Showing posts with label Prahlada. Show all posts
Showing posts with label Prahlada. Show all posts

Monday, April 14, 2025

ಚರ್ವಿತ ಚರ್ವಣ


ಕೆಲವು ದಶಕಗಳ ಹಿಂದೆ ಮಾವಿನ ಫಸಲು ಬರುವ ಕಾಲದಲ್ಲಿ (ಸುಮಾರು ಏಪ್ರಿಲ್, ಮೇ, ಜೂನ್ ತಿಂಗಳುಗಳು) ಮಾವು ಬೆಳೆವ ಹಳ್ಳಿಗಳಲ್ಲಿ ಮಾವಿನಹಣ್ಣು ಸಿಗುವುದು ಕಷ್ಟವೇನೂ ಇರಲಿಲ್ಲ. ಸಿಗುವುದು ಅಂದರೆ ಅಂಗಡಿಗಳಲ್ಲಿ ಅಲ್ಲ. ಅಲ್ಲಿ ಈಗಲೂ ಸಿಗುತ್ತವೆ. ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಾವಿನ ಮರಗಳಿದ್ದವು. ಅನೇಕರ ಮನೆಯ ಹಿತ್ತಿಲಲ್ಲಿ ಮಾವಿನ ಮರಗಳಿರುತ್ತಿದ್ದವು. ಈಗಿನಂತೆ ದೂರದ ಪ್ರದೇಶಗಳಿಗೆ ಶೀಘ್ರದಲ್ಲಿ ಹಣ್ಣುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರಲಿಲ್ಲ. ಹಣ್ಣು ಬೆಳೆದವರು ಇತರರೊಂದಿಗೆ ಹಂಚಿಕೊಂಡು ಬಾಳುತ್ತಿದ್ದರು. 

ಮಾವನ್ನು "ಫಲಗಳ ರಾಜ" ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ವಸಂತದ ಮೊದಲ ಮಳೆ ಬರುವವರೆಗೆ ಮಾವಿನಹಣ್ಣು ತಿನ್ನಬಾರದು ಎಂಬ ಅಲಿಖಿತ ನಿಯಮ ಕೆಲವರು ಪಾಲಿಸುತ್ತಿದ್ದರು. ಮಳೆ ಬರುವ ಮುನ್ನ ಅದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯವಿತ್ತು. ಅದರಲ್ಲೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ಇದನ್ನು ಮಿತವಾಗಿ ಸೇವಿಸಬೇಕೆಂದೂ, ಇಲ್ಲದಿದ್ದರೆ ಉಷ್ಣದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ ಎಂದೂ ಹೇಳುತ್ತಿದ್ದರು. ಮಾವಿನಹಣ್ಣು ಹೆಚ್ಚು ತಿಂದರೆ ಅದರ ಜೊತೆ ಹಾಲು ಕುಡಿಯಬೇಕೆಂಬ ಸಲಹೆಯೂ ಇತ್ತು. 

ಮಾವಿನಹಣ್ಣು ತಿನ್ನಬೇಕೆಂದು ಎಲ್ಲರಿಗೂ ಆಸೆಯೇ. ಅದರಲ್ಲೂ ಸಣ್ಣ ಮಕ್ಕಳಿಗೆ ಬಲು ಆಸೆ. ಏನು ಮಾಡುವುದು? ತಾಯಂದಿರು ಅದಕ್ಕೆ ಒಂದು ಸುಲಭ ಉಪಾಯ ಕಂಡಿದ್ದರು. ಒಂದು ದೊಡ್ಡ ಹಣ್ಣನ್ನು ಮೂರು ಭಾಗ ಮಾಡುವುದು. ಮಧ್ಯದ ಭಾಗದಲ್ಲಿ ಮಾವಿನ ಓಟೆ. ಅದರ ಪಕ್ಕದ ಎರಡು ಭಾಗ ಕೆನ್ನೆಗಳು. ಹೀಗೆ ವಿಭಾಗ. "ನಿನಗೆ ಕೆನ್ನೆ ಬೇಕೋ ಅಥವಾ ಓಟೆ ಬೇಕೋ?" ಎಂದು ಮಕ್ಕಳನ್ನು ಕೇಳುವುದು. ಅವರಿಗೆ ಒಂದು ಆಯ್ಕೆ ಅವಕಾಶ ಕೊಟ್ಟಂತೆಯೂ ಆಯಿತು. ಒಂದು ಹಣ್ಣು ಮೂರು ಮಕ್ಕಳಿಗೆ ಕೊಟ್ಟಂತೆಯೂ ಆಯಿತು!  ಕೇಳಿದ್ದು ಸಿಕ್ಕಿದಾಗ ಅದು ಎಷ್ಟೇ ಸಿಕ್ಕಿದರೂ ಮಕ್ಕಳಿಗೆ ಸಂತೋಷವೇ! 

ಕೆನ್ನೆಯಲ್ಲಿ ಹಣ್ಣು ಹೆಚ್ಚು ಇರುತ್ತದೆ ಎಂದು ಕೆಲವರಿಗೆ ಆಸೆ. ಆದರೆ ಓಟೆಯ ಮಜವೇ ಬೇರೆ. ಕೆನ್ನೆ ಭಾಗ ಪಡೆದವರು ತಿಂದು ಮುಗಿಸಿ ಕೈ ತೊಳೆದುಕೊಂಡು ಬಂದರೂ ಓಟೆ ಭಾಗದವನು ಇನ್ನೂ ತಿನ್ನುತ್ತಲೇ ಇರಬಹುದು. ಆದರೆ ಅದರಲ್ಲಿ ಇರುವ ರಸ ಎಷ್ಟೋ ಅಷ್ಟೇ. ಚೀಪಿದ ಓಟೆಯನ್ನೇ ಚೀಪುತ್ತಿರುವುದು. ಅಷ್ಟೇ.

*****

ಸಂಕ್ರಾಂತಿ ಸಮಯದಲ್ಲಿ ಎಳ್ಳು-ಬೆಲ್ಲಗಳ ಜೊತೆಯಲ್ಲಿ ಕಬ್ಬು-ಬಾಳೆಹಣ್ಣು ಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಬಂದಿದೆ. ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದ ಕಾಲದಲ್ಲಿ, ಮತ್ತು ಅವು ಬಂದಮೇಲೂ ಈಗಿನಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದ ಕಾಲದಲ್ಲಿ, ಕಬ್ಬಿನಿಂದ ಬೆಲ್ಲ ಮಾಡುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಬೆಲ್ಲ ಮಾಡುತ್ತಾರೆ. ಸಂಕ್ರಾಂತಿ ಸಮಯದಲ್ಲಿ ಕಬ್ಬಿನ ಜಲ್ಲೆಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಬಾಗಿನದಲ್ಲಿ ಸೇರಿಸುತ್ತಾರೆ. ಬಿಳಿ ಎಳ್ಳು, ಹುರಿಗಡಲೆ, ಹುರಿದ ಕಡಲೆಕಾಯಿ ಬೀಜಗಳು, ಬೆಲ್ಲದ ಚೂರುಗಳು, ಕೊಬ್ಬರಿ ತುಂಡುಗಳು, ಇವುಗಳ ಮಿಶ್ರಣದ ಜೊತೆ ಸಕ್ಕರೆ ಅಚ್ಚಿನ ಬೊಂಬೆಗಳು, ಕಬ್ಬಿಣ ಜಲ್ಲೆಯ ತುಂಡು ಮತ್ತು ಬಾಳೆಯ ಹಣ್ಣು ಸೇರಿಸಿ ಬಂಧು-ಮಿತ್ರರಿಗೆ ಕೊಡುವುದು ಹಬ್ಬದ ಸಂಭ್ರಮದ ಒಂದು ಅವಿಭಾಜ್ಯ ಭಾಗ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂದು ಹೇಳುವುದೂ ಒಂದು ಪರಿಪಾಠ. 

ಎಳ್ಳು-ಬೆಲ್ಲ ಇತ್ಯಾದಿಗಳ ಮಿಶ್ರಣ ಕೆಲವು ದಿನ ಇಡಬಹುದು. ಬಾಳೆಹಣ್ಣು ಹಾಗಲ್ಲ. ಕೆಡುವುದರ ಮುಂಚೆ ತಿಂದು ಮುಗಿಸಬೇಕು. ಕಬ್ಬಿನ ವಿಷಯವೇನು? ಅದೂ ಅಷ್ಟೇ. ರಸ ಒಣಗಿ ಕಬ್ಬು ಕಟ್ಟಿಗೆ ಆಗುವುದರ ಒಳಗೆ ತಿನ್ನಬೇಕು. ದಿನದಿಂದ ದಿನಕ್ಕೆ ಅದು ಒಣಗುತ್ತ ಹೋಗಿ ರಸ ಕಡಿಮೆ ಆಗುತ್ತದೆ. ಕೆಲವರು ಮಚ್ಚಿನಿಂದ ಕಬ್ಬಿನ ಹೊರಗಿನ ಗಟ್ಟಿ ಹೊದಿಕೆ ಕತ್ತರಿಸಿ ಆಮೇಲೆ ತಿನ್ನುತ್ತಿದ್ದರು. ಹರೆಯದ ಮಕ್ಕಳು ತಮ್ಮ ಹಲ್ಲಿನಿಂದಲೇ ಅದನ್ನು ಸಿಗಿದು, ಕಬ್ಬು ಜಗಿದು ರಸ ಹೀರುತ್ತಿದ್ದರು. ಈಗ ಕಾಲ ಬದಲಾಗಿದೆ. ಹಾಗೆ ರಸ ಸೋರಿಸಿಕೊಂಡು ತಿನ್ನುವುದು ನಾಗರಿಕತೆ ಅಲ್ಲ ಅನ್ನುವ ಭಾವನೆಯ ಪ್ರಪಂಚ ಇದು. ಚಿಕ್ಕ ಚಿಕ್ಕ ತುಂಡು ಮಾಡಿ ಫೋರ್ಕಿನಲ್ಲಿ ಚುಚ್ಚಿ ತಿನ್ನುವ ಕಾಲ ಈಗ. 

ಇಂತಹ ಒಂದು ಸಣ್ಣ ಕಬ್ಬಿನ ತುಂಡನ್ನೇ ತೆಗೆದುಕೊಳ್ಳೋಣ. ಮೊದಲ ಸರಿ ಜಗಿದಾಗ ಸ್ವಲ್ಪ ರಸ ಬರಬಹುದು. ಎರಡನೆಯ ಸಲ ಚೆನ್ನಾಗಿ ರಸ ಬರುತ್ತದೆ. ಮೂರನೆಯ ಸಲ ಅದಕ್ಕಿಂತ ಸ್ವಲ್ಪ ಕಡಿಮೆ. ನಾಲ್ಕು ಐದನೆಯ ಸಲ ಮತ್ತೂ ಕಡಿಮೆ. ಅದರ ನಂತರ ಎಷ್ಟು ಜಗಿದರೂ ಏನೂ ರಸ ಸಿಗದು. ಜಗಿದು ಜಗಿದೂ ವಸಡು ನೋವು ಬಂದದ್ದಷ್ಟೇ ಲಾಭ. ಕಬ್ಬಿನ ರಸ ಹೋಗಿ ಎಷ್ಟೋ ಸಮಯವಾಯಿತು. ವ್ಯರ್ಥ ಪ್ರಯತ್ನ. ವೃಥಾ ಶ್ರಮ. ಏನೂ ಪ್ರಯೋಜನವಿಲ್ಲದ ಕೆಲಸ. 

*****

ಈ ವ್ಯರ್ಥ ಪ್ರಯತ್ನ ಕೇವಲ ಮಾವಿನ ಓಟೆ ಚೀಪುವುದು ಅಥವಾ ಕಬ್ಬಿನ ತುಂಡು ಜಗಿಯುವುದಕ್ಕೆ ಮಾತ್ರ ಸೀಮಿತವಲ್ಲ. ಇವೆರಡು ಕೆಲಸಕ್ಕೂ ಉಪಯೋಗಿಸುವ ಅದೇ ನಾಲಿಗೆ ಮಾತಾಡುವುದಕ್ಕೂ ಉಪಯೋಗವಾಗುತ್ತದೆ. ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿದ್ದರೆ ಅದೂ ವ್ಯರ್ಥವೇ. ಕೆಲವರು ಮಾತನಾಡುವಾಗ ಕೇಳುಗರಿಗೆ ಒಂದು ಹಿತವಿರುತ್ತದೆ. ಇನ್ನಷ್ಟು ಕೇಳೋಣ ಎನಿಸುತ್ತದೆ. ಮತ್ತೆ ಕೆಲವರು ಮಾತಾಡುವಾಗ "ನಾವು ಕಿವುಡರಾಗಿದ್ದರೆ ಎಷ್ಟೋ ಚೆನ್ನವಿತ್ತಲ್ಲ!" ಅನ್ನುವ ಭಾವನೆ ಬರುತ್ತದೆ. ಹೇಳಿದ್ದನ್ನೇ ಹೇಳಿದರೆ ಜಗಿದದ್ದನ್ನೇ ಮತ್ತೆ ಮತ್ತೆ ರಸ ಬರದಿದ್ದರೂ ಜಗಿದಂತೆ ವೃಥಾ ಶ್ರಮವೇ. 

ಈ ಕಾರಣದಿಂದ "ಚರ್ವಿತ ಚರ್ವಣ" ಅನ್ನುವ ಪದಪುಂಜದ ಪ್ರಯೋಗ ಬಂದಿದೆ. ಚರ್ವಣ ಅಂದರೆ ಅಗಿಯುವುದು. ಚರ್ವಿತ ಅಂದರೆ ಈಗಾಗಲೇ ಚೆನ್ನಾಗಿ ಆಗಿದಿರುವ ವಸ್ತು. ಅಂತಹ ವಸ್ತುವನ್ನು ಮತ್ತೆ ಮತ್ತೆ ಅಗಿಯುವುದೇ ಚರ್ವಿತ ಚರ್ವಣ. ಸಂಸ್ಕೃತದ ಪ್ರಯೋಗವಾದರೆ "ಚರ್ವಿತ ಚರ್ವಣ". ಕನ್ನಡದಲ್ಲಿ ಹೇಳಿದರೆ "ಹಾಡಿದ್ದೇ ಹಾಡಿದ ಕಿಸುಬಾಯಿ ದಾಸ". ಅನೇಕ ವಿಷಯಗಳನ್ನು, ಕೆಲಬಗೆಯ ಹಾಡುಗಳನ್ನು, ಕೆಲವು ಗ್ರಂಥಗಳನ್ನು ಮತ್ತೆ ಮತ್ತೆ ಹೇಳಿದರೂ, ಹಾಡಿದರೂ, ಓದಿದರೂ ಬೇಜಾರಾಗುವುದಿಲ್ಲ. ಇನ್ನೊಮ್ಮೆ, ಮತ್ತೊಮ್ಮೆ ಕೇಳಿದಾಗ ಹೊಸ ಅನುಭವಾಗುತ್ತದೆ.  ಹೊಸ ಹೊಸ ಅರ್ಥಗಳ ಸ್ಫುರಣ ಆಗುತ್ತದೆ. ಆದರೆ ಕೆಲಸಕ್ಕೆ ಬಾರದ ವಿಷಯಗಳನ್ನು ಮತ್ತೆ ಮತ್ತೆ ಹೇಳಿದಾಗ ಅದು ಚರ್ವಿತ ಚರ್ವಣವೇ ಆಗುತ್ತದೆ. 

ಈ "ಚರ್ವಿತ ಚರ್ವಣ" ಸಾಹಿತ್ಯಪರ ಚರ್ಚೆಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾತಾಡುವಾಗ ಅವಾಗವಾಗ ಕೇಳಿಬರುವ ಪದಪುಂಜ. ಇದರ ಮೂಲ ಎಲ್ಲಿ? ಇದೊಂದು ಮೂಲಭೂತ ಪ್ರಶ್ನೆ. 

*****

ಹಿರಣ್ಯ ಕಷಿಪು ಮತ್ತು ಅವನ ಮಗ ಪ್ರಹ್ಲಾದನ ಕಥೆ ಅನೇಕ ಕಡೆಗಳಲ್ಲಿ ಹೇಳಲ್ಪಟ್ಟಿದೆ. ಶ್ರೀಮದ್ಭಾಗವತದ ಏಳನೆಯ ಸ್ಕಂಧದಲ್ಲಿ ಈ ವೃತ್ತಾಂತ ಬಹಳ ವಿವರವಾಗಿ ಚರ್ಚಿತವಾಗಿದೆ. ದೈತ್ಯ ಗುರು ಶ್ರೀ ಶುಕ್ರಾಚಾರ್ಯರ ಮಕ್ಕಳಾದ ಶಂಡ ಮತ್ತು ಅಮರ್ಕ (ಶಂಡಾಮರ್ಕರು ಎಂದು ಒಟ್ಟಿಗೆ ಹೇಳುವುದು ರೂಢಿ) ಆಚಾರ್ಯರ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗನನ್ನು ಹಿರಣ್ಯ ಕಷಿಪು ಕರೆಸುತ್ತಾನೆ. ಅವನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸುವ ಸಲುವಾಗಿ. ಅಪ್ಪ ನಿರೀಕ್ಷಿಸಿದ್ದಕ್ಕೂ ಮಗ ಕಲಿತದ್ದನ್ನು ಒಪ್ಪಿಸುವುದಕ್ಕೂ ಏನೂ ಸಂಬಂಧವಿಲ್ಲ. ಈ ಸಂದರ್ಭದಲ್ಲಿ ಪ್ರಹ್ಲಾದ ಕೇವಲ ಐದಾರು ವರುಷದ ಬಾಲಕನಾಗಿದ್ದರೂ ಜೀವನ್ಮರಣ ಚಕ್ರದ ಬಗ್ಗೆ ಅದ್ಭುತ ಮಾತುಗಳನ್ನು ಹೇಳುತ್ತಾನೆ:

"ಜೀವಿಗಳು ಪಂಚೇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಅವನ್ನು ನಿಯಂತ್ರಿಸಲಾರದೆ ಐಹಿಕ (ಈ ಪ್ರಪಂಚದ) ಸುಖಗಳ ಹಿಂದೆ ಬೀಳುತ್ತಾರೆ. ಈ ಕಾರಣದಿಂದ ಮತ್ತೆ ಮತ್ತೆ ಅದೇ ಜನನ-ಮರಣ (ಹುಟ್ಟು-ಸಾವು) ಚಕ್ರದಲ್ಲಿ ಸಿಕ್ಕಿ ಒದ್ದಾಡುತ್ತಾರೆ. ಪ್ರಾಪಂಚಿಕ ಸುಖಗಳು ಅಗಿದ ಪದಾರ್ಥವನ್ನು ಮತ್ತೆ ಮತ್ತೆ ಅಗಿದಂತೆ, ಚರ್ವಿತ ಚರ್ವಣದಂತೆ, ಇದ್ದರೂ ಅದರಲ್ಲೇ ಮುಳುಗುತ್ತಾರೆ. ಇವುಗಳಲ್ಲಿ ರಸವಿಲ್ಲವೆಂದು ತಿಳಿಯದೆ ಅಗಿದು ಬಿಟ್ಟಿದ್ದನ್ನು ಮತ್ತೆ ಮತ್ತೆ ಅಗಿಯುತ್ತಾ ಸಂತೋಷ ಪಡುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ ಬದುಕುತ್ತಾರೆ. ಅವರಿಗೆ ಪರಮಾರ್ಥ ವಿಷಯಗಳಲ್ಲಿ ಆಸಕ್ತಿ ಬರುವುದೇ ಇಲ್ಲ. ತಮ್ಮ ಪ್ರಯತ್ನದಿಂದಲೂ ಇಲ್ಲ. ಇನ್ನೊಬ್ಬರ ಹೇಳಿಕೆಯ ಮೂಲಕವಾಗಿಯೂ ಇಲ್ಲ. ಅಥವಾ ಇವೆರಡೂ ಸ್ವಲ್ಪ ಸ್ವಲ್ಪ ಸೇರಿದ್ದರಿಂದಲೂ ಇಲ್ಲ. ಯಮನ ಪಾಶಕ್ಕೆ ಸಿಕ್ಕಿ ನರಕದ ದಾರಿ ಹಿಡಿದಾರೆಯೇ ಹೊರತು ಈ ಜನನ-ಮರಣ ಚಕ್ರದಿಂದ ಹೊರಗೆ ಬರುವುದೇ ಇಲ್ಲ" 

ಶ್ರೀಮದ್ಭಾಗವತ ಏಳನೆಯ ಸ್ಕಂಧ, ಐದನೆಯ ಅಧ್ಯಾಯ ಮೂವತ್ತನೆಯ (7.5.30) ಶ್ಲೋಕ ಹೀಗಿದೆ:
ಮತಿರ್ನ ಕೃಷ್ಣೇ ಪರತಃ ಸ್ವತೋ ವಾ 
ಮಿಥೋಭಿಪದ್ಯೇತ ಗೃಹವತಾನಾಂ 
ಆದಾಂತಕೋಭಿರ್ವಿಶತಾಂ ತಮಿಸ್ರ೦
ಪುನಃ ಪುನಃ ಚರ್ವಿತ ಚರ್ವಣಾನಾಂ 

ಚರ್ವಿತ ಚರ್ವಣ ಅನ್ನುವುದರ ಮೊದಲ ಪ್ರಯೋಗ ಆಗಿದ್ದು ಹೀಗೆ. ಜೀವಿಗಳು ಹೇಗೆ ಅದೇ ಸಂಸಾರ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುತ್ತಾರೆ ಅನ್ನುವುದನ್ನು ವಿವರಿಸುವ ಸಲುವಾಗಿ ಭಗವಾನ್ ವೇದವ್ಯಾಸರು ಹೇಳಿದ್ದು. 
*****

"ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎಂದು ಒಂದು ಹೇಳಿಕೆ ಉಂಟು. "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ ವ್ಯಾಸರು ಹೇಳಿಬಿಟ್ಟದ್ದು" ಎಂದು ಅದರ ಭಾವ. ಉಚ್ಚಿಷ್ಟ ಅನ್ನುವ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂಬುದು ಸಾಮಾನ್ಯ ಅರ್ಥ. ಇದಕ್ಕೆ ಏನಾದರೂ ವಿಶೇಷ ಅರ್ಥ ಇದೆಯೇ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ. 

Saturday, February 3, 2024

ಮಹದಾದಿ ದೇವಾ ನಮೋ

 


ಅನೇಕ ದಶಕಗಳ ಹಿಂದೆ ನಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ ಅಂದಿನ ಅಧ್ಯಾಪಕರು ಕೆಲವು ವಿಷಯಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಬರೆಯುವ ಅಕ್ಷರಗಳು ಗುಂಡಾಗಿ ಚೆನ್ನಾಗಿರಬೇಕು, ಬರವಣಿಗೆ ಸೊಟ್ಟಾಗಿರದೆ ನೇರವಾಗಿ ಬರೆಯಬೇಕು, ಸಂದರ್ಭಕ್ಕೆ ಸರಿಯಾದ ಪದಗಳನ್ನು ಉಪಯೋಗಿಸಬೇಕು, ಬರೆದುದನ್ನು ಬೇರೆಯವರು ಓದುವಾಗ ಓದುಗನಿಗೆ ಸುಲಭವಾಗಿ ಅರ್ಥ ಆಗಬೇಕು, ಮುಂತಾದವು. ಒಮ್ಮೆ ಉಪಯೋಗಿಸಿದ ಪದವನ್ನು ಆದೇ ವಾಕ್ಯದಲ್ಲಿ ಮತ್ತೆ ಉಪಯೋಗಿಸಬಾರದು; ಅದೇ ವಾಕ್ಯವೇನು, ಆ ಪ್ಯಾರಾದಲ್ಲಿಯೇ ಮತ್ತೆ ಉಪಯೋಗಿಸಬಾರದು ಎನ್ನುವುದು ಮತ್ತೊಂದು. ಹೀಗೆ ಮಾಡುವುದರಿಂದ ನಮ್ಮ ಪದಸಂಪತ್ತು ಹೆಚ್ಚುತ್ತದೆ ಎನ್ನುವ ಕಿವಿಮಾತು ಕೂಡ ಇದರ ಜೊತೆಯಲ್ಲಿ ಇರುತ್ತಿತ್ತು. ಐದು ಅಂಕಗಳು ತಪ್ಪಿಲ್ಲದ ಮತ್ತು ಅಚ್ಚುಕಟ್ಟಾದ ಬರವಣಿಗೆಗೆ ಎಂದು ಮೀಸಲು ಸಹ ಇಡುತ್ತಿದ್ದರು. 

ನಾವು ಪ್ರಾಥಮಿಕ ಶಾಲಾ ತರಗತಿಗಳಲ್ಲಿ ಇದ್ದಾಗ (ಮೊದಲ ನಾಲ್ಕು ವರ್ಷಗಳು, ಅಂದರೆ ಇಂದಿನ ನಾಲ್ಕನೇ ತರಗತಿವರೆಗೆ) ಸ್ಲೇಟು ಮತ್ತು ಬಳಪ ಉಪಯೋಗಿಸುತ್ತಿದ್ದೆವು. ನೋಟ್ ಬುಕ್ಕು ಮತ್ತು ಪೆನ್ಸಿಲ್ ಅಥವಾ ಪೆನ್ನು  ಕಂಡರಿಯೆವು. ಆ ಸ್ಲೇಟಿನ ಸುತ್ತ ಮರದ ಚೌಕಟ್ಟು ಇರುತ್ತಿತ್ತು. ಅಕ್ಷರ ಸರಿ ಇಲ್ಲದಿದ್ದರೆ ಉಪಾಧ್ಯಾಯರು ಆ ಸ್ಲೇಟಿನ ಚೌಕಟ್ಟಿನಿಂದಲೇ ಬೆರಳುಗಳ ಹಿಂದೆ ಹೊಡೆಯುತ್ತಿದ್ದರು. ಇಂದಿನಂತೆ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೇ ಹೋಗಿ ಜಗಳ ಆಡುತ್ತಿರಲಿಲ್ಲ. ಪ್ರತಿಯಾಗಿ "ನಮ್ಮ ಮಗನಿಗೆ ಚೆನ್ನಾಗಿ ಹೊಡೆಯಿರಿ. ಸರಿಯಾಗಿ ಬುದ್ಧಿ ಬರಲಿ" ಎಂದು ಹೇಳುವ ಪೋಷಕರೂ ಇದ್ದರು! ಮುದ್ದಾದ ಅಕ್ಷರಗಳಲ್ಲಿ ತಪ್ಪಿಲ್ಲದೆ ಬರೆಯುವ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಅಚ್ಚು ಮೆಚ್ಚು. 

ಅದಿನ್ನೂ ಕನ್ನಡ ನವೋದಯದ ಕಾಲ. ನವ್ಯ ಮತ್ತು ಬಂಡಾಯ ಎನ್ನುವವು ಇನ್ನೂ ಜನಿಸಿರಲಿಲ್ಲ. ಪಠ್ಯ ಪುಸ್ತಕದ ಪದ್ಯಗಳು ಸಾಮಾನ್ಯವಾಗಿ ಕನ್ನಡದ ಹೆಸರಾಂತ ಕಾವ್ಯಗಳ ಭಾಗವೋ  ಅಥವಾ ನವೋದಯ ಹರಿಕಾರರ ಪದ್ಯಗಳೋ ಆಗಿರುತ್ತಿದ್ದವು. ಶಿಕ್ಷಕರು ಅವುಗಳಲ್ಲಿನ ಕಾವ್ಯಗುಣಗಳನ್ನು ಎತ್ತಿ ಹೇಳುತ್ತಿದ್ದರು. ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ಐದರಿಂದ ಹತ್ತನೇ ತರಗತಿಗಳು) ವಿದ್ಯಾರ್ಥಿಗಳಿಗೆ ಈ ವಿಷಯಗಳು ಸ್ವಲ್ಪಮಟ್ಟಿಗೆ ಅರ್ಥ ಆಗುತ್ತಿದ್ದವು. ಈ ಕಾರಣದಿಂದಲೇ ಆಗಿನ ಎಲ್ ಎಸ್ (ಲೋಯರ್ ಸೆಕೆಂಡರಿ, ಅಂದರೆ ಎಂಟನೇ ತರಗತಿವರೆಗೆ) ಓದಿದ್ದವರೂ ಕಾವ್ಯ-ನಾಟಕಗಳಲ್ಲಿನ ಸೊಗಸನ್ನು ಅರಿಯಬಲ್ಲವರಾಗಿದ್ದರು. ಅವರ ಮುಂದಿನ ಜೀವನದಲ್ಲಿ ಕೆಲವು ರಸ ನಿಮಿಷಗಳನ್ನು ಈ ಕಾರಣದಿಂದ ಪಡೆಯಬಲ್ಲವರಾಗಿದ್ದರು. 

*****

ಶ್ರೀಮಹಾವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇವುಗಳಲ್ಲಿಯೂ ಶ್ರೀರಾಮ ಮತ್ತು ಶ್ರೀಕೃಷ್ಣ ಅತಿಹೆಚ್ಚು ಪೂಜಿತರು. ಈ ಅವತಾರಗಳ ಗ್ರಂಥಗಳು ಮಹಾಕಾವ್ಯಗಳ ಸಾಲಿನಲ್ಲಿ ಅತಿ ಎತ್ತರದಲ್ಲಿ ನಿಂತಿದುದರಿಂದ ಈ ರೀತಿ ಇರಬಹುದು. ಇವೆರಡರ ನಂತರ ಅತಿ ಹೆಚ್ಚು ಪೂಜಿತವಾದ ರೂಪ ಶ್ರೀನರಸಿಂಹ. ಈ ಮೂರು ರೂಪಗಳಿಗೆ ಪ್ರಸಿದ್ಧವಾದ ನೂರಾರು ಕ್ಷೇತ್ರಗಳು ದೇಶ ವಿದೇಶಗಳಲ್ಲಿ ಹರಡಿವೆ. 

ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಮಹಾವಿಷ್ಣುವಿನ ಅನೇಕ ಅವತಾರಗಳ ವರ್ಣನೆಯಿದೆ. ಸಾಮಾನ್ಯವಾಗಿ ಎಲ್ಲಾರೂಪಗಳನ್ನೂ  "ಅಧ್ಭುತ" ಎಂದು ನಿರ್ದೇಶಿಸುತ್ತಾರೆ. ಆದರೆ ನರಸಿಂಹ ರೂಪವನ್ನು "ಅತ್ಯದ್ಭುತ" ಎಂದು ಹೇಳುತ್ತದೆ ಶ್ರೀಮದ್ಭಾಗವತ. ಎಲ್ಲ ರೂಪಗಳಲ್ಲಿಯೂ ವಿಶೇಷ ಸ್ಥಾನ ಶ್ರೀನರಸಿಂಹ ರೂಪಕ್ಕೆ. ನರಸಿಂಹ ಮಂತ್ರ ಹೇಳುತ್ತದೆ:

ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಮ್ 

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಮ್ 

ನರಸಿಂಹರೂಪ ಮೃತ್ಯುವಿನ ಅಭಿಮಾನಿ ದೇವತೆಗಳಿಗೂ ಮೃತ್ಯು ಸ್ವರೂಪ. "ಕಠೋಪನಿಷತ್"ನಲ್ಲಿ ನಚಿಕೇತನಿಗೆ ಉಪದೇಶ ಮಾಡುವಾಗ ಯಮನು ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಮಹಾಪುರುಷನು ಎಲ್ಲವನ್ನೂ ತಿನ್ನುವಾಗ ಅವನಿಗೆ ನಾನು ಒಂದು ಉಪ್ಪಿನಕಾಯಿ!"

ನರಸಿಂಹ ಕ್ಷೇತ್ರಗಳಲ್ಲಿ ಒಂದು ವಿಶೇಷ ಕಾಣಬಹುದು. ಹೆಚ್ಚಿನವು ಬೆಟ್ಟ ಪ್ರದೇಶದಲ್ಲಿ ಇವೆ. ಬೆಟ್ಟದ ಮೇಲೆ ಯೋಗಾನರಸಿಂಹಸ್ವಾಮಿ ಮತ್ತು ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಭೋಗಾನರಸಿಂಹಸ್ವಾಮಿ ಅಥವಾ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇರುತ್ತವೆ. 

"ಅಹೋಬಲ ನರಸಿಂಹ ಕ್ಷೇತ್ರ" ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದಬಳಿ ಇದೆ. ಇದೇ ಕ್ಷೇತ್ರದಲ್ಲಿ ನರಸಿಂಹಾವತಾರವಾಗಿ ನರಹರಿಯು ಹಿರಣ್ಯಕಶಿಪುವನ್ನು  ಕೊಂದನು ಎಂದು ಪ್ರತೀತಿ. ಈ ಕ್ಷೇತ್ರಕ್ಕೆ "ಗರುಡಾದ್ರಿ" ಎನ್ನುವುದೂ ಇನ್ನೊಂದು ಹೆಸರು. ಇಲ್ಲಿ ಒಂಭತ್ತು ನರಸಿಂಹನ ದೇವಾಲಯಗಳು ಮತ್ತು ಇತರ ದೇವಾಲಯಗಳೂ ಇವೆ. ಶ್ರದ್ದಾಳು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರ್ಶನ ಮಾಡಬೇಕೆಂದು ಆಶಿಸುತ್ತಾರೆ. ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಛತ್ರವಟ ನರಸಿಂಹ, ಅಹೋಬಲ ನರಸಿಂಹ ಅಥವಾ ಉಗ್ರ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ ಅಥವಾ ಸೌಮ್ಯ ನರಸಿಂಹ, ಜ್ವಾಲಾ ನರಸಿಂಹ, ಪಾವನ ನರಸಿಂಹ ಮತ್ತು ಕಾರಂಜ ನರಸಿಂಹ ಎಂದು ಈ ಒಂಭತ್ತು ನರಸಿಂಹ ದೇವಾಲಯಗಳು ಇಲ್ಲಿ ಇವೆ. ಕೆಲವರು ತಮ್ಮ ಮನೆಗಳಿಗೆ "ಮಾಲೋಲ" ಎಂದು ಹೆಸರಿಡುವುದು ಈ ಸೌಮ್ಯ ನರಸಿಂಹನ ನೆನಪಿನಲ್ಲಿಯೇ. 

*****

ಶ್ರೀಪುರಂದರ ದಾಸರು ನಮ್ಮ ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ಕವಿಗಳಲ್ಲಿ ಮೊದಲ ಎಣಿಕೆಯಲ್ಲಿ ನಿಲ್ಲುತ್ತಾರೆ. ಭಕ್ತಿಯ ಭರದಲ್ಲಿ ಅವರ ಪದ, ಸುಳಾದಿ, ಉಗಾಭೋಗಗಳಲ್ಲಿ ಕಾವ್ಯ ಗುಣಗಳನ್ನು ಮರೆಯುವುದೇ ಹೆಚ್ಚು. ಅವರ ಪ್ರತಿಯೊಂದು ಕೃತಿಯಲ್ಲಿಯೂ ಗಮನಿಸಿದರೆ ಅನೇಕ ಕಾವ್ಯ ಗುಣಗಳನ್ನು ಕಾಣಬಹುದು. ಅವರೊಬ್ಬ ವರಕವಿ. ಅವರೆಂದೂ ಹಲಗೆ-ಬಳಪ ಹಿಡಿದೋ, ಲೇಖನಿ ಹಿಡಿದೋ ಕೃತಿ ರಚನೆ ಮಾಡಿದಂತೆ ಕಾಣುವುದಿಲ್ಲ. ಅವರು ಹೇಳಿದ್ದೆಲ್ಲಾ ಪದವಾಯಿತು, ಹಾಡಾಯಿತು, ಕೃತಿಯಾಯಿತು. "ಕರ್ಣಾಟ ಸಂಗೀತ ಪಿತಾಮಹ" ಎಂದು ಕರೆಸಿಕೊಳ್ಳುವ ಅವರು ಸಾಹಿತ್ಯ-ಸಂಗೀತ ಎರಕದ ರಚನೆಗಳಿಗೆ ಕೊನೆಯ ಮಾತು.  

ಶ್ರೀಪುರಂದರದಾಸರು ತಮ್ಮ ಜೀವಿತ ಕಾಲದಲ್ಲಿ ದೇಶವನ್ನೆಲ್ಲಾ ಸುತ್ತಿ ಅನೇಕ ತೀರ್ಥ ಕ್ಷೇತ್ರಗಳನ್ನು ಕಣ್ಣಾರೆ ನೋಡಿದವರು. ಪ್ರತಿ ಕ್ಷೇತ್ರದಲ್ಲಿ ಅಲ್ಲಲ್ಲಿನ ದೇವಾಲಯಗಳಲ್ಲಿ ಕೃತಿ ರಚನೆ ಮಾಡಿದವರು. ಉಡುಪಿ, ಫಂಡರಾಪುರ, ತಿರುಪತಿ, ಶ್ರೀರಂಗ, ಅಹೋಬಲ ಮುಂತಾದ ಕ್ಷೇತ್ರಗಲ್ಲಿ ಅವರು ರಚಿಸಿದ ಅನೇಕ ಕೃತಿಗಳು ಇಂದೂ ಹಾಡಲ್ಪಡುತ್ತಿವೆ. ಅವರ ಅಹೋಬಲ ನಾರಸಿಂಹನ ಕೃತಿಯ ಕೆಲವು ವಿಶೇಷಗಳನ್ನು ನೋಡೋಣ. 

"ಮಹದಾದಿದೇವ ನಮೋ ಮಹಾಮಹಿಮನೇ ನಮೋ" ಎನ್ನುವುದು ಅಹೋಬಲದಲ್ಲಿ ರಚಿತವಾದ ಕೃತಿ. ಇದರ ಮೂರು ನುಡಿಗಳಲ್ಲಿ ಅವರು ನರಸಿಂಹಾವತಾರದ ಸಂಕ್ಷಿಪ್ತ ವರ್ಣನೆಯನ್ನು ಕೊಡುತ್ತಾರೆ.:

ಮಹದಾದಿ ದೇವಾ ನಮೋ ಮಹಾಮಹಿಮನೇ ನಮೋ 

ಪ್ರಹ್ಲಾದವರದ ಅಹೋಬಲ ನಾರಸಿಂಹ 

ಮೊದಲ ನುಡಿಯಲ್ಲಿ ನರಸಿಂಹನ ಉದ್ಭವದ ಭೀಷಣವನ್ನು ಹೇಳುತ್ತಾರೆ. ಅವರು ಉಪಯೋಗಿಸಿರುವ ಪದಗಳು ಆ ಅವತಾರ ಪ್ರಕಟವಾದ ಭಯಂಕರ ದೃಶ್ಯವನ್ನು ನಮಗೆ ಕೊಡುತ್ತವೆ. 

ಧರಣಿಗುಬ್ಬಸವಾಗೆ  ತಾರಾಪಥವು ನಡುಗೆ 

ಸುರರು ಕಂಗೆಟ್ಟೋಡೆ ನಭವ ಬಿಟ್ಟು 

ವನಗಿರಿಗಳಲ್ಲಾಡೆ  ಶರಧಿಗಳು ಕುದಿದುಕ್ಕೆ 

ಉರಿಯನುಗುಳುತ ಉದ್ಭವಿಸಿದೆ ನಾರಸಿಂಹಾ 

ಸಕಲ ದೇವತೆಗಳ ಪ್ರಾರ್ಥನೆಯ ಮೇರೆಗೇ ಈ ಅವತಾರವಾದದ್ದು. ದೇವತೆಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಆ ಅವತಾರದ ಭೀಕರತ್ವ ಅವರ ಊಹೆಗೂ ನಿಲುಕಲಿಲ್ಲ. ಅವರವರ ಸ್ಥಾನಗಳನ್ನೇ ಬಿಟ್ಟು ಸ್ವರಕ್ಷಣೆಗೆ ಓಡಿ ಹೋದರು! ಭದ್ರವಾಗಿ ನಿಲ್ಲುವ ಗುಣಕ್ಕೆ ಉದಾಹರಣೆಯಾದ ಬೆಟ್ಟಗಳೂ ಅದುರಿಹೋದವು. ಇಡೀ ಸೃಷ್ಟಿಯೇ ತಲ್ಲಣಿಸಿತು. ವಿಶಾಲ ಸಮುದ್ರದ  ಜಲರಾಶಿ ಒಂದೇ ಕ್ಷಣದಲ್ಲಿ ಕುದ್ದು ಉಕ್ಕಿದವು!

ಪ್ರಕಟವಾದ ನರಸಿಂಹನು ರಕ್ಕಸನನ್ನು ಹೇಗೆ ಕೊಂದ ಎನ್ನುವುದು ಅವರು ವರ್ಣಿಸುವ ರೀತಿ:

ಸಿಡಿಲಂತೆ ಘರ್ಜಿಸುತ ಉರಿವ ನಾಲಗೆ ಚಾಚಿ 

ಅಡಿಗಡಿಗೆ ಲಂಘಿಸುತ ಕೋಪದಿಂದ 

ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ 

ಕಡುಉದರ ಬಗೆದೆ ಕಡುಗಲಿ ನಾರಸಿಂಹಾ 

ಸಿಂಹದ ಲಂಘನ; ಸಿಂಹ ಘರ್ಜನೆ. ಹಿರಣ್ಯಕನ ಜುಟ್ಟು ಹಿಡಿದು ಕುಕ್ಕಿ ಉಗುರಿಂದ ಬಗೆದ. ಗದೆ  ಹಿಡಿದು ಹತ್ತು ನಿಮಿಷ ಹಿರಣ್ಯ ಯುದ್ಧ ಮಾಡುವುದು ಸಿನಿಮಾದಲ್ಲಿ ಮಾತ್ರ.  ಹಿರಣ್ಯಕನ ವಧೆಯಾಯಿತು. 

ಅವತಾರ ತಾಳಿದ ಮುಖ್ಯ ಕೆಲಸವಾಯಿತು. ದೇವತೆಗಳ ಮತ್ತು ಪ್ರಹ್ಲಾದನ ಪ್ರಾರ್ಥನೆಯಿಂದ ಈಗ ನರಸಿಂಹನು ಶಾಂತನಾಗಿದ್ದಾನೆ. ಲಕ್ಷ್ಮಿಯು ತೊಡೆಯಮೇಲೆ ಕುಳಿತಿದ್ದಾಳೆ. ಈಗ ಅವನು "ಮಾಲೋಲ" ಆಗಿದ್ದಾನೆ. ಪ್ರಹ್ಲಾದವರದ ರೂಪ ತಾಳಿದ್ದಾನೆ. ದಾಸರು ಉಪಯೋಗಿಸುವ  ಪದಗಳೂ ಸೌಮ್ಯವಾಗುತ್ತವೆ:

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ 

ಸುರರು ಅಂಬರದಿ ಹೂಮಳೆಯ ಕರೆಯೆ 

ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರ 

ಕರುಣಿಸಿದೆ ಪುರಂದರ ವಿಠಲ ನಾರಸಿಂಹ 

ಪ್ರಹ್ಲಾದನಿಗೆ ಕರುಣಿಸಿದ್ದು ಆಯಿತು. ಈಗಲೂ ಬರುವ ಭಕ್ತರಿಗೆ ಕರುಣಿಸುತ್ತಿರುವೆ ಎನ್ನುವುದೇ ತಾತ್ಪರ್ಯ. 

ಅತಿಯಾದ ಪಕ್ಕವಾದ್ಯಗಳ ಆಡಂಬರವಿಲ್ಲದೆ ಸಾಹಿತ್ಯಕ್ಕೆ ಒತ್ತುಕೊಟ್ಟು ಹಾಡಿರುವ ಅನೇಕ ಮುದ್ರಿಕೆಗಳು  ಯೂಟ್ಯೂಬ್ನಲ್ಲಿ ಲಭ್ಯವಿವೆ. 

*****

ನರಸಿಂಹನನ್ನು ವರ್ಣಿಸಲು ಕಠಿಣ ಪದಗಳನ್ನು ಪ್ರಯೋಗಿಸಿದ ದಾಸರು ಬಾಲಕೃಷ್ಣನನ್ನು ವರ್ಣಿಸಲು ಸರಳ ಸುಂದರ ಪದಗಳನ್ನು ಬಳಸುತ್ತಾರೆ. 

ಅದನ್ನು ಇನ್ನೊಮ್ಮೆ ನೋಡೋಣ. 

Sunday, October 29, 2017

Three Dimensions of Personality


What is "Personality?". Dictionary gives different meanings to this word. "The visible aspects of one's character as it impresses others", is one of them. "A person as an embodiment of a collection of qualities", is another. In psychology, it is defined as "the sum total of the physical, mental, emotional and social characteristics of an individual" or "the organized pattern of behavioural characteristics of an individual". Thus the various components that are common in defining personality can be collectively summarised in a single word "Character". There is a oft quoted proverb in English. "When wealth is lost, nothing is lost. When health is lost, something is lost. When character is lost, everything is lost". This sums up the importance of character in a person's life. 

Ancient Indian texts and literature have extensively dealt with the various dimensions of "Personality". They provide a three layered or three dimensional view of personality. A person may not be as he or she appears at first sight. First sight does indeed make an impact on others. It is often said that first impression is the best impression. Though this is true to a certain extent, we know by experience that this is not always the case. We hear people exclaim that a person is far deeper than what he appeared at first sight. This impression at first sight is known as "Roopa" (रूप). The nearest English word for Roopa is "Form". This is the first level of a person's personality. It takes time to realise the deeper impact of a personality. This understanding of finer aspects of a person's behavioural traits is called "Sheela" (शील). This "Sheela" is close to the word "Character" in English. Long periods of close association with a person opens up further layers of personality. This very finer and inner behavioural aspects is called "Maadhurya" (माधुर्य). We do not reach this level of understanding with most of the people we interact with. Nearest English word for Maadhurya is "Melody".

This combination of Roopa, Sheela and Maadhurya (or Form, Character and Melody) is what embodies "Personality" of any given person. Roopa can be changed temporarily by various aids. Sheela is more sterner stuff and change is very difficult to bring about. Maadhurya forms the inner core of the personality of a person. 
*****

Prahlada was anointed as the King of the Daityas after his father Hiranyakashipu was killed by Lord Vishnu by taking the incarnation of Narasimha. Prahlada ruled his kingdom with fairness and justice to all subjects. His was a wonderful period and there was peace and prosperity everywhere. Lord Indra who ruled over the upper worlds knew that he would not be able to hold on to his throne any longer. He voluntarily surrendered his throne to Prahlada. Prahlada now became the undisputed ruler of all the worlds. This status continued for a considerably long time.

Lord Indra was now keen on getting back his throne. He was aware that the usual methods he used earlier in similar situations would be ineffective against Prahlada. There was no way of defeating him now. He went to his Guru Brihaspati and sought his advice. Brihaspati told Indra that he should better approach the Guru of the Daityas, Shukracharya, as he may know some secret of Prahlada that would help defeat him. Shukracharya knew the reason for which Indra approached him. But he was helpless due the humble path chosen by Indra while approaching him. Time spent with Shukracharya as his disciple was no doubt useful, but it did not throw any light on the methods to be used to defeat Prahlada. On a day when Shukracharya was very pleased with the devotion of Indra, Indra sought the secret of Prahlada's success. Shukracharya told Indra that he had taught him everything he knew. If he desired something more, he should approach Prahlada himself, he advised.

Indra had no alternative but to approach Prahlada. He took the form of a Rishi and went to Prahlada. Prahlada received the Rishi form of Indra and treated him with full respect. When Indra told Prahlada that he has come to learn from him, Prahlada advised him that he may not be able to teach him as he was busy with the management of the worlds under his control as a King. Indra persuaded him to teach him at his leisure and he was ready to spend any amount of time needed for learning. Prahlada taught many things to Indra in due course.

Prahlada was very happy with the devotion showed by Indra. On a convenient day, Indra asked Prahlada what was the secret of his success and invincibility. Prahlada told thus: "My success comes from my character. I have full control over my senses and body at all times. This ensures good behaviour with all at all times. Good character is the source of all strength and means for all success." 

Pleased with Indra's dedication, Prahlada gave a boon to Indra and asked him to seek anything he had with him. Indra asked Prahlada to give him the character that was his strong point. Having agreed to give anything he had, Prahlada was now bound to part with his character. Prahlada felt a bout of weakness as a bright form of light deserted and went behind Indra. His character had deserted him. Following the character many other virtues left him as well; good conduct, piousness, truth etc. Godess Lakshmi also left him. When asked by Prahlada as to why she was also leaving him, Lakshmi said that she and all others who left him were bound by good character. When he has given away his character, it was as good as giving away all other virtues including his prosperity.

Prahlada was now very weak and without his character he was like an empty shell. It was time for him to leave the body. He left the physical body and moved to the heavenly abode.
*****

This story of Prahlada, from the Mahabharata, sums up the importance of character as an important dimension of Personality. Roopa, Sheela and Maadhurya or Form, Character and Melody are the three dimensions of a person's personality.

Nowadays, the word Sheela (शील) is used in a limited sense, to mean "Chastity". Sheela or Character is required for everybody. Anything done by a person in the comity of other respected persons that makes them to feel ashamed is devoid of Sheela. A behaviour that befits upholding of dignity in public and private life is Sheela or Character. Many actions may bring temporary appreciation or applause in gatherings. But if the action does not befit a person of good character, it deserves to be condemned.

Now the saying makes perfect sense; When character is lost, everything is lost.