Showing posts with label Ganga. Show all posts
Showing posts with label Ganga. Show all posts

Saturday, February 15, 2025

ಪ್ರತಿದಿನ ಗಂಗಾ ಸ್ನಾನ?



ಇದೀಗ ಎಲ್ಲೆಲ್ಲೂ "ಅಪರೂಪದ ಕುಂಭಮೇಳ" ಎನ್ನುವ ಸುದ್ದಿಯೇ ಸುದ್ದಿ. ಕೇವಲ ಹನ್ನೆರಡು ವರುಷದ್ದಲ್ಲ. ಹನ್ನೆರಡು ಹನ್ನೆರಡಲ ನೂರಾ ನಲವತ್ತನಾಲ್ಕು ವರುಷಗಳ ವಿಶೇಷ ಬೇರೆ. ಈಗಾಗಲೇ ಮೂವತ್ತು-ನಲವತ್ತು  ಕೋಟಿ ಮಂದಿ ಕುಂಭಸ್ನಾನ ಮಾಡಿದ್ದಾರೆ ಎಂದು ಒಂದು ಅಂದಾಜು. ಅಥವಾ, ಮೇಳ ಮುಗಿಯುವುದರ ಒಳಗೆ  ಮುಳುಗು ಹಾಕಿದವರ ಸಂಖ್ಯೆ ನಲವತ್ತು ಕೋಟಿ ದಾಟುತ್ತದೆ ಎಂದು ಇನ್ನೊಂದು ಅಂದಾಜು. (ಈಗಾಗಲೇ ಐವತ್ತು ಕೋಟಿ ಸಂಖ್ಯೆ ದಾಟಿದೆ, ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ, ಎಂದು ಇಂದಿನ ಸುದ್ದಿ).  ನಲವತ್ತು ಕೋಟಿ ಅಂದರೆ ಅದೇನೂ ಒಂದು ಸಾಮಾನ್ಯ ಜನಗಳ ಕೂಟವಲ್ಲ. ಇಡೀ ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ಜನಸಂಖ್ಯೆಗಿಂತ ಐದು ಕೋಟಿ ಹೆಚ್ಚು. ಮೂರು ನೂರು ಕಿಲೋಮೀಟರು ದೂರ ಟ್ರಾಫಿಕ್ ಜಾಮ್ ಆಗಿದೆ ಎಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ವಾರಗಟ್ಟಲೆ ಸ್ನಾನ ಮಾಡದವರೂ ಕುಂಭ ಸ್ನಾನ ಮಾಡಿದ್ದಾರೆ! (ಕೆಲವು ಸಾಧುಗಳು ಹೀಗೆ ಅನೇಕ ದಿನ ಸ್ನಾನ ಮಾಡುವುದಿಲ್ಲ ಎಂದು ವರದಿಗಳಿವೆ). ಪ್ರತಿದಿನ ಸ್ನಾನ ಮಾಡುವ ದುರಭ್ಯಾಸ ಇರುವವರ ವಿಷಯ ಹೇಳಲೇಬೇಕಾಗಿಲ್ಲ. 

"ಕುಂಭಮೇಳ ಪ್ರವಾಸ" ಏರ್ಪಡಿಸುವ ಯಾವ ಪ್ರವಾಸಿ ಸಂಸ್ಥೆಯೂ ಈ ವರ್ಷ ನಷ್ಟ ಅನುಭವಿಸುವ ಸಾಧ್ಯತೆಯೇ ಇಲ್ಲ. ಕುಂಭ ಮೇಳ ಕಾಲದಲ್ಲಿ ಪ್ರಯಾಗ್ ರಾಜ್ ವಿಮಾನದ ಟಿಕೆಟ್ ಬೆಲೆ  ದೆಹಲಿ-ಲಂಡನ್ ಮಾರ್ಗದ ಟಿಕೆಟ್ ಬೆಲೆಗಿಂತ ಜಾಸ್ತಿಯಂತೆ. ಇದರ ಬಗ್ಗೆ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆಯೂ ಆಯಿತು. ಮೊದಲ ಪಂಕ್ತಿಗಳಲ್ಲಿ ಊಟ ಮಾಡಲಾಗದೆ ಇದ್ದರೂ ಪರವಾಗಿಲ್ಲ. ಕೊನೆಯ ಪಂಕ್ತಿ ಸಿಕ್ಕಿದರೂ ಸರಿಯೇ ಎಂದು ಕಾಯುವವರಂತೆ ಮೇಳ ಮುಗಿದ ನಂತರವಾದರೂ ಹೋಗೋಣ ಎಂದು ಕಾಯುತ್ತಿರುವವರೂ ಉಂಟು. "ಅಯ್ಯೋ, ಒಂದು ನೂರಾ ನಲವತ್ತನಾಲ್ಕು ವರುಷಗಳ ಕುಂಭ ಸ್ನಾನ ತಪ್ಪಿಸಿಕೊಂಡಿರಲ್ಲ!" ಎಂದು ಬೇರೆಯವರು ಹೇಳಬಾರದು ಎಂದು ಪರಿತಪಿಸುತ್ತಾ ಕಾಯುತ್ತಿರುವವರೂ ಉಂಟು. ಜನಜಂಗುಳಿ, ಹಣ-ಕಾಸಿನ ಮುಗ್ಗಟ್ಟು, ಆರೋಗ್ಯದ ಸಮಸ್ಯೆಗಳು, ಚಳಿ ತಡೆಯಲಾಗದ ಸ್ಥಿತಿ, ಜೊತೆಯಿಲ್ಲದೆ ಹೋಗಲಾಗದ ಬಿಕ್ಕಟ್ಟು, ಇವೆಲ್ಲಕ್ಕಿಂತ ಹೆಚ್ಚಾದ ಸೋಮಾರಿತನ, ಮುಂತಾದ ಅನೇಕ ಕಾರಣಗಳಿಂದ "ಈಗ ಬೇಡ. ಬೇಸಗೆ ಬರಲಿ. ಆಗ ಹೋಗೋಣ. ಸ್ವಲ್ಪ ಪುಣ್ಯ ಕಡಿಮೆ ಬಂದರೂ ಪರವಾಗಿಲ್ಲ" ಎಂದು ಅಂದುಕೊಂಡವರೂ ಉಂಟು.  

ಗಂಗಾನದಿಯ ತಟದಲ್ಲಿರುವವರು ಪುಣ್ಯಾತ್ಮರು. ಪ್ರತಿದಿನ ಗಂಗಾಸ್ನಾನ ಮಾಡುತ್ತಾರೆ ಎನ್ನಬಹುದೇ? ಬೆಂಗಳೂರಿನಲ್ಲಿರುವವರು ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಾರೆ ಎನ್ನುವಂತೆ! ಬೇರೆಲ್ಲಿಯೋ ಇರುವವರು ಏನು ಮಾಡಬೇಕು? ಕುಮಾರವ್ಯಾಸನು ಹೇಳುವಂತೆ "ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯ ರೋಗಿ ಹಳಿದಡೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?" ಎನ್ನುವುದನ್ನು ನೆನೆಸಿಕೊಂಡು ಸುಮ್ಮನಿರಬೇಕೇ? ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವವರು ಏನು ಮಾಡಬೇಕು? ಅವರಿಗೂ ಬೇರೆ ದಾರಿ ಉಂಟು. ಗಂಗೆಯ ಸೋದರಿಯರಾದ ಗೋದೆ, ಕೃಷ್ಣೆ, ಕಾವೇರಿಯರಿದ್ದಾರೆ. ಭೀಮೆ, ತುಂಗೆ, ವೈಗೈ ಇದ್ದಾರೆ. ಶರಾವತಿ, ನೇತ್ರಾವತಿಯರಿದ್ದಾರೆ. (ಅರ್ಕಾವತಿ-ವೃಷಭಾವತಿಯರೂ ಇದ್ದರು. ಅಲ್ಲಿ ಸ್ನಾನ ಮಾಡುವ ಭೀತಿ ಬೇಡ). ಈ ಎಲ್ಲ ನದಿಗಳೂ ದೂರ ಇದ್ದರೆ ಏನು ಮಾಡಬೇಕು? ಸಣ್ಣ ಹಳ್ಳಿಯಳ್ಳಿ ಚಿಕ್ಕ ಕೆರೆ ಮಾತ್ರ ಉಂಟು. ಅವರೇನು ಮಾಡಬೇಕು? ಅಥವಾ ದೊಡ್ಡ ನಗರದ ಸಣ್ಣ ಮನೆಯ ಪುಟ್ಟ ಬಚ್ಚಲು ಮನೆ. ನೀರೇ ಬಾರದ ನಲ್ಲಿಯಲ್ಲಿ ಎಂದೋ ನೀರು ಬಂದಾಗ ಹಿಡಿದಿಟ್ಟ ಪ್ಲಾಸ್ಟಿಕ್ ಬಕೆಟ್ಟಿನ ನೀರು ಮಾತ್ರ. ಅವರಿಗೆ ಪುಣ್ಯ ಸ್ನಾನವಿಲ್ಲವೇ? ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ. 
*****

ನಾವು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಭಾಷೆಗಳನ್ನು ಚೆನ್ನಾಗಿ ಕಲಿಯಲಿ ಎಂದು "ಪ್ರಭಂಧ" ಬರೆಸುತ್ತಿದ್ದರು. ಇಂಗ್ಲಿಷಿನಲ್ಲಿ "Pen is mightier than Sword" ಅಥವಾ ಕನ್ನಡದಲ್ಲಿ "ಕತ್ತಿಗಿಂತ ಲೇಖನಿ ಹರಿತ" ಎನ್ನುವ ವಿಷಯದ ಮೇಲೆ ಸಾಮಾನ್ಯವಾಗಿ ಮೊದಲನೇ ಪ್ರಬಂಧ ಬರೆಸುತ್ತಿದ್ದರು. ಹಿಂದಿಯಲ್ಲಾದರೆ ರಾಮಧಾರಿ ಸಿಂಹ "ದಿನಕರ" ಅವರ "ಕಲಂ ಯಾ ತಲವಾರ್" ಎಂಬ ಇದೇ ವಿಷಯದ ಪದ್ಯ ಓದಬೇಕಿತ್ತು. ಲೇಖನಿ ಅಥವಾ ಪೆನ್ನು ಒಂದು ಜಡ ವಸ್ತು. ಅದೇನು ಮಾಡುತ್ತದೆ? ಮೇಜಿನ ಮೇಲೋ ಜೇಬಿನಲ್ಲೋ ಕುಳಿತಿರುತ್ತದೆ. (ಹಿಂದೆಲ್ಲ ಜೇಬಿನಲ್ಲಿ ಪೆನ್ನಿಲ್ಲದ ವಿದ್ಯಾರ್ಥಿಯನ್ನು "ನೀನೆಂಥ ವಿದ್ಯಾರ್ಥಿಯೋ?" ಎಂದು ಬಯ್ಯುತ್ತಿದ್ದರು. ಈಗ ಪೆನ್ನು ಇಟ್ಟುಕೊಳ್ಳುವ ಅಭ್ಯಾಸವೇ ಹೋಗಿದೆ). ಒಂದು ವೈಚಾರಿಕ ಲೇಖನ ಒಂದು ಕತ್ತಿ ಮಾಡುವುದಕ್ಕಿಂತ ಹೆಚ್ಚು ಕ್ರಾಂತಿಕಾರಕ ಕೆಲಸ ಮಾಡುತ್ತದೆ ಎನ್ನುವುದನ್ನು ಒಪ್ಪೋಣ. ಆದರೆ ಆ ಕೆಲಸ ಮಾಡುವುದು ಪೆನ್ನು ಅಥವಾ ಲೇಖನಿ ಅಲ್ಲ. ಪೆನ್ನು ಅಥವಾ ಲೇಖನಿ ಹಿಡಿದ ಕೈ, ಮತ್ತು ಅದಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸಿ ಬರೆಯುವವನ ತಲೆ; ಅದರಲ್ಲಿರುವ ಮಿದುಳು. 

ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಬಿ. ಅರ್. ಪಂತುಲು ಅವರ ಹೆಮ್ಮೆಯ "ಶ್ರೀ ಕೃಷ್ಣದೇವರಾಯ" ಚಲನಚಿತ್ರದ ಕಡೆಯಲ್ಲಿ ಕೃಷ್ಣದೇವರಾಯನ ಖಡ್ಗವನ್ನು ತೋರಿಸಿ "ಸಹಸ್ರಾರು ಶತ್ರುಗಳ ಶಿರಛೇದ ಮಾಡಿದ ಖಡ್ಗ ನಿರಾಶ್ರಿತವಾಯಿತು" ಅನ್ನುತ್ತಾರೆ. ಹೀಗೇಕೆ? ವೈರಿಗಳ ತಲೆ ಕತ್ತರಿಸಿದ್ದು ಖಡ್ಗವೇ ಆದರೂ ಅದೂ ಒಂದು ಜಡ ವಸ್ತು. ಆ ಕೆಲಸ ನಿಜವಾಗಿ ಮಾಡಿದ್ದು ಆ ಖಡ್ಗ ಹಿಡಿದ ಕೈ; ಆ ಕೈ ಹಿಂದಿದ್ದ ಅಸಾಧಾರಣ ವ್ಯಕ್ತಿ. ಲೇಖನಿ ಅಥವಾ ಕತ್ತಿ ದೊಡ್ಡದು ಎಂದು ಹೇಳುವುದು ಕೇವಲ ಸೂಚ್ಯವಾಗಿ. ಯಾವುದೇ ಜಡ ವಸ್ತು ತನಗೆ ತಾನೇ ಕೆಲಸ ಮಾಡದು. ಅದರ ಹಿಂದಿರುವ ಚೇತನವೇ ಕೆಲಸಗಳನ್ನು ಮಾಡುವುದು. ಜಡ ವಸ್ತು ಒಂದು ಉಪಕರಣ. ಅಷ್ಟೇ. 

*****

ಜಡವಸ್ತು ಕೇವಲ ಒಂದು ಉಪಕರಣ. ನಿಜವಾಗಿ ಕೆಲಸ ಮಾಡುವುದು ಅದರ ಹಿಂದಿರುವ ಚೇತನ ಎನ್ನುವುದಾದರೆ ಗಂಗಾಸ್ನಾನದ ವಿಷಯ ಏನು? ಗಂಗೆಯಲ್ಲಿ ಹರಿಯುವುದು ನೀರು. ಆ ನೀರೂ ಒಂದು ಜಡ ವಸ್ತುವೇ. ಅದು ದ್ರವರೂಪದಲ್ಲಿರುವುದರಿಂದ ಹರಿಯುತ್ತದೆ. ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಿಂದ ಹರಿದು ಬಂದು, ಅದೇ ರೀತಿಯ ಇತರ ಉಪನದಿಗಳಿಂದ ಕೂಡಿ ಮೈದುಂಬಿ, ಭೋರ್ಗರೆಯುತ್ತಾ ಬೆಟ್ಟಗಳಲ್ಲಿ ಹರಿಯುತ್ತದೆ. ಹರಿದ್ವಾರದ ನಂತರ ಬಯಲು ಪ್ರದೇಶಗಳಲ್ಲಿ ಹರಿಯುವುದರಿಂದ ಆ ವಿಶಾಲ ಜಲರಾಶಿ ಬಲು ರಭಸವಾಗಿ ಚಲಿಸುತ್ತದೆ. ಕೋಟಿ ಕೋಟಿ ಜನಗಳ ಜೀವನ ಹಸನು ಮಾಡಿ ಸಮುದ್ರ ಸೇರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಹೋಗುವುದು ಹೇಗೆ? 

ನಮ್ಮ ಪುರಾತನ ನಂಬಿಕೆಗಳ ಪ್ರಕಾರ ಪ್ರತಿ ಜಡ ವಸ್ತುವಿನ ಹಿಂದೆ ಅದಕ್ಕೆ ಹೊಂದಿದ ಒಂದು ಚೇತನ ಶಕ್ತಿ ಇದೆ. ಅದನ್ನೇ ನಾವು ಆ ಜಡ ಪದಾರ್ಥದ "ಅಭಿಮಾನಿ ದೇವತೆ" ಎನ್ನುವುದು. ಪುಸ್ತಕ ಜಡ ವಸ್ತು. ಅದರ ಹಿಂದೆ ವಿದ್ಯೆಯ ಅಭಿಮಾನಿ ದೇವತೆಯಾದ ಸರಸ್ವತಿ ಇದ್ದಾಳೆ. ಬೆಂಕಿಯ ಹಿಂದೆ ಅಗ್ನಿದೇವ ಇದ್ದಾನೆ. ನೀರಿನ ಹಿಂದೆ ವರುಣ ಇದ್ದಾನೆ. ಗಾಳಿಯ ಹಿಂದೆ ವಾಯುದೇವ ಇದ್ದಾನೆ. ಹೀಗೆ. ಅದೇ ರೀತಿ ಗಂಗಾನದಿಯಲ್ಲಿ ಹರಿಯುವ ನೀರಿನ ಹಿಂದೆ ತಾಯಿ ಗಂಗೆ ಇದ್ದಾಳೆ. ಹಿಂದೆಲ್ಲ ಕೇವಲ ಗಂಗೆ ಎಂದು ಸಂಬೋಧಿಸಿದರೆ ಹೊಡೆಯಲು ಬರುತ್ತಿದ್ದರು. "ಗಂಗಾಜೀ" ಅಥವಾ "ಗಂಗಾಮಯ್ಯಾ" ಅನ್ನು ಎನ್ನುತ್ತಿದ್ದರು. ಗಂಗೆ ಅಂದರೆ ಅಷ್ಟು ಶ್ರದ್ದೆ. ಅಂತಹ ಭಕ್ತಿ. ಗಂಗೆ ಕೇವಲ ಹರಿವ ನೀರಲ್ಲ. ಅವಳು ಹರಿ ಪಾದೋದಕ. ಹರನ ತಲೆಯಿಂದ ಹರಿದು ಬಂದ ತೀರ್ಥ. ಅನೇಕ ಶ್ರದ್ಧಾಳುಗಳು ಮೊದಲು ಮನೆಯಲ್ಲೋ ಅಥವಾ ಛತ್ರದಲ್ಲೋ ಒಮ್ಮೆ ಸ್ನಾನ ಮಾಡಿ ನಂತರ ಗಂಗಾಸ್ನಾನಕ್ಕೆ ನದಿಗೆ ಹೋಗುತ್ತಿದ್ದರಂತೆ! ಗಂಗಾಸ್ನಾನಕ್ಕೆ ಹೋದಾಗ ಗಂಗೆಯ ನೀರನ್ನು ಮುಟ್ಟುವ ಮುಂಚೆ ದೇಹ ಶುದ್ಧವಾಗಿ ಇರಬೇಕೆಂಬ ಕಳಕಳಿಯಿಂದ. 

*****

ಗಂಗಾನದಿಯಲ್ಲಿ ಹರಿಯುವ ನೀರಿನ ಅಭಿಮಾನಿದೇವತೆ ಗಂಗಾದೇವಿ ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎಂದಾಯಿತು. ಹಾಗಿದ್ದಲ್ಲಿ ಗಂಗೆ ನೀರಿಗೆ ಅಷ್ಟು ದೂರ ಹೋಗಬೇಕು. ಆದರೆ ಅದರ ಅಭಿಮಾನಿ ದೇವತೆ ನಮ್ಮನ್ನು ಹರಸಲು ಅಲ್ಲಿಗೇ ಹೋಗಬೇಕೇ ಎನ್ನುವುದು ಮುಂದಿನ ಪ್ರಶ್ನೆ. ದೇವತೆಗಳಿಗೆ ಎಲ್ಲಿ ಬೇಕೆಂದರಲ್ಲಿ ಹೋಗುವ, ಬರುವ ಸಾಮರ್ಥ್ಯ ಇದೆಯಲ್ಲವೇ? ನಾವು ಅಲ್ಲಿಗೆ ಹೋಗಲು ಅಶಕ್ತರು. ಅಲ್ಲಿಗೆ ಸುಲಭವಾಗಿ ಹೋಗಲಾರೆವು. ಆ ತಾಯಿಯೇ ನಮ್ಮ ಬಳಿ ಬರಬಹುದೇ? ಅದು ಸಾಧ್ಯವಾದರೆ ಎಂತಹ ಪವಾಡ! ಹಾಗಾಗಬಹುದೇ? 

ಸಂಧ್ಯೆಯನ್ನು ಆಚರಿಸುವಾಗ, ಮತ್ತು ಅನೇಕ ರೀತಿಯ ಸಮಾರಂಭಗಳಲ್ಲಿ ಮಂತ್ರಪೂತ ಜಲದಿಂದ ಸಿಂಪಡಣೆ (ಪ್ರೋಕ್ಷಣೆ ಅಥವಾ ಮಾರ್ಜನ) ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಅವು ಯಾವುವು? ಋಗ್ವೇದದ ಹತ್ತನೆಯ ಮಂಡಲದ "ಆಪಃ ಸೂಕ್ತ" ಮಂತ್ರಗಳು ಅವು. ಅದರಲ್ಲಿ ನೀರಿನ ಅಭಿಮಾನಿ ದೇವತೆಗಳಾದ ಆಪೋದೇವಿಯರನ್ನು ಪ್ರಾರ್ಥಿಸಿಕೊಳ್ಳುವುದು. "ನಿಮ್ಮ ಕರುಣೆಯ ಬಲದಿಂದ ನಾವು ಬದುಕುತ್ತೇವೆ. ನಿಮ್ಮ ಸಹಕಾರದಿಂದ ನಮ್ಮ ಜೀವನ ನಡೆದು ನಾವು ಬಹಳಕಾಲ ಜೀವಿಸುತ್ತೇವೆ. ನಮ್ಮನ್ನು ಯೋಗ್ಯರನ್ನಾಗಿ ಮಾಡುವ, ನಿಮ್ಮಲಿರುವ ಆ ಶಕ್ತಿಯನ್ನು ನಮಗೆ ದಯಪಾಲಿಸಿ" ಎಂದು ಬೇಡುವುದೇ ಈ  ಮಂತ್ರಗಳ ತಿರುಳು. "ಉಷತೀರಿವ ಮಾತರಃ" ಎನ್ನುವುದು ಅಲ್ಲಿ ಬರುವ ವಿಶೇಷಣ. "ಕಂದಮ್ಮಗಳು ಕರೆದಾಗ ಓಡಿ ಬಂದು ಎತ್ತಿಕೊಳ್ಳುವ ತಾಯಿಯರಂತೆ ನೀವು" ಎಂದು ಅವರಲ್ಲಿ ಪ್ರಾರ್ಥನೆ. 

*****

ಎಲ್ಲ ನೀರಿನಲ್ಲಿರುವ ಆಪೋದೇವಿಯರಂತೆ ಗಂಗಾನದಿ ನೀರಿನಲ್ಲಿ ವಿಶೇಷ ಅಭಿಮಾನಿ ದೇವತೆಯಾಗಿ ತಾಯಿ ಗಂಗೆ ಇದ್ದಾಳೆ. ಅವಳದ್ದು ತಾಯಿಯ ಕರುಳು. ಎಳೆಯ ಮಕ್ಕಳು ಕೂಗಿ ಕರೆದಾಗ, ತಾನು ಮಾಡುತ್ತಿರುವ ಕೆಲಸವನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮಗುವನ್ನು ಎತ್ತಿಕೊಳ್ಳುವ ಅಮ್ಮನಂತೆ ಕರುಣಾಮಯಿ ಅವಳು. ಕೂಗಿ ಕರೆದವರಿಗೆಲ್ಲಾ ಅವಳು ತಾಯಿಯೇ. ಆದ್ದರಿಂದ ಆ ನದಿ ಇರುವಲ್ಲಿಗೆ ಹೋಗಲಾರದವರು ಆರ್ತರಾಗಿ ಕರೆದರೆ ಅವಳು ಕರೆದವರು ಇರುವಲ್ಲಿಗೆ ಬರುತ್ತಾಳೆ! ಸ್ನಾನ ಮಾಡುವಾಗ ನಮ್ಮ ಹಿರಿಯರು ಹೇಳುತ್ತಿದ್ದ ಈ ಕೆಳಗಿನ ಶ್ಲೋಕ ಅದನ್ನೇ ಹೇಳುತ್ತದೆ:

ಗಂಗಾ ಗಂಗೇತಿ ಯೋ ಬೃಯಾತ್ ಯೋಜನಾನಾಂ ಶತೈರಪಿ 
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಛತಿ 

"ಗಂಗಾ, ಗಂಗೆ ಎಂದು ಯಾರು ಸ್ಮರಣೆ ಮಾಡುತ್ತಾರೋ ಅಂತಹವನು ನೂರಾರು ಯೋಜನ ದೂರವಿದ್ದರೂ ತಾಯಿ ಗಂಗೆಯು (ಅವನಿರುವಲ್ಲಿಗೆ ಬಂದು) ಅವರ ಎಲ್ಲ ಪಾಪಗಳಿಂದಲೂ ಬಿಡುಗಡೆ ಮಾಡುತ್ತಾಳೆ. ಅವನು ವಿಷ್ಣುವಿನ ಲೋಕವಾದ ವೈಕುಂಠವನ್ನು ಸೇರುತ್ತಾನೆ" ಎನ್ನುವುದು ಇದರ ಅರ್ಥ. 
*****

ಹಾಗಿದ್ದರೆ ಬಹಳ ಸುಲಭವಾಯಿತಲ್ಲ! ಗೋಮುಖಕ್ಕೋ, ದೇವಪ್ರಯಾಗಕ್ಕೋ, ಹರಿದ್ವಾರಕ್ಕೋ, ಪ್ರಯಾಗಕ್ಕೋ, ವಾರಾಣಸಿಗೋ, ಏಕೆ ಹೋಗಬೇಕು? ಈ ಶ್ಲೋಕ ಹೇಳಿದರೆ ಆಯಿತಲ್ಲ. ಪ್ರತಿದಿನ ಗಂಗಾಸ್ನಾನ ಮಾಡಿದಂತೆ ಆಯಿತಲ್ಲ. ಎಲ್ಲ ಸುಲಭ. ಅಲ್ಲಿಗೆ ಏಕೆ ಹೋಗಬೇಕು? 

ಅದು ಅಷ್ಟು ಸುಲಭವಾದ ಪರಿಹಾರವಲ್ಲ. 

ನಾವು ಪ್ರತಿದಿನ ಸ್ನಾನ ಮಾಡುತ್ತೇವೆ ಎಂದು ತಿಳಿದಿದ್ದೇವೆ. ವಾಸ್ತವವಾಗಿ ನಾವು ಮಾಡುವುದು ಬರೀ ಮೈ ತೊಳೆದುಕೊಳ್ಳುವ ಕ್ರಿಯೆ. ಸ್ನಾನ ಮಾಡುವಾಗ ನೂರಾರು ಯೋಚನೆಗಳು. ಸ್ನಾನ ಮುಗಿಸಿದರೆ ಸಾಕು. ಬೇರೆ ಕೆಲಸಗಳಿಗೆ ಓಡಬಹುದು ಎನ್ನುವ ಮನಸ್ಥಿತಿ. ಶ್ರೀಹರಿಯ ಪಾದದಿಂದ, ಸದಾಶಿವನ ಶಿರದಿಂದ ಇಳಿದು ಬಂದು, ನನ್ನ ತಲೆಯ ಮೂಲಕ ಹಾದು ದೇವಗಂಗೆ ನನ್ನನ್ನು ಪಾವನ ಮಾಡುತ್ತಿದ್ದಾಳೆ ಎಂದು ಅನುಸಂಧಾನ ಬೇಕು. ಆ ಮಂತ್ರದಲ್ಲಿ ಧೃಡವಾದ ನಂಬಿಕೆ ಬೇಕು. ಏಕಾಗ್ರತೆ ಬೇಕು. ಕ್ಷಣದಿಂದ ಕ್ಷಣಕ್ಕೆ ಕಪಿಯಂತೆ ಹಾರುವ ಮನಸ್ಸಿಗೆ ಅದು ಸುಲಭ ಸಾಧ್ಯವಲ್ಲ. 

ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಶ್ಲೋಕ ಹೇಳಿಕೊಂಡು ಸ್ನಾನ ಮಾಡುತ್ತೇವಲ್ಲ ಎಂದು ಸುಮ್ಮನೆ ಕೂಡುವಹಾಗಿಲ್ಲ. ಗಂಗಾನದಿ ಇರುವಲ್ಲಿಗೆ ಪ್ರಯತ್ನ ಪೂರ್ವಕ ಹೋಗಿ ವಿಧಿಯಂತೆ ಗಂಗಾಸ್ನಾನ ಮಾಡುವುದು ನಂಬಿದವರಿಗೆ ಒಂದು ಕರ್ತವ್ಯ. ಹೋಗುವ ಶಕ್ತಿ ಇದ್ದರೂ ಕಳ್ಳ ಮೈಯಿಂದ ತಪ್ಪಿಸಿಕೊಂಡು ಮೇಲಿನ ಶ್ಲೋಕ ಹೇಳಿಕೊಂಡು ಎಷ್ಟು ವರ್ಷ ಸ್ನಾನಮಾಡಿದರೂ ಪ್ರಯೋಜನವಿಲ್ಲ. 

*****

ಗಂಗಾಸ್ನಾನಕ್ಕೆ ಹಂಬಲಿಸುತ್ತಾ, ಒಮ್ಮೆಯೂ ಅಲ್ಲಿ ಹೋಗಲಾರದಿದ್ದರೂ ಹೋಗುವವರಿಗೆ ಸೇವೆ, ಸಹಕಾರಗಳನ್ನು ಕೊಡುತ್ತಿದ್ದ ಗಂಗಾದಾಸನಿಗೆ ಪ್ರತಿದಿನ ಗಂಗಾಸ್ನಾನ ಮಾಡಿದವನಿಗಿಂತ ಹೆಚ್ಚಿನ ಪುಣ್ಯ ಬಂದಿತೆಂದು ತಿಳಿಸುವ ಕಥೆಯೊಂದು "ಕಾರ್ತಿಕಮಾಸ ಮಹಾತ್ಮೆ" ಸಂದರ್ಭದಲ್ಲಿ ಬರುತ್ತದೆ. ಅದನ್ನು ತಿಳಿಯಲು ಆಸಕ್ತಿ ಇರುವವರು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Sunday, February 17, 2019

Send Him Here First




The ongoing Prayagraj Kumbh Mela is one of the biggest religious congregations in the world. The 48-day festival starting form "Makara Sankranthi" day and concluding on 4th March, 2019 attracts over 150 million devotees from all parts of the world. The congregation is not only the biggest but also exceeds the populations of several countries in the world put together. Kumbh Mela is held in four cities (Haridwar, Nashik, Ujjain and Prayagraj) by rotation depending on the celestial position of the planets. The belief is that the heavenly nectar obtained by churning of the milky ocean was being carried in a sacred pitcher, when a few drops fell on earth in these four places. As with many things linked to faith, the enthusiasm of the congregation is seen to be believed.

During the last fortnight I had the occasion to talk to half a dozen friends who happened to attend the Kumbh Mela this year. From their unanimous reports it is found that the arrangements made this year were fantastic and unprecedented. The usually uncontrollable crowds were managed very well and the army of volunteers ensured that cleanliness was maintained to the maximum possible extent. It is reported that the volunteers were moving around with baskets in their hands to remove any unwanted item falling on the ground and move them away to the dust bins. There was also more self-discipline among the congregation and clean environment consciousness was visible all-round the mela areas.

Visitors to Varanasi during this period have also reported that many encroachments around the Kashi Vishwanath Temple have been cleared and the path from the river Ganga to the temple is now smooth and easy. Work is still going on but the effects are already visible. Shape of these temple towns, which were unfortunately known for the filth and foul smell, is indeed changing. One can only hope that this development will find its logical conclusion and cleanliness and godliness will be seen together in future.
*****

It is common knowledge that River Ganga is highly revered and is referred as Mother Ganga (Ganga Mai) or Ganga ji. Uttarakhand High Court in a judgement last year gave the status of a person to Ganga and Yamuna rivers and decreed that these rivers have the same rights as persons. There are many stories about Ganga river in our vast literature.

It is believed that Ganga was born when King Maha Bali washed the feet of Lord Vamana before granting him three feet of land as promised by the King. When the Lord lifted his leg to cover the entire upper worlds, the edge of his foot finger nail cracked the shell of the universe and Ganga flowed from there. Ganga was held by Lord Shiva on the whiskers of his head and became Gangadhara. Taking a dip in River Ganga is a life long dream of people who live far away from the flow of the river. It is also believed that taking a dip in the holy river burns away accumulated sins and paves the way for heaven.

There is a very interesting story about River Ganga in the "Kartika Masa Mahatme", the month that follows Deepavali festival. There was a very devout person, Gangadas, living on the bank of the River Ganga. He had taken a vow that he will not eat anything on any day unless he visits the river and bathes in it. For years and years he sincerely followed this ritual. His entire life revolved around The great river. Due to some reason, he had to once go to another place away from the river. He tried his best to avoid the trip so that he would not miss his daily bath in the river. But he had to go. He decided that since he could not take bath in the river on those days of travel, he would not accept anything to eat from those who have not taken a dip in the river.

Gangadas followed this rule rigorously for several days. On the way back he had to stay overnight in one of the places. He had heard from people coming to his place to bathe in River Ganga that a person there, one Bhakta Das was running a guest house for pilgrims to stay overnight and rest. He had also arranged to provide them lunch on regular basis. All pilgrims taking that route would stay in the guest house for a day, take rest, have lunch and thereafter resume their journey. The news of service rendered by this persons had spread far and wide and our Gangadas had also heard of him. Gangadas decided to stay in Bhakta Das's guest house for a day and resume his journey.

Bhakta Das came to know from his staff that Gangadas was staying overnight in his place. Next morning Bhakta Das visited Gangadas and told him, "I had heard of your devotion to Mother Ganga. Today I am indeed blessed to see you in person, one who has seen and bathed in Mother Ganga regularly for so long. I request you to be my chief guest at today's prasad ceremony and bless us all". Gangadas was happy and agreed to the proposal. 


After the rituals on the next day when all the traveling guests had assembled to have lunch, Gangadas asked Bhakta Das when he had last visited River Ganga. Bhakta Das was very apologetic and said that he had not seen the River even once in his life as he was unable to move away from his guest house lest it will cause inconvenience to the travellers. His dream remained a dream. Gangadas became very angry and shouted at Bhakta Das. "What? You have not bathed in the Mother River even once? Don't you know that I do not accept food from anyone who has not bathed in the River Ganga? One should not even see your face", he said and walked away without listening to the pleadings of Bhakta Das and others.

Gangadas returned to his place and went to the river next day for his usual bath in the morning. To his surprise he found that he could not see the river and its waters. Others were going to the river but he could not see the river waters. Overcome by deep grief he prayed to the Mother River. After much pleadings he heard a voice which said, "You have insulted a true devotee of the Mother River. Bhakta Das might not have come here, but he has helped thousands over the years to come here and realise their dreams. He has earned much higher blessings due to this than whatever you have earned. By insulting such a person you have forfeited the right to see Mother Ganga".

Gangadas realised his blunder and begged the river to forgive him and pardon his mistake. The voice now said, "If you want to atone for your sins, go back to Bhakta Das. Take over the duty of managing the guest house for sometime and relieve Bhakta Das to come here and realise his life's dream. Send him here first. Once that is done you will regain your eligibility to see the river again".

Needless to say, Gangadas dutifully did the same and atoned for his lapses. Bhakta Das also achieved his long time wish.
*****

Whatever service is done to serve a noble cause is indeed worth as much as doing the noble deed oneself. Many have said this before. That is what John Milton also meant when he said, "They also serve who only stand and wait".

Sunday, November 27, 2016

52 Steps to River Ganga


Effective communication is an art. Writing and speaking is also an art as they are integral to effective communication. Not everyone is endowed with the skills of speaking and writing effortlessly. When some people talk, it is difficult to understand what they actually wish to convey. It is indeed tough to understand what many people write. The many components of communication such as intent to communicate, composing the message for either writing or speaking out, choosing the right word for the occasion, finding the appropriate medium etc. call for considerable skills to make the art of communication effective. Some people are endowed with these qualities to an exceptional degree. It is a pleasure to read or listen to such talented people. Human brain is capable of doing all these actions at once. But all human brains do not work with the same efficiency. Some are extremely talented. They can give instant reply with wit or sarcasm to any subject hurled at them. They can play with words and thoughts effortlessly. What is talent? It is defined in many ways. Bhatta Touta has given a very wonderful meaning to this word "Talent". It is the urge to create something new continuously and spontaneously, and often without any apparent effort. Please Click Here to read a post on "Talent" as defined by Bhatta Touta.

Vengimandala, the region between Krishna and Godavari rivers in Andhra, has produced many brilliant and learned scholars and poets who displayed this type of tremendous talent of quick wit, wisdom and ability to play with words. Among these many scholars and poets, Jagannatha Panditaraja stands tall and holds his own place even after over three hundred years. Jagannatha was born in Manikhanda Agraharam (present Munganda in Amalapuram sub-division of East Godavari district) and lived in the early part of 17th century AD. He came from a family of scholars and was known for his immense capacity to construct poems on any subject instantaneously. He tried for support from contemporary Kings. Vijayanagara empire was on the decline and hence he moved up north and ended in the court of Jaipur Kings. There was a Kazi there, a Persian scholar who had learnt Sanskrit and was challenging the scholars in the King's court to debate with him in Sanskrit and Persian. He had defeated all the scholars present there. The Jaipur King wanted Jagannatha to try his turn. Jagannatha took six months time, learnt Persian and Koran and defeated the Kazi in debate. 

Jagannatha's fame reached the Mughal Kings in Agra. Emperor Shah Jahan advised the Jaipur King who was his subordinate to send Jagannatha to his royal court. Shah Jahan's eldest son Dara Shikoh had learnt Sanskrit and was instrumental in translating many Sanskrit epics to Persian. (Dr Chandraprakash Dwivedi, who produced and acted in the lead role as "Chanakya" is on record to state that Dara Shikoh was responsible for translating 22 Upanishads to Persian and through Persian they reached Europe.) Dara Shikoh became a good friend of Jagannatha. Shah Jahan made Jagannatha as a court poet and conferred the title "Panditaraja" (King among scholars) on him.

Jagannatha has many literary works to his credit. His Rasa Gangadhara is a much acclaimed work in Alankara Shastra (Poetics). His other works are of high quality and his brilliance radiate form them. He was ruthless and arrogant in dealing with other poets and their works. He was a junior contemporary of the famous Advaita scholar Appaiah Deekshita and criticized his works with personal vengeance.  

There is a very interesting story about the life of Jagannatha Panditaraja. Once Emperor Shah Jahan and Jagannatha were playing chess. Shah Jahan became thirsty and wanted water. He rang the bell for water. A girl came from behind the curtain carrying a jug and served him water. Jagannatha looked at her and was captivated by her beauty. Even after she left and Shah Jahan made the next move on chess board, Jagannatha was still looking at the girl who was now standing behind the curtain. Shah Jahan asked Jagannatha whether he could make a poem to describe the girl's beauty. Jagannatha recited the following as if he was waiting for the call:
 इयं सुस्तनी मस्तकन्यस्तकुम्भा 
कुसुम्भारुणं चारुचेलं वसाना |
समस्तस्य लोकस्य चेतः प्रवृत्तिं 
जीत्वा घटे विन्यस्ययातीवधाती ||

Iyam sustani mastakanyastakumbhaa
Kusumbhaarunam charuchelam vasaana
samastasya lokasya chetah pravruttim
Jeetva ghate vinyasyayateevadhaatee

While appreciating her beauty, Jagannatha recited that while going away after serving water, she had arrested the life of those present there, filled the jug with it and taken away. The jug was heavier when she left despite pouring away the water in it!

Shah Jahan was much impressed and wanted to give a present to Jagannatha. Jagannatha asked the emperor for her hand in marriage. Shah Jahan told him that she was his foster daughter Lavangi and a Muslim girl and Jagannatha may not marry her being from a religious family. Jagannatha insisted on marrying her and the emperor agreed. Thus Jagannatha became the emperor's foster son-in-law. For the next twenty years Jagannatha Pandita had all the wealth and pleasures of life as the emperor's foster son-in-law. When Shah Jahan got a monument constructed for his wife Mumtaz, it is said that Jagannatha suggested to name the monument as "Mumtaz Mahal". Present name of Taj Mahal is derived from that.

In today's world Jagannatha's marriage to Lavangi may not matter at all, but in those days it was not received well by his contemporary scholars and poets. When emperor Shah Jahan fell ill later in his life and Aurangzeb took his place, Jagannatha had to move away from Agra and started to live in Varanasi. Jagannatha had bad days in Varanasi. Appaiah Deekshita was on his way to River Ganga with his disciples in the Panchaganga Ghat in Varanasi. He found someone lying on the steps of the Ghat and woke him up. He was startled to see that it was Jagannatha Pandita. What a fall for someone who had ruled the literary world as Panditaraja, he said. Moved by his comments, Jagannatha composed poems in praise of River Ganga instantaneously. As he recited the slokas of what is now known as "Gangalahari", the river waters rose a step level for each sloka. As he completed his 52nd sloka, the river waters reached him and took him away. How much truth is there in this story is not known, but he probably had a dip in the sacred river to atone for his sins of being arrogant with his contemporaries. The 52 steps of Panchagnaga Ghat and the 52 slokas of Gangalahari are a witness to this episode. 
*****  
A Tamil film titled "Lavangi" was produced based on the life of Jagannatha Pandita and Lavangi, in 1946. Yaragudipati Varada Rao, better known as Y V Rao, directed the movie and played the role of Jagannatha Pandita. Rao made some changes in the story to suit cinematic interests. The film showed that the young wife of Jagannatha who was left behind in his native place moved to Agra and changed herself as Lavangi to find her husband. B R Panthulu played the role of emperor Shah Jahan. Kumari Rukmini acted as Lavangi. It was considered as a trendsetter. The film was later dubbed in Hindi as well, but was not a success at box office. But it made another contribution to Indian cinema. Y V Rao and Kumari Rukmini fell in love and got married when the movie was being made. Yesteryears heroine Lakshmi (known as Julie Lakshmi) is the daughter of Y V Rao and Kumari Rukmini. As is well known, Lakshmi has acted and is acting in movies of all South Indian languages as well as Hindi and earned name and fame. She is a worthy successor to her father Y V Rao, who has the distinction of directing the first Kannada Talkie movie "Sati Sulochana" and many other contributions to the film world.
*****

The legend of Jagannatha Pandita and his brilliant works continue to shine in literary circles. His name is taken with utmost respect whenever literary criticism and poetics are discussed.