Wednesday, October 8, 2025

ಚರ್ಮಾ೦ಬರ

Best 50+ Lord Shiva Images | God Shiva HD Pictures | Hindu ...

ಅರವತ್ತು  ವರುಷಗಳಿಗೂ ಹಿಂದಿನ ಮಾತು. 

ಅದೊಂದು ಅವಿಭಕ್ತ ಕುಟುಂಬ. ತುಂಬಿದ ಮನೆಗೆ ಒಂದು ಉತ್ತಮ ಉದಾಹರಣೆ. ಹಿರಿಯ ವಯಸ್ಸಿನ ತಾಯಿಯ ಜೊತೆಯಲ್ಲಿ ಅರವತ್ತು ವರುಷಗಳ ಆಸು-ಪಾಸಿನ ಅಣ್ಣ-ತಮ್ಮಂದಿರು. ಅವರ ಹೆಂಡತಿ-ಮಕ್ಕಳು-ಸೊಸೆಯರು-ಮೊಮ್ಮಕ್ಕಳು. ಎಲ್ಲರೂ ಒಟ್ಟಾಗಿ ಒಂದು ಸೂರಿನ ಕೆಳಗೆ ಜೀವನ ನಡೆಸುವ ಸುಯೋಗ. ಈಗ ಅಂತಹ ಸಂಸಾರಗಳು ಕಾಣುವುದು ಕಷ್ಟ. ಅವರ ಮನೆಗೆ ಬಂದು ಹೋಗುವ ನಮ್ಮಂತಹ ಮಕ್ಕಳಿಗೆ ಅದೊಂದು ಪೂರ್ತಿಯಾಗಿ ಅರ್ಥವಾಗದ ವ್ಯವಸ್ಥೆ. ಮೊದಮೊದಲಿಗೆ ಯಾರು ಯಾರ ಮಕ್ಕಳು ಅನ್ನುವುದೂ ಸರಿಯಾಗಿ ಗೊತ್ತಾಗದು. ಹೀಗೆ ಆಗಾಗ ಬಂದು ಹೋಗುವ ನಮ್ಮ ಮೇಲೆ ಆ ಕುಟುಂಬದ ಎಲ್ಲರ ಪ್ರೀತಿ ಒಂದೇ ಸಮ. ಮನೆಗೆ ಬಂದು ನಾಲ್ಕಾರು ದಿನವಿದ್ದರೂ ಹೊರಡುವ ದಿನ "ಈಗೇನು ಅವಸರ. ಇನ್ನೂ ಒಂದೆರಡು ದಿನ ಇದ್ದು ಹೋಗಬಹುದಲ್ಲ" ಎನ್ನುವ ಮಾತು. ಯಾವ ಸಮಯ, ಸಂದರ್ಭದಲ್ಲೂ ಮನಸ್ಸಿಗೆ ದುಗುಡ ಉಂಟುಮಾಡುವ ಪರಿಸ್ಥಿತಿ ಇಲ್ಲ. ಅಂತಹ ಸುಂದರ ವಾತಾವರಣ. 

ನಾವು ಬೆಳಿಗ್ಗೆ ಸರಿಯಾಗಿ ಕಣ್ಣು ಬಿಡುವ ಸಮಯಕ್ಕಾಗಲೇ ಕೆಲಸಕ್ಕೆ ಹೋಗಿರುವವರು ಕೆಲವರು. ತಯಾರಾಗಿ ಶಾಲೆಗಳಿಗೆ ಹೊರಟಿರುವ ಮಕ್ಕಳು. ಅಡಿಗೆ ಮನೆಯಲ್ಲಿ ಸದಾ ಉರಿಯುತ್ತಿರುವ ಒಲೆಗಳು. ಯಾರು ಯಾರ ಉಪಚಾರ, ಯಾಗಕ್ಷೇಮ ನೋಡುತ್ತಿದ್ದಾರೆ ಎನ್ನುವುದು ತಿಳಿಯದು. ಒಟ್ಟಿನಲ್ಲಿ ಎಲ್ಲರೂ ಹಂಚಿಕೊಂಡು ಕೆಲಸಗಳನ್ನು ತೂಗಿಸುವವರು. ಒಬ್ಬರ ಕಾರ್ಯಕ್ರಮ ಇನ್ನೊಬ್ಬರಿಗೆ ಗೊತ್ತು. ಸರತಿಯಂತೆ ಸ್ನಾನದ ಕೋಣೆಯ ಉಪಯೋಗ. ಯಾರೋ ಬಾವಿಯಿಂದ ನೀರು ಸೇದಿ ತುಂಬುವರು. ಮತ್ಯಾರೋ ಉರುವಲು ಕಟ್ಟಿಗೆ ಜೋಡಿಸಿಡುವವರು. ಬೇಯಿಸುವವರೊಬ್ಬರು. ತೋಡಿ ಬಡಿಸುವವರೊಬ್ಬರು. ತಾಟು ತೆಗೆದು ಸಾರಿಸುವವರೊಬ್ಬರು. ಹೀಗೆ ನಡೆಯುವುದು. ಪ್ರತಿದಿನ. 

*****

ಅಣ್ಣ ಆ ವೇಳೆಗಾಗಲೇ ಲೌಕಿಕದಿಂದ ಅರ್ಧ ನಿವೃತ್ತ. ಸರಕಾರೀ ಕೆಲಸವೆಂದಲ್ಲ. ಒಟ್ಟಿನಲ್ಲಿ ಲೌಕಿಕದಿಂದ ವಿಮುಖ. ಕೃಷಿ ಭೂಮಿಯಿಂದ ಬಂದ ಬೆಳೆ, ಆದಾಯದಿಂದ ಜೀವನ. ಮತ್ತೆ ಅಲ್ಲಲ್ಲಿ ಸ್ವಲ್ಪ ಆದಾಯ. ಮಕ್ಕಳು ವಿದ್ಯಾವಂತರಾಗಿ ಉದ್ಯೋಗ ಹಿಡಿದಮೇಲೆ ಒಂದಷ್ಟು ಒತ್ತಾಸೆ. ಹೀಗೆ ಜೀವನ ನಿರ್ವಹಣೆ. ಅರ್ಧ ವಿರಕ್ತರಾದ ಮೇಲೆ ಗಮನ ಮುಂದಿನ ಸಾಧನೆಯ ಕಡೆಗೆ. ಬೆಳಗಿನ ಅರ್ಧ ಭಾಗ ಪೂಜೆ-ಪುನಸ್ಕಾರಗಳಿಗೆ ಮೀಸಲು. ನಂತರದ ಸಮಯ ಸುತ್ತ-ಮುತ್ತಲಿನ ಅವಿದ್ಯಾವಂತ ರೈತಾಪಿ ಜನರ ಕೆಲಸ-ಕಾರ್ಯಗಳಲ್ಲಿ ಸಹಯೋಗ. ಸಂಜೆಯ ಸಮಯ ಕುಟುಂಬದ ಪರಂಪರೆಯಿಂದ ಬಂದ ಗ್ರಂಥಗಳ ವಾಚನ ಮತ್ತು ಅಧ್ಯಯನ. ರಾತ್ರಿ ಅಲ್ಪ ಉಪಹಾರಕ್ಕೆ ಮೊದಲು ಒಂದು ಸಣ್ಣ ಪೂಜೆ. ದೊಡ್ಡ ಪಾರಾಯಣ. ನಂತರ ರಾತ್ರಿಯ ವಿಶ್ರಾಂತಿ. ಹೀಗೆ ದಿನಚರಿ. 

ತೊರವೆಯ ರಾಮಾಯಣ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಶ್ರೀಮದ್ಭಾಗವತ ಮುಂತಾದ ಗ್ರಂಥಗಳ ಭಾಗಗಳ ವಾಚನ ಮತ್ತು ವ್ಯಾಖ್ಯಾನ ಸಂಜೆಯ ಹೊತ್ತು ನಡೆಯುವುದು. ಸುತ್ತ-ಮುತ್ತಲ ಹತ್ತಾರು ಜನರು ಆ ಸಮಯಕ್ಕೆ ತಪ್ಪದೇ ಬರುವರು. ಎಲ್ಲವೂ ಕ್ರಮವಾಗಿ ನಡೆಯಬೇಕು. ಪ್ರತಿಯೊಂದು ಗ್ರಂಥ ವಾಚನ ಪೂರ್ತಿಯಾದ ಮೇಲೆ ಅದಕ್ಕೊಂದು "ಮಂಗಳ" ಕಾರ್ಯಕ್ರಮ. ಸಮಾರಂಭ ಮತ್ತು ಸಂತರ್ಪಣೆ. ಕೆಲವೊಮ್ಮೆ ಅವುಗಳಲ್ಲಿ ಭಾಗವಹಿಸಲು ಬಾಲಕರಾದ ನಮಗೂ ಅವಕಾಶ. ಹಬ್ಬದ ವಾತಾವರಣ. ಅವುಗಳ ಪೂರ್ತಿ ಅರ್ಥವ್ಯಾಪ್ತಿ ನಮಗೆ ಗೊತ್ತಾಗದಿದ್ದರೂ ಏನೋ ಒಂದು ವಿಶಿಷ್ಟ ಅನುಭವ. 

ತಮ್ಮ ಇದಕ್ಕೆ ವಿರುದ್ಧ. ಲೌಕಿಕದಲ್ಲಿ ಮಗ್ನ. ಎಲ್ಲರೂ ವಿರಕ್ತರಾಗಿ ಕುಳಿತರೆ ಜೀವನ ನಡೆಯಬೇಕಲ್ಲ. ಕೃಷಿ ಚಟುವಟಿಕೆ ಮತ್ತು ಸುತ್ತಲಿನ ಜನರ ಕೆಲಸ-ಕಾರ್ಯಗಳಿಗೆ ಸಹಕಾರ. ಮನೆಯ ಇತರ ಕಾರ್ಯಕ್ರಮಗಳಿಗೆ ಪೂರ್ತಿ ಬೆಂಬಲವಿದ್ದರೂ ಹೆಚ್ಚಿನ ಸಮಯ ಹೊರಗಡೆ ವ್ಯವಹಾರಗಲ್ಲಿ ಕಳೆಯುವುದು. ಸ್ವತಃ ಅಧ್ಯಯನ-ವಾಚನಗಳಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ ಅನೇಕ ಗಹನ ವಿಚಾರಗಳಲ್ಲಿ ಆಳವಾದ ಪಾಂಡಿತ್ಯ. ಅವುಗಳ ವಿಷಯದಲ್ಲಿ ಮಾತಿಗೆ ಸಿಕ್ಕರೆ ಅಪರೂಪದ ಸಂಗತಿಗಳನ್ನು ಹೊರತಂದು ಇತರರನ್ನು ಚಕಿತರನ್ನಾಗಿಸುವ ಚತುರತೆ. 

***** 

ದೊಡ್ಡವರಿಂದ ತೊರವೆ ರಾಮಾಯಣ ವಾಚನ-ವ್ಯಾಖ್ಯಾನ ಸರಣಿ ಪೂರ್ತಿಯಾದ ನಂತರ ಒಂದು "ಮಂಗಳ ಕಾರ್ಯಕ್ರಮ". ದಸರೆಯ ರಜೆಯ ನಿಮಿತ್ತ ನಮಗೂ ಶಾಲೆಯಿಂದ ಬಿಡುವಿನ ಕಾರಣ ಆ ಮಂಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ಮೂರು ದಿನದ ಬಿಡಾರ ಅವರ ಮನೆಯಲ್ಲಿ. ಮೊದಲನೆಯ ದಿನ ಭಾನುವಾರ. ಬೆಳಿಗ್ಗೆ ರಾಮಾಯಣದ ಕಡೆಯ ಭಾಗದ ವಾಚನದಿಂದ ಕಾರ್ಯಕ್ರಮ ಕೊನೆಯಾಯಿತು. ನಂತರ ಮಂಗಳದ ಪೂಜೆ ಮುಂತಾದುವಗಳ ನಂತರ ಸಂತರ್ಪಣೆ. ಸಂಜೆ ಏನೂ ಇಲ್ಲದೆ ಸುಮ್ಮನೆ ಇರುವಂತಿಲ್ಲ. ವೃಥಾ ಕಾಲಹರಣ ಸಲ್ಲದು. ಆದ್ದರಿಂದ "ಕುಮಾರವ್ಯಾಸ ಭಾರತ ಕಥಾಮಂಜರಿ" ವಾಚನ ಪ್ರಾರಂಭ!

ಅವರ ವಾಚನ ಕಾರ್ಯಕ್ರಮದಲ್ಲಿ ಒಂದು ವಿಶೇಷತೆ. ಪ್ರತಿ ಪದ್ಯದ ಓದುವಿಕೆಯ ನಂತರ ಅವರೇ ಕೆಲಕಾಲ ಅದರ ಅರ್ಥವ್ಯಾಪ್ತಿ ಮತ್ತು ಸಂಬಂಧಿಸಿದ ವಿಷಯಗಳ ವಿವರಣೆ ಮಾಡುವರು. ನಂತರ ಅಲ್ಲಿದ್ದ ಕೇಳುಗರಿಗೆ ಪ್ರಶ್ನೆ ಕೇಳುವ ಅವಕಾಶ. ಆಗ ಅವರೋ, ಅಲ್ಲಿರುವ ಬೇರೆ ಯಾರೋ ಉತ್ತರ ಹೇಳಬಹುದು. ಹೀಗಾಗಿ ಅನೇಕರ ತಿಳುವಳಿಕೆಯ ವಿನಿಮಯಕ್ಕೆ ಅವಕಾಶ. ಸ್ವತಃ ಕ್ರಮವಾಗಿ ವಿದ್ಯಾಭ್ಯಾಸ ಮಾಡದಿದ್ದರೂ ಸಭಾಸದರ ಮಾತುಗಳು ಅಚ್ಚರಿ ಮೂಡಿಸುವಂತೆ ಇರುವುವು. 'ಕವಿರಾಜಮಾರ್ಗ" ಕರ್ತೃವಿನ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ಎನ್ನುವ ಉದ್ಗಾರದ ಪ್ರತ್ಯಕ್ಷ ಅನುಭವ. 

ಕುಮಾರವ್ಯಾಸ ಭಾರತ ವಾಚನದ ಮೊದಲ ದಿನ. ಆದಿ ಪರ್ವದ "ಪೀಠಿಕಾ ಸಂಧಿ" ವಾಚನ. ಎರಡನೆಯ ಪದ್ಯ ಪಾರ್ವತೀರಮಣನಾದ ಪರಶಿವನ ಸ್ತುತಿ. ಆ ಪದ್ಯ ಹೀಗುಂಟು:

ಶರಣಸಂಗವ್ಯಸನ ಭುಜಗಾ 
ಭರಣನಮರ ಕಿರೀಟಮಂಡಿತ 
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ 
ಕರಣರ್ನಿರ್ಮಲ ಭಜಕರಘ ಸಂ 
ಹರಣ ದಂತಿ ಚಮೂರು ಚರ್ಮಾ೦
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ 

ಶಂಭುವೋ ಎಲ್ಲರಿಗೂ ಪ್ರಿಯನು. "ಚರ್ಮಾ೦ಬರ" ಎನ್ನುವುದರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅದರ ಹಿಂದೆ ಇರುವ "ದಂತಿ" ಮತ್ತು "ಚಮೂರು" ಪದಗಳ ಚರ್ಚೆಯಾಯಿತು. ದಂತಿ ಎಂದರೆ ಸಂಸ್ಕೃತದಲ್ಲಿ ಆನೆ ಎಂದು. ದಂತವುಳ್ಳದ್ದು ದಂತಿ. ಆನೆಯ ದಂತಗಳು ಎಲ್ಲರಿಗೆ ಗೊತ್ತು. ಗಜಾಸುರ ಎನ್ನುವ ರಾಕ್ಷಸ ಆನೆಯ ರೂಪದಲ್ಲಿ ಸಜ್ಜನರಿಗೆ ತೊಂದರೆ ಕೊಡುತ್ತಿದ್ದ. ಶಂಕರನು ಅವನನ್ನು ಕೊಂದು ಅವನ ಚರ್ಮವನ್ನು ಸುಲಿದು ಮೈಗೆ ಸುತ್ತಿಕೊಂಡ ಎಂದು ಕಥೆ. ಚಮೂರು ಅನ್ನುವುದು ಹಿಮಾಲಯದಂತಹ ಪ್ರದೇಶಗಳಲ್ಲಿ ಕಂಡುಬರುವ ಜಿಂಕೆಯ ರೀತಿಯ ಒಂದು ಮೃಗ. "ಚಮರೀ ಮೃಗ" ಅನ್ನುತ್ತಾರೆ ("ಯಾಕ್" ಮೃಗ). ಅದರ ಚರ್ಮವೂ ಅವನಿಗೆ ಆಗಬಹುದು. ಪಟ್ಟೆ-ಪೀತಾಂಬರಗಳ ಹವ್ಯಾಸವಿಲ್ಲ. ಶ್ರೀಹರಿಯಂತೆ 'ಸಪೀತವಸ್ತ್ರ" ಅಥವಾ "ಕನಕಾಂಬರಧಾರಿ" ಅಲ್ಲ. ಹೀಗೆ ಅರ್ಥವ್ಯಾಪ್ತಿ. ಸದಾಶಿವನು ವೈರಾಗ್ಯ ಮೂರ್ತಿ. ಬೂದಿಯೇ ಆಭರಣ. ಉಡುಗೆ-ತೊಡುಗೆಗಳಲ್ಲಿ ಆಸಕ್ತಿ ಇಲ್ಲ. ಹೀಗೆ ಚರ್ಚೆ ನಡೆಯಿತು. 

ಮೊದಲ ಎರಡು ಪದ್ಯಗಳ ವಾಚನ-ಚರ್ಚೆಯಲ್ಲಿ ಅಂದಿನ ಕಾರ್ಯಕ್ರಮ ಮುಗಿಯಿತು. 

*****

ಮಾರನೆಯ ದಿನ ಸೋಮವಾರ. ಬೆಳಿಗ್ಗೆ ಎದ್ದಾಗ ಅಪರೂಪಕ್ಕೆ ಚಿಕ್ಕವರು (ತಮ್ಮ) ಸಿಕ್ಕರು.  ಸೋಮವಾರ ಪರಶಿವನ ದಿನ. ಅವಧೂತರೊಬ್ಬರು ಪಕ್ಕದ ಗುಡ್ಡದ ಮೇಲೆ ಒಂದು ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರದು ಸೋಮವಾರ ವಿಶೇಷ ಪೂಜೆ. ಇವರು ಹೊರಟಿದ್ದರು. ನನ್ನನ್ನು ಕಂಡು ನಿಂತರು. 

"ಈದಿನ ಬೆಳಿಗ್ಗೆ ಏನು ನಿನ್ನ ಕಾರ್ಯಕ್ರಮ?'

"ಏನಿಲ್ಲ. ಸುಮ್ಮನೆ ಕಾಲ ಕಳೆಯುವುದು. ಸಂಜೆಯ ವಾಚನದವರೆಗೆ"

"ಗುಡ್ಡದ ಅವಧೂತರ ಕಾರ್ಯಕ್ರಮಕ್ಕೆ ಬರಬಹುದಲ್ಲ?"

"ಬರಬಹುದಾದರೆ ಬರುತ್ತೇನೆ"

"ಬೇಗ ತಯಾರಾಗಿ ಬಾ"

ಅಲಂಕಾರ ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ. ತಕ್ಷಣ ಹೊರಟೆ. ಅವರೊಡನೆ ಮಾತಾಡುತ್ತಿದು ಬಹಳ ಕಡಿಮೆ. ದೊಡ್ಡವರಂತೆ ಸಲಿಗೆ ಇರಲಿಲ್ಲ. ಸ್ವಲ್ಪ ಸಂಕೋಚವೇ. ಗುಡ್ಡಕ್ಕೆ ಸುಮಾರು ಇಪ್ಪತ್ತು ನಿಮಿಷಗಳ ನಡಿಗೆ. ಹೆಜ್ಜೆ ಹಾಕಿದೆವು. 

"ನಿನ್ನಿನ ವಾಚನದಲ್ಲಿ ಏನು ವಿಶೇಷ?"

"ಮುಖ್ಯವಾಗಿ "ಚರ್ಮಾ೦ಬರ" ಎನ್ನುವುದರ ಬಗ್ಗೆ ಚರ್ಚೆ ನಡೆಯಿತು"

"ಚರ್ಮಾ೦ಬರ" ಎನ್ನುವುದರಲ್ಲಿ ಇನ್ನೂ ಏನಾದರೂ ವಿಶೇಷವಿದೆಯೋ?"

"ಅಂದರೆ ಅರ್ಥವಾಗಲಿಲ್ಲ"

"ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಕೇಳಿದ್ದೆಯಲ್ಲ?"

"ಕೇಳಿದ್ದೇನೆ"

"ಬುದ್ಧಿ ಇರುವುದು ಎಲ್ಲಿ?"

"ತಲೆಯಲ್ಲಿ. ಮೆದುಳಿನಲ್ಲಿ"

"ಮನಸ್ಸು ಇರುವುದು ಎಲ್ಲಿ?"

ಉತ್ತರ ಗೊತ್ತಿರಲಿಲ್ಲ. ಸುಮ್ಮನಾದೆ. 

"ನನ್ನ ಮನಸ್ಸು ಅನ್ನುತ್ತೇವೆ. ಅದು ನಮ್ಮ ಬಳಿಯೇ ಇರಬೇಕಲ್ಲ?"

"ಹೌದು"

"ಹಾಗಿದ್ದರೆ, ಅದಕ್ಕೆ ನಮ್ಮ ದೇಹದಲ್ಲಿ ಎಲ್ಲಿ ಜಾಗ? ಹೃದಯ ಎದೆ ಗೂಡಿನ ಎಡದಲ್ಲಿದೆ ಅನ್ನುತ್ತೇವೆ. ಮಾತು ನಾಲಗೆಯಲ್ಲಿ ಅನ್ನಬಹುದು. ಬುದ್ಧಿ ಮೆದುಳಿನಲ್ಲಿದೆ. ಅದು ತಲೆಯಲ್ಲಿದೆ ಅನ್ನುತ್ತೇವೆ. ಮನಸ್ಸಿಗೆ ಎಲ್ಲಿ ಜಾಗ?"

"ಅದೂ ತಲೆಯಲ್ಲಿಲ್ಲವೇ?'

"ಮನಸ್ಸು ಒಂದು ಕಡೆ ಸುಮ್ಮನೆ ಕೂಡುವುದಲ್ಲ. ಮನಸ್ಸು ಸರ್ವವ್ಯಾಪಿ. ಅದು ದೇಹದಲ್ಲೆಲ್ಲಾ ಆವರಿಸಿದೆ"

"ಸರಿ ಅನ್ನಿಸುತ್ತದೆ"

"ಮಹಾರುದ್ರದೇವರು ಮನೋಭಿಮಾನಿ. ಮನಸ್ಸನ್ನು ನಿಯಂತ್ರಿಸುವವರು. ಆದ್ದರಿಂದ ಅವರು ಮನಸ್ಸು ಇರುವ ಎಲ್ಲೆಡೆ, ಅಂದರೆ ನಮ್ಮ ದೇಹದ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದ್ದಾರೆ"

"............... "

"ದೇಹದ ಎಲ್ಲೆಡೆ ಅವರು ವ್ಯಾಪಿಸಿರುವುದರಿಂದ ಅವರ ಹೊರಗಡೆ ಇರುವುದು ಏನು?"

"ನಮ್ಮ ದೇಹದ ಹೊರಗಡೆ, ಎಲ್ಲಕಡೆ ನಮ್ಮ ಚರ್ಮವಿದೆ"

"ಅಂದರೆ ಅವರು ಧರಿಸಿರುವುದು ನಮ್ಮ ಚರ್ಮವೇ ಅನ್ನಬಹುದೇ?"

"ಹಾಗೆ ಹೇಳಬಹುದು"

"ಆದ್ದರಿಂದ ಮನೋಭಿಮಾನಿ ರುದ್ರ ದೇವರು "ಚರ್ಮಾ೦ಬರ" ಅಲ್ಲವೇ?"

"ಹೌದು. ಇದು ನನಗೆ ಹೊಳದೇ ಇರಲಿಲ್ಲ"

"ಸಾಮಾನ್ಯವಾಗಿ ಹೊಳೆಯುವುದಿಲ್ಲ. ಒಮ್ಮೆ ಅವಧೂತರು ನನಗೆ ಹೀಗೆ ಹೇಳಿದರು"

"ಹಾಗಿದ್ದರೆ ನಿನ್ನೆ ಮಾಡಿದ ಚರ್ಚೆ ಅರ್ಥ ತಪ್ಪೇ?"

"ಖಂಡಿತವಾಗಿಯೂ ತಪ್ಪಲ್ಲ. ಆದರೆ, ಅದು ಹೊರಗಿನ, ಅಂದರೆ ಬ್ರಹ್ಮಾಂಡದ ದೃಷ್ಟಿಯ ಅರ್ಥ. ಇದು ಒಳಗಿನ, ಅಂದರೆ ಪಿಂಡಾಂಡದ ದೃಷ್ಟಿಯ ಅರ್ಥ"

"ಬಲು ಚಮತ್ಕಾರಿಕವಾಗಿದೆ"

"ಮೊದಲು ಹಾಗೆನ್ನಿಸುವುದು. ತಿಳಿದವರ ಜೊತೆ ಸಂಗ ಮಾಡಿದಾಗ ಅನೇಕ ಒಳ ಅರ್ಥಗಳು ತೆರೆದುಕೊಳ್ಳುತ್ತವೆ"

ಅವಧೂತರ ಆಶ್ರಮ ಬಂದಿತು. ಒಳಗೆ ಹೋದೆವು. 

*****

ಯಾರಾದರೂ "ಕುಮಾರವ್ಯಾಸ ಭಾರತ ಓದಿದ್ದೀರಾ?" ಎಂದು ಕೇಳಿದರೆ "ಒಹೋ, ನಾಲ್ಕು ಬಾರಿ ಓದಿದ್ದೇನೆ" ಎನ್ನುತ್ತೇವೆ. ಓದಿರಬಹುದು. ನಿಜ. ಎಷ್ಟು ಅರ್ಥವಾಯಿತು? ಒಂದು ಪದ್ಯದ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ತಿಳಿದವರು ಮಾಡುತ್ತಾರೆ. ನಿಜವಾಗಿ ನಮಗೇನು ಗೊತ್ತು? ಎಷ್ಟು ಗೊತ್ತು? 

ಅಧ್ಯಯನ ಹೆಚ್ಚಿದಂತೆಲ್ಲಾ ಅರಿವು ಬೆಳೆದು ಅಹಂಕಾರ ಕ್ರಮೇಣ ಕರಗವುದು. ತಿಳಿದಿರುವುದು ಗುಲಗಂಜಿಯಷ್ಟು. ಎದುರಿಗಿರುವುದೋ ಹಿಮಾಲಯ!

Saturday, October 4, 2025

ಹತ್ತು ರೀತಿಯ ಮಾತಿನ ದೋಷಗಳು


ಕೆಲವರು ಮಾತನಾಡಿದರೆ ಚೆನ್ನ. ಇನ್ನಷ್ಟು ಕೇಳಬೇಕು ಅನಿಸುವುದು. ಮತ್ತೆ ಕೆಲವರು ಸುಮ್ಮನಿದ್ದರೆ ಚೆನ್ನ. ಮಾತನಾಡುವುದು ಯಾವಾಗ ನಿಲ್ಲಿಸುತ್ತಾರೋ ಎಂದು ಕಾಯಬೇಕಾಗುವುದು. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದರೆ ಬಲು ಚೆನ್ನ. ಅತಿಯಾಗಿ ಮಾತಾಡಿದರೆ ಕಷ್ಟ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಆಗಬಾರದು. ಏನು ಹೇಳಬೇಕೆಂದಿದ್ದಾರೋ ಅದನ್ನು ಸರಿಯಾಗಿ, ಪೂರ್ತಿಯಾಗಿ ಹೇಳದೆ ಕಡಿಮೆ ಮಾತಾಡಿದರೆ ಇನ್ನೂ ಕಷ್ಟ. "ಮಾತೇ ಆಡದಿದ್ದರೆ ಅರ್ಥವಾಗುವುದಾದರೂ ಹೇಗೆ?" ಎಂದು ಉದ್ಗರಿಸುವುದು ಆಗಾಗ ಅಲ್ಲಲ್ಲಿ ಕೇಳಿ ಬರುವುದು. 

"ಮಾತು ಬೆಳ್ಳಿ; ಮೌನ ಬಂಗಾರ" ಎಂದೊಂದು ಗಾದೆ. ಆದರೆ "ಮೌನದಿಂದಲೇ ಕೊಲ್ಲುತ್ತಾಳೆ" ಎಂದು ಹೇಳುವುದು ಕೇಳಿದ್ದೇವೆ. "ಹರಿತದ ಮಾತಿನಿಂದ ಇರಿಯುತ್ತಾನೆ" ಎಂದು ಕೆಲ ಸಂದರ್ಭಗಳಲ್ಲಿ ಹೇಳುವುದೂ ಉಂಟು. ಆಗ ಮಾತು ಕತ್ತಿಗಿಂತಲೂ ಹರಿತ. ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ದುರ್ಯೋಧನನಿಗೆ ಭೀಮಸೇನನ ಬಿರುಸು ಗದೆಯ ಹೊಡೆತಕ್ಕಿಂತ ಮಾತಿನ ಇರಿತ ತಾಳದಾಯಿತು. ದೊಡ್ಡವರ ಸಾಂತ್ವನದ ನುಡಿಗಳು ಅದಕ್ಕೆ ತದ್ವಿರುದ್ಧ. "ಅವರ ಮಾತಿನಿಂದ ಎಷ್ಟೋ ಸಮಾಧಾನವಾಯಿತು" ಎಂದು ಕೆಲವೊಮ್ಮೆ ಅನಿಸುವುದು. "ಅವನೊಡನೆ ಮಾತಾಡಿದ್ದೇ ತಪ್ಪಾಯಿತಲ್ಲ. ಮನಸ್ಸು ಇನ್ನೂ ಉದ್ವಿಗ್ನವಾಯಿತು" ಅನ್ನುವ ಪರಿಸ್ಥಿತಿಗಳೂ ಉಂಟು. ಮಾತಿಗೆ ತೂಕ ಇರಬೇಕು. ತೂಕದ ಮಾತು ಬೇಕು. ಕೆಲವೊಮ್ಮೆ ಮಾತು ಬೇಕು. ಮತ್ತೆ ಕೆಲವೊಮ್ಮೆ ಮಾತೇ ಬೇಡ. 

ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಅನೇಕ ಭೇದಗಳಲ್ಲಿ ಈ ಮಾತನಾಡುವ ಶಕ್ತಿಯೂ ಒಂದು. ಒಂದು ಮಗು ಹುಟ್ಟಿದ ತಕ್ಷಣ ಸಂಭ್ರಮ ಆವರಿಸುತ್ತದೆ. ಆ ಮಗು ತೊದಲು ನುಡಿಗಳನ್ನು ಆಡಲು ಆರಂಭಿಸಿದಾಗ ಇನ್ನೂ ಸಂಭ್ರಮ. ಅರ್ಥವಾಗುವಂತೆ ಮಾತಾಡಿದರೆ ಮತ್ತಷ್ಟು ಸಂತಸ. ಆದರೆ ಜೀವನ ಪೂರ್ತಿ ತೊದಲುತ್ತಾ ಮಾತನಾಡುತ್ತಿದ್ದರೆ ಅದು ಹೇಗೆ? ಅದನ್ನು ಹೆತ್ತ ತಂದೆ-ತಾಯಿಯರಿಗೆ ಅದೊಂದು ಘೋರ ಕಷ್ಟ. ಮಗು ದೊಡ್ಡದಾದರೂ ಮಾತೇ ಬರದಿದ್ದರೆ ಹೇಳಲಾಗದ ವೇದನೆ. ಕಂಡ ಕಂಡ ವೈದ್ಯರಿಗೆಲ್ಲಾ ತೋರಿಸುವುದು ನಡೆಯುತ್ತದೆ. 

ಹೆಸರಾಂತ ನಟ, ನಿರ್ಮಾಪಕ, ನಿರ್ದೇಶಕ ಮನೋಜ ಕುಮಾರನ "ಶೋರ್" ಅನ್ನುವ ಹಿಂದಿ ಚಲನಚಿತ್ರದ ಕಥೆ ಅದೇ. ಅವನಿಗೆ ಹುಟ್ಟಿದ ತನ್ನ ಮಗ ಮಾತಾಡುವುದಿಲ್ಲ ಎಂದು ಆತಂಕ. ಪ್ರಪಂಚದ ಬೇರೆಲ್ಲಾ ಶಬ್ದಗಳೂ ಅವನನ್ನು ಹಿಂಸೆ ಮಾಡುತ್ತವೆ. ಅವನು ಕೇಳಬೇಕೆಂದಿರುವ ಒಂದೇ ಶಬ್ದವೆಂದರೆ ಮಗನ ಮಾತು. ಆದರೆ ಅವನು ಮಾತಾಡುವುದಿಲ್ಲ. ಕಡೆಗೊಂದು ದಿನ ಒಬ್ಬ ವೈದ್ಯರು ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮಾತು ಬರಿಸುತ್ತಾರೆ. ಇನ್ನೇನು ಆಸ್ಪತ್ರೆಗೆ ಹೋಗಿ ಮಗನ ಮಾತು ಕೇಳಬೇಕು ಅನ್ನುವ ಸಮಯ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಪಘಾತ. ಅಪಘಾತದಲ್ಲಿ ತಂದೆಗೆ ಶ್ರವಣ ಶಕ್ತಿ ಹೋಗುತ್ತದೆ. ಅಪ್ಪ ಕಿವುಡನಾಗುತ್ತಾನೆ. ಈಗ ಮಗ ಮಾತಾಡುತ್ತಾನೆ. ಆದರೆ ತಂದೆ ಕೇಳಲಾರ. ಅದೊಂದು ವಿಪರ್ಯಾಸ. 

ಒಟ್ಟಿನಲ್ಲಿ ಮಾತು ಒಂದು ಪ್ರಶ್ನೆಯೇ!
*****

ಹುಟ್ಟಿದಂದಿನಿಂದ ಮಾತು ಹೊರಡದೇ ಇರುವುದು ಒಂದು ರೀತಿಯ ದೋಷ. ಅವರನ್ನು "ಮೂಕ' ಎನ್ನುತ್ತೇವೆ. ಕೆಲವರಿಗೆ ಕಿವಿ ಕೇಳದೆ, ಮಾತು ಬರೆದೇ ಇರುವುದು ಉಂಟು. ಇವರು "ಮೂಕ-ಬಧಿರರು" ಅಥವಾ "ಕಿವುಡು-ಮೂಗರು". ಇದೊಂದು ರೀತಿಯ ದೋಷ. ಹಾಗೆಯೇ ಮಾತನಾಡಬಲ್ಲ ಕೆಲವರಿಗೆ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಕೆಲವರನ್ನು "ಮೂಗಿನಲ್ಲಿ ಮಾತಾಡುತ್ತಾನೆ" ಅನ್ನಬಹುದು. ಏನೋ ಒಂದು ವಿಕಾರ ಅಥವಾ ಕೊರತೆ. "ಎಲ್ಲರಂತೆ ನಾನಿಲ್ಲ" ಎಂದು ಅವರಿಗೆ ದುಃಖ. ಹೆತ್ತವರಿಗೆ "ಇದೇನು, ಹೀಗೆ ಆಯಿತಲ್ಲ?" ಎನ್ನುವ ಚಿಂತೆ. ಕೆಲವರಿಗೆ ಅವರನ್ನು ನೋಡಿ ಅಪಹಾಸ್ಯ ಮಾಡುವ ಗೀಳು. ಉಳಿದವರಿಗೆ ಅವರನ್ನು ಕಂಡಾಗ ಮರುಕ. ಒಟ್ಟಿನಲ್ಲಿ ಏನೋ ಒಂದು "ಸರಿಯಿಲ್ಲ" ಅನ್ನುವ ಸ್ಥಿತಿ. 

ಕೆಲವರಿಗೆ ಮಾತು ಬರದೇ ಪೂರ್ತಿ ಜೀವನ ಹಾಗೆಯೇ ನಡೆಯಬಹುದು. ಮತ್ತೆ  ಕೆಲವರಿಗೆ ಮೊದಲು ಮಾತು ಬರದಿದ್ದರೂ ಮುಂದೆಂದೋ, ಶಸ್ತ್ರ ಚಿಕಿತ್ಸೆಯಿಂದ ಅಥವಾ ಮತ್ತ್ಯಾವುದೋ ಕಾರಣದಿಂದ ಮಾತು ಬರಬಹುದು. ಚೆನ್ನಾಗಿ ಮಾತು ಬಂದು ಜೀವನ ನಡೆಸುತ್ತಿರುವವರಿಗೆ ಮುಂದೆಂದೋ ಮಾತಿನ ತೊಂದರೆ ಬರುವುದೂ ಇದೆ. ತೊದಲುವುದು, ಶಬ್ದ ಸರಿಯಾಗಿ ಹೊರಡದಿರುವುದು, ಆಗಾಗ ಮಾತು ನಿಲ್ಲುವುದು, ಮುಂತಾದುವು ಆಗುತ್ತವೆ. ಅನೇಕ ಕಾಯಿಲೆಗಳಿಂದ ಮಾತು ಹೆಚ್ಚು-ಕಡಿಮೆ ಆಗಬಹುದು. ಕೆಲವರಿಗೆ ಹಗಲೆಲ್ಲಾ ಮಾತು ಸರಿಯಿದ್ದು ಸಂಜೆ ಆಗುತ್ತಿದ್ದಂತೆ ಆಯಾಸದಿಂದ ಮಾತು ತೊದಲಬಹುದು. ಅಪಘಾತಗಳಿಂದ ಮಾತೇ ನಿಂತುಹೋಗಬಹುದು. ಹೀಗೆ ಹಲವು ರೀತಿ. ನಾವು ನಮ್ಮ ಸುತ್ತ-ಮುತ್ತ ಕಂಡಂತೆ. 

ಹೀಗೆ ಮಾತಿನಲ್ಲಿ ವ್ಯತ್ಯಾಸ ಆಗುವುದು ದೈಹಿಕ ಕಾರಣಗಳ ಜೊತೆ ಮಾನಸಿಕ ಮತ್ತು ಬೌದ್ಧಿಕ ಕಾರಣಗಳಿಂದಲೂ ಉಂಟು. ಕೆಲವು ಮಕ್ಕಳಿಗೆ ಹಿಂದೆ ತಮಗೆ ಹೊಡೆತ ಮೊದಲಾದ ಹಿಂಸೆ ಕೊಟ್ಟವರ ಮುಂದೆ ಮಾತು ಹೊರಡುವುದಿಲ್ಲ. ಚೆನ್ನಾಗಿ ತಯಾರಿ ಮಾಡಿಕೊಂಡು ಸಂದರ್ಶನಕ್ಕೆ (ಇಂಟರ್ವ್ಯೂ) ಹೋದವನಿಗೆ ಅಲ್ಲಿ ಕುಳಿತಾಗ ಆತಂಕದಿಂದ ಮಾತು ಹೊರಡದು. ಹೀಗೆ ಹಲವು ವಿಧ. 

*****
ತಿಳಿದವರು "ಹತ್ತು ರೀತಿಯ ಮಾತಿನ ತೊಂದರೆ" ಇವೆ ಎಂದು ಹೇಳುತ್ತಾರೆ. ಇವು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಕಾರಣಗಳು ಒಂದೊಂದರಿಂದ ಅಥವಾ ಎರಡು, ಮೂರು ಸೇರುವುದರಿಂದ ಆಗಬಹುದು. ಇವುಗಳಲ್ಲಿ ಕೆಲವಕ್ಕೆ ಇರುವ ವ್ಯತ್ಯಾಸ ಬಹಳ ತೆಳುವಾದದು. ಒಂದನ್ನು ಇನ್ನೊಂದಕ್ಕೆ ತಪ್ಪಾಗಿ ತಿಳಿಯಬಹುದು.ಈ ಹತ್ತು  ದೋಷಗಳು ಯಾವುವು ಎಂದು ನೋಡೋಣ. 
  1. ಅಜ್ಞಾನ (ತಿಳಿಯದಿರುವುದು): ಏನು ಮಾತನಾಡಬೇಕೆಂದು ತಿಳಿಯದೇ ಮೂಕರಾಗುವುದು. "ಏನು ಹೇಳಬೇಕೆಂದು ಗೊತ್ತಾಗಲಿಲ್ಲ" ಎಂದು ನಂತರ ಅನ್ನಬಹುದು. ಹೀಗೆ ಮಾತನಾಡಿದರೆ ಸರಿಯೋ, ತಪ್ಪೋ ಎನ್ನುವ ಭೀತಿ ಇರಬಹುದು. ಹೇಗೆ ಪ್ರಾರಂಭಿಸಬೇಕು ಎಂದು ಗೊತ್ತಾಗದಿರಬಹುದು.  ವಿಷಯದ ಪರಿಚಯ ಇಲ್ಲದಿರುವುದರಿಂದ ಆಗಬಹುದು. 
  2. ವಿಸ್ಮೃತಿ (ಮರೆವು): ಮೊದಲು ವಿಷಯ ಚೆನ್ನಾಗಿ ತಿಳಿದಿದ್ದರೂ ಮಾತನಾಡಬೇಕಾದಾಗ ನೆನಪು ಕೈಕೊಡುವುದು. ಬಹಳ ತಯಾರಿ ನಡೆಸಿದ್ದರೂ ಬೇಕಿದ್ದಾಗ ಅದು ಹೊಳೆಯಲಿಲ್ಲ. ಒಂದೇ ವಿಷಯವನ್ನು ಹತ್ತಾರು ಬಾರಿ ಪಾಠ ಹೇಳಿದ್ದರೂ ಕೆಲವರಿಗೆ ಈ ಕಾರಣದಿಂದ ತೊಂದರೆ ಆಗುವುದು. ಪಾಠ ಮುಗಿಸಿ ಹೊರಬಂದ ನಂತರ ಅದೇ ವಿಷಯ ಮತ್ತೆ ನೆನಪಿಗೆ ಬರುವುದುಂಟು. 
  3. ಭ್ರಾಂತಿ (ಭ್ರಮೆ): ಕೆಲವು ಲಕ್ಷಣಗಳಿಂದ ಒಂದನ್ನು ಇನ್ನೊಂದಾಗಿ ತಿಳಿಯುವುದು. ಬೆಳ್ಳಗಿರುವುದರಿಂದ ಸುಣ್ಣದ ನೀರನ್ನು ಹಾಲೆಂದು ತಿಳಿಯುವುದು. ಹಗ್ಗವನ್ನು ಹಾವೆಂದು ಭ್ರಮಿಸುವುದು. ಈ ಕಾರಣದಿಂದ ಮಾತಿನಲ್ಲಿ ವ್ಯತ್ಯಾಸ. 
  4. ಸಂಶಯ (ಅನುಮಾನ): ಮಾತಾಡುತ್ತಿರುವ ವಿಷಯದಲ್ಲಿ ಅನೇಕ ಅನುಮಾನಗಳ ಕಾರಣ ಮಾತು ಸರಿಯಾಗಿ ಹೊರಡದಿರುವುದು. ತಲೆಯಲ್ಲಿ ವಿಷಯ ಕಲಸು-ಮೇಲೋಗರ. ಹೀಗೆ ಹೇಳಿದರೆ ಹೇಗೋ? ಹಾಗೆ ಹೇಳಿದರೆ ಹೇಗೋ? ಈ ರೀತಿಯ ಅಭಿವ್ಯಕ್ತಿಯಲ್ಲಿ ಅನುಮಾನ. 
  5. ಅಪಸ್ಮ್ರುತಿ (ತಪ್ಪು ತಿಳಿವಳಿಕೆ): ಭ್ರಾಂತಿಯ ಇನ್ನೊಂದು ರೂಪ. ಸ್ವಲ್ಪವೇ ವ್ಯತ್ಯಾಸ. ರಾಮಣ್ಣನವರ ವಿಷಯ ಗೊತ್ತು. ಭೀಮಣ್ಣನವರ ವಿಷಯವೂ ಗೊತ್ತು. ಆದರೆ ಮಾತಾಡುವಾಗ ಒಬ್ಬರ ಬದಲು ಇನ್ನೊಬರ ವಿಷಯ ಮಾತಾಡುತ್ತಾ ಹೋಗುವುದು. 
  6. ಕ್ಷಯ (ಕಡಿಮೆಯಾಗುವುದು): ಮೊದಲು ಮಾತು ಚೆನ್ನಾಗಿದ್ದರೂ ಮುಂದೆ ಅನೇಕ ಕಾರಣಗಳಿಂದ ಕ್ರಮೇಣ ಮಾತಿನ ಆಳ ಕಡಿಮೆ ಆಗುವುದು. ಶಬ್ದ ಸರಿಯಾಗಿ ಹೊರಡದಿರುವುದು. ಮಾತಾಡುವ ವಿಷಯಗಳು ಕಡಿಮೆಯಾಗುವುದು. ಹೇಳಿದ್ದೇ ಹೇಳುತ್ತಿರುವುದು. ಮುಂತಾದುವು. 
  7. ತಂದ್ರಾ (ಆಲಸ್ಯ): ತಂದ್ರಾ ಪದಕ್ಕೆ ತೂಕಡಿಕೆ ಎಂದು ಒಂದು ಅರ್ಥ. ಮಾತಿನಲ್ಲಿ ತೂಕಡಿಕೆ ಅಂದರೇನು? ಮಾತಿನ ಮಧ್ಯೆ ನಿಂತು ಹೋಗುವುದು. ಮಾತು ಆಡುತ್ತಿದ್ದಂತೆ ಸುಸ್ತಾಗುವುದು. ನಿದ್ದೆಯಲ್ಲಿ ಮಾತಾಡುತ್ತಿರುವಂತೆ ಅಸಂಗತವಾದ ಮಾತುಗಳು. ಹೀಗೆ. 
  8. ಕಂಪವಚ (ತೊದಲು ಮಾತು): ಉಗ್ಗುವುದು ಅನ್ನುತ್ತಾರೆ. ತೊದಲು ಮಾತು. ಮಾತಿನಲ್ಲಿ ಧೃಡತೆ ಇಲ್ಲ. ನಡುಗುವ ಧ್ವನಿ. ಕೇಳುವವರಿಗೆ ಹಿತವಿಲ್ಲ. ಕಂಪನದಿಂದ ಮಾತು ಹುಟ್ಟುವುದಾದರೂ ಇಲ್ಲಿ ಬೇಡವಾದ ಕಂಪನ. ಸಂಗೀತಗಾರರು ಹಾಡುವಾಗ ಬೇಕೆಂದು ಕಂಪಿಸುವ ಧ್ವನಿಯ ರೀತಿಯಲ್ಲ. ಅನವಶ್ಯಕ ಧ್ವನಿಯ ಅಲ್ಲಾಟ. 
  9. ಕೌ೦ಠ್ಯ (ಅಲ್ಲಲ್ಲಿ ನಿಂತುಹೋಗುವುದು): ನಿರರ್ಗಳ ಮಾತಿಲ್ಲ. ಮಾತಾಡುತ್ತಿದ್ದಾಗ ಅಲ್ಲಲ್ಲಿ ಬೇಡದ ಕಡೆ ಏನು ಹೇಳಬೇಕೆಂದು ತೋಚದಿರುವುದರಿಂದ ಮಾತು ನಿಂತುಹೋಗುವುದರಿಂದ ವಿಚಾರ ಸರಿಯಾಗಿ ಪ್ರಸ್ತುತವಾಗದು. ಕೇಳುಗರಿಗೆ ಹಿತದ ಅನುಭವವಿಲ್ಲ. ಪೂರ್ತಿ ಅರ್ಥವಾಗದೆ ಕೊರತೆಯ ಅನುಭವ. 
  10. ಇಂದ್ರಿಯೋದ್ಭವ (ಪಂಚೇಂದ್ರಿಯಗಳಿಂದ ಹುಟ್ಟಿದುದು): ಕಣ್ಣು, ಕಿವಿ, ನಾಲಿಗೆಗಳು ತಾಳ-ಮೇಳದಲ್ಲಿ  ಕೆಲಸ ಮಾಡಬೇಕು. ಹೀಗಾಗದೆ ಏರುಪೇರಾದರೆ ಮಾತಿನಲ್ಲಿ ವ್ಯತ್ಯಾಸ ಉಂಟಾಗುವುದು. ಇನ್ನೊಬ್ಬರು ಹೇಳಿದುದು ಕಿವಿಗೆ ಸರಿಯಾಗಿ ಕೇಳದಿದ್ದರೆ ಅವರು ಕೇಳಿದುದೊಂದು, ಇವರು ಹೇಳಿದುದೊಂದು. ನೋಡಿದುದು ಒಂದು. ಮಾತಾಡುತ್ತಿರುವುದು ಇನ್ನೊಂದರ ಬಗ್ಗೆ. ಹೀಗೆ. 
ಹೀಗೆ ಮಾತಿನಲ್ಲಿ ಹತ್ತು ವಿಧದ ದೋಷಗಳು. ಕೆಲವರಿಗೆ ಒಂದೊಂದೇ ದೋಷ ಕಾಡಬಹುದು. ಮತ್ತೆ ಕೆಲವರಿಗೆ ಒಂದಕ್ಕಿಂತ ಹೆಚ್ಚು ತೊಂದರೆ ಕೊಡಬಹುದು. ಕೆಲವರಿಗಂತೂ ಮಾತೇ ಬಾರದ ಮೂಗತನ. 

*****

ಹಿಂದೊಂದು ಸಂಚಿಕೆಯಲ್ಲಿ, "ಸರಸ್ವತಿದೇವಿಯ ರಂಗಮಂದಿರ" ಅನ್ನುವ ಶೀರ್ಷಿಕೆಯಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ತಾಯಿ ಶಾರದೆಯ ಕೃಪೆಯಾಗಿ "ಪರಿಮಳ" ಗ್ರಂಥ ಬಂತೆಂದು ಹೇಳಲಾದ ಸಂದರ್ಭ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. 

ಶ್ರೀ ರಾಘವೇಂದ್ರ ಸ್ವಾಮಿಗಳ ಸಾಕ್ಷಾತ್ ಶಿಷ್ಯರಾದ ಶ್ರೀ ಅಪ್ಪಣ್ಣಾಚಾರ್ಯರು ಅವರ ಪ್ರೀತಿಯ ಗುರುಗಳಾದ ರಾಯರ ಬಗ್ಗೆ ರಚಿಸಿರುವ ಒಂದು ಸ್ತೋತ್ರದಲ್ಲಿ ಈ ಹತ್ತು ಮಾತಿನ ದೋಷಗಳ ಬಗ್ಗೆ ಸೂತ್ರ ರೂಪದಲ್ಲಿ ವಿವರಣೆ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ. ಶ್ರೀ ರಾಘವೇಂದ್ರ ರಾಯರ ಕರುಣೆಯಿಂದ ಈ ರೀತಿಯ ಹತ್ತೂ ವಿಧದ ಮಾತಿನ ದೋಷಗಳು ನಿವಾರಣೆ ಆಗುತ್ತವೆ ಎನ್ನುತ್ತಾರೆ. ಆ ಶ್ಲೋಕ ಹೀಗಿದೆ:

ಅಜ್ಞಾನವಿಸ್ಮೃತಿಭ್ರಾಂತಿ ಸಂಶಯಾಪಸ್ಮೃತಿಕ್ಷಯಾ 
ತಂದ್ರಾಕಂಪವಚ: ಕೌ೦ಠ್ಯಮುಖಾಯೇ ಚೇಂದ್ರಿಯೋದ್ಭವಾ:
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ 

ಅನೇಕ ನುರಿತ ವೈದ್ಯರಿಂದ ನಿವಾರಣೆ ಸಾಧ್ಯವಾಗದ ಮಾತಿನ ದೋಷಗಳು ಗುರುರಾಯರ ಕರುಣೆಯಿಂದ ಪರಿಹಾರವಾಗಿವೆ ಎಂದು ಹೇಳುತ್ತಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಅನ್ನುವುದು ಅವರವರಿಗೆ ಬಿಟ್ಟ ವಿಚಾರ.  

Thursday, October 2, 2025

Answer To The Point


In our schooling days, as it is now, examinations were naturally an integral part of learning process. The system of examinations was somewhat different then than what it is today. It was a fixed date and time business, unlike today's round the clock affairs. It was paper and pen system and not pick and click systems of present times. In the lower classes, we had to carry our own paper as well for writing answers. Hence there was the spectre of answer papers of different sizes, colours, and plain white sheets as well as ruled sheets. Students carried their own simple gadgets like pen, pencil, eraser, scales, instruments box, and so on. A family's economic status could be easily gauged by looking at the nature of items their children carried to the examination hall. 

At higher levels, referred to as public examinations, a student would pay a prescribed fee to write the examination. The recognised body conducting such examinations would supply the standard answer books, and additional sheets in case the candidates needed more paper. There were indeed some brilliant students (as at all times) who could write more lengthy answers than others. They naturally needed more paper. They were not examinations with multiple-choice answer questions with given answers and the student picks one of them and ticks the answer. This system came in much later. 

After the time of examination is done, and the candidates are out of examination halls, there would be the usual small groups of candidates discussing the events of the examination rooms. "Who took the maximum number of additional sheets?" was a popular question asked in these groups. "What was there so much to write? He might have written all irrelevant things!" would be the exclaim of those who could not fill even the given main booklet. 

To discourage candidates from writing irrelevant and unnecessary lengthy answers, question papers carried a warning at the top of the paper. "Answer to the Point" was the popular phrase giving expression to these sentiments. Even when oral questions were asked in the regular classes, students attempting to digress or beat around the bush would be warned by the teacher. "What is it that I asked? What is your answer? Answer to the point!", the teacher would admonish.

"Answer to the point" remained the essence of the learning process. Even with all these, there were many students who never understood this simple rule. For some of them, it needed more than mere schooling to understand this very valuable principle!
*****

The patient was lying in the Intensive and Critical Care unit (ICCU) of the big hospital. His hands and legs were tied to the bed and their movement was restricted to a few inches at the most. This was for his own protection as otherwise he might have pulled out any of the many wires and tubes that were attached to his body. He knew there were many nerves and blood vessels in his body, though he did not know the count. There were so many wires and tubes attached to his body from the outside, but he could not count them as well. There were computer monitors around showing so many numbers and graphs all the time. He could not make any sense out of those numbers. The graphs they presented looked similar to some of the graphs he studied in his Mathematics classes. But it was long long ago. 

Now and then, the monitor would beep. The sound would draw the attention of a nurse. While he could not understand the reason for beeping, she knew exactly why it was so beeping. Her adjusting or moving a wire would stop the beep. She would also add some liquid to the bottle in the stand. The tube linking the bottle and the blood vessel on his hand would do its job and ensure that the liquid slowly but steadily reached his veins or arteries. When this happened, sometimes he would get agitated, while at other times a soothing feeling engulfed him. 

The lights in the room were always on. It was difficult to know whether it was day or night, or what time of the day or night it was. Initially he did not understand anything, but as days passed he realised that a shift had changed when a different nurse was moving around. There was no question of eating or drinking as the bottles in the stand and tubes connecting them to his veins did the needful. At times it would seem as if it was unfathomable bliss. A team of strong young men would come from time to time, and move him from one position to another, for whatever reasons they deemed fit. 

*****

He opened his eyes after another spell of drowsiness, or sleep, or whatever it was. A different nurse was staring down at him. Another shift has changed, he reasoned. Hers was a familiar face, as seen in earlier shifts. She had a syringe in her hand. Why does she need a syringe? The bottle is already there. She could as well drop the medicines in it, he thought.

"Good morning!", she said.

Oh! it is morning now, he understood. He tried to smile. With all the tubes around, she might not have understood that he was smiling. 

"I have to draw some blood for the lab. Can I draw, please"
"What difference will it make to a person who is already wet, standing in neck deep water, if it rains a little?"
"Can I draw some blood, Sir?"
"So many times blood has been drawn. What difference one more time will make?"
"Can I draw some blood, Sir?"
"If any blood is still left in the body, you are welcome to take it"
"Can I draw some blood, Sir?'
"You can do whatever you want"
"Is it a "Yes" Sir?"

He realised it was no time for a humorous or implied answer. Nor a round about answer. "Answer to the point! You silly", he felt his primary school teacher was shouting in his ears. 

"Yes", he replied meekly. Answer to the point, at last. Needful was done.

An individual's privacy is highly respected in some societies. Touching another person's body without permission is not acceptable. Not even by a doctor or a surgeon, while conducting an examination. They show the courtesy of asking whether it can be done. The answer should be a straightforward "Yes". Not an implied or round about permission. Express and unambiguous permission is required. 
*****

Many teachers over several years had failed repeatedly to teach him the importance of "Answer to the point". Many superiors in his work life had also failed miserable to bring home its importance. 

The smiling nurse in ICCU achieved this in a single instance!