Showing posts with label Artha. Show all posts
Showing posts with label Artha. Show all posts

Monday, February 9, 2026

ಅವರೇ ಆಗಬೇಕೆಂದಿಲ್ಲ!


ಎರಡು ತಿಂಗಳ ಹಿಂದೆ (ಡಿಸೆಂಬರ್ 2025) "ಅಂಥ ಇಂಥವರಲ್ಲ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅನಂತಾದ್ರೀಶ ಅಂಕಿತದ ಗೋಕಾವಿ ಅನಂತಾದ್ರೀಶ ದಾಸರ (ಗೋಕಾಕ್  ಅನಂತಾಚಾರ್ಯರು) ಕೃತಿಯೊಂದರಲ್ಲಿ ವಿವರಿಸಿರುವ ಶ್ರೀ ರಾಘವೇಂದ್ರ ರಾಯರ ಗ್ರಂಥಗಳ ಮತ್ತು ಅವರ ವ್ಯಕ್ತಿತ್ವದ ಒಂದು ಸಣ್ಣ ನೋಟ ಕಾಣುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು).

ಒಬ್ಬರ ಗುಣ ವಿಶೇಷಗಳನ್ನು ತಿಳಿದು ಅವುಗಳನ್ನು ಹೇಳುವುದು ಸ್ತೋತ್ರ ಎನಿಸಿಕೊಳ್ಳುತ್ತದೆ. ನಾವು ಅನೇಕರು ಪ್ರತಿದಿನ ನಮಗೆ ಅನುಕೂಲವಿರುವ ಸಮಯಗಳಲ್ಲಿ ನಮ್ಮ ನಮ್ಮ ಪದ್ದತಿಗಳಂತೆ ಸ್ತೋತ್ರಗಳನ್ನು ಹೇಳಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದೇವೆ. ಈ ರೀತಿಯ ಅನೇಕ ಸ್ತೋತ್ರಗಳು ಒಳ್ಳೆಯ ಕಾವ್ಯಗುಣಗಳನ್ನು ಹೊಂದಿವೆ. ಈ ಬಗೆಯ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಪದಗಳ ಉಚ್ಚಾರಣೆ ಚೆನ್ನಾಗಿ ಆಗಿ ವಾಕ್ಶುದ್ಧಿಯೂ ಆಗುವುದು. ಸಾಮಾನ್ಯವಾಗಿ ಇಂತಹ ಸ್ತೋತ್ರಗಳು ಕಿವಿಗಳಿಗೆ ಇಂಪಾಗಿ, ಮನಸ್ಸಿಗೂ ಹಿತವಾಗಿ ಇರುತ್ತವೆ. ನೆನಪಿನ ಶಕ್ತಿ ವೃದ್ಧಿಯೂ ಆಗುವುದುಂಟು. ಒಟ್ಟಾರೆ ದಿನಚರಿ ಮತ್ತು ನಡವಳಿಕೆಯಲ್ಲಿ ಒಂದು ರೀತಿಯ ಶಿಸ್ತು ಸಹ ಬರುತ್ತದೆ.  

ಅನೇಕ ವೇಳೆ ಈ ಸ್ತೋತ್ರಗಳಲ್ಲಿ ಹೇಳಿರುವ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಹಿರಿಯರು ಹೇಳಿಕೊಳ್ಳುತ್ತಿದ್ದಂತೆ, ಅಥವಾ ನಮ್ಮ ನಮ್ಮ ಗುರುಗಳು ಹೇಳಿಕೊಟ್ಟಿದ್ದಂತೆ ಈ ಸ್ತೋತ್ರಗಳನ್ನು ಹೇಳಿಕೊಳ್ಳುತ್ತೇವೆ. ಅಂದಿನ ಸಂದರ್ಭಗಳಿಂದಲೋ, ಅಥವಾ ಸಮಯದ ಅಭಾವದಿಂದಲೋ, ಅವುಗಳ ಪೂರ್ತಿ ಅರ್ಥ ವಿಶೇಷಗಳನ್ನು ಅವರು ಹೇಳಿರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅದನ್ನು ಕೇಳಬೇಕೆಂದು ನಮಗೂ ತೋಚಿರುವುದಿಲ್ಲ. ಮುಂದೆಯೂ ನಾವು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ. ಕಾಲಕ್ರಮದಲ್ಲಿ ಅವುಗಳ ಅರ್ಥ ಹೇಗೋ ತಿಳಿದುಬಂದಾಗ "ಒಹೋ, ಇದರ ಅರ್ಥ ಹೀಗಿದೆಯೇ?" ಎಂದು ನಾವು ಆಶ್ಚರ್ಯಪಡುವಂತೆ ಆಗುತ್ತದೆ. 

*****

ನಮಗೆ ಯಾವುದೋ ಒಂದು ಸಂಸ್ಥೆಯಲ್ಲಿ ಒಂದು ಕೆಲಸ ಆಗಬೇಕು. ಅದನ್ನು ಮಾಡಿಸಿಕೊಳ್ಳುವುದಕ್ಕೆ ನಮಗೆ ಶಕ್ತಿಯಿಲ್ಲ. ಅಲ್ಲಿ ಯಾರನ್ನು ಕಾಣಬೇಕು ಎಂದು ತಿಳಿದಿಲ್ಲ. ಹೇಗೆ ಕೇಳಬೇಕು ಎಂದು ಗೊತ್ತಿಲ್ಲ. ಏನೇನು ದಸ್ತಾವೇಜು (ಡಾಕ್ಯುಮೆಂಟ್) ತೆಗೆದುಕೊಂಡು ಹೋಗಬೇಕು ಎಂದು ಅರಿವಿಲ್ಲ. ಆದರೂ ಆ ಕೆಲಸವಂತೂ ಆಗಬೇಕು. ಏನು ಮಾಡುವುದು? ಲೋಕಾರೂಢಿಯಲ್ಲಿ ಇಂತಹ ವಿಷಯ ತಿಳಿದ, ನಮಗೆ ಗೊತ್ತಿರುವ ಯಾರೋ ಒಬ್ಬರನ್ನು ಕೇಳುತ್ತೇವೆ. ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅದರ ಪ್ರಕಾರ ದಸ್ತಾವೇಜು ಹೊಂದಿಸಿಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಯಾರನ್ನು, ಯಾವಾಗ, ಹೇಗೆ ಕಾಣಬೇಕು ಎಂದು ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಯಾವ ರೀತಿ ಕೇಳಬೇಕು ಎಂದು ಅವರು ಮಾರ್ಗದರ್ಶನ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಅನೇಕವೇಳೆ ಹೀಗೆ ಮಾಡುವುದರಿಂದ ನಮ್ಮ ಕೆಲಸ ಆಗುತ್ತದೆ. ಹೀಗಿದ್ದೂ, ಕೆಲವೊಮ್ಮೆ ಕೆಲಸ ಆಗದಿರುವುದೂ ಉಂಟು.  

ಕೆಲವು ಕೆಲಸಗಳು ಅವುಗಳ ಸೂಕ್ಷ್ಮತೆ ಗೊತ್ತಿರುವ ದೊಡ್ಡವರೊಬ್ಬರು ನಮ್ಮ ಜೊತೆ ಬಂದಾಗ ಬಹಳ ಸುಲಭವಾಗಿ ಆಗುತ್ತವೆ. ತುಂಬಾ ದೊಡ್ಡವರ ಬಳಿ ಹೀಗೆ ಸಹಾಯ ಕೇಳಿಕೊಂಡು ಹೋಗುವ ಜನರ ಸಂಖ್ಯೆಯೂ ದೊಡ್ಡದು. ಅವರು ಎಲ್ಲರ ಜೊತೆ ಹೋಗಿ ಕೆಲಸ ಮಾಡಿಸಿಕೊಡಲು ಆಗುವುದಿಲ್ಲ. ಆಗ ಅವರು ಒಂದು ಪತ್ರ (ಲೆಟರ್) ಬರೆದುಕೊಡುತ್ತಾರೆ. ಸಂಸ್ಥೆಯಲ್ಲಿ ಸರಿಯಾದವರ ಬಳಿ ಆ ಪತ್ರ ಕೊಟ್ಟರೆ ನಮ್ಮ ಕೆಲಸ ಸುಲಭವಾಗಿ ಆಗುತ್ತದೆ. ಆ ದೊಡ್ಡವರು ಕೊಟ್ಟ ಕಾಗದಕ್ಕೇ ಅಷ್ಟು ಶಕ್ತಿ ಉಂಟು! ಕೆಲವು ಕೆಲಸಗಳು ನಮಗೆ ಬಹಳ ಮುಖ್ಯ. ದೊಡ್ಡವರ ಬಳಿ ಹೋದಾಗ ಅವರು ನಮ್ಮ ಜೊತೆ ಬರುವುದಿಲ್ಲ. ಪತ್ರವನ್ನೂ ಕೊಡುವುದಿಲ್ಲ. ಯಾರೋ ಒಬ್ಬರ ಹೆಸರನ್ನು ಹೇಳಿ "ಅವರ ಬಳಿ ನಾನು ಕಳುಹಿಸಿದೆ ಎಂದು ಹೇಳು" ಅನ್ನುತ್ತಾರೆ. ಅಷ್ಟು ಮಾಡಿದರೆ ನಮ್ಮ ಕೆಲಸ ಆಗುತ್ತದೆ! 

ದೊಡ್ಡವರ ಶಕ್ತಿ ಅಂತಹುದು. ಕೆಲವೊಮ್ಮೆ, ಬಹಳ ಗಹನವಾದ ಕೆಲಸವಾದರೆ, ಅವರೇ ಬರಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭದಲ್ಲಿ ಅವರು ಕೊಟ್ಟ ಕಾಗದವೇ ಸಾಕಾಗುತ್ತದೆ. ಇನ್ನೂ ಅನೇಕ ಸಲ ಅವರ ಹೆಸರಿನಿಂದಲೇ ನಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದುಂಟು. "ಇವರು ಅವರ ಕಡೆಯವರಂತೆ. ಮಾಡಿ ಕೊಟ್ಟುಬಿಡು" ಎಂದು ಮೇಲಧಿಕಾರಿಗಳು ಕೈಕೆಳಗಿನವರಿಗೆ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಗುರಿ ಸಾಧಿಸಿತು. ನಮಗೆ ಬೇಕಾದುದು ಆಯಿತು. ನಮಗೆ ಅದು ಮುಖ್ಯ. 
*****

ಮಂತ್ರಾಲಯ ಪ್ರಭುಗಳ ವಿಷಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? "ಕರೆದಲ್ಲಿ ಬರುವ ರಾಯರು" ಎಂದೇ ಅವರಿಗೆ ವಿಶೇಷಣ. ದೊಡ್ಡವರ ಬಳಿ ನಾವು ಹೋಗುವುದು ಲೋಕಾರೂಢಿ. ಇವರು ಅತ್ಯಂತ ಕರುಣಾಶಾಲಿಗಳು. ಅದಕ್ಕೇ ಅವರಿಗೆ "ನಮೋ ಅತ್ಯಂತ ದಯಾಳವೇ" ಅನ್ನುವುದು. ಅವರು ಬರೀ ದಯಾಳುಗಳಲ್ಲ. ಅವರು ಅತಿ ದಯಾಳುಗಳೂ ಅಲ್ಲ. ಅವರು ಅತ್ಯಂತ ದಯಾಳುಗಳು! ಅವರಿಗಿಂತ ದಯಾಳುಗಳಾಗಿರುವವರು ಕಾಣಸಿಗರು! ಅವರೇ ನಮ್ಮ ಬಳಿ ಬರುತ್ತಾರೆ. ಸರಿಯಾಗಿ ಕರೆಯಬೇಕು. ಅಷ್ಟೇ. 

ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾ 
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:
ತದ್ದರ್ಶನಮ್ ದುರಿತಕಾನನ ದಾವಭೂತಮ್  

ಏನಿದರ ವಿಶೇಷ?  

ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು  ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು),  ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ. 

ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.

*****

ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು. 

ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ. 

*****

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ. 

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ. 

ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!

Saturday, March 29, 2025

ಅನುಭವದ ಆಳ-ಅಗಲಗಳು


ಹಿಂದಿನ ಸಂಚಿಕೆಯಲ್ಲಿ "ಅನುಭವದಿಂದ ಬಂದ ಅರ್ಥ" ಎನ್ನುವ ಶೀರ್ಷಿಕೆಯಡಿ "ಒಬ್ಬಟ್ಟು ಮತ್ತು ಹೋಳಿಗೆ" ಉದಾಹರಣೆಯೊಂದಿಗೆ ಕೃತಿಗಳ ಅಭ್ಯಾಸದಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ, ಗುಹ್ಯಾರ್ಥ ಮತ್ತು ಅನುಭವದಿಂದ ತಿಳಿದು ಬರುವ ಅರ್ಥ ವಿಶೇಷಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

"ಬಾಹ್ಯರ್ಥ - ಅಂತರಾರ್ಥ - ಗೂಡಾರ್ಥ" ಅನ್ನುವ ಮೂಲ ಸಂಚಿಕೆಯಲ್ಲಿ ಕೇವಲ ಓದುವುದರಿಂದ ತಿಳಿಯುವ ಹೊರ ಅರ್ಥ, ಗಮನವಿಟ್ಟು ಓದುವುದರಿಂದ ಹೊಳೆಯುವ ಅಂತರಾರ್ಥ ಮತ್ತು ತಿಳಿದವರಿಂದ ಹೆಚ್ಚಿನ ಶ್ರಮವಹಿಸಿ ತಿಳಿಯಬಹುದಾದ ಗೂಡಾರ್ಥಗಳ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಮೂರೂ ಅರ್ಥಗಳನ್ನು ದಾಟಿದ ಮತ್ತು ಪಡೆದ ಅರ್ಥಗಳು ಕೇವಲ ಪುಸ್ತಕದ ಬದನೇಕಾಯಿ ಆಗದೆ ನಮ್ಮ ಜೀವನದಲ್ಲಿ ಮತ್ತು ಸಾಧನೆಯ ದಾರಿಯಲ್ಲಿ ಉಪಯೋಗಕ್ಕೆ ಬರುವ ದಾರಿಗಂಟಾಗಿ (ಪಾಥೇಯ ಅಥವಾ ಪ್ರಯಾಣದ ಕಾಲದಲ್ಲಿ ಸೇವಿಸಲು ಕೊಂಡೊಯ್ಯುವ ಆಹಾರ-ಪಾನೀಯಗಳು) ಉಳಿಯಲು ಅನುಭವದ ಅವಶ್ಯಕತೆ ಅತಿ ಮುಖ್ಯವಾಗುತ್ತದೆ. ಅಂತಹ ಅನುಭವ ಕಲಿಸುವ ಪಾಠಗಳ ಸ್ವಲ್ಪಮಟ್ಟಿನ ನೋಟಕ್ಕೆ ಇಲ್ಲಿ ಪ್ರಯತ್ನ ಮಾಡೋಣ.
*****

ಒಬ್ಬ ಪೆದ್ದ,, ಒಬ್ಬ ಸಾಮಾನ್ಯ ಮನುಷ್ಯ ಮತ್ತು ಒಬ್ಬ ಜಾಣ, ಇವರು ಮೂರು ಮಂದಿಯ ಗುಣ-ಲಕ್ಷಣಗಳೇನು? ಸುಲಭವಾಗಿ "ಅವನೊಬ್ಬ ಪೆದ್ದ" ಎನ್ನುತ್ತೇವೆ. ಹೇಗೆ ಪೆದ್ದ? ಯಾಕೆ ಪೆದ್ದ? ಲೋಕಾರೂಢಿಯಲ್ಲಿ ಸಾಮಾನ್ಯವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲಾಗದ ಮತ್ತು ಸಾಮಾನ್ಯ ಕೆಲಸಗಳನ್ನೂ ಸರಿಯಾಗಿ ಮಾಡದವನು ಪೆದ್ದ ಎಂದು ವ್ಯವಹಾರ. ಶಾಲೆಗಳಲ್ಲಿ, ತರಗತಿಗಳಲ್ಲಿ ನಪಾಸಾದವರನ್ನು (ಫೇಲ್) ಪೆದ್ದ ಅನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಅದೇ ಪೆದ್ದರು ಅವರ ಜೊತೆ ಓದಿ ಜಾಣರೆನ್ನಿಸಿಕೊಂಡವರಿಗಿಂತ ಜೀವನದಲ್ಲಿ ಎಷ್ಟೋ ಮುಂದೆ ಹೋಗಿರುವುದನ್ನು ನಾವು ಕಂಡಿದ್ದೇವೆ. ಕೆಲವು ವೇಳೆ ಹೆಚ್ಚಿನ ಜ್ಞಾಪಕಶಕ್ತಿ ಇರುವವರನ್ನು ಮತ್ತು ಅದರಿಂದಾಗಿ ಹೆಚ್ಚು ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವವರನ್ನು ಜಾಣರೆಂದು ತಪ್ಪಾಗಿ ತಿಳಿಯುವುದೂ ಉಂಟು. ಕಠಿಣ ಪ್ರಸಂಗಗಳನ್ನು ಸುಲಭವಾಗಿ ನಿಭಾಯಿಸುವವರನ್ನು ಜಾಣ ಎನ್ನುವುದೂ ಕೇಳಿದ್ದೇವೆ. ಓದು ಮತ್ತು ವಿದ್ಯಾರ್ಹತೆ ಇಲ್ಲದೆ ಪೆದ್ದ ಎನ್ನಿಸಿಕೊಂಡವರು ವ್ಯವಹಾರ ಚತುರರಾಗಿ ಡಿಗ್ರಿಗಳುಳ್ಳ ಸಹಪಾಠಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೂ ಕಾಣಬಹುದು. 

ಈ ಮೂರು ವರ್ಗವನ್ನು ಹೀಗೂ ಗುರುತಿಸಬಹುದು:
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದಲೂ ಪಾಠ ಕಲಿಯದೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾ ತೊಂದರೆ ಅನುಭವಿಸುವನು ಪೆದ್ದ. 
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದ ಪಾಠ ಕಲಿತು ಅದೇ ತಪ್ಪುಗಳನ್ನು ಮತ್ತೆ ಮಾಡದೆ ಸುಧಾರಿಸಿಕೊಳ್ಳುವವನು ಸಾಮಾನ್ಯ ಮನುಶ್ಯ. 
  • ಇನ್ನೊಬ್ಬರ ತಪ್ಪುಗಳಿಂದ ಅವರು ಅನುಭವಿಸುವ ತೊಂದರೆಗಳನ್ನು ಕಂಡು, ಅಂತಹ ತಪ್ಪುಗಳನ್ನು ಮಾಡದೇ ಮುಂದುವರೆದು, ಪರರ ಅನುಭವಗಳಿಂದ ಪಾಠ ಕಲಿಯುವವನು ಜಾಣ. 
ಈ ಕಾರಣದಿಂದ ಅನುಭವದಿಂದ ಕಲಿಯುವ ಪಾಠ ಬಹಳ ದೊಡ್ಡದು. ಆದರೆ, ಅನೇಕ ವೇಳೆ, ಇಂತಹ ಅನುಭವದ ಪಾಠಕ್ಕೆ ತೆರಬೇಕಾದ ಶುಲ್ಕವೂ (ಫೀಸು) ಬಹಳ ದುಬಾರಿ!

*****

ಜೀವನದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅನುಭವಗಳು ಆಗುವುದಿಲ್ಲ. ಹುಟ್ಟಿ-ಬೆಳೆದ ಕುಟುಂಬ, ಸುತ್ತಲಿನ ವಾತಾವರಣ, ಆರ್ಥಿಕ ಸ್ಥಿತಿ-ಗತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನ-ಮಾನ, ಮುಂತಾದುವುಗಳು ಒಬ್ಬ ಮನುಷ್ಯ ಪಡೆಯಬಹುದಾದ ಅನುಭವಗಳನ್ನು ಬಹುತೇಕ ನಿರ್ಧರಿಸುತ್ತವೆ. ವ್ಯಕ್ತಿ ಬದುಕುವ ಕಾಲಮಾನವೂ ಇದರಲ್ಲಿ ಮುಖ್ಯವಾಗುತ್ತದೆ. ಇವೆಲ್ಲ ಒಂದೇ ಸಮ ಇದ್ದರೂ ಸಿಗುವ ಅವಕಾಶಗಳು, ಕೈ ಹಿಡಿದು ನಡೆಸುವ ಜನ, ಮತ್ತು ವ್ಯಕ್ತಿಯ ಪರಿಶ್ರಮ ಇವೆಲ್ಲವೂ ಅನುಭವಗಳ ಆಳ-ಅಗಲಗಳನ್ನು ನಿರ್ಧರಿಸುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದವರ ಅನುಭವಗಳಿಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ಹುಟ್ಟಿದವರ ಅನುಭವಗಳಿಗೂ ಅರ್ಥಾತ್ ಸಂಬಂಧ ಇರದು. 

ಕೆಲವು ರೀತಿಯ ಅನುಭವಗಳು ಕೆಲವು ವರ್ಗಗಳಿಗೆ ಮೀಸಲು. ಉದ್ಯೋಗದಲ್ಲಿ ಜೀವನ ಸವೆಸಿದವರ ಅನುಭವ ವ್ಯಾಪಾರದಲ್ಲಿರುವವರಿಗೆ ಬರದು. ಹಾಗೆಯೇ ಒಂದೇ ಸ್ಥಳದಲ್ಲಿ ಜೀವನ ನಡೆಸುವವರಿಗೆ ಆಗುವ ಅನುಭವಗಳಿಗೂ ಸದಾ ಸಂಚಾರದಲ್ಲಿರುವವರಿಗೂ ಆಗುವ ಅನುಭವಗಳು ಬೇರೆ ಬೇರೆ. ಗಂಡಸರ ಅನುಭವ ಮತ್ತು ಹೆಂಗಸರ ಅನುಭವ ಒಂದೇ ಆಗಲು ಸಾಧ್ಯವೇ ಇಲ್ಲ. ಈ ಕಾರಣದಿಂದ ಎಲ್ಲವನ್ನೂ ನಮ್ಮ ಅನುಭವದಿಂದಲೇ ಕಲಿಯುತ್ತೇವೆ ಅನ್ನುವುದು ಹುಚ್ಚುತನ. ಎಲ್ಲವೂ ನಮ್ಮ ಅನುಭವ ಅಥವಾ "ಸ್ವಾನುಭವ" ಆಗಲಾರದು. ಮತ್ತೊಬ್ಬರ ಅನುಭವ ಅಥವಾ "ಪರಾನುಭವ" ಈ ಕಾರಣದಿಂದ ಮುಖ್ಯ ಆಗುತ್ತದೆ. ಅನೇಕ ಸಾಧಕರು ಶತ ಶತಮಾನಗಳಿಂದ ಕೂಡಿಟ್ಟಿರುವ ಅಮೂಲ್ಯ ಅನುಭವಗಳ ಗುಡಾಣವೇ ನಮ್ಮ ಬಳಿ ಇದೆ. ಇವುಗಳನ್ನು ಕೊಟ್ಟವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಇವುಗಳ ಸರಿಯಾದ ಉಪಯೋಗ ಬಹುಮೂಲ್ಯ ಸರಕನ್ನು ಶುಲ್ಕವಿಲ್ಲದೆ ಮತ್ತು ಸುಲಭವಾಗಿ ಪಡೆಯಲು ನೆರವಾಗುವುದು. 

ಅನುಭವದ ಆಳ-ಅಗಲಗಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸುವಾಗ ಎಲ್ಲರಿಗೂ ಸಮಾನವಾಗಿ ಆಗುವ, ಎಲ್ಲ ದೇಶ-ಕಾಲಗಳಿಗೂ ಅನ್ವಯ ಆಗುವ ಅನುಭವದ ಉದಾಹರಣೆಯನ್ನು ಹಿಡಿಯುವುದು ಆಗದ ಮಾತು. ಜೀವನದಲ್ಲಿ ಎಲ್ಲಾ ಮನುಷ್ಯರಿಗೂ ಆಗಿಯೇ ಆಗುತ್ತದೆ ಅನ್ನುವ ಅನುಭವಗಳು ಕೇವಲ ಎರಡು. ಹುಟ್ಟು ಮತ್ತು ಸಾವು. ಎಲ್ಲರೂ ಹುಟ್ಟಲೇಬೇಕು. ಹುಟ್ಟಿದವರೆಲ್ಲರೂ ಸಾಯಲೇಬೇಕು. ತಮಾಷೆಯ ವಿಷಯವೆಂದರೆ ನಾವೆಲ್ಲರೂ ಹುಟ್ಟಿದ್ದರೂ ನಮಗೆ ಅದರ ಅನುಭವವಿಲ್ಲ! ಯಾರಿಗಾದರೂ ತಮ್ಮ ಜೀವನದ ಅನುಭವ ಇದ್ದರೆ ಅದು ಸುಮಾರು ನಾಲ್ಕೈದು ವರ್ಷಗಳ ಬಾಲ್ಯದ ನಂತರ. ಎಲ್ಲರೂ ಒಂದು ದಿನ ಕಂತೆ ಒಗೆಯಬೇಕಾದ್ದೇ ಆದರೂ ಸಾವು ಆದ ಮೇಲೆ ಹಿಂದೆ ಬಂದು ಬೇರೆಯವರಿಗೆ ಹೇಳಲು ಆಗುವುದಿಲ್ಲ. ಆದ ಕಾರಣ ಈ ಅನುಭವಗಳನ್ನು ಪರಾನುಭವದಿಂದಲೇ ನಮ್ಮ ಜೀವಿತ ಕಾಲದಲ್ಲಿ ತಿಳಿಯಬೇಕಾದ್ದು ಒಂದು ವಿಪರ್ಯಾಸ. 

*****

ಎಲ್ಲರಿಗೂ ಅನುಭವವಾಗುವ ಮತ್ತು ತಮ್ಮ ಜೀವಿತಕಾಲದಲ್ಲಿ ನಡೆದ ಘಟನೆ ಅಂದರೆ ಹುಟ್ಟು ಎಂದಾಯಿತು. ತಮ್ಮ ಹುಟ್ಟಿನ ಅನುಭವ ಗೊತ್ತಿಲ್ಲದಿದ್ದರೂ (ನೆನಪಿಲ್ಲದಿದ್ದರೂ) ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಬ್ಬರೂ ಬೇರೆ ಮಕ್ಕಳು ಹುಟ್ಟುವುದನ್ನು ನೋಡುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲಿ ಈ ಘಟನೆಗಳು ಹೆಚ್ಚು ಅರ್ಥವಾಗದಿದ್ದರೂ ವಯಸ್ಸಾದಂತೆ ಅರ್ಥವಾಗುತ್ತಾ ಹೋಗುತ್ತದೆ. ಕಾಲಕ್ರಮದಲ್ಲಿ ತಮ್ಮ ಮನೆಯಲ್ಲೇ ಶಿಶು ಜನನಗಳನ್ನು ನೋಡುತ್ತಾರೆ. ಆದ್ದರಿಂದ ನಮ್ಮ ಚರ್ಚೆಗೆ ಈ ಸಂದರ್ಭವನ್ನೇ ಬಳಸುವುದು ಸೂಕ್ತ. 

ಬೇಕಾದ ಉದಾಹರಣೆ ಬಾಹ್ಯರ್ಥ, ಅಂತರಾರ್ಥ ಮತ್ತು ಗುಹ್ಯಾರ್ಥ ಒಳಗೊಂಡಿರಬೇಕು. ಅನುಭವದ ಪಾಠವೂ ಅದಕ್ಕೆ ಸೇರಬೇಕು. ಆದ್ದರಿಂದ ಶ್ರೀಮದ್ ಭಾಗವತದ ಏಳನೆಯ ಸ್ಕಂದ, ಎರಡನೇ ಅಧ್ಯಾಯದ ಪ್ರಸಿದ್ಧ "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ" (ಭಾಗವತ 7.2.38) ಅನ್ನುವ ಉದಾಹರಣೆಯನ್ನೇ ನೋಡೋಣ. ಒಂದು ಸಾವು ಆಗಿರುವಾಗ ಆ ಸತ್ತ ದೇಹದ ಸುತ್ತ ಕುಳಿತು ದುಃಖಿಸುತ್ತಿರುವ ಪರಿವಾರದವರನ್ನು ಕುರಿತು ಯಮಧರ್ಮನು "ನಾವು ತಾಯಿಯ ಗರ್ಭದಲ್ಲಿ ಇರುವಾಗ ಕಾಪಾಡಿದವನೇ ನಮ್ಮನ್ನು ಮುಂದೆಯೂ ಕಾಪಾಡುತ್ತಾನೆ" ಎಂದು ಹೇಳುವ ಸಂದರ್ಭ. ಇದು ಮುಂದೆ ಬರುವ ಪ್ರಹ್ಲಾದ ಮತ್ತು ಹಿರಣ್ಯಕಶಿಪು ವೃತ್ತಾಂತಕ್ಕೆ ಪೀಠಿಕೆಯಂತೆ ಇದೆ. 

ನಂಬುವವರು "ಶಿಶು ತಾಯಿಯ ಗರ್ಭದಲ್ಲಿ ಇರುವಾಗ ಪರಮಪುರುಷನು ಕಾಪಾಡುತ್ತಾನೆ, ಜನನ ಆಗುವವಗಳೂ ರಕ್ಷಿಸುತ್ತಾನೆ ಮತ್ತು ಮುಂದೆಯೂ ಪೊರೆಯುತ್ತಾನೆ" ಎಂದು ನಂಬುತ್ತಾರೆ. ಭಾಗವತದ ಈ ಭಾಗಗಳನ್ನು ಓದಿದರೆ ಬಾಹ್ಯರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಹರವು ಗೊತ್ತಾಗುತ್ತದೆ. ಈಗ ಅನುಭವದ ಲೇಪನ ಹೇಗೆ ಈ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಎಂದು ನೋಡೋಣ. 

ಮುಂದೆ ಹೋಗುವ ಮೊದಲು ಒಂದು ಮಾತು. ಶಿಶು ಜನನದ ನಿಜವಾದ ನೋವು ಮತ್ತು ಅನುಭವ ಹೆತ್ತ ತಾಯಿಗೆ ಮಾತ್ರ ಗೊತ್ತು. ಇದರಲ್ಲೂ ವ್ಯತ್ಯಾಸಗಳಿವೆ. ಕೆಲವು ಬಹು ಸುಲಭದ ಹೆರಿಗೆ (ನೋಡುವ ಬೇರೆಯವರಿಗೆ) ಇರಬಹುದು. ಮತ್ತೆ ಕೆಲವು ಬಹು ಪ್ರಯಾಸದ ಹೆರಿಗೆ ಇರಬಹುದು. ನೂರು ಹೆರಿಗೆ ಮಾಡಿಸಿರುವ ಪುರುಷ ವೈದ್ಯನಿಗೆ ಹೆರಿಗೆ ಮಾಡಿಸುವುದು ಸ್ವಾನುಭವವಾದರೂ ಹೆರುವುದು ಪರಾನುಭವವೇ ಅಲ್ಲವೇ? ನಾವೆಲ್ಲರೂ, ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಈ ರೀತಿ ಹುಟ್ಟಿದವರೇ! 

***** 

ಸುಮಾರು ಐವತ್ತು ವರುಷಗಳ ಹಿಂದಿನ ಮಾತು. ಆಗ ಇನ್ನೂ ಉಗಿಬಂಡಿಗಳ ಕಾಲ. ಅಂದರೆ ಟ್ರೇನುಗಳು ಸ್ಟೀಮ್ ಎಂಜಿನ್ನುಗಳ ಬಲದಿಂದ ಓಡುತ್ತಿದ್ದವು. ಸುಮಾರು ಹದಿನೆಂಟು ಅಡಿಗಳ ಹಳಿಗಳು ಸೇರಿಸಿ ಮಾಡಿದ ರೈಲು ಮಾರ್ಗಗಳು. ಈಗಿನಂತೆ ಮಧ್ಯೆ ಮಧ್ಯೆ ಹಳಿಗಳನ್ನು ಎರಕ ಹೊಯ್ದು ಕೂಡಿಸುವ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬೋಲ್ಟು ಮತ್ತು ನಟ್ಟುಗಳು ಉಪಯೋಗಿಸಿ ಸೇರಿಸುವುದು ಬಹಳ ಹತ್ತಿರವಿದ್ದುದರಿಂದ ಶಬ್ದವೂ ಹಿಂದು-ಮುಂದಿನ ಜೋಲಿ ಹೊಡೆಯುವುದೂ ಬಹಳ ಹೆಚ್ಚಿತ್ತು, ಮೂರನೆಯ ದರ್ಜೆ ಇನ್ನೂ ಹೋಗಿರಲಿಲ್ಲ. (ಅದು ಹೋಗಿದ್ದು ಸುಮಾರು 1978 ರಲ್ಲಿ. ಮಧು ದಂಡವಟಿ ಅವರು ರೈಲು ಮಂತ್ರಿ ಆಗಿದ್ದಾಗ). ಕಾಯ್ದಿರಿಸದ ಬೋಗಿಗಳು (ಆನ್ ರಿಸರ್ವ್ಡ್ ಕಂಪಾರ್ಟ್ಮೆಂಟ್) ಇರುತ್ತಿದ್ದುದು ಎಂಜಿನ್ ಹಿಂದುಗಡೆ. ನಂತರ ಇತರ ಬೋಗಿಗಳು. ಆಂಧ್ರ ಪ್ರದೇಶದ ಈಲೂರು ಮತ್ತು ರಾಜಮಂಡ್ರಿ ನಡುವಿನ ಟ್ರೇನು. ಕಿಕ್ಕಿರಿದು ತುಂಬಿದ್ದ ಜನ. ತುಂಬು ಗರ್ಭಿಣಿಯೊಬ್ಬಳು ಕುಟುಂಬದವರ ಜೊತೆ ಹತ್ತಿ ಕುಳಿತಳು. ಯಾರೋ ಸ್ವಲ್ಪ ಸರಿದು ಕೂಡಲು ಜಾಗ ಕೊಟ್ಟರು. ಪ್ರಯಾಣ ಸಾಗಿತು. 

ಸ್ವಲ್ಪ ಸಮಯದ ನಂತರ ಆಕೆಗೆ ಶೌಚಾಗಾರಕ್ಕೆ ಹೋಗಬೇಕಾಯಿತು. ಹೋದವಳು ಹೆಚ್ಚು ಹೊತ್ತಾದರೂ ಹೊರಗೆ ಬರಲಿಲ್ಲ. ಜೊತೆಯಲ್ಲಿದ್ದವರು ಹೋಗಿ ನೋಡಿದರೆ ಉಗಿಬಂಡಿಯ ಓಲಾಟದಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಶೈತ್ಯೋಪಚಾರದ ನಂತರ ಎಚ್ಚರವಾಯಿತು. ಇಷ್ಟರಲ್ಲಿ ಪ್ರಸವ ಆಗಿಹೋಗಿದೆ. ಮಗುವು ಶೌಚಾಗಾರದ ದೊಡ್ಡ ಪೈಪಿನಲ್ಲಿ ಕೆಳಗೆ ಬಿದ್ದುಹೋಗಿದೆ. ಅಷ್ಟರಲ್ಲಿ ಟ್ರೇನು ಕೆಲವು ಮೈಲಿ ಮುಂದೆ ಬಂದಿದೆ. ಹತ್ತಾರು ಬೋಗಿಗಳು ಮಗು ಬಿದ್ದ ಸ್ಥಳವನ್ನು ದಾಟಿವೆ. ಬೋಗಿಯಲ್ಲಿದ್ದ ಅಲಾರಾಂ ಚೈನನ್ನು ಎಳೆದು ಟ್ರೈನನ್ನು ನಿಲ್ಲಿಸಿ ಹಳಿಯಗುಂಟ ಮಗುವನ್ನು ಹುಡುಕಿಕೊಂಡು ಹೊರಟರು. 

ಹೀಗೆ ಬರುತ್ತಿರುವಾಗ ಎದುರಿನಿಂದ ಕೆಲವರು ಬರುತ್ತಿರುವುದು ಕಾಣಿಸಿತು. ಮಗುವೊಂದನ್ನು ಒಬ್ಬರು ಕೈಲಿ ಹಿಡಿದು "ಇದು ಯಾರ ಮಗು? ಟ್ರೇನಿಂದ ಬಿದ್ದಿರಬಹುದು. ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಳುವುದು ಕೇಳಿಸಿತು" ಎಂದರು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದರೂ, ಕೆಳಗಡೆ ನುರುಜುಗಲ್ಲು ರಾಶಿಯೇ ಇದ್ದರೂ ಕೆಲ ತರಚು ಗಾಯದ ಹೊರತಾಗಿ ಮಗು ಕ್ಷೇಮವಾಗಿತ್ತು! ತಾಯಿಗೆ ಮಗು ಸಿಕ್ಕಿತು. ಮಗುವಿಗೆ ತಾಯಿ ಸಿಕ್ಕಿದಳು. 

ಚಾಗಂಟಿ ಕೋಟೇಶ್ವರ ರಾವ್ ಆಂಧ್ರ ಪ್ರದೇಶದ ವಿಖ್ಯಾತ ವಿದ್ವಾಂಸರು. ತೆಲುಗು ಭಾಷೆಯ ಪ್ರವಚನಗಳಲ್ಲಿ ಬಹಳ ಹೆಸರು ಮಾಡಿದವರು. "ಪ್ರವಚನ ಚಕ್ರವರ್ತಿ", "ಶಾರದಾ ಜ್ಞಾನ ಪುತ್ರ" ಮೊದಲಾದ ಅನೇಕ ಬಿರುದುಗಳಿಂದ ಸನ್ಮಾನಿತರು. "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೆ" ಅನ್ನುವುದರ ವಿವರಣೆ ಕೊಡುವಾಗ "ನೇನು ನಾ ಕಣ್ಣಿಂಚಿ ಚೂಸಿನ್ನಾನು" ಎಂದು ಹೇಳುತ್ತಿದ್ದರಂತೆ. ಇಂತಹ ಪ್ರವಚನ ಕೇಳಿದ್ದ ಹಿರಿಯ ಮಿತ್ರರೊಬ್ಬರು ಇದೇ ಪ್ರಸಂಗವನ್ನು ಚರ್ಚಿಸುವಾಗ ನೆನಪು ಮಾಡಿಕೊಳ್ಳುತ್ತಿದ್ದರು. 

*****

ಎಲ್ಲಾ ಸಂದರ್ಭಗಳಲ್ಲೂ ಇದೇ ರೀತಿ ಸುಖಾಂತ್ಯವಾಗುತ್ತದೆ ಎಂದೇನೂ ಇಲ್ಲ. ಎಲ್ಲಾ ಸರಿಯಾಗಿದ್ದೂ, ಸುಸಜ್ಜಿತ ಆಸ್ಪತ್ರೆಯಲ್ಲಿದ್ದೂ, ನುರಿತ ವೈದ್ಯರ ನಿರ್ಲಕ್ಶ್ಯದಿಂದಲೋ ಅಥವಾ ಬೇರಾವುದೋ ಕಾರಣದಿಂದಲೋ, ಇಲ್ಲವೇ ಯಾವುದೂ ಕಾರಣವಿಲ್ಲದೇನೆಯೇ ಪರಿಸ್ಥಿತಿ ವಿಷಮಿಸಿ ದುಃಖಾಂತ್ಯ ಆಗಬಹುದು. ಅಂತಹ ಉದಾಹರಣೆಗಳೂ ಇವೆ. 

ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಜೊತೆ ಅನುಭವವೂ ಬೆರೆತಾಗ ಸರಿಯಾದ ತಳಹದಿ ನಿರ್ಮಾಣವಾಗಿ ವಿಷಯದ ಎಲ್ಲ ಆಯಾಮಗಳೂ ತಿಳಿಯುತ್ತವೆ ಎಂದು ಹೇಳುವುದಷ್ಟೇ ಇಲ್ಲಿನ ಗುರಿ. ಒಂದೇ ರೀತಿಯ ಅನುಭವದಿಂದ ಇಬ್ಬರು ಬೇರೆ ಬೇರೆ ಅರ್ಥ ತಿಳಿದು ಬೇರೆ ಬೇರೆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವುದೂ ಜೀವನದಲ್ಲಿ ನೋಡಿದ್ದು ಇದೆ. ಅವರವರ ನಂಬಿಕೆ, ಹಿನ್ನೆಲೆಗಳು ಮತ್ತು ಭವಿಷ್ಯವನ್ನು ನೋಡುವ ದೃಷ್ಟಿ ಕೂಡ ಅವುಗಳ ಕೆಲಸ ಮಾಡುತ್ತವೆ. 

ಸತ್ವಯುತವಾದ ಕೃತಿಗಳನ್ನು ಮತ್ತೆ ಮತ್ತೆ ಮೆಲಕುಹಾಕುವಾಗ, ಅದರ ಜೊತೆ ಅನುಭವ ಪಕ್ವವಾಗುತ್ತ ಹೋದಾಗ, ಜೀವನ ಯಾತ್ರೆಯ ಮತ್ತು ಸಾಧನೆಯ ಗುರಿಗಳು ಹೆಚ್ಚು ಸ್ಪಷ್ಟ ಆಗುತ್ತಾ ಹೋಗುತ್ತವೆ. ಯಾವ ರೀತಿಯ ಅನುಭವವನ್ನು ಆಯಾಯಾ ಸಂದರ್ಭಗಳಿಗೆ ತಳಕು ಹಾಕಬೇಕೆನ್ನುವ ವಿವೇಚನೆಯೂ ಮೂಡುತ್ತದೆ. 

Friday, August 9, 2013

Artha Shoucha - Purity in "Financial Dealings"

It was a hot afternoon and the sun was blazing in full glory.  Most of the people were indoors and taking rest after lunch.  Their afternoon siesta was disturbed by the continuous noise of the ringing of the big bell.  The King had arranged for fixing a big bell in an elevated place in front of the palace.  A long  rope tied to the gong was enabling ringing of the bell by pulling the rope.  Anyone aggrieved could go to the bell and pull the string.  The reverberating noise would bring all concerned to the adjoining court hall.  The King himself would arrive and the court would be in session.  The hearings were open and the general public could sit and watch the proceedings.  There was no need to file a complaint and wait for a date for hearing.  The parties to the litigation would be heard immediately.  The evidence would be evaluated and judgement pronounced then and there, save for rare exceptions.  The judgement was just and often harsh on the wrong-doer.  There was no escape from the consequences of wrong-doing, irrespective of who the accused were.  In the early days after the bell was fixed, there were a number of instances when the bell was used by parties seeking justice.  In due course, the very existence of the bell reminded the people of the harsh and merciless judgement that would follow if they did anything wrong.  Now the people were law abiding and did not dare to do any injustice to others.  The community was living peacefully and the state was prospering making everyone happy.

Ringing of the bell after a long time triggered a plethora of questions.  Who is ringing the bell now?  What is the reason? Who is the complainant?  What could be the contents of the complaint?  These were some of the questions on the lips of the people of the city as they flocked the courtyard.  The King also arrived shortly.  Everyone was surprised when they saw the complainant.  The rope tied to the gong was being pulled not by a man or woman but a dog!  It did not make any difference to the King.  He started the proceedings in right earnest.

"What is your complaint and what is the relief you require?" asked the King.
"I was going in the street without disturbing anyone. One man threw a stone at me.  It hit me with full force and I am bleeding profusely.  I want him punished for his act", said the dog.
"Who was the man?", the King asked.

Dog gave the description of the person who hit him.  While this inquiry was going on, the palace Vaidya (Doctor) started applying a bandage on the wounded part of the dog's body.  Within a few minutes, guards of the courtyard brought a man fitting the description given by the dog.  The dog identified its assailant.  Court proceedings continued.

"Did you hit the dog with a stone?", the King thundered.  The assailant did not muster courage to lie.
"Yes, your majesty. I hit the dog with a stone", he agreed.
"What was the reason for throwing a stone?  Did it attack you?", asked the King.
"No your majesty, it was an unprovoked action", said the man sheepishly.

Guilt was established beyond all reasonable doubts.  The attacker had confessed to the crime.  The King had developed a practice of asking the complainant to suggest the nature and quantum of punishment.  He asked the dog to suggest the punishment to the accused.

"Make him a Dharmadarshi (Trustee) of a temple, Your Majesty", said the dog.  Everyone present, including the King and the ministers, were surprised.  To avoid any misunderstanding King asked the dog: "Are you sure of what you are suggesting?  Do you think it is a punishment? Is it not more of  a reward"?

The dog replied in the affirmative.  "Yes, your honour.  I was myself a trustee of a place of worship in my last life.  I had to handle a lot of temple funds.  I could not resist some misappropriation of funds for my own benefit.  I am now born as a dog.  Let this man be made a trustee of public funds.  He is most likely to misappropriate funds for selfish ends.  As a consequence, he will be born as a dog in the next birth.  I am repenting for my misdeeds in the last birth.  I may be born as a man again in my next birth.  Then I can throw a stone at him and take revenge!"

Whether there is a next birth or whether dogs could talk is not the question in this story.  Whether taking revenge is a proper response is also not the moot point.  Handling public funds or others property without misuse is the basic issue.  This has become all the more focused now in view of the multitude of scams that are unearthed regularly, day after day.

Bharata Ratna Sir M Visvesvaraya, former Devan of the princely state of Mysore and identified with the KRS Dam, was known to be an epitome of utmost probity in public life.  He is said to have two sets of candles in is office.  He would use the candle bought from government funds in the night until he finished his official work.  Just as he finished his official work, that candle would be extinguished and another candle bought from his personal funds would be lit for doing other chores.  There cannot be a better example of "Purity in Financial Dealings" than this.  The word "SCAM" would not find any takers if such is the practice today.

Purity in financial dealings is the most precious of all purities.  Especially when it involves public funds or others money.  Hence the saying:

सर्वेषामेव शोउचानां अर्थशोउचम् परम् स्मृतं |
योर्थे शुचिर्हि स शुचिः न म्रुद्वारि शुचिः शुचिः ||

SarvEshAmeva showchANam arthashowcham param smrutam
Yorthe shuchirhi sa shuchihi na mrudwari shuchih shuchihi

"Purity in Financial Dealings" is the most sacred of all purities.  A person not pure in his financial dealings remains impure even if he is clean in all other respects.  Bathing any number of times using any quantity of cleaning material (like mud, soaps etc.) does not make him clean.

Who can tell this to our leaders and their followers (us)?