Showing posts with label karma. Show all posts
Showing posts with label karma. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Monday, February 3, 2025

ಕುಂಭ ಸ್ನಾನ ಮತ್ತು ಪಾಪ ಪರಿಹಾರ


ಈಗ ಕೆಲವು ದಿನಗಳಿಂದ ಎಲ್ಲಿಲ್ಲಿ ನೋಡಿದರೂ, ಕೇಳಿದರೂ "ಪ್ರಯಾಗರಾಜ್" ಮತ್ತು ಅಲ್ಲಿ ನಡೆಯುತ್ತಿರುವ "ಕುಂಭ ಮೇಳ", ಅಲ್ಲಿ ಪ್ರತಿದಿನ ನೆರೆದು ಪುಣ್ಯ ಸ್ನಾನ ಮಾಡುತ್ತಿರುವ ಕೋಟ್ಯಾಂತರ ಮಂದಿ ಶ್ರದ್ದಾಳು ಜನರ ಸಮೂಹದ ವಿಷಯವೇ. ಅಲ್ಲಿ ದೇಶದ ನಾನಾ ಕಡೆಗಳಿಂದ ಮತ್ತು ವಿದೇಶಗಳಿಂದ ಹರಿದು ಬರುತ್ತಿರುವ ಜನಸಾಗರ, ಅಲ್ಲಿ ಮಾಡಲಾಗಿರುವ ವ್ಯವಸ್ಥೆಗಳು, ಕಾಲ್ತುಳಿತದಿಂದ ಅನೇಕ ಜನ ಸಾವನ್ನಪ್ಪಿದ ಪ್ರಸಂಗ, ಇವುಗಳ ಚರ್ಚೆಯೇ ಆಗಿದೆ. "ಅಲ್ಲಿ ಸ್ನಾನ ಮಾಡಿದರೆ ಬಡತನ ನಿರ್ಮೂಲನ ಆಗುತ್ತದೆಯೇ?" ಎಂದು ಪ್ರಶ್ನಿಸುವವರು ಕೆಲವರು. ಅಲ್ಲಿ ಹೋಗಿ ಸ್ನಾನ ಮಾಡಿದರೆ ಸಕಲ ಪಾಪಗಳೂ ಪರಿಹಾರ ಆಗುತ್ತವೆ ಎಂದು ವಾದಿಸುವವರು ಕೆಲವರು. "ಅದು ಹೇಗೆ ಸಾಧ್ಯ?" ಎಂದು ಕೇಳುವವರು ಮತ್ತೆ ಕೆಲವರು. "ಕೇವಲ ಪಾಪ ಪರಿಹಾರ ಮಾತ್ರವಲ್ಲ, ಕೈವಲ್ಯವೇ ಸಿಗುತ್ತದೆ" ಎಂದು ಬೇರೆ ಕೆಲವರು. ಈ ಅನೇಕ ಅಭಿಪ್ರಾಯಗಳಲ್ಲಿ ಯಾವುದು ಸರಿ ಎಂದು ಚರ್ಚೆಯಲ್ಲಿಯೇ ಕಾಲ ಕಳೆಯುತ್ತಿರುವವರೂ ಉಂಟು. 

ಕುಂಭ ಮೇಳಕ್ಕೆ ಮಾಡಿದ ಖರ್ಚು, ಅದರ ಅವಶ್ಯಕತೆ, ಆ ಮೇಳದಿಂದ ಬರುವ ಸಂಪಾದನೆ, ಉದ್ಯೋಗ ಸೃಷ್ಟಿ, ಮುಂತಾದವನ್ನು ಅರ್ಥ ಶಾಸ್ತ್ರಿಗಳಿಗೆ ಬಿಡೋಣ. ಎಲ್ಲರಂತೆ ನಮಗೂ ನಮ್ಮ ಅಭಿಪ್ರಾಯ ಹೊಂದಿರುವ ಹಕ್ಕು ಇದೆಯಲ್ಲ! ಕುಂಭ ಮೇಳದಂತಹ ಪರ್ವ ಕಾಲದಲ್ಲಿ ಪ್ರಯಾಗದಂತಹ ವಿಶೇಷ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಸಿಗುವ ಭಾವನಾತ್ಮಕ ಸಮಾಧಾನದ ಬಗ್ಗೆ ಸ್ವಲ್ಪ ನೋಡೋಣ. 

*****

ನಮ್ಮ ಪುರಾತನ ಗ್ರಂಥಗಳು, ಪುರಾಣ, ಪುಣ್ಯ ಕಥೆಗಳಲ್ಲಿ ಅನೇಕ ಕಡೆ ಕೆಲವು ಕೆಲಸಗಳನ್ನು ಮಾಡುವುದರಿಂದ ಪಾಪ ಪರಿಹಾರ ಆಗುತ್ತದೆ ಎಂದು ಹೇಳಿವೆ. ಇಷ್ಟು ಮಾತ್ರವಲ್ಲ, ಪಾಪಗಳನ್ನೂ ಕಳೆದುಕೊಳ್ಳುವುದಕ್ಕೆ ಪ್ರಾಯಶ್ಚಿತ್ತ ಕ್ರಿಯೆಗಳನ್ನೂ ಹೇಳಿವೆ. ಅನೇಕ ಸಂದರ್ಭಗಳಲ್ಲಿ "ಹೀಗೆ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದೂ ಹೇಳಿವೆ. ಮನುಷ್ಯನ ಜೀವನದಲ್ಲಿ ಅನೇಕ ತಪ್ಪುಗಳು ಆಗುತ್ತವೆ. ಕೆಲವು ತಪ್ಪುಗಳು ನಮಗೆ ತಿಳಿಯದೆಯೇ ಆಗುತ್ತವೆ. ಮತ್ತೆ ಕೆಲವು ತಪ್ಪುಗಳನ್ನು ನಾವು ತಿಳಿದೂ ತಿಳಿದೂ ಮಾಡುತ್ತೇವೆ. "ಪ್ರಮಾದ" ಎನ್ನುವ ಒಂದು ಪದವಿದೆ. ತಪ್ಪುಗಳನ್ನು ಇದು ಸಣ್ಣ ತಪ್ಪು, ಇದು ದೊಡ್ಡ ತಪ್ಪು, ಎಂದು ವರ್ಗೀಕರಿಸಿ ಈ ಪ್ರಮಾದ ಎನ್ನುವ ಪದವನ್ನು "ದೊಡ್ಡ ತಪ್ಪು" ಎಂದು ಸೂಚಿಸಲು ಪ್ರಯೋಗಿಸುತ್ತಾರೆ. ವಾಸ್ತವವಾಗಿ ಪ್ರಮಾದ ಎಂದರೆ ಒಮ್ಮೆ ತಪ್ಪು ಮಾಡಿ, ಅದು ತಪ್ಪು ಎಂದು ಗೊತ್ತಾದರೂ ತಿದ್ದಿ ಕೊಳ್ಳದೆ ಮತ್ತೆ ಅದೇ ತಪ್ಪು ಮಾಡುವುದು. ಪದಗಳ ತಪ್ಪು ಬಳಕೆ ಹೆಚ್ಚಾಗಿ, ಎಲ್ಲರೂ ಅದನ್ನೇ ಬಳಸಿ, ಕಡೆಗೆ ಅದೇ ಸರಿಯಾದುದು ಎಂದು ಗಟ್ಟಿಯಾಗಿ ನಿಲ್ಲುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ. 

ಅನೇಕ ವ್ರತ ಕಥೆಗಲ್ಲಿ ಕಡೆಗೆ ಈ "ವ್ರತ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದು ಹೇಳುತ್ತವೆ. ಮುಕ್ತಿ ಎಂದರೆ "ಬಿಡುಗಡೆ". ಯಾವುದರಿಂದ ಮುಕ್ತಿ? ಈಗ ಇರುವ ಕಷ್ಟದ ಪರಿಸ್ಥಿತಿಯಿಂದ ಬಿಡುಗಡೆ ಆದರೆ ಅದೂ ಒಂದು ಮುಕ್ತಿ. ಈ ಜನ್ಮದಿಂದ ಬಿಡುಗಡೆಯಾದರೆ ಅದೂ ಒಂದು ಮುಕ್ತಿಯೇ. ಕಟ್ಟಕಡೆಗೆ ಜೀವನ್ಮರಣ ಚಕ್ರದಿಂದ ಬಿಡುಗಡೆ ಆಗುವುದೂ ಒಂದು ಮುಕ್ತಿಯೇ! ಬಹಳ ಕಾಲ ಹಾಸಿಗೆ ಹಿಡಿದು, ನರಳಿ, ನರಳಿ ಒಬ್ಬ ವ್ಯಕ್ತಿ ಸತ್ತರೆ "ಬಹಳ ಕಷ್ಟ ಪಟ್ಟ. ಸದ್ಯ, ಬದುಕಿದ" ಎನ್ನುತ್ತಾರೆ. ಎದುರುಗಡೆ ಸತ್ತು ಬಿದ್ದಿದ್ದಾನೆ. ಆದರೂ "ಬದುಕಿದ" ಎನ್ನುತ್ತಾರೆ. "ಅಂತೂ ಇಂದಿಗೆ ಅವನಿಗೆ ಬಿಡುಗಡೆ ಆಯಿತಪ್ಪ" ಅನ್ನುತ್ತಾರೆ. ಅನೇಕ ಸಂದರ್ಭಗಳಲ್ಲಿ ಬದುಕಿ ನರಳುತ್ತಿರುವ ವ್ಯಕ್ತಿ ಮತ್ತು ಅವನ ಜನ ಸಾವಿಗಾಗಿ ಪ್ರಾರ್ಥಿಸುವುದೂ ಉಂಟು. ಅದು ಬಂದಾಗ "ಈ ಹಿಂಸೆಯಿಂದ ಮುಕ್ತಿಯಾಯಿತು" ಅನ್ನುವುದೂ ಉಂಟು. 

*****

ಅಮರ ಎನ್ನುತ್ತೇವೆ. ಸಾವಿಲ್ಲದವರು ಎನ್ನುತ್ತೇವೆ. ಸಮುದ್ರ ಮಥನ ಮಾಡಿ ಅಮೃತ ತರಲಾಯಿತು. ಅಮೃತ ಸೇವಿಸಿದವರು ಅಮರಾದರು. ಅವರಿಗೆ ಸಾವಿಲ್ಲ. ಎಲ್ಲಿಯವರೆಗೆ? ಅಮೃತದ ಒಡೆಯ ಯಾರು? ದೇವತೆಗಳ ನಾಯಕನಾದ ದೇವೇಂದ್ರ. ಮಿಕ್ಕೆಲ್ಲ ದೇವತೆಗಳು ಅವನ ಆಳ್ವಿಕೆಗೆ ಒಳಪಟ್ಟವರು. ಅಮೃತ ಅವನಿಗೆ ಸಿಕ್ಕಷ್ಟು ಬೇರಾರಿಗೂ ಸಿಕ್ಕದು. ಅಂದರೆ ಅವನು ಎಲ್ಲಿಯವರೆಗೆ ಅಮರ? ಅಮೃತ ಕುಡಿದು ಅಮರಾದವರೂ ಒಂದು ಕಾಲದ ಮಿತಿವರೆಗೆ ಮಾತ್ರ ಅಮರರು. ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ. ಈ ಮನ್ವಂತರದ ಕಡೆಯವರೆಗೂ ಇತರ ದೇವತೆಗಳ ಜೊತೆ ಅವನೂ ಅಮರ. 

ದೇವೇಂದ್ರನ ಯೋಗ್ಯತೆ ಬಹಳ ದೊಡ್ಡದು. ಅನೇಕ ಸಾಧನೆಗಳನ್ನು ಮಾಡಿ ಸ್ವರ್ಗದ ಅಧಿಪತ್ಯ ಸಿಕ್ಕಿದೆ. ಬಲಿ ಚಕ್ರವರ್ತಿಯ ಯೋಗ್ಯತೆ ಎಷ್ಟು ದೊಡ್ಡದು ಎಂದು ತಿಳಿದಾದರೂ ದೇವೇಂದ್ರನ ಬಗ್ಗೆ ನಮಗೆ ಇರುವ ದುರಭಿಪ್ರಾಯವನ್ನು ಬಿಡಬೇಕು. ಸಿನಿಮಾಗಳಲ್ಲಿ ದೇವೇಂದ್ರನನ್ನು ಒಬ್ಬ ಖಳನಾಯಕನಂತೆ ತೋರಿಸಿ, ಆ ಚಲನಚಿತ್ರಗಳನ್ನು ಅನೇಕ ಬಾರಿ ನೋಡಿ, ನಮಗೆ ದೇವೇಂದ್ರನ ನಿಜವಾದ ಸ್ವರೂಪವೇ ತಿಳಿಯದಾಗಿದೆ! 

ಎಲ್ಲ ಜೀವಿಗಳನ್ನೂ ಅವರ ಪಾಪಗಳಿಗೆ ತಕ್ಕಂತೆ ನರಕಗಳಲ್ಲಿ ಹಾಕಿ ಶಿಕ್ಷಿಸುವವನು ಯಮಧರ್ಮ. ಅವನಿಗೆ ಎರಡು ರೂಪಗಳು. ಪುಣ್ಯಾತ್ಮರು ನೋಡುವ ಸೌಮ್ಯವಾದ ಧರ್ಮ ರೂಪ. ಆ ರೂಪಿನಲ್ಲಿ ಅವನನ್ನು ನೋಡುವುದೇ ಒಂದು ದೊಡ್ಡ ಪುಣ್ಯವಂತೆ. ಪಾಪಿಗಳು ನೋಡುವುದು ಅವನ ಭೀಕರವಾದ ಯಮ ರೂಪ. ಅಂತಹ ಯಮನೇ ಕಠೋಪನಿಷತ್ತಿನಲ್ಲಿ ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಆ ಪರಮ ಪುರುಷನು ಎಲ್ಲವನ್ನೂ ನುಂಗುತ್ತಾನೆ. ಆ ಮಹಾ ಭೋಜನದಲ್ಲಿ ನಾನು ಕೇವಲ ಒಂದು ಉಪ್ಪಿನಕಾಯಿ!"

ಈ ಮನ್ವಂತರದ ಕಡೆಯಲ್ಲಿ ಬರುವ ಮಹಾಪ್ರಳಯದಲ್ಲಿ ಈ ಎಲ್ಲ ದೇವತೆಗಳೂ ತಮ್ಮ ಜೀವಿತ ಕಾಲಾವಧಿ ಮುಗಿಸುತ್ತಾರೆ. ಅವರ ನಾಯಕನಾದ ದೇವೇಂದ್ರನೂ ಸಹ. ಮುಂದಿನ ದೇವೇಂದ್ರನು ಕಾಯುತ್ತಿದ್ದಾನೆ. ಅವನು ಯಾರೆಂದು ಎಲ್ಲರಿಗೂ ಗೊತ್ತು. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ವಾಮನನು ಅವನಿಗೆ ಮುಂದಿನ ಸಾವರ್ಣಿ ಮನ್ವಂತರದಲ್ಲಿ ದೇವೇಂದ್ರನ ಪಟ್ಟವನ್ನು ಕಾಯಿದಿರಿಸಿದ್ದಾನೆ! ಮತ್ತೊಂದು ಹೊಸ ದೇವತೆಗಳ ತಂಡ ಅಧಿಕಾರ ವಹಿಸಲು ತಯಾರಾಗಿದೆ. 

ಅಮೃತ ಮಥನದ ನಂತರ ಅಮೃತದ ಬಿಂದುಗಳು ಭೂಮಿಯ ಮೇಲೆ ಬಿದ್ದವು. ಅವು ಬಿದ್ದ ನಾಲ್ಕು ಕಡೆಗಳಲ್ಲಿ ಅದರ ನೆನಪಾಗಿ ಕುಂಭ ಮೇಳ ನಡೆಯುತ್ತವೆ. ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕಗಳಲ್ಲಿ. ಆ ಅಮೃತ ಕಲಶದ ಅಧಿಪತಿಯಾದ ದೇವೇಂದ್ರನೇ ಈ ವೈವಸ್ವತ ಮನ್ವಂತರದ ಕಡೆಯಲ್ಲಿ ಹೋಗುತ್ತಾನೆ. ಆ ಕಲಶದಿಂದ ಭೂಮಿಯ ಮೇಲೆ ಅಮೃತದ ತೊಟ್ಟುಗಳು ಬಿದ್ದ ಸ್ಥಳಗಳಲ್ಲಿ ನಡೆಯುವ ಕುಂಭ ಮೇಳಗಳಲ್ಲಿ ಪುಣ್ಯ ಸ್ನಾನ ಮಾಡುವ ಮಂದಿ ಹೇಗೆ ಅಮರರಾಗುತ್ತಾರೆ?

*****

ಎಂ. ವಿ ಕೃಷ್ಣ ಸ್ವಾಮಿ ಎಂಬ ಚಲನಚಿತ್ರ ನಿರ್ಮಾಪಕ-ನಿರ್ದೇಶಕರೊಬ್ಬರು ಇದ್ದರು. ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಅವರು ಎತ್ತಿದ ಕೈ. ಸಾರ್ವಕಾಲಿಕ ಶ್ರೇಷ್ಠ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ, ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರ ಬಗ್ಗೆ ಅವರು ತಯಾರಿಸಿದ ಸಾಕ್ಷ್ಯಚಿತ್ರಗಳು ಬಹಳ ಹೆಸರು ಮಾಡಿದವು. ದೊಡ್ಡ ಸೆಟ್ಟುಗಳ, ಕನಸಿನ ರಾಜ್ಯದ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕರಾದ ಹೆಸರಾಂತ ವಿ. ಶಾಂತಾರಾಮ್ ಅವರ ಹೆಸರಿನ ಪ್ರಶಸ್ತಿ ತಮ್ಮ ಜೀವಿತಕಾಲದ ಸಾಧನೆಗಾಗಿ ಕೃಷ್ಣಸ್ವಾಮಿಯವರಿಗೆ ಲಭಿಸಿತ್ತು. ಹಿಂದಿನ ಶತಮಾನದ ನಲವತ್ತನೆಯ ದಶಕದಲ್ಲಿ ಹೊರದೇಶಗಳಲ್ಲಿ ಚಿತ್ರ ಜಗತ್ತಿನಲ್ಲಿ ಕೆಲಸ ಮಾಡಿದ ಸಾಧನೆ ಅವರದು. ಇಟಲಿಯ ಪ್ರಸಿದ್ಧ ನಿರ್ಮಾಪಕ ರೊಬೆರ್ಟೋ ರೊಸ್ಸೆಲಿನಿ ಮತ್ತು ಇಂಗ್ರಿಡ್ ಬೆರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿ ಸೈ ಎನ್ನಿಸಿಕೊಂಡವರು ಅವರು. "ಓವರ್ಸಿಸ್ ಫಿಲಂ ಕ್ಲಬ್"ನ ಕಾರ್ಯದರ್ಶಿಗಳಾಗಿದ್ದರು. ಭಾರತೀಯ ಫಿಲ್ಮ್ಸ್ ಡಿವಿಷನ್. ಏನ್. ಎಫ್. ಡಿ. ಸಿ., ಸೆನ್ಸಾರ್ ಬೋರ್ಡ್ ಮತ್ತನೇಕ ಚಲನಚಿತ್ರ ಸಂಬಂಧಿತ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದವರು ಅವರು. ಹಿಂದಿನ ತಲೆಮಾರಿನ ಅನೇಕ ನಿಆರ್ದೇಶಕರು ಎಂ. ವಿ. ಕೃಷ್ಣಸ್ವಾಮಿಯವರನ್ನು ತಮ್ಮ ಗುರುಗಳು ಎಂದು ತಿಳಿದಿದ್ದರು. 



ಕೃಷ್ಣಸ್ವಾಮಿಯವರು ವಾಣಿಜ್ಯ ಚಿತ್ರಗಳನ್ನೂ ನಿರ್ಮಿಸಿದವರು. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಎಸ. ಕೃಷ್ಣಮೂರ್ತಿ ಅವರ ಅಮೋಘ ಸಂಗೀತದ ಹೆಸರಾಂತ ಚಿತ್ರ "ಸುಬ್ಬಾಶಾಸ್ತ್ರಿ" ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರವೆಂದು ಅನೇಕರಿಗೆ ಗೊತ್ತಿಲ್ಲ. ಆ ಚಿತ್ರದ ಬಾಲ ಮುರಳಿ ಕೃಷ್ಣ ಅವರು ಹಾಡಿರುವ ಹಾಡುಗಳು ಈಗಲೂ ಜನಪ್ರಿಯ. ಅವರು ನಿರ್ದೇಶಿಸಿದ ಇನ್ನೊಂದು ಹೆಸರಾದ ಚಲನಚಿತ್ರ ಈ ಜೋಡಿ ಎರಡು ಜೊತೆ-ಜೊತೆ ಪದಗಳ ಹೆಸರು ಹೊಂದಿದೆ. ಅದೇ "ಪಾಪ ಪುಣ್ಯ" ಚಲನಚಿತ್ರ. 


ಪ್ರೊಫೆಸರ್ ಎಂ. ವಿ. ಸೀತಾರಾಮಯ್ಯ ಅವರ ಒಂದು ನಾಟಕ "ಶ್ರೀಶೈಲ ಶಿಖರ". ಅದೊಂದು ಜಾನಪದ ಕಥೆಗಳಿಂದ ಪ್ರೇರಿತವಾದದ್ದು. ಆ ನಾಟಕದ ಆಧಾರದ ಮೇಲೆ ಈ ಚಿತ್ರ ನಿರ್ಮಿಸಿದ್ದಾರೆ. "ನಾವು ಬಂದೆವ, ನಾವು ಬಂದೆವ, ನಾವು ಬಂದೆವ ಶ್ರೀಶೈಲ ನೋಡೋದಕ್ಕ, ಸ್ವಾಮಿ ಸೇವಾ ಮಾಡಿ ಮುಂದೆ ಹೋಗೋದಕ್ಕ..." ಎನ್ನುವ ಗೀಗೀ ಪದ ಈ ಚೈತ್ರದ್ದೇ. ಅಂದಿನ ಹೆಸರಾಂತ ಕಲಾವಿದರಾದ ಕಲ್ಯಾಣ್ ಕುಮಾರ್, ಬಿ. ಸರೋಜಾ ದೇವಿ, ಕೆ. ಎಸ. ಅಶ್ವಥ್ ಮುಂತಾದವರು ಅಭಿನಯಿಸಿದ ಚಿತ್ರ ಅದು. ಯೂಟ್ಯೂಬಿನಲ್ಲಿ ಲಭ್ಯ. ಬೇಕಾದವರು ನೋಡಬಹುದು. 


"ಶ್ರೀಶೈಲ ಶಿಖರಂ ದೃಷ್ಟವಾ ಪುನರ್ಜನ್ಮ ನ ವಿದ್ಯತೇ" ಎಂದೊಂದು ನಂಬಿಕೆ. ಶ್ರೀಶೈಲ ದೇವಾಲಯದ ಶಿಖರವನ್ನು ನೋಡಿದವರಿಗೆ ಮತ್ತೊಂದು ಜನ್ಮ ಇಲ್ಲ ಎಂದು ಅದರ ಅರ್ಥ.  ಶ್ರೀಶೈಲಕ್ಕೆ ಹೋದವರೆಲ್ಲ ಆ ದೇವಸ್ಥಾನದ ಶಿಖರವನ್ನು ನೋಡಬಹುದು. ಪ್ರತಿ ವರ್ಷ ರಥೋತ್ಸವಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಆ ಶಿಖರ ನೋಡುತ್ತಾರೆ. ಅವರಿಗೆಲ್ಲರಿಗೂ ಮತ್ತೆ ಜನ್ಮ ಇಲ್ಲವೇ? ಇದೇ ಈ ಚಿತ್ರದಲ್ಲಿ ಚರ್ಚಿತವಾಗಿರುವ ಅಂಶ. ಶ್ರೀಶೈಲ ಶಿಖರ ಅಂದರೆ ಕಲ್ಲು, ಮಣ್ಣು, ಗಾರೆಗಳಿಂದ ಮಾಡಿ ನಿಲ್ಲಿಸಿರುವ ಆ ದೇವಾಲಯದ ಶಿಖರ ಅಲ್ಲ. ಶ್ರೀಶೈಲ ಶಿಖರ ಅಂದರೆ ಶ್ರೀ ಮಲ್ಲಿಕಾರ್ಜುನನ ಹೃದಯ. ತನ್ನ ಸಾಧನೆಯಿಂದ, ಅಂದರೆ ಸರಿಯಾದ ಜೀವನ ನಡೆಸಿದ ಕೆಲವರು ಮಾತ್ರ ಆ ಶಿಖರದಲ್ಲಿ ಅವನ ಹೃದಯವನ್ನು ನೋಡುತ್ತಾರೆ. ಅವರು ಮಾತ್ರ ಪರಮಪದ ಹೊಂದುತ್ತಾರೆ ಎಂದು ಅದರ ಭಾವಾರ್ಥ

***** 

ಯಾವುದೇ ಜೀವಿ ಮುಕ್ತಿ ಪಡೆಯಬೇಕಾದರೆ ತನ್ನ ಸಂಚಿತ ಸಾಧನೆಯಿಂದ ಮಾತ್ರ ಸಾಧ್ಯ. ಜೀವನ ಪೂರ್ತಿ ಅನೇಕ ಪಾಪಕರ್ಮಗಳನ್ನು ಮಾಡಿ, ಎಲ್ಲರನ್ನೂ ಗೋಳು ಹೊಯ್ದುಕೊಂಡು ಬದುಕಿ ಶ್ರೀಶೈಲ ಶಿಖರ ನೋಡಿ ಅಥವಾ ಕುಂಭದಲ್ಲಿ ಸ್ನಾನ ಮಾಡಿ ಮುಕ್ತಿ ಸಿಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯ ಪರೋಪಕಾರಿಯಾಗಿ, ತನಗೆ ಸಾಧ್ಯವಿದ್ದಷ್ಟು ಸಮಾಜಕ್ಕೆ ಉಪಕಾರಿಯಾಗಿ ಬದುಕುವುದು. ಈ ರೀತಿ ಮಾಡುತ್ತಿದ್ದಾಗ ಒಮ್ಮೆ ಎಂದೋ ಮುಕ್ತಿ ಸಿಗುತ್ತದೆ. 

ಅಂದರೆ ಕುಂಭ ಸ್ನಾನಕ್ಕೆ ಹೋಗಬಾರದೇ? ಶ್ರೀಶೈಲಕ್ಕೆ ಹೋಗಬಾರದೇ? ಹೋಗಿ ಪ್ರಯೋಜನವಿಲ್ಲವೇ? ಇದು ಸೊಗಸಾದ ಪ್ರಶ್ನೆ. ಹೋಗುವವರಿಗೆ ಬುದ್ಧಿ ಇಲ್ಲವೇ, ಎಂದೂ ಕೇಳಬಹುದು. ಅವಶ್ಯ ಹೋಗಬೇಕು. ನಮಗೆ ಮಾಮೂಲಿನ ದಿನಗಳಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿ ಕೊಡುತ್ತಾರೆ. ಅವರಿಗೆ ನಾವು ಕೃತಜ್ಞರಾಗುತ್ತೇವೆ. ಇನ್ನೊಬ್ಬರು ಅದೇ ಒಂದು ಲಕ್ಷ ರೂಪಾಯಿಗಳನ್ನು ನಮಗೆ ಅತ್ಯಂತ ಅಗತ್ಯವಾದ ಆಪತ್ಕಾಲದಲ್ಲಿ ಕೊಡುತ್ತಾರೆ. "ನೀವು ಈಗ ಕೊಟ್ಟ ಈ ಲಕ್ಷ ರೂಪಾಯಿ ಕೋಟಿ ರೂಪಾಯಿ ಸಮ" ಎನ್ನುತ್ತೇವೆ. ಇಬ್ಬರು ಕೊಟ್ಟಿದ್ದೂ ಒಂದೇ ಮೊತ್ತದ ಹಣ. ಹೇಳುವುದರಲ್ಲಿ ಏಕೆ ಈ ವ್ಯತ್ಯಾಸ? 

ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಾನೆ. ವರ್ಷದಲ್ಲಿ ಒಂದು ಮಧ್ಯಮ ವಾರ್ಷಿಕ ಪರೀಕ್ಷೆ. ಮತ್ತೊಂದು ದೊಡ್ಡ ಪರೀಕ್ಷೆಗೆ ಮುನ್ನ ತಯಾರಿ ಪರೀಕ್ಷೆ. ಅಚ್ಚ ಕನ್ನಡದಲ್ಲಿ "ಪ್ರಿಪರೇಟರಿ ಎಕ್ಸಾಮಿನೇಷನ್" ಎನ್ನಬಹುದು. ಮತ್ತೆ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ. ಎಲ್ಲ ಪರೀಕ್ಷೆಗಳಲ್ಲೂ ಅದೇ ಪ್ರಶ್ನ ಪತ್ರಿಕೆ. ಅವೇ ಉತ್ತರಗಳು. ಅದೇ ಅಂಕಗಳ ಸಂಪಾದನೆ. ಆದರೆ ಅವುಗಳ ಮೌಲ್ಯ ಬೇರೆ. ಪರ್ವ ಕಾಲಗಳ ಸಾಧನೆಗೆ ಹೆಚ್ಚಿನ ಮೌಲ್ಯ. 

ಮನುಷ್ಯನ ಸಾಧನೆಗೆ ತಕ್ಕಂತೆ ಫಲ. ಅಮಾವಾಸ್ಯೆ-ಹುಣ್ಣಿಮೆಗಳು, ಸಂಕ್ರಮಣಗಳು, ಗ್ರಹಣ ಕಾಲಗಳು, ಕುಂಭ ಮೇಳ ಕಾಲ, ಮುಂತಾದುವುಗಳು ಪರ್ವಕಾಲಗಳು ಎಂದು ಎಣಿಕೆ. ಅದರಲ್ಲಿಯೂ ಮಹಾ ಕುಂಭ ಮೇಳ ಪರ್ವಕಾಲಗಲ್ಲಿಯೂ ಪರ್ವಕಾಲ. "ತೀರ್ಥಿಕುರ್ವಂತಿ ತೀರ್ಥಾಣಿ" ಎನ್ನುವಂತೆ. ಶುದ್ಧಿ ಮಾಡುವವರನ್ನೂ ಶುದ್ಧಿ ಮಾಡುವುದು. ವೈದ್ಯರನ್ನೂ ಉಪಚರಿಸುವ, ಅವರಿಗೂ ಪಾಠ ಹೇಳುವ ದೊಡ್ಡ ವೈದ್ಯರಿದ್ದಂತೆ! ಅದರಿಂದಲೇ ಈ ಮೇಳಕ್ಕೆ ಅಷ್ಟು ವಿಶೇಷತೆ. 

ಬಲಿ ಚಕ್ರವರ್ತಿಯು ವಾಮನ ಮೂರ್ತಿಗೆ ಮೂರು ಹೆಜ್ಜೆ ಭೂಮಿ ಕೊಟ್ಟನು. ಇಡೀ ಕೆಳಗಿನ ಲೋಕಗಳನ್ನು ವಾಮನನು ಮೊದಲನೇ ಹೆಜ್ಜೆಯಿಂದ ಅಳೆದನು. ಎರಡನೇ ಹೆಜ್ಜೆಗೆ ಮೇಲಿನ ಲೋಕಗಳನ್ನು ಅಳೆಯಲು ಒಂದು ಕಾಲನ್ನು ಮೇಲಕ್ಕೆ ಎತ್ತಿದನು. ಆ ಪಾದ ಬೆಳೆದೂ ಬೆಳೆದೂ  ಅವನ ಬೆರಳಿನ ಉಗುರಿನ ಒಂದು ಕೊನೆಯ ಭಾಗ ಇಡೀ ಬ್ರಹ್ಮಾಂಡ ಕಟಾಹ (ಔಟರ್ ಶೆಲ್ ಅಥವಾ ತೆಂಗಿನಕಾಯಿಯ ಕರಟದಂತೆ ಬ್ರಹ್ಮಾಂಡವನ್ನು ಆವರಿಸಿದ್ದ ಕವಚ) ಭೇದಿಸಿತು. ಆಗ ಬ್ರಹ್ಮಾಂಡ ಕವಚದ ಹೊರಗಿದ್ದ ನೀರು ನುಗ್ಗಿ ಬಂದು ಹರಿಯಿತು. ಚತುರ್ಮುಖ ಬ್ರಹ್ಮ ದೇವರು ಓಡಿಬಂದು ಆ ನೀರನ್ನು ತಮ್ಮ ಕಮಂಡಲದಲ್ಲಿ ಹಿಡಿದರು. ಅದೇ ನೀರಿನಿಂದ ಆ ವಾಮನರೂಪಿ ಮಹಾವಿಷ್ಣುವಿನ ಪಾದ ತೊಳೆದು ಪೂಜಿಸಿದರು. (ಪಾದಪೂಜೆ ಪದ್ಧತಿ ಅಲ್ಲಿಂದ ಪ್ರಾಂಭವಾಯಿತು ಎನ್ನುತ್ತಾರೆ). ಈ ಪಾದಗಳಿಂದ ದೇವಗಂಗೆ ಉದ್ಭವಿಸಿದಳು. ದೇವಲೋಕದಲ್ಲಿದ್ದ ಅವಳನ್ನು ಭಗೀರಥನು ಪ್ರಾರ್ಥಿಸಿ ಭೂಮಿಗೆ ತಂದನು. ಅವಳು ಬರುವ ರಭಸ ತಡೆಯಲು ಮಹೇಶ್ವರನು ತನ್ನ ಜಟೆಯಲ್ಲಿ ಕಟ್ಟಿ ತಲೆಯಲ್ಲಿ ಧರಿಸಿದನು. ಮುಂದೆ ಕಡೆಗೆ ಅವಳು ಗಂಗಾ ನದಿಯಾಗಿ ಹರಿದಳು. ಹಾಗೆ ಧುಮ್ಮಿಕ್ಕಿದಾಗ ಅಲ್ಲಿ-ಇಲ್ಲಿ ಹರಿದ ನೀರು ಬೇರೆ ನದಿಗಳಾದವು. 

ಈ ಪ್ರಸಂಗವನ್ನು ಗ್ರಂಥಗಲ್ಲಿ ವಿಶದವಾಗಿ ಹೇಳಿದೆ. ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇದನ್ನೇ "ಹರಿಯ ಅಡಿಯಿಂದ, ಹರನ ಮುಡಿಯಿಂದ, ಋಷಿಯ ತೊಡೆಯಿಂದ ......" ಮುಂತಾಗಿ ತಮ್ಮ ಗಂಗಾವತರಣ ಕವನದಲ್ಲಿ ವರ್ಣಿಸಿದ್ದಾರೆ. 

ಕುಂಭಮೇಳ ಸ್ನಾನ ಕಾಲದಲ್ಲಿ "ಇಂತಹ ಗಂಗೆಯಲ್ಲಿ, ತ್ರಿವೇಣಿ ಸಂಗಮದಲ್ಲಿ, ಈ ಮಹಾಪರ್ವ ಕಾಲದಲ್ಲಿ ಸ್ನಾನ ಮಾಡುತ್ತಿದ್ದೇನೆ, ಇದರಿಂದ ನನ್ನ ಪಾಪಗಳು ಹೋಗುತ್ತವೆ" ಎಂಬ  ಧೃಡ ನಂಬಿಕೆಯಿಂದ, ಭಯ-ಭಕ್ತಿಗಳಿಂದ ಸ್ನಾನ ಮಾಡಿದರೆ ಪಾಪಗಳು ಹೋಗಬಹುದು. ಕ್ಯಾಮರಾ ನೋಡಿಕೊಂಡು ಬರೀ ಮುಳುಗು ಹಾಕಿದರೆ ಮೈನಲ್ಲಿ ಇರುವ ಕೊಳೆಯೂ ಹೋಗಲಾರದು!

Saturday, February 6, 2016

Three Crops and Three Arrows


A farmer is continuously engaged in raising crops in his fields. He has raised many crops in the past. He has planted a crop in his fields right now. He is also planning to sow crops in the future. Therefore, at any point in time, he has yields of three types of crops. Those already harvested, that which is ready for harvesting and those that are to be planted and harvested in the coming days.

What is the position of the harvested returns for his efforts? His house has a granary that contains the harvested grains of the crops raised in the past. There is also a standing crop ripe and ready for harvesting in the fields in the current season. He is also preparing for sowing more crops in the future.

What about an Archer? He has a quiver on his back which is full of arrows. He has an arrow that is placed on the bow and ready to be released. There is an arrow that was just released but has not yet reached the destination. The arrow that has been released from the bow and in motion now cannot be called back. It is beyond his control now. It will do its duty and reach its destination. Like the farmer mentioned above, he has three arrows at any time. The arrow which is released from the bow, the one that is ready for releasing and those in the quiver awaiting their turn.

*****  

The examples of the farmer and the archer are extensively used to explain the "Karma" theory. They (Karma) are primarily classified into three categories; Sanchita, Agami and Prarabdha. We often hear people say that they are living out their "Prarabdha". What does it mean?

Even as per accepted laws of Physics, every action has an equal reaction. Whether one desires or not, actions produce their results. There cannot be an action without a reaction or result. For any living being, actions are a continuous process. Even not doing anything and keeping idle is also an action and produce its own reaction. It is the action of inaction! Planting and watering a fruit bearing tree sapling will lead to its growth and will ultimately yield fruits. Planting a noxious weed would also result in returns of a number of noxious seeds. This is in accordance with the means and ends relationship. One who plants a noxious weed cannot ever hope to get a fruit in return. Similarly, planting and watering a fruit bearing sapling cannot result in giving back noxious weeds.

Actions produce the corresponding results irrespective of whether they were done knowing their nature or one is not aware of them. Drinking poison kills the person who knows its harmful effect and drank it for committing suicide. Drinking poison also kills a person who consumes it without knowing that it is poison. Fire burns the hands of an elder person who is aware of its burning nature. It also burns the hands of a child which touches it being attracted by the color of the flames, but not aware of its burning nature. Karmic actions bring their results in a similar manner. 

Sanchita Karma are accumulated karma of past lives. They represent  desires, aptitudes, tendencies and capabilities carried over from past lives. They are naturally cumulative result of many past actions. Banks have "Sanchita Deposit Schemes" where deposits are made in installments and their returns are given with interest on a future due date. Agami Karma are those that represent expected future karma. Prarabdha Karma are those which are ripe for reaping and cannot be avoided. One has to live them out and face their effects without fail. 

The crop ready for harvesting now and the arrow released from the bow and in motion are symbols of Prarabdha. One has no control over them now, even though their origin was due to one's own actions. The grain bags in the granary and arrows in the quiver represent the Sanchita karma. The crops to be sown in future and the arrow in the bow right now are symbols of Agami karma.

One has to remember that all Prarabdha is not necessarily bad. There are many "Sukha Prarabdha Karmas" as well. They are the results of the past good actions and bring good results.
*****

A grand function has been planned to celebrate a major landmark in the family. Many rituals are to be conducted as a part of the celebration. Ghee is an important ingredient to be used in the rituals. The lead conductor of the rituals has given a list of items including ghee. About two hundred guests are expected and a grand lunch will be the crowning glory of the function. Chief cook has given his own list of items including ghee. Aggregated requirements of items are to be purchased from the grocery shop.

The aggregate order for ghee is 50 Kg. It is available in 5 Kg containers and 10 containers are to be bought. There is a doubt whether this much is really required as the tendency is to indent for higher quantities as nobody wants shortage in the middle of the function. Shopkeeper provides the solution. Take ten containers now and the surplus if any will be taken back, he assures. 

After the function it is observed that six containers of ghee is fully used and two are not opened at all. But there are two opened containers with large quantities of ghee in them. They are taken to the shop. Shopkeeper accepts the two full containers as it can be sold to someone else. But open containers are not acceptable. They are now the exclusive property of the holder. 

Prarabdha Karma is similar to the ghee in the opened containers or grains in an opened bag. The holder only has to use it. Whether one likes it or not, it is to be borne by him. High cholesterol and medical prescription cannot dispose it! 

Is there no escape at all? Can the pain be reduced? Go to the nearest temple and use the surplus ghee in these two open containers to light the lamps there. Many believe that surrendering to a Sadguru or the Lord will reduce the impact of Prarabdha Karma this way.

*****

How to escape the effect of these Karmas? There is a big haystack on our back and we are moving around carrying this burden. Can the burden be lightened? Some say that they cannot be avoided and their fruits have to be lived through. A tiny spark is enough to burn it down. Many believe that the protection of a "Sadguru" helps in reducing their effects. Believing in the Lord and doing one's duty dispassionately helps in reducing the impact of the various bad karmas. Probably the best strategy would be not to enter into bad karmas willingly. Do not plant noxious weeds. There won't be any noxious harvests!

What about those who do not believe in the theory of Karma? What about those who do not believe in the existence of the "Sadguru" or the "Lord"? They are the gifted ones as they need not worry about Karma at all. They too cannot escape the effects of their actions, but they need not spend any time on worrying about it.

Saturday, July 14, 2012

A Leaf, a Flower, a Fruit and a drop of Water

Many verses from Bhagavadgita are often quoted. In this often quoted verse from Chapter 9, the Lord says:

Patram Pushpam Phalam Toyam, yo me Bhaktya prayachhati,
tad aham bhakty-upahrtam asnämi prayatätmanah.

The meaning of this verse is thought to be very simple; as simple as the verse itself is. The Lord says: "Whoever offers me a Leaf, a Flower, a Fruit and a drop of Water, with great devotion, I accept it with all the dignity it deserves". Then things are very simple. Find a leaf that is available everywhere, at least now.Till the destruction of trees and vegetation reaches the next level.  And similarly a flower or fruit. A drop of water as well though it is becoming increasingly difficult to find drops of pure and unadulterated water. And after finding them offer it to the Lord.  Lord has given us an excellent option. He has suggested any of these; not all of them! Well, let us offer all the four of them as they are available easily and quite inexpensive too. Like the student who answered all the ten questions in the question paper and asked the examiner to value any five of them, as he was required to answer only five of them. The Lord should have no complaints too; he can choose any one of them and accept it. And in return give us the deserved recognition. When we donate (!) a tube light or a fan to the temple, we get our names painted on them so that the Lord does not get confused as to which devotee made the offering. Then what about the offerings that Lord himself mentions so prominently in his own words in Bhagavadgita?

Did he also mention about Karma without aspiring for its fruits? Should these offerings be done without expecting any returns? Is it not opposed to principles of natural justice? Work without remuneration? There was a very logical and systematic argument in an article opposing "Nishkama Karma". There was a lengthy justification for banning Bhagavadgita because it was anti-worker and pro-capitalist. To be compensated for the work done is a fundamental right of any worker. To preach to work without remuneration is total exploitation. There should not just be remuneration, but there should be adequate and reasonable returns or compensation. With bonus thrown in as a deferred wage. A very erudite interpretation which ought to be accepted in totality.

But the problem actually lies elsewhere. When you are dealing with the Lord, it is not work for remuneration. When a mother attends to the child, it is not work for her; it is an act of pure love! She does it even if the child does not want it. She considers it as a goal of her life.  When she does it, she does not expect any thing in return. For her, the act itself is the ultimate reward. As Moslow's "Need Hierarchy Theory" says. Work itself is the ultimate reward. Nothing more is required. So also when the Lord and devotee are concerned. A Lord who does not  need or want anything. A devotee who desires to offer everything he has.

Those who want remuneration for the work done need not worry at all. It is nature's rule that the wages of sin or saintly act are automatically disbursed and in just proportions. The fruit of work done will never go waste; it will chase you and fall in your lap even if you do not want it! The Lord only said; "Do Karma without aspiring for its fruits". He never said that there are no fruits for any Karma. He will give the resultant fruit even if the Karmi does not want it. There is no escape from the fruits of Karma, whether good or bad.

But what leaf, flower, fruit or drop of water did the lord mean when he said "Patram Pushapam Phalam toyam...."? Is it only an ordinary leaf or fruit or flower or water drop? Or was there any deeper meaning to it? It appears so as many scholars opine. As the Lord himself says in the same Bhagavadgita, there is reference to some leaves of a tree therein.  "Oordhwa moolam Adhah shaakha, Ashwatham praturavyavam, Chandamsi yasya Parnaani, Yastam veda sa vedavit". The Lord refers to a big Ashwatha tree with roots upwards and branches spread out at the bottom. The verses of the Vedas are its leaves.  These are the leaves the Lord is referring to. Someone capable of learning and reciting these verses ought to do it and those are the leaves the Lord accepts. Not any ordinary leaf from an ordinary tree.

What are the flowers the Lord mentions here? "Ahimsa pratham pushpam, Pushpam indriya nigraha, Sarvabhoota daya pushpam, Kshama pushpam visheshataha, Gnana pushpam Tapah pushpam Dhyana pushpam thataivacha, Satyam ashtavidham pushpam Vishnoh preetikaram bhavet". The Lord is referring to eight flowers: Non-violence, control of senses, compassion to all living beings, tolerance or patience, knowledge, austerity, contemplative meditation and truth. These are the eight flowers that the Lord refers to and not any other flower from a bush or tree.

What is the fruit that is to be offered to the Lord? He has advised to do one's deeds without desiring the fruits of those deeds. But the fruits do chase the doer; the deeds never lapse without yielding fruits. This fruit, "The Karma Phala" is the fruit the Lord mentions to be offered with all love and devotion.

That brings us to the "Drop of Water". A righteous soul travels the length of his or her life (his or her refers to the body probably, for soul is neither he nor she) doing this "Nishkama Karma". And as the end approaches, the fearless soul is ready to welcome the death of the mortal body with open hands. The tears of love towards the Lord and the final drop of water from the eye, not in sorrow but in joyful  acknowledgement of the love showered by the Lord all along one's life is the water drop the Lord mentions.

These are the leaves, flowers, fruit and drop of water the Lord probably means. But what about those who are unable to meet all these in their lives when the demands of daily life and the struggles to just live through are hard enough?  One can fondly ask, as John Milton says, "Doth God expect day labor light denied?" Everyone may not be capable of these deeds. The Lord believes is equity; equal treatment of equals. A person capable of donating 1000 Rupees for a good cause should not give 100 Rupees. That would be miserly behaviour. A person capable of  donating 100 Rupees should not donate 1000 rupees by borrowing the difference. That would be self-destruction. Each one to his capacity.  Nothing more or nothing less. The operative word in the verse is "...Yo me Bhaktya.....".  What is difficult is to find the required level of Bhakti to accompany the offerings. The Lord is interested in the envelope, not the contents! Again, as John Milton says, "They also serve who only stand and wait".

A mother treats her children equally. She gives 4 Rotis to a 18-year old son. 3 Rotis to a 12-year old. Only one Roti to a five year old. Did she discriminate among them? Each one as per his need. That is the essence of equality. So also in the case of flower, leaf or fruit. Nishkama Karma is of equal value even if offered in different quantities or dimensions by different people. He knows. He measures. He dispenses. That is the ultimate faith! 

Thursday, April 19, 2012

She will go as She was

It was one of the saddest days in our lives.  Our dear mother showered her love on us for a long time and had just left for her heavenly abode that day.  We were waiting for the arrival of her elder sister from Bangalore before the final step of consigning her mortal remains to eternity. All her sons and daughters and grandchildren were engulfed by sorrow and not many words were spoken around.  Our father had lost his wife of nearly six decades.  They had seen difficult days, good days and very happy days along these years.  He was sitting on a chair lost in deep thoughts.  The years they spent together was probably unfolding in his memory like a film.  He was not actually crying but one could feel the sadness by just looking at him.

The body was readied by my sisters for the final journey. The last offering called "Baagina" was kept ready for the husband to offer to the departed wife.  A well meaning neighbor asked for a piece of turmeric.  She wanted the piece of turmeric for tying around the neck of the body and removing the golden "Maangalya".  It is common practice to remove all the gold items from the body before consigning it to flames.  She was only reminding this trend.  All such gold items are material wealth and valuable for the living.  But it has no value for the dead.  Why destroy it?  Wiser people remove these items much before the end comes so that there is no embarrassment or delicate issues to be sorted out when the final moment arrives.

"She will go as She was", my father all but shouted in a clear voice and continued, "Nothing will be removed.  Whatever she was wearing will go with her. When I see her for the one last time, she should be the same as she was".  The neighbor was taken aback but she was not the one to give up an issue without some more argument.  "I have only suggested what is generally done. That is the common practice.", she replied mildly.  "What you suggested is right and fine. But that will not be done with my wife today", he replied her in a soothing tone.  "She will go with her ear studs, nose stud, Maangalya, bangles and the silver rings on the fingers of her feet. These five were the ornaments she wore as Muttaide, the five beautification aids or whatever you may call them.  When she is herself gone what to do with those things?", were his words of finality.  "Those people in the crematorium will take the gold pieces from the ashes", she said.  "What somebody does after she is consigned to flames does not bother me" he replied as the final verdict.  The issue ended there.

A week later things had calmed down a bit.  My father was telling all of us about the highlights of their long journey in life. I seized the opportunity and raised the issue.  "People take out all valuable items and the gold items are generally given to the daughters or daughters-in-law.  Is it a wrong practice?", I asked him.  "It is not at all a wrong practice and I did not suggest anything like that.  It is one's personal choice.  Many people remove these gold items and give it to the unmarried daughters. Those who are economically weak should better take the ornaments out and use them as it makes more sense for them.  All our daughters are married and even some grand daughters.  We do not need it. People also say that an unmarried daughter should be got married within a year so that the departed soul gets the punya, benefit of that action.  What punya you can you give to a departed soul?  Each soul has to carry its burden on its own shoulders.  This getting the unmarried daughter within a year also has a reason.  It is probably more for some fast action and ensure that the daughter is married that year itself rather than passing on the punya to the departed soul.  As the mother is no longer around to press for it, such a system may ensure the required action.  All this kriya or karma that is done is only for our satisfaction and peace of mind.  No one knows whether the soul will know of this or cares about it.  We all join together and remember the departed person and his or her contribution to our lives. That appears to be the basic purpose of these karmas. Rest of it is pure Tarka (Logic) or belief", he said.

"Then why should we do all this kriya karma? Why waste resources on these things?", I asked.  "Where is the wastage? You invite all relatives and friends and have a feast remembering the departed member of the family and society.  it is an occasion just like birthday. Only difference is that we do not respect the laws of nature when it comes to death.  During kriya karma you bring many items and distribute them among the needy in memory of the departed soul. Those items are used by the receivers in their daily lives. Nothing is a waste. When you give a set of footwear to someone walking barefoot it is not a waste.  But when you give it to a person having four pairs already, then it is a waste. So also with a bed.  It is to be given to a person sleeping on a floor and not to someone who has four cots in his house.  As far as performing kriya karma is concerned, it is one's choice. It is like two brothers going out of the house and arguing about whether it will rain that day.  One believes it rains and carries an umbrella with him.  The other brother does not believe it rains and goes without an umbrella.  If it rains, the one with umbrella is protected and the one without it will get drenched in the rain. If it does not rain the one who took it out  has only the problem of carrying the piece with him. I suggest you do the kriya karma as per the tradition of your family, just like keeping  the umbrella for no one knows for sure what happens after death or whether there is another world or not. Just like whether it will rain or not", he concluded.

Opinions may differ on arguments, logic and philosophy part.  But he was right about one thing.  When he saw his wife for the one last time in front of the electric furnace, she was as she was all her life, for him.  Just as I saw my mother for that one last time, as she was since my birth.