Saturday, May 31, 2025

From BTM To BSNL


First of June is an important date in India. It is the day on which monsoon is expected to break in and bring the most important rains for the agriculture sector. The South-West monsoon rains spur the farming activity and herald the advent of Kharif season. It decides the quantum of agriculture production for the year. It is also important for other reasons as well; providing drinking water for people and animals, augmenting ground water level, bringing relief from the sweltering summer heat and so on. In vast rain dependant dry cropping areas, the level of monsoon rains decides yield on certain crops. 

Present generation has not seen the real struggle in life due to famines. Failure of monsoon for two or three years successively was a common feature some six or seven decades ago. (Please click here to read a blog post titled "Knock on the Door" about famines). Improvements in water management by construction of dams across all rivers and thereby increasing storage capacities in the dams has somewhat reduced the full force of a monsoon failure. Even then, there would be serious concerns of water shortage if monsoon rains fail. 

What is the quantum of food grains produced in the country? For the year 2024-25, total food grain production in the Khariff season was about 165 million metric tonnes. Compare this with total annual production of food grains in the country at 51 million metric tonnes in 1950. Total food grain production since independence has increased five-fold, crossing 300 million tonnes last year. This is only of food grains and excluding other food components production. 

Such tremendous increase in food production has made India self-sufficient in food as well as a food grains exporting country. Since the advent of Covid, government has been providing free food grains to 80 crore people in the country! Meteorological department predicts the breakout of monsoon and the extent of rain coverage every year. There are instances of delay in onset of monsoon in some years. But this year (2025) it has arrived more than a week in advance. The meteorological forecast is for 106 percent rains, meaning it will be meeting full expectations. There are usually some showers in some areas of the country, especially the southern states, some two weeks before June, known as pre-monsoon showers. This years pre-monsoon showers have been quite strong. In fact, the gap between pre-monsoon showers and regular monsoon rains appears to have vanished. 

*****  
Monsoon rains bring cheer to the farming sector, but often a cause of worry for people inhabited in low lying areas. Man's greed has resulted in gross urbanisation and skyrocketing of real estate prices. Hundreds of lakes have been encroached upon and high rise buildings have come up there. This is even more striking in cities like Bangalore. Bangalore City is situate at about 3,000 feet above sea level and comprises valleys and uneven landscape. It was housing more than 1,000 lakes, big and small. Most of them have since vanished and made way for new residential areas with high rise flats culture. 

Like in earlier years, this years rains have also brought in its share of woes to the residents of low lying areas in Bangalore. Not just cases of water gushing into houses and flats, but also flooding of roads and water-logging in important traffic junctions. There are many such pain points all over the city. Silk Board junction in BTM layout is much in discussion. Of course, there are even more dangerous spots in the city. People not able to swim should not venture to go out. Cars are floating and valuable furniture and gadgets are all soaked in water. Drinking water is difficult to procure. There is a big danger of breakout of epidemics. Added to the worries are reports of Covid resurfacing. Recent reports suggest that the count has crossed 3,000 though all concerned authorities are reassuring that the situation is not alarming.

Flooding is not just on roads and houses. WhatsApp groups are flooded with photos and cartoons. The real situation photos like people wading through waist-deep rain water, cars floating, people being rescued on boats are galore. There are memes of entrepreneurs coming up with services of strong people carrying other people to cross slush and floods, on their back for a fee. There are headlines of "A river for every house", "Water Bhagya Project" and "Own your stream scheme" and so on.

The real tragedy is of the fact that the politicians responsible for encroachment of lakes for housing projects are now the ones tasked with rescuing people from the floating city. Endless blame game is going on. Sadly, everything will be forgotten as soon as the rains subside and it would be life as usual. The entire drama will be reenacted next year. 

*****

Amidst all these drowning news items and memes, one news of a government entity, that was considered drowned for ever, trying to float has got drowned indeed. BSNL (Bharat Sanchar Nigam Limited) was considered as drowned for ever. Questions were asked about as to how long the government will continue to pour taxpayers  money into this white elephant. There were serious complaints that the successive governments neglected providing for capital expenditure to BSNL to favour private operators. 

The recent publication of audited financial results of BSNL for the year 2024-25 has shown back-to-back quarterly profits during Q3 and Q4 of the financial year. A profit of Rs. 261 crores during Q3 has moved up to Rs.280 crores during Q4. Loss during the year 2024-25 stood at Rs. 2,247 crores, down from Rs. 5,370 crores during the previous year. This 58% reduction in loss is no mean achievement considering that the finances of BSNL were in total mess. Addition of capital assets in the form of equipments and towers was to a remarkable extent of Rs. 26,022 crores. 

This position is equivalent to a drowning man showing some signs of fighting back, though actual fight for full recovery is quite far far away. Even with back-to-back quarterly profits, annual loss was at a staggering level. However, there are indications that the problem is being attacked. One can only hope that this fight continues and BSNL will continue its efforts to float back to safety. 

*****

BTM layout and its cousins are drowning. BSNL makes a struggle to keep afloat. May be a reflection of the times we live in! 

Tuesday, May 27, 2025

ಪಿತ್ರಾರ್ಜಿತ ಆಸ್ತಿ ತಗಾದೆಗಳು


ಅಂದು ತಿಮ್ಮಪ್ಪಯ್ಯನವರ ಹೆಂಡತಿಯ ಎರಡನೇ ವರುಷದ ಕಾಲ ಶ್ರಾದ್ಧ. (ಕಾಲಶ್ರಾದ್ಧ ಅಂದರೆ ಪ್ರತಿ ವರುಷ ಮಾಡುವ ಒಂದು ದಿನದ ಶ್ರಾದ್ಧ). ಮೊದಲನೇ ಮಹಾಯುದ್ಧದ ಕಾಲದಲ್ಲಿ ಹುಟ್ಟಿದ ತಿಮ್ಮಪ್ಪಯ್ಯನವರ ಮದುವೆ ಸಂಬಂಧಿಯೊಬ್ಬರ ಮಗಳು ಕಮಲಮ್ಮನೊಡನೆ ಎರಡನೇ ಮಹಾಯುದ್ಧದ ಕಾಲದಲ್ಲಿ ಆಯಿತು. ಎರಡು ಮಹಾಯುದ್ಧಗಳ ಸಂಬಂಧ ಹುಟ್ಟು ಮತ್ತು ಮದುವೆಗಳಿಗೆ ಇದ್ದರೂ, ಐವತ್ತಮೂರು ವರುಷಗಳ ದಾಂಪತ್ಯ ಹೆಚ್ಚಿನ ಕದನಗಳಿಲ್ಲದೇ ಅನ್ಯೋನ್ಯವಾಗಿಯೇ ಕಳೆದಿತ್ತು. ಮೊದಲ ಮಗು ಗಂಡು. ನಂತರ ಎರಡು ಹೆಣ್ಣು. ಆಮೇಲೆ ಮತ್ತೆರಡು ಗಂಡು. ಈಗ ಎಲ್ಲರೂ ದೊಡ್ಡವರಾಗಿ, ವಿವಾಹವಾಗಿ ಅವರವರ ಪಾಡಿಗೆ ಜೀವನ ನಡೆಸಿಕೊಂಡಿದ್ದಾರೆ. ಎಷ್ಟಿದ್ದರೂ ತಿಮ್ಮಪ್ಪಯ್ಯ ಈಗ ಒಂಟಿ. ಇಂದು ಕಮಲಮ್ಮನವರ ಶ್ರಾದ್ಧವಾದದ್ದರಿಂದ ಕುಟುಂಬದ ಎಲ್ಲರೂ ಒಂದೆಡೆ ಸೇರುವ ಅವಕಾಶ.

ತುಮಕೂರಿನಿಂದ ಹನ್ನೆರಡು ಮೈಲುಗಳ ದೂರದ ಪುಟ್ಟ ಗ್ರಾಮದವರು ತಿಮ್ಮಪ್ಪಯ್ಯ. ಎಲ್ಲರಿಗೂ ಅನುಕೂಲವಾಗಲೆಂದು ಬೆಂಗಳೂರಿನ ತಮ್ಮ ಬಹುಕಾಲದ ಸ್ನೇಹಿತರೊಬ್ಬರ ಮನೆಯಲ್ಲಿ ಶ್ರಾದ್ಧದ ವ್ಯವಸ್ಥೆ ಮಾಡಿದ್ದರು. ಸ್ನೇಹಿತರು ಈ ಕೆಲಸ ನಡೆಸಲು ತಮ್ಮ ಮನೆಯ ಮಹಡಿಯ ಭಾಗವನ್ನೇ ಮೀಸಲಿಟ್ಟಿದ್ದರು. ಉಪಾಧ್ಯಾಯರಾಗಿ ನಿವೃತ್ತರಾದ ಮೇಲೆ ಅವರಿಗೆ ಇದು ಸಂಪಾದನೆಯ ದಾರಿಯೂ ಆಗಿತ್ತು. ಶ್ರಾದ್ಧಗಳನ್ನು ಮಾಡುವವರಿಗೆ ಇದು ಬಹಳ ಸಲೀಸು. ಎಲ್ಲಾ ಜವಾಬ್ದಾರಿ ರಾಮಾಜೋಯಿಸರದು. ಫೋನ್ ಮಾಡಿ ದಿನ ಹೇಳಿ ಗೊತ್ತುಮಾಡಿದ್ದರೆ ಆಯಿತು. ಎಲ್ಲಾ ಸಿದ್ಧ ಮಾಡಿಟ್ಟು ಕೆಲಸ ನಡೆಸಿಕೊಡುತ್ತಾರೆ. 

ತಿಮ್ಮಪ್ಪಯ್ಯನವರ ಎರಡನೇ ಮಗ ಮತ್ತು ಮೂರನೇ ಮಗ ಮನೆಯವರ ಜೊತೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಂದಿದ್ದರು. ದೊಡ್ಡವನು ಇನ್ನೂ ಬಂದಿರಲಿಲ್ಲ. ಒಂದು ಕಾಲು ಗಂಟೆ ಕಾದು ನೋಡಿ ಇಬ್ಬರೂ ಕೆಲಸ ಪ್ರಾರಂಭಿಸಿದರು. ಅದಾದ ಮೇಲೆ ಒಂದು ಘಂಟೆಯ ನಂತರ ದೊಡ್ಡವನು ಬಂದ. ತಡವಾಗಿ ಬಂದಿದ್ದೇನೆ ಎಂದು ಅವನಿಗೂ ಗೊತ್ತು. ಕೆಲಸದ ಮಧ್ಯೆ ಬಂದಿದ್ದರಿಂದ ಮಾಡಿಸುತ್ತಿದ್ದ ರಾಮಾಜೋಯಿಸರಿಗೆ ಕೋಪ ಬಂತು. ಸ್ನೇಹಿತರ ಮಕ್ಕಳನ್ನು ಚಿಕ್ಕಂದಿನಿಂದ ನೋಡಿದ್ದ ಸಲಿಗೆ ಅವರಿಗೆ. 

"ಇದೇನು ಬರುವ ಸಮಯವೇ? ನಿನಗಾಗಿ ಎಷ್ಟು ಹೊತ್ತು ಕಾಯಬೇಕು?" ಎಂದು ಥಟ್ಟನೆ ಅಂದುಬಿಟ್ಟರು. 

ಬಂದವನಿಗೆ ಮುಖ ಪೆಚ್ಚಾಯಿತು. ಕುಳಿತಿದ್ದವರಲ್ಲಿ ಕೆಲವರು ಘೊಳ್ಳೆಂದು ನಕ್ಕರು. ಇನ್ನಷ್ಟು ಅವಮಾನವಾಯಿತು. ಏನೂ ಹೇಳಲಾರದೇ ಸುಮ್ಮನೆ ನಿಂತ. 

"ಆಯಿತು ಬಿಡು. ಬೇಗ ಸ್ನಾನ ಮಾಡಿ ಬಂದು ಸೇರಿಕೋ, ಪರವಾಗಿಲ್ಲ" ಎಂದರು ತಿಮ್ಮಪ್ಪಯ್ಯ. 

ತಂದೆಯ ಮಾತಿನಿಂದ ಸ್ವಲ್ಪ ಸಮಾಧಾನವಾಯಿತು. ಬೇಗ ಬಂದು ತಮ್ಮಂದಿರ ಜೊತೆ ಸೇರಿಕೊಂಡ. ಮುಂದಿನ ಕೆಲಸ ನಡೆಯಿತು. ಎಲ್ಲರ ಊಟಗಳಾದ ಮೇಲೆ ಅವರವರ ದಾರಿ ಹಿಡಿದರು. 

*****

ಈಚಿನ ದಿನಗಳಲ್ಲಿ ತಿಮ್ಮಪ್ಪಯ್ಯನವರು ಹೆಚ್ಚು ಕಾಲ ಎರಡನೇ ಮಗನ ಕುಟುಂಬದ ಜೊತೆ ಬೆಂಗಳೂರಿನಲ್ಲಿ ಇರುತ್ತಿದ್ದರು. ಮಧ್ಯೆ ಮಧ್ಯೆ ಹಳ್ಳಿಗೆ ಹೋಗಿ-ಬಂದು ಮಾಡುತ್ತಿದ್ದರು. ಇಂದು ಎರಡನೆಯ ಮಗನಿಗೆ ತಾವು ಸ್ವಲ್ಪ ತಡವಾಗಿ ಬರುವುದಾಗಿ ಹೇಳಿ ಜೋಯಿಸರ ಮನೆಯಲ್ಲಿಯೇ ಉಳಿದರು. ಊಟದ ನಂತರ ವಿಶ್ರಾಂತಿಯಾಯಿತು. ಕಾಫಿ ಬಂದಿತು. ಸ್ನೇಹಿತರಿಬ್ಬರೂ ಕಾಫಿ ಲೋಟಗಳನ್ನು ಹಿಡಿದು ಮಾತಾಡತೊಡಗಿದರು. 

"ಜೋಯಿಸರೇ, ನಿಮಗೆ ನಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಕೆಲವು ವಿಷಯಗಳನ್ನು ಇವತ್ತು ನಾನು ಇಂದು ನಿಮಗೆ ಹೇಳಬೇಕು. ಅದಕ್ಕೇ ಹಿಂದೆ ಉಳಿದುಕೊಂಡೆ"

"ಹೇಳಿ ತಿಮ್ಮಪ್ಪಯ್ಯನವರೇ. ಏನು ವಿಷಯ?"
"ನಮ್ಮ ದೊಡ್ಡವನು ತಡವಾಗಿ ಬಂದ ಎಂದು ನೀವು ಕೋಪಿಸಿಕೊಂಡಿರಿ. ಅದು ಸಹಜವೇ ಹೌದು. ಆದರೆ ಅದು ಅವನ ತಪ್ಪಲ್ಲ"
"ಹೇಗೆ? ನನಗೆ ಅರ್ಥವಾಗಲಿಲ್ಲ"
"ನೋಡಿ ಜೋಯಿಸರೇ, ನಿಮಗೆ ಗೊತ್ತಿರುವಂತೆ ಐದು ಬೆರಳೂ ಒಂದೇ ಸಮವಿರುವುದಿಲ್ಲ"
"ಅದು ಸರಿ ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?"

"ದೊಡ್ಡವನು ಹುಟ್ಟಿದಾಗ ನಾವು ಹಳ್ಳಿಯ ಹಿರೀಕರು ಕಟ್ಟಿಸಿದ್ದ ಮನೆಯಲ್ಲಿದ್ದವರು. ಆಗಿನ್ನೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಓದು-ವಿದ್ಯೆಗೆ ಅನುಕೂಲಗಳಿರಲಿಲ್ಲ. ಮೂರು ಮೈಲು ದೂರದ ದೊಡ್ಡ ಹಳ್ಳಿಯಲ್ಲಿ ಪ್ರೈಮರಿ ಶಾಲೆ. ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ತುಮಕೂರಿಗೆ ಹೋಗಬೇಕಿತ್ತು. ಮಳೆ-ಗಾಳಿಯಲ್ಲಿ ನಡೆದೇ ಹೋಗಬೇಕಿತ್ತು. ಹಾಗೂ-ಹೀಗೂ ಹೈಸ್ಕೂಲ್ ತನಕ ಓದಿದ. ನಂತರ ಓದು ನಿಲ್ಲಿಸಿ ನನ್ನ ಜೊತೆ ಹೊಲ-ಗದ್ದೆ ನೋಡಿಕೊಂಡು ರೈತನಾದ. ಈಗಲೂ ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ನರಿ. ಗೊತ್ತಾಯಿತು"
"ಎರಡನೆಯವನು ಆಮೇಲೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ನಂತರ ಬಂದ ಸಂತಾನ. ಅವನು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. ಸ್ವತಂತ್ರ ಭಾರತ. ಹತ್ತಿರದ ಹಳ್ಳಿಯಲ್ಲಿಯೇ ಮಾಧ್ಯಮಿಕ ಶಾಲೆಯೂ ಆಯಿತು. ನನಗೂ ಸ್ವಲ್ಪ ಆರ್ಥಿಕವಾಗಿ ಶಕ್ತಿ ಕೂಡಿಕೊಂಡಿತ್ತು. ಹಿರಿಯರು ಬಿಟ್ಟು ಹೋಗಿದ್ದ ಜಮೀನಿನ ಜೊತೆ ಇನ್ನೂ ಸ್ವಲ್ಪ ಕೊಂಡುಕೊಂಡೆ. ಎರಡನೆಯವನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿ ಹಿಡಿದ. ಅವನು ಬೆಂಗಳೂರಿನಲ್ಲಿ ಎಂ.ಏ. ಓದುತ್ತಿದ್ದಾಗ ಇಲ್ಲಿ ಒಂದು ಸಣ್ಣ ಮನೆ ಕಟ್ಟಿದೆ. ಈಗ ಅವನ ಕುಟುಂಬ ಅದನ್ನೇ ದೊಡ್ಡದು ಮಾಡಿಕೊಂಡು ಇಲ್ಲೇ ವಾಸವಾಗಿದ್ದಾರೆ. ನಾನೂ ಹೆಚ್ಚಿನ ಸಮಯ ಇಲ್ಲೇ ಕಳೆಯುತ್ತಿದ್ದೇನೆ. ಡಾಕ್ಟರು-ಆಸ್ಪತ್ರೆಗಳಿಗೆ ಹತ್ತಿರ "
"ಅದು ಸರಿಯೇ"

"ಮೂರನೆಯವನು ವಿದ್ಯಾಭ್ಯಾಸಕ್ಕೆ ಬರುವ ವೇಳೆಗೆ ಬೆಂಗಳೂರಿನ ಮನೆಯಿತ್ತು. ಓದಿನ ಖರ್ಚು ಕೊಡಲು ನನಗೂ ಶಕ್ತಿ ಬಂದಿತ್ತು. ಎಂ.ಬಿ.ಬಿ.ಎಸ. ಓಡಿಸಿದೆ. ಅವನ ಜೊತೆಯಲ್ಲಿ ಓದುತ್ತಿದ್ದ ಹುಡುಗಿಯ ತಂದೆ ಮದುವೆಯ ಪ್ರಸ್ತಾಪ ಇಟ್ಟರು. ಅವರು ಮುಂಬಯಿನವರು. ಮದುವೆಯಾಗಿ ಮುಂಬಯಿಗೆ ಹೋದ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವರೇ ನೋಡಿಕೊಂಡರು. ಈಗ ಅವನು ಮುಂಬಯಿಯಲ್ಲಿ ಹೆಸರಾದ ಡಾಕ್ಟರು. ಗಂಡ-ಹೆಂಡತಿ ಪ್ರಾಕ್ಟಿಸು ಚೆನ್ನಾಗಿಯೇ ನಡೆಯುತ್ತಿದೆ.  ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ಈಗ ಎಲ್ಲವೂ  ಅರ್ಥವಾಗುತ್ತಿದೆ" 
"ಎರಡನೆಯವನು ಇಲ್ಲಿಂದಲೇ ಇಂದಿನ ಕೆಲಸಕ್ಕೆ ಬಂದ. ಕಡೆಯವನು ನಿನ್ನೆಯೇ ಮುಂಬಯಿಯಿಂದ ವಿಮಾನದಲ್ಲಿ ಬಂದ. ಹೊತ್ತಿಗೆ ಸರಿಯಾಗಿ ಬಂದರು. ಮೊದಲನೆಯವನು ಹಳ್ಳಿಯಿಂದ ಬರಬೇಕು. ವ್ಯವಸಾಯದ ಕೆಲಸ. ಬಿಟ್ಟು ಬಂದರೆ ಆಳುಗಳು ಕೆಲಸ ಕೆಡಿಸುತ್ತಾರೆ. ಬೆಳಿಗ್ಗೆ ಬೇಗ ಹೊರಟು ತುಮಕೂರಿಗೆ ಬಂದು ಮತ್ತೊಂದು ಬಸ್ಸು ಹಿಡಿದು ಇಲ್ಲಿ ಬರಬೇಕು. ಹಳ್ಳಿಯಲ್ಲಿ ಬೆಳಗಿನ ಬಸ್ಸು ಒಂದೊಂದು ದಿನ ಬರುವುದೇಇಲ್ಲ. ಹೀಗಾಗಿ ತಡವಾಗಿದೆ. ಎಲ್ಲರಿಗಿಂತ ಮೊದಲು ಹೊರಟಿರಬೇಕು ಅವನು. ಇಲ್ಲಿ ಬರುವುದರಲ್ಲಿ ತಡವಾಗಿದೆ"
"ನಾನು ರೇಗಿದ್ದು ತಪ್ಪಾಗಿರಬೇಕು. ಈ ಸೂಕ್ಷ್ಮಗಳು ನನಗೆ ಗೊತ್ತಿಲ್ಲ" 

"ಈಗ ನನ್ನ ಕಾಲವೂ ಮುಗಿಯುವಂತೆ ಕಾಣುತ್ತದೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಕಮಲ ಹೋದ ಮೇಲೆ ಹೆಚ್ಚು ದಿನ ಬದುಕುವ ಉತ್ಸಾಹವೂ ಇಲ್ಲ. ಹಳ್ಳಿಯ ಹೊಲ-ಮನೆ ಹಿರಿಯ ಮಗನಿಗೆ ಕೊಡುತ್ತೇನೆ. ಬೆಂಗಳೂರಿನ ಮನೆ ಎರಡನೇಯವನಿಗೆ. ಕಮಲಳ ಒಡವೆಗಳು, ಇರುವ ಸ್ವಲ್ಪ ನಗದು ಮತ್ತು ಬ್ಯಾಂಕಿನ ಹಣ ಕಡೆಯವನಿಗೆ. ಹೆಣ್ಣು ಮಕ್ಕಳಿಗೆ ಕಾಲಕಾಲಕ್ಕೆ ಚೆನ್ನಾಗಿಯೇ ಕೊಟ್ಟಿದ್ದೇನೆ. ಅವರುಗಳೂ ಅನುಕೂಲವಾಗಿದ್ದಾರೆ. ಈ ರೀತಿ ಭಾಗ ಮಾಡುವುದು ಅವರೆಲ್ಲರಿಗೂ ಒಳ್ಳೆಯದು. ಇವರಿಬ್ಬರೂ ಹಳ್ಳಿಗೆ ಹೋಗುವವರಲ್ಲ. ಅವರಮಟ್ಟಿಗೆ ಚೆನ್ನಾಗಿಯೇ ಇದ್ದಾರೆ. ಹೀಗೆಂದು ಪತ್ರ ಬರೆದಿಟ್ಟಿದ್ದೇನೆ. ನಾನು ಮುಂಚೆ ಹೋದರೆ ನೀವು ಮುಂದೆ ನಿಂತು ಇದನ್ನು ವಿತರಣೆ ಮಾಡಿ"

ಇಷ್ಟು ಹೇಳುವ ಹೊತ್ತಿಗೆ ತಿಮ್ಮಪಯ್ಯನವರ ಕಣ್ಣು ಮಂಜಾಯಿತು. ಜೋಯಿಸರ ಕೈ ಹಿಡಿದುಕೊಂಡರು. 

ಜೋಯಿಸರು, "ಛೇ ಛೇ. ಹಾಗೆ ಹೇಳಬೇಡಿ. ದೇವರು ದೊಡ್ಡವನು. ಯಾವುದಕ್ಕೂ ಒಬ್ಬ ಲಾಯರು ಕಂಡು ವಿಲ್ ಮಾಡುವುದು ಒಳ್ಳೆಯದಲ್ಲವೇ?" ಅಂದರು. 

"ನಾನು ಮತ್ತೆ ಮುಂದಿನ ವಾರ ಬರುತ್ತೇನೆ. ಹಾಗೆಯೇ ಮಾಡೋಣ. ಈಗಂತೂ ಪತ್ರ ಬರೆದಿಟ್ಟಿದ್ದೇನೆ. ಮಕ್ಕಳು ಒಳ್ಳೆಯವರು. ಏನೂ ಸಮಸ್ಯೆ ಆಗಲಾರದು"

ತಿಮ್ಮಪ್ಪಯ್ಯ ಎರಡನೇ ಮಗನ ಮನೆಗೆ ಹೊರಟರು. 

ತಿಮ್ಮಪ್ಪಯ್ಯ ಮತ್ತೆ ರಾಮಾಜೋಯಿಸರ ಮನೆಗೆ ಬರಲಿಲ್ಲ. 

ಅವರ ಕಾರ್ಯಗಳು ಮುಗಿದಮೇಲೆ ಅವರು ಬರೆದಿಟ್ಟಿದ್ದ ಪತ್ರದಂತೆ ಆಸ್ತಿ ಹಂಚಿಕೆಯಾಗಲಿಲ್ಲ. ಮಕ್ಕಳು ಒಪ್ಪಿದರೂ ಅವರ ಮನೆಯವರು ಒಪ್ಪುವಂತಿರಲಿಲ್ಲ. ಎಲ್ಲ ಮಕ್ಕಳೂ ಸಮಾನರು. ಎಲ್ಲವೂ ಸರಿ ಭಾಗ ಆಗಬೇಕೆಂದು ಗುದ್ದಾಟ ಪ್ರಾರಂಭವಾಗಿ ವ್ಯಾಜ್ಯ ಕೋರ್ಟಿನ ಮೆಟ್ಟಲೇರಿತು. 

*****

ಕೆಲವು ತಿಂಗಳ ಹಿಂದೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ (ಹೈಕೋರ್ಟ್) ಒಂದು ಅಣ್ಣ-ತಮ್ಮಂದಿರ ಆಸ್ತಿ ವಿವಾದದ ಮೊಕದ್ದಮೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ಕೇಸು ವಿಚಾರಣೆಗೆ ನಡೆಯಿತು. (ಆಗ ಅವರು ಹೇಳಿದ ವಿಷಯಗಳ ತುಣುಕುಗಳ ಮೇಲೆ ಮೇಲಿನ ವಿವರಣೆ ಹೆಣೆದಿದೆ). "ಆಸ್ತಿ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಬೇಕು. ಕಾನೂನಿನ ಪರಿಹಾರ ಕೇಳುವ ಮೊದಲು ತಂದೆ-ತಾಯಿಯರು ಮಾಡಿರುವ ವ್ಯವಸ್ಥೆ ಬಗ್ಗೆ ಸ್ವಲ್ಪ ಯೋಚಿಸುವುದು ಒಳ್ಳೆಯದು" ಎಂದು ಅವರು ಬುದ್ಧಿ ಮಾತು ಹೇಳಿದರು. ಮುಂದಿನ ವಿಚಾರಣೆ ಏನಾಯಿತೋ ಗೊತ್ತಿಲ್ಲ. 

ಬೇರೆ ಕುಟುಂಬಗಳಲ್ಲಿನ ಅನೇಕ ಸೂಕ್ಷ್ಮಗಳು ನಮಗೆ ಗೊತ್ತಿರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ, ಒಂದೇ ಅಳತೆಗೋಲಿನಿಂದ ಲೆಕ್ಕ ಹಾಕುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾವುಗಳು ಯಾವುದೇ ತೀರ್ಮಾನಗಳಿಗೆ ಬಂದು ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕಲ್ಲವೇ?  

Sunday, May 25, 2025

Hitting The "Pause" Button

We indulge in many activities in our daily lives. Some are just routine activities, some are downright unnecessary and could be dispensed with altogether, while some others are really very important indeed. At least considered important at that time, though we may laugh at them ourselves sometime later. Some of these activities are the ones that should be done at a stretch and completed once a beginning has been made. Or else, we may have to do them all over again from the beginning. Then there are some other activities that can be stopped at any stage, or some identifiable stage, and then can be continued later on from where they were left off. There may be many a trivial things that  may be found unnecessary later on and could be totally dispensed with or abandoned altogether on a review. 

The practice of stopping activities at some point and resuming from there later on has existed for a long long time, probably from the times man has started thinking rationally. However, advent of computers and watching recorded programs on television appears to have given a definite term for this. "To hit the "Pause" button" is a very popular usage in today's world. It is clearer than the term "To put on the back burner", since things put on the back burner continue to simmer, albeit low, and need to be attended to within a definite time frame, unless they are taken off once and for all. 

While all this is applicable for various activities in our lives, what about life itself? Can it be "paused" and restarted after sometime? It is a very interesting question indeed. We know about certain medical terms like "CPR". Cardiopulmonary resuscitation is an emergency procedure that is used when someone's breathing or heartbeat stops. Definite steps are taken for chest compressions and rescue breaths to revive the person. But there are many examples when a person who is declared dead comes back to life and lives for quite sometime, and many times for several years. There are reports of dead bodies being carried for burial or cremation coming to life and making the people around run away in fear. Is it indeed a possibility of hitting a "pause button" for life itself? 

*****

The use of anaesthesia during surgical procedures cannot be called as hitting a pause button, as in such cases there is no real pause in the patient's life. The only result is that the patient on the operation table has a pause in his own knowledge of things that are happening to him as well as to others around him. A real pause is one where the person is actually certified as dead and yet resumes living after some time span. For the same reason, persons in coma for several months and years as well are not on a pause. 

There was a report of a brain surgery conducted in 2019 in Texas, USA where a patient was administered anaesthesia for a brain surgery. She was brought back to consciousness once the surgeons cut through her skull and reached the brain. She was given an iPad on which she could identify a number of colours, numbers, animals and other objects and answer the questions of the surgeons. Depending on the answers and if she made a mistake, surgeons would decide which areas of the brain are to be attended to during the surgery. This could be a hair raising experience for the readers, but it was live streamed on Facebook. Now there are many more reports of similar surgical interventions. But all these cannot be called as examples of hitting a "pause" button.

*****

The real hitting of "Pause" button in life are of those where the soul leaves the body, and being able to see things from a vantage point above, then travelling down a tunnel or a canyon undergoing a review of life sometimes, and sometimes accompanied by a guide. Such living or reliving of events from points of feeling both pain and joy they brought for others. Then the soul reenters the body and continues the journey of life in the same body from which it had moved away for a short span of time. 

Tales of such experiences are accepted by people who believe in the separation of soul and body, and also that soul is eternal, and it changes bodies from time to time. There have been many such stories we all have heard from time to time. There are indeed many examples where young boy or girl have claimed that their house is elsewhere, and when taken to those places as per description given by him, even recognised the relatives from the past lives. "Sonar Kella" (Golden Fort) is a 1971 mystery novel by noted Indian filmmaker Satyajit Ray on such a subject. He also made a film based on this in 1974. The story revolves around a boy born in Bengal who claims his real house is in a place surrounded by Peacocks, Forts, and Camels. Finally the place he describes is identified as Jaisalmer in Rajasthan. "Reincarnation of Peter Proud" is a Hollywood movie made in 1975 on a similar theme of reincarnation. There are many Hindi films on the theme of reincarnation starting from "Madhumati" and "Karz", among others. 

Reincarnation is certainly different from hitting a "Pause", but is mentioned here as examples of believing in soul being eternal and taking many births. This is only to supplement the fact that during a "Pause" the soul leaves the body and reenters the same body after sometime. 

*****

Dr Raymond A Moody Jr is an American philosopher, psychiatrist and Physician who has done a lot of work on cases of "Pause" in life. His learning accomplishments are indeed remarkable. He got a PhD in Philosophy in 1969, studied Psychology later on and obtained a PhD in that subject as well. To add to these, he studied medicine and has a MS degree in medicine. His website lifeafterlife.com gives volumes of information about "Life after Life" or hitting a "Pause" in life. 

Dr Moody names such experiences as "NDE" or "Near Death Experience". He has visited a number of persons who had such experiences, interviewed them, made extensive notes and published many books, starting from "Life After Life" in 1975. It is said that he himself had such an experience in 1991. He is presently 80 years old and continues his work in this field. There are, of course, some controversies about his work.

*****

Life, Life after a pause in Life, and Life after Life are all very exciting subjeccts for those who are indeed interested in Life! 

Thursday, May 22, 2025

ಶ್ರುತಾಯುಧ ಮತ್ತು ಅವನ ಅಜೇಯ ಗದೆ


ತಮ್ಮ ವಿವಿಧ ಬಗೆಯ ಸಾಧನೆ ಮತ್ತು ತಪಸ್ಸುಗಳಿಂದ ಚತುರ್ಮುಖ ಬ್ರಹ್ಮ ಮತ್ತು ಪರಶಿವರನ್ನು ಮೆಚ್ಚಿಸಿ, ಅಜೇಯವೆನಿಸುವ ವರಗಳನ್ನು ಪಡೆದು, ಆ ವರಗಳ ಮದದಿಂದ ಲೋಕಕಂಟಕರಾಗಿ ಮೆರೆವವರು ಮತ್ತು ಮಹಾವಿಷ್ಣುವು ಅನೇಕ ಪ್ರಸಂಗಗಳಲ್ಲಿ ಹೇಗೆ ಇಂತಹವರ ಕಾಟವನ್ನು ಕಡೆಗೊಳಿಸಿದನು ಎನ್ನುವುದನ್ನು ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" ಗ್ರಂಥದ 28ನೆಯ ಪದ್ಯದಲ್ಲಿ ವಿವರಿಸಿರುವ ಬಗೆಯನ್ನು "ಕೊಡುವವರಿಬ್ಬರು; ತೆಗೆಯುವವನೊಬ್ಬ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಭಸ್ಮಾಸುರ ಪರಶಿವನನ್ನು ಮೆಚ್ಚಿಸಿ ವರವನ್ನು ಪಡೆದು ಅದರ ಸತ್ವದ ಪರೀಕ್ಷೆ ಮಾಡಲು ವರ ಕೊಟ್ಟವನನ್ನೇ ಗುರಿಮಾಡಿದ್ದು ಮತ್ತು ಮಹಾವಿಷ್ಣುವು ಮೋಹಿನಿ ರೂಪದಿಂದ ಅವನ ಕೊನೆ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ "ಶ್ರುತಾಯುಧ" ಎನ್ನುವ ಅಸುರನೊಬ್ಬನ ಕಥೆ ಬಹಳ ಜನಕ್ಕೆ ಗೊತ್ತಿಲ್ಲ. ಶ್ರುತಾಯುಧನಿಗೆ ಬಲ ಬಂದಿದ್ದು ಶಿವ ಅಥವಾ ಬ್ರಹ್ಮರ ಕೃಪೆಯಿಂದ ಅಲ್ಲ. ತಂದೆಯಾದ ವರುಣನಿಂದ ತನಗೆ ಬಂದ ವರದ ಬಲದಿಂದ ಕೊಬ್ಬಿದ ಶ್ರುತಾಯುಧನನ್ನು ಶ್ರೀಕೃಷ್ಣನು ಹೇಗೆ ಉಪಾಯವಾಗಿ ಕೊಂದನು ಎನ್ನುವುದು ಮಹಾಭಾರತದಲ್ಲಿ ವರ್ಣಿತವಾಗಿದೆ. ಅದನ್ನು ಸ್ವಲ್ಪ ನೋಡೋಣ. 

*****

ಚತುರ್ಮುಖ ಬ್ರಹ್ಮರು ಒಮ್ಮೆ ಸಂಜೆಯ ವೇಳೆ ಸಮುದ್ರ ತೀರದಲ್ಲಿ ಯೋಗಧ್ಯಾನದಲ್ಲಿ ಸಂಚರಿಸುತ್ತಿದ್ದರಂತೆ. ಸಮುದ್ರರಾಜನಾದ ವರುಣನು ಅವರ ಇರವನ್ನು ಗಮನಿಸಿದರೂ ತೀವ್ರವಾಗಿ ಉಕ್ಕುತ್ತಾ ಬಂದು ಅವರ ಮೇಲೆ ಹೆಚ್ಚಾಗಿ ನೀರನ್ನು ಸಿಂಪಡಿಸಿದನಂತೆ. ಯೋಗಧ್ಯಾನದಲ್ಲಿದ್ದ ಬ್ರಹ್ಮರು "ಶಾಂತೋಭವ' (ಶಾಂತನಾಗು) ಎಂದು ಕೈಬೀಸಿ ಸುಮ್ಮನಾಗಿಸಿದರಂತೆ. ದೊಡ್ಡವರಿಗೆ ಅಪಚಾರ ಮಾಡಿದ ಕಾರಣದಿಂದ ಮುಂದೆ ವರುಣನು "ಶಂತನು" ಎನ್ನುವ ಹೆಸರಿನಿಂದ ಭೂಮಿಯಲ್ಲಿ ಹುಟ್ಟಬೇಕಾಯಿತು. ಶಂತನು ಗಂಗೆಯನ್ನು ವಿವಾಹವಾಗಿ, ನಂತರ ಎಂಟು ವಸುಗಳು ಅವರ ಮಕ್ಕಳಾಗಿ ಹುಟ್ಟಿ, ಗಂಗೆಯು ಮೊದಲ ಏಳು ಶಿಶುಗಳನ್ನು ನದಿಯಲ್ಲಿ ಹಾಕಿ, ಎಂಟನೆಯವನು "ದೇವವ್ರತ" ಆಗಿ ಉಳಿದು ಮುಂದೆ "ಭೀಷ್ಮ" ಎಂದು ಪ್ರಸಿದ್ಧನಾದುದು ಎಲ್ಲರಿಗೂ ತಿಳಿದ ವಿಷಯ. ಏಳು ಮಕ್ಕಳನ್ನು ಪತ್ನಿಯು ಹುಟ್ಟಿದ ತಕ್ಷಣ ನದಿಯಲ್ಲಿ ಬಿಸಾಡಿದರೂ ಅವನು ಶಾಂತನಾಗಿ ಸುಮ್ಮನಿರಬೇಕಾಯಿತು. ದೊಡ್ಡವರಿಗೆ ಮಾಡಿದ ಅಪಚಾರಗಳು ಹಿಂದೆ ಅಟ್ಟಿಸಿಕೊಂಡು ಬಂದು ನಮ್ಮನ್ನು ಕಾಡುತ್ತವೆಯೇ ಹೊರತು ಅವುಗಳಿಂದ ತಪ್ಪಿಸಿಕೊಳ್ಳಲಾಗದು. 

ಯೋಗಧ್ಯಾನದಲ್ಲಿ ಇರುವಾಗ ಸಂಚಾರ ಹೇಗೆ ಸಾಧ್ಯ ಎಂದು ಕೆಲವರಿಗೆ ಆಶ್ಚರ್ಯ ಆಗಬಹುದು. ವಾಹನ ಚಲಿಸುವ ಕಲಿಕೆಯಲ್ಲಿ (ಡ್ರೈವಿಂಗ್ ಪ್ರಾಕ್ಟೀಸ್) ಇರುವವರಿಗೆ ಯಾವ ಕ್ಷಣದಲ್ಲಿ ಅಪಘಾತ ಆಗುವುದೋ ಎಂಬ ಚಿಂತೆ ಇರುತ್ತದೆ. ವಾಹನ ಚಲಿಸುವುದು ಪ್ರಾರಂಭಿಸುವುದರಿಂದ ಅದು ನಿಲ್ಲಿಸಿ ಕೆಳಗಿಳಿಯುವವರೆಗೆ ಅದೊಂದು ಮೈ ಬಿಸಿ ಮಾಡುವ ಸನ್ನಿವೇಶ. ಆದರೆ ಚೆನ್ನಾಗಿ ನುರಿತ ಚಾಲಕರಿಗೆ ಹಾಗಲ್ಲ. ಅವರ ಪಕ್ಕ ನಾವು ಕುಳಿತಿದ್ದಾಗ ಅವರು ನಮ್ಮೊಡನೆ ಮಾತನಾಡುತ್ತ ವಾಹನ ನಡೆಸುತ್ತಿರುತ್ತಾರೆ. ಪ್ರಪಂಚದ ಅನೇಕ ಆಗು-ಹೋಗುಗಳ ಗಹನವಾದ ಚರ್ಚೆ ನಡೆದಿರುತ್ತದೆ. ಗಂಟೆಗಟ್ಟಲೆ ಡೊಂಕು-ಹಳ್ಳ-ದಿಣ್ಣೆಗಳಿರುವ ರಸ್ತೆಯಲ್ಲಿ ಮೈಲಿಗಟ್ಟಲೆ ವಾಹನ ಚಲಿಸಿರುತ್ತದೆ. ಅನೇಕ ಕೆಂಪು-ಹಸಿರು ದೀಪಗಳ ದಾರಿ ಕ್ರಮಿಸಿರುತ್ತದೆ. ಪಕ್ಕದಲ್ಲಿ ಮತ್ತು ಎದುರಿನಿಂದ ಸಾವಿರಾರು ವಾಹನಗಳು ಚಲಿಸಿರುತ್ತವೆ. ನಮ್ಮೊಡನೆ ಚಾಲಕ ಮಾತಿನಲ್ಲಿ ತೊಡಗಿರುವಾಗಲೇ ಇದೆಲ್ಲಾ ನಡೆದಿರುತ್ತದೆ. ಆದರೆ ಆ ಪಳಗಿದ ಚಾಲಕರು ನಿರಾಯಾಸವಾಗಿ ಇದೆಲ್ಲ ದಾಟಿ ಬಂದಿರುತ್ತಾರೆ!

ನಾವುಗಳು ಧ್ಯಾನಕ್ಕೆ ಕುಳಿತರೆ ಮನಸ್ಸು ಕಪಿಯಂತೆ ಎಲ್ಲೆಲ್ಲೋ ಎಗರಾಡುತ್ತ ಹರಿಯುತ್ತದೆ. ಬ್ರಹ್ಮರು, ಹನುಮಂತ ಮುಂತಾದವರ ಯೋಗ್ಯತೆ ಬಹಳ ದೊಡ್ಡದು. ಅವರು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದರೂ ನಿರಂತರವಾಗಿ ಯೋಗನಿಷ್ಠರಾಗಿಯೇ ಇರುತ್ತಾರೆ. ಅವರಿಗೂ ನಮಗೂ ಇರುವ ವ್ಯತ್ಯಾಸ ನುರಿತ ವಾಹನ ಚಾಲಕನಿಗೂ ಹೊಸದಾಗಿ ವಾಹನ ಚಾಲನೆ ಕಲಿಯುತ್ತಿರುವವನಿಗೂ ಇರುವ ಭಿನ್ನತೆಯ ರೀತಿ. ನಮಗೆ ತಿಳಿದಿರುವಂತೆ "ಅಷ್ಟಾವಧಾನ" ಮಾಡುವ ಪಂಡಿತರು ಒಂದೇ ಕಾಲಕ್ಕೆ ಅನೇಕ ದಿಕ್ಕುಗಳಲ್ಲಿ ಮನಸ್ಸು ನೆಟ್ಟು ಬೇರೆ ಬೇರೆ ಪೃಚ್ಛಕರು ಕೇಳಿದ ಹಲವಾರು ಜಟಿಲ ಸಮಸ್ಯೆಗಳಿಗೆ ಉತ್ತರಕೊಡುತ್ತಿದ್ದರೂ ಅವರು ಎಲ್ಲವನ್ನೂ  ಮಾಡಬಲ್ಲರು. ಸಾಮಾನ್ಯರಿಗೆ ಅದರಲ್ಲಿ  ಯಾವುದೇ ಒಂದನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ. ಎಂತಹ ವ್ಯತ್ಯಾಸ!

*****
ಜಲಾಧಿಪತಿಯಾದ ವರುಣ ಮತ್ತು ಪರ್ನಾಸ ಎಂಬ ನದಿ ದೇವತೆಯರ ಸಂತಾನವಾಗಿ ಒಂದು ಮಗು ಹುಟ್ಟಿತು. ತಾಯಿಯಾದ ಪರ್ನಾಸ ಶಿಶು ಜನಿಸಿದ ಸಂಭ್ರಮದಲ್ಲಿ ತಂದೆಯಾದ ವರುಣನಿಗೆ ಅವನಿಗೆ ಚಿರಂಜೀವಿಯಾಗಿರುವಂತೆ ಆಶೀರ್ವದಿಸಲು ಕೇಳಿದಳು. ಚಿರಂಜೀವಿ ಆಗು ಎನ್ನುವ ವರ ಕೊಡಲಾಗದಿದ್ದರಿಂದ ವರುಣನು ಒಂದು ಮಾಯಾ ಗದೆಯನ್ನು ಸೃಷ್ಟಿಸಿ ಮಗನಿಗೆ ಕೊಟ್ಟು "ಇವನು ಈ ಗದೆಯನ್ನು ಹಿಡಿದು ಯುದ್ಧ ಮಾಡುವಾಗ ಇವನು ಅಜೇಯನಾಗುತ್ತಾನೆ. ಅದರಿಂದ ಬಹಳ ದೀರ್ಘ ಕಾಲ ಬದುಕುತ್ತಾನೆ" ಎಂದು ಆಶೀರ್ವದಿಸಿದನು. ಗದೆ ಕೊಡುವಾಗ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದನು. "ನಿರಾಯುಧನ ಮೇಲೆ  ಈ ಗದೆ ಪ್ರಯೋಗಿಸಬಾರದು. ಹಾಗೆ ಮಾಡಿದಲ್ಲಿ ಅದು ಹಿಂದಿರುಗಿ ಪ್ರಯೋಗಿಸಿದವನಿಗೆ ಹೊಡೆಯುತ್ತದೆ" ಎಂದನು. ತಾಯಿ ಕೇಳಿ ಆಯುಧ ಸಿಕ್ಕಿದ್ದರಿಂದ ಅವನಿಗೆ "ಶ್ರುತಾಯುಧ" ಎಂದು ಹೆಸರಾಯಿತು. 

ಪರ್ನಾಸ ಎಂಬ ನದಿಯ ಹೆಸರು ಅನೇಕ ಜನ ಕೇಳಿರಲಿಕ್ಕಿಲ್ಲ. ದಕ್ಷಿಣ ಅಮೆರಿಕೆಯಲ್ಲಿ ಅಮೆಜಾನ್ ನದಿಯ ನಂತರ ಅತಿದೊಡ್ಡ ನದಿಯೊಂದಿದೆ. ಅದಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ಈಗ Parana de Las Palmas ಎನ್ನುತ್ತಾರೆ. ಇದರ ಹಿಂದಿನ ಹೆಸರು ಪರ್ನಾಸ. ಬ್ರೆಜಿಲ್ ದೇಶದಲ್ಲಿ ಹುಟ್ಟಿ ಪೆರಗ್ವೆ ಮತ್ತು ಅರ್ಜೆಂಟೈನಾ ದೇಶಗಳಲ್ಲಿ  ಮೂರು ಸಾವಿರ ಮೈಲು ದೂರ ಹರಿಯುವ ಈ ನದಿ ಅಲ್ಲಿನ ಜನರ ಜೀವನಾಡಿಯಾಗಿದೆ. 

ಶ್ರುತಾಯುಧನು ಮಹಾವೀರನಾಗಿ ಬೆಳೆದನು. ಗದೆಯ ಪ್ರಭಾವದಿಂದ ಅಜೇಯನಾಗಿ ಕಳಿಂಗ ದೇಶದ (ಈಗಿನ ಒಡಿಷಾ ಪ್ರದೇಶ) ರಾಜನಾದನು. ದುಷ್ಟರ ಸಂಗ ಸೇರಿ ಕಡೆಗೆ ದುರ್ಯೋಧನನ ಮಿತ್ರನಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯ ಸೈನ್ಯದ ಮಹಾವೀರರಲ್ಲಿ ಒಬ್ಬನಾದನು. ಪಾಂಡವರ ವಿರುದ್ಧ ಹೋರಾಡಿದನು. 
*****  

ಕುರುಕ್ಷೇತ್ರ ಯುದ್ಧದ ಹದಿನಾಲ್ಕನೆಯ ದಿನ. ದ್ರೋಣಾಚಾರ್ಯರು ಕೌರವ ಸೈನ್ಯದ ಅಧಿಪತಿ, ಹಿಂದಿನ ದಿನ ಅಭಿಮನ್ಯುವಿನ ವಧೆಯಾಗಿತ್ತು. ಅರ್ಜುನನು ಮಹಾಕೊಪದಿಂದ ಜಯದ್ರಥನ ವಧೆಮಾಡುವ ಪ್ರತಿಜ್ಞೆ ಮಾಡಿ ಅವನನ್ನು ಅರಸುತ್ತಾ ಚಲಿಸುತ್ತಿದ್ದನು. ಶ್ರೀಕೃಷನು ಪಾರ್ಥಸಾರಥಿಯು. ಅರ್ಜುನನನ್ನು ತಡೆಯಲು ಬಂದ ಅನೇಕ ವೀರರಲ್ಲಿ ಶ್ರುತಾಯುಧನ ಸರದಿ ಬಂತು. ಶ್ರುತಾಯುಧನು ಒಳ್ಳೆಯ ಬಿಲ್ಲುಗಾರನೂ ಆಗಿದ್ದನು. ಅರ್ಜುನನು ಅವನೊಡನೆ ತೀಕ್ಷ್ಣವಾಗಿ ಹೋರಾಡಿ ಶ್ರುತಾಯುಧನ ಬಿಲ್ಲನ್ನು ತುಂಡಿರಿಸಿದನು. ಶ್ರುತಾಯುಧನಿಗೆ ಬಹಳ ಕೋಪ ಬಂದಿತು. 

ಇದೇ ಸಮಯಕ್ಕೆ ಸರಿಯಾಗಿ ಶ್ರೀಕೃಷ್ಣನು ಅರ್ಜುನನನ್ನು ಬೇಕೆಂತಲೇ ಇನ್ನಷ್ಟು ಹುರಿದುಂಬಿಸಿದನು. ಮೊದಲೇ ಕೋಪಗೊಂಡಿದ್ದ ಶ್ರುತಾಯುಧನು ಇನ್ನಷ್ಟು ಕೆರಳಿದನು. ಅವನ ಕೋಪ ಅರ್ಜುನನಿಂದ ಶ್ರೀಕೃಷ್ಣನ ಕಡೆ ಹೊರಳಿತು. ಹಿಂದೆ-ಮುಂದೆ ನೋಡದೆ ಶ್ರೀಕೃಷ್ಣನನ್ನು ಕೊಲ್ಲುವ ಸಲುವಾಗಿ ತನ್ನ ಮಾಯಾ ಗದೆಯನ್ನು ತೆಗೆದು ಶ್ರೀಕೃಷ್ಣನಿಗೆ ಗುರಿಯಿಟ್ಟು ಬಲವಾಗಿ ಪ್ರಯೋಗಿಸಿದನು. ಶ್ರೀಕೃಷ್ಣನೋ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರವನ್ನೇ ಹಿಡಿಯದ ಪ್ರತಿಜ್ಞೆ ಮಾಡಿದವನು. ನಿರಾಯುಧನು. ನಿರಾಯುಧನ ಮೇಲೆ ಪ್ರಯೋಗವಾದದ್ದರಿಂದ ಗದೆ ಶ್ರೀಕೃಷ್ಣ ಹತ್ತಿರ ಹೋಗಿ, ಏನೂ ಮಾಡಲಾಗದೆ, ಹಿಂದೆ ಬಂದು ಶ್ರುತಾಯುಧನಿಗೇ ಬಡಿಯಿತು. ಶ್ರುತಾಯುಧನು ತನ್ನ ಆಯುಧದಿಂದ ತಾನೇ ಸತ್ತನು. 

*****

ಭಕ್ತ ಕನಕದಾಸರು ತಮ್ಮ "ಹರಿಭಕ್ತಿಸಾರ" ಕೃತಿಯ 35ನೆಯ ಪದ್ಯದಲ್ಲಿ ಈ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ: 

ಬವರದಲಿ ಖತಿಗೊಂದು ಗದೆಯೊಳು
ಕವಿದು ನಿನ್ನ ಶ್ರುತಾಯುಧನು ಹೊ 
ಕ್ಕವಗಢಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ 
ವಿವರವೇನೋ ತಿಳಿಯೆ  ಈ 
ಮಾಯವನು ನೀನೇ ಬಲ್ಲೆ  ನಿನ್ನಾ 
ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ 

"ನಿನ್ನಾಯವನು ನೀನೇ ಬಲ್ಲೆ" ಎನ್ನುವಲ್ಲಿ "ಆಯ" ಎಂದರೆ ಪರಮಾತ್ಮನ ಗುಣ ವಿಸ್ತಾರಗಳು. (ಗಣಿತದಲ್ಲಿ "ಆಯ" ಅಂದರೆ ಉದ್ದxಅಗಲ, ಅಂದರೆ ಕ್ಷೇತ್ರಫಲ (ಏರಿಯಾ) ತಾನೇ?). ಪರಮಾತ್ಮನ ಗುಣ-ವಿಸ್ತಾರಗಳನ್ನು ಪೂರ್ತಿ ತಿಳಿದವನು ಅವನೊಬ್ಬನೇ. ಮತ್ತೆ ಇನ್ನೊಬ್ಬರು ಇಲ್ಲ ಎಂದು ಅರ್ಥ. 

ಎಲ್ಲವನ್ನೂ ಹೇಳಿದ ಮೇಲೆ "ವಿವರವೇನೋ ತಿಳಿಯೆ" ಎಂದು ಏಕೆ ಹೇಳಿದರು? ಅನೇಕ ವೇಳೆ ನಮಗಿಂತ ದೊಡ್ಡವರು ಅವರಿಗಿಂತ ದೊಡ್ಡವರ ಬಗ್ಗೆ ಹೇಳುವಾಗ "ಏನೋ ಅಪ್ಪ. ನನಗೆ ಗೊತ್ತಿರುವುದು ಇಷ್ಟು. ಇನ್ನೂ ಏನಿದೆಯೋ, ಅವರಿಗೇ ಗೊತ್ತು!" ಎಂದು ಹೇಳುವ ರೀತಿ! 

*****

ಭಗವಾನ್ ವೇದವ್ಯಾಸರ ಮಹಾಭಾರತದ ಹರವು ಎಷ್ಟು ವಿಸ್ತಾರ! ಎಷ್ಟೊಂದು ಪಾತ್ರಗಳು! ಎಲ್ಲಿಂದ ಎಲ್ಲಿಗೆ! ಯಾವ ಕಾಲದಿಂದ ಯಾವ ಕಾಲಕ್ಕೆ! ಎಲ್ಲೋ, ಎಂದೋ, ಹೇಗೋ ಹುಟ್ಟಿದವರೆಲ್ಲ ಕುರುಕ್ಷೇತ್ರದಲ್ಲಿ ಸೇರಿದರು. ಇಂದಿನ ಕೆಲವು ಕಾದಂಬರಿಗಳನ್ನು ಓದುವಾಗ ಅವುಗಳ ಪಾತ್ರ-ವಿನ್ಯಾಸಗಳನ್ನು ಕಂಡು ವಿಸ್ಮಯ ಪಡುವ ನಾವು ಮಹಾಭಾರತದ ಬಗ್ಗೆ ಏನು ಹೇಳುವುದು?

Monday, May 19, 2025

ಕೊಡುವವರಿಬ್ಬರು; ತೆಗೆಯುವವನೊಬ್ಬ


ಮಕ್ಕಳಿಗೆ ತಾಯಿ-ತಂದೆಯರು ಎರಡು ಕಣ್ಣುಗಳಿದ್ದಂತೆ. ತಮ್ಮ ತಮ್ಮ ಜೀವನದಲ್ಲಿ ತಾಯಿ-ತಂದೆಯರ ಪಾತ್ರದ ಪ್ರಾಮುಖ್ಯತೆ ಅವರ ನೆರಳಿನಲ್ಲಿ ಬೆಳೆದವರನ್ನು ಕೇಳಿದರೆ ಸರಿಯಾಗಿ ಗೊತ್ತಾಗುವುದಿಲ್ಲ. ಇವರಿಬ್ಬರಲ್ಲಿ ಯಾರೋ ಒಬ್ಬರಿಲ್ಲದೆ ಕೇವಲ ಒಬ್ಬರ (ತಾಯಿ ಅಥವಾ ತಂದೆ) ಆಶ್ರಯದಲ್ಲಿ ಬೆಳೆದವರಿಗೆ ಅರ್ಧದಷ್ಟು ಗೊತ್ತಿದ್ದೀತು. ಇಬ್ಬರನ್ನೂ ಕಳೆದುಕೊಂಡು ಮತ್ಯಾರೋ ಬೇರೊಬ್ಬರ ಸಹಾಯದಿಂದ ಅಥವಾ ನಿರಾಶ್ರಿತರಾಗಿ ಬೆಳೆದವರಿಗೆ ಪ್ರಾಯಶಃ ಇದರ ಪೂರ್ತಿ ಸತ್ಯ ಗೊತ್ತಿರಬಹುದು. ಜೀವನದಲ್ಲಿ  ಮೊದಲಿನಿಂದಲೂ ಇರುವ ಪದಾರ್ಥಗಳಿಗೆ ಅಥವಾ ಸುಲಭವಾಗಿ ಸಿಕ್ಕಿದ ವಸ್ತುಗಳಿಗೆ ನಾವು ಹೆಚ್ಚು ಬೆಲೆ ಕೊಡುವುದಿಲ್ಲ. ಬಹಳ ಕಷ್ಟ ಪಟ್ಟು ಸಂಪಾದಿಸಿದ ಪದಾರ್ಥಗಳಿಗೆ ನೀಡುವ ಗಮನವನ್ನು ಅದಾಗಿಯೇ ಬಂದಿದ್ದ ಸಂಪತ್ತುಗಳಿಗೆ ಕೊಡದಿರುವುದು ಒಂದು ಮಾನವ ಸಹಜ ವಿಪರ್ಯಾಸ. 

ಮಕ್ಕಳ ಜೀವನದಲ್ಲಿ ತಾಯಿ ಹೆಚ್ಚೋ ಅಥವಾ ತಂದೆ ಹೆಚ್ಚೋ ಎಂದು ಚರ್ಚಿಸುವುದು ನ್ಯಾಯವೇ? ಸೃಷ್ಟಿಯಲ್ಲಿ ಇಬ್ಬರಿಗೂ ಅವರದೇ ಆದ ಪಾತ್ರಗಳಿವೆ. ಇದು ಹಿಂದಿದ್ದಂತೆ ಇಂದೂ ಇದೆ. ಸಮಾಜದ ದೃಷ್ಟಿಯಲ್ಲಿ ಅವರು ನಿರ್ವಹಿಸುತ್ತಿದ್ದ ಹೊಣೆಗಾರಿಕೆ ಕಾಲಕ್ರಮದಲ್ಲಿ ಬದಲಾಗಿದೆ. ಗಂಡಸು ಹೊರಗೆ ದುಡಿದು ಸಂಪಾದಿಸುವುದು, ಹೆಂಗಸು ಮನೆ-ಮಕ್ಕಳನ್ನು ಸಂಭಾಳಿಸುವುದು, ಹೀಗೆ ಇದ್ದ ವ್ಯವಸ್ಥೆ ಬಹಳ ಬದಲಾಗಿದೆ. ಈಗ ಹೆಣ್ಣುಮಕ್ಕಳು ಸಮ-ಸಮವಾಗಿ ಹೊರಗೆ ದುಡಿದು ಸಂಪಾಡಿಸುವುದು ಎಲ್ಲೆಲ್ಲೂ ಕಂಡುಬರುವ ವಿಷಯ. ಗಂಡಸರೂ ಮನೆವಾರ್ತೆಯಲ್ಲಿ ಭಾಗವಹಿಸುವುದೂ ಕಂಡು ಬರುತ್ತದೆ. ಒಟ್ಟಿನಲ್ಲಿ ಕುಟುಂಬದಲ್ಲಿ ಒಂದು ಸಮತೋಲನದ ಅವಶ್ಯಕತೆ ಉಂಟು. ಅದಿದ್ದರೆ ಎಲ್ಲವೂ ಸುಸೂತ್ರ. 

ಸಮಾಜ ಬದಲಾಗಿದ್ದರೂ, ತಂದೆ-ತಾಯಿಗಳು ನಿರ್ವಹಿಸುತ್ತಿದ್ದ ಪಾತ್ರಗಳ ಲಯದಲ್ಲಿ ಬದಲಾವಣೆ ಕಂಡುಬಂದರೂ, ಗಂಡಸರು ಮಕ್ಕಳನ್ನು ಹೆರುವ ಕಾಲ ಇನ್ನೂ ಬಂದಿಲ್ಲ. ವಿಜ್ಞಾನದಲ್ಲಿ ಎಷ್ಟು ಪ್ರಗತಿ ಸಾಧಿಸಿದರೂ, ಪ್ರನಾಳ ಶಿಶು ಎಂದು ಹೇಳಿದರೂ, ಕೇವಲ ಪ್ರನಾಳದಲ್ಲಿ ಪೂರ್ಣ ಪ್ರಮಾಣದ ಮಗು ಬೆಳೆದು ಹುಟ್ಟಿರುವುದು ಇನ್ನೂ ಕಾಣದು. ಮಹಾವಿಷ್ಣುವಿನ ನಾಭೀಕಮಲದ ಶಿಶು ಚತುರ್ಮುಖ ಬ್ರಹ್ಮನಂತೆ ಹುಟ್ಟಿದವರನ್ನು ನಾವು ಕಣ್ಣಾರೆ ಕಾಣೆವು. ಈ ಕಾರಣದಿಂದ ಮಕ್ಕಳಿಗೆ ಮತ್ತು ತಾಯಿಗೆ ಒಂದು ವಿಶೇಷ ಸಂಬಂಧವುಂಟು. ನಾಲ್ಕೈದು ವರುಷ ಆಗುವವರೆಗಾದರೂ ಮಕ್ಕಳು ತಾಯಿಗೆ ಅಂಟಿಕೊಂಡೇ ಇರುತ್ತಾರೆ. ಅಮ್ಮನ ಬಳಿ ಇರುವ ಸದರ-ಸಲುಗೆಗಳು ಅಪ್ಪನ ಬಳಿ ಇರುವುದಿಲ್ಲ. ಅದು ಕರುಳ ಸಂಬಂಧ. ಪದಗಳಲ್ಲಿ ವಿವರಿಸಲಾಗದು. 

*****

ತನ್ನ ಮಕ್ಕಳು ಯೋಗ್ಯರಾಗಿ ಬೆಳೆಯಲಿ, ಚೆನ್ನಾಗಿ ಬಾಳಲಿ ಎಂದು ತಾಯಿಯು ಅನೇಕ ವೇಳೆ ಮಕ್ಕಳ ವಿಷಯದಲ್ಲಿ ಗಡುಸಾಗಿ ವರ್ತಿಸುವುದೂ ಉಂಟು. ಆದರೆ ಸಾಮಾನ್ಯವಾಗಿ ಅದು ತೋರಿಕೆಯ ಗಡಸುತನ. ಮಕ್ಕಳ ವಿಷಯದಲ್ಲಿ ಹೀಗೆ ಗಟ್ಟಿಯಾಗಿ ಕಾಣಿಸುವಾಗ, ಕೆಲವೊಮ್ಮೆ ಶಿಕ್ಷಿಸುವಾಗ, ಅವಳು ನಿರ್ದಯಿ ಎನಿಸಿದರೂ ವಾಸ್ತವವಾಗಿ ಅವಳು ದಯಾಮಯಿಯೇ. ಈ ಕಾರಣಕ್ಕಾಗಿ "ತಾಯಿ  ಕರುಳು" ಎನ್ನುವ ಪದಪ್ರಯೋಗ ಅಲ್ಲಲ್ಲಿ ಕಾಣಿಸುವುದು. ತಂದೆಯು ತನ್ನ ಮಕ್ಕಳ ಬಳಿ ಗಡುಸಾಗಿ ವರ್ತಿಸುವುದು ನಿರೀಕ್ಷಿತವಾದರೂ, ತಾಯಿಯಂತೆಯೇ ಕರುಣಿಯಾಗಿರುವುದೂ ಅಪರೂಪವೇನಲ್ಲ. ಕೆಲವು ತಂದೆಯರಂತೂ ತಾಯಿಗಿಂತಲೂ ಮೆತುವಾಗಿ ಮಕ್ಕಳ ಬಳಿ ವ್ಯವಹರಿಸುವುದನ್ನೂ ಅಲ್ಲಲ್ಲಿ ಕಾಣಬಹುದು. ಈ ಕಾರಣಕ್ಕಾಗಿ "ಅವನದು ಹೆಂಗರುಳು" ಎನ್ನುವ ಪದಪ್ರಯೋಗ ಒಮ್ಮೊಮ್ಮೆ ಕಾಣಬರುವುದು. 

ಭಕ್ತ-ಭಗವಂತನ ವ್ಯವಹಾರವೂ ಹೀಗೆಯೇ. ಭಕ್ತನು ಎಷ್ಟು ಗಟ್ಟಿಯಾಗಿ ನಿಲ್ಲುತ್ತಾನೆ ಎನ್ನುವುದನ್ನು ಪರೀಕ್ಷಿಸಲು ಅನೇಕ ಕಷ್ಟ-ಕಾರ್ಪಣ್ಯಗಳನ್ನು ತಂದೊಡ್ಡಿದರೂ ಪರಮಾತ್ಮನು ವಾಸ್ತವವಾಗಿ ಅತ್ಯಂತ ಕರುಣಾಶಾಲಿಯೇ. ಇಲ್ಲದಿದ್ದರೆ ನಾವು ಪ್ರತಿನಿತ್ಯ ಮಾಡುವ ಅಸಂಖ್ಯ ತಪ್ಪುಗಳಿಗೆ ಅವನು ಶಿಕ್ಷಿಸುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ? ಅವನ ಅನೇಕ ರೂಪಗಳಲ್ಲಿ ಭಕ್ತನು ತನಗೆ ಬೇಕಾದುದನ್ನು ಆರಿಸಿಕೊಂಡು ಆರಾಧಿಸುತ್ತಾನೆ. ಎಲ್ಲಿ ಬೇಡಿದರೆ ತನಗೆ ಬೇಕಾದುದು ಸುಲಭವಾಗಿ ಸಿಗಬಹುದು ಎಂದು ಲೆಕ್ಕ ಹಾಕುತ್ತಾನೆ. "ನನಗೆ ಎಂದೂ ಏನೂ ಬೇಡ. ಅವನು ಪ್ರೀತನಾದರೆ ಸಾಕು" ಎನ್ನುವ ನಿಶ್ಚಲ, ನಿಷ್ಕಾಮರಾದ ಹನುಮಂತನಂತಹ ಭಕ್ತರು ಅಪರೂಪವೇ. 

ಹೀಗೆ ಆರಾಧಿಸಿ ವರಗಳನ್ನು ಬೇಡುವ ಭಕ್ತರು ಯಾರನ್ನು ಆಶ್ರಯಿಸುತ್ತಾರೆ? ಯಾರ ಬಳಿ ಬೇಡುತ್ತಾರೆ? ನಮ್ಮ ಪುರಾಣ-ಪುಣ್ಯಕಥೆಗಳನ್ನು ಗಮನಿಸಿದರೆ ಇದರ ಉತ್ತರ ಬಹು ಸುಲಭ. ವರ ಪಡೆದು ಶಕ್ತಿಶಾಲಿಗಳಾಗಬೇಕು, ಜಗತ್ತನ್ನೇ ತಮ್ಮ ಕಾಲಬುಡದಲ್ಲಿ ಬೀಳಿಸಿಕೊಂಡು ಮೆರೆಯಬೇಕು ಎಂದು ಆಶಿಸುವ ಮಂದಿ ಬಹು ಕಠಿಣ ತಪಸ್ಸುಗಳನ್ನು ಮಾಡುವುದು ಚತುರ್ಮುಖ ಬ್ರಹ್ಮನನ್ನೋ ಅಥವಾ ಶಿವನನ್ನೋ ಕುರಿತೇ. ಅನೇಕ ಉದಾಹರಣೆಗಳಲ್ಲಿ ನಾವು ಕಾಣುವುದು ಇದನ್ನೇ. ಪರಶಿವನದಂತೂ ಭಕ್ತರ ವಿಷಯದಲ್ಲಿ ಅತ್ಯಂತ ಹೆಂಗರುಳು. ಅವನನ್ನು ಆರಾಧಿಸಿ ಮೆಚ್ಚಿಸಿದರೆ ಕೇಳಿದ್ದು ಸಿಗುವುದು ಖಚಿತವೇ. ಬ್ರಹ್ಮನೂ ಹಾಗೆಯೇ. ಇವರಿಬ್ಬರು ಕೇಳಿದ ವರವನ್ನು ಕೊಡುವುದರಲ್ಲಿ ಎತ್ತಿದ ಕೈ. "ಕೊಡುವವರು ಇಬ್ಬರು" ಎಂದರೆ ಈ ಇಬ್ಬರು ಹಿಂದೆ-ಮುಂದೆ ನೋಡದೆ, ಅನುಮಾನಿಸದೇ "ತಥಾಸ್ತು" ಅನ್ನುವವರು. 

*****

ಈ ರೀತಿ ಕೇಳಿದ ವರಗಳನ್ನು ಕೊಡುವ ಹೆಂಗರುಳು ಇರುವುದು ಒಳ್ಳೆಯದೇ. ಆದರೆ ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು, ಕಠಿಣ ಸಾಧನೆಗಳನ್ನು ಮಾಡಿ, ಮೆಚ್ಚಿಸಿ, ವರಪಡೆದು, ನಂತರ ಆ ಭಕ್ತರು ಲೋಕಕಂಟಕರಾದರೆ ಹೇಗೆ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಭಸ್ಮಾಸುರ, ಹಿರಣ್ಯಾಕ್ಷ, ಹಿರಣ್ಯ ಕಷಿಪು, ರಾವಣ, ಮುಂತಾದವರ ದೊಡ್ಡ ಪಟ್ಟಿಯೇ ಉಂಟು. ತನ್ನ ಪರಮ ಭಕ್ತನಾದ ರಾವಣನು ತಪಸ್ಸು ಮಾಡಿ ಮೆಚ್ಚಿಸಿದಾಗ, ಪಾರ್ವತಿ-ಪರಮೇಶ್ವರರು ಎದುರು ಬಂದು ನಿಂತಾಗ, ಪಾರ್ವತಿಯನ್ನು ಕಂಡ ರಾವಣನು ತಪಸ್ಸು ಮಾಡಿದ ಮೂಲ ಕಾರಣವನ್ನೇ ಮರೆತು ಜಗದ೦ಬೆಯನ್ನೇ  ಬೇಡಿದಾಗ ಪರಶಿವನು  ಕೊಟ್ಟೇಬಿಟ್ಟಿದ್ದನ್ನು "ಭೂ ಕೈಲಾಸ" ಪ್ರಸಂಗದಲ್ಲಿ ನೋಡಿದ್ದೇವೆ. ಹಿರಣ್ಯನು ಬ್ರಹ್ಮನ ಮುಂದೆ ಏನೆಲ್ಲಾ ನಿಬಂಧನೆಗಳನ್ನು ಹಾಕಿದ! ಅದಾಗಬಾರದು, ಇದಾಗಬಾರದು ಎಂದು ನೂರೆಂಟು ಕೇಳುವುದರ ಜೊತೆಗೇ "ನಿನ್ನ ಸೃಷ್ಟಿಯಲ್ಲಿನ ಯಾರಿಂದಲೂ, ಯಾವುದರಿಂದಲೂ ಸಾವು ಬರಬಾರದು" ಎಂದು ಕೇಳಿದರೂ ಬ್ರಹ್ಮನು "ತಥಾಸ್ತು" ಅಂದೇ ಬಿಟ್ಟ! 

ಒಳ್ಳೆಯವರ ಕೈಯ್ಯಲ್ಲಿ ಇಂತಹ ವರಗಳು ಸಿಕ್ಕಿದರೆ ಲೋಕಕಲ್ಯಾಣ. ದುರುಳರ ಕೈಯ್ಯಲ್ಲಿ ಅದೇ ವರಗಳು ಲೋಕಕಂಟಕ. ಮೂರು ಲೋಕಗಳ ಸಮಸ್ತ ಜೀವರಾಶಿಯೂ "ತ್ರಾಹಿ, ತ್ರಾಹಿ!" ಎಂದು ಅಂಗಲಾಚುವ ಪರಿಸ್ಥಿತಿ. ಕಡೆಗೆ ಕೆಲವರು ವರ ಕೊಟ್ಟವರನ್ನೇ ಅಪಹಾಸ್ಯ ಮಾಡಿದ್ದೂ ಇದೆ. ವರದ ಯೋಗ್ಯತೆಯನ್ನು ಅವರ ಮೇಲೆಯೇ ಪರೀಕ್ಷಿಸಲು ಹೋದದ್ದೂ ಉಂಟು. ಆಗ ಎ೦ತಹ ಪೇಚಿನ ಪ್ರಸಂಗಗಳು ಬಂದವು! ಅಂತಹ ವಿಪರೀತ ಸಂದರ್ಭಗಳಲ್ಲಿ ಆರ್ತರು ಮಹಾವಿಷ್ಣುವಿನ ಮೊರೆಹೊಕ್ಕು ಅವನಿಂದ ಈ ದುರುರುಳರ ಕೊನೆಯಾಗಿ ಜಗತ್ತು ನಿಟ್ಟುಸಿರು ಬಿಡುವಂತೆ ನಡೆದಿರುವುದೂ ಉಂಟು. ಆದ್ದರಿಂದ ಅವನು "ತೆಗೆಯುವವನೊಬ್ಬ". 

*****

ಮಹಾತ್ಮರಾದ ಭಕ್ತಶ್ರೇಷ್ಠ ಕನಕದಾಸರು ಈ ಮೇಲಿನ ಚರ್ಚೆಯನ್ನೆಲ್ಲ ಭಟ್ಟಿ ಇಳಿಸಿ ತಮ್ಮ "ಹರಿಭಕ್ತಿಸಾರ" ಕೃತಿಯ 28ನೆಯ ಪದ್ಯದಲ್ಲಿ ಹೀಗೆ ಹೇಳಿದ್ದಾರೆ:  

ಹಗೆಯರಿಗೆ ವರವೀವರಿಬ್ಬರು 
ತೆಗೆಯಲರಿಯರು ಕೊಟ್ಟವರಗಳ 
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ 
ಸುಗುಣರಿನ್ನಾರುಂಟು ಕದನವ 
ಬಗೆದು ನಿನ್ನೊಳು ಜಯಸುವವರೀ 
ಜಗದೊಳು೦ಟೀ ದೇವ ರಕ್ಷಿಸು ನಮ್ಮನನವರತ 

ವರವ ಪಡೆದಾಗ ಅವರು ಭಕ್ತರೇ. ಆದರೆ ಕೇಳಿದ್ದು ಸಿಕ್ಕ ತಕ್ಷಣ ಅವರ ಆಸುರೀಶಕ್ತಿ ಜಾಗೃತವಾಯಿತು. ಮೂಲ ಗುಣ ಹೊರಗೆ ಬಂತು. ಆದರೆ ಕಾಲ ಮಿಂಚಿತ್ತು. ಶ್ರೀಹರಿಯು ಮಧ್ಯೆ ಪ್ರವೇಶಿಸಿ ಇಂತಹ ಕಗ್ಗಂಟು ಪರಿಸ್ಥಿತಿಗಳಿಂದ ಬಿಡಿಸಿ ಪಾರುಮಾಡಿದನು ಎನ್ನುವುದನ್ನು ಶ್ರೀ ಕನಕದಾಸರು ಸೊಗಸಾಗಿ ವಿವರಿಸಿದ್ದಾರೆ.

***** 

ಶ್ರೀ ಕನಕದಾಸರ ಕೃತಿಗಳಲ್ಲಿ ಅನೇಕ ಕಾವ್ಯ ಗುಣಗಳೂ, ರಸಘಟ್ಟಗಳೂ ತುಂಬಿವೆ. ಅವರ ಕೃತಿಗಳ ಅಧ್ಯಯನದಿಂದ ನಮ್ಮ ಜ್ಞಾನದ ಹರವು ವಿಸ್ತಾರವಾಗುವ ಜೊತೆಗೆ ಕಾವ್ಯ ರಸಾಸ್ವಾದನೆಯೂ ಆಗುತ್ತದೆ. 

Saturday, May 17, 2025

ಜಯಾ, ಮಾಯಾ, ಕೃತಿ ಮತ್ತು ಶಾಂತಿ


ಪ್ರತಿಯೊಂದಕ್ಕೂ ಒಂದೊಂದು ಕಾಲ ಇರುತ್ತೆ.  ಆ ಕಾಲ ಬರುತ್ತೆ. ಹೌದು. ಆದರೆ ಕೆಲವಕ್ಕೆ ಎಲ್ಲ ಕಾಲವೂ ಸರಿಹೊಂದಿ ನಡೆಯುತ್ತೆ. ಇದೂ ಹೌದು!

ಇದು ಮಾವಿನ ಹಣ್ಣಿನ ಕಾಲ. ಎಲ್ಲೆಲ್ಲಿ ನೋಡಿದರೂ ಮಾವಿನ ಹಣ್ಣು. ಮುಂದೆ ಸೇಬಿನ ಕಾಲ ಬರುತ್ತೆ. ನಂತರ ಇನ್ನೊಂದು ಹಣ್ಣಿನ ಕಾಲ. ಹೀಗೆ ಕೆಲವು ಹಣ್ಣಿಗೆ ಒಂದೊಂದು ಕಾಲ. (ಈಗ ಕೋಲ್ಡ್ ಸ್ಟೋರೇಜುಗಳ ಕಾಲವಾದ್ದರಿಂದ ಎಲ್ಲ ಕಾಲದಲ್ಲೂ ಸ್ವಲ್ಪಮಟ್ಟಿಗೆ ಸಿಗಬಹುದು). ಹಿಂದೆ ಕಲ್ಲಂಗಡಿ, ಕರಬೂಜಕ್ಕೆ ಬೇಸಿಗೆ ಕಾಲವಿತ್ತು. ಈಗ ಹಾಗೆ ಹೇಳುವಂತಿಲ್ಲ. ಆದರೆ ಬಾಳೆ ಹಣ್ಣಿಗೆ ಎಲ್ಲ ಕಾಲವೂ ಸಕಾಲ. ವರುಷದ ಹನ್ನೆರಡು ತಿಂಗಳೂ ಅದರ ಕಾಲವೇ. 

ಕನ್ನಡ ಚಲನಚಿತ್ರ ರಂಗವನ್ನೇ ನೋಡೋಣ. ಪ್ರಾರಂಭದಲ್ಲಿ ಪೌರಾಣಿಕ ಚಿತ್ರಗಳ ಕಾಲ. ನಂತರ ಜಾನಪದ ಚಿತ್ರಗಳ ಕಾಲ. ಅದರನಂತರ ಸಾಮಾಜಿಕ ಚಿತ್ರಗಳ ಕಾಲ. ಅದರಲ್ಲಿಯೂ ಕಾದಂಬರಿ ಆಧಾರಿತ ಚಿತ್ರಗಳ ಸಮಯ. ಅದಾದ ಮೇಲೆ ಹೊಸ ಅಲೆಯ ಚಿತ್ರಗಳ ಕಾಲ. ತದನಂತರ ಸಾಹಸಮಯ, ಜೇಮ್ಸ್ ಬಾಂಡ್ ರೀತಿಯ ಚಿತ್ರಗಳ ಕಾಲ. ಇವಾದಮೇಲೆ ಹಿಂಸಾಪ್ರಧಾನ (ಕೊಲೆ-ರಕ್ತಪಾತ) ಚಿತ್ರಗಳ ಕಾಲ. ಒಂದು ಚಿತ್ರದಲ್ಲಿ ಎಷ್ಟು ಹೆಣಗಳು ಬಿದ್ದವು ಅಥವಾ ಎಷ್ಟು ಲೀಟರು ರಕ್ತ ಸುರಿಯಿತು ಎನ್ನುವುದರ ಮೇಲೆ ಚಿತ್ರ ಯಶಸ್ವಿಯೋ ಅಲ್ಲವೋ ಎಂದು ತೀರ್ಮಾನಿಸುವ ಕಾಲ. ಮತ್ತೆ ಈಗಂತೂ ಇವು ಕನ್ನಡ ಚಿತ್ರಗಳೇ ಎಂದು ಅನುಮಾನಿಸುವ ಕಾಲ! ಈ ಚಿತ್ರಗಳಲ್ಲಿ "ಕನ್ನಡ ಎಲ್ಲಿದೆ?" ಎಂದು ಹುಡುಕುವ ಕಾಲ. ಎಲ್ಲಕ್ಕೂ ಒಂದೊಂದು ಕಾಲ! 

ರವಿಕೆಗಳಿಗೂ ಹೀಗೆಯೇ ಇತ್ತು. ಯಾರೋ ಒಬ್ಬರು ದರ್ಜಿಯೊಬ್ಬನಿಗೆ ರವಿಕೆ ಹೊಲೆಯಲು ಕೊಟ್ಟ ಬಟ್ಟೆ ಸ್ವಲ್ಪ ಹೆಚ್ಚಾಗಿತ್ತು. ಎರಡು ರವಿಕೆ ಹೊಲೆಯಲು ಕಡಿಮೆ. ಒಂದಕ್ಕೆ ಜಾಸ್ತಿ. ಸರಿ, ಏನು ಮಾಡುವುದು? ಮುಂಗೈಗೆ ಹತ್ತಿರ ಬರುವಷ್ಟು ಉದ್ದ ತೋಳಿಟ್ಟು ರವಿಕೆ ಹೊಲೆದ. ಒಂದು ತಿಂಗಳಿನಲ್ಲಿ ಎಲ್ಲರ ರವಿಕೆಯೂ ಹಾಗೆಯೇ ಆಯಿತು. ಬರಬರುತ್ತ ತೋಳು (ರವಿಕೆಯದು) ಮೇಲೆ ಹೋಗಲು ಶುರುವಾಯಿತು. ಕಡೆಗೆ ರವಿಕೈ "ರವಿ" ಆಯಿತು. {ತೋಳೇ ಇಲ್ಲದ, ಕೈ ಇಲ್ಲದ, ಸ್ಲೀವ್ ಲೆಸ್ ರವಿಕೆ). ಈಗ ಡ್ರೆಸ್ಸುಗಳು ಬಂದು ಇದು ಸ್ವಲ್ಪ ಕಡಿಮೆ ಆಗಿರಬಹುದು. ಆದರೆ ನಿರಾಸೆ ಪಡಬೇಕಿಲ್ಲ. ಡ್ರೆಸ್ಸುಗಳ ತೋಳೂ ಹೀಗೆಯೇ ಹುಣ್ಣಿಮೆ-ಅಮಾವಾಸ್ಯೆ ಕಾಣುತ್ತಿವೆ. 

ಪ್ಯಾಂಟುಗಳ ಸ್ಥಿತಿಯೂ ಹಾಗೆಯೇ. ಹಿಂದೆಲ್ಲ  ಪ್ಯಾಂಟಿನ ಕೆಳಗಡೆ ಮಡಿಕೆ ಇರುತ್ತಿತ್ತು. ನಂತರ ಆನೆ ಬುಡದ (ಎಲಿಫೆಂಟ್ ಬಾಟಮ್) ಮಡಿಕೆಯ ಪ್ಯಾಂಟುಗಳು ಬಂದವು. ಟೈಟ್ ಪ್ಯಾಂಟಿಗೂ ಒಂದು ಕಾಲ ಇತ್ತು. ಅವನನ್ನು ನಿಲ್ಲಿಸಿ ಹೊಲೆದುದೋ ಎನ್ನುವಷ್ಟು ಟೈಟು. ಚರ್ಮಕ್ಕೂ ಬಟ್ಟೆಗೂ ಮಧ್ಯೆ ನಿರ್ವಾತ ಪ್ರದೇಶ. ಈಗಂತೂ ಹರಕು ಬಟ್ಟೆಯ ಹೊಸ ಪ್ಯಾಂಟುಗಳು. ಹೊಸ ಪ್ಯಾಂಟು ಹರಿಯಲಿ ಎಂದು ಕಾಯಲೇಬೇಕಿಲ್ಲ. "ನಾವು ಹರಕು ಜನ" ಎಂದು ಬಾಯಲ್ಲಿ ಹೇಳದೇ ಬೇರೆಯವರಿಗೆ ಗೊತ್ತಾಗುವುದು. ಹೀಗೆ ಕಾಲದಿಂದ ಕಾಲಕ್ಕೆ ಬದಲಾವಣೆ. 

*****

ಹೀಗೆ ಕಾಲದಿಂದ ಕಾಲಕ್ಕೆ ಚಾಲ್ತಿಯಲ್ಲಿರುವುದು ಬದಲಾಗುವ ಪದ್ದತಿಗೆ ಹಾಡುಗಳೂ ಹೊರತಲ್ಲ. ಯಾರೋ ಒಬ್ಬರು ಪ್ರಭಾವಿಗಳು ಅಥವಾ ಪ್ರಸಿದ್ಧರು ಹಾಡಿದರೆ ಸಾಕು. ಕೆಲವುಕಾಲ ಆ ಹಾಡಿಗೆ ಶುಕ್ರ ದೆಸೆ. ಮತ್ತೊಂದು ಅದರ ಜಾಗ ಆಕ್ರಮಿಸುವವರೆಗೆ. ಯೂಟ್ಯೂಬ್ ಮತ್ತು ವಾಟ್ಸಾಪ್ ಬಂದಮೇಲಂತೂ ಕೇಳುವುದೇ ಬೇಡ. ಕೆಲವು ಕಾಲ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ನಡೆಯಿತು. ಅದು ಮುಗಿದನಂತರ "ರಘುವೀರ ಗದ್ಯ" ಸ್ವಲ್ಪ ದಿನ. ಅದಾದಮೇಲೆ "ಎಂಥ ಶ್ರೀಮಂತನಂತಾನೋ" ಓಡಿತು. ನಂತರ "ಯಾರೂ ಸಂಗಡ ಬಹೋರಿಲ್ಲ". ಈಗ "ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ನಡೆಯುತ್ತಿದೆ. ಮುಂದೆ ಇನ್ನೊಂದು ಕಾಯುತ್ತಿರುತ್ತದೆ. ಹೀಗೆ. 

ಈ ಮಾಯಾದೇವಿ ಯಾರು? ಆ ಹೆಸರು ಹೇಗೆ ಬಂತು? ಅದರ ವಿಶೇಷವೇನು? ಹೀಗೆಂದು ಮಿತ್ರರೊಬ್ಬರು ಕೇಳಿದ್ದಾರೆ. "ಪ್ರಳಯ ಕಾಲದಲ್ಲಿ ಅಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು, ಜಲವು ಆಗಿ ಜಾಣತನದಿ" ಅನ್ನುವುದು ನೇರವಾಗಿ ಮಹಾಲಕ್ಷ್ಮಿ ದೇವಿಯನ್ನೇ ಸೂಚಿಸುತ್ತದೆ. "ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲ್ಲಿ ದುರ್ಗಾದೇವಿ" ಎನ್ನುವುದು ಅವಳದೇ ಆದ ಶ್ರೀ, ಭೂ, ಮತ್ತು ದುರ್ಗಾ ರೂಪಗಳನ್ನು ಹೇಳುತ್ತವೆ. "ಛತ್ರ, ಚಾಮರ, ವ್ಯಜನ, ಪರ್ಯಂಕ, ಪಾತ್ರರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ವರ್ಣಿಸುವ "ಏನು ಧನ್ಯಳೋ, ಲಕುಮಿ ಎಂಥ ಮಾನ್ಯಳೋ" ಎನ್ನುವುದನ್ನು ಇನ್ನೊಂದು ರೀತಿ ಹೇಳುವುದು ಇದು. ಆದರೆ "ಮಾಯಾದೇವಿ" ಎಂದು ಏಕೆ ಸಂಬೋಧಿಸಿದರು ದಾಸರು? ಪರಮ ಮಾಯಾವಿಗೇ ಮಾಯ-ಮಾಟ ಮಾಡಿದ್ದಾಳೆ ಎಂದೇ? 
*****

ಮನೆಯಲ್ಲಿ ಒಂದು ಮಗು ಬರುತ್ತದೆ ಎಂದ ತಕ್ಷಣ ಭಾವಿ ತಾಯಿ-ತಂದೆಯರಿಗೆ ಚಿಂತೆಗಳ ಸರಮಾಲೆ ಶುರು. ಬೇರೆ ಅನೇಕ ಚಿಂತೆಗಳಿಗಿಂತ ಹೆಚ್ಚಾಗಿ ಕಾಡುವುದು "ಏನು ಹೆಸರಿಡಬೇಕು?" ಎನ್ನುವುದು. ಹಿಂದೆಲ್ಲಾ ಇದು ಅಂತಹ ಯೋಚಿಸುವ ವಿಷಯವಾಗಿರಲಿಲ್ಲ. ಯಾವುದೋ ಒಂದು ದೇವರ ಹೆಸರು ಇಡುತ್ತಿದ್ದರು. ಇಲ್ಲವೇ ಮನೆಯ ಹಿರಿಯರು ಯಾರಾದರೂ ಸ್ವಲ್ಪ ದಿನದ ಹಿಂದೆ ನಿಧನರಾಗಿದ್ದಾರೆ ಅವರ ಹೆಸರು. ಇಲ್ಲವಾದರೆ ಮನೆದೇವರ ಅನೇಕ ಹೆಸರುಗಳಲ್ಲಿ ಯಾವುದಾದರೂ ಒಂದು. ಈಗ ಹಾಗಿಲ್ಲ. ಯಾರೂ ಇಡದ ಅಪರೂಪದ ಹೆಸರು ಬೇಕು ಎನ್ನುವ ತವಕ. ಅದರ ಅರ್ಥ ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ಪರವಾಗಿಲ್ಲ. ಯಾರಿಗೂ ಅದು ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು. ಇಂಗ್ಲಿಷಿನಲ್ಲಿ "ಏ" ಇಂದ ಪ್ರಾರಂಭವಾಗುವ ಹೆಸರಾದರೆ ಬಹಳ ಒಳ್ಳೆಯದು. ಏಕೆಂದರೆ ಶಾಲೆಯ ಹಾಜರಿ ರಿಜಿಸ್ಟರಿನಲ್ಲಿ ಮೊದಲನೆಯ ಹೆಸರಾಗುತ್ತದೆ. ಈ ರೀತಿ. 

ಸಮಾರಂಭದಲ್ಲಿ ಒಂದು ಮುದ್ದಾದ ಮಗು ಕಂಡಿತು. "ಮಗು ಬಹಳ ಮುದ್ದಾಗಿದೆ" ಅಂದರು ನೋಡಿದವರೊಬ್ಬರು. ತಾಯಿಗೆ ನ್ಯಾಯವಾಗಿಯೇ ಬಲು ಸಂತೋಷವಾಯಿತು. ಮುಖ ಅಗಲಿಸಿದಳು. "ಏನು ಹೆಸರು?" ಎಂದು ಕೇಳಿದರು. ಸ್ವಲ್ಪ ಒದ್ದಾಡಿದರೂ ಕಡೆಗೆ ಸತ್ಯ ಹೇಳಿದಳು. "ಅಪರೂಪದ ಹೆಸರು ಇಟ್ಟಿದ್ದೇವೆ. ತಕ್ಷಣ ನೆನಪಿಗೆ ಬರುತ್ತಿಲ್ಲ. ಮರೆತುಹೋಗಿದೆ. ಕ್ಷಮಿಸಿ" ಅಂದಳು. ಇದು ಕಟ್ಟು ಕಥೆಯಲ್ಲ.  ನಿಜವಾಗಿ ನಡೆದದ್ದು. 

ಹೆಣ್ಣುಮಕ್ಕಳಿಗೆ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಹೀಗೆ ನದಿಗಳ ಹೆಸರು ಇಡುತ್ತಿದ್ದರು. ಇಲ್ಲವೇ ಹಿಂದಿ ಸಿನಿಮಾಗಳಲ್ಲಿ ಬರುವಂತೆ ಚಂಪಾ, ಚಮೇಲಿ, ಗುಲಾಬಿ, ಮಾಲಾ, ಸುರಭಿ ಇತ್ಯಾದಿ. ಈ ರೀತಿಯ ಜನಪ್ರಿಯ ಹೆಸರುಗಳಲ್ಲಿ ಜಯ, ಮಾಯಾ ಮತ್ತು ಶಾಂತಿ ಸಹ ಸೇರಿವೆ. ಜಯಾ ಅಂತೂ ಅನೇಕ ರೂಪಗಳಲ್ಲಿ ಉಂಟು. ಜಯ, ವಿಜಯ, ಜಯಶ್ರೀ, ವಿಜಯಶ್ರೀ, ಜಯಮಾಲಾ, ಜಯಲಲಿತಾ, ವಿಜಯಲಲಿತಾ, ಜಯಗೌರಿ, ಹೀಗೆ ಅನೇಕ ಪ್ರಭೇದಗಳು. ಮಾಯಾ ಎಂದೂ ಹೆಸರಿಡುವುದು ಉಂಟು. ಶಾಂತಿ ಅನ್ನುವುದು ಒಂದು ಕಾಲದಲ್ಲಿ ಹೆಚ್ಚಾಗಿಯೇ ಇತ್ತು. ಗಂಡ-ಹೆಂಡಿರು ಜಗಳಕಾದರೆ ಅತ್ತೆ-ಮಾವ ಅಥವಾ ತಾಯಿ-ತಂದೆ ಕದನವಿರಾಮಕ್ಕೆ "ಶಾಂತೀ" ಎಂದು ಮೊಮ್ಮಗಳನ್ನು ಕರೆಯಬಹುದಿತ್ತು. ಕೃತಿ ಎಂದು ಸಾಮಾನ್ಯವಾಗಿ ಹೆಸರಿಡುತ್ತಿರಲಿಲ್ಲ. "ಪ್ರಕೃತಿ" ಅನ್ನುವುದು ಐವತ್ತು ವರುಷಗಳ ಹಿಂದೆ ಒಂದು ಹೊಸ ಮಾದರಿ ಹೆಸರಾಗಿತ್ತು. 

ಈ ಜಯಾ, ಮಾಯಾ, ಶಾಂತಿ, ಇವರಿಗಿರುವ ಸಂಬಂಧವೇನು? ಇವರ ಜೊತೆ ಕೃತಿ ಏಕೆ ಸೇರಿದಳು? ಇದನ್ನು ಸ್ವಲ್ಪ ವಿಚಾರ ಮಾಡೋಣ.

*****
 
ಕಂಪನಿ ನಾಟಕಗಳು ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಆ ನಾಟಕಗಳಲ್ಲಿ ಸಾಹಿತ್ಯ, ಸಂಗೀತ, ನಟನ ಕಲೆಗಳ ಮಿಶ್ರಣವಿರುತ್ತಿತ್ತು. ಅನೇಕ ನಟ-ನಟಿಯರು, ಮೇಕಪ್ ಕಲಾವಿದರು, ವಾದ್ಯಗಾರರು ಮುಂತಾದವರು ಒಟ್ಟಿಗೆ  ಇರುತ್ತಿದ್ದರು. ತಂಡ ಊರಿಂದ ಊರಿಗೆ ಪ್ರಯಾಣಿಸಿ ನಾಟಕಗಳನ್ನು ಆಡುತ್ತಿದ್ದವು. ಮುಖ್ಯ ಪಾತ್ರ ಮಾಡುವ ಗಂಡು ಮತ್ತು ಹೆಣ್ಣು ಕಲಾವಿದರಿರುತ್ತಿದ್ದರು. (ಹೆಣ್ಣು ಪಾತ್ರಗಳನ್ನೂ ಗಂಡಸರೇ ಮಾಡುತ್ತಿದ್ದ ಕಾಲ ಕಳೆದ ಮೇಲೆ). ಮುಖ್ಯ ಪುರುಷ ಪಾತ್ರ ಮಾಡುವವನನ್ನು "ರಾಜಾ ಪಾರ್ಟ್" ಎಂದೂ, ಹೆಣ್ಣು ಪಾತ್ರ ಮಾಡುವವರನ್ನು "ರಾಣಿ ಪಾರ್ಟ್" ಎಂದೂ ಕರೆಯುತ್ತಿದ್ದರು. ಇವನು ರಾಜ ಆದರೆ ಅವಳು ರಾಣಿ. ಇವನು ರಾಮನಾದರೆ ಅವಳು ಸೀತೆ. ಇವನು ರೋಮಿಯೋ ಆದರೆ ಅವಳು ಜ್ಯುಲಿಯೆಟ್. ಕನ್ನಡದಲ್ಲಿ ಅದೇ ನಾಟಕವಾದರೆ ರಾಮವರ್ಮ-ಲೀಲಾವತಿ. ಇವನು ಶಿವ ಆದರೆ ಅವಳು ಪಾರ್ವತಿ. ಇವನು ಹರಿಶ್ಚಂದ್ರ ಆದರೆ ಅವಳು ಚಂದ್ರಮತಿ. ಹೀಗೆ ಜೋಡಿ. 

"ಅಮ್ಮ" ಎಂಬ ಹೆಸರಿನ "ಪದ್ಮಿನಿ ಪಿಕ್ಚರ್ಸ್" ಸಂಸ್ಥೆಯ ಕನ್ನಡ ಚಲನಚಿತ್ರ ಬಹಳ ಚೆನ್ನಾಗಿ ಓಡಿತು. ಅದರ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು "ಹುಲ್ಲಳ್ಳಿ ರಾಮರಾಯ" ರಾಜಾ ಪಾರ್ಟುಗಳು. ಫಂಡರಿಬಾಯಿ "ಕಮಲಮ್ಮ" ರಾಣಿ ಪಾರ್ಟುಗಳು. ದುಷ್ಯಂತ-ಶಕುಂತಲೆಯಿಂದ ಚಿತ್ರ ಪ್ರಾರಂಭ. "ನಾಗವೇಣಿ, ನಗರಿಗೆ ನಾ ಪೋಗಿ ಬರುವೆನೇ" ಎಂಬ ಕಂದ ಪದ್ಯದಿಂದ ಚಿತ್ರ ಪ್ರಾರಂಭ. ತಂದೆಯ ಮೇಲೆ ವಿರಸಗೊಂಡ ಮೇಲೆ ರಾಜಕುಮಾರ್ ರಾಜಾ ಪಾರ್ಟ್ ಆದರೆ ಭಾರತಿ ರಾಣಿ ಪಾರ್ಟ್. ಹೀಗೆ ಚಿತ್ರ ಮುಂದುವರೆಯುತ್ತದೆ. ರಾಜಾ-ರಾಣಿ ಪಾತ್ರಗಳಿಗೆ ಇದು ಒಂದು  ಉದಾಹರಣೆ. ಅಷ್ಟೇ. ಚಿತ್ರ ಯಟ್ಯೂಬಿನಲ್ಲಿ ಲಭ್ಯವಿದೆ. ಬೇಕಿದ್ದವರು ನೋಡಬಹುದು. 

*****

ನಾಟಕ ಮತ್ತು ಸಿನಿಮಾಗಳಲ್ಲೇ ಹೀಗಾದರೆ ಜಗತ್ತು ಸೃಷ್ಟಿಸಿದವರ ಕಥೆ ಹೇಗೆ? ಅದನ್ನೇ ತಾನೇ ನಾವು ಕಾಪಿ ಮಾಡುವುದು. ಶ್ರೀಹರಿಯ ಪ್ರತಿಯೊಂದು ರೂಪಗಳಿಗೂ ಅದಕ್ಕೆ ಹೊಂದುವ ಒಂದು ಮಹಾಲಕ್ಷಿಯ ರೂಪವುಂಟು. ಅವನನ್ನು ಬಿಟ್ಟು ಅವಳಿಲ್ಲ. ಅವಳನ್ನು ಬಿಟ್ಟು ಅವನಿಲ್ಲ. ಎದೆಯ ಗೂಡಿನಲ್ಲಿಯೇ ಒಂದು ಅಂತಃಪುರ ಮಾಡಿ ಕೂಡಿಸಿಕೊಂಡಿದ್ದಾನೆ. ಸನ್ಯಾಸಿಯಾದಾಗಲೂ ಬಿಟ್ಟಿಲ್ಲ. (ಈಗಲೂ ಕೆಲವು ಸನ್ಯಾಸಿಗಳು ಸಾಂಸಾರಿಕರಾಗಿದ್ದರೆ ಅವರನ್ನು ಇದೇ ಕಾರಣಕ್ಕೆ ಅಕ್ಷೆಸುಪಿಸುವಂತಿಲ್ಲ). 

ಶ್ರೀಹರಿಯ ಪ್ರಸಿದ್ಧವಾದ "ಪಂಚ ರೂಪಗಳು" ಮತ್ತು ಅವಕ್ಕೆ  ಜೊತೆಯಾದ (ರಾಜ-ರಾಣಿ ಪಾರ್ಟುಗಳಂತೆ ) ಮಹಾಲಕ್ಷ್ಮಿ ರೂಪಗಳು ಹೀಗಿವೆ:

ಸಂಕರ್ಷಣ - ಜಯಾ  
ವಾಸುದೇವ - ಮಾಯಾ  
ಪ್ರದ್ಯುಮ್ನ - ಕೃತಿ 
ಅನಿರುದ್ಧ - ಶಾಂತಿ 
ನಾರಾಯಣ - ಲಕ್ಷ್ಮಿ 

ಲಕ್ಸ್ಮಿ-ನಾರಾಯಣ ಎನ್ನುವುದು ಎಲ್ಲರಿಗೂ ಚಿರಪರಿಚಿತ. ಮಿಕ್ಕವು ಅಷ್ಟಾಗಿ ಪರಿಚಿತವಲ್ಲ. ಮಾಯಾ ಅನ್ನುವುದು ವಾಸುದೇವ ರೂಪಿ ಶ್ರೀಹರಿಯ ಜೊತೆಯಿರುವ ಮಹಾಲಕ್ಷ್ಮಿ. ಒಂದಲ್ಲಾ ಒಂದು ಕಾರಣದಿಂದ ಯಾವಾಗಲೂ ಮಾತ್ರವಲ್ಲ, ಶ್ರೀಹರಿಯು ಯಾವ ರೂಪ ತಳೆದರೂ ಅದಕ್ಕೆ ಜೊತೆಯಾಗಿ ರೂಪ ತಳೆವ ಲಕ್ಶ್ಮಿಯನ್ನು, ಅರೆ-ಹಾಸ್ಯ ಮಿಶ್ರಿತ ಸಂಬೋಧನೆಯಲ್ಲಿ, ಮಾಯಗಾರನಿಗೇ ಮಾಯಮಾಡಿರುವವಳು ಎಂದು ಸೂಚಿಸಲು "ಮಾಯಾದೇವಿ" ಎಂದು ದಾಸರು ಉಪಯೋಗಿಸಿದ್ದಾರೆ.  ಮಗನು ಅಮ್ಮನಿಗೆ ಸಲುಗೆಯಿಂದ "ನೀನೇನೂ ಸಾಮಾನ್ಯಳಲ್ಲ. ಎಲ್ಲರಿಗೂ ಟೋಪಿ ಹಾಕುವ ನಮ್ಮ ಅಪ್ಪನಿಗೇ ಟೋಪಿ ಹಾಕಿದವಳು!" ಎಂದು ಹೇಳುವಂತೆ. 

ಜಯಾ, ಮಾಯಾ, ಮತ್ತು ಶಾಂತಿ ಎನ್ನುವ ಹೆಸರು ಹೆಣ್ಣು ಮಕ್ಕಳಿಗೆ ಇಡುವ ಮೂಲ ಕಾರಣ ಇದು. ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳ ಹೆಸರುಗಳೇ. 

*****

ಈ ಪಂಚ ರೂಪಗಳಿಗೂ ನಾವು ನೀರು, ಆಹಾರ ಸೇವಿಸುವುದು, ಅರಗಿಸುವುದು, ಅದರ ರಸಗಳು ದೇಹದ ಎಲ್ಲ ಅಂಗಾಂಗಗಳಿಗೆ ತಲುಪುವುದು, ಇವೆಲ್ಲಕ್ಕೂ ನೇರವಾದ ಸಂಬಂಧವಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಈ ಪಂಚರೂಪಗಳ ವಿಸ್ತಾರವಾದ ವಿವರಣೆಯಿದೆ. ಅದನ್ನು ಇನ್ನೊಮ್ಮೆ ನೋಡೋಣ. 

Thursday, May 15, 2025

ಸುಗುಣೆಯರು ಹದಿನಾರುಸಾವಿರ


ನಾವು ನಮ್ಮ ನಮ್ಮ ಅನುಭವಗಳಲ್ಲಿ ಕಂಡಂತೆ, ಪ್ರಪಂಚದಲ್ಲಿ ಸಂಬಂಧಗಳು ಬಹಳ ವಿಚಿತ್ರವಾದವು. ಮನುಷ್ಯ-ಮನುಷ್ಯರುಗಳ ಸಂಬಂಧಗಳೇ ಅನೇಕ ವೇಳೆ ನಮಗೆ ಅರ್ಥವಾಗುವುದಿಲ್ಲ. "ಅವರು ನೋಡಿದರೆ ಹಾಗೆ. ಇವರು ನೋಡಿದರೆ ಹೀಗೆ. ಒಂದು ಉತ್ತರ ಧ್ರುವ. ಒಂದು ದಕ್ಷಿಣ ಧ್ರುವ. ಆದರೆ ಕಿತ್ತರೆ ಕೀಳದಂತೆ ಇರುತ್ತಾರೆ. ಅವರ ಸಂಬಂಧವೇ ಅರ್ಥ ಆಗುವುದಿಲ್ಲ" ಎಂದು ಹೇಳುತ್ತಿರುತ್ತೇವೆ. ಇನ್ನು ಭಕ್ತ-ಭಗವಂತನ ಸಂಬಂಧಗಳು ನಮಗೆ ತಿಳಿಯುವುದಾದರೂ ಹೇಗೆ? ಶರಣಶ್ರೇಷ್ಠರಾದ ಅಲ್ಲಮ ಪ್ರಭುಗಳ ಈ ಕೆಳಕಂಡ ವಚನ ಸಂಬಂಧಗಳ ವಿಚಿತ್ರ ರೀತಿಯ ಜೊತೆ, ಭಕ್ತ-ಭಗವಂತನ ಸಂಬಂಧದ ಸೊಗಸನ್ನೂ ಹೇಳುತ್ತದೆ:

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುಂದ್ರದೊಳಗಣ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಅನೇಕ ಸಂದರ್ಭಗಳಲ್ಲಿ ಯಾರೋ ಇಬ್ಬರ ನಡುವೆ ಇರುವ ಅನ್ಯೋನ್ಯತೆ, ಆತ್ಮೀಯತೆಗಳು ಬೇರೆಯರಿಗೆ ಅರ್ಥವಾಗುವುದು ಒತ್ತಟ್ಟಿಗಿರಲಿ; ಅದು ಅತ್ಯಂತ ಅಪಾರ್ಥವೂ ಆಗುವುದು ಕಂಡುಬರುವುದು. ಸಾಮಾನ್ಯ ಜನರ ನಡುವಣ ಸಂಬಂಧವೇ ಹೀಗಿರಬೇಕಾದರೆ ಭಕ್ತ-ಭಗವಂತ ಸಂಬಂಧಗಳು ಪ್ರಾಪಂಚಿಕ ದೃಷ್ಟಿಯಿಂದ ಬಲು ವಿಚಿತ್ರವಾಗಿರುವುದು ಏನು ವಿಶೇಷ?  

"ಜಾಣೆಯರ ಅರಸ" ಎನ್ನುವ ಹಿಂದಿನ ಸಂಚಿಕೆಯಲ್ಲಿ ಶ್ರೀಕೃಷ್ಣನು ನರಕಾಸುರನ ವಧೆ ಆದ ನಂತರ ಅವನ ಸೆರೆಯಲ್ಲಿದ್ದ ಹದಿನಾರುಸಾವಿರ ರಾಜಕುಮಾರಿಯರನ್ನು ಮದುವೆಯಾದದ್ದು ಚರ್ಚಿಸಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). "ಜಾಣೆಯರರಸ" ಎನ್ನುವುದರ ಬದಲು "ಸುಗುಣಿಯರರಸ" ಎನ್ನುವ ಪಾಠಾ೦ತರ "ಯಾರೇ ರಂಗನ ಕರೆಯಬಂದವರು" ಹಾಡಿನಲ್ಲಿ ಇರುವುದು ಏಕೆ? ಈ ಹದಿನಾರುಸಾವಿರ ರಾಜಕುಮಾರಿಯರು ಯಾರು? ಶ್ರೀಕೃಷ್ಣನು ಅವರನ್ನು ಏಕೆ ವಿವಾಹವಾದ? ಈ ಪ್ರಶೆಗಳು ಹುಟ್ಟಿದ್ದವು. ಅವುಗಳ ಪರಿಹಾರ ಹೇಗೆ ಎನ್ನುವ ವಿಷಯವನ್ನು ಈಗ ನೋಡೋಣ. 

*****

ಅನೇಕ ಭಕ್ತರು ಪರಮಾತ್ಮನನ್ನು ಉದ್ದೇಶಿಸಿ ತಪಸ್ಸು, ಸಾಧನೆಗಳನ್ನು ಮಾಡುತ್ತಾರೆ. ಅವನ ಸಾಕ್ಷಾತ್ಕಾರ ಆದಾಗ ತಮಗೆ ಏನು ಬೇಕು ಎಂದು ಈ ತಪಸ್ಸುಗಳನ್ನು ಮಾಡಿದರೋ ಅವನ್ನು ಬೇಡುತ್ತಾರೆ. "ನಿನ್ನೊಡನೆ ಯುದ್ಧದಲ್ಲಿ ಹೋರಾಡಿ ಸಾಯಬೇಕು" ಎಂದು ವೃಷಭಾಸುರನು ಕೇಳಿದ್ದನ್ನೂ, ಆ ಹೋರಾಟ ನಡೆದ ನೆನಪಿನಲ್ಲಿ ತಿರುಪತಿಯ ಬೆಟ್ಟಕ್ಕೆ "ವೃಷಭಾಚಲ" ಎಂದು ಹೆಸರು ಬಂದಿರುವುದನ್ನೂ "ಪದ್ಮ ಪುರಾಣ" ಹೇಳುತ್ತದೆ. "ಶ್ರೀನಿವಾಸ ಕಲ್ಯಾಣ" ಕಥೆ ಕೇಳಿದವರು ಇದನ್ನು ಬಲ್ಲರು. ಮುಚುಕುಂದ ಚಕ್ರವರ್ತಿಯು ತಡೆಯಿಲ್ಲದ ಬಹುಕಾಲದ ನಿದ್ರೆ ಕೇಳಿದನಂತೆ. ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವ ಸಲುವಾಗಿ ತಪಸ್ಸು ಮಾಡಿದ ಧ್ರುವನು ವಾಸುದೇವನನ್ನು ಕಂಡ ತಕ್ಷಣ "ನನಗೆ ಏನೂ ಬೇಡ. ನಿನ್ನ ಜೊತೆ ಕರೆದುಕೊಂಡು ಹೋಗು" ಎಂದನಂತೆ. ನಿನ್ನಂತಹ ಮಗ ಬೇಕು ಎಂದು ಕೇಳಿದವರು ಅನೇಕರು. ಹೀಗುಂಟು. 

ಅಗ್ನಿಗೆ ಒಮ್ಮೆ ಹದಿನಾರು ಸಾವಿರ ಮಕ್ಕಳು ಒಟ್ಟಾಗಿ ಜನಿಸಿದರಂತೆ. ಅವರೆಲ್ಲರೂ ಶ್ರೀಹರಿಯನ್ನು ಉದ್ದೇಶಿಸಿ ಬಹಳ ದೀರ್ಘವಾದ, ಘೋರವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪ್ರತ್ಯಕ್ಷನಾದಾಗ ಅವನನ್ನು ಕಂಡು ಮೈಮರೆತರು. ಏನು ಬೇಕೆಂದು ಕೇಳಿದಾಗ "ನೀನು ನಮ್ಮನ್ನು ಮದುವೆ ಆಗು" ಎಂದು ಬೇಡಿದರು. ಅಗ್ನಿ ಪುತ್ರರಾದ ಈ ಋಷಿಗಳ ಕೋರಿಕೆ ಮನ್ನಿಸಲೇಬೇಕಾಯಿತು. ಶ್ರೀಹರಿಯು ನಸುನಗುತ್ತಾ "ಆಯಿತು. ನಿಮ್ಮ ಇಷ್ಟದಂತೆಯೇ ಆಗಲಿ. ಆದರೆ ಅದಕ್ಕೆ ತಕ್ಕ ಕಾಲ ಬರಬೇಕು. ಮುಂದೆ ಶ್ರೀಕೃಷ್ಣಾವತಾರ ಆದಾಗ ನೀವೆಲ್ಲರೂ ರಾಜಕುಮಾರಿಯರಾಗಿ ಹುಟ್ಟುವಿರಿ. ಆಗ ನಿಮ್ಮನ್ನು ಮದುವೆ ಆಗುತ್ತೇನೆ" ಎಂದು ವರ ಕೊಟ್ಟನು. ಈ ಋಷಿಗಳೇ ದ್ವಾಪರದಲ್ಲಿ ರಾಜಕುಮಾರಿಯರಾಗಿ ಹುಟ್ಟಿ ನರಕಾಸುರನ ಸೆರೆಮನೆ ಸೇರಿದರು. ನರಕಾಸುರನ ವಧೆ ಆದ ನಂತರ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ದ್ವಾರಕೆಗೆ ಕರೆತಂದನು. 

ಭಕ್ತರ ಕೋರಿಕೆಗಳನ್ನು ಪರಮಾತ್ಮನು ಒಮ್ಮೊಮ್ಮೆ ತನಿ-ತನಿಯಾಗಿ (ತನಿ ಅನ್ನುವುದು ಕನ್ನಡ ಪದ. ನಾವು ಮರ್ತೆ ಬಿಟ್ಟಿದ್ದೇವೆ. ಬಿಡಿ ಬಿಡಿಯಾಗಿ ಎಂದು ಅದರ ಅರ್ಥ) ನೆರವೇರಿಸುತ್ತಾನೆ. ಕೆಲವೊಮ್ಮೆ ಅನೇಕ ಜನರ ಕೋರಿಕೆಗಳನ್ನು ಒಟ್ಟಾಗಿ ತೀರಿಸುತ್ತಾನೆ. ನಮ್ಮ ಸುಪ್ರೀಂ ಕೋರ್ಟ್ "ಅನೇಕ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಲೇವಾರಿ ಮಾಡಿತು" ಎನ್ನುವಂತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ.  ಇಷ್ಟು ಜನ ಋಷಿಗಳ ಕೋರಿಕೆಯನ್ನು ಒಟ್ಟಾಗಿ ತೀರಿಸಿದುದು, ಮತ್ತು ಇನ್ನೂ ಅನೇಕರ ಕೋರಿಕೆಗಳ ಕಾರಣ ಮದುವೆಗಳು ಆದದ್ದು ಸೇರಿ ಶ್ರೀಕೃಷ್ಣನಿಗೆ ಒಟ್ಟು ಹದಿನಾರು ಸಾವಿರದ ನೂರಾ ಎಂಟು ಹೆಂಡಿರಾದರು. 

*****

ಶ್ರೀಪುರಂದರದಾಸರು ಈ ಸಂದರ್ಭವನ್ನು ತಿಳಿಸಲು "ಜಾಣೆಯರರಸ" ಎಂದು ಪ್ರಯೋಗಿಸಿದರು. ಶ್ರೀ ಕನಕದಾಸರು ಇದನ್ನೇ "ಸುಗುಣೆಯರು" ಎಂದರು. ಶ್ರೀಕೃಷ್ಣನು "ಸುಗುಣಿಯರರಸ" ಎಂದು ಪಾಠಾ೦ತರವಾಯಿತು. 

ಈ ಸಂದರ್ಭವನ್ನು ವಿವರಿಸುವ ಶ್ರೀಕನಕದಾಸರ "ಹರಿಭಕ್ತಿಸಾರ" ಕೃತಿಯ ಭಾಮಿನೀಷಟ್ಪದಿಯ ಮೂವತ್ತೊಂಬತ್ತನೆಯ ಪದ್ಯ ಈ ರೀತಿಯಿದೆ:

ಮಗನಕೊಂದವನಾಳುವಂತಾ 
ಸುಗುಣೆಯರು ಹದಿನಾರುಸಾವಿರ 
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ 
ಬಗೆಬಗೆಯ ರತಿಕಲೆಗಳಲಿ 
ಕೂರುಗವ ನಾಟಿಸಿ ಮೆರೆದು ನೀ ನೀ 
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ

ಕುಬ್ಜೆ ಎಂಬುವವಳು ನೋಡಲು ವಿಕಾರವಾಗಿದ್ದಳು. ಅವಳು ಶಾಪದ ಫಲವಾಗಿ ಈ ರೀತಿ ಹುಟ್ಟಿದ ಅಪ್ಸರೆ. ಕಂಸನಿಗೆ ಪ್ರತಿದಿನ ಗಂಧ ತೇಯ್ದು ಅಲಂಕಾರಕ್ಕಾಗಿ ಒಪ್ಪಿಸುವುದು ಅವಳ ಕೆಲಸ. ಎಂಟು ವರ್ಷದ ಕೃಷ್ಣ ಸೋದರಮಾವ ಕಂಸನ ಆಹ್ವಾನದ ಮೇರೆಗೆ "ಬಿಲ್ಲುಹಬ್ಬ" ನೆಪದಲ್ಲಿ ಮಥುರೆಗೆ ಹೋದ. ಅಲ್ಲಿ ಅವಳನ್ನು ಕಂಡು ಅವಳ ಡೊಂಕನ್ನು ಸರಿಮಾಡಿ ನೆಟ್ಟಗೆ ಮಾಡಿದ. ಅವಳು ಭಕ್ತಿಯಿಂದ ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಿದಳು. ಮುಂದೆ ಕೃಷ್ಣನು ಅವಳನ್ನು ವಿವಾಹವಾದ. ಅವರಿಗೆ "ವಿಶೋಕ" ಎನ್ನುವ ಮಗ ಹುಟ್ಟಿದ. ಮಹಾಭಾರತ ಯುದ್ಧ ಆದಾಗ ಈ ವಿಶೋಕ ಭೀಮಸೇನನ ರಥದ ಸಾರಥಿಯಾಗಿ ಕೆಲಸ ಮಾಡಿದ ಎಂದು ಮಹಾಭಾರತದಿಂದ  ತಿಳಿದು ಬರುತ್ತದೆ.

*****

ಇಷ್ಟು ಮಂದಿ ಹೆಂಡಿರ ಜೊತೆ ಶ್ರೀಕೃಷ್ಣ ಹೇಗೆ ಸಂಸಾರ ಮಾಡಿದ ಎಂದು ನೋಡುವ ಕುತೂಹಲ ದೇವರ್ಷಿ ನಾರದರಿಗೆ ಉಂಟಾಯಿತು. ದ್ವಾರಕೆಗೆ ಹೋದರು. ಶ್ರೀಕೃಷ್ಣನ ಮೊದಲಿನ ಮನೆಗೆ ಬಂದರು. ಶ್ರೀಕೃಷ್ಣ ಬಾವಿಯಲ್ಲಿ ನೀರು ಸೇದಿ ತುಂಬುತ್ತಿದ್ದ. "ದೇವರ್ಷಿಗಳು ಬರಬೇಕು. ಎಂತಹ ಭಾಗ್ಯ. ದಯಮಾಡಿಸಿ" ಎಂದು ಕರೆದು ಸತ್ಕರಿಸಿದ. ಎಲ್ಲಾ ಆದ ಮೇಲೆ ಎರಡನೇ ಮನೆಗೆ ಹೋದರು. ಅಲ್ಲಿ ಕೃಷ್ಣ ಮಗುವಿಗೆ ನೀರು ಹಾಕಿ ಮೈ ಒರೆಸುತ್ತಿದ್ದ. "ಬನ್ನಿ, ಬನ್ನಿ, ದೇವರ್ಷಿಗಳೇ!" ಎಂದು ಸ್ವಾಗತಿಸಿದ. ಉಪಚಾರ ಪಡೆದು ಮುಂದೆ ಹೊರಟರು. ಮೂರನೆಯ ಮನೆಯಲ್ಲಿ ಶ್ರೀಕೃಷ್ಣ ಮನೆಗೆ ಅಲಂಕಾರ ಮಾಡುತ್ತಿದ್ದ, "ಇದೇನು ನಮ್ಮ ಪುಣ್ಯ! ನಾರದರು ದಯಮಾಡಿಸಬೇಕು" ಎಂದು ಕೃಷ್ಣ ಉಪಚರಿಸಿದ. ಹೀಗೆ ಇನ್ನೂ ಕೆಲವು ಕಡೆ ಆಯಿತು. ಒಂದೊಂದು ಮನೆಯಲ್ಲಿ ಒಂದೊಂದು ರೀತಿ. ನಾರದರು ಮುಂದೆ ಹೋಗುವುದನ್ನೇ ಬಿಟ್ಟರು!

ಭಾಗವತದಲ್ಲಿ ಈ ಪ್ರಸಂಗಗಳೆಲ್ಲ ವಿವರವಾಗಿ ವರ್ಣಿತವಾಗಿವೆ. 

Monday, May 12, 2025

ಜಾಣೆಯರ ಅರಸ


ದಿನಕ್ಕೆ ಇಪ್ಪತ್ತನಾಲ್ಕು ಗಂಟೆಯಂತೆ ನೂರಾರು ಚಾನಲ್ ಮೂಲಕ ಒಂದೇಸಮನೆ ಟೆಲಿವಿಷನ್ ಪ್ರಸಾರ ಇಲ್ಲದಿದ್ದ ಕಾಲ. ಯಾವುದೋ ಸಮಾರಂಭದಲ್ಲಿ ನಮಗೆ ತಿಳಿಯದಿದ್ದವರು ಯಾರೋ ಒಬ್ಬರು ಒಂದು ಒಳ್ಳೆಯ ಹಾಡು ಹಾಡಿದರು. ನಮ್ಮ ತಾಯಿಗೋ, ದೊಡ್ಡಮ್ಮ- ಚಿಕ್ಕಮ್ಮನಿಗೋ, ಅಕ್ಕನಿಗೋ ಆ ಹಾಡು ಬಹಳ ಇಷ್ಟವಾಯಿತು. ತಾನೂ ಕಲಿಯಬೇಕು ಅನಿಸಿತು. ಹತ್ತಿರದಲ್ಲಿದ್ದ ನಮ್ಮಂತಹ ಹುಡುಗರನ್ನು ಕರೆದು "ಅವರು ಹೇಳಿದ ಹಾಡು ಚೆನ್ನಾಗಿದೆ. ಸ್ವಲ್ಪ ಕೇಳಿ ಬರೆದುಕೋ" ಎಂದು ಹೇಳುತ್ತಿದ್ದ ಸಮಯ. ಅಲ್ಲಿ ಯಾರಿಂದಲೋ ಒಂದು ಕಾಗದ, ಒಂದು ಪೆನ್ನು ಪಡೆದು, ಅವರಬಳಿ ಕುಳಿತು, ಮತ್ತೊಮ್ಮೆ ಹಾಡುವಂತೆ ಒಲಿಸಿ, ಹಾಡಿಸಿ, ಬರೆದುಕೊಳ್ಳಬೇಕಿತ್ತು. ಈಗ ಹೇಳುವವರೂ ಹೀಗೆಯೇ ಮತ್ಯಾರಿಂದಲೋ ಕಲಿತದ್ದು. ಈ ರೀತಿ ಒಬ್ಬರಿಂದ ಒಬ್ಬರಿಗೆ ಹರಿದು ಬರುತ್ತಾ ಇರುತ್ತಿದ್ದ ಆ ಹಾಡುಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇರುತ್ತಿದ್ದವು. ಹೀಗೆ ಬಂದ ವ್ಯತ್ಯಾಸಗಳನ್ನು "ಪಾಠಾ೦ತರ" ಅನ್ನುತ್ತಿದ್ದರು. ಹಾಡುಗಳ ಕಲಿಕೆಯ ಆಸಕ್ತಿ ಇದ್ದವರು ಅವರವರ ಹಾಡಿನ ಪುಸ್ತಕಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಿದ್ದರು. ಅವರಿಗೆ ಅವು ಅಮೂಲ್ಯವಾದ ಅಸ್ತಿ. ಈ ರೀತಿ ಬರೆದುಕೊಂಡಿರುವ ಪುಸ್ತಕಗಳು ಕೆಲವು ನಮ್ಮ ಬಳಿ ಈಗಲೂ ಇವೆ. 

ಅನೇಕ ಹಳ್ಳಿಗಳಲ್ಲಿ ಆಗ ವಿದ್ಯುತ್ ದೀಪಗಳು ಇರಲಿಲ್ಲ. ವಿದ್ಯುತ್ ಇದ್ದ ದೊಡ್ಡ ಊರುಗಳಲ್ಲಿಯೂ ಮನೆಗೆ ಒಂದೋ, ಎರಡೋ 40 ಅಥವಾ 60 ಕ್ಯಾಂಡಲ್ ಬಲ್ಬುಗಳು ಇರುತ್ತಿದ್ದವು. ವ್ಯಾಟ್ ಅನ್ನುವ ಪದ ಬಳಕೆಯಲ್ಲಿರಲಿಲ್ಲ. ಈ ಕಾರಣಗಳಿಂದಾಗಿ ಜೀವನ ಚಕ್ರ ಸೂರ್ಯನ ಚಲನೆಯನ್ನೇ ಅವಲಂಬಿಸಿತ್ತು. ಸೂರ್ಯೋದಯವಾಗುವುದಕ್ಕೆ ಕೆಲವು ನಿಮಿಷ ಮುಂಚೆ ಚಟುವಟುಕೆ ಪ್ರಾರಂಭ. ಸೂರ್ಯಾಸ್ತ ಆದ ಸ್ವಲ್ಪ ಸಮಯಕ್ಕೆ ಎಲ್ಲ ಕೆಲಸ ಮುಗಿದು ನಿದ್ದೆಗೆ ಶರಣು. ಶಾಲೆಯಿಂದ ಬಂಡ ಮೇಲೆ ಮನೆಯ ಹೊರಗಡೆ ಆಟಗಳು. ಸೂರ್ಯ ಮುಳುಗುವ ವೇಳೆಗೆ ಮನೆಗೆ ಹಿಂದುರುಗಬೇಕು. ಬಂದ ನಂತರ ಕೈ-ಕಾಲು ತೊಳೆದು ಮಗ್ಗಿ,  ಸ್ತೋತ್ರ, ಹಾಡು ಇತ್ಯಾದಿ ಹೇಳುವುದು. ನಂತರ ಊಟ ಮತ್ತು ನಿದ್ದೆ. ಹೀಗಿತ್ತು ದಿನಚರಿ. 

ಮಕ್ಕಳಿಗೆ ಈ ಸಮಯದಲ್ಲಿ ಹಾಡು-ಹಸೆ, ರಂಗೋಲಿ, ಕಸೂತಿ ಮುಂತಾದುವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ಮಕ್ಕಳಿಗೆ ಸುಲಭವಾದ, ಹೆಚ್ಚಿನ ಒತ್ತಕ್ಷರ, ಸಂಯುಕ್ತಾಕ್ಷರ ಇಲ್ಲದ, ಬೇಗನೆ ನೆನಪಿನಲ್ಲಿ ನಿಲ್ಲುವ ಹಾಡುಗಳಿಂದ ಕಲಿಕೆ ಪ್ರಾರಂಭ. ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಸೌಲಭ್ಯವಿದ್ದ ಮಕ್ಕಳು ಬಹಳ ಕಡಿಮೆ. ಇದ್ದುದರಲ್ಲಿ ತಕ್ಕಮಟ್ಟಿಗೆ ರಾಗ, ತಾಳಗಳನ್ನು ಕಲಿತು ಹಾಡುತ್ತಿದ್ದರು. ಮತ್ತೊಬ್ಬರನ್ನು ಮೆಚ್ಚಿಸುವುದು ಮುಖ್ಯವಾಗಿರಲಿಲ್ಲ. ಚಟುವಟಿಕೆಯ ಜೊತೆ ಸ್ವಲ್ಪ ಸಾಹಿತ್ಯ ಮತ್ತು ಸಂಗೀತಗಳ ಪರಿಚಯ ಮುಖ್ಯ ಗುರಿಯಾಗಿತ್ತು. 
***** 

ಈ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ಮಕ್ಕಳಿಗೆ ಕಲಿಸುತ್ತಿದ್ದ ಸುಲಭವಾದ ಒಂದು ಹಾಡು "ಯಾರೇ ರಂಗನ ಕರೆಯಬಂದವರು" ಎಂಬುದು. ಇದು ಈಗಲೂ ಜನಪ್ರಿಯ. ಒಂದು ಸಾಲಿನಲ್ಲಿ ಎರಡು ಅಥವಾ ಮೂರು ಪದಗಳು. ಎರಡು ಸಾಲಿನ ಒಂದು ನುಡಿ. ಮೂರು ನುಡಿಗಳ ಹಾಡು. ಇದು ಎಲ್ಲರಿಗೂ ಗೊತ್ತಿರುವುದೇ. ಅದು ಹೀಗಿದೆ:  

ಯಾರೇ ರಂಗನ ಯಾರೇ ಕೃಷ್ಣನ 
ಯಾರೇ ರಂಗನ ಕರೆಯಬಂದವರು

ಗೋಪಾಲಕೃಷ್ಣನ ಪಾಪವಿನಾಶನ 
ಈಪರಿಯಿಂದಲಿ ಕರೆಯಬಂದವರು 

ವೇಣುವಿನೋದನ ಪ್ರಾಣಪ್ರಿಯನ 
ಜಾಣೆಯರರಸನ ಕರೆಯಬಂದವರು 

 ಕರಿರಾಜವರದನ ಪರಮಪುರುಷನ 
ಪುರಂದರ ವಿಠಲನ ಕರೆಯಬಂದವರು

ಯಾರೇ ರಂಗನ ಯಾರೇ ಕೃಷ್ಣನ 
ಯಾರೇ ರಂಗನ ಕರೆಯಬಂದವರು

"ಪ್ರಾಣಪ್ರಿಯನ" ಅನ್ನುವಕಡೆ ಕೆಲವರು "ಗಾನಪ್ರಿಯನ" ಎಂದು ಪಾಠಾ೦ತರ ಮಾಡಿ ಹಾಡುವುದೂ ಉಂಟು. ಪುರಂದರದಾಸರು ಮುಖ್ಯಪ್ರಾಣನ ಆರಾಧಕರು. ಹೀಗಾಗಿ ಪ್ರಾಣಪ್ರಿಯನ ಅನ್ನುವುದೇ ಹೆಚ್ಚು ಜನಪ್ರಿಯವಾಗಿದೆ. 

"ಜಾಣೆಯರರಸನ" ಅನ್ನುವಕಡೆ ಹಿಂದೆ ಕೆಲವರು "ಸುಗುಣಿಯರರಸನ" ಎಂದು ಹಾಡುತ್ತಿದ್ದರು. ಈಗ ಅದೂ ಕಡಿಮೆಯಾಗಿದೆ. 

ಈ "ಜಾಣೆಯರರಸನ" ಎಂದರೆ ಏನು? ಇದು ಯಾಕೆ ಪ್ರಯೋಗವಾಗಿದೆ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ಇದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಕನ್ನಡದ ಸಾಹಿತಿ, ಚಲನ ಚಿತ್ರ ನಿರ್ಮಾಪಕ, ನಿರ್ದೇಶಕ, ಪತ್ರಕರ್ತ ಪ್ರೊ. ಪಿ. ಲಂಕೇಶ ಅವರು ನಡೆಸುತ್ತಿದ್ದ ಪತ್ರಿಕೆಯ ಹೆಸರು "ಲಂಕೇಶ್ ಪತ್ರಿಕೆ". ಕನ್ನಡದ ಪತ್ರಿಕೆಗಳನ್ನು ಓದುವವರು ಇದನ್ನು ನೋಡಿರುತ್ತಾರೆ. ಆ ಪತ್ರಿಕೆಗೆ ಒಂದು ಟ್ಯಾಗ್ ಲೈನ್ ಇತ್ತು. "ಕನ್ನಡ ಜಾಣ ಜಾಣೆಯರ ಪತ್ರಿಕೆ" ಎಂದು. 

"ಜಾಣ" ಅಥವಾ "ಜಾಣೆ" ಎಂದರೇನು? ಜಾಣ/ಜಾಣೆ ಎನ್ನಿಸಿಕೊಳ್ಳಬೇಕಾದರೆ ಇರಬೇಕಾದ ಲಕ್ಷಣಗಳೇನು? ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರು ಜಾಣರು ಎನ್ನುವುದು ತಪ್ಪು ಕಲ್ಪನೆ. ನಮ್ಮ ಪರೀಕ್ಷೆಗಳು ಸಾಮಾನ್ಯವಾಗಿ ನೆನಪು ಶಕ್ತಿ ಪರೀಕ್ಷೆ ಮಾಡುವವೇ ಆಗಿರುತ್ತವೆ. ವಿಷಯದ ತಿರುಳು ಅರ್ಥವಾಗಿರದಿದ್ದರೂ ಉರು ಹೊಡೆದು ಪರಿಕ್ಷಕರು ಕೊಟ್ಟ ಎರಡು-ಮೂರು ಘಂಟೆಗಳಲ್ಲಿ ಅವನ್ನು ಪೇಪರ್ ಮೇಲೆ ಇಳಿಸುವವರೆಲ್ಲ ಜಾಣರಲ್ಲ. ಈಗಂತೂ ಬರೆಯುವ ಸಂದರ್ಭವೂ ಇಲ್ಲ. ಪ್ರಶ್ನೆಯಲ್ಲಿಯೇ ಉತ್ತರ ಅಡಗಿರುತ್ತದೆ. ಕೊಟ್ಟ ನಾಲ್ಕು ಉತ್ತರಗಳಲ್ಲಿ ಒಂದನ್ನು ಆರಿಸಿದರೆ ಆಯಿತು!

ಹಾಗಿದ್ದರೆ "ಜಾಣ' ಎನಿಸಿಕೊಳ್ಳಲು ಹೇಗಿರಬೇಕು? ಇದಕ್ಕೆ ಸಮಾನವಾಗಿ ಇಂಗ್ಲಿಷಿನಲ್ಲಿ "ಸ್ಮಾರ್ಟ್" ಎನ್ನುತ್ತಾರೆ. ಗುಣ-ಲಕ್ಷಣಗಳು ಅನೇಕವಿದ್ದರೂ ಮುಖ್ಯವಾದ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು:
  • ಪೇಚು ತಂದೊಡ್ಡುವ ಪರಿಸ್ಥಿತಿಗಳಿಗೆ ಸಿಕ್ಕಿಹಾಕಿಕೊಳ್ಳದಿರುವುದು. 
  • ಅಂತಹ ಎಡವಟ್ಟಿನ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಸಿಕ್ಕಿಹಾಕಿಕೊಂಡಾಗ ಉಪಾಯವಾಗಿ ಬಿಡಿಸಿಕೊಳ್ಳುವುದು. 
  • ಇಂತಹ ಪ್ರಸಂಗಗಳನ್ನು ತನ್ನ ಅನುಕೂಲಕ್ಕೆ ನೆರವಾಗುವಂತೆ ಬಳಸಿಕೊಳ್ಳುವುದು. 
  • ಸಮಯಸ್ಫೂರ್ತಿಯಿಂದ ನಿಂತ ನಿಲುವಿನಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳುವುದು. 
  • ಎದುರಿಗಿರುವವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅದರ ಲಾಭ ಪಡೆದುಕೊಳ್ಳುವುದು. 
  • ಸಾಮಾನ್ಯರು ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತಿಳಿಯುವುದು. 
ಜಾಣತನ ಎಂದರೆ ಕುತಂತ್ರ ಮಾಡುವುದು ಎಂದು ಅರ್ಥವಲ್ಲ. ಇನ್ನೊಬ್ಬರ ಕಡೆಯಿಂದ ಲಾಭ ಪಡೆದುಕೊಳ್ಳುವುದು ಅವರಿಗೆ ಅನ್ಯಾಯ ಮಾಡಿದಂತೆಯೂ ಅಲ್ಲ. ಅವರಿಗೆ ಮೋಸವಾಗದೆ ನಮಗೆ ಲಾಭವಾದರೆ ಅದರಲ್ಲಿ ತಪ್ಪೇನು? 
*****

ಹಿರಣ್ಯ ಕಷಿಪುವಿನ ತಮ್ಮನಾದ ಹಿರಣ್ಯಾಕ್ಷನು ಭೂಮಿಯನ್ನು ಹೊತ್ತುಕೊಂಡು ಅದರ ಅಕ್ಷದಿಂದ (ಆರ್ಬಿಟ್) ಪಲ್ಲಟಗೊಳಿಸಿದನು. ಆಗ ಮಹಾವಿಷ್ಣುವು ವರಾಹ ರೂಪದಿಂದ ಭೂಮಿಯನ್ನು ರಕ್ಷಿಸಿ ತನ್ನ ಕೋರೆದಾಡೆಗಳಿಂದ ಹೊತ್ತು ತಂದು ಅದರ ಅಕ್ಷದ ಮೇಲೆ ಮತ್ತೆ ಸ್ಥಾಪಿಸಿದನು. ಆ ಸಮಯದಲ್ಲಿ ಭೂದೇವಿಯಿಂದ ಅವನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ "ನರಕ" ಎಂದು ಹೆಸರು. ಹುಟ್ಟಿದ ಮಗನಿಗೆ ದೀರ್ಘಾಯುಸ್ಸು ಕೊಡುವಂತೆ ತಾಯಿಯಾದ ಭೂದೇವಿಯು ವರಾಹರೂಪಿ ಮಹಾವಿಷ್ಣುವನ್ನು ಪ್ರಾರ್ಥಿಸಿದಳು. "ಆಗಲಿ. ನೀನು ಅವನ ಮೇಲೆ ಕೋಪಿಸಿಕೊಳ್ಳುವವರೆಗೆ ಅವನಿಗೆ ಆಯುಸ್ಸು" ಎಂದು ವರ ಕೊಟ್ಟನು. ಮಗನ ಮೇಲೆ ಅವನಿಗೆ ಸಾವು ಬರಿಸುವಷ್ಟು ಕೋಪ ಹೆತ್ತವಳಿಗೆ ಎಲ್ಲಿ ಬರಬೇಕು? ತಾಯಿಗೆ ಬಹಳ ಸಂತೋಷವಾಯಿತು. 

ನರಕನು ಬಹಳ ದೊಡ್ಡ ಸಾಮ್ರಾಜ್ಯದ ಅಧಿಪತಿಯಾದನು. ದುಷ್ಟರ ಸಂಗಡ ಸೇರಿ ಲೋಕ ಕಂಟಕನಾದನು. ನರಕನು "ನರಕಾಸುರ" ಆದನು. ಅನೇಕ ರಾಜರನ್ನು ಯುದ್ಧಗಳಲ್ಲಿ ಸೋಲಿಸಿ ಅವರ ವಿವಾಹ ಯೋಗ್ಯ ಹೆಣ್ಣುಮಕ್ಕಳನ್ನು ತಂದು ಸೆರೆಮನೆಯಲ್ಲಿ ಇಟ್ಟನು. (ಇನ್ನೊಂದೆಡೆ ಜರಾಸಂಧನು ಇದೇ ತತ್ವದ ಮೇಲೆ ರಾಜಕುಮಾರರನ್ನು ಸೆರೆಯಲ್ಲಿ ಇಡುತ್ತಿದ್ದನು). ಒಟ್ಟಿನಲ್ಲಿ ಮುಂದೆ ರಾಜರಿಗೆ ಸಂತಾನವೇ ಇಲ್ಲವಾಗಿ ಕಡೆಗೆ ಇಡೀ ಭೂಮಂಡಲದ ಒಡೆತನ ತಮಗೆ ಬರಲಿ ಎಂಬ ದುರಾಸೆಯಿಂದ ಮಾಡಿದುದು ಇದು. 

ಈ ವೇಳೆಗೆ ಕೃಷ್ಣಾವತಾರ ಆಯಿತು. ನರಕಾಸುರನ ಬಾಧೆಯಿಂದ ನೊಂದವರು ಶ್ರೀಕೃಷ್ಣನಿಗೆ ಅವನನ್ನು ಸಂಹರಿಸಲು ವಿನಂತಿ ಮಾಡಿದರು. ಅವನಿಗೆ ತಾಯಿಯ ಕೋಪ ಬರುವವರೆಗೆ ಸಾವಿಲ್ಲ. ಶ್ರೀಕೃಷ್ಣನು ಭೂದೇವಿಯ ಅವತಾರಳಾದ ತನ್ನ ಹೆಂಡತಿ ಸತ್ಯಭಾಮೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ನರಕಾಸುರನ ಮೇಲೆ ಯುದ್ಧಕ್ಕೆ ಹೊರಟನು. ಯುದ್ಧದ ಮಧ್ಯದಲ್ಲಿ ನರಕನ ಆಯುಧದಿಂದ ಏಟು ತಿಂದವಂತೆ, ಅದರಿಂದ ಮೂರ್ಛೆ ಹೋದವನಂತೆ ನಟಿಸಿದನು. ತನ್ನ ಗಂಡ ಹೀಗೆ ಪ್ರಜ್ಞೆ ತಪ್ಪಿದುದನ್ನು ಕಂಡು ಕೋಪಗೊಂಡು ಸತ್ಯಭಾಮೆಯೇ ನರಕನನ್ನು ಕೊಂದಳು. ಒಂದು ರೂಪದ ತಾಯಿಯ ಮಗ ಅವಳ ಮತ್ತೊಂದು ರೂಪದ ಕೋಪದಿಂದ ಸತ್ತನು. 

ಸಾಯುವ ಮುನ್ನ ನರಕನಿಗೆ ತನ್ನ ತಪ್ಪಿನ ಅರಿವಾಲಾಯಿತು. ತಾಯಿ-ತಂದೆಯರನ್ನು ಕ್ಷಮೆ ಬೇಡಿ ಪ್ರಾರ್ಥಿಸಿದನು. "ನಿನ್ನ ಹೆಸರು ಶಾಶ್ವತವಾಗಲಿ. ನೀನು ಸತ್ತ ದಿನವನ್ನು ಜನರು "ನರಕ ಚತುರ್ದಶಿ" ಎಂದು ಆಚರಿಸಲಿ" ಎಂದು ಶ್ರೀಕೃಷ್ಣನು ಅವನಿಗೆ ವರವನ್ನಿತ್ತನು. ಅಂದಿನಿಂದ ನರಕ ಚತುರ್ದಶಿ ಆಚರಿಸುವ ಸಂಪ್ರದಾಯ ಬಂದಿತು. 
*****

ನರಕಾಸುರನೇನೋ ಸತ್ತನು. ಅವನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಸಂಖ್ಯೆಯ ರಾಜಕುಮಾರಿಯರನ್ನು ಶ್ರೀಕೃಷ್ಣನು ಬಂದಿಖಾನೆಯಿಂದ ಬಿಡುಗಡೆ ಮಾಡಿದನು. "ನೀವು ಈಗ ನಿಮ್ಮ ನಿಮ್ಮ ರಾಜಧಾನಿಗಳಿಗೆ ಹೋಗಿ ಸುಖವಾಗಿರಿ" ಎಂದನು. ಆ ರಾಜಕುಮಾರಿಯರೋ ಬಹಳ ಜಾಣೆಯರು! ಇದು ಇಕ್ಕಟ್ಟಿನ ಪರಿಸ್ಥಿತಿ. ಎದುರಿಗೆ ಶ್ರೀಕೃಷ್ಣನಿದ್ದಾನೆ. ಅವನನ್ನೇ ಪೇಚಿನ ಸ್ಥಿತಿಗೆ ಸಿಕ್ಕಿಸಿದರು. ಅದರ ಲಾಭ ಪಡೆದುಕೊಳ್ಳಲು ಯೋಚಿಸಿದರು. "ನೋಡು ಕೃಷ್ಣ. ನಾವು ಇಷ್ಟು ಕಾಲ ನರಕನ ಸೆರೆಮನೆಯಲ್ಲಿ ಇದ್ದವರು. ನಮ್ಮನ್ನು ಯಾರು ಮದುವೆಯಾಗುತ್ತಾರೆ? ನಮಗೆ ಸುಖವಾಗಿ ಬಾಳಲು ಹೇಗೆ ಸಾಧ್ಯ? ಅದು ಈಗಿನ ಪರಿಸ್ಥಿತಿಯಲ್ಲಿ ಆಗದ ಮಾತು. ಇದಕ್ಕೆ ಇರುವುದು ಒಂದೇ ಪರಿಹಾರ. ನಮ್ಮ ಪರಿಸ್ಥಿತಿ ಅರ್ಥವಾಗಿರುವುದು ನಿನಗೊಬ್ಬನಿಗೇ. ಆದ್ದರಿಂದ ನೀನೇ ನಮ್ಮನ್ನು ಲಗ್ನ ಆಗಬೇಕು. ನಾವು ಎಲ್ಲರೂ ಅನ್ಯೋನ್ಯವಾಗಿದ್ದು ನಿನ್ನೊಡನೆ ಸಹಕರಿಸುತ್ತೇವೆ" ಎಂದರು ಆ ಜಾಣೆಯರು. 

ಶ್ರೀಕೃಷ್ಣನು ಅವರೆಲ್ಲರನ್ನೂ ಮದುವೆಯಾಗಿ ದ್ವಾರಕೆಗೆ ಕರೆತಂದನು. ಪ್ರತಿಯೊಬ್ಬರಿಗೂ ಬೇರೆ ಬೇರೆ ಮನೆ ಮಾಡಿಕೊಟ್ಟನು. ಅವರೆಲ್ಲರಿಗೂ ಮಕ್ಕಳಾದುವು. ಅವರೆಲ್ಲರ ಜೊತೆ ಸಂಸಾರ ಮಾಡಿದನು. ಬೇರೆ ಬೇರೆ ಸಂದರ್ಭಗಳಲ್ಲಿ ಮದುವೆಯಾದವರೂ ಸೇರಿ ಅವನಿಗೆ ಒಟ್ಟು ಹದಿನಾರು ಸಾವಿರದ ನೂರಾಎಂಟು ಹೆಂಡಿರಾದರು. ಒಮ್ಮೆ ನಾರದರು ಅವನ ಸಂಸಾರದ ಪರೀಕ್ಷೆ ಮಾಡಲು ಬಂದು ಆಶ್ಚರ್ಯ ಪಟ್ಟಿದ್ದು ಕಥೆಗಳಲ್ಲಿ ವಿವರವಾಗಿ ಬಂದಿದೆ. 

"ಜಾಣೆಯರರಸ" ಎನ್ನುವ ಮೇಲಿನ ದೇವರನಾಮದ ಒಂದು ಪದಕ್ಕೆ ಈ ಹಿನ್ನೆಲೆ ಇದೆ!

*****

"ಜಾಣೆಯರರಸ" ಎನ್ನುವುದನ್ನು ನೋಡಿಯಾಯಿತು. ಇನ್ನೂ "ಸುಗುಣಿಯರರಸ" ಎನ್ನುವ ಪಾಠಾ೦ತರದ ವಿಷಯ ಬಾಕಿ ಉಳಿಯಿತು. ಈ ಹದಿನಾರು ಸಾವಿರ ರಾಜಕುಮಾರಿಯರು ನಿಜವಾಗಿ ಯಾರು? ಶ್ರೀಕೃಷ್ಣನು ಅವರನ್ನು ಏಕೆ ಮದುವೆಯಾಗಲು ಒಪ್ಪಿದನು? 

ಈ ಸಂಚಿಕೆ ಈಗಲೇ ದೀರ್ಘವಾಯಿತು. ಆದ್ದರಿಂದ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಸಂಚಿಕೆಗಳಲ್ಲಿ ಹುಡುಕೋಣ, 

Saturday, May 10, 2025

ಹರೆಯವೆಂಬ ಮಾಂತ್ರಿಕನ ಮಾಟ


ಹಿಂದಿನ ಒಂದು ಸಂಚಿಕೆಯಲ್ಲಿ "ಅನ್ನದ ಹಾಹಾಕಾರ" ಎನ್ನುವ ಶೀರ್ಷಿಕೆಯಡಿ 1965 ಮತ್ತು 1971 ಇಸವಿಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧಗಳ ಪ್ರಸ್ತಾಪ, ಆ ಕಾಲದ ಹಸಿದವರ "ಅನ್ನದ ಹಾಹಾಕಾರ", ಮತ್ತು "ಸಮಬಗೆಯ ಸಮ ಸುಖದ ಸಮ ದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿರುವ ಹೊಸ ನಾಡಿನ ಕಟ್ಟುವಿಕೆ" ಬಗ್ಗೆ ಖ್ಯಾತ ನವ್ಯ ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು ಹೊಸ ನಾಡೊಂದನು" ಏನುವ ಕವನದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಇದನ್ನು ಮೆಲಕು ಹಾಕಿ ಓದಲು ಇಲ್ಲಿ ಕ್ಲಿಕ್ ಮಾಡಿ, 

ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ ಯಾರಾದರೂ ಒಂದು ವಿಷಯ ಪ್ರಸ್ತಾಪ ಮಾಡಿ, ಸ್ವಲ್ಪ ಸಮಯದಲ್ಲಿಯೇ ಅದು ಎಡವಟ್ಟಾದರೆ "ನೀನು ಹೇಳಿದೆಯಪ್ಪಾ. ನೋಡು, ಹೇಗಾಯಿತು!" ಎಂದು ಉದ್ಗರಿಸುವುದು ವಾಡಿಕೆ. ಅದರಂತೆ ಅಂದೇ (22 ಏಪ್ರಿಲ್ 2025) ಕಾಶ್ಮೀರದ ಪಹಲ್ಗಮ್ ದುರಂತ ಉದ್ಭವಿಸಿ ಎರಡು ದೇಶಗಳ ನಡುವೆ ಮತ್ತೊಮ್ಮೆ ಕದನ ನಡೆದು, ಇಂದು "ಕದನವಿರಾಮ" ಘೋಷಣೆ ಆಗಿದೆ. ಘೋಷಣೆ ಆದರೂ ಅದು ಸ್ಥಿರವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದು ಶಾಶ್ವತ ಪರಿಹಾರ ಸಿಕ್ಕಿ ಶಾಂತಿಯುತ ಬಾಳ್ವೆಗೆ ಅವಕಾಶವಾಗಲಿ ಎಂದು ಪ್ರಾರ್ಥಿಸೋಣ. 

ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರಿಗೂ ಬೇಕಾಗಿರುವ ಸ್ಥಿತಿ. ಅಡಿಗರ ಕವನದ ಸಾಲುಗಳನ್ನು ಮತ್ತೆ ನೆನಪು ಮಾಡಿಕೊಳ್ಳೋಣ. 

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ 
ಹರೆಯದೀ ಮಾಂತ್ರಿಕನ  ಮಾಟ ಮಸಳುವ ಮುನ್ನ 
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ 
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ 

ಕಟ್ಟುವೆವು ನಾವು ಹೊಸ ನಾಡೊಂದನು 
ರಸದ ಬೀಡೊಂದನು; ಸುಖದ ಬೀಡೊಂದನು

ಇಲ್ಲಿ ಬರುವ "ಹರೆಯದ ಮಾಂತ್ರಿಕನ ಮಾಟ" ಎನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಸುಮಾರು ಎರಡು ದಶಕಗಳಿಗೂ ಹಿಂದಿನ ಮಾತು. ಜೊತೆಯಲ್ಲಿ ಉದ್ಯೋಗದಲ್ಲಿದ್ದ ಮಿತ್ರರೊಬ್ಬರ ಮನೆಗೆ ಯಾವುದೋ ಕಾರ್ಯ ನಿಮಿತ್ತ ಹೋಗಬೇಕಾಯಿತು. ಅನೇಕ ವರ್ಷಗಳ ಪರಿಚಯದಿಂದ ಬಂದಿದ್ದ ಸಲುಗೆ. ಅವರ ಮನೆ ಮಂದಿಯೆಲ್ಲಾ ಚೆನ್ನಾಗಿ ಗೊತ್ತು. ಅವರ ಮನೆಯ ಗೇಟ್ ಬಳಿ ಹೋಗುತ್ತಿದ್ದಾಗಲೇ ಮನೆಯ ಒಳಗಡೆ ನಡೆಯುತ್ತಿದ್ದ ವಾಗ್ವಾದ ಕೇಳಿಸುತ್ತಿತ್ತು. ಅವರ ಕುಟುಂಬದ ಎಲ್ಲರಿಗೂ ಗಂಟಲು ಸ್ವಲ್ಪ ದೊಡ್ಡದೇ. ಪ್ರೀತಿಯಿಂದ ಮಾತಾಡುತ್ತಿದ್ದರೂ ಜಗಳದಂತೆಯೇ ಇರುತ್ತಿತ್ತು. "ನಮ್ಮ ಮನೆಯಲ್ಲಿ ಗುಟ್ಟು ಅನ್ನುವುದೇ ಇಲ್ಲ ಸ್ವಾಮಿ. ನಮ್ಮ ಕುಟುಂಬದವರ ಮಾತೇ ಹಾಗೆ. ಏನು ಮಾತಾಡಿದರೂ ಬೀದಿಯವರಿಗೆಲ್ಲಾ ಗೊತ್ತು." ಎಂದು ಅವರೇ ತಮಾಷೆಗೆ ಹೇಳುತ್ತಿದ್ದರು.

ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರು. ಅವರಿಗೋ ಇನ್ನೆರಡು ವರ್ಷದಲ್ಲಿ ಉದ್ಯೋಗದಿಂದ ನಿವೃತ್ತಿ ಆಗುವುದಿತ್ತು. ಅದರೊಳಗೆ ಇಬ್ಬರಿಗೂ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ಅವರ ಆಸೆ. (ಮಕ್ಕಳಿಗೆ ಮದುವೆ ಮಾಡಿದರೆ ಒಂದು ಜವಾಬದ್ದಾರಿ ಕಳೆಯಿತು ಅನ್ನುವುದು ಒಂದು ಭ್ರಾಂತಿ. ಅನೇಕ ಸಲ ಅದು ಇನ್ನೂ ಹೆಚ್ಚಿನ ಜವಾಬ್ದಾರಿಗಳಿಗೆ ಹೆದ್ದಾರಿ ಆಗುವುದೂ ಉಂಟು. ಎಲ್ಲೊ ಕೆಲವರಿಗೆ ಸ್ವಲ್ಪ ನಿರಾಳ ಆಗಿರಬಹುದು). ಮಗಳು ಯಾವ ವರ ಬಂದರೂ ಒಂದಲ್ಲ ಒಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು. ಮಗನು ಯಾವ ಹುಡುಗಿ ಬಂದರೂ "ಸರಿ, ಒಪ್ಪಿದೆ." ಎನ್ನುತ್ತಿದ್ದ.  ಮನೆಯಲ್ಲಿ ನಡೆಯುತ್ತಿದ್ದ ಮಾತು-ಕತೆಯ ಹಿನ್ನೆಲೆ ಹೀಗಿತ್ತು. 

ಮನೆಯೊಳಗೆ ಹೋದ ಕೂಡಲೇ ವಿಷಯ ಗೊತ್ತಾಯಿತು. ಹಿಂದಿನ ದಿನ ಮಗನಿಗೆ ನೋಡಿದ್ದ ಹುಡುಗಿ ವಿಷಯ ಮಾತಾಡುತ್ತಿದ್ದರು. ಅಪ್ಪ-ಅಮ್ಮ-ತಂಗಿ ಮೂವರಿಗೂ ಹುಡುಗಿ ಇಷ್ಟವಿಲ್ಲ. ಮಗ ಮಾತ್ರ ಎಂದಿನಂತೆ ಈಗಲೂ ಒಪ್ಪಿದ್ದ. ನನ್ನನ್ನು ಹೊರಗಿನವನು ಎಂದು ಭಾವಿಸದೆ ಅವರ ಚರ್ಚೆ ಮುಂದುವರೆಯಿತು. "ಇವನು ಯಾವ ಹುಡುಗಿ ಬಂದರೂ ಒಪ್ಪಿದ್ದೇನೆ ಆನ್ನುತ್ತಾನೆ. ವಯಸ್ಸಿಗೆ ಬಂದರೆ ಕತ್ತೆಯೂ ಚನ್ನಾಗಿ ಕಾಣುತ್ತದೆ" ಎಂದರು ಅಪ್ಪ. ಮಗನಿಗೆ ನ್ಯಾಯವಾಗಿಯೇ ಕೋಪ ಬಂತು. ಘರ್ಷಣೆ ಆಗುವ ಹಂತಕ್ಕೆ ಮಾತು ಬೆಳೆಯುವ ಸೂಚನೆ ಕಂಡಿತು. ವಾತಾವರಣ ತಿಳಿಗೊಳಿಸಲು ನಾನು ಮಿತ್ರರನ್ನು ಕೇಳಿದೆ: "ನೀವು ಹೇಳಿದ್ದು ಅರ್ಥವಾಗಲಿಲ್ಲ. ವಯಸ್ಸಿಗೆ ಬಂದರೆ ಕತ್ತೆಯೂ ಚೆನ್ನಾಗಿ ಕಾಣುತ್ತದೆ ಎಂದಿರಿ. ಅಂದರೆ ಏನು ಅರ್ಥ? ಹುಡುಗ ಅಥವಾ ಹುಡುಗಿಗೆ ವಯಸ್ಸು ಬಂದರೆ ಕತ್ತೆ ಚೆನ್ನಾಗಿ ಕಾಣುತ್ತದೆ ಎಂದೋ, ಅಥವಾ ಕತ್ತೆಗೆ ವಯಸ್ಸು ಬಂದಾಗ ಅದು ಅದನ್ನು ನೋಡುವವರಿಗೆಲ್ಲಾ ಚೆನ್ನಾಗಿ ಕಾಣುತ್ತದೆ ಎಂದೋ? ನನಗೆ ತಿಳಿದಂತೆ ಕತ್ತೆಯ ಮರಿ ನೋಡಲು ಚೆನ್ನಾಗಿರುತ್ತದೆ" ಎಂದೆ. 

ವಾತಾವರಣ ತಿಳಿ ಆಯಿತು. "ನೀವು ಬಿಡಿ ಮಾರಾಯರೆ. ಎಲ್ಲದರಲ್ಲೂ ಹಾಸ್ಯ ಹುಡುಕುತ್ತೀರಿ" ಅಂದರು ಹುಡುಗನ ತಾಯಿ. ಕಾಫಿ ಮತ್ತು ಕೋಡುಬಳೆ ಹಿಡಿದು ಬಂದಿದ್ದರು. ಎಲ್ಲರ ಗಮನ ಅವುಗಳ ಕಡೆ ಹೋಯಿತು. ಕದನವಿರಾಮ ಬಂದಂತಾಯಿತು. ನನ್ನ ಕೆಲಸ ಮುಗಿಸಿ ಹೊರಟು ಬಂದೆ. ನಾನು ಹೊರಬಂದ ನಂತರ ಮಾತಿನ ಗುದ್ದಾಟ ಮುಂದುವರೆದಿರಬಹುದು. ಏನಾಯಿತು ಎಂದು ನಾನು ಅಕ್ಕ-ಪಕ್ಕದ ಮನೆಯವರನ್ನು ಕೇಳಲಿಲ್ಲ. 

*****

ಹರೆಯವೆಂಬ ಮಾಂತ್ರಿಕನ ಮಾಯಾಜಾಲ ಅಂತಹುದು. ಅದು ನಿಜಕ್ಕೂ ಮಾಟವೇ ಹೌದು. ಹಿಂದೆಲ್ಲ ಕೆಲವರು ಮಾಟ-ಮಂತ್ರಗಳನ್ನು ಬಹಳವಾಗಿ ನಂಬಿದ್ದರು. ಅಮಾವಾಸ್ಯೆಯ ಮಾರನೆಯ ದಿನ ಬೆಳಿಗ್ಗೆ ರಸ್ತೆಯಲ್ಲಿ ನಡೆದು ಹೋದರೆ ನಾಲ್ಕು ರಸ್ತೆಗಳು ಸೇರುವ ಕಡೆ ಕೆಂಪು ಹೆಚ್ಚಿದ ನಿಂಬೆಹಣ್ಣು ಹೋಳುಗಳು ಕಾಣುತ್ತಿದ್ದವು. ಓಡಾಡುವವರು ಕಷ್ಟಪಟ್ಟು ರಸ್ತೆಯ ಕೊನೆಯಲ್ಲಿ ಹಾದು ಅವುಗಳ ಮಧ್ಯೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವರು ಮದ್ದು ಹಾಕುವುದರಲ್ಲಿ ನಿಸ್ಸೀಮರು ಎಂದು ಪಿಸುಮಾತು ಕೇಳಿಬರುತ್ತಿತ್ತು. "ಅವರ ಮನೆಯಲ್ಲಿ ಏನನ್ನಾದರೂ ತಿಂದೀಯೆ, ಜೋಕೆ. ಮೊಸರನ್ನವನ್ನಂತೂ ನೋಡಲೂಬೇಡ" ಎಂದು ಮಕ್ಕಳಿಗೆ ತಾಯಂದಿರು ಎಚ್ಚರಿಸುತ್ತಿದ್ದರು. ಮದ್ದು ಹಾಕುವವವರಂತೆ ಊರಿನಲ್ಲಿ ಅದನ್ನು ತೆಗೆಯುವ ಪ್ರವೀಣರೂ ಇರುತ್ತಿದ್ದರು. 

ಮಾಂತ್ರಿಕನ ಮಾಟ ಮಕ್ಕಳಾಗಿದ್ದಾಗ ನಮಗೆ ನಿಜದಲ್ಲಿ ಕಂಡುಬರುತ್ತಿದ್ದುದು "ಮ್ಯಾಜಿಕ್ ಶೋ" ನಡೆದಾಗ. ಯಾರದೋ ಉಂಗುರ ಮಾಂತ್ರಿಕನ ಕೈಯಲ್ಲಿ ಕಂಡಾಗ, ಪಾತ್ರೆಯಲ್ಲಿ  ತೆಗೆದುಕೊಂಡು ಹಾಕಿದ ನೀರು ಪಾರಿವಾಳವಾಗಿ ಹಾರಿಹೋದಾಗ, ಬುಟ್ಟಿಯಲ್ಲಿ ಹಾಕಿದ ಒಂದು ಬಿಳಿಯ ಕರ್ಚೀಪು ಅನೇಕ ಬಣ್ಣಬಣ್ಣದ ಬಟ್ಟೆಗಳಾದಾಗ, ಮುಂತಾದ ಸಂದರ್ಭಗಳಲ್ಲಿ. ನಾವೂ ಮ್ಯಾಜಿಕ್ ಮಾಡುವುದು ಕಲಿಯಬೇಕು ಅನ್ನಿಸುವುದು ಆಗ. ಅವನು ಬಹಳ ಸುಲಭವಾಗಿ ಗಾಳಿಯಲ್ಲಿ ರೂಪಾಯಿ ನೋಟು ತೆಗೆದಾಗಲಂತೂ ಮ್ಯಾಜಿಕ್ ಕಲಿತರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದು ಎಂದು ಕನಸು. ಇಂತಹ ಮಾಂತ್ರಿಕ ಹೀಗೆ ಷೋಗಳನ್ನು ಮಾಡಿ ಯಾಕೆ ಜೀವಹ ಹೊರೆಯುತ್ತಾನೆ ಎಂದು ಯೋಚಿಸುವಷ್ಟು ಪ್ರಬುದ್ಧತೆ ಇರಲಿಲ್ಲ ಆ ದಿನಗಳಲ್ಲಿ. 

ಸ್ವಲ್ಪ ದೊಡ್ಡವರಾದ ಮೇಲೆ, ಹರೆಯ ಬಂದಾಗ, ಹೊಸ ನೆತ್ತರು ಉಕ್ಕಿದಾಗ, ಅನೇಕ ಸಾಧನೆಗಳನ್ನು ಮಾಡುವ ಕನಸುಗಳು ಹರಡಿದಾಗ, ಇವೆಲ್ಲದರ ಸಮಾಗಮ. ಏನನ್ನಾದರೂ ಸಾಧಿಸುತ್ತೇನೆ ಅನ್ನುವ ವಿಶ್ವಾಸ, ಛಲ, ಹಂಬಲ. ಅಡಿಗರು ಇವು ಮೂರನ್ನೂ ಸೇರಿಸುತ್ತಾರೆ. ಅನೇಕ ಕನಸುಗಳು ಕಾಮಧೇನುವಿನ ಹಾಲು ಹನಿಗಳಾಗಿ, ಹೊಸ ರಕ್ತ ಉಕ್ಕುತ್ತಿದ್ದಾಗ, ಇಂತಹ ಹರೆಯದ ಮಾಂತ್ರಿಕನ ಮಾಟ ಪೂರ್ತಿ ಆವರಿಸಿದಾಗ, ಆದರ್ಶಗಳ ಸೆಳೆತ ಕೈಬೀಸಿ ಕರೆದಾಗ, ಹೊಸ ಸಮಾಜ ಸೃಷ್ಟಿಸುವ ಹುಮ್ಮಸ್ಸು ತಾನೇತಾನಾಗಿ ಆವರಿಸುತ್ತದೆ. ಉತ್ಸಾಹ, ಸಾಹಸಗಳ ತರಂಗಗಳ ಮೇಲೆ ಇಂತಹ ಹೊಸ ನಾಡನ್ನು ಕಟ್ಟುವ ಹುರುಪು ಆಗ. ಇವೆಲ್ಲ ಆರುವಮುನ್ನ ಆ ಕೆಲಸ ಆಗಬೇಕು. ತಡಮಾಡುವಂತಿಲ್ಲ. 

*****

ಆಗ ಆಗಲಿಲ್ಲ. ಮುಂದೆ ಏನಾಗುತ್ತದೆ? ಹಿಂದೆಲ್ಲ ಆಯುರ್ವೇದ ಪಂಡಿತರು ಕಣ್ಣು, ಉಗುರು ನೋಡಿ "ರಕ್ತಪುಷ್ಠಿ ಕಡಿಮೆ ಆಗಿದೆ" ಅನ್ನುತ್ತಿದ್ದರು. ಈಗ ಅದನ್ನೇ ಹೆಚ್ಚು ದುಡ್ಡು ತೆಗೆದುಕೊಂಡು, ರಕ್ತ ಹೀರುವ ಕೊಳವೆಯಿಂದ ತೆಗೆದು, ಲ್ಯಾಬೊರೇಟರಿಗಳಲ್ಲಿ ಅಳೆದು-ಸುರಿದು, ಹಿಮೋಗ್ಲಾಬಿನ್ ಕಡಿಮೆ ಆಗಿದೆ ಅನ್ನುತ್ತಾರೆ. ಹೊಸ ನೆತ್ತರು ಉಕ್ಕಿದ್ದು ಈಗ  ಆರುತ್ತಿದೆ. "ಒಂದೆ ನೆಗೆತಕೆ ನೆಗೆವೆವೋ ಕಂದಕವನು, ಕುಟ್ಟಿ ಪುಡಿ ಮಾಡುವೆವು ಕೋಟೆಗಳನು" ಎನ್ನುತ್ತಿದ್ದವ ಈಗ ದವಡೆಯಲ್ಲಿ "ಪುಳ್ಳಂಗಾಯಿ ಉಂಡೆ" ಕೂಡ ಪುಡಿ ಮಾಡಲಾರ. ಹರೆಯದ ಮಾಂತ್ರಿಕನ ಮಾಟ ಎಲ್ಲೂ ಕಾಣದೆ, ಮಧ್ಯ ವಯಸ್ಸಿನ ಸುತ್ತಲಿನ ಪ್ರಪಂಚದ ವಾಸ್ತವದ ಅರಿವು ಹೆಚ್ಚಾದಂತೆ ಕನಸುಗಳು ಬತ್ತುತ್ತವೆ. ಹೊಸ ಸಮಾಜ ಕಟ್ಟುವುದರ ಬದಲಾಗಿ ಇರುವ ಅವ್ಯವಸ್ಥೆಗೇ ಹೊಂದಿಕೊಂಡು ಬಾಳುವುದೇ ಉತ್ತಮ ಎಂಬ ಸಿದ್ಧಾಂತ ಗುದ್ದಲು ಬರುತ್ತದೆ. 

ಮತ್ತೂ ಸ್ವಲ್ಪ ವಯಸ್ಸಿನಲ್ಲಿ ಮುಂದೆ ಹೋದಾಗ, "ಇನ್ನೊಬ್ಬರ ಉಸಾಬರಿ ನಮಗೇಕೆ? ನಮ್ಮದು ನಮಗೆ ಸಾಕು. ತಲೆತಲಾಂತರದಿಂದ ಬಂದಿದ್ದು ನಾವು ಬದಲಿಸುವುದು ಸಾಧ್ಯವೇ?" ಎನ್ನುವ ಅನುಮಾನ ಕಾಡುತ್ತದೆ. ಹೊಸ ಸಮಾಜ ಕಟ್ಟುವುದು ಇರಲಿ; ಇರುವ ಸಮಾಜದಲ್ಲಿ ಬದುಕುವುದೂ ಒಂದು ಹೋರಾಟವೇ ಆಗುತ್ತದೆ. ಜೀವನದ ವಾಸ್ತವ ಇದೇ ಅನ್ನುವ ಕಡೆ ಮನಸ್ಸು ವಾಲತೊಡಗುತ್ತದೆ. 

*****

ಹಾಗಿದ್ದರೆ ಹೊಸ ಸಮಾಜ ಕಟ್ಟುವುದೇ ಬೇಡವೇ? ಕಾಲಕಾಲಕ್ಕೆ ಸಮಾಜ ಬದಲಾಗಿದೆಯಲ್ಲ. ಅದನ್ನು ಯಾರಾದರೂ ಕಟ್ಟಿರಲೇಬೇಕಲ್ಲ? ಅನೇಕ ರೀತಿಗಳಲ್ಲಿ ಬದಲಾವಣೆಗಳು ಸರಿ ದಾರಿಯಲ್ಲಿಯೇ ಆಗಿವೆಯಲ್ಲ? ಹೌದು. ಇವೆಲ್ಲಾ ಆಗಲೇಬೇಕು. ನಿಲ್ಲಬಾರದು. ಕನಸುಗಳು ಕಾಣಲೇಬೇಕು. ತಿರುವುಗಳು ದಾಟಲೇಬೇಕು. ಅದು ಹೇಗೆ? ಅದು ಸಾಧ್ಯವೇ? ಅವನ್ನು ಮಾಡುವವರು ಯಾರು?

ಪುಣ್ಯಕ್ಕೆ ಯಾವ ಕಾಲಮಾನ ಘಟ್ಟದಲ್ಲೂ ಕೇವಲ ಯುವಕರೇ ಇರಲಿಲ್ಲ; ಇರುವುದಿಲ್ಲ. ಎಲ್ಲ ವಯೋಮಾನದವರೂ ಒಂದೇ ಕಾಲದಲ್ಲಿ ಇರುತ್ತಾರೆ.  ಕವಿವಾಣಿ ಹೇಳುವಂತೆ "ಹೊಸ ಚಿಗುರು - ಹಳೆ ಬೇರು ಕೂಡಿರಲು ಮರ ಸೊಗಸು".  ಹರೆಯದವರ ಉತ್ಸಾಹ-ಹುಮ್ಮಸ್ಸುಗಳು ಮತ್ತು  ಹಿರಿಯರ ಅನುಭವ-ಸಮತೋಲನ ಒಂದೆಡೆ ಸೇರಿದರೆ ಹೊಸ ಸಮಾಜದ ನಿರ್ಮಾಣ ಇಂದಿಗೂ ಸಂಭವವೇ. ಹಿಂದೆಲ್ಲಾ ಸಮಾಜಗಳು ಬದಲಾದದ್ದು ಹೀಗೆಯೇ. ಈಗಲೂ ಅದು ಸಾಧ್ಯವೇ. 

ಹಿರಿಯರಿಗೆ ಕಿರಿಯರಲ್ಲಿ ಭರವಸೆ, ಕಿರಿಯರಿಗೆ ಹಿರಿಯರಲ್ಲಿ ನಂಬಿಕೆ. ಹೀಗೆ ಇರುವ ತಂಡಗಳು ಒಟ್ಟಿಗೆ. ಪರಸ್ಪರ ಗಾಢವಾದ ಸಹಬಾಳ್ವೆ. ಆಗ ಹರೆಯದ ಮಾಂತ್ರಿಕನ ಮಾಟ ಮಸಳದೆ, ಸರಿದಾರಿಯಲ್ಲಿ ಸಮಾಜದಲ್ಲಿ ಮುಂದುವರೆಯಬಹುದು.