷ್ಠ ಧಾನ್ಯ ಯಾವುದು?" ಎಂದು ಅಲ್ಲಿ ಸೇರಿದ ಋಷಿ ಸಮುದಾಯವನ್ನು ಕೇಳುತ್ತಾನೆ. ಕಪಿಲ ಮುನಿಯು ಎಲ್ಲ ಧಾನ್ಯಗಳಲ್ಲಿ ರಾಗಿಯೇ ಶ್ರೇಷ್ಠ ಎಂದು ನಸು ನಗುತ್ತ ಹೇಳುತ್ತಾನೆ. 

ಈ ಮಾತನ್ನು ಕೇಳಿದ ವ್ರಿಹಿಗೆ (ಅಕ್ಕಿಗೆ) ತಡೆಯಲಾರದ ಕೋಪ ಬರುತ್ತದೆ. ಎಲ್ಲರ ಮುಂದೆ ತನಗೆ ಹೀಗೆ ಅವಮಾನವಾಗಿದ್ದು ಕಂಡು ತನ್ನ ಗುಣಗಳನ್ನು ಹೋಗಳಿಕೊಂಡು  ರಾಗಿಯನ್ನು ಮೂದಲಿಸುತ್ತದೆ. ರಾಗಿಯೂ ಸಹ ಅದಕ್ಕೆ ಉತ್ತರವಾಗಿ ಅಕ್ಕಿಯ ಹೀನ ಗುಣಗಳನ್ನೂ ತನ್ನ ಹಿರಿಮೆಯನ್ನೂ ಸಾರಿ ಹೇಳುತ್ತದೆ. ಶ್ರೀರಾಮನು ಎಲ್ಲರ ಮುಂದೆ ಹೀಗೆ ಜಗಳ ಮಾಡಿದ ತಪ್ಪಿಗೆ ಅವರಿಗೆ ಸೆರೆವಾಸದ ಶಿಕ್ಷೆ ಕೊಡುತ್ತಾನೆ. "ಇವರಿಬ್ಬರನ್ನೂ ಆರು ತಿಂಗಳ ಕಾಲ ಕಾರಾಗೃಹದಲ್ಲಿ ಇಡಿ. ನಂತರ ಯಾರು ಶ್ರೇಷ್ಠ ಎಂದು ನಾವು ನಿರ್ಣಯ ಕೊಡುತ್ತೇವೆ" ಎಂದು ಆಜ್ಞಾಪಿಸುತ್ತಾನೆ. ಅವರಿಬ್ಬರಿಗೆ ಇನ್ನು ಆರು ತಿಂಗಳ ಕಾಲ ಬಂಧನ! ಶ್ರೀರಾಮನ ಸಹಿತ ಎಲ್ಲರೂ ಅಯೋಧ್ಯೆ ಸೇರಿ ಶ್ರೀರಾಮ ಪಟ್ಟಾಭಿರಾಮ ಆಗಿ, ರಾಜಾರಾಮ ರಾಜ್ಯವಾಳುತ್ತಾನೆ. 

*****

ಆರು ತಿಂಗಳ ಕಾಲ ಕಳೆಯಿತು. ರಾಜರಾಮನು ಹನುಮನನ್ನು ಕರೆದು ಗೌತಮ ಋಷಿಯನ್ನು ಕರೆತರಲು ಹೇಳುತ್ತಾನೆ. ಹನುಮನು ಗೌತಮರಲ್ಲಿ ಈ ವಿಷಯ ತಿಳಿಸಲು ಅವರು ರಾಜರಾಮನ ಆಸ್ಥಾನಕ್ಕೆ ಬರುತ್ತಾರೆ. ಅನೇಕ ಋಷಿ-ಮುನಿಗಳು, ಅಧಿಕಾರಿಗಳು, ಪಂಡಿತರು, ಸಾಮಾನ್ಯ ಜನರು ಶ್ರೀರಾಮನ ಆಸ್ಥಾನದಲ್ಲಿ ಸೇರುತ್ತಾರೆ. ಪ್ರಭು ರಾಮಚಂದ್ರನು ಸೆರೆಯಲ್ಲಿರುವ ಎರಡು ಧಾನ್ಯಗಳನ್ನು ಆಸ್ಥಾನಕ್ಕೆ ಕರೆಸುತ್ತಾನೆ. 

ಆರು ತಿಂಗಳು ಸೆರೆವಾಸದ ನಂತರ ವ್ರಿಹಿ (ಅಕ್ಕಿ) ಸೊರಗಿಹೋಗಿರುತ್ತದೆ. ಸೊಂಟ ಮುರಿದು ಆಸ್ಥಾನದಲ್ಲಿ ಬೀಳುತ್ತದೆ. ನರೆದೆಲಗ (ರಾಗಿ) ಸ್ವಲ್ಪವೂ ಕಾಂತಿ ಕಳೆಯದೆ ಮೊದಲಿನಂತೆಯೇ ಇರುತ್ತದೆ. ಇಬ್ಬರನ್ನೂ ನೋಡಿ ಶ್ರೀರಾಮನು "ನರೆದೆಲಗವೇ (ರಾಗಿ) ಶ್ರೇಷ್ಠ"  ಎಂದು ತೀರ್ಪು ಕೊಡುತ್ತಾನೆ. ಇನ್ನುಮುಂದೆ ನರೆದಲಗವು "ರಾಮಧಾನ್ಯ" ಎಂಬ ಹೆಸರಿನಿಂದ ಗುರುತಿಸಲ್ಪಡಲಿ ಎಂದು ವರ ಕೊಡುತ್ತಾನೆ. ರಾಗಿಗೆ ಬಹಳ ಸಂತೋಷ ವಾಗುತ್ತದೆ. ಋಷಿಗಳೆಲ್ಲರೂ ರಾಗಿಗೆ ಅನೇಕ ವರಗಳನ್ನು ಕೊಡುತ್ತಾರೆ. ರಾಮಧಾನ್ಯವು ಬರಬರುತ್ತ ಆಡುಭಾಷೆಯಲ್ಲಿ ರಾಗಿ ಎಂದು ಪ್ರಖ್ಯಾತವಾಗುತ್ತದೆ. 

ರಾಗಿಯು ಸನ್ಮಾನಿತವಾದ ಮೇಲೆ ನೆಲ್ಲು (ಅಕ್ಕಿ) ದುಃಖಿತನಾಗಿ ಪೆಚ್ಚು ಮೊರೆ ಹಾಕಿಕೊಂಡು ತಲೆ ತಗ್ಗಿಸಿ ನಿಲ್ಲುತ್ತದೆ. ಆಗ ಶ್ರೀರಾಮನು ಅಕ್ಕಿಯನ್ನು ಹತ್ತಿರ ಕರೆದು ಹೀಗೆ ಹೇಳುತ್ತಾನೆ:

ದೇವರಿಗೆ ಪರಮಾನ್ನನೀ ಮನು 
ಜಾವಳಿಗೆ ಪಕ್ವಾನ್ನವೀತನು 
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು 
ನಾವು ಕೊಟ್ಟೆವು ವರವ ಸಲ್ಲುವು 
ದಾವ ಕಾಲದಲಿನ್ನು ನೀವೇ 
ಪಾವನರು ಪರಮ ಸುಖಿಯೆನ್ದುಪಚರಿಸಿದನು ನೃಪತಿ 

"ನೀನು ದೇವತೆಗಳಿಗೆ ನೀಡುವ ನೈವೇದ್ಯದದ ಧಾನ್ಯ. ಆದರೆ ರಾಗಿಯಾದರೋ ಸಾಮಾನ್ಯ ಮನುಷ್ಯರಿಗೆ ದಿನನಿತ್ಯದ ಆಹಾರ ಪದಾರ್ಥ. ನೀವಿಬ್ಬರೂ ಈ ಭೂಮಿಯಲ್ಲಿ ಹೊಂದಿಕೊಂಡು ಬಾಳಬೇಕು. ನೀವಿಬ್ಬರೂ ಎಂದಿಗೂ ಮಿತ್ರರಾಗಿ ಎಲ್ಲ ಜನರಿಗೆ ಉಪಕಾರಿಯಾಗಿ ಬದುಕಿರಿ ಎನ್ನುವುದೇ ನಮ್ಮ ಅಪೇಕ್ಷೆ" ಎಂದ ಪ್ರಭು ರಾಮನು ಅಕ್ಕಿಯನ್ನು ಮುಂದೆ ಇನ್ನಷ್ಟು ಸಮಾಧಾನಪಡಿಸುತ್ತಾನೆ:

ದೀನರಲಿ ದಾರಿದ್ರ್ಯ ಜನರಲಿ 
ನೀನು ನಿರ್ದಯನೆಂದೆವಲ್ಲದೆ 
ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ 
ಮಾನುಷನು ನಮ್ಮೆಡೆಗೆ ನೀ ಸುರ
ಧೇನುವಿಗೆ ಸಮ ನಿನ್ನ ಚಿತ್ತದಿ 
ಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ 

"ಬಡವರ, ದೀನ ದಲಿತರ ವಿಷಯದಲ್ಲಿ ನೀನು ಕರುಣಿಯಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ ನಿನ್ನನು ಕೀಳು ಎಂದು ನಾವು ಹೇಳಲಿಲ್ಲ. ನಿನ್ನ ಯೋಗ್ಯತೆ ಬಹಳ ದೊಡ್ಡದು. ನೀನು ಕಾಮಧೇನುವಿಗೆ ಸಮನು. ಮನಸ್ಸಿನಲ್ಲಿ ಚಿಂತೆಯಿಂದ ಕೊರಗಬೇಡ." ಎಂದು ಹೇಳಿ ಅಕ್ಕಿಗೂ ಸನ್ಮಾನ ಮಾಡಿ ಕಳಿಸಿಕೊಟ್ಟನು ಶ್ರೀರಾಮ. 

*****

ಶಾಂಡಿಲ್ಯ ಮಹರ್ಷಿಗಳು ಧರ್ಮರಾಯನಿಗೆ ಈ ರೀತಿ ಶ್ರೀರಾಮಚಂದ್ರನು ಪ್ರಜಾವತ್ಸಲನಾಗಿ, ನ್ಯಾಯ ನಿಷ್ಠುರನಾಗಿದ್ದರೂ ಯಾರ ಮನಸ್ಸಿಗೂ ನೋವಾಗದಂತೆ ಆಡಳಿತ ಮಾಡುವ ಸೂಕ್ಷ್ಮತೆ ತೋರಿಸಿದ ಬಗೆಯನ್ನು ವಿವರಿಸಿದರು. ಈ ಧಾನ್ಯಗಳೆರಡರ ಜಗಳ-ನ್ಯಾಯದ ನೆವದಲ್ಲಿ ಶಾಂಡಿಲ್ಯ ಮಹರ್ಷಿಗಳು ಧರ್ಮರಾಯನಿಗೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ವೈಭವನ್ನು ವರ್ಣನೆ ಮಾಡುತ್ತಾರೆ. ಶ್ರೀರಾಮಚಂದ್ರನಿಗೂ ವನವಾಸದ ನಂತರ ಪಟ್ಟಾಭಿಷೇಕವಾಯಿತು ಎಂದು ಹೇಳುವುದರಲ್ಲಿ ಮುಂದೆ ಈ ವನವಾಸದ ನಂತರ ನಿನಗೂ ಮತ್ತೆ ರಾಜ್ಯಾಭಿಷೇಕವಾಗುತ್ತದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಾರೆ. 

ಶ್ರೀರಾಮನ ಈ ಕಥೆಯ ವಿವರಣೆಯನ್ನು ಕೇಳಿದ ಧರ್ಮರಾಯನು "ಮನಸ್ಸಿನ ಚಿಂತೆ ಕಳೆಯಿತು,  ಪರಮ ಪಾವನವಾದ ಶ್ರೀರಾಮಚಂದ್ರನ ಕಥೆಯನ್ನು ನಿಮ್ಮಂತಹವರ ಸಾನ್ನಿಧ್ಯದಿಂದ ಕೇಳಿ ಮಂಕು ಕಳೆಯಿತು. ಕೃತಾರ್ಥನಾದೆ", ಎಂದು ಶಾಂಡಿಲ್ಯ ಮಹರ್ಷಿಗೆ ಯಥೋಚಿತ ಸತ್ಕಾರ ಮಾಡಿ ಬೀಳ್ಕೊಟ್ಟನು. 

*****

ಶ್ರೀ ಕನಕದಾಸರ "ರಾಮಧಾನ್ಯ ಚರಿತ್ರೆ" ಎಂಬ ಕಾವ್ಯದ ಸಂಕ್ಷಿಪ್ತ ತಿರುಳು ಮೇಲೆ ಹೇಳಿದ ವಿವರಣೆ. 

"ಭಕ್ತ ಕನಕದಾಸ" ಎಂದೇ ಹೆಸರಾದ ಶ್ರೀ ಕನಕದಾಸರು ನಮ್ಮ ನಾಡು ಕಂಡ ಅಪರೂಪದ ಮತ್ತು ಬಹುಮುಖ ಪ್ರತಿಭೆಯ ವ್ಯಕ್ತಿ. ತಮ್ಮ ಜೀವನದಲ್ಲಿ ಅವರು ಬಹಳ ನೊಂದವರು. ಮೇಲ್ವರ್ಗದವರ ತಿರಸ್ಕಾರ, ಹಿಂಸೆಗಳನ್ನು ಅನುಭವಿಸಿದವರು. ಆದರೆ ಅವರ ಕೃತಿಗಳಲ್ಲಿ ನಾವು ಕಹಿಯನ್ನು ಕಾಣುವುದಿಲ್ಲ.  ಅವರೊಬ್ಬ ಅಪ್ರತಿಮ ಕವಿ. ಅಷ್ಟೇ ಅಲ್ಲ. ಅವರು ನಾಡು ಕಂಡ ಬಹು ಮೌಲ್ಯದ ಸಂತ, ಸಮಾಜ ಸುಧಾರಕ ಮತ್ತು ದಾರ್ಶನಿಕ. ಹದಿನಾರನೆಯ ಶತಮಾನದಲ್ಲಿ ಜೀವಿಸಿದ್ದ ದಾಸರು ನೂರು ವರುಷಗಳ ತುಂಬು ಜೀವನ ನಡೆಸಿದವರೆಂದು ನಂಬಿಕೆ. 

ಸೊಗಸಾದ ಪ್ರೌಢ ಕನ್ನಡ ನುಡಿಯನ್ನು ಅವರು ತಮ್ಮ ಕಾವ್ಯಗಳಲ್ಲಿ ಬಳಸಿಕೊಂಡಿದ್ದರೆ, ಸರಳ ಕನ್ನಡದಲ್ಲಿಯೂ ಅನೇಕ ದೇವರನಾಮಗಳನ್ನು ನಮಗೆ ನೀಡಿದ್ದಾರೆ. "ಮೋಹನ ತರಂಗಿಣಿ", "ನಳ ಚರಿತ್ರೆ", "ರಾಮಧಾನ್ಯ ಚರಿತ್ರೆ", "ಹರಿಭಕ್ತಿಸಾರ" ಎಂಬ ಕಾವ್ಯಗಳನ್ನು ರಚಿಸಿದ್ದಾರೆ.  ನೂರಾರು ದೇವಾರನಾಮಗಳನ್ನೂ ರಚಿಸಿದ್ದಾರೆ. ಅವರ ಒಗಟಿನಂತಹ "ಕನಕನ ಮುಂಡಿಗೆಗಳು" ಒಂದು ವಿಶೇಷ ರೀತಿಯ ರಚನೆಗಳು.  ಕನಕರ ದೇವರನಾಮ ಒಂದಾದರೂ ಕೇಳದ ಕನ್ನಡಿಗನಿಲ್ಲ ಅಂದರೆ ತಪ್ಪಲ್ಲ. "ಕುಲ ಕುಲ ಕುಲವೆಂದು ಹೊಡೆದಾಡದಿರಿ" ಮತ್ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ" ಎಂಬ ದೇವಾರನಾಮಗಳನ್ನಂತೂ ಕೇಳದ ಕನ್ನಡಿಗರು ಇರಲಾರರು.  

"ಮೋಹನತರಂಗಿಣಿ" 42 ಅಧ್ಯಾಯಗಳ 2,800 ಪದ್ಯಗಳ ದೊಡ್ಡ ಕೃತಿ. ಹರಿಭಕ್ತಿಸಾರ ೧೦೮ (108) ಪದ್ಯಗಳ ಭಾಮಿನಿ ಷಟ್ಪದಿಯ ಕೃತಿಯಾದರೆ "ರಾಮಧಾನ್ಯ ಚರಿತ್ರೆ" ಅದೇ ಷಟ್ಪದಿಯ ೧೫೮ (158) ಪದ್ಯಗಳುಳ್ಳ ಕೃತಿ. ರಾಮಧಾನ್ಯ ಚರಿತ್ರೆ ಒಂದು ರೀತಿಯಲ್ಲಿ ರಾಮಾಯಣದ ಕಥೆ. ಅದರಲ್ಲೂ ಶ್ರೀರಾಮಚಂದ್ರನ ಪಟ್ಟಾಭಿಷೇಕದ ವಿವರಣೆ ನೀಡುವ ಕೃತಿ. ಇದರ ಉದ್ದಕ್ಕೂ ಕಾವ್ಯಗುಣಗಳನ್ನು ಕಾಣಬಹುದು. ಗಮಕಿಗಳು ಸೊಗಸಾಗಿ ನಿರೂಪಣೆ ಮಾಡಬಹುದಾದ ಕೃತಿ. 

ನರೆದೆಲಗ ಮತ್ತು ನೆಲ್ಲು (ರಾಗಿ ಮತ್ತು ಅಕ್ಕಿ) ಇವುಗಳ ಜಗಳವನ್ನು ಸಾಂಕೇತಿಕವಾಗಿ ಸಮಾಜದಲ್ಲಿರುವ "ವರ್ಗ ಸಂಘರ್ಷ" ನಿರೂಪಿಸುವುದಕ್ಕೆ ಬಳಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜೀವನದಲ್ಲಿ ನೊಂದವರು ಒಂದು ರೀತಿಯ ಕ್ರಾಂತಿಕಾರಿಗಳಾಗಿ, ಅದಕ್ಕಿಂತ ಹೆಚ್ಚು ಬಂಡಾಯ ಪ್ರವೃತ್ತಿಯವರಾಗುವುದು ಸಾಮಾನ್ಯ. ಆದರೆ ಕನಕರದು ತುಂಬು ಮಾಗಿದ ಜೀವನಾನುಭವ. ಗುದ್ದಾಡುವುದಕ್ಕಿಂತ ಸಾಮರಸ್ಯದ ಜೀವನ ಅವರಿಗೆ ಹೆಚ್ಚು ಪ್ರಿಯ. ರಾಮಧಾನ್ಯ ಚರಿತ್ರೆಯಲ್ಲಿ ಇದರ ಪ್ರತಿಬಿಂಬವನ್ನು ನಾವು ಕಾಣಬಹುದು. ಸಮಾಜದಲ್ಲಿ ನಮಗೆ ಬೇಕಿದ್ದರೂ, ಬೇಡದಿದ್ದರೂ ವರ್ಗಗಳು ಇದ್ದೇ ಇರುತ್ತವೆ. ದೀನ-ದಲಿತರ ಪರವವಾಗಿ ನಿಲ್ಲುವವನೇ ಶ್ರೇಷ್ಠ ಎನ್ನುವುದು ರಾಗಿಯ ಶ್ರೇಷ್ಠತೆ ತೋರಿಸುವುದರಲ್ಲಿ ನೋಡಬಹುದು. ಸಮಾಜದಲ್ಲಿ ಮೇಲ್ವರ್ಗದವರಿಗೂ ಸ್ಥಾನ ಉಂಟು. ಆದರೆ ದೀನರ ಬಗ್ಗೆ, ಸಾಮಾನ್ಯ ಮನುಷ್ಯರ ಬಗ್ಗೆ ಕಳಕಳಿ ಇಲ್ಲದ ಮೇಲ್ವರ್ಗದ ಜನರಿಂದ ಪ್ರಯೋಜನವಿಲ್ಲ. ಈ ಸಂದೇಶವನ್ನು ಶ್ರೀರಾಮಚಂದ್ರನು ವ್ರಿಹೀಗೆ  (ಅಕ್ಕಿಗೆ) ಹೇಳುವ ಸಮಾಧಾನದ ಮಾತುಗಳಲ್ಲಿ ಅರಿಯಬಹುದು.

Saturday, October 1, 2011

Ahead of us or behind us?

Saint Kanakadaasa is a famous Kannada poet, philosopher and social reformer. He was a Shepherd chieftain, king of a small province and after a bitter battle with his enemies gave up his post and spent rest of his life in total devotion to the Lord.  He lived during the 16th century and was a contemporary of Saint Purandaradasa, who has composed several thousand kritis (compositions) and revered as the founder of the present Karnatic style of music.  Saint Thyagaraja, who lived after Saint Purandaradaasa and Kanakadaasa's time further enriched the Karnatic style of music. Contribution of these great men to music and literature cannot be described in words and deserves to be written in golden letters.

Legend has it that when Kanakadaasa was badly wounded in the war and about to die, Lord Balaji appeared in his dream state and brought to him to life subject to the condition that he would give up his state and become a Bhakta (devotee) of the Lord.  Kanakadaasa spent his later years in total devotion. He was with Saint Vyasaraja, Raajaguru of Sri Krishnadevaraaya, the Vijayanagar King. Towards the later part of his life, he traveled all over South India including Tirupathi, Udupi and many other places. He has composed several hundred Devaranaamas (songs in the praise of the Lord) as well as songs with social reform as the goal. His major works are Mohana Tarangini, Hari Bhakti Saara, Rama Dhanya Charitre and Nala Charitre. His works have great literary value and long lasting impact on the society. He himself faced severe persecution from a section of the society but overcame the difficulties with his patience and perseverance. Some of his compositions are in the form of riddles and known as "Kanaka's Mandige", the word Mandige meaning a sweet dish cooked on a hot earthen pot (like tandoori rotis made in the hot oven).  The item is difficult to prepare but very tasty to eat. Some of Kanakadaaasa's writings are difficult to comprehend and require deep knowledge of mythology and philosophy to solve and understand them.  Some of his other writings are in very simple language and can be understood by one and all as well.  His Rama Dhanya Charitre needs a special mention and is the story of an imaginary conflict between two corns, Ragi and Paddy, and their dispute solved by Srirama. The story is symbolic of class struggle of those times and upholds the dignity of labour and the philosophy that the working class is the real backbone of the society and not the elite class.

Legends have it that once Lord Thimmappa (Balaji of Tirupathi) told Kanaka in his dream to come over to Thirupathi. Balaji appeared in the dream of the Dharmadarshi (person in-charge of the temple affairs) that one of his greatest devotees is coming to have his Darshan and he should be received with respect and proper arrangements be made for his stay. Balaji is known as the Lord of the Seven Hills (Saptagirivaasa in sanskrit and Edukundalavaada in Telugu) and in those days one had to climb the hills on foot to reach the main temple on the top of the hills. There is a practice of receiving VIPs in Tirupati by symbolically presenting the keys to the temple. The temple keys (or their replica) are carried in a palanquin with full honour. Dharmadarshi and his associates were coming down the hill with the palanquin of temple keys and enquiring with people going up the hill as to whether anyone has seen the Saint Kanakadaasa climbing the hill.  Kankadaasa lived a simple life and was climbing the hill with his Ekanaada (one stringed musical instrument) and singing songs in the praise of the Lord.  In the middle of the hill Dharmadarshi was enquiring with all devotes climbing the hills whether they saw Saint  Kanakadaasa. Since he kept a low profile, nobody knew him.  Dharmadarshi asked Kanaka himself whether he saw Kanakadaasa climbing the hill. Kanakadaasa replied in the affirmative. Dharmaadhikari asked him where he was.  Kanaka replied; "Ahead of those who are behind him and Behind those who are ahead of him".  Dharmadarshi could not understand the deep meaning of Kanaka's words and felt he was a mad fellow and went further down the hill in search of the saint. Unable to find him he came back and went home. Kanaka himself climbed the hill, could not find any food and accommodation and slept in some corner of the temple.

In the night Lord Balaji appeared in the dream of the Dharmadarshi and admonished him for ignoring his commands. Dharmadarshi was told that the person who answered him in a riddle was himself Saint Kanakadaasa. Woken up after the dream,  Dharmadarshi and his assistants searched the Saint in the middle of the night, apologised to him and thereafter made suitable arrangements for his stay and darshan of the Lord. The saint lived in Tirupati for some time and made many compositions in the praise of Lord Balaji.

What Saint Kanakadaasa said was an example of his philosophical outlook. It was relativity explained much before Issac Newton, nearly a century before. As the Saint said, we are all younger to those who are older than us and older than those who are younger to us;  We are the followers of our leaders and leaders of our followers and marching on the journey of life Ahead of those behind us and Behind those who are ahead of us.

Friday, September 30, 2011

Maarjaala Nyaya and Markata Nyaya


We saw Leaders and Followers. We saw Elders and Youngsters. Both are relative. Just like relatives. A close relative may be kept far far away. A distant relative may be a closest friend. What about those Ahead of us and are Behind us? There is a saying that there is no tallest tree in the world. Technically there should be one and I was shown one such tree in Redwood National Park in California. But when you actually start the search you will always find a bigger tree. 


In philosophy, there are many arguments about the relation between Bhakta (Soul or Devotee) and Bhagavanta (The Lord or God whatever). In fact philosophy probably only means argument, as it is based purely on Logic. If argument is removed from Philosophy nothing will be left. Bhaktas are divided into two categories. They have to be divided, because we believe in divide and rule. To understand the two categories of Bhaktas, we have to understand Maarjaala Nyaya and Markata Nyaya.


What is so special about these Nyayas? Maarjaala is the Sanskrit word for Cat. Markata in Sanskrit means Monkey. Translated it becomes Cat Nyaya and Monkey Nyaya. To understand this, we have to observe how cats and Monkeys handle their little ones. When you closely observe the difference between Cats handling kittens and Monkeys handling baby monkeys (I am told there is no better word for baby monkeys!). Though both appear to be the same, the difference is very clear when closely observed.

Whenever a cat moves around with the kittens, it carries the young ones in its mouth. We know cats have sharp canines and any rough handling will result in serious injury to the frail kittens. A little carelessness in holding the kitten firmly will result in dropping the kitten to the ground, especially when the mother cats jump around. But the mother cat does take care of this. Holds the kitten firmly enough in the mouth so that they do not fall down and at the same time hold gently enough so that the kittens are not injured. Best example for firm and gentle at the same time. Automobile manuals refer to the brake this way. The brake should allow full and free movement of the wheel, but the braking effect should start at the slightest touch of the brake pedal! Kittens have no responsibility at all. Mother cat assumes all the responsibility. This is Maarjaala nyaya.

When the mother monkey carries around baby monkeys, the baby monkey has to hold firmly to the belly of mother monkey. Mother monkey keeps moving and jumping around trees as if it is alone. If the baby monkey does not hold firmly, it will fall down and get seriously injured. Entire responsibility is of the Baby Monkey and mother has no responsibility.  This Markata nyaya.

The Bhaktas or souls are also divided into these two categories. First category comprises of those bhaktas whose entire responsibility is taken up by the Bhagavanta, the lord himself.  They have achieved such a level of Saadhana that the Lord does not want to miss them!  He assumes full responsibility for the souls and is at their beck and call. They are Maarjaala Nyayi bhaktas. All other souls are running behind the Lord  to please him and be with him. Pleasing the Lord is their responsibility and if they fail, they fall. These are Markata Nyayi bhaktas.


There are two famous Beluru in India.  Newer one is near Calcutta and is the headquarters of Ramakrishna Mission. The original famous Belur is about 37 kms from Hassan and 233 kms from Bangalore. The old name for Belur was Veelapuri. Velapuri and Dorasamudra (now called Halebeedu which is 16 kms from Belur) were the capital cities of the Hoysala Kings. Belur's Channa Keshava temple and Halebid's Hoysaleswara-Shantaleswara temples are nearly 900 years old and are fine examples of Hoysala architecture. Anybody visiting Karnataka and Bangalore should not miss these temples. These temples have made Hoysala King Vishnuvardhana and his Queen Shantala Devi immortal. Beauty of these temple carvings cannot be expressed in words and they are to be seen to be believed. Both places can be visited from Bangalore in one day and there are regular daily tours by Karnataka Tourism and private operators.

There is a street next to the Channa Keshava temple in Belur, called Vaikhunta Daasa street. One saint by name Vaikhunta Dasa (Dasa means servant of the Lord) lived here in the 16th century. He was a contemporary of Saint Purandara Dasa and Saint Kanaka Dasa who lived in the golden period of Vijayanagar empire and King Krishnadevaraya.


Saint Kanakadaasa, one of the foremost writer, composer and social reformer of Karnataka came to Belur once wanting to have darshan of Lord Channa Keshava (meaning handsome Vishnu). He also wanted to see Saint Vaikhuntadaasa. It was nearly midnight when he arrived in Belur. He reached Vaikhuntadasa's house and being unwilling to wake up Vaikhuntadasa, slept outside the main door of the house. Early in the morning Vaikhuntadasa opened the door and found Saint Kanakadasa sleeping near the door. He felt very sad and asked Kanakadasa why he did not wake him up in the night. Kanakadasa said he did not want to disturb the sleeping Vaikhuntadasa. Vaikhuntadasa told Kanakadasa: "What have you done Sir? You are a Maarjalanyayi. I am only a Markatanyayi You are far ahead of me in Saadhana. Your sleeping outside my door will make the Lord go further away from me!". Saint Kanakadaasa is said to have comforted Saint Vaikhuntadasa with kind words and stayed with him for many days, accepting his hospitality.

If we start as Markata Nyayi now, one day we may reach the level of Maarjala Nyayi some day.