Showing posts with label Lakshmi. Show all posts
Showing posts with label Lakshmi. Show all posts

Saturday, May 17, 2025

ಜಯಾ, ಮಾಯಾ, ಕೃತಿ ಮತ್ತು ಶಾಂತಿ


ಪ್ರತಿಯೊಂದಕ್ಕೂ ಒಂದೊಂದು ಕಾಲ ಇರುತ್ತೆ.  ಆ ಕಾಲ ಬರುತ್ತೆ. ಹೌದು. ಆದರೆ ಕೆಲವಕ್ಕೆ ಎಲ್ಲ ಕಾಲವೂ ಸರಿಹೊಂದಿ ನಡೆಯುತ್ತೆ. ಇದೂ ಹೌದು!

ಇದು ಮಾವಿನ ಹಣ್ಣಿನ ಕಾಲ. ಎಲ್ಲೆಲ್ಲಿ ನೋಡಿದರೂ ಮಾವಿನ ಹಣ್ಣು. ಮುಂದೆ ಸೇಬಿನ ಕಾಲ ಬರುತ್ತೆ. ನಂತರ ಇನ್ನೊಂದು ಹಣ್ಣಿನ ಕಾಲ. ಹೀಗೆ ಕೆಲವು ಹಣ್ಣಿಗೆ ಒಂದೊಂದು ಕಾಲ. (ಈಗ ಕೋಲ್ಡ್ ಸ್ಟೋರೇಜುಗಳ ಕಾಲವಾದ್ದರಿಂದ ಎಲ್ಲ ಕಾಲದಲ್ಲೂ ಸ್ವಲ್ಪಮಟ್ಟಿಗೆ ಸಿಗಬಹುದು). ಹಿಂದೆ ಕಲ್ಲಂಗಡಿ, ಕರಬೂಜಕ್ಕೆ ಬೇಸಿಗೆ ಕಾಲವಿತ್ತು. ಈಗ ಹಾಗೆ ಹೇಳುವಂತಿಲ್ಲ. ಆದರೆ ಬಾಳೆ ಹಣ್ಣಿಗೆ ಎಲ್ಲ ಕಾಲವೂ ಸಕಾಲ. ವರುಷದ ಹನ್ನೆರಡು ತಿಂಗಳೂ ಅದರ ಕಾಲವೇ. 

ಕನ್ನಡ ಚಲನಚಿತ್ರ ರಂಗವನ್ನೇ ನೋಡೋಣ. ಪ್ರಾರಂಭದಲ್ಲಿ ಪೌರಾಣಿಕ ಚಿತ್ರಗಳ ಕಾಲ. ನಂತರ ಜಾನಪದ ಚಿತ್ರಗಳ ಕಾಲ. ಅದರನಂತರ ಸಾಮಾಜಿಕ ಚಿತ್ರಗಳ ಕಾಲ. ಅದರಲ್ಲಿಯೂ ಕಾದಂಬರಿ ಆಧಾರಿತ ಚಿತ್ರಗಳ ಸಮಯ. ಅದಾದ ಮೇಲೆ ಹೊಸ ಅಲೆಯ ಚಿತ್ರಗಳ ಕಾಲ. ತದನಂತರ ಸಾಹಸಮಯ, ಜೇಮ್ಸ್ ಬಾಂಡ್ ರೀತಿಯ ಚಿತ್ರಗಳ ಕಾಲ. ಇವಾದಮೇಲೆ ಹಿಂಸಾಪ್ರಧಾನ (ಕೊಲೆ-ರಕ್ತಪಾತ) ಚಿತ್ರಗಳ ಕಾಲ. ಒಂದು ಚಿತ್ರದಲ್ಲಿ ಎಷ್ಟು ಹೆಣಗಳು ಬಿದ್ದವು ಅಥವಾ ಎಷ್ಟು ಲೀಟರು ರಕ್ತ ಸುರಿಯಿತು ಎನ್ನುವುದರ ಮೇಲೆ ಚಿತ್ರ ಯಶಸ್ವಿಯೋ ಅಲ್ಲವೋ ಎಂದು ತೀರ್ಮಾನಿಸುವ ಕಾಲ. ಮತ್ತೆ ಈಗಂತೂ ಇವು ಕನ್ನಡ ಚಿತ್ರಗಳೇ ಎಂದು ಅನುಮಾನಿಸುವ ಕಾಲ! ಈ ಚಿತ್ರಗಳಲ್ಲಿ "ಕನ್ನಡ ಎಲ್ಲಿದೆ?" ಎಂದು ಹುಡುಕುವ ಕಾಲ. ಎಲ್ಲಕ್ಕೂ ಒಂದೊಂದು ಕಾಲ! 

ರವಿಕೆಗಳಿಗೂ ಹೀಗೆಯೇ ಇತ್ತು. ಯಾರೋ ಒಬ್ಬರು ದರ್ಜಿಯೊಬ್ಬನಿಗೆ ರವಿಕೆ ಹೊಲೆಯಲು ಕೊಟ್ಟ ಬಟ್ಟೆ ಸ್ವಲ್ಪ ಹೆಚ್ಚಾಗಿತ್ತು. ಎರಡು ರವಿಕೆ ಹೊಲೆಯಲು ಕಡಿಮೆ. ಒಂದಕ್ಕೆ ಜಾಸ್ತಿ. ಸರಿ, ಏನು ಮಾಡುವುದು? ಮುಂಗೈಗೆ ಹತ್ತಿರ ಬರುವಷ್ಟು ಉದ್ದ ತೋಳಿಟ್ಟು ರವಿಕೆ ಹೊಲೆದ. ಒಂದು ತಿಂಗಳಿನಲ್ಲಿ ಎಲ್ಲರ ರವಿಕೆಯೂ ಹಾಗೆಯೇ ಆಯಿತು. ಬರಬರುತ್ತ ತೋಳು (ರವಿಕೆಯದು) ಮೇಲೆ ಹೋಗಲು ಶುರುವಾಯಿತು. ಕಡೆಗೆ ರವಿಕೈ "ರವಿ" ಆಯಿತು. {ತೋಳೇ ಇಲ್ಲದ, ಕೈ ಇಲ್ಲದ, ಸ್ಲೀವ್ ಲೆಸ್ ರವಿಕೆ). ಈಗ ಡ್ರೆಸ್ಸುಗಳು ಬಂದು ಇದು ಸ್ವಲ್ಪ ಕಡಿಮೆ ಆಗಿರಬಹುದು. ಆದರೆ ನಿರಾಸೆ ಪಡಬೇಕಿಲ್ಲ. ಡ್ರೆಸ್ಸುಗಳ ತೋಳೂ ಹೀಗೆಯೇ ಹುಣ್ಣಿಮೆ-ಅಮಾವಾಸ್ಯೆ ಕಾಣುತ್ತಿವೆ. 

ಪ್ಯಾಂಟುಗಳ ಸ್ಥಿತಿಯೂ ಹಾಗೆಯೇ. ಹಿಂದೆಲ್ಲ  ಪ್ಯಾಂಟಿನ ಕೆಳಗಡೆ ಮಡಿಕೆ ಇರುತ್ತಿತ್ತು. ನಂತರ ಆನೆ ಬುಡದ (ಎಲಿಫೆಂಟ್ ಬಾಟಮ್) ಮಡಿಕೆಯ ಪ್ಯಾಂಟುಗಳು ಬಂದವು. ಟೈಟ್ ಪ್ಯಾಂಟಿಗೂ ಒಂದು ಕಾಲ ಇತ್ತು. ಅವನನ್ನು ನಿಲ್ಲಿಸಿ ಹೊಲೆದುದೋ ಎನ್ನುವಷ್ಟು ಟೈಟು. ಚರ್ಮಕ್ಕೂ ಬಟ್ಟೆಗೂ ಮಧ್ಯೆ ನಿರ್ವಾತ ಪ್ರದೇಶ. ಈಗಂತೂ ಹರಕು ಬಟ್ಟೆಯ ಹೊಸ ಪ್ಯಾಂಟುಗಳು. ಹೊಸ ಪ್ಯಾಂಟು ಹರಿಯಲಿ ಎಂದು ಕಾಯಲೇಬೇಕಿಲ್ಲ. "ನಾವು ಹರಕು ಜನ" ಎಂದು ಬಾಯಲ್ಲಿ ಹೇಳದೇ ಬೇರೆಯವರಿಗೆ ಗೊತ್ತಾಗುವುದು. ಹೀಗೆ ಕಾಲದಿಂದ ಕಾಲಕ್ಕೆ ಬದಲಾವಣೆ. 

*****

ಹೀಗೆ ಕಾಲದಿಂದ ಕಾಲಕ್ಕೆ ಚಾಲ್ತಿಯಲ್ಲಿರುವುದು ಬದಲಾಗುವ ಪದ್ದತಿಗೆ ಹಾಡುಗಳೂ ಹೊರತಲ್ಲ. ಯಾರೋ ಒಬ್ಬರು ಪ್ರಭಾವಿಗಳು ಅಥವಾ ಪ್ರಸಿದ್ಧರು ಹಾಡಿದರೆ ಸಾಕು. ಕೆಲವುಕಾಲ ಆ ಹಾಡಿಗೆ ಶುಕ್ರ ದೆಸೆ. ಮತ್ತೊಂದು ಅದರ ಜಾಗ ಆಕ್ರಮಿಸುವವರೆಗೆ. ಯೂಟ್ಯೂಬ್ ಮತ್ತು ವಾಟ್ಸಾಪ್ ಬಂದಮೇಲಂತೂ ಕೇಳುವುದೇ ಬೇಡ. ಕೆಲವು ಕಾಲ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ನಡೆಯಿತು. ಅದು ಮುಗಿದನಂತರ "ರಘುವೀರ ಗದ್ಯ" ಸ್ವಲ್ಪ ದಿನ. ಅದಾದಮೇಲೆ "ಎಂಥ ಶ್ರೀಮಂತನಂತಾನೋ" ಓಡಿತು. ನಂತರ "ಯಾರೂ ಸಂಗಡ ಬಹೋರಿಲ್ಲ". ಈಗ "ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ನಡೆಯುತ್ತಿದೆ. ಮುಂದೆ ಇನ್ನೊಂದು ಕಾಯುತ್ತಿರುತ್ತದೆ. ಹೀಗೆ. 

ಈ ಮಾಯಾದೇವಿ ಯಾರು? ಆ ಹೆಸರು ಹೇಗೆ ಬಂತು? ಅದರ ವಿಶೇಷವೇನು? ಹೀಗೆಂದು ಮಿತ್ರರೊಬ್ಬರು ಕೇಳಿದ್ದಾರೆ. "ಪ್ರಳಯ ಕಾಲದಲ್ಲಿ ಅಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು, ಜಲವು ಆಗಿ ಜಾಣತನದಿ" ಅನ್ನುವುದು ನೇರವಾಗಿ ಮಹಾಲಕ್ಷ್ಮಿ ದೇವಿಯನ್ನೇ ಸೂಚಿಸುತ್ತದೆ. "ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲ್ಲಿ ದುರ್ಗಾದೇವಿ" ಎನ್ನುವುದು ಅವಳದೇ ಆದ ಶ್ರೀ, ಭೂ, ಮತ್ತು ದುರ್ಗಾ ರೂಪಗಳನ್ನು ಹೇಳುತ್ತವೆ. "ಛತ್ರ, ಚಾಮರ, ವ್ಯಜನ, ಪರ್ಯಂಕ, ಪಾತ್ರರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ವರ್ಣಿಸುವ "ಏನು ಧನ್ಯಳೋ, ಲಕುಮಿ ಎಂಥ ಮಾನ್ಯಳೋ" ಎನ್ನುವುದನ್ನು ಇನ್ನೊಂದು ರೀತಿ ಹೇಳುವುದು ಇದು. ಆದರೆ "ಮಾಯಾದೇವಿ" ಎಂದು ಏಕೆ ಸಂಬೋಧಿಸಿದರು ದಾಸರು? ಪರಮ ಮಾಯಾವಿಗೇ ಮಾಯ-ಮಾಟ ಮಾಡಿದ್ದಾಳೆ ಎಂದೇ? 
*****

ಮನೆಯಲ್ಲಿ ಒಂದು ಮಗು ಬರುತ್ತದೆ ಎಂದ ತಕ್ಷಣ ಭಾವಿ ತಾಯಿ-ತಂದೆಯರಿಗೆ ಚಿಂತೆಗಳ ಸರಮಾಲೆ ಶುರು. ಬೇರೆ ಅನೇಕ ಚಿಂತೆಗಳಿಗಿಂತ ಹೆಚ್ಚಾಗಿ ಕಾಡುವುದು "ಏನು ಹೆಸರಿಡಬೇಕು?" ಎನ್ನುವುದು. ಹಿಂದೆಲ್ಲಾ ಇದು ಅಂತಹ ಯೋಚಿಸುವ ವಿಷಯವಾಗಿರಲಿಲ್ಲ. ಯಾವುದೋ ಒಂದು ದೇವರ ಹೆಸರು ಇಡುತ್ತಿದ್ದರು. ಇಲ್ಲವೇ ಮನೆಯ ಹಿರಿಯರು ಯಾರಾದರೂ ಸ್ವಲ್ಪ ದಿನದ ಹಿಂದೆ ನಿಧನರಾಗಿದ್ದಾರೆ ಅವರ ಹೆಸರು. ಇಲ್ಲವಾದರೆ ಮನೆದೇವರ ಅನೇಕ ಹೆಸರುಗಳಲ್ಲಿ ಯಾವುದಾದರೂ ಒಂದು. ಈಗ ಹಾಗಿಲ್ಲ. ಯಾರೂ ಇಡದ ಅಪರೂಪದ ಹೆಸರು ಬೇಕು ಎನ್ನುವ ತವಕ. ಅದರ ಅರ್ಥ ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ಪರವಾಗಿಲ್ಲ. ಯಾರಿಗೂ ಅದು ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು. ಇಂಗ್ಲಿಷಿನಲ್ಲಿ "ಏ" ಇಂದ ಪ್ರಾರಂಭವಾಗುವ ಹೆಸರಾದರೆ ಬಹಳ ಒಳ್ಳೆಯದು. ಏಕೆಂದರೆ ಶಾಲೆಯ ಹಾಜರಿ ರಿಜಿಸ್ಟರಿನಲ್ಲಿ ಮೊದಲನೆಯ ಹೆಸರಾಗುತ್ತದೆ. ಈ ರೀತಿ. 

ಸಮಾರಂಭದಲ್ಲಿ ಒಂದು ಮುದ್ದಾದ ಮಗು ಕಂಡಿತು. "ಮಗು ಬಹಳ ಮುದ್ದಾಗಿದೆ" ಅಂದರು ನೋಡಿದವರೊಬ್ಬರು. ತಾಯಿಗೆ ನ್ಯಾಯವಾಗಿಯೇ ಬಲು ಸಂತೋಷವಾಯಿತು. ಮುಖ ಅಗಲಿಸಿದಳು. "ಏನು ಹೆಸರು?" ಎಂದು ಕೇಳಿದರು. ಸ್ವಲ್ಪ ಒದ್ದಾಡಿದರೂ ಕಡೆಗೆ ಸತ್ಯ ಹೇಳಿದಳು. "ಅಪರೂಪದ ಹೆಸರು ಇಟ್ಟಿದ್ದೇವೆ. ತಕ್ಷಣ ನೆನಪಿಗೆ ಬರುತ್ತಿಲ್ಲ. ಮರೆತುಹೋಗಿದೆ. ಕ್ಷಮಿಸಿ" ಅಂದಳು. ಇದು ಕಟ್ಟು ಕಥೆಯಲ್ಲ.  ನಿಜವಾಗಿ ನಡೆದದ್ದು. 

ಹೆಣ್ಣುಮಕ್ಕಳಿಗೆ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಹೀಗೆ ನದಿಗಳ ಹೆಸರು ಇಡುತ್ತಿದ್ದರು. ಇಲ್ಲವೇ ಹಿಂದಿ ಸಿನಿಮಾಗಳಲ್ಲಿ ಬರುವಂತೆ ಚಂಪಾ, ಚಮೇಲಿ, ಗುಲಾಬಿ, ಮಾಲಾ, ಸುರಭಿ ಇತ್ಯಾದಿ. ಈ ರೀತಿಯ ಜನಪ್ರಿಯ ಹೆಸರುಗಳಲ್ಲಿ ಜಯ, ಮಾಯಾ ಮತ್ತು ಶಾಂತಿ ಸಹ ಸೇರಿವೆ. ಜಯಾ ಅಂತೂ ಅನೇಕ ರೂಪಗಳಲ್ಲಿ ಉಂಟು. ಜಯ, ವಿಜಯ, ಜಯಶ್ರೀ, ವಿಜಯಶ್ರೀ, ಜಯಮಾಲಾ, ಜಯಲಲಿತಾ, ವಿಜಯಲಲಿತಾ, ಜಯಗೌರಿ, ಹೀಗೆ ಅನೇಕ ಪ್ರಭೇದಗಳು. ಮಾಯಾ ಎಂದೂ ಹೆಸರಿಡುವುದು ಉಂಟು. ಶಾಂತಿ ಅನ್ನುವುದು ಒಂದು ಕಾಲದಲ್ಲಿ ಹೆಚ್ಚಾಗಿಯೇ ಇತ್ತು. ಗಂಡ-ಹೆಂಡಿರು ಜಗಳಕಾದರೆ ಅತ್ತೆ-ಮಾವ ಅಥವಾ ತಾಯಿ-ತಂದೆ ಕದನವಿರಾಮಕ್ಕೆ "ಶಾಂತೀ" ಎಂದು ಮೊಮ್ಮಗಳನ್ನು ಕರೆಯಬಹುದಿತ್ತು. ಕೃತಿ ಎಂದು ಸಾಮಾನ್ಯವಾಗಿ ಹೆಸರಿಡುತ್ತಿರಲಿಲ್ಲ. "ಪ್ರಕೃತಿ" ಅನ್ನುವುದು ಐವತ್ತು ವರುಷಗಳ ಹಿಂದೆ ಒಂದು ಹೊಸ ಮಾದರಿ ಹೆಸರಾಗಿತ್ತು. 

ಈ ಜಯಾ, ಮಾಯಾ, ಶಾಂತಿ, ಇವರಿಗಿರುವ ಸಂಬಂಧವೇನು? ಇವರ ಜೊತೆ ಕೃತಿ ಏಕೆ ಸೇರಿದಳು? ಇದನ್ನು ಸ್ವಲ್ಪ ವಿಚಾರ ಮಾಡೋಣ.

*****
 
ಕಂಪನಿ ನಾಟಕಗಳು ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಆ ನಾಟಕಗಳಲ್ಲಿ ಸಾಹಿತ್ಯ, ಸಂಗೀತ, ನಟನ ಕಲೆಗಳ ಮಿಶ್ರಣವಿರುತ್ತಿತ್ತು. ಅನೇಕ ನಟ-ನಟಿಯರು, ಮೇಕಪ್ ಕಲಾವಿದರು, ವಾದ್ಯಗಾರರು ಮುಂತಾದವರು ಒಟ್ಟಿಗೆ  ಇರುತ್ತಿದ್ದರು. ತಂಡ ಊರಿಂದ ಊರಿಗೆ ಪ್ರಯಾಣಿಸಿ ನಾಟಕಗಳನ್ನು ಆಡುತ್ತಿದ್ದವು. ಮುಖ್ಯ ಪಾತ್ರ ಮಾಡುವ ಗಂಡು ಮತ್ತು ಹೆಣ್ಣು ಕಲಾವಿದರಿರುತ್ತಿದ್ದರು. (ಹೆಣ್ಣು ಪಾತ್ರಗಳನ್ನೂ ಗಂಡಸರೇ ಮಾಡುತ್ತಿದ್ದ ಕಾಲ ಕಳೆದ ಮೇಲೆ). ಮುಖ್ಯ ಪುರುಷ ಪಾತ್ರ ಮಾಡುವವನನ್ನು "ರಾಜಾ ಪಾರ್ಟ್" ಎಂದೂ, ಹೆಣ್ಣು ಪಾತ್ರ ಮಾಡುವವರನ್ನು "ರಾಣಿ ಪಾರ್ಟ್" ಎಂದೂ ಕರೆಯುತ್ತಿದ್ದರು. ಇವನು ರಾಜ ಆದರೆ ಅವಳು ರಾಣಿ. ಇವನು ರಾಮನಾದರೆ ಅವಳು ಸೀತೆ. ಇವನು ರೋಮಿಯೋ ಆದರೆ ಅವಳು ಜ್ಯುಲಿಯೆಟ್. ಕನ್ನಡದಲ್ಲಿ ಅದೇ ನಾಟಕವಾದರೆ ರಾಮವರ್ಮ-ಲೀಲಾವತಿ. ಇವನು ಶಿವ ಆದರೆ ಅವಳು ಪಾರ್ವತಿ. ಇವನು ಹರಿಶ್ಚಂದ್ರ ಆದರೆ ಅವಳು ಚಂದ್ರಮತಿ. ಹೀಗೆ ಜೋಡಿ. 

"ಅಮ್ಮ" ಎಂಬ ಹೆಸರಿನ "ಪದ್ಮಿನಿ ಪಿಕ್ಚರ್ಸ್" ಸಂಸ್ಥೆಯ ಕನ್ನಡ ಚಲನಚಿತ್ರ ಬಹಳ ಚೆನ್ನಾಗಿ ಓಡಿತು. ಅದರ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು "ಹುಲ್ಲಳ್ಳಿ ರಾಮರಾಯ" ರಾಜಾ ಪಾರ್ಟುಗಳು. ಫಂಡರಿಬಾಯಿ "ಕಮಲಮ್ಮ" ರಾಣಿ ಪಾರ್ಟುಗಳು. ದುಷ್ಯಂತ-ಶಕುಂತಲೆಯಿಂದ ಚಿತ್ರ ಪ್ರಾರಂಭ. "ನಾಗವೇಣಿ, ನಗರಿಗೆ ನಾ ಪೋಗಿ ಬರುವೆನೇ" ಎಂಬ ಕಂದ ಪದ್ಯದಿಂದ ಚಿತ್ರ ಪ್ರಾರಂಭ. ತಂದೆಯ ಮೇಲೆ ವಿರಸಗೊಂಡ ಮೇಲೆ ರಾಜಕುಮಾರ್ ರಾಜಾ ಪಾರ್ಟ್ ಆದರೆ ಭಾರತಿ ರಾಣಿ ಪಾರ್ಟ್. ಹೀಗೆ ಚಿತ್ರ ಮುಂದುವರೆಯುತ್ತದೆ. ರಾಜಾ-ರಾಣಿ ಪಾತ್ರಗಳಿಗೆ ಇದು ಒಂದು  ಉದಾಹರಣೆ. ಅಷ್ಟೇ. ಚಿತ್ರ ಯಟ್ಯೂಬಿನಲ್ಲಿ ಲಭ್ಯವಿದೆ. ಬೇಕಿದ್ದವರು ನೋಡಬಹುದು. 

*****

ನಾಟಕ ಮತ್ತು ಸಿನಿಮಾಗಳಲ್ಲೇ ಹೀಗಾದರೆ ಜಗತ್ತು ಸೃಷ್ಟಿಸಿದವರ ಕಥೆ ಹೇಗೆ? ಅದನ್ನೇ ತಾನೇ ನಾವು ಕಾಪಿ ಮಾಡುವುದು. ಶ್ರೀಹರಿಯ ಪ್ರತಿಯೊಂದು ರೂಪಗಳಿಗೂ ಅದಕ್ಕೆ ಹೊಂದುವ ಒಂದು ಮಹಾಲಕ್ಷಿಯ ರೂಪವುಂಟು. ಅವನನ್ನು ಬಿಟ್ಟು ಅವಳಿಲ್ಲ. ಅವಳನ್ನು ಬಿಟ್ಟು ಅವನಿಲ್ಲ. ಎದೆಯ ಗೂಡಿನಲ್ಲಿಯೇ ಒಂದು ಅಂತಃಪುರ ಮಾಡಿ ಕೂಡಿಸಿಕೊಂಡಿದ್ದಾನೆ. ಸನ್ಯಾಸಿಯಾದಾಗಲೂ ಬಿಟ್ಟಿಲ್ಲ. (ಈಗಲೂ ಕೆಲವು ಸನ್ಯಾಸಿಗಳು ಸಾಂಸಾರಿಕರಾಗಿದ್ದರೆ ಅವರನ್ನು ಇದೇ ಕಾರಣಕ್ಕೆ ಅಕ್ಷೆಸುಪಿಸುವಂತಿಲ್ಲ). 

ಶ್ರೀಹರಿಯ ಪ್ರಸಿದ್ಧವಾದ "ಪಂಚ ರೂಪಗಳು" ಮತ್ತು ಅವಕ್ಕೆ  ಜೊತೆಯಾದ (ರಾಜ-ರಾಣಿ ಪಾರ್ಟುಗಳಂತೆ ) ಮಹಾಲಕ್ಷ್ಮಿ ರೂಪಗಳು ಹೀಗಿವೆ:

ಸಂಕರ್ಷಣ - ಜಯಾ  
ವಾಸುದೇವ - ಮಾಯಾ  
ಪ್ರದ್ಯುಮ್ನ - ಕೃತಿ 
ಅನಿರುದ್ಧ - ಶಾಂತಿ 
ನಾರಾಯಣ - ಲಕ್ಷ್ಮಿ 

ಲಕ್ಸ್ಮಿ-ನಾರಾಯಣ ಎನ್ನುವುದು ಎಲ್ಲರಿಗೂ ಚಿರಪರಿಚಿತ. ಮಿಕ್ಕವು ಅಷ್ಟಾಗಿ ಪರಿಚಿತವಲ್ಲ. ಮಾಯಾ ಅನ್ನುವುದು ವಾಸುದೇವ ರೂಪಿ ಶ್ರೀಹರಿಯ ಜೊತೆಯಿರುವ ಮಹಾಲಕ್ಷ್ಮಿ. ಒಂದಲ್ಲಾ ಒಂದು ಕಾರಣದಿಂದ ಯಾವಾಗಲೂ ಮಾತ್ರವಲ್ಲ, ಶ್ರೀಹರಿಯು ಯಾವ ರೂಪ ತಳೆದರೂ ಅದಕ್ಕೆ ಜೊತೆಯಾಗಿ ರೂಪ ತಳೆವ ಲಕ್ಶ್ಮಿಯನ್ನು, ಅರೆ-ಹಾಸ್ಯ ಮಿಶ್ರಿತ ಸಂಬೋಧನೆಯಲ್ಲಿ, ಮಾಯಗಾರನಿಗೇ ಮಾಯಮಾಡಿರುವವಳು ಎಂದು ಸೂಚಿಸಲು "ಮಾಯಾದೇವಿ" ಎಂದು ದಾಸರು ಉಪಯೋಗಿಸಿದ್ದಾರೆ.  ಮಗನು ಅಮ್ಮನಿಗೆ ಸಲುಗೆಯಿಂದ "ನೀನೇನೂ ಸಾಮಾನ್ಯಳಲ್ಲ. ಎಲ್ಲರಿಗೂ ಟೋಪಿ ಹಾಕುವ ನಮ್ಮ ಅಪ್ಪನಿಗೇ ಟೋಪಿ ಹಾಕಿದವಳು!" ಎಂದು ಹೇಳುವಂತೆ. 

ಜಯಾ, ಮಾಯಾ, ಮತ್ತು ಶಾಂತಿ ಎನ್ನುವ ಹೆಸರು ಹೆಣ್ಣು ಮಕ್ಕಳಿಗೆ ಇಡುವ ಮೂಲ ಕಾರಣ ಇದು. ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳ ಹೆಸರುಗಳೇ. 

*****

ಈ ಪಂಚ ರೂಪಗಳಿಗೂ ನಾವು ನೀರು, ಆಹಾರ ಸೇವಿಸುವುದು, ಅರಗಿಸುವುದು, ಅದರ ರಸಗಳು ದೇಹದ ಎಲ್ಲ ಅಂಗಾಂಗಗಳಿಗೆ ತಲುಪುವುದು, ಇವೆಲ್ಲಕ್ಕೂ ನೇರವಾದ ಸಂಬಂಧವಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಈ ಪಂಚರೂಪಗಳ ವಿಸ್ತಾರವಾದ ವಿವರಣೆಯಿದೆ. ಅದನ್ನು ಇನ್ನೊಮ್ಮೆ ನೋಡೋಣ. 

Wednesday, December 11, 2024

ಇಂದಿರಾರಮಣನ ಮಂದಿರದ ಒಳಗೆ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಹಿಂದೆ ಬಿದ್ದು ಕಳೆದ ಸಂಚಿಕೆಯಲ್ಲಿ "ಪರಿಪರಿಯ ಪುಷ್ಪಗಳು" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವ ಬಗ್ಗೆ ನೋಡೋಣ. 

ದಾಸರ ಪದದ ಉದ್ದೇಶ್ಯ ಹೂವು ತರುವರ ಮನೆಗೆ ಹುಲ್ಲ ತರುವವನ ಬಗ್ಗೆ ಹೇಳುವುದು. ಇಲ್ಲಿ "ಇಂದಿರಾರಮಣ" ಎಂದು ಸಂಬೋಧಿಸುವ ಅಗತ್ಯವೇನು? ಶ್ರೀಹರಿಯ ಅನಂತ ಹೆಸರುಗಳಲ್ಲಿ ಬೇರೆ ಯಾವುದಾದರೂ ಉಪಯೋಗಿಸಬಹುದಿತ್ತಲ್ಲ? ಒಂದು ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಿದರೆ ಅರ್ಜಿ ಪತ್ರದಲ್ಲಿ "ಎರಡು ಗುರುತಿನ ಚಿಹ್ನೆಗಳು" ಎಂದು ಒಂದು ಕಾಲಂ ಇರುತ್ತದೆ. ಅಲ್ಲಿ "ಎಡಗೆನ್ನೆಯ ಮೇಲೆ ಒಂದು ಕಪ್ಪು ಚುಕ್ಕೆ" ಮತ್ತು "ಬಲಗಾಲಿನ ಮೇಲೆ ಒಂದು ಗಾಯದ ಮಚ್ಚೆ", ಅಥವಾ ಈ ರೀತಿಯ ಗುರುತುಗಳನ್ನು ಬರೆಯಬಹುದು. ಇದು ಒಂದು ಉದಾಹರಣೆ. ಹಾಗೆ ಶ್ರೀಹರಿ ಏನಾದರೂ ಕೆಲಸಕ್ಕೆ ಅರ್ಜಿ ಹಾಕಿದರೆ ಏನು ಬರೆಯಬಹುದು ಎಂದು ಯೋಚಿಸಿದರೆ ಅವನ ಅನೇಕ ಪರಿಚಯದ ನಡುವೆ ಅತ್ಯಂತ ಸುಲಭದ ಗುರುತುಗಳು ಅವನ ಹೆಂಡತಿ ಮತ್ತು ಅವನ ಭಂಟ. ಇವರಿಲ್ಲದೆ ಅವನಿಲ್ಲ. ಅಥವಾ ಅವನಿರುವೆಡೆಯೆಲ್ಲಾ ಇವರಿಬ್ಬರಿದ್ದಾರೆ! ಅದಕ್ಕೆ ಅವನನ್ನು ನೆನಸುವವಕ್ಕೆ ಇವರಿಬ್ಬರ ಮೊರೆ ಹೋಗುತ್ತಾರೆ. ಯಾವುದಾದರೂ ಗುಂಪಿನಲ್ಲಿ (ತಿರುಪತಿ ಬೆಟ್ಟದ ಮೇಲೆ ಮಾತ್ರವಲ್ಲ) "ಇಂದಿರಾರಮಣ" ಅಥವಾ "ಆಂಜನೇಯವರದ" ಎನ್ನಿ. ಹಲವಾರು ಮಂದಿ ಎಲ್ಲೆಲ್ಲಿಂದಲೋ "ಗೋವಿಂದಾ " ಎನ್ನುತ್ತಾರೆ. (ಇದರ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ). ಪರಮಾತ್ಮನ ಅತಿ ಸುಲಭ ಗುರುತುಗಳಲ್ಲಿ ಇವು ಅತಿ ಮುಖ್ಯ. ಅದರಲ್ಲೂ ಈ "ಇಂದಿರಾರಮಣ" ಎನ್ನುವುದು. ಇದರ ವಿಶೇಷವೇನು?

ಶ್ರೀಪುರಂದರದಾಸರು ಮಾಧ್ವ ಸಂಪ್ರದಾಯದ ಪರಂಪರೆಗೆ ಸೇರಿದವರು. ಈ ಪರಂಪರೆಯಲ್ಲಿ ಶ್ರೀಮನ್ನಾರಾಯಣನ ನಂತರದ ಸ್ಥಾನ ಮಹಾಲಕ್ಷ್ಮಿ ದೇವಿಗೆ. ಮತ್ತೆಲ್ಲ ಜೀವರು ಮಹಾಪ್ರಳಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಗಾಢ ನಿದ್ರೆಯಲ್ಲಿದ್ದರೂ  ಮಹಾಲಕ್ಷ್ಮಿ ಮಾತ್ರ ಜೊತೆಗೆ ಇರುತ್ತಾಳೆ. "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಎನ್ನುವ ಕೃತಿಯಲ್ಲಿ "ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ, ಇರಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿರ್ಪ೦ತೆ" ಎಂದು ಸೂಚಿಸಿದ್ದಾರೆ. (ಶ್ರೀಹರಿಯ ಪ್ರತಿ ರೂಪಕ್ಕೂ ಅದಕ್ಕೆ ಹೊಂದುವ ಮಹಾಲಕ್ಷ್ಮೀದೇವಿಯ ಸ್ತ್ರೀ ರೂಪ ಉಂಟು. ವಾಸುದೇವ ರೂಪದಲ್ಲಿ ಪರಮಾತ್ಮನಿದ್ದರೆ ಆಗ ಮಾಯಾದೇವಿಯ ರೂಪದಲ್ಲಿ ಲಕ್ಷ್ಮಿ ಇದ್ದಾಳೆ. ಅದಕ್ಕೆ ಮಾಯಾದೇವಿ ಎಂದಿದ್ದಾರೆ).  "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ" ಎಂಬ ಕೃತಿಯಲ್ಲಿ "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪಾತ್ರೆ, ಉಪಕರಣ, ಮತ್ತು ಪ್ರಳಯದ ನೀರಿನ ರೂಪದಲ್ಲಿ ಕೂಡ ತಾನೇ ನಿಂತು ಅವನ ಸೇವೆ ಮಾಡುತ್ತಾಳೆ. 

"ಶ್ರೀ ಸೂಕ್ತ" ಈ ತಾಯಿಯ ಆರಾಧನೆಗೇ ಮೀಸಲಾದ ಸ್ತುತಿ. ಪೂಜಾದಿಗಳಲ್ಲಿ ಪ್ರತಿನಿತ್ಯ ಇದರ ಪಾರಾಯಣ ನಡೆಯುತ್ತದೆ. ಋಗ್ವೇದದ ಹತ್ತನೆಯ ಮಂಡಲದ ೧೨೫ನೆಯ ಸೂಕ್ತ "ಅಂಭ್ರಣೀ ಸೂಕ್ತ" ಎಂದು ಹೆಸರುವಾಸಿಯಾಗಿದೆ. ಇದರಲ್ಲಿ ಮಹಾಲಕ್ಷ್ಮಿ ದೇವಿಯ ಅಗಾಧವಾದ ಶಕ್ತಿಗಳ ಬಗ್ಗೆ ವಿವರಿಸಿದ್ದಾರೆ. ಅವಳು ಅನೇಕ ತತ್ವಗಳು, ಸಮಸ್ತ ವೇದ ವೇದಾಂಗಗಳು, ಮೂರು ಗುಣಗಳು (ಸತ್ವ, ರಾಜಸ ಹಾಗೂ ತಮೋಗುಣಗಳು) ಮುಂತಾದವುಗಳಿಗೆ ಅಭಿಮಾನಿ ದೇವತೆ. ಬ್ರಹ್ಮಾದಿ ಸಕಲ ದೇವತೆಗಳಿಗೂ ಅವಳು ನಿಯಾಮಕಳು. ಕೇವಲ ಕುಡಿಗಣ್ಣ ನೋಟದಿಂದ ಸೃಷ್ಟಿ, ಸ್ಥಿತಿ, ಲಯಾದಿ ಕೆಲಸಗಳನ್ನು ಮಾಡುವವಳು ಮತ್ತು ಮಾಡಿಸುವವಳು (ದ್ವಾದಶ ಸ್ತ್ರೋತ್ರದಲ್ಲಿ ಯಸ್ಯ ಅಪಾಂಗಲವಮಾತ್ರಸ ಊರ್ಜಿತಾ ಸಾ ಮುಂತಾದ ವಿವರಣೆಗಳಿವೆ), ಶ್ರೀಹರಿಯು ವಾಮಾನನಾದಾಗ ಬ್ರಹ್ಮಚಾರಿ. ಬೌದ್ಧಾವತಾರದಲ್ಲಿ ಸನ್ಯಾಸಿ. ಆಗಲೂ ಮಹಾಲಕ್ಷ್ಮಿ ಅವನ ಜೊತೆಯಲ್ಲಿಯೇ ಇದ್ದಳು. (ಅದಕ್ಕೇ ಯಾರನ್ನಾದರೂ "ಹೆಂಡತಿಯನ್ನು ತಲೆಯಮೇಲೆ ಕೂಡಿಸಿಕೊಂಡಿದ್ದಾನೆ'" ಎಂದು ಹಾಸ್ಯ ಮಾಡಬಾರದು. ಅಂತಹವರು ಶ್ರೀಹರಿಯ ಮಾದರಿ ಅನುಸರಿಸಿದ್ದಾರೆ ಎಂದು ಗೌರವಿಸಬೇಕು!) ಈ ಅಂಭ್ರಣೀ ಸೂಕ್ತದಲ್ಲಿ ಮಹಾಲಕ್ಷ್ಮಿಯು "ನಾನು ಯಾರನ್ನು ಬೇಕೋ ಅವರನ್ನು ರುದ್ರನನ್ನಾಗಿ, ಬ್ರಹ್ಮನನ್ನಾಗಿಸುವೆ. ಋಷಿಯನ್ನಾಗಿಸುವೆ. ಬುದ್ಧಿಶಾಲಿಯನ್ನಾಗಿಸುವೆ." ಎನ್ನುತ್ತಾಳೆ.  ಅಂದರೆ ಹಾಗೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಅರ್ಥ. "ವರಮಹಾಲಕ್ಷ್ಮಿ ವ್ರತ" ಮಾಡುವಾಗ ಇಷ್ಟೆಲ್ಲಾ ಅನುಸಂಧಾನವಿರಬೇಕು. ಬಹಳ ಚೆನ್ನಾಗಿ ಅಲಂಕಾರ ಮಾಡಿ ಮೊಬೈಲ್ನಲ್ಲಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದರೆ ಕೇವಲ ಪಾಸ್ ಮಾರ್ಕ್ಸ್ ಸಿಗಬಹುದಷ್ಟೇ.  

ಶ್ರೀಪುರಂದರದಾಸರ ಪರಂಪರೆಯಲ್ಲಿ ಮುಂದೆ ಬಂದ ಶ್ರೀ ಜಗನ್ನಾಥ ದಾಸರು ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ ಮಹಾಲಕ್ಷ್ಮಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ:

ಜಗದುದರನತಿ ವಿಮಲ ಗುಣ 
ರೂಪಗಳನಾಲೋಚನದಿ ಭಾರತ 
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ 
ಬಗೆಬಗೆಯ ನೂತನವ ಕಾಣುತ 
ಮಿಗೆ ಹರುಷದಿಂ ಪೊಗಳಿ ಹಿಗ್ಗುವ 
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು 

ಮಹಾಲಕ್ಷ್ಮೀದೇವಿಯು ನಮಗೆ ಬಹಳ ಹತ್ತಿರದವಳು. ನಮ್ಮ ಕೈಗಳ ಮುಂದೆಯೇ ಇದ್ದಾಳೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿಕೊಂಡು "ಕರಾಗ್ರೇ ವಸತೇ ಲಕ್ಷ್ಮೀ" ಎನ್ನುತ್ತೇವೆ. ನಾವು ಮಾಡುವ ಪೂಜೆ ಪುನಸ್ಕಾರಗಳೆಲ್ಲ ಅವಳ ಮೂಲಕವೇ ಮುಂದೆ ಹೋಗಬೇಕು. ಏನನ್ನು ಕೊಡಬೇಕಾದರೂ ಕೈಮೂಲಕವೇ ಕೊಡಬೇಕು ತಾನೇ?

ಮಹಾಲಕ್ಷ್ಮಿ ದೇವಿಯಿಲ್ಲದೆ ಶ್ರೀಹರಿಯಿಲ್ಲ. ಶ್ರೀಹರಿಯಿಲ್ಲದೇ ಮಹಾಲಕ್ಷ್ಮಿಯಿಲ್ಲ. ಎಲ್ಲರಿಗೂ ಎಲ್ಲ ಸಂಪತ್ತುಗಳನ್ನೂ ಕೊಡುವವಳು ಅವಳು. ಅವಳು ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕಟ್ಟ ಕಡೆಗೆ ಜೀವನಿಗೆ ವಿರಿಜಾ ನದಿಯಲ್ಲಿ ಮುಳುಗಿಸಿ ಮುಕ್ತಿಗೆ ಕೊಂಡೊಯ್ಯುವವಳೂ ಅವಳೇ. ಆದ್ದರಿಂದ "ಇಂದಿರಾರಾಮಣ" ಎಂದು ಸೂಚಿಸಿದ್ದಾರೆ. ಸದ್ಯಕ್ಕೆ ಇಷ್ಟು ಸಾಕು. 

*****

"ಎಂದೆಂದೂ ವಾಸಿಪನು ಮಂದಿರದ ಒಳಗೆ" ಎನ್ನುವುದು ಮುಂದಿನದು. ಮಂದಿರ ಅಂದರೆ ದೇವಸ್ಥಾನ ಎಂದು ಎಲ್ಲರಿಗೂ ಗೊತ್ತು. ಈಚೆಗೆ "ರಾಮಮಂದಿರ" ಅಯೋಧ್ಯೆಯಲ್ಲಿ ನಿರ್ಮಾಣ ಆಯಿತು. ದರ್ಶನಕ್ಕೆ ಅನೇಕ ಮಂದಿರಗಳಿಗೆ ಹೋಗುತ್ತೇವೆ. ಮಂದಿರ ಅಂದರೆ ಮನೆ ಎನ್ನುವುದು ಸಾಮಾನ್ಯ ಅರ್ಥ. ಅದನ್ನೇ ಗೌರವಯುತವಾಗಿ ಹೇಳಿದಾಗ ಮಂದಿರ ಆಗುತ್ತದೆ. "ಹೂವ ತರುವರ ಮನೆಗೆ ಹುಲ್ಲ ತರುವ ಶ್ರೀಕೃಷ್ಣನು ಮಂದರದ ಒಳಗೆ ಎಂದೆಂದೂ ವಾಸಿಸುತ್ತಾನೆ" ಎಂದು ಹೇಳುವುದರಲ್ಲಿ ಏನು ವಿಶೇಷ? ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಆದಮೇಲೆ ಆ ಮಂದಿರಗಳ ಒಳಗೆ ಎಂದೆಂದೂ ಇರಲೇಬೇಕಲ್ಲ! ಇಷ್ಟು ಮಾಡಲು ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರೀಕ್ಷೆಯಲ್ಲಿ ರಾಂಕ್ ಪಡೆಯಬೇಕೆ? ಇದು ಒಂದು ಮುಖ್ಯವಾದ ಪ್ರಶ್ನೆ. 

ಸರಿಯಾದ ರೀತಿಯಲ್ಲಿ ಗುಡಿ ಕಟ್ಟಿ, ಮೂರ್ತಿ ಸ್ಥಾಪಿಸಿ ಪ್ರಾಣಪ್ರತಿಷ್ಠೆ ಮಾಡಿದರೆ ಅಲ್ಲಿ ಆ ದೇವತೆ ಅಥವಾ ದೇವರು ವಾಸಿಸುವದರಲ್ಲಿ ಹೆಚ್ಚಿನದೇನೂ ಇಲ್ಲ. ವೈಯುಕ್ತಿಕವಾಗಿ ನಾವು ಯಾರಾದರೂ ಹೋದರೂ, ಹೋಗದಿದ್ದರೂ ಆ ಕೆಲಸ ಆಗಿಯೇಹೋಗುತ್ತದೆ. ಇಲ್ಲಿ ಮಂದಿರದ ಒಳಗೆ ಎಂದರೆ "ನಮ್ಮ ಹೃದಯ ಮಂದಿರ" ಎಂದು ತಿಳಿಯಬೇಕು. ಸಾರ್ವಜನಿಕವಾದ ಮಂದಿರದಲ್ಲಿ ಅವನು ವಾಸಿಸುವ ಕೆಲಸವನ್ನು ಯಾರೋ ಅಥವಾ ಎಲ್ಲರೂ ಸೇರಿ ಮಾಡುತ್ತಾರೆ. ಆದರೆ ನಮ್ಮ ಹೃದಯ ಮಂದಿರದಲ್ಲಿ ಅವನು ವಾಸಿಸಬೇಕಾದರೆ ಮತ್ಯಾರೋ ಏನು ಮಾಡಿದರೂ ಆಗುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ  ನಾವೇ ಊಟ ಮಾಡಬೇಕು. "ಪವರ್ ಆಫ್ ಅಟಾರ್ನಿ" ಕೊಟ್ಟು ಮಾಡಿಸುವಂತಿಲ್ಲ. ಶ್ರೀಕೃಷ್ಹ್ನನು ನಮ್ಮ ಹೃದಯ ಮಂದಿರದಲ್ಲಿ ವಾಸಿಸಬೇಕಾದರೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಲ್ಲ ಕೆಲಸ ನಾವೇ ಮಾಡಬೇಕು. ಕೆಲವು ಕಡೆಗಳಲ್ಲಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಯ ಬದಲು ಮತ್ಯಾರೋ ಪರೀಕ್ಷೆ ಬರೆದರು ಎಂದು ಕೇಳುತ್ತೇವೆ. ಇಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದನ್ನೇ "ವಾಸಿಪನು ಮಂದಿರದ ಒಳಗೆ" ಎಂದರೆ ನಮ್ಮ ಹೃದಯ ಮಂದಿರದಲ್ಲಿ ಬಂದು, ನಿಂತು, ವಾಸಿಸುತ್ತಾನೆ" ಎಂದು ಸೂಚಿಸಿದ್ದಾರೆ. 

ಆಯಿತು. ಒಪ್ಪಿಕೊಳ್ಳೋಣ. "ವಾಸಿಪನು ಮಂದಿರದ ಒಳಗೆ" ಎನ್ನುವುದರ ಒಳಗೆ "ಎಂದೆಂದೂ" ಎಂದೇಕೆ ಹೇಳಿದ್ದಾರೆ? ಅನೇಕ ಡಿಗ್ರಿ ಪರೀಕ್ಷೆಗಳಲ್ಲಿ ಪಾಸ್ ಮಾಡಿದ ನಂತರ ಯಾವುದೂ ಒಂದು ಸಂಸ್ಥೆಯ ಸದಸ್ಯತ್ವ ಪಡೆದ ಮೇಲೆ ಅವಧಿಯಂತೆ, ಸಾಮಾನ್ಯವಾಗಿ ಪ್ರತಿ ವರುಷ, ಆ ಸದಸ್ಯತ್ವವನ್ನು ನವೀಕರಿಸಬೇಕು. "ಡ್ರೈವಿಂಗ್ ಲೈಸನ್ಸ್" ಉದಾಹರಣೆ ತೆಗೆದುಕೊಳ್ಳಬಹುದು. ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿ ಲೈಸನ್ಸ್  ಪಡೆದಿದ್ದಾಯಿತು. ಅದರ ಅವಧಿ ಮುಗಿಯುವ ಒಳಗೆ ಮತ್ತೆ ನವೀಕರಿಸಬೇಕು. ಇಲ್ಲದಿದ್ದರೆ ಅದು "ಲ್ಯಾಪ್ಸ್"" ಆಯಿತು ಅನ್ನುತ್ತೇವೆ. ಹೃದಯ ಮಂದಿರದ ಒಳಗೆ ಬಂದು ನೆಲಿಸಿದ ಪರಮಾತ್ಮನು ಮತ್ತೆ ಹೊರಟುಹೋಗಬಾರದು. ಅದಕ್ಕೆ ಎಂದೆಂದೂ ನೆಲೆಸುವನು ಎನ್ನುವುದು. 

ಇಷ್ಟೆಲ್ಲಾ ಕಸರತ್ತು ಮಾಡಿದರೆ ಮಾತ್ರ ಅವನು ನಮ್ಮ ಹೃದಯ ಮಂದಿರದಲ್ಲಿ ನೆಲೆಸುವನೇ? ಇಲ್ಲದಿದ್ದರೆ ಇಲ್ಲವೇ? ಈ ಪ್ರಶ್ನೆ ಸಹಜ. ಪ್ರತಿ ಜೀವಿಯು ಹುಟ್ಟುವಾಗಲೇ ಆ ಜೀವಿಯಜೊತೆಗೆ ಅವನೂ ಹುಟ್ಟುತ್ತಾನೆ. ಮೊದಲೆನೆಯ ಶ್ವಾಸದೊಂದಿಗೆ ಪ್ರಾಣವಾಯುವೂ ಮತ್ತು ಪರಮಾತ್ಮನೂ ಜೀವಿಯ ದೇಹವನ್ನು ಪ್ರವೇಶಿಸುತ್ತಾರೆ. ಅವರಿರುವವರೆಗೆ ಜೀವಿಯ ಜೀವನ. ಅವರು ಹೊರೆಟ ಒಡನೆ ಆ ದೇಹ ನಿರ್ಜೀವ. "ನೆಂಟನಗಲಿದ ಬಳಿಕ ಒಣಹೆಂಟೆಯಲಿ ಮುಚ್ಚುವರು" ಎಂದು ಇದನ್ನೇ ಶ್ರೀಕನಕದಾಸರು "ಶ್ರೀ ಹರಿಭಕ್ತಿಸಾರ"ದಲ್ಲಿ ಹೇಳಿರುವುದು. ಶ್ರೀ ಪುರಂದರದಾಸರೇ "ಆರು ಹಿತವರು ನಿನಗೆ ಈ ಮೂವರೊಳಗೆ" ಕೃತಿಯಲ್ಲಿ ಹೇಳುತ್ತಾರೆ:

ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವ 
ತನ್ನದೆಂದೆನುತ ಶಾಸನವ ಬರೆಸಿ 
ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು 

ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು.  ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ. 

*****

ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ  ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ.  ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ. 

ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ. 

Tuesday, September 13, 2011

Mother-in-law and Daughter-in-law

Then there was the question of the wise men being always poor. Why are wise men poor and stupid rich? The secret lies in the age old and well known chronicles of   "Saas aur Bahu".

It is believed in Mythology that Brahma, the creator was born in the Naabhikamal of Lord Vishnu. Hence the name Kamalanaabha for Maha Vishnu. Maa Lakshmi, Goddess of Wealth, is the consort of Lord Maha Vishnu. Maa Saraswati is the consort of Lord Brahma. Hence they become Mother-in-law and Daughter-in-law. Or in pure Hindi or filmy Hindi or even "Serial Hindi", Saas and Bahu.

Saas and Bahu do not get along. They are not supposed to get along.  Everyone says that two women do not get along. Two men may also not get along, but that is not a big deal. As some one said, it is no news if dog bites a man. It is only news when a man bites a dog. Since two women do not get along well or not supposed to get along well, Saas and Bahu will also not get along well, even more. Because of the common link of the Son/husband as applicable. Rather they should not get along well. Otherwise what is the fate of our Saas- Bahu serials. Balaji Telefilms shares would crash and our already fragile stock market index would trade in negative territory.

Furthermore, Lord Brahma is not Maa Lakshmi's son. He is not even her step son because the other wife is not there. He is her husband's son. Therefore Maa. Saraswati is not even her own Daughter-in-law. She is, as per law, her husband's daughter-in-law. Oh, this is a story of all complications thrown in one place. A script writer's delight.

As the MIL and DIL, with all the complicated relations apart, have to live together.  Lord Brahma cannot get down from the Lotus and go to a separate house since there is this thousand headed serpent Aadishesha below the Lotus and the large ocean of milk all round the area.  Maa. Lakshmi and Maa. Saraswati have to co-exist in one house. That is Sree Vaikuntha. There is no rule that they should also stay together in other houses - like the houses of Vidwaans (learned or wise) and the Stupid. Therefore, Maa Saraswati stays with the wise and per force Maa.Lakshmi lives with the Stupid. Which explains the natural phenomenon of the wise being always very poor and the stupid being rich.

One poet wanted to confront Maa. Lakshmi with this question. He went to her and asked the question. The question and answer is summarized in this sloka:

पद्मे, मूढ जने ददासि द्रविणं विद्वस्तु किं मत्सरः ?
नाहं मत्सरिणी नचापि चपला नैवास्ति मूर्खे रतिः
मूर्खीभेयो द्रविणं ददामि नितरां तत् कारणं श्रूयतां
विद्वान् सर्व जनेषु पूजित तनुः मूर्खस्य नान्या गतिः !


Padme, Moodha jane daddasi dravinam vidvastu kim matsaraha?
Naaham matsarini nachaapi chapala naivasti murkhe ratihi
Moorkhebhyo dravinam dadami nitaraam tat karanam shruyataam
vidvaan sarvajaneshu poojita tanuhu moorkhasya naanya gatihi !


"He Padma, you are enriching all stupid fellows by bestowing all riches on them. What is your grouse against the wise?  Why have you kept them poor?"

"I have no grouse against the wise. Nor I am fickle minded as others allege. I have no undue interest in the foolish. Why I give lot of riches to the foolish? Understand this very well.  The wise or vidwans are respected by all for their wisdom. The foolish have no such recourse".    

(Everyone ignores the foolish. If they are  at least rich, they will be respected  for the riches. Both are my sons. One is able to earn respect due to his wisdom. The other one will get respect because he is rich. This is the mother's way of compensating the weak child).

*******
This is the situation as it existed several centuries ago. It is no longer true now.

We have seen several households where the Mother-in-law and Daughter-in law get along better than Father-in-law and son-in-law. Or father and son. They even enjoying living in the same house. Hence we now have wisdom and riches in same houses. Maa. Lakshmi and Maa. Saraswati in the same houses. Like the occasional episode of Saas-Bahu serial in which the Saas and Bahoo together catch the thief ! 

If you do not believe ask Mark Zuckerberg of Facebook. Ask Bill Gates. Jerry Yang of Yahoo. Sabir Bhatia of Hotmail. Steve Jobs of Apple. And many others.....in whose houses both Mother-in-law and Daughter-in-law reside together in full strength..............