Showing posts with label mahabharata. Show all posts
Showing posts with label mahabharata. Show all posts

Monday, August 24, 2026

Que Sera, Sera


An English film song clip is circulating repeatedly on WhatsApp during the last one week. In popular language of today's times, it has gone viral. The song in question is "Que Sera, Sera", a song from the 1956 Hollywood English mystery thriller film "The Man Who Knew Too Much", produced and directed by Alfred Hitchcock. Sung and acted in the film by the famous singing actress of yesteryears, Doris Day, it runs like this:

When I was just a little girl
I asked my mother what I will be
Will I be pretty?, Will I be rich?
Here's what she said to me:

Que Sera, Sera
Whatever will be, will be
The future is not ours to see
Que Sera, Sera
What will be, will be!

The song continues in two more stanzas. The little girl grows up and asks her sweetheart the same question when she fell in love. She gets the same answer. Some years after her marriage, her son asks her the same question. Of course, her answer now will be the same!

The Youtube link to the song is given at the end of this blog post, for you to click on it and listen.

When we dwell upon the theme of the song in the Indian context, it makes very interesting reading indeed, as we see below.

******

Alfred Hitchcock (1899-1980) is known for his suspense thrillers. There is hardly anyone who has not seen his movies. His film career covered a large span of time, covering early silent films, black and white film times to modren times. He has directed over 50 films. He also was host of the popular television shows like "Alfred Hitchcock Presents" and "Alfred Hitchcock Hour", which are seen even today worldwide. 

Hitchcock's suspense was basically derived from the light and sound effects, even when there was not much horror scenes on the screen. The tension would build in the mind of the viewer, not due to what he saw but what he perceived. He was knighted and later became Sir Alfred Hitchcock. 

Hitchcock first produced and directed the movie "The man who knew too much" in the year 1934. More than twenty years later, he remade the film with some modifications, but the same name in 1956. James Stewart and Doris Day played the lead roles in the 1956 film that has this song, which has now gone viral.

******

During the years when sound recording and background music and singing integration had not yet reached the perfect levels, singing artistes were in great demand and very popular. There were many stalwarts in Hollywood and other parts of the world as well, who were great singers in their own right, who did very well as film artistes. Artistes like Frank Sinatra, Judy Garland, Elvis Presley and Barbara Streisand are some such names. Doris Day is another such illustrious name and she was on the screen some ten years before another similar artiste, Julie Andrews of Sound of Music fame. 

In India also, we had our own great singing artistes. In North India, we had Kundan Lal Saigal, Pankaj Mallick, Suraiyya, Noor Jehan and others. Kishore Kumar was active for a long time and till much later times. In South India we had the legendary M K Thyagaraja Bhagavatar, P Bhanumati (later Bhanumati Ramakrishna) and many others. In Kannada, Honnappa Bhagavatar was one such well known name. There were many others as well, who had short stints. 

Doris Day (1922-2019) had her great singing career as well as appearance in films on either side of World War II. She won innumerable awards in her long career and lived a full life of 97 years. This song Que Sera Sera won the Oscar for "Best Original Song". She was also honoured with an Oscar for her Life time achievements. 

Her star can be seen on "Hollywood Walk of Fame" in Los Angeles, USA. In "The Butchart Gardens" in Victoria Island, Canada (near Vancouver), a special rose plant is dedicated to Doris Day. 

Doris played the role of Josephine Conway McKenna (Jo Conway) in the film "The man who knew too much" opposite James Stewart, who played as husband Dr Benjamin McKenna (Ben McKenna). The song was used twice in the movie, the second time to help trace their kidnapped son Hank. 

******

What is the origin of the phrase "Que Sera, Sera"? some sources say it is Spanish while some others say it is Italian. Some say it is a hybrid term. It is not an English phrase. But it is used to mean "Whatever will be, will be" in English. What is its equivalent for us? If we look to Sanskrit, it translates to "भवितव्यम् भवत्येव" (Bhavitavyam Bhavatyeva). In essence, it means "Future is not in your control. Don't worry about. Whatever is to happen, it will happen".

Where can we find this term in our literature? There is a Subashita in "Maha Subhashita Sangraha" (Shloka 4,901), which in turn has been picked up from "Samskrita Sookti Ratnakara", compiled by Sri Ramji Upadhyaya. It reads thus:

आपत्सु किं विषादेन सम्पत्तौ विस्मयेन किम् 
भवितव्यं भवत्येव कर्मणामेष निश्चयः 

Aapatsu kim vishadena sampattou vismayena kim
Bhavitavyam bhavatyeva karmanamesha nischayaha 

"Why feel sad in adversity and elated in times of affluence? Whatever is to happen, will happen! It is decided by previous karma. Do your duty and leave the rest to the future".

******

The roots for this Subhashita can be found in Mahabharata, Shanti Parva, Shloka 12.219.10. This is the part in which Bheeshma, while lying on the bed of arrows, condenses his lifetime acquired knowledge and teaches Yudhishtira, as per the instructions of Krishna. 

It reads thus:

यथा यथास्य प्राप्तव्यं प्रप्नेत्यैव तथा तथा 
भवितव्यं यथा यच्च भवत्येव तथा तथा 


Yathaa yathaachha praptavyam prapnetyaiva tathaa tathaa
bhavitavyam yathaa yaccha bhavatyeva tathaa tathaa  

"Just as one is destined to obtain something, one obtains it precisely in that manner. And whatever is destined to occur, it occurs precisely in that manner"

******

Que Sera, Sera is not new to us. It is a teaching that is several thousand years old. As the future is not in our control, it is not something to be worried about. Do your duty and leave the rest to future itself. This is not just a lesson. it is our philosophy of life!

The song "Que Sera Sera" can be heard by clicking on the video given below:


Monday, September 22, 2025

ಒಂದು ಕಪ್ಪು ಚುಕ್ಕೆ


ಕಳೆದ ವಾರದ ಎರಡು ಸಂಚಿಕೆಗಳಾದ "ಯಯಾತಿಯ ಮೊಮ್ಮಕ್ಕಳು" ಮತ್ತು ಅದರ ಮುಂದಿನ ಭಾಗವಾದ "ಮಾಧವಿಯ ಮಕ್ಕಳು" ಅನೇಕ ಪ್ರತಿಕ್ರಿಯೆಗಳನ್ನು ತಂದಿವೆ. (ಈ ಸಂಚಿಕೆಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ವಿಶೇಷವಾಗಿ ಕನ್ನಡದ ಒಂದು ಪ್ರಸಿದ್ಧ ಕೃತಿ, ಖ್ಯಾತ ಲೇಖಕ, ನಟ, ನಿರ್ದೇಶಕ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಾಡ್ ಅವರ "ಯಯಾತಿ" ನಾಟಕ ಓದಿರುವವರು, ಅದರ ಪ್ರಯೋಗವನ್ನು ರಂಗಮಂಚದ ಮೇಲೆ ನೋಡಿದವರು ಕಳಿಸಿರುವ ಪ್ರತಿಕ್ರಿಯೆಗಳು. ಕೆಲವರು ಇದರ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಸ್ವಲ್ಪ ವಿಸ್ತಾರ ಮಾಡಬೇಕೆಂದು ಕೇಳಿದ್ದಾರೆ. ಈ ಸಂಚಿಕೆಗಳಲ್ಲಿರುವ ಅಂಶಗಳನ್ನು ಒಳಗೊಂಡಂತೆ ಒಂದು ರಂಗನಾಟಕ ಬರೆಯಬೇಕೆಂದೂ ಅನೇಕರು ಸಲಹೆ ನೀಡಿದ್ದಾರೆ. 

ಸಾಮಾನ್ಯವಾಗಿ ಅನೇಕ ಓದುಗರು ಮಹಾಭಾರತ, ಭಾಗವತ ಮತ್ತು ಹಲವು ಪುರಾಣಗಲ್ಲಿರುವ ಚಂದ್ರವಂಶದವರ ಕುರಿತಾದ ಬಲು ವಿಸ್ತಾರವಾದ ಸರಕನ್ನು ಓದಿರುವುದಿಲ್ಲ. ಅದು ಎಲ್ಲರಿಗೂ ಸಾಧ್ಯವಾಗುವುದೂ ಇಲ್ಲ. ಅವುಗಳ ಗಾತ್ರ ಬಲು ದೊಡ್ಡದು. ಜೊತೆಗೆ ಮೂಲ ಕೃತಿಗಳು ಇರುವುದು ಸಂಸ್ಕೃತದಲ್ಲಿ. ಕಳೆದ ತಲೆಮಾರಿನ ಮತ್ತು ಇಂದಿನ ಅನೇಕ ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತದ ಯಾವುದಾದರೂ ಒಂದು ಎಳೆಯನ್ನು ಹಿಡಿದು, ಅದರ ವಿಸ್ತಾರದಲ್ಲಿ ತಮ್ಮ ಕೃತಿಗಳ ರಚನೆ ಮಾಡಿರುತ್ತಾರೆ. ವ್ಯಾಸ, ವಾಲ್ಮೀಕಿಗಳ ಸೆಳೆತ, ಸತ್ವ ಅಂತಹುದು. ಈ ಮಹಾಮಹಿಮರು ಸೃಷ್ಟಿಸಿರುವ, ಬಣ್ಣಿಸಿರುವ ಪಾತ್ರ ಪ್ರಪಂಚ ಎಲ್ಲರನ್ನೂ ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಅಂತಹ ಬೃಹತ್ ಕೃತಿಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. 

ಯಾವುದೋ ಒಂದು ಪಾತ್ರದ ಒಂದು ಒಳ್ಳೆಯ ಗುಣವನ್ನೋ, ದುರ್ಗುಣವನ್ನೋ ಹಿಗ್ಗಿಸಿ ಮರುಸೃಷ್ಟಿ ಮಾಡಿದ ಕೃತಿಗಳು ಅತ್ಯಂತ ಜನಪ್ರಿಯವಾದಾಗ ಅವುಗಳಲ್ಲಿ ಬಿಂಬಿತವಾದ ಹೂರಣವೇ ಸತ್ಯವೆಂದು ಸಾಮಾನ್ಯ ಜನ ನಂಬುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲಿಯೂ ಅರ್ಥ, ಕಾಮಗಳ ಪ್ರಪಂಚ, ಇನ್ನೂ ವಿಶೇಷವಾಗಿ ದೈಹಿಕ ಕಾಮದ ವಿವರಣೆಗಳ ಆಕರ್ಷಣೆ ಹಾಗೆ. ಇದರಲ್ಲಿ ತಪ್ಪೇನೂ ಇಲ್ಲ. ಇದೂ ಸಹ ಮನುಷ್ಯನ ಸಹಜ ಜೀವನದ ಒಂದು ಮುಖವೇ. ಹೀಗಿದ್ದಾಗ ಯಾವುದೋ ಸಂದರ್ಭದಲ್ಲಿ ಬೇರೆ ಸಂಗತಿಗಳು ಗಮನಕ್ಕೆ ಬಂದಾಗ "ಒಹೋ, ಹೀಗೂ ಉಂಟೋ!" ಎಂದು ಆಶ್ಚರ್ಯ ಆಗುತ್ತದೆ. 

*****

ಯಾವುದೇ ಒಂದು ವಿಷಯದ ಮೇಲೆ ಚರ್ಚೆ ನಡೆದಾಗ ಪರಸ್ಪರ ವಿರೋಧ ದಿಕ್ಕಿನ ವಿಚಾರಗಳು ಬರುವುದು ಸಹಜ. ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಪದಾರ್ಥದಲ್ಲಿ ಅನೇಕ ಗುಣಗಳಿದ್ದಾಗ ಒಂದು ಅವಗುಣ (ದುರ್ಗುಣ) ಕಂಡರೆ ಅದು ಹೇಗೆ ಧ್ವನಿತವಾಗುತ್ತದೆ ಎನ್ನುವುದಕ್ಕೆ ಕೆಳಗಿನ ಉದಾಹರಣೆ ನೋಡಬಹುದು. 

ಕವಿಕುಲಗುರು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದ ಮೊದಲ ಸರ್ಗದ ಮೂರನೆಯ ಪದ್ಯದಲ್ಲಿ ಹೀಗೆ ಹೇಳುತ್ತಾನೆ:

ಅನಂತರತ್ನ ಪ್ರಭವಸ್ಯ ಯಸ್ಯ ಹಿಮಂನ ಸೌಭಾಗ್ಯವಿಲಾಪಿಜಾತಂ 
ಏಕೋಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೀಶ್ವಿವಾಂಕಃ 

ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠ ವಸ್ತುಗಳಿವೆ. ಆದ್ದರಿಂದ ಎಲ್ಲೆಡೆಯೂ ಹಿಮವಿದ್ದರೂ ಅದರ ಯೋಗ್ಯತೆ ಕಡಿಮೆಯಾಗಲಿಲ್ಲ. ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವೇ ಮರೆಯಾಗುತ್ತದೆ. 

ಇದಕ್ಕೆ ವಿರುದ್ಧವಾಗಿ ಶೃಂಗಾರ ಪ್ರಕಾಶ ಹೀಗೆ ಹೇಳುತ್ತದೆ: 

ಏಕೋಹಿದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋರಿತಿ ಯೋ ಬಭಾಷೇ 

ತೇನಾಪಿ ನೂನಂ ಕವಿನಾ ನ ದೃಷ್ಟ೦ ದಾರಿದ್ರ್ಯದೋಷ: ಗುಣರಾಶಿನಾಶೀ 

ಅನೇಕ ಗುಣಗಳಿದ್ದಾಗ ಒಂದು ದೋಷವು ಮುಚ್ಚಿಹೋಗುತ್ತದೆ ಎಂದು ಹೇಳಿದ ಕವಿಗೆ, ದಾರಿದ್ರ್ಯ (ಬಡತನ) ಎನ್ನುವ ಒಂದು ದೋಷವೇ ಎಲ್ಲಾ ಗುಣಗಳನ್ನೂ ನುಂಗಿಹಾಕುತ್ತದೆ ಎನ್ನುವುದು ಕಾಣಲಿಲ್ಲ! 

ಹೀಗೆ ಪರಸ್ಪರ ಅಭಿಪ್ರಾಯ ಭೇದವಿರುವುದು ಸರಿಯಾದರೂ ಇಲ್ಲಿ ಒಟ್ಟಾರೆ ಆಗುವ ಪರಿಣಾಮ ಸನ್ಮಾರ್ಗ ಪ್ರೇರಕವೇ ಆಗಿದೆ. ದಾರಿದ್ರ್ಯದ ಭೀಕರತೆ ತೋರಿಸಿದರೂ, ಅದು ಬಡತನವನ್ನು ಅತಿಯಾಗಿ ಗಮನಿಸದೆ ಗುಣಗ್ರಾಹಿಯಾಗಬೇಕೆಂದು ಸೂಚಿಸುತ್ತದೆ. 

*****

ಪರಮಪುರುಷನೊಬ್ಬನೇ ಸಕಲ ದೋಷದೂರನಾದವನು. ಅವನೊಬ್ಬನೇ ಅನಂತ ಕಲ್ಯಾಣಗುಣ ಪರಿಪೂರ್ಣ. ಇದು ಒಂದು ಪ್ರಮೇಯ. ಅನೇಕ ತಾತ್ವಿಕ ನಿಲುವುಗಳು ಇದರ ಮೇಲೆ ನಿಂತಿವೆ. ಆದ್ದರಿಂದ ಪರಮಾತ್ಮನನ್ನು ನೆನೆಯುವುದು ಅಂದರೆ ಅವನ ಅನಂತ ಗುಣಗಳಲ್ಲಿ ನಮಗೆ ಚಿಂತನೆಗೆ ಸಿಲುಕುವ, ನಿಲುಕುವ ಗುಣಗಳ ಚಿಂತನೆಯೇ ಆಗಿದೆ. ಬೇರೆಯ ದೇವತೆಗಳೂ, ಮನುಷ್ಯರೂ ಈ ಅಳತೆಯಲ್ಲಿ ಕಡಿಮೆ ಬೀಳುವುದು ಸಹಜವೇ. ಎಲ್ಲ ದೇವತೆಗಳೂ, ಮನುಷ್ಯರೂ ದೋಷ ದೂರರಾದರೆ, ಸಕಲ ಗುಣಗಳ ಖನಿಗಳಾದರೆ, ಅವರು ಮನುಷ್ಯರಾಗಿಯೋ ಅಥವಾ ದೇವತೆಗಳಾಗಿಯೋ ಉಳಿಯುವುದಿಲ್ಲ. ಅವರೂ ದೇವರೇ ಆಗಿಬಿಡುತ್ತಾರೆ!

ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ನಮ್ಮ ಹಿರಿಯ ಸ್ನೇಹಿತರೊಬ್ಬರು ಸೂಚಿಸಿರುವಂತೆ "ನಾವು ಗುಣಾನ್ವೇಷಣೆಯಲ್ಲಿ ತೊಡಗಬೇಕೇ ಹೊರತು ದೋಷಾನ್ವೇಷಣೆಯಲ್ಲಿ ಅಲ್ಲ". ರಾಮಾಯಣ, ಮಹಾಭಾರತ, ಪುರಾಣಗಳು ಮುಂತಾದುವುಗಳಲ್ಲಿ ಕಂಡು ಬರುವ ದುಷ್ಟ ಪಾತ್ರಗಳನ್ನೇ ವೈಭವೀಕರಿಸಿ, ಅವರನ್ನೇ ನಾಯಕರುಗಳನ್ನಾಗಿ ಮಾಡಿ ರಚಿಸಿರುವ ಸಾಹಿತ್ಯ ಎಲ್ಲ ಭಾಷೆಗಳಲ್ಲಿ ವಿಪುಲವಾಗಿಯೇ ಇವೆ. ಸಾಹಿತ್ಯದ ಮೂಲೋದ್ದೇಶ "ರಸಾಸ್ವಾದನೆ" ಆದುದರಿಂದ ಆ ದೃಷ್ಟಿಯಲ್ಲಿ ಇದು ಅಸಾಧುವೂ ಅಲ್ಲ. ಆದರೆ ಅದು ಅಲ್ಲಿಗೇ ನಿಲ್ಲಬೇಕು. ಅದನ್ನು ಬಿಟ್ಟು ಇಂತಹ ವ್ಯಾಖ್ಯಾನಗಳೇ ಸತ್ಯ ಎಂದು ಜನಜನಿತವಾದರೆ ಮೂಲ ಕೃತಿಗಳ ಮೂಲಭೂತ ಆಶಯಕ್ಕೇ ಕೊಡಲಿಪೆಟ್ಟು ಬೀಳುತ್ತದೆ. 

ಪ್ರಾಚಾರ್ಯ ತಿ. ನಂ. ಶ್ರೀ ಅವರು ತಮ್ಮ "ಭಾರತೀಯ ಕಾವ್ಯ ಮೀಮಾಂಸೆ" ಮೇರು ಕೃತಿಯಲ್ಲಿ ಹೇಳಿರುವಂತೆ "ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ". ಇನ್ನೂ ಸ್ವಲ್ಪ ಮುಂದೆ ಅವರು ಸೂಚಿಸುವಂತೆ "ವಾಚಕನ ಮನಸ್ಸು ಸಂಸ್ಕಾರ ಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಸತ್ಪ್ರೇರಣೆ ಅನ್ನುತ್ತಾರೆ". 

ಕೃತಿ ರಚನಾ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಆದರೆ ಕಡೆಗೆ "ಕೃತಿಯ ಒಟ್ಟಾರೆ ಪರಿಣಾಮ ಏನಾಗುವುದು?" ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಭೀಕರ ಅಪರಾಧಗಳನ್ನು ಮಾಡಿ ನಿಭಾಯಿಸಿಕೊಂಡವರ ಬಗ್ಗೆ ಚಲನಚಿತ್ರಗಳು ಬಂದಿವೆ. ಅವುಗಳನ್ನು ನೋಡಿ ಅದನ್ನೇ ಅನುಕರಿಸಿ ಅಪರಾಧಗಳನ್ನು ಮಾಡಿ ಸಿಕ್ಕಿಹಾಕಿಕೊಂಡವರು ಇಂತಹ ಚಿತ್ರಗಳೇ ಅವರ ಪ್ರೇರಕ ಶಕ್ತಿ ಎಂದು ಹೇಳಿರುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರ್ಯ, ರಸಾನುಭವ, ಮನರಂಜನೆ, ಜನಪ್ರಿಯತೆ ಇವೆಲ್ಲವೂ ಮುಖ್ಯವಾದರೂ ಸಮಾಜದ ಮೇಲೆ ಆಗುವ ಪೂರ್ಣ ಪರಿಣಾಮವೂ ಅಷ್ಟೇ ಮುಖ್ಯ ಎನ್ನುವುದು ಗಮನಿಸಬೇಕಾದ ಅಂಶ. 

*****

ಚಕ್ರವರ್ತಿ ಯಯಾತಿ ವಿಷಯದಲ್ಲಿ ಗಮನಿಸುವುದಾದರೆ, ಅವನನ್ನು ಕೇಂದ್ರೀಕರಿಸಿ ಮರಾಠಿ ಭಾಷೆಯ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಶ್ರೀ ವಿಷ್ಣು ಸಖಾರಾಮ ಖಾಂಡೇಕರ್ ಅವರು 1959 ರಲ್ಲಿ ಮರಾಠಿಯಲ್ಲಿ "ಯಯಾತಿ" ಏನುವ ಹೆಸರಿನ ಕಾದಂಬರಿ ಹೊರತಂದರು. ಅವರಿಗೆ ಈ ಕಾದಂಬರಿ ಬಹಳ ಕೀರ್ತಿ ತಂದಿತು. 1974 ವರ್ಷದ "ಜ್ಞಾನಪೀಠ" ಪ್ರಶಸ್ತಿಯೂ ಅವರಿಗೆ ಈ ಪುಸ್ತಕಕ್ಕಾಗಿ ಸಿಕ್ಕಿತು. 

ಎರಡು ವರ್ಷಗಳ ನಂತರ, 1961 ರಲ್ಲಿ ಕನ್ನಡದಲ್ಲಿ "ಯಯಾತಿ" ನಾಟಕ ರೂಪದಲ್ಲಿ ಶ್ರೀ ಗಿರೀಶ್ ಕಾರ್ನಾಡ್ ಅವರಿಂದ ಹೊರಬಂತು. ಈ ಕೃತಿ ರಚಿಸಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸು. ಆ ಚಿಕ್ಕ ವಯಸ್ಸಿನಲ್ಲೇ ಇಂತಹ ಪ್ರಖರ ಕೃತಿ ಹೊರತಂದಿದ್ದು ಅವರ ಅಪಾರ ಪ್ರತಿಭೆಗೆ ಸಾಕ್ಷಿ. ಮುಂದೆ ಅವರು ಮಾಡಿದ ಒಟ್ಟಾರೆ ಸಾಹಿತ್ಯ ಸೇವೆಗೆ ಅವರಿಗೆ 1998 ರಲ್ಲಿ "ಜ್ಞಾನಪೀಠ" ಪ್ರಶಸ್ತಿ ಸಿಕ್ಕಿತು. 

ಮಹಾಭಾರತ ಮತ್ತು ಪುರಾಣಗಳಲ್ಲಿ ಸಿಗುವ ಯಯಾತಿಯ ಪೂರ್ತಿ ವಿವರಗಳನ್ನು ಗಮನಿಸಿದಾಗ ಅವನು ತನ್ನ ಮಗನಿಂದ ಯೌವನ ಪಡೆದುದು ಒಂದು ಆಕಸ್ಮಿಕ. ದೇವಯಾನಿಯ ದೂರಿನ ಕಾರಣವಾಗಿ ದೈತ್ಯಗುರು ಶುಕ್ರಾಚಾರ್ಯರಿಗೆ ಬಂದ ಕೋಪದ ಫಲಶ್ರುತಿಯಾಗಿ ಅವರು ಯಯಾತಿಗೆ "ಅಕಾಲ ವೃದ್ಧಾಪ್ಯ ಬರಲಿ" ಎಂದು ಶಾಪ ಕೊಟ್ಟರು. ಹೀಗೆ ಶಾಪ ಬಂದಾಗ ಅವನು ಅವರಲ್ಲಿ ಕ್ಷಮೆ ಬೇಡಿ ವಿಶಾಪ ಕೋರಿದಾಗ ಅವರು ತೋರಿಸಿದ ದಾರಿ ಯಾವುದು? "ನಿನ್ನ ಮಕ್ಕಳಲ್ಲಿ ಯಾರಾದರೂ ನಿನ್ನ ವೃದ್ಧಾಪ್ಯ ತೆಗೆದುಕೊಂಡು ಅವನ ಯೌವನ ನಿನಗೆ ಕೊಟ್ಟರೆ ತೆಗೆದುಕೋ" ಎಂದರು! ಅವನು ಆ ದಾರಿಯಲ್ಲಿ ಹೋದ. ತಾನಾಗಿ ಅದನ್ನು ಕೇಳಿದವನಲ್ಲ. ಮುಂದೆ ಒಂದು ಸಾವಿರ ವರುಷ ಮಗನ ಯುವತನ ಪಡೆದಿದ್ದನಂತೆ. ಕಡೆಗೆ ಏನು ಮಾಡಿದರೂ, ಎಷ್ಟು ಭೋಗ ಸವಿದರೂ, ತೃಪ್ತಿಯಾಗುವುದಿಲ್ಲ ಎಂದು ತಿಳಿಯಿತು. ಆಗ ತಕ್ಷಣ ಅದೇ ಮಗನಿಗೆ ಯೌವನ ಹಿಂದಿರುಗಿಸಿ ವಾನಪ್ರಸ್ಥಕ್ಕೆ ಹೊರಟ. ಈ ಘಟನೆ ಅವನ ಜೀವನದಲ್ಲಿ ನಡೆದ ಒಂದು ದುರ್ದೈವದ ನಡೆ. 

ಮಗನ ಯೌವನ ಪಡೆದ ಅವನನ್ನು ನೋಡುವ ಎರಡು ದೃಷ್ಟಿ ಕೋಣಗಳು ಇವೆ. ಒಂದರಲ್ಲಿ ಗಂಡ ತನ್ನ ಬಳಿ ಬಂದಾಗ ಅವನ ಹೆಂಡತಿ "ನನ್ನ ಹತ್ತಿರ ಬರಬೇಡ. ನಿನ್ನಲ್ಲಿ ನನ್ನ ಮಗ ಕಾಣಿಸುತ್ತಾನೆ" ಎಂದು ಹೇಳುವುದು. ಇನ್ನೊಂದರಲ್ಲಿ ಅವನ ಸೊಸೆ ಅವನ ಬಳಿ ಬಂದು "ಈಗ ನೀನೇ ನನ್ನ ಗಂಡ" ಅನ್ನುವುದು. ಒಂದು ಆ ವಯಸ್ಸಿಗೆ ತಕ್ಕ ಉದಾತ್ತತೆ. ಇನ್ನೊಂದು ಈ ವಯಸ್ಸಿಗೆ ತಕ್ಕ ಅವಶ್ಯಕತೆ. ಯಾವುದು ಸರಿ ಎಂದು ಹೇಳುವಂತಿಲ್ಲ. ಅದರ ಜಾಗದಲ್ಲಿ ಅದು ಸರಿ. ಇದರ ಜಾಗದಲ್ಲಿ ಇದು ಸರಿ. 

*****

ಯಯಾತಿಯ ತಂದೆ ನಹುಷ ಚಕ್ರವರ್ತಿಯ ಮಹಾಭಾರತ, ಪುರಾಣಗಳ ಚಿತ್ರಣದ ದೋಷವೊಂದನ್ನು ಪರಿಹರಿಸಿ ದೇವುಡು ನರಸಿಂಹ ಶಾಸ್ತ್ರಿಗಳು "ಮಹಾಕ್ಷತ್ರಿಯ" ಎನ್ನುವ ದಿವ್ಯ ಪೌರಾಣಿಕ ಕಾದಂಬರಿ ಕೊಟ್ಟರು. ದುಷ್ಯಂತನ ಒಂದು ದೋಷವನ್ನು ಒಂದು ಉಂಗುರದ ಪ್ರಭಾವವನ್ನು ತಂದು ಪರಿಹರಿಸಿ ಮಹಾಕವಿ ಕಾಳಿದಾಸನು "ಅಭಿಜ್ಞಾನ ಶಾಕುಂತಲ" ನಾಟಕವನ್ನು ಕೊಟ್ಟ. 

ಅಭಿವ್ಯಕ್ತಿ ಸ್ವಾತಂತ್ರ್ಯ, ಕೃತಿ ರಚಿಸುವವನ ಪ್ರತಿಭೆ, ಸಮಾಜದಲ್ಲಿ ಇರುವ ಸಂಬಂಧಗಳು ಮತ್ತು ಮೌಲ್ಯಗಳ ಹಿನ್ನೆಲೆಯಲ್ಲಿ ಆಯಾ ಕೃತಿಗಳ ವಿಮರ್ಶೆ ಮಾಡಬೇಕಲ್ಲದೆ, ಯಯಾತಿಯ ಬಗ್ಗೆ ನಮ್ಮ ಒಟ್ಟಾರೆ ಅಭಿಪ್ರಾಯ ರೂಪಿಸುವ ತುಲನೆ ಮಾಡುವಾಗ ಅವನ ವ್ಯಕ್ತಿತ್ವದ ಒಂದು ಕಪ್ಪು ಚುಕ್ಕೆಯನ್ನೇ ಗಮನಿಸಿ ಮಿಕ್ಕ ವಿಶಾಲ ಶುಭ್ರ ಶ್ವೇತ ಗುಣಗಳನ್ನು ಮರೆಯಬಾರದೆಂಬುದೇ ಇಷ್ಟೆಲ್ಲಾ ಚರ್ಚೆಯ ಆಶಯ. ಹಾಗೆ ಮಾಡಿದರೆ ಅದು ಕಳಂಕವಿದೆ ಎಂದು ಚಂದ್ರನನ್ನೇ ಪಕ್ಕಕ್ಕೆ ತಳ್ಳಿದ ಹಾಗೆ. 

Wednesday, July 30, 2025

ಪುರಾಣಗಳ ವಿಸ್ತಾರ


ಕಳೆದ ಕೆಲವು ಸಂಚಿಕೆಗಳಲ್ಲಿ, ಅನೇಕ ವಿಷಯಗಳ ಸಂದರ್ಭಗಳಲ್ಲಿ "ಪದ್ಮ ಪುರಾಣ" ಮತ್ತು "ನಾರದೀಯ ಪುರಾಣ" ಇವುಗಳ ಕೆಲವು ಅಂಶಗಳನ್ನು ಚರ್ಚೆಯಲ್ಲಿ ಕಂಡಿದ್ದೆವು. ಇವುಗಳನ್ನು ಗಮನಿಸಿದ ಮಿತ್ರರೊಬ್ಬರು ಈ ಪುರಾಣಗಳ ವಿಸ್ತಾರ, ಮತ್ತು ಆಸಕ್ತರು ಇವುಗಳನ್ನು ಓದಬೇಕಾದರೆ ಎಲ್ಲಿ ಹುಡುಕಬೇಕು ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇವುಗಳನ್ನು  ಕುರಿತು ಸ್ವಲ್ಪ ಈಗ ನೋಡೋಣ. 

ಪುರಾಣಗಳ ಸಂದರ್ಭದಲ್ಲಿ ಸಾಮಾನ್ಯವಾಗಿ "ಅಷ್ಟಾದಶ ಪುರಾಣಗಳು" ಎಂದು ಹೇಳುವ ಪರಿಪಾಠ ಇದೆ. ಈ "ಹದಿನೆಂಟು ಪುರಾಣಗಳು" ಭಗವಾನ್ ವೇದವ್ಯಾಸರಿಂದ ರಚಿತವಾಗಿವೆ ಎಂದು ನಂಬಿಕೆ. ಇವುಗಳಲ್ಲದೇ ಬೇರೆ ಪುರಾಣಗಳು ಮತ್ತು ಇವುಗಳ ಜೊತೆಗೆ ಅನೇಕ ಉಪ-ಪುರಾಣಗಳೂ ಇವೆ. ಅನೇಕ ಜೈನ ಪುರಾಣಗಳೂ ಪ್ರಸಿದ್ಧವಾಗಿವೆ. ಅನೇಕರು ಇವುಗಳಲ್ಲಿ ಕೆಲವನ್ನು ಮಾನ್ಯ ಮಾಡುವುದಿಲ್ಲ. ಕೆಲವರು ವೈಷ್ಣವ ಪುರಾಣಗಳನ್ನು ಒಪ್ಪುವುದಿಲ್ಲ. ಮತ್ತೆ ಕೆಲವರು ಶೈವ ಪುರಾಣಗಳನ್ನು ಒಪ್ಪುವುದಿಲ್ಲ. "ಅಯ್ಯೋ, ಈ ಪುರಾಣಗಳ ಪುರಾಣವೇ ಬೇಡಪ್ಪ" ಅನ್ನುವವರಿಗೂ ಕಡಿಮೆಯಿಲ್ಲ. 

ಪುರಾಣಗಳಿಗೆ ವೈದಿಕ ವಾಂಗ್ಮಯದಲ್ಲಿ ವಿಶಿಷ್ಟ ಸ್ಥಾನವಿದೆ. ರಾಮಾಯಣ, ಮಹಾಭಾರತಗಳ ಜೊತೆ ಜೊತೆಯಾಗಿ ಇವುಗಳ ಉಲ್ಲೇಖ ಬರುತ್ತದೆ. ಅನೇಕ ಸಂದರ್ಭಗಳು, ಕಥೆಗಳು, ವಿವರಗಳು ಇವುಗಳೆಲ್ಲದರಲ್ಲೂ ಸಿಗುತ್ತವೆ. ಕೆಲವು ವಿವರಗಳು ಒಂದೇ ರೀತಿ ಇವೆ. ಮತ್ತೆ ಕೆಲವು ಅಲ್ಲಲ್ಲಿ ವ್ಯತ್ಯಾಸಗಳನ್ನೂ ಹೊಂದಿವೆ. 
*****

ಪುರಾಣಗಳನ್ನು "ಧರ್ಮ ಗ್ರಂಥಗಳು" ಎಂದು ಓದುವವರಿದ್ದಾರೆ. ಇವುಗಳನ್ನು ಕೇವಲ ಒಂದು ಸಾಹಿತ್ಯ ಪ್ರಕಾರ ಎಂದೂ ಓದಬಹುದು. ಅನೇಕ ಪುರಾಣಗಳ ಭಾಗಗಳು ಒಳ್ಳೆಯ ಕಾವ್ಯವೂ ಹೌದು. ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುವ ಅನೇಕ ವಿಷಯಗಳ ಚರ್ಚೆ ಇವುಗಳಲ್ಲಿ ಕಾಣಬಹುದು. ಜೀವನವನ್ನು ಹಸನು ಮಾಡಿಕೊಳ್ಳಲು ಬೇಕಾದ ಅಂಶಗಳನ್ನು ಹೇರಳವಾಗಿ ಇವುಗಳಲ್ಲಿ ನೋಡಬಹುದು. ನಮಗೆ ಅರ್ಥವಾಗದ ಅನೇಕ ಗೋಜಲು ಪ್ರಶ್ನೆಗಳಿಗೆ ಇವುಗಳಲ್ಲಿ ಉತ್ತರವನ್ನೂ ಕಂಡುಕೊಳ್ಳಬಹುದು. 

ಅನೇಕ ಪುರಾಣಗಳ ಶ್ಲೋಕಗಳು ನಮ್ಮಲ್ಲಿ ಅನೇಕರು ದೈನಂದಿನ ಜೀವನದಲ್ಲಿ ಪೂಜೆ-ಪುನಸ್ಕಾರಗಳಲ್ಲಿ ಹೇಳುವ ಅಭ್ಯಾಸವೂ ಇದೆ. ಇವು ಪುರಾಣಗಳ ಶ್ಲೋಕಗಳು ಎಂದು ಅನೇಕರಿಗೆ ಗೊತ್ತಿಲ್ಲ. ಅಷ್ಟೇ. ಹಿಂದಿನ "ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ" ಅನ್ನುವ ಸಂಚಿಕೆಯಲ್ಲಿ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ" ಎನ್ನುವ ಶ್ಲೋಕದ ಮೂಲ "ನಾರದ ಪುರಾಣ"ದಲ್ಲಿದೆ ಎಂದು ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು).  ಸರ್ವಸಮರ್ಪಣ ಕಾಲದಲ್ಲಿ ಹೇಳುವ "ಕಾಯೇನ ವಾಚಾ, ಮನಸಾ ಇಂದ್ರಿಯೈರ್ವಾ, ಬುಧ್ಯಾತ್ಮನಾವಾ"  ಅನ್ನುವುದೂ ಶ್ರೀಮದ್ ಭಾಗವತದಿಂದ ಬಂದಿರುವುದು. ಹೀಗೆ ಅನೇಕ ಉದಾಹರಣೆಗಳು ಉಂಟು. 

"ಪುರಾಣಗಳನ್ನು ಓದದಿದ್ದರೆ ಏನಾಗುತ್ತದೆ?" ಎಂದು ಯಾರಾದರೂ ಕೇಳಬಹುದು. ಅದಕ್ಕೆ ಪ್ರಾಯಶಃ ಸರಿಯಾದ ಉತ್ತರ "ಏನೂ ಆಗುವುದಿಲ್ಲ" ಎಂದೇ ಇರಬೇಕು! ಪುರಾಣಗಳು ಎಂದು ಒಂದು ಇದೆ ಅನ್ನುವುದೇ ಗೊತ್ತಿಲ್ಲದವರೂ ಸುಖವಾಗಿ ಜೀವನ ಮಾಡಿಕೊಂಡಿದ್ದಾರೆ ಅನ್ನುವುದು ನಮ್ಮ ಕಣ್ಣ ಮುಂದೆ ಇದೆ. ಓದು-ಬರಹ ಗೊತ್ತಿಲ್ಲದೇ ಅನೇಕರು ಇಡೀ ಜೀವನವನ್ನೇ ಕಳೆಯುವುದೂ ಉಂಟು. ಸುಖ ಅನ್ನುವುದರ ಪರಿಭಾಷೆ ಏನು ಅನ್ನುವುದರ ಮೇಲೆ ಇದರ ಉತ್ತರವನ್ನು ಅವರವರು ತಮಗೆ ಸರಿಬಂದಂತೆ ಕಂಡುಕೊಳ್ಳಬಹುದು. 

*****

"ಗ್ರಂಥ" ಅನ್ನುವ ಪದವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸುತ್ತೇವೆ. "ಗ್ರಂಥಾಲಯ" (ಲೈಬ್ರರಿ), "ಗ್ರಂಥಪಾಲಕ" (ಲೈಬ್ರರಿಯನ್), "ಗ್ರಂಥ ಸಂಪತ್ತು" (ಲಿಟರೇಚರ್) ಮುಂತಾಗಿ ಮಾತಿನಲ್ಲಿ ಪ್ರಯೋಗಿಸುವುದರ ಜೊತೆಗೆ ಅಲ್ಲಲ್ಲಿ ಫಲಕಗಳನ್ನೂ (ಬೋರ್ಡುಗಳು) ಕಾಣಬಹುದು. ಈ "ಗ್ರಂಥ" ಅಂದರೇನು? ಗ್ರಂಥ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ದಾರಗಳಿಂದ ಕಟ್ಟಿಟ್ಟದ್ದು ಎನ್ನುವುದೂ ಒಂದು ಅರ್ಥ. ತಾಳೆಗರಿಯ ಮೇಲೆ ಬರೆದಿರುವ ಕೃತಿಗಳನ್ನು ದಾರಗಳಿಂದ ಸೇರಿಸಿ ಕಟ್ಟಿಡುತ್ತಿದ್ದುದರಿಂದ ಹೀಗೆ ಪ್ರಯೋಗ ಬಂದಿರಬಹುದು. ಸಿಖ್ಖರ ಧರ್ಮಗ್ರಂಥ "ಗುರು ಗ್ರಂಥ್ ಸಾಹಿಬ್" ಅಂದು ಕರೆಯಲ್ಪಡುತ್ತದೆ. ಅದರ ರಕ್ಷಣೆ ಮಾಡುವ ಪಾಲಕರಿಗೆ "ಗ್ರಂಥಿ" ಅನ್ನುತ್ತಾರೆ. ಯೋಗ ಮತ್ತು ಆಯುರ್ವೇದಗಳಲ್ಲಿ "ಗ್ರಂಥಿ" ಅನ್ನುವುದಕ್ಕೆ ಬೇರೆ ಅರ್ಥಗಳಿವೆ. 

ಸಂಸ್ಕೃತ ಸಾಹಿತ್ಯದ ಸಂದರ್ಭದಲ್ಲಿ "ಗ್ರಂಥ" ಎಂದರೆ ಮೂವತ್ತೆರಡು ಅಕ್ಷರಗಳು (32 ಅಕ್ಷರಗಳು) ಉಳ್ಳ ಒಂದು ಶ್ಲೋಕ. ಹೀಗೆ ನೋಡಿದಾಗ ರಾಮಾಯಣ 24,000 ಶ್ಲೋಕಗಳುಳ್ಳದ್ದು. ಮಹಾಭಾರತ ಅದರ ಐದುಪಟ್ಟು ದೊಡ್ಡದು. ಮಹಾಭಾರತದ ವಿಸ್ತಾರ 1,25,000 ಶ್ಲೋಕಗಳು. ಹೆಸರಾಂತ ಗ್ರೀಕ್ ಮಹಾಕೃತಿಗಳಾದ, ಹೋಮರ್ ಮಹಾಕವಿಯ "ಇಲಿಯಡ್" ಮತ್ತು "ಒಡಿಸ್ಸಿ" ಇವುಗಳ ಒಟ್ಟು ಗಾತ್ರಕ್ಕಿಂತ ಸುಮಾರು ಹತ್ತು ಪಟ್ಟು ದೊಡ್ಡದು ಮಹಾಭಾರತ. (ಇಲಿಯಡ್ ಸುಮಾರು 15,700 ಸಾಲುಗಳ ಕೃತಿ. ಒಡಿಸ್ಸಿ ಸುಮಾರು 12,100 ಸಾಲುಗಳುಳ್ಳದ್ದು. ಇವುಗಳ ಒಟ್ಟು ಗಾತ್ರ 27,800 ಸಾಲುಗಳು). ಮಹಾಭಾರತದ ಗಾತ್ರ (ಹರಿವಂಶವನ್ನೂ ಸೇರಿಸಿದರೆ) ಸುಮಾರು 2,50,000 ಸಾಲುಗಳಿಗಿಂತಲೂ ಹೆಚ್ಚು. ಹೀಗೆ ಲೆಕ್ಕಾಚಾರ. 

"ಸುಮಾರು" ಎಂದು ಏಕೆ ಹೇಳುತ್ತಾರೆ? ಸಂಸ್ಕೃತ ಕೃತಿಗಳಲ್ಲಿ ಎರಡು ಸಾಲಿನ ಮತ್ತು ನಾಲ್ಕು ಸಾಲಿನ ಶ್ಲೋಕಗಳಿರುತ್ತವೆ. ಅನೇಕ ವೇಳೆ ಮಧ್ಯೆ ಮಧ್ಯೆ ಗದ್ಯವೂ ಸೇರಿರುತ್ತದೆ. ಈ ಕಾರಣಗಳಿಗಾಗಿ. ಇದರ ಜೊತೆಗೆ ಅಚ್ಚು ಮತ್ತು ಕಾಗದದ ಮೇಲೆ ಮುದ್ರಣ ಇಲ್ಲದ ಕಾಲದಲ್ಲಿ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಕೇವಲ ಬಾಯಿಪಾಠದ ಮೂಲಕ ವರ್ಗಾವಣೆ ಆಗುತ್ತಿದ್ದ ಸಮಯದಲ್ಲಿ, ಶ್ಲೋಕಗಳ ರೂಪ ಬಹಳ ಅನುಕೂಲಕರವಾಗಿತ್ತು. ಇದೇ ಕಾರಣಕ್ಕೆ ಒಂದು ಕಡೆಯ ಪಾಠದಿಂದ (ವರ್ಷನ್) ಮತ್ತೊಂದು ಕಡೆಯ ಪಾಠಕ್ಕೆ ವ್ಯತ್ಯಾಸಗಳಾಗಿ "ಪಾಠಾ೦ತರ" ಏನುವ ಕ್ರಮ ನಡೆದು ಬಂತು. 

*****

ಈ ಹಿನ್ನೆಲೆಯಲ್ಲಿ ಪುರಾಣಗಳ ವಿಸ್ತಾರವೇನು? ಇವುಗಳ ಲೆಕ್ಕ ಎಲ್ಲಿ ಸಿಗುತ್ತದೆ? ಇವು ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳು. ಹದಿನೆಂಟು ಪುರಾಣಗಳ ಖಚಿತವಾದ ಲೆಕ್ಕ ನಮಗೆ ಸಿಗುವುದು "ನಾರದ ಪುರಾಣ" ಪ್ರಾರಂಭದ ಶ್ಲೋಕಗಳಲ್ಲಿ. ಚತುರ್ಮುಖ ಬ್ರಹ್ಮನು ತನ್ನ ಮಗ ಮರೀಚಿಗೆ ತಿಳಿಸಿದಂತೆ ಹದಿನೆಂಟು ಪುರಾಣಗಳು ಮತ್ತು ಅವುಗಳ ಗಾತ್ರ ಈ ರೀತಿ ಇದೆ:

01.  ಬ್ರಹ್ಮ ಪುರಾಣ              10,000
02.  ಪದ್ಮ ಪುರಾಣ               55,000
03.  ವಿಷ್ಣು ಪುರಾಣ               23,000
04.  ವಾಯು ಪುರಾಣ            24,000 
05.  ಭಾಗವತ ಪುರಾಣ          18,000
06.  ನಾರದೀಯ ಪುರಾಣ       25,000
07.  ಮಾರ್ಕಂಡೇಯ ಪುರಾಣ    9,000
08.  ಆಗ್ನೇಯ ಪುರಾಣ           15,000
09.  ಭವಿಷ್ಯ ಪುರಾಣ             14,000
10.  ಬ್ರಹ್ಮವೈವರ್ತ ಪುರಾಣ    18,000
11.  ಲಿಂಗ ಪುರಾಣ               11,000
12.  ವರಾಹ ಪುರಾಣ             24,000
13.  ಸ್ಕಾ೦ದ ಪುರಾಣ             81,000
14.  ವಾಮನ ಪುರಾಣ            10,000
15.  ಕೂರ್ಮ ಪುರಾಣ             17,000
16.  ಮತ್ಸ್ಯ ಪುರಾಣ               14,000
17.  ಗರುಡ ಪುರಾಣ               19,000
18.  ಬ್ರಹ್ಮಾಂಡ ಪುರಾಣ          12,000

ಹದಿನೆಂಟು ಪುರಾಣಗಳು       3,99,000   

ಹದಿನೆಂಟು ಪುರಾಣಗಳ ಒಟ್ಟು ಗಾತ್ರ ನಾಲ್ಕು ಲಕ್ಷ ಶ್ಲೋಕಗಳು ಎಂದು ಹೇಳುವುದಕ್ಕೆ ಆಧಾರ ಇದು. ಇದರ ಪ್ರಕಾರ ಹದಿನೆಂಟು ಪುರಾಣಗಳ ಒಟ್ಟು ಗಾತ್ರ ರಾಮಾಯಣದ ಗಾತ್ರಕ್ಕಿಂತ ಹದಿನಾರರಷ್ಟು! ಮಹಾಭಾರತಕ್ಕಿಂತ ಮೂರುಪಟ್ಟಿಗೂ ಹೆಚ್ಚು. ಮಹಾಕವಿ ಹೋಮರನ ಕೃತಿಗಳ ಸುಮಾರು ಮೂವತ್ತೈದರಷ್ಟು. ಇಷ್ಟು ಅಗಾಧ ಹರವು ಅಷ್ಟಾದಶ ಪುರಾಣಗಳದ್ದು. 

*****

ಈ ಪುರಾಣಗಳ ಆಳ-ಅಗಲಗಳನ್ನು ಪ್ರವೇಶಿಸಿದರೆ ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟೂ ಸಹ, ಜೀವನದ ಅನೇಕ ಆಯಾಮಗಳ ಬಗ್ಗೆ ಸಾವಿರಾರು ವರುಷಗಳ ಹಿಂದೆಯೇ ನಮ್ಮ ಹಿರಿಯರು ಎಷ್ಟು ಆಳವಾದ ಅಧ್ಯಯನ ನಡೆಸಿ, ಅವುಗಳ ಸಂಚಿತ ಜ್ಞಾನವನ್ನು ಹೇಗೆ ಕೂಡಿಟ್ಟಿದ್ದಾರೆ ಎಂದು ತಿಳಿಯಬಹುದು. ಒಮ್ಮೆ ಇವುಗಳನ್ನು ಓದುವುದೇ ಒಂದು ಪ್ರಯಾಸದ ಕೆಲಸ. ಇಂತಹ ಕೃತಿಗಳನ್ನು ಹೇಗೆ ರಚಿಸಿದರು, ಅವುಗಳು ಅನೇಕ ಕಠಿಣ ಸಂದರ್ಭಗಳಲ್ಲಿಯೂ ಉಳಿದುಕೊಂಡು ಇಂದಿಗೂ ನಮಗೆ ಲಭ್ಯವಿವೆ ಎನ್ನುವುದು ಒಂದು ದೊಡ್ಡ ವಿಸ್ಮಯವೇ ಸರಿ. 

ಈ ಪುರಾಣಗಳ ರಚನೆಯ ಬಗ್ಗೆ ಇರುವ ಅಭಿಪ್ರಾಯಗಳು, ಆಸಕ್ತರು ಓದಲು ಇರುವ ಅನುಕೂಲಗಳು ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Thursday, May 22, 2025

ಶ್ರುತಾಯುಧ ಮತ್ತು ಅವನ ಅಜೇಯ ಗದೆ


ತಮ್ಮ ವಿವಿಧ ಬಗೆಯ ಸಾಧನೆ ಮತ್ತು ತಪಸ್ಸುಗಳಿಂದ ಚತುರ್ಮುಖ ಬ್ರಹ್ಮ ಮತ್ತು ಪರಶಿವರನ್ನು ಮೆಚ್ಚಿಸಿ, ಅಜೇಯವೆನಿಸುವ ವರಗಳನ್ನು ಪಡೆದು, ಆ ವರಗಳ ಮದದಿಂದ ಲೋಕಕಂಟಕರಾಗಿ ಮೆರೆವವರು ಮತ್ತು ಮಹಾವಿಷ್ಣುವು ಅನೇಕ ಪ್ರಸಂಗಗಳಲ್ಲಿ ಹೇಗೆ ಇಂತಹವರ ಕಾಟವನ್ನು ಕಡೆಗೊಳಿಸಿದನು ಎನ್ನುವುದನ್ನು ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" ಗ್ರಂಥದ 28ನೆಯ ಪದ್ಯದಲ್ಲಿ ವಿವರಿಸಿರುವ ಬಗೆಯನ್ನು "ಕೊಡುವವರಿಬ್ಬರು; ತೆಗೆಯುವವನೊಬ್ಬ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಭಸ್ಮಾಸುರ ಪರಶಿವನನ್ನು ಮೆಚ್ಚಿಸಿ ವರವನ್ನು ಪಡೆದು ಅದರ ಸತ್ವದ ಪರೀಕ್ಷೆ ಮಾಡಲು ವರ ಕೊಟ್ಟವನನ್ನೇ ಗುರಿಮಾಡಿದ್ದು ಮತ್ತು ಮಹಾವಿಷ್ಣುವು ಮೋಹಿನಿ ರೂಪದಿಂದ ಅವನ ಕೊನೆ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ "ಶ್ರುತಾಯುಧ" ಎನ್ನುವ ಅಸುರನೊಬ್ಬನ ಕಥೆ ಬಹಳ ಜನಕ್ಕೆ ಗೊತ್ತಿಲ್ಲ. ಶ್ರುತಾಯುಧನಿಗೆ ಬಲ ಬಂದಿದ್ದು ಶಿವ ಅಥವಾ ಬ್ರಹ್ಮರ ಕೃಪೆಯಿಂದ ಅಲ್ಲ. ತಂದೆಯಾದ ವರುಣನಿಂದ ತನಗೆ ಬಂದ ವರದ ಬಲದಿಂದ ಕೊಬ್ಬಿದ ಶ್ರುತಾಯುಧನನ್ನು ಶ್ರೀಕೃಷ್ಣನು ಹೇಗೆ ಉಪಾಯವಾಗಿ ಕೊಂದನು ಎನ್ನುವುದು ಮಹಾಭಾರತದಲ್ಲಿ ವರ್ಣಿತವಾಗಿದೆ. ಅದನ್ನು ಸ್ವಲ್ಪ ನೋಡೋಣ. 

*****

ಚತುರ್ಮುಖ ಬ್ರಹ್ಮರು ಒಮ್ಮೆ ಸಂಜೆಯ ವೇಳೆ ಸಮುದ್ರ ತೀರದಲ್ಲಿ ಯೋಗಧ್ಯಾನದಲ್ಲಿ ಸಂಚರಿಸುತ್ತಿದ್ದರಂತೆ. ಸಮುದ್ರರಾಜನಾದ ವರುಣನು ಅವರ ಇರವನ್ನು ಗಮನಿಸಿದರೂ ತೀವ್ರವಾಗಿ ಉಕ್ಕುತ್ತಾ ಬಂದು ಅವರ ಮೇಲೆ ಹೆಚ್ಚಾಗಿ ನೀರನ್ನು ಸಿಂಪಡಿಸಿದನಂತೆ. ಯೋಗಧ್ಯಾನದಲ್ಲಿದ್ದ ಬ್ರಹ್ಮರು "ಶಾಂತೋಭವ' (ಶಾಂತನಾಗು) ಎಂದು ಕೈಬೀಸಿ ಸುಮ್ಮನಾಗಿಸಿದರಂತೆ. ದೊಡ್ಡವರಿಗೆ ಅಪಚಾರ ಮಾಡಿದ ಕಾರಣದಿಂದ ಮುಂದೆ ವರುಣನು "ಶಂತನು" ಎನ್ನುವ ಹೆಸರಿನಿಂದ ಭೂಮಿಯಲ್ಲಿ ಹುಟ್ಟಬೇಕಾಯಿತು. ಶಂತನು ಗಂಗೆಯನ್ನು ವಿವಾಹವಾಗಿ, ನಂತರ ಎಂಟು ವಸುಗಳು ಅವರ ಮಕ್ಕಳಾಗಿ ಹುಟ್ಟಿ, ಗಂಗೆಯು ಮೊದಲ ಏಳು ಶಿಶುಗಳನ್ನು ನದಿಯಲ್ಲಿ ಹಾಕಿ, ಎಂಟನೆಯವನು "ದೇವವ್ರತ" ಆಗಿ ಉಳಿದು ಮುಂದೆ "ಭೀಷ್ಮ" ಎಂದು ಪ್ರಸಿದ್ಧನಾದುದು ಎಲ್ಲರಿಗೂ ತಿಳಿದ ವಿಷಯ. ಏಳು ಮಕ್ಕಳನ್ನು ಪತ್ನಿಯು ಹುಟ್ಟಿದ ತಕ್ಷಣ ನದಿಯಲ್ಲಿ ಬಿಸಾಡಿದರೂ ಅವನು ಶಾಂತನಾಗಿ ಸುಮ್ಮನಿರಬೇಕಾಯಿತು. ದೊಡ್ಡವರಿಗೆ ಮಾಡಿದ ಅಪಚಾರಗಳು ಹಿಂದೆ ಅಟ್ಟಿಸಿಕೊಂಡು ಬಂದು ನಮ್ಮನ್ನು ಕಾಡುತ್ತವೆಯೇ ಹೊರತು ಅವುಗಳಿಂದ ತಪ್ಪಿಸಿಕೊಳ್ಳಲಾಗದು. 

ಯೋಗಧ್ಯಾನದಲ್ಲಿ ಇರುವಾಗ ಸಂಚಾರ ಹೇಗೆ ಸಾಧ್ಯ ಎಂದು ಕೆಲವರಿಗೆ ಆಶ್ಚರ್ಯ ಆಗಬಹುದು. ವಾಹನ ಚಲಿಸುವ ಕಲಿಕೆಯಲ್ಲಿ (ಡ್ರೈವಿಂಗ್ ಪ್ರಾಕ್ಟೀಸ್) ಇರುವವರಿಗೆ ಯಾವ ಕ್ಷಣದಲ್ಲಿ ಅಪಘಾತ ಆಗುವುದೋ ಎಂಬ ಚಿಂತೆ ಇರುತ್ತದೆ. ವಾಹನ ಚಲಿಸುವುದು ಪ್ರಾರಂಭಿಸುವುದರಿಂದ ಅದು ನಿಲ್ಲಿಸಿ ಕೆಳಗಿಳಿಯುವವರೆಗೆ ಅದೊಂದು ಮೈ ಬಿಸಿ ಮಾಡುವ ಸನ್ನಿವೇಶ. ಆದರೆ ಚೆನ್ನಾಗಿ ನುರಿತ ಚಾಲಕರಿಗೆ ಹಾಗಲ್ಲ. ಅವರ ಪಕ್ಕ ನಾವು ಕುಳಿತಿದ್ದಾಗ ಅವರು ನಮ್ಮೊಡನೆ ಮಾತನಾಡುತ್ತ ವಾಹನ ನಡೆಸುತ್ತಿರುತ್ತಾರೆ. ಪ್ರಪಂಚದ ಅನೇಕ ಆಗು-ಹೋಗುಗಳ ಗಹನವಾದ ಚರ್ಚೆ ನಡೆದಿರುತ್ತದೆ. ಗಂಟೆಗಟ್ಟಲೆ ಡೊಂಕು-ಹಳ್ಳ-ದಿಣ್ಣೆಗಳಿರುವ ರಸ್ತೆಯಲ್ಲಿ ಮೈಲಿಗಟ್ಟಲೆ ವಾಹನ ಚಲಿಸಿರುತ್ತದೆ. ಅನೇಕ ಕೆಂಪು-ಹಸಿರು ದೀಪಗಳ ದಾರಿ ಕ್ರಮಿಸಿರುತ್ತದೆ. ಪಕ್ಕದಲ್ಲಿ ಮತ್ತು ಎದುರಿನಿಂದ ಸಾವಿರಾರು ವಾಹನಗಳು ಚಲಿಸಿರುತ್ತವೆ. ನಮ್ಮೊಡನೆ ಚಾಲಕ ಮಾತಿನಲ್ಲಿ ತೊಡಗಿರುವಾಗಲೇ ಇದೆಲ್ಲಾ ನಡೆದಿರುತ್ತದೆ. ಆದರೆ ಆ ಪಳಗಿದ ಚಾಲಕರು ನಿರಾಯಾಸವಾಗಿ ಇದೆಲ್ಲ ದಾಟಿ ಬಂದಿರುತ್ತಾರೆ!

ನಾವುಗಳು ಧ್ಯಾನಕ್ಕೆ ಕುಳಿತರೆ ಮನಸ್ಸು ಕಪಿಯಂತೆ ಎಲ್ಲೆಲ್ಲೋ ಎಗರಾಡುತ್ತ ಹರಿಯುತ್ತದೆ. ಬ್ರಹ್ಮರು, ಹನುಮಂತ ಮುಂತಾದವರ ಯೋಗ್ಯತೆ ಬಹಳ ದೊಡ್ಡದು. ಅವರು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದರೂ ನಿರಂತರವಾಗಿ ಯೋಗನಿಷ್ಠರಾಗಿಯೇ ಇರುತ್ತಾರೆ. ಅವರಿಗೂ ನಮಗೂ ಇರುವ ವ್ಯತ್ಯಾಸ ನುರಿತ ವಾಹನ ಚಾಲಕನಿಗೂ ಹೊಸದಾಗಿ ವಾಹನ ಚಾಲನೆ ಕಲಿಯುತ್ತಿರುವವನಿಗೂ ಇರುವ ಭಿನ್ನತೆಯ ರೀತಿ. ನಮಗೆ ತಿಳಿದಿರುವಂತೆ "ಅಷ್ಟಾವಧಾನ" ಮಾಡುವ ಪಂಡಿತರು ಒಂದೇ ಕಾಲಕ್ಕೆ ಅನೇಕ ದಿಕ್ಕುಗಳಲ್ಲಿ ಮನಸ್ಸು ನೆಟ್ಟು ಬೇರೆ ಬೇರೆ ಪೃಚ್ಛಕರು ಕೇಳಿದ ಹಲವಾರು ಜಟಿಲ ಸಮಸ್ಯೆಗಳಿಗೆ ಉತ್ತರಕೊಡುತ್ತಿದ್ದರೂ ಅವರು ಎಲ್ಲವನ್ನೂ  ಮಾಡಬಲ್ಲರು. ಸಾಮಾನ್ಯರಿಗೆ ಅದರಲ್ಲಿ  ಯಾವುದೇ ಒಂದನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ. ಎಂತಹ ವ್ಯತ್ಯಾಸ!

*****
ಜಲಾಧಿಪತಿಯಾದ ವರುಣ ಮತ್ತು ಪರ್ನಾಸ ಎಂಬ ನದಿ ದೇವತೆಯರ ಸಂತಾನವಾಗಿ ಒಂದು ಮಗು ಹುಟ್ಟಿತು. ತಾಯಿಯಾದ ಪರ್ನಾಸ ಶಿಶು ಜನಿಸಿದ ಸಂಭ್ರಮದಲ್ಲಿ ತಂದೆಯಾದ ವರುಣನಿಗೆ ಅವನಿಗೆ ಚಿರಂಜೀವಿಯಾಗಿರುವಂತೆ ಆಶೀರ್ವದಿಸಲು ಕೇಳಿದಳು. ಚಿರಂಜೀವಿ ಆಗು ಎನ್ನುವ ವರ ಕೊಡಲಾಗದಿದ್ದರಿಂದ ವರುಣನು ಒಂದು ಮಾಯಾ ಗದೆಯನ್ನು ಸೃಷ್ಟಿಸಿ ಮಗನಿಗೆ ಕೊಟ್ಟು "ಇವನು ಈ ಗದೆಯನ್ನು ಹಿಡಿದು ಯುದ್ಧ ಮಾಡುವಾಗ ಇವನು ಅಜೇಯನಾಗುತ್ತಾನೆ. ಅದರಿಂದ ಬಹಳ ದೀರ್ಘ ಕಾಲ ಬದುಕುತ್ತಾನೆ" ಎಂದು ಆಶೀರ್ವದಿಸಿದನು. ಗದೆ ಕೊಡುವಾಗ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದನು. "ನಿರಾಯುಧನ ಮೇಲೆ  ಈ ಗದೆ ಪ್ರಯೋಗಿಸಬಾರದು. ಹಾಗೆ ಮಾಡಿದಲ್ಲಿ ಅದು ಹಿಂದಿರುಗಿ ಪ್ರಯೋಗಿಸಿದವನಿಗೆ ಹೊಡೆಯುತ್ತದೆ" ಎಂದನು. ತಾಯಿ ಕೇಳಿ ಆಯುಧ ಸಿಕ್ಕಿದ್ದರಿಂದ ಅವನಿಗೆ "ಶ್ರುತಾಯುಧ" ಎಂದು ಹೆಸರಾಯಿತು. 

ಪರ್ನಾಸ ಎಂಬ ನದಿಯ ಹೆಸರು ಅನೇಕ ಜನ ಕೇಳಿರಲಿಕ್ಕಿಲ್ಲ. ದಕ್ಷಿಣ ಅಮೆರಿಕೆಯಲ್ಲಿ ಅಮೆಜಾನ್ ನದಿಯ ನಂತರ ಅತಿದೊಡ್ಡ ನದಿಯೊಂದಿದೆ. ಅದಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ಈಗ Parana de Las Palmas ಎನ್ನುತ್ತಾರೆ. ಇದರ ಹಿಂದಿನ ಹೆಸರು ಪರ್ನಾಸ. ಬ್ರೆಜಿಲ್ ದೇಶದಲ್ಲಿ ಹುಟ್ಟಿ ಪೆರಗ್ವೆ ಮತ್ತು ಅರ್ಜೆಂಟೈನಾ ದೇಶಗಳಲ್ಲಿ  ಮೂರು ಸಾವಿರ ಮೈಲು ದೂರ ಹರಿಯುವ ಈ ನದಿ ಅಲ್ಲಿನ ಜನರ ಜೀವನಾಡಿಯಾಗಿದೆ. 

ಶ್ರುತಾಯುಧನು ಮಹಾವೀರನಾಗಿ ಬೆಳೆದನು. ಗದೆಯ ಪ್ರಭಾವದಿಂದ ಅಜೇಯನಾಗಿ ಕಳಿಂಗ ದೇಶದ (ಈಗಿನ ಒಡಿಷಾ ಪ್ರದೇಶ) ರಾಜನಾದನು. ದುಷ್ಟರ ಸಂಗ ಸೇರಿ ಕಡೆಗೆ ದುರ್ಯೋಧನನ ಮಿತ್ರನಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯ ಸೈನ್ಯದ ಮಹಾವೀರರಲ್ಲಿ ಒಬ್ಬನಾದನು. ಪಾಂಡವರ ವಿರುದ್ಧ ಹೋರಾಡಿದನು. 
*****  

ಕುರುಕ್ಷೇತ್ರ ಯುದ್ಧದ ಹದಿನಾಲ್ಕನೆಯ ದಿನ. ದ್ರೋಣಾಚಾರ್ಯರು ಕೌರವ ಸೈನ್ಯದ ಅಧಿಪತಿ, ಹಿಂದಿನ ದಿನ ಅಭಿಮನ್ಯುವಿನ ವಧೆಯಾಗಿತ್ತು. ಅರ್ಜುನನು ಮಹಾಕೊಪದಿಂದ ಜಯದ್ರಥನ ವಧೆಮಾಡುವ ಪ್ರತಿಜ್ಞೆ ಮಾಡಿ ಅವನನ್ನು ಅರಸುತ್ತಾ ಚಲಿಸುತ್ತಿದ್ದನು. ಶ್ರೀಕೃಷನು ಪಾರ್ಥಸಾರಥಿಯು. ಅರ್ಜುನನನ್ನು ತಡೆಯಲು ಬಂದ ಅನೇಕ ವೀರರಲ್ಲಿ ಶ್ರುತಾಯುಧನ ಸರದಿ ಬಂತು. ಶ್ರುತಾಯುಧನು ಒಳ್ಳೆಯ ಬಿಲ್ಲುಗಾರನೂ ಆಗಿದ್ದನು. ಅರ್ಜುನನು ಅವನೊಡನೆ ತೀಕ್ಷ್ಣವಾಗಿ ಹೋರಾಡಿ ಶ್ರುತಾಯುಧನ ಬಿಲ್ಲನ್ನು ತುಂಡಿರಿಸಿದನು. ಶ್ರುತಾಯುಧನಿಗೆ ಬಹಳ ಕೋಪ ಬಂದಿತು. 

ಇದೇ ಸಮಯಕ್ಕೆ ಸರಿಯಾಗಿ ಶ್ರೀಕೃಷ್ಣನು ಅರ್ಜುನನನ್ನು ಬೇಕೆಂತಲೇ ಇನ್ನಷ್ಟು ಹುರಿದುಂಬಿಸಿದನು. ಮೊದಲೇ ಕೋಪಗೊಂಡಿದ್ದ ಶ್ರುತಾಯುಧನು ಇನ್ನಷ್ಟು ಕೆರಳಿದನು. ಅವನ ಕೋಪ ಅರ್ಜುನನಿಂದ ಶ್ರೀಕೃಷ್ಣನ ಕಡೆ ಹೊರಳಿತು. ಹಿಂದೆ-ಮುಂದೆ ನೋಡದೆ ಶ್ರೀಕೃಷ್ಣನನ್ನು ಕೊಲ್ಲುವ ಸಲುವಾಗಿ ತನ್ನ ಮಾಯಾ ಗದೆಯನ್ನು ತೆಗೆದು ಶ್ರೀಕೃಷ್ಣನಿಗೆ ಗುರಿಯಿಟ್ಟು ಬಲವಾಗಿ ಪ್ರಯೋಗಿಸಿದನು. ಶ್ರೀಕೃಷ್ಣನೋ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರವನ್ನೇ ಹಿಡಿಯದ ಪ್ರತಿಜ್ಞೆ ಮಾಡಿದವನು. ನಿರಾಯುಧನು. ನಿರಾಯುಧನ ಮೇಲೆ ಪ್ರಯೋಗವಾದದ್ದರಿಂದ ಗದೆ ಶ್ರೀಕೃಷ್ಣ ಹತ್ತಿರ ಹೋಗಿ, ಏನೂ ಮಾಡಲಾಗದೆ, ಹಿಂದೆ ಬಂದು ಶ್ರುತಾಯುಧನಿಗೇ ಬಡಿಯಿತು. ಶ್ರುತಾಯುಧನು ತನ್ನ ಆಯುಧದಿಂದ ತಾನೇ ಸತ್ತನು. 

*****

ಭಕ್ತ ಕನಕದಾಸರು ತಮ್ಮ "ಹರಿಭಕ್ತಿಸಾರ" ಕೃತಿಯ 35ನೆಯ ಪದ್ಯದಲ್ಲಿ ಈ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ: 

ಬವರದಲಿ ಖತಿಗೊಂದು ಗದೆಯೊಳು
ಕವಿದು ನಿನ್ನ ಶ್ರುತಾಯುಧನು ಹೊ 
ಕ್ಕವಗಢಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ 
ವಿವರವೇನೋ ತಿಳಿಯೆ  ಈ 
ಮಾಯವನು ನೀನೇ ಬಲ್ಲೆ  ನಿನ್ನಾ 
ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ 

"ನಿನ್ನಾಯವನು ನೀನೇ ಬಲ್ಲೆ" ಎನ್ನುವಲ್ಲಿ "ಆಯ" ಎಂದರೆ ಪರಮಾತ್ಮನ ಗುಣ ವಿಸ್ತಾರಗಳು. (ಗಣಿತದಲ್ಲಿ "ಆಯ" ಅಂದರೆ ಉದ್ದxಅಗಲ, ಅಂದರೆ ಕ್ಷೇತ್ರಫಲ (ಏರಿಯಾ) ತಾನೇ?). ಪರಮಾತ್ಮನ ಗುಣ-ವಿಸ್ತಾರಗಳನ್ನು ಪೂರ್ತಿ ತಿಳಿದವನು ಅವನೊಬ್ಬನೇ. ಮತ್ತೆ ಇನ್ನೊಬ್ಬರು ಇಲ್ಲ ಎಂದು ಅರ್ಥ. 

ಎಲ್ಲವನ್ನೂ ಹೇಳಿದ ಮೇಲೆ "ವಿವರವೇನೋ ತಿಳಿಯೆ" ಎಂದು ಏಕೆ ಹೇಳಿದರು? ಅನೇಕ ವೇಳೆ ನಮಗಿಂತ ದೊಡ್ಡವರು ಅವರಿಗಿಂತ ದೊಡ್ಡವರ ಬಗ್ಗೆ ಹೇಳುವಾಗ "ಏನೋ ಅಪ್ಪ. ನನಗೆ ಗೊತ್ತಿರುವುದು ಇಷ್ಟು. ಇನ್ನೂ ಏನಿದೆಯೋ, ಅವರಿಗೇ ಗೊತ್ತು!" ಎಂದು ಹೇಳುವ ರೀತಿ! 

*****

ಭಗವಾನ್ ವೇದವ್ಯಾಸರ ಮಹಾಭಾರತದ ಹರವು ಎಷ್ಟು ವಿಸ್ತಾರ! ಎಷ್ಟೊಂದು ಪಾತ್ರಗಳು! ಎಲ್ಲಿಂದ ಎಲ್ಲಿಗೆ! ಯಾವ ಕಾಲದಿಂದ ಯಾವ ಕಾಲಕ್ಕೆ! ಎಲ್ಲೋ, ಎಂದೋ, ಹೇಗೋ ಹುಟ್ಟಿದವರೆಲ್ಲ ಕುರುಕ್ಷೇತ್ರದಲ್ಲಿ ಸೇರಿದರು. ಇಂದಿನ ಕೆಲವು ಕಾದಂಬರಿಗಳನ್ನು ಓದುವಾಗ ಅವುಗಳ ಪಾತ್ರ-ವಿನ್ಯಾಸಗಳನ್ನು ಕಂಡು ವಿಸ್ಮಯ ಪಡುವ ನಾವು ಮಹಾಭಾರತದ ಬಗ್ಗೆ ಏನು ಹೇಳುವುದು?

Monday, April 30, 2012

Learning and Teaching

How does a student learn his lessons? When is his learning complete? When can it be said that he has acquired full knowledge? Who is a good teacher? These questions beg for an answer at times. Old world wisdom and modern scientific studies throw up a lot of common issues and also conflicting view points.

This sloka from Mahabharata's Udyoga Parva summarises learning and its components:

आचार्यात् पादमादत्ते पादं शिष्यः स्वमेधया | कालेनपादमादत्ते पादं सब्र्म्हचारिभिः ||

Aachaaryat padamaadatte, paadam shishyah swamedhaya. Kaalena paadamaadatte paadam sabramhachaaribhihi.

"Learning is divided into four parts. A student derives a quarter of the total knowledge from his "Guru" or teacher. He acquires another quarter of knowledge by his own intelligence and self study. When he studies with his other classmates and friends, he learns and gets another quarter of the desired knowledge. The fourth  part of the knowledge is taught to him by time in due course!"

The above saying is very consistent with our own experiences in life. A teacher can at best be a guide to a student and he can never take the total responsibility of imparting the full knowledge to the student. Without the co-operation and whole hearted participation of the student, all his efforts are a waste. Similarly, all efforts at own study without a "Guru" or a teacher could also be incomplete. There may be very exceptional self-taught scholars and some may claim to have learnt everything without the support of any teacher. Even they should be indebted to some source or sources from which they derived the knowledge they posses. Full benefit of the learning process is available only when the efforts of the teacher and student complement each other. There is a need for a combined physical, mental and emotional involvement in the process of teaching and learning. The need is for mutual respect and affection rather than fear and tool of punishment. The tool of punishment, when used injudiciously, may even become counter-productive and develop a sense of revolt in the student. It also does not mean that there is no need for discipline.  All efforts at teaching and learning are futile unless there is a certain degree of discipline in both teaching and learning efforts. True success is achieved when a fine and practical blend of these ingredients of affection, trust, effort and discipline is reached in adequate proportions.


The teacher can at best show the direction in which the student should or could go. The actual path of journey should be traveled by the student himself and it cannot be shifted to someone else. Further efforts to learn, after the initial teaching or introduction to the subject is made by the teacher, are to be by student's own efforts at assimilating the part or whole of the subject by contemplating and concentrating on the issues identified for learning. Importance of self-study can never be over emphasised and forms the corner stone of learning efforts. As the student rehearses the subject or topic in his own mind, more and more vistas open and the deeper and hidden meanings unfold to his advantage.  He would thus now be the owner of one half of the full knowledge.

The value and advantage of combined study with the fellow students and friends has been
highlighted in the third part of learning. While self-study is all important in its own place, exchange of perceptions and appreciation of various aspects of learning jointly with other students does have its own contribution to the process of learning. This type of atmosphere gives a sense of belonging to the student and he/she will also reap the benefits of the insight gained by the other students while learning from the teacher as well as during their own self-study.  Some parents quarantine young children in the guise of studies and preventing them from bad influence of other students. This mistaken notion of preventing them from unwanted interference also denies them the pleasure and benefits of exchanging thought and finer points of learning. While it is necessary to keep an eye on the activities of young learners and save them from bad impacts, providing for a healthy and complementary interaction with classmates and friends is equally important. This is a per-requisite of completing the learning process.

The final quadrant of learning is indeed a long drawn process and would never end! Mere bookish knowledge is no real knowledge and may even land the student into trouble unless it is coupled with worldly wisdom. Life teaches many lessons and often the hard way. Anyone who has acquired the other three quadrants of learning to a reasonably acceptable level and willing to learn the lessons from life to complete the learning process will succeed in life. He will also earn the capacity and eligibility to teach others and can display the potential to be a good teacher. There is no end to the lessons of life and the learning in the fourth quadrant will continue till the person's last journey. In that sense the process of learning will never be complete and the best anyone can achieve is near perfection and never perfection.

Maharshi Veda Vyasa has condensed all this wisdom in this small sloka. Not for nothing they say, "Vyasoochistam Jagat Sarvam". There is nothing that is not discussed or mentioned in Mahabharata and anything we see or learn is the leftover of Veda Vyasa!