Showing posts with label Kashi. Show all posts
Showing posts with label Kashi. Show all posts

Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Sunday, December 8, 2024

ಬಿಂದು ಗಂಗೋದಕ

ನಾವು ಅರವತ್ತು-ಅರವತ್ತೈದು ವರುಷಗಳ ಹಿಂದೆ ಶಾಲೆಗಳಲ್ಲಿ ಓದುತ್ತಿದ್ದಾಗ ಕೆಲವು ಕವನಗಳನ್ನೂ ಮತ್ತು ಗದ್ಯಕಾವ್ಯ ಅಥವಾ ಚಂಪೂ ಕಾವ್ಯಗಳ ಭಾಗಗಳನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸಿರುತ್ತಿದ್ದರು. ಪಠ್ಯ ಪುಸ್ತಕಗಳಲ್ಲಿ ಈ ಭಾಗದ ನಂತರ "ಕವಿ-ಕಾವ್ಯ ವಿಚಾರ" ಎನ್ನುವ ಶೀರ್ಷಿಕೆಯಡಿ ಕೆಲವು ಸಾಲು ಕವಿಯ ಮತ್ತು ಆ ಕಾವ್ಯದ ಹಿನ್ನೆಲೆಯ ಬಗ್ಗೆ ಕೊಟ್ಟಿರುತ್ತಿದ್ದರು. ಯಾವುದೇ ಸಾಹಿತ್ಯದ ಭಾಗ ಅರ್ಥವಾಗಬೇಕಿದ್ದರೆ ಆ ಕೃತಿಯ ಕರ್ತೃ (ಕೃತಿ ರಚನೆ ಮಾಡಿವರು), ಅವರ ಕಾಲ (ಜೀವಿಸಿದ್ದ ಸಮಯ) ಮತ್ತು ದೇಶ (ಬದುಕಿದ್ದ ಪರಿಸರ) ಇವುಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಇಲ್ಲದೆ ಹೋದರೆ ಆ ಕೃತಿಯ ಪೂರ್ಣ ಪರಿಚಯ ಆಗುವುದಿಲ್ಲ. ನಾವು ಕೃತಿಗಳನ್ನು ಅವಲೋಕಿಸುವುದು ಇಂದಿನ ಕಾಲದಲ್ಲಿ. ನಾವು ಬದುಕುವುದು ನಮ್ಮ ಪರಿಸರದಲ್ಲಿ. ಓದುವ ಕೃತಿಯಾದರೋ ಎಂದೋ ರಚನೆಯಾದದ್ದಿರಬಹುದು. ಕೃತಿಯಲ್ಲಿ ಕವಿ ಅಂದು ಕಂಡ ಪರಿಸರ ಮತ್ತು ಸಮಾಜದ ಪ್ರತಿಬಿಂಬ ಕೊಟ್ಟಿರುತ್ತಾನೆ. ಕೊಂಚವಾದರೂ ಇವುಗಳ ಪರಿಚಯ ಇಲ್ಲದಿದ್ದರೆ ಅದನ್ನು ತಿಳಿಯುವುದು ಹೇಗೆ? ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು "ಕಾರಿಹೆಗ್ಗಡೆಯ ಮಗಳು" ಎನ್ನುವ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಕೊಟ್ಟಿರುವ ವಿವರಣೆಯನ್ನು ನೋಡಬಹುದು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಾಶಿ ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಟ್ಟಣಕ್ಕೆ ವಾರಾಣಸಿ ಮತ್ತು ಬನಾರಸ್ ಎಂದೂ ಹೆಸರುಂಟು. ಈ ಹೆಸರುಗಳು ಹೇಗೆ ಬಂದವು, ಅವುಗಳ ವಿಶೇಷಗಳು ಏನು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಕಾಶಿ ಕ್ಷೇತ್ರ ಸಂದರ್ಶಿಸಲು  ಹೋಗುವ ಶ್ರದ್ದಾಳು ಜನಗಳು ವಿಶ್ವನಾಥನ ದೇವಾಲಯವನ್ನು ನೋಡಿ ಹಿಂದಿರುಗುತ್ತಾರೆ. ಆದರೆ ಕಾಶಿ ಕ್ಷೇತ್ರಕ್ಕೆ ಮೂವರು ಮುಖ್ಯ ಅಧಿದೇವತೆಗಳಿದ್ದಾರೆ ಎಂದು ಹೇಳುತ್ತಾರೆ. ಅವರುಗಳು ವಿಶ್ವನಾಥ, ಕಾಲಭೈರವ ಮತ್ತು ಬಿಂದು ಮಾಧವ. ವಾರಾಣಸಿ ಅಥವಾ ಕಾಶಿ ನಗರ ಇರುವ ಪ್ರದೇಶದ ಗಂಗಾನದಿಯ ದಡವನ್ನು ಅನೇಕ ಘಟ್ಟಗಳೆಂದು (ಘಾಟ್ ಎಂದು ಪ್ರಸಿದ್ಧ) ವಿಂಗಡಿಸಿದ್ದಾರೆ. ಈ ಘಟ್ಟಗಳಿಗೆ ಆಯಾಯಾ ಹೆಸರುಗಳು ಬರಲು ಅನೇಕ ಕಾರಣಗಳಿವೆ. ಇದರಲ್ಲಿ ಮಣಿಕರ್ಣಿಕಾ ಘಾಟ್ ಬಹಳ ಪ್ರಸಿದ್ಧ. ಇಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಅನೇಕ ಚಿತೆಗಳು ಉರಿಯುತ್ತಿರುವುದನ್ನು ಕಾಣಬಹುದು. ಮೃತರ ದೇಹಗಳಿಗೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಉನ್ನತ ಲೋಕಗಳು ಮೃತರಿಗೆ ಸಿಗುತ್ತವೆ ಎಂದು ಪ್ರಬಲವಾದ ನಂಬಿಕೆ. 

ಮಣಿಕರ್ಣಿಕಾ ಘಾಟ್ ಪ್ರದೇಶವನ್ನು ಮೊದಲು ಮಾಡಿಕೊಂಡು ಅಸ್ಸಿ ಘಾಟ್ ವರೆಗೆ (ಅಸ್ಸಿ ನದಿ ಗಂಗೆ ಸೇರುವ ಸ್ಥಳ) ಶಿವಕಾಶಿ ಎಂದೂ, ಮಣಿಕರ್ಣಿಕಾ ಘಾಟ್ ನಿಂದ ಆದಿಕೇಶವ ಘಾಟ್ ವರೆಗೆ ವಿಷ್ಣು ಕಾಶಿ ಎಂದೂ ಕರೆಯುತ್ತಾರೆ. ಈ ಘಟ್ಟಗಳಲ್ಲಿ ಪಂಚಗಂಗಾ ಘಟ್ಟವೂ ಒಂದು. ಇದರ ಬಳಿಯಲ್ಲಿ ಈಗ ಇರುವ ಸಣ್ಣ ದೇವಸ್ಥಾನವೊಂದು "ಬಿಂದುಮಾಧವ ದೇವಸ್ಥಾನ" ಎಂದು ಹೆಸರಾಗಿದೆ. ಅನೇಕ ಜನ ಶ್ರದ್ಧಾಳುಗಳು ಕಾಶಿಯಾತ್ರೆ ಈ ಬಿಂದು ಮಾಧವನ ದರ್ಶನವಿಲ್ಲದೆ ಪೂರ್ತಿಯಾಗದು ಎಂದು ನಂಬುತ್ತಾರೆ. 

*****

ಶ್ರೀ ಪುರಂದರದಾಸರು ವಿಜಯನಗರದ ಕರ್ನಾಟಕ ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಜೀವಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು ಸಮಕಾಲೀನರು. ಅವರುಗಳ ವಯಸ್ಸಿನಲ್ಲಿ ಸ್ವಲ್ಪ ಅಂತರ ಇದ್ದರೂ ಅವರ ಜೀವಿತದ ಬಹಳ ಕಾಲ ಈ ಮೂವರೂ ವಿಜಯನಗರದಲ್ಲಿ ಬದುಕಿ ಬಾಳಿದವರು. ಶ್ರೀ ಪುರಂದರದಾಸರ ಕಾಲ ಸುಮಾರಾಗಿ 1485 ರಿಂದ 1564 ಎಂದು ನಂಬಲಾಗಿದೆ. 1564ರ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರು ದೇಹತ್ಯಾಗ ಮಾಡಿದರೆಂದು ಈಗಲೂ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಆರಾಧನೆಯನ್ನು ನಡೆಸುತ್ತಾರೆ. ಪುರಂದರದಾಸರ ಕಾಲದಲ್ಲಿ ಅವರು ಅನೇಕ ಬಾರಿ ಕಾಶಿ ಕ್ಷೇತ್ರಕ್ಕೆ ಯಾತ್ರೆ ಮಾಡಿದ್ದರು. ಆಗಿನ ದಿನಗಳಲ್ಲಿ ಕಾಶಿ ವಿಶ್ವನಾಥ ಮತ್ತು ಕಾಶಿ ಬಿಂದುಮಾಧವ ಎನ್ನುವ ಎರಡು ವೈಭವೋಪೇತ ದೇವಸ್ಥಾನಗಳು ಇದ್ದವು. ಆದ್ದರಿಂದ ಅವರು ಈ ಎರಡು ದೇವಸ್ಥಾನಗಳನ್ನೂ ನೋಡಿ ದೇವರನಾಮಗಳನ್ನು ರಚಿಸಿದರು. ಇವುಗಳಲ್ಲಿ ಕೆಲವು ಸಿಕ್ಕಿವೆ ಮತ್ತು ಅನೇಕವು ಈಗ ಲಬ್ಧವಿಲ್ಲ. 

1669ರಲ್ಲಿ ಔರಂಗಝೇಬನ ಆಳ್ವಿಕೆಯಲ್ಲಿ ಈ ಸುಂದರವಾದ ಬಿಂದುಮಾಧವ ದೇವಸ್ಥಾನವನ್ನು ಒಡೆದು ಅದರ ಪಕ್ಕ ಮಸೀದಿ ನಿರ್ಮಿಸಿದರು. ದೇವಸ್ಥಾನ ಒಡೆಯುವ ಸುದ್ದಿ ಬಂದಾಗ ದೇವಾಲಯದ ಅರ್ಚಕರು ಮೂಲ ಬಿಂದುಮಾಧವ ಮೂರ್ತಿಯನ್ನು ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟಿದ್ದರಂತೆ. ಕೆಲವು ವರುಷಗಳ ನಂತರ ಶಿವಾಜಿ ಮಹಾರಾಜರ ಆಡಳಿತ ಬಂದ ಸಂದರ್ಭದಲ್ಲಿ ಆ ಮೂಲ ವಿಗ್ರಹವನ್ನು ಹೊರತಂದು ಮತ್ತೆ ಪ್ರತಿಷ್ಠಾಪಿಸಿದರಂತೆ. ಇದೆಲ್ಲ ಅಂತೇ ಕಂತೆ ಪುರಾಣವಲ್ಲ. ಬಿಂದು ಮಾಧವ ದೇವಸ್ಥಾನದ ಸೊಗಸನ್ನು ಆ ಕಾಲದಲ್ಲಿ ನಮ್ಮ ದೇಶ ನೋಡಲು ಬಂದ ಹೊರ ದೇಶದ ಯಾತ್ರಿಕರು ತಮ್ಮ ಲೇಖನಗಲ್ಲಿ ಬರೆದಿಟ್ಟಿರುವ ದಾಖಲೆಗಳಿವೆ. ಇದೆ ರೀತಿ ಮಲ್ಲಿಕಾಫರ್ ಶ್ರೀರಂಗದ ದೇವಾಲಯವನ್ನು ಲೂಟಿ ಮಾಡಿದಾಗ ಅನೇಕರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರಿಂದ ಇಂದು ನಾವು ಶ್ರೀರಂಗದ ದೇವಾಲಯ ನೋಡುತ್ತಿದ್ದೇವೆ, 

ಶ್ರೀ ಪುರಂದರದಾಸರು ಈ ಬಿಂದು ಮಾಧವನ ದರ್ಶನ ಮಾಡಿದ್ದರಿಂದ ತಮ್ಮ ಕೃತಿಗಳಲ್ಲಿ "ಬಿಂದು ಮಾಧವ" ಮೂರ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವನ ಸ್ಮರಣೆಯನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರ ಹೆಚ್ಚು ಜನಪ್ರಿಯ ಕೃತಿಗಳಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೆ ಬಿಂದಿಗೆಯ" ಎನ್ನುವುದೂ ಒಂದು. ಈ ಕೃತಿಯಲ್ಲಿ "ಬಿಂದು ಮಾಧವನ ಘಟ್ಟಕೆ ಹೋಗುವೆ ತಾರೆ ಬಿಂದಿಗೆಯ" ಎನ್ನುವ ಸಾಲು ಇದೆ. ನಾನು ಮೊದಲು ಈ ಕೃತಿ ಕೇಳಿದ್ದು ಸುಮಾರು ಐದು ವರುಷಗಳವನಿದ್ದಾಗ, ನನ್ನ ತಾಯಿ ಹಾಡಿದ್ದು. ಬಿಂದು ಮಾಧವನ ಘಟ್ಟ ಎಂದರೆ ಏನು ಎಂದು ಕೇಳಿ ಸರಿಯಾಗಿ ಉತ್ತರ ಸಿಗದೇ ಮನಸ್ಸಿನಲ್ಲಿ ಕುಳಿತಿತ್ತು. ನಂತರ ಅದರ ಹಿಂದೆ ಹೋಗಿ ಸಂಗ್ರಹಿಸಿದ ವಿವರಗಳು ಈಗ ಈ ಸಂಚಿಕೆಯ ಮೂಲಕ ಹೊರಬಂದಿರುವುದು ಒಂದು ವಿಶೇಷವೇ ಸರಿ! 

*****

ನಮ್ಮ ದೇಶದಲ್ಲಿ ಮುಖ್ಯವಾಗಿ ಐದು ಮಾಧವನ ದೇವಸ್ಥಾನಗಳು ಇವೆ. ಅವು ಯಾವುವೆಂದರೆ:
  1. ಕಾಶಿಯ ಬಿಂದು ಮಾಧವ 
  2. ಪ್ರಯಾಗದ ವೇಣಿ ಮಾಧವ 
  3. ರಾಮೇಶ್ವರದ ಸೇತು ಮಾಧವ 
  4. ತಿರುವನಂತಪುರದ ಸುಂದರ ಮಾಧವ 
  5. ಪೀಠಾಪುರಂನ ಕುಂತೀ ಮಾಧವ 
ಮೊದಲ ಮೂರು ಹೆಸರು ಕೆಲವು ವರುಷಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದವು. ಅನೇಕರು ತಮ್ಮ ಮಕ್ಕಳಿಗೆ ಬಿಂದುಮಾಧವ, ಸೇತುಮಾಧವ ಮತ್ತು ವೇಣಿಮಾಧವ ಎಂದು ಹೆಸರಿಡುತ್ತಿದ್ದರು. ನಾನು ಶಾಲೆಯಲ್ಲಿದ್ದ ಕಾಲದಲ್ಲಿ ಈ ಹೆಸರಿನ ಹುಡುಗರು ನಮ್ಮ ಶಾಲೆಗಲ್ಲಿ ಓದುತ್ತಿದ್ದರು. ಈಗ ನವೀನ ಹೆಸರುಗಳ ಭರಾಟೆಯಲ್ಲಿ ಇದೆಲ್ಲ ಮರೆತುಹೋಗಿದೆ. 

ಮೊದಲ ನಾಲ್ಕು ನಗರಗಳಾದ ಕಾಶಿ, ಪ್ರಯಾಗ (ಅಲಹಾಬಾದ್), ರಾಮೇಶ್ವರ ಮತ್ತು ತಿರುವನಂತಪುರ ಎಲ್ಲರಿಗೂ ಚಿರಪರಿಚಿತ. ಐದನೆಯದಾದ ಪೀಠಾಪುರಂ ಆಂಧ್ರ ರಾಜ್ಯದ ಕಾಕಿನಾಡದ ಬಳಿ ಇರುವ ಪಟ್ಟಣ. ದತ್ತಾತ್ರೇಯನ ಅವತಾರಯೆಂದು ನಂಬಿರುವ ಶ್ರೀಪಾದ ಶ್ರೀವಲ್ಲಭರು ಬಹಳ ದಿನ ಬದುಕಿ ಬಾಳಿದ ಸ್ಥಳ. ಕನ್ನಡದ ಹೆಮ್ಮೆಯ ಚಲನ ಚಿತ್ರ "ಶ್ರೀ ಕೃಷ್ಣದೇವರಾಯ" ದಲ್ಲಿ ಬಂದಿರುವ "ಬಾ ವೀರ ಕನ್ನಡಿಗ" ಮತ್ತು "ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಬೆಳಗಲಿ" ಎನ್ನುವ ವೀರಗೀತೆಗಳನ್ನು ಹಾಡಿರುವ ನಾಗೇಶ್ವರ ರಾವ್ ಈ ಪೀಠಾಪುರಂನವರು. ಅವರು ಪೀಠಾಪುರಂ ನಾಗೇಶ್ವರ ರಾವ್ ಎಂದೇ ಪರಿಚಿತರು. 

*****

ಇಷ್ಟಕ್ಕೂ ಈ ಮಾಧವ ಯಾರು? ಕೇಶವ ಮತ್ತು ಮಾಧವ ಎನ್ನುವ ಪದಗಳನ್ನು ಜೊತೆಯಾಗಿ ಉಪಯೋಗಿಸುತ್ತಾರೆ. ಇದಕ್ಕೆ ಏನಾದರೂ ಸಂಬಂಧವಿದೆಯೇ? ಇವು ಸಹಜವಾದ ಪ್ರಶ್ನೆಗಳು. ಶ್ರೀ ಮಹಾವಿಷ್ಣುವಿನ 24 ಹೆಸರುಗಳು ಕೇಶವಾದಿ ಚತುರ್ವಿಂಶತಿ ನಾಮಗಳು ಎಂದು ಪ್ರಸಿದ್ಧವಾಗಿವೆ. ಶ್ರೀ ಕನಕದಾಸರ "ಈಶ ನಿನ್ನ ಪಾದ ಭಜನೆ ಆಸೆಯಿಂದ ಮಾಡುವೆನು..." ಎನ್ನುವ ಕೃತಿ ಕೇಶವನಾಮವೆಂದೇ ಪ್ರಸಿದ್ಧವಾಗಿದೆ. ಮಹಾವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳು ಹಿಡಿದಿದ್ದಾನೆ ಎಂದು ವರ್ಣಿತವಾಗಿವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಿಡಿದರೆ ಒಟ್ಟು 24 ರೂಪಗಳಾಗುತ್ತವೆ. ಶಂಖ. ಚಕ್ರ, ಗದ, ಪದ್ಮಗಳನ್ನು ಹಿಡಿರುವ ರೂಪ ಕೇಶವ ರೂಪ. ಬೇಲೂರು ಮುಂತಾದ ಚನ್ನಕೇಶವ ಮಂದಿರಗಳಲ್ಲಿ ಇವನ್ನು ಕಾಣಬಹುದು. ಚಕ್ರ, ಶಂಖ, ಪದ್ಮ, ಗದೆ ಹಿಡಿದಿರುವ ರೂಪವೇ ಮಾಧವ ರೂಪ. ಈ ಸಂಚಿಕೆಯ ಮೇಲೆ ಕೊಟ್ಟಿರುವ ಬಿಂದು ಮಾಧವ ವಿಗ್ರಹದಲ್ಲಿ  ಇದನ್ನು ಕಾಣಬಹುದು. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ  Keshava to Krishna ಎಂಬ ಸಂಚಿಕೆಗೆ  ಇಲ್ಲಿ ಕ್ಲಿಕ್ ಮಾಡಿ

ನೇಪಾಳ ದೇಶದ ಗಂಡಕಿ ನದಿ ಸಾಲಿಗ್ರಾಮ ಶಿಲೆಗಳಿಗೆ ಹೆಸರುವಾಸಿ. ಈಗಲೂ ಜನರು ಸಾಲಿಗ್ರಾಮಗಳನ್ನು ಪಡೆಯಲು ಅಲ್ಲಿಗೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬಹಳ ಹಿಂದೆ ಅಗ್ನಿ ಬಿಂದು ಎನ್ನುವ ಋಷಿ ತಪಸ್ಸು ಮಾಡುತ್ತಿದ್ದನಂತೆ. ಅವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣುವು ಮಾಧವ ರೂಪದಲ್ಲಿ ಅವನಿಗೆ ದರ್ಶನ ಕೊಟ್ಟು ಕಾಶಿಯಲ್ಲಿ ಮಾಧವನ ಮಂದಿರವನ್ನು ನಿರ್ಮಾಣ ಮಾಡಿ ಅದಕ್ಕೆ "ಬಿಂದು ಮಾಧವ" ಎಂದು ಹೆಸರಿಡಬೇಕೆಂದು ನಿರ್ದೇಶಿಸಿದನಂತೆ. ಆದ ಕಾರಣ ಬಿಂದು ಮಾಧವನ ದೇವಾಲಯ ಬಂತು!

*****

ಈಗಾಗಲೇ ಈ ಸಂಚಿಕೆ ಬಹಳ ದೀರ್ಘವಾಯಿತು. ನಾವು ಹೊರಟಿದ್ದು "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥ ಮತ್ತು ಗುಹ್ಯರ್ಥ ಹುಡುಕಲು. ಅಲ್ಲಿ ಇರುವ ಅನೇಕ ಪದಗಳಲ್ಲಿ ನಾವು ಗಮನಿಸಿದ್ದು ಹತ್ತು ಪದ ಪುಂಜಗಳನ್ನು. ಅದರಲ್ಲಿ ಒಂದೇ ಇಷ್ಟು ದೀರ್ಘವಾಯಿತು. 

ಹೂವ ತರುವರ ಮನೆಗೆ ಎಂಬ ಕೃತಿಯಲ್ಲಿ ಶ್ರೀ ಪುರಂದರದಾಸರು "ಬಿಂದು ಗಂಗೋದಕ" ಎಂದು ಪ್ರಯೋಗಿಸಿದ್ದಾರೆ. ಬಿಂದು ಎನ್ನುವ ಪದಕ್ಕೆ ಕನ್ನಡ, ಸಂಸ್ಕೃತ ಮತ್ತನೇಕ ಭಾರತೀಯ ಭಾಷೆಗಳಲ್ಲಿ ಚುಕ್ಕೆ, ಸೊನ್ನೆ ಮತ್ತು ಒಂದು ನೀರಿನ ಹನಿ ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ಈ ಪದ ಹಾಡುವಾಗ ಅಥವಾ ಕೇಳುವಾಗ ಈ ಪದಕ್ಕೆ ಒಂದು ತೊಟ್ಟು ನೀರು ಎಂದು ಅರ್ಥ ಮಾಡುತ್ತೇವೆ. ಪುರಂದರದಾಸರು ಉಪಯೋಗಿಸುವ ವಿಶೇಷಾರ್ಥ ಅಥವಾ ಇದರಲ್ಲಿ ಹುದುಗಿರುವ ಗುಹ್ಯಾರ್ಥ ಕೇವಲ ಒಂದು ತೊಟ್ಟು ನೀರಲ್ಲ. ಕಾಶಿ ಯಾತ್ರೆಯಲ್ಲಿ ಬಿಂದು ಮಾಧವನ ದರ್ಶನ ಮಾಡಿ, ಬಿಂದು ಮಾಧವನ ಘಟ್ಟಕ್ಕೆ ಹೋಗಿ ಪ್ರಯಾಸದಿಂದ ತಂದ  ಗಂಗೋದಕ. ಯಾವುದೋ ಒಂದು ತೊಟ್ಟು ನೀರಲ್ಲ!

ಎಲ್ಲರಿಗೂ ಕಾಶಿಯಾತ್ರೆ ಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ತರಲು ಆಗುವುದಿಲ್ಲ. ಹಾಗಾದರೆ ಏನು ಮಾಡಬೇಕು? ಅದಕ್ಕೊಂದು ಸುಲಭೋಪಾಯವಿದೆ. ನೀರನ್ನು ಅರ್ಪಿಸುವಾಗ ಒಂದೇ ಮನಸ್ಸಿನಿಂದ "ನಾನು ತಂದಿರುವ ಈ ನೀರನ್ನೇ ನೀನು ಕೃಪೆಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ಎಂದು ಸ್ವೀಕರಿಸು" ಎಂದು ಕೇಳಿಕೊಂಡರೆ ಆ ಮಹಾಮಹಿಮ ಹಾಗೆಯೇ ಸ್ವೀಕರಿಸುತ್ತಾನಂತೆ. ಅದರಲ್ಲಿ ನಮಗೆ ಅಲ್ಲಾಡದ ವಿಶ್ವಾಸ ಬೇಕು. ಗಟ್ಟಿ ನಂಬಿಕೆ ಬಕು. "ಗಂಗೇಚ ಯಮುನೇಚೈವ" ಎಂಬ ಮಂತ್ರ ಹೇಳುವಾಗ ಇದು ನಿಜವಾಗಿ ಆಗುತ್ತದೆ, ಕೇವಲ ಶಬ್ದಗಳಲ್ಲ ಎನ್ನುವ ಧೃಡ ಭರವಸೆ, ಶ್ರದ್ಧೆಗಳು ಬೇಕು. 

*****

ಒಂದು ಶಬ್ದದ ಗೂಡಾರ್ಥಕ್ಕೇ ಇಷ್ಟಾಯಿತು. ಮಿಕ್ಕವುಗಳ ವಿಶೇಷತೆಯನ್ನು ಮುಂದೆ ಆದಾಗ ಆದಾಗ ನೋಡೋಣ! 

Sunday, April 12, 2020

Kashi, Varanasi and Banaras


The three names Kashi, Varanasi and Banares are used to mention the same place, situate on the banks of the river Ganga in the state of Uttar Pradesh in our country. A recent visit to this ancient and holy city set me thinking about the the three names and their origin. The history of the city and its fame stretch to over 2,000 years and makes an interesting past and present. Many Indians consider a visit to this place a life's goal and ambition. Having a population of over a million people today, it has been an educational, cultural and commercial centre for several centuries. Home for the famous Kashi Vishwanath Temple, Banares Hindu University and the numerous Ghats on the banks of the river Ganga, it is also famous for its Banares Silk Sarees and other commercial attractions. Sarnath, a seat of Buddhist pilgrimage has also now become a part of the city. With Allahabad, now renamed as Prayagraj on the West and Gaya on the East, it is the centre of the Trinity of pilgrimage cities for the Shraddalu people of several generations.


*****


Kashi Mahajanapada, Kingdom of Kashi as known in the yesteryears, referred to the areas in the region around the present Varanasi City. This Kingdom is said to have reached its peak around 2,600 years ago. At that time kashi was bigger than Varanasi and covered large areas of present East UP and Bihar. The kingdom stretched up to the banks of the Son (Sone) river in present Bihar. Sone is the second biggest tributary of Ganga, second only after Yamuna. Sone river flows 5 Kilo meters  wide near Dehri Town, though not much water can be seen in summer months. Kashi Kingdom in those years covered the present Bihar districts of Bhojpur, Rohtas, Kaimur and Buxar as well. There is a Kashi Railway Station in Varanasi even today, on the banks of the river Ganga. It is located in between Varanasi Junction and Mughalsarai Junction, 6 Kilo meters east of Varanasi Junction and 11 Kilo meter Northwest of Mughalsarai, renamed last year as Deen Dayal Upadhyaya Junction.

A scholar from anywhere in India was not considered complete unless he travelled to Kashi and gained the approval of the scholars there. Many learned luminaries from South and Westren India went to Kashi, stayed and learned there for sometime and made their marks on the history of our country. The word "Kashi" is said to have been derived from the word "Shine" due to the city's shining on account of both being a seat of knowledge and lights illuminating it in the nights. The word Kashi is even today associated with Vishwanath, the presiding deity of the city. 


*****


The name Varanasi is derived from the area between two rivers Varana and Assi. These are the two tributaries of Ganga merging with the big river on the north and south side of Varanasi respectively. Assi river has now become a small stream due to urbanisation and difficult to recognise. However, the point at which the river merges with Ganga is known as Assi Ghat and is an important ghat among the many on the banks of the river. This is the place where Prime Minister Modi launched Clean Ganga project in 2014. 


*****


The name Banaras (or Benares or Banares) is of much recent origin. Banaras Zamindari Estate is said to have taken the form of Banares Princely State during the time of Raja Balwant Singh of the Narayan Dynasty, in the 18th century. It was recognised by the British India rulers in 1910. After the country became independent, the last Maharaja of Banaras State, Vibhuti Narayan Singh, signed the accession of the state to the Indian Union on 15th October, 1948. The rulers of this dynasty are even today referred as Kashi Naresh and highly revered. They live in a palace known as Ramnagar Fort, on the southern bank of the river Ganga (See the picture). It is said that Pandit Madan Mohan Malaviya approached the then Maharaja for grant of lands for establishing Banaras Hindu University, in the early years of the last century. Kashi Naresh is said to have told him to start walking from morning and continue till evening and whatever area he covered would be given to the university. An area of 1,300 acres of land was donated to the university by the Maharaja. The vastness of the university is seen to be believed. There is a beautiful Kashi Vishwanath Temple within the University campus.  


Vibhuti Narayan Singh was a great scholar in Sanskrit and Oriental Literature. He studied at Banaras Hindu university. He later on became the Chancellor of the University as well. Unlike many other Maharajas who entered politics after Independence, V N Singh devoted his life for service in the education and cultural fields. He continued and strengthened the Dasara and RamLila celebrations in Varanasi by inaugurating them every year on a procession (see picture), resembling the Jambu Savari celebrations at Mysore.


*****


Vibhuti Narayan Singh was a classmate of another great scholar, Bhagirath Prasad Tripathi, more known as Vagish Shastri. Vagish Shastri is known as "Modren Panini" (see picture) and developed a method to learn and remember Sanskrit Grammar in easy ways. His learning methods have helped many scholars from the west learn Sanskrit and carry the knowledge of our ancient literature to their countries. Once he heard the recording of famous Pop singer Madonna, singing Adi Shankaracharya's Yoga-Taravali (Vande Guroonam Charanaravinde....) and expressed his displeasure about her pronunciation. Madonna later approached him and he taught her the proper pronunciation of the verses! The recording of madonna's Yoga Taravali can be heard on YouTube. 


*****
A visit to Varanasi was indeed an opportunity to recall the many things like these, learnt and heard on different occasions. The stories and history of this wonderful place keep repeating in the mind many times over.....

Sunday, May 11, 2014

Varanasi and Annam Bhatta

Varanasi, also known as Kashi, is continuously in the news for the past few weeks.  As Varanasi goes to polls tomorrow,  tensions run high.  It was a high profile and big decibel campaign and everyone is looking expectantly at the future.

The first I heard of Kashi (Varanasi) was as a child when someone in our town went there on a pilgrimage.  With no communication facilities except a post card that might be received after several days, those going to far away Kashi and returning after the darshan of Kashi Vishweswara and Annapoorneswari were considered extremely lucky and achieved a coveted goal in their life. When returning from Kashi, they usually brought the water of the sacred river, Ganga stored in sealed copper containers. After a few days rest, they would make another trip to Rameswaram and fulfill the second part of the pilgrimage.  The Ganga water brought from Kashi would be used for the "Abhishekam" of Lord Rameswara.  Thus the twin trips of Kashi and Rameswaram was the dream of many a devout elders.  After completing this ambitious pilgrimage, they usually arranged for a grand function.  The occasion was addressed as "Kashi Samaradhane" or "Ganga Samaradhane". A pooja was followed by distribution of some more copper containers filled with Ganga water to the invitees and relatives.  This was an occasion for celebration and a grand feast used to be the highlight for the youngsters in the locality.  The sealed copper containers with Ganga waters in them, received thus by others would receive pooja in their respective houses everyday. The container would be opened and Ganga water offered with due respects, as the last drops of water and tribute to a family member moving away to the heavenly abode.

Another context in which I had heard of Kashi as a child was with reference to the city being a great center of learning.  It is said that Kashi is one of the earliest inhabited city in the world and its history dates back to several thousand years.  Any scholar from other parts of our country was considered as a true pandit only when he went to Kashi, lived there for sometime and pursued higher studies.  Just as "Foreign Returned" was a distinction some four or five decades ago, "Kashi Returned" was considered an achievement for centuries.  Benares Hindu University (BHU) founded by Pandit Madan Mohan Malaviya exemplifies this spirit even today.  BHU will be celebrating its centenary year two years from now.  The rigor of stay and studies at Kashi was symbolically alluded to with the quotation "काशी गमन मात्रेण न अन्नं भटटायते द्विजः", (Kashi gamana matrena na annam bhattayate dwijaha), meaning "A scholar does not become Annam Bhatta merely by going to Kashi".

Who was this Annam Bhatta?  I enquired with some elders but did not receive a satisfactory reply from them.  Many quotations are often used without understanding their actual meaning and this is probably one such.  Many families in the districts of Kolar and Bangalore have the names of Annam Bhatta for generations.  The full name of Annam bhatta is actually Annadana Bhatta, meaning one who generously feeds others. These families have a common Gotra, Haritasa.  On enquiries with them, it is learnt that these families have migrated to these districts from Kurnool area of the present Andhra Pradesh or Rayalaseema. There was a practice of naming a new born after the grandfather or great grandfather and Annambhatta was probably an ancestor of these families.  (Please CLICK HERE to read about "Family Tree" of these families).   Sometime ago, there was a music concert near our house and traffic on the road was closed to accomodate the concert.  i went there to see what was the nature of the concert.  As we were waiting for the artistes to arrive, I saw one girl reading a Sanskrit book in dim light of the street.  I borrowed the book from her and read for a few minutes.  This was a book by name "Tarkasangraha" by Annam Bhatta.  It was a very interesting book on Logic, the science that deals with the principles governing correct or reliable inference. Motivated by this, I studied the book later on and was fascinated by the simple and lucid style followed in the book and yet its scholarly treatment of the subject.

Annambhatta lived in the 16th century and came from a family of Advaitavidyacharyas.  Raghava Somayaji was a well known ancestor of this Telugu speaking family.  He was the son of Tirumala Acharya, and author of several commentaries on "Nyaya Shastra" and Grammar books.  He lived in the golden period of 16th century.  This era is well known for a number of stalwarts and their works.  This period was a very active span of time in philosophy and literature as well with the confluence of masters of all the three schools of thinking; Dwaita, Advaitha and Vishishtadwaita.  Rajaguru Tatacharya was a known Vishishtadwaita stalwart representing the Vishishtadwaita school during the Vijayanagara period.  Vijayendra Tirtha and Vadiraja Teertha were the torch bearers of the Dwaita school in this era. Appaiah Deekshita and Bhattoji Deekshita were acknowledged scholars of the Adwaita school. Annam Bhatta holds his own special place among the luminaries of this distinguished period.

"Tarkasangraha" is a primer and an introduction to "Nyaya System".  An English translation of the book (46 pages only) by Balwant Narhar Bahulikar (1903) is available on the net.  "Dipika" is a commentary on "Tarkasangraha".  A reading of the book makes the meaning of "One does not become Annambhatta by just going to Kashi" very clear.  Annam bhatta did not become a great man by merely going to Kashi.  That many could do.  He worked hard there and came out with very valued works on Logic and Grammar.  he is remembered for the outcome of his visit to Kashi.

Who wins in Varanasi in the election tomorrow is not the issue.  What the winner does thereafter is the moot point. Annambhatta went to Kashi to pursue higher studies.  That was only the beginning.  He spent his time with dedication and succeeded there.  He gave us works like Tarkasangraha and many more.  He became famous and is remembered today not because he went to Kashi, but due to his achievements there.  The one who wins in this election in Varanasi will not be judged on mere emerging a victor in the election.  He will be judged based on what he does or does not do thereafter.